Headlines

‘ಸಿದ್ದರಾಮಯ್ಯ ಈ ದೇಶ ಕಂಡ ಅತ್ಯಂತ ಗೌರವಾನ್ವಿತ ಸಿಎಂ’: ಹಿರಿಯ ನಟ ಸುಂದರ್ ರಾಜ್ – Kannada News | Siddaramaiah was the best CM in the Country says actor Sundar Raj

‘ಕನಕರಾಜ’ ಸಿನಿಮಾದಲ್ಲಿ ಅನೂಪ್ ರೇವಣ್ಣ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಸುಂದರ್ ರಾಜ್ (Sundar Raj) ಕೂಡ ಅಭಿನಯಿಸಿದ್ದಾರೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಚಿತ್ರದ ಶೀರ್ಷಿಕೆಗೆ ‘ಫ್ಯಾನ್ ಆಫ್ ಸಿಎಂ’ ಎಂಬ ಟ್ಯಾಗ್ ಲೈನ್ ಇದೆ. ಆ ಬಗ್ಗೆ ಸುಂದರ್ ರಾಜ್ ವಿವರಿಸಿದರು. ‘ಹೆಚ್​.ಎಂ. ರೇವಣ್ಣ ಅವರು ರಾಜಕೀಯ ವ್ಯಕ್ತಿ ಆಗಿದ್ದರೂ ಕೂಡ ರಾಜಕಾರಣವನ್ನು ಪಕ್ಕಕ್ಕೆ ಇಟ್ಟು ಸಿನಿಮಾರಂಗದ ಬಗ್ಗೆ ಅವರು ತೋರುವ ಒಲವನ್ನು ನಾನು ಅತ್ಯಂತ ಗೌರವದಿಂದ ನೋಡುತ್ತೇನೆ. ಕನಕರಾಜ ಶೀರ್ಷಿಕೆಗೆ ಫ್ಯಾನ್ ಆಫ್ ಸಿಎಂ ಎಂಬ ಅಡಿಬರಹ ಇದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಈ ಚಿತ್ರದಲ್ಲಿ ರಾಮಯ್ಯ ಎಂಬ ಪಾತ್ರವನ್ನು ಅನೂಪ್ ಮಾಡಿದ್ದಾರೆ. ನಾವು ಸಿದ್ದರಾಮಯ್ಯ (Siddaramaiah) ಅವರನ್ನು ನೆನಪಿಸಿಕೊಂಡು ಈ ಸಿನಿಮಾ ಮಾಡಿದ್ದೇವೆ. ಈ ರಾಷ್ಟ್ರ ಕಂಡ ಅತ್ಯಂತ ಗೌರವಾನ್ವಿತ ಸಿಎಂ ಎಂದರೆ ಅದು ನಮ್ಮ ಸಿದ್ದರಾಮಯ್ಯನವರು ಅಂತ ನಾವು ಎದೆತಟ್ಟಿ ಹೇಳಬಹುದು’ ಎಂದಿದ್ದಾರೆ ಸುಂದರ್ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *