ವೃಶ್ಚಿಕಕ್ಕೆ ಕೋಪ, ತುಲಾಗೆ ಧನ ನಷ್ಟದ ಎಚ್ಚರಿಕೆ: ಈ ಎರಡು ರಾಶಿಯವರು ತಪ್ಪದೇ ವಹಿಸಬೇಕು ಜಾಗ್ರತೆ – Kannada News | Shukra Kuja Rashi July 2026: Libra Scorpio Horoscope and Remedies

ಜುಲೈ ತಿಂಗಳಲ್ಲಿ ತುಲಾ ಮತ್ತು ವೃಶ್ಚಿಕ ರಾಶಿಗಳಿಗೆ ಈ ತಿಂಗಳಿನಲ್ಲಿ ಕಂಡುಬರುವ ಹಾಗೂ ಎದುರಾಗಬಹುದಾದ ಪ್ರಮುಖ ಸಮಸ್ಯೆಗಳನ್ನು ಮತ್ತು ಜಾಗ್ರತೆ ವಹಿಸಬೇಕಾಗುವುದು.

ಪ್ರಸ್ತುತ ಗ್ರಹಗಳ ಗೋಚಾರವು ಮಿಶ್ರಫಲ ನೀಡುತ್ತಿದ್ದು, ಕೆಲವು ಪ್ರಮುಖ ಭಾವಗಳಲ್ಲಿ ಗ್ರಹಗಳ ಸಂಚಾರದಿಂದಾಗಿ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ.

ಎದುರಾಗಬಹುದಾದ ಪ್ರಮುಖ ಸಮಸ್ಯೆಗಳು:

10ನೇ ಭಾವದಲ್ಲಿ ಸೂರ್ಯ-ಗುರು ಯುತಿ :

​ತುಲಾ ರಾಶಿಗೆ ೧೦ನೇ ಮನೆಯಲ್ಲಿ ಸೂರ್ಯ ಮತ್ತು ಉಚ್ಚ ಗುರು ಅಸ್ತಂಗತನಾಗಿ ಸ್ಥಿತರಾಗಿದ್ದಾನೆ. ಉದ್ಯೋಗ ಮತ್ತು ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ​ಮೇಲಾಧಿಕಾರಿಗಳೊಂದಿಗೆ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಕಷ್ಟಪಟ್ಟು ಕೆಲಸ ಮಾಡಿದರೂ ತಕ್ಷಣಕ್ಕೆ ಸರಿಯಾದ ಶ್ರೇಯಸ್ಸು ಸಿಗದೆ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು.

8ನೇ ಭಾವದಲ್ಲಿ ಮಂಗಳ :

​ಅಷ್ಟಮ ಸ್ಥಾನದಲ್ಲಿ ಮಂಗಳನ ಉಪಸ್ಥಿತಿಯು ತುಲಾ ರಾಶಿಯವರಿಗೆ ಶಾರೀರಿಕ ಆಯಾಸ, ಹಠಾತ್ ಆರೋಗ್ಯ ಸಮಸ್ಯೆಗಳು ಅಥವಾ ಗಾಯಗಳಾಗುವ ಸೂಚನೆ ನೀಡುತ್ತದೆ. ​ಪ್ರಯಾಣದ ಸಮಯದಲ್ಲಿ ವಿಶೇಷವಾಗಿ ವಾಹನ ಚಾಲನೆ ಮಾಡುವಾಗ ಮತ್ತು ತೀಕ್ಷ್ಣವಾದ ವಸ್ತುಗಳನ್ನು ಬಳಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ. ಹಠಾತ್ ಧನವ್ಯಯ ಅಥವಾ ಹಣಕಾಸಿನ ನಷ್ಟದ ಸಾಧ್ಯತೆಯಿದೆ.

5ನೇ ಭಾವದಲ್ಲಿ ಚಂದ್ರ-ರಾಹು, ೧೧ನೇ ಭಾವದಲ್ಲಿ ಕೇತು-ಶುಕ್ರ ಸಂಯೋಗ:

​ಪಂಚಮ ಭಾವದಲ್ಲಿ ಚಂದ್ರ ಮತ್ತು ರಾಹು ಇರುವುದರಿಂದ ಮಾನಸಿಕ ಅಸ್ಥಿರತೆ, ಅನಗತ್ಯ ಚಿಂತೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ​ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ಹೂಡಿಕೆ ಅಥವಾ ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿದರೆ ನಷ್ಟವಾಗುವ ಸಂಭವವಿದೆ. ​೧೧ನೇ ಭಾವದಲ್ಲಿ ಶುಕ್ರನ ಜೊತೆ ಕೇತು ಇರುವುದರಿಂದ ಸ್ನೇಹಿತರೊಂದಿಗೆ ಅಥವಾ ದೊಡ್ಡ ಸಹೋದರರೊಂದಿಗೆ ಮನಸ್ತಾಪಗಳು ಬರಬಹುದು. ಲಾಭದ ಹರಿವಿನಲ್ಲಿ ವಿಳಂಬ ಉಂಟಾಗಬಹುದು.

6ನೇ ಭಾವದಲ್ಲಿ ವಕ್ರ ಶನಿ :

​ಶತ್ರು ಮತ್ತು ಋಣ ಸ್ಥಾನದಲ್ಲಿ ಶನಿ ಇರುವುದರಿಂದ ಹಳೆಯ ಸಾಲಗಳು ಅಥವಾ ರೋಗಗಳು ಮರುಕಳಿಸಬಹುದು. ಕಾನೂನುಬದ್ಧ ವಿಚಾರಗಳಲ್ಲಿ ವಿಳಂಬ ಧೋರಣೆ ಕಂಡುಬರಬಹುದು.

​ವೃಶ್ಚಿಕ ರಾಶಿ :

​ವೃಶ್ಚಿಕ ರಾಶಿಯವರಿಗೆ ಗ್ರಹಗಳ ಸ್ಥಾನಮಾನವು ಕಾರ್ಯಕ್ಷೇತ್ರ, ಕೌಟುಂಬಿಕ ಜೀವನ ಮತ್ತು ದಾಂಪತ್ಯದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಕಾಯ್ದುಕೊಳ್ಳಲೇಬೇಕು.

7ನೇ ಭಾವದಲ್ಲಿ ಮಂಗಳ:

​ಸಪ್ತಮ ಭಾವದಲ್ಲಿ ಮಂಗಳ ಸಂಚರಿಸುತ್ತಿರುವುದರಿಂದ ದಾಂಪತ್ಯ ಜೀವನದಲ್ಲಿ ಅಥವಾ ವ್ಯಾಪಾರ ಪಾಲುದಾರಿಕೆಯಲ್ಲಿ ಘರ್ಷಣೆಗಳು ಉಂಟಾಗಬಹುದು. ​ಸಣ್ಣ ವಿಷಯಗಳಿಗೂ ಕೋಪ ಅಥವಾ ಆವೇಶ ಹೆಚ್ಚಾಗಿ ಮಾತಿನ ಚಕಮಕಿ ನಡೆಯಬಹುದು. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸುವುದು ಅಗತ್ಯ.

9ನೇ ಭಾವದಲ್ಲಿ ಸೂರ್ಯ-ಗುರು :

​ಭಾಗ್ಯ ಸ್ಥಾನದಲ್ಲಿ ಸೂರ್ಯ ಮತ್ತು ಗುರು ಇರುವುದು ಸಾಮಾನ್ಯವಾಗಿ ಒಳ್ಳೆಯದೇ ಆದರೂ, ಗುರು ಅಸ್ತಂಗತನಾಗಿರುವುದರಿಂದ ತಂದೆಯವರ ಅಥವಾ ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು. ​ಧಾರ್ಮಿಕ ಕಾರ್ಯಗಳಿಗೆ ಅಥವಾ ದೂರದ ಪ್ರಯಾಣಗಳಿಗೆ ಅಡೆತಡೆಗಳು ಎದುರಾಗಬಹುದು. ಕೆಲಸ ಕಾರ್ಯಗಳು ಕೊನೆಯ ಕ್ಷಣದಲ್ಲಿ ಕೈತಪ್ಪುವ ಸಾಧ್ಯತೆ ಇರುತ್ತದೆ.

4ನೇ ಭಾವದಲ್ಲಿ ಚಂದ್ರ-ರಾಹು :

​ಚತುರ್ಥ ಭಾವದಲ್ಲಿ ಅಂದರೆ ಮಾತೃ ಮತ್ತು ಸುಖ ಸ್ಥಾನದಲ್ಲಿ ಚಂದ್ರ ಮತ್ತು ರಾಹು ಒಟ್ಟಿಗಿರುವುದರಿಂದ ಗೃಹ ವಾತಾವರಣದಲ್ಲಿ ಅಶಾಂತಿ ಅಥವಾ ಮಾನಸಿಕ ನೆಮ್ಮದಿಯ ಕೊರತೆ ಉಂಟಾಗಬಹುದು.
​ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಸ್ತಿ, ಮನೆ ಅಥವಾ ವಾಹನಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಮೋಸ ಹೋಗುವ ಅಥವಾ ತೊಂದರೆಗೆ ಸಿಲುಕುವ ಸಾಧ್ಯತೆಯಿರುತ್ತದೆ.

​10ನೇ ಭಾವದಲ್ಲಿ ಕೇತು-ಶುಕ್ರ, ೫ನೇ ಭಾವದಲ್ಲಿ ವಕ್ರ ಶನಿ:

​ಉದ್ಯೋಗ ಸ್ಥಾನದಲ್ಲಿ ಕೇತುವಿನ ಪ್ರಭಾವದಿಂದಾಗಿ ಕೆಲಸದಲ್ಲಿ ನಿರಾಸಕ್ತಿ ಅಥವಾ ಕೆಲಸ ಬದಲಾಯಿಸುವ ಆಲೋಚನೆಗಳು ಬರಬಹುದು. ​ಪಂಚಮ ಭಾವದಲ್ಲಿ ಶನಿ ವಕ್ರಿಯಾಗಿರುವುದರಿಂದ ಮಕ್ಕಳ ಶಿಕ್ಷಣ ಅಥವಾ ಪ್ರಗತಿಗೆ ಸಂಬಂಧಿಸಿದಂತೆ ಕಳವಳ ಉಂಟಾಗಬಹುದು.

ಇದನ್ನೂ ಓದಿ: ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ

​ಜುಲೈ ತಿಂಗಳ ಅಂತ್ಯದ ಈ ಗ್ರಹಚಾರದ ಪ್ರಕಾರ ತುಲಾ ರಾಶಿಯವರು ತಮ್ಮ ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಅಷ್ಟಮ ಮಂಗಳ ಇರುವ ಕಾರಣ ಎಚ್ಚರಿಕೆಯಿಂದಿರಬೇಕು. ವೃಶ್ಚಿಕ ರಾಶಿಯವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ದಾಂಪತ್ಯ ಮತ್ತು ಕೌಟುಂಬಿಕ ವಿಚಾರಗಳಲ್ಲಿ ತಾಳ್ಮೆಯಿಂದಿರಬೇಕು.

ಪರಿಹಾರ: ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ

​ತುಲಾ ರಾಶಿಯವರು ದಿನನಿತ್ಯ ಸುಬ್ರಹ್ಮಣ್ಯ ಸ್ವಾಮಿ ಅಥವಾ ಹನುಮಾನ್ ಚಾಲೀಸಾ ಪಠಿಸುವುದು ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದು ಶುಭ.
​ವೃಶ್ಚಿಕ ರಾಶಿಯವರು ಶಿವನಿಗೆ ಜಲಾಭಿಷೇಕ ಮಾಡುವುದು ಹಾಗೂ ದಿನವೂ ವಿಷ್ಣು ಸಹಸ್ರನಾಮ ಕೇಳುವುದು ಅಥವಾ ಪಠಿಸುವುದು ಮನಸ್ಸಿಗೆ ಶಾಂತಿ ನೀಡುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:46 pm, Wed, 22 July 26

Source link

Leave a Reply

Your email address will not be published. Required fields are marked *