ದಾವಣಗೆರೆ, (ಆಗಸ್ಟ್ 08): ನೂತನ ಸಚಿವರಾಗಿ ಕೆಎಸ್ ಬಸವಂತಪ್ಪ ಅವರು ಇಂದು (ಆಗಸ್ಟ್ 08) ಮೊದಲ ಬಾರಿಗೆ ಸ್ವಕ್ಷೇತ್ರ ಮಾಯಕೊಂಡಕ್ಕೆ ಆಗಮಿಸಿದ್ದು, ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನೂತನ ಮಂತ್ರಿಗೆ ಹೂಗುಚ್ಚ ನೀಡಿ ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ್ದಾರೆ. ಆದ್ರೆ, ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು….ಬಸವಂತಪ್ಪನವರನ್ನು ಬರಮಾಡಿಕೊಳ್ಳುವ ಬರದಲ್ಲಿದ್ದ ಅಭಿಮಾನಿಯೊಬ್ಬರ ಜೇಬಿಗೆ ಕತ್ತರಿ ಹಾಕಿ ಒಂದು ಲಕ್ಷ ರೂಪಾಯಿ ದೋಚಿಕೊಂಡು ಹೋಗಿದ್ದಾರೆ. ಹೌದು….ನೀರ್ಥಡಿ ಗ್ರಾಮದ ಸಂತೋಷ ಎನ್ನುವಾತ ಸಚಿವರ ಸ್ವಾಗತಕ್ಕೆ ಬಂದು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
