ನವದೆಹಲಿ, ಆಗಸ್ಟ್ 12: ರಾಜ್ಯಸಭೆಯಲ್ಲಿ ತಾವು ಮಾತನಾಡುತ್ತಿದ್ದಾಗ ಬಿಜೆಪಿ (BJP) ಸಂಸದೆ ಸುಶ್ಮಿತಾ ದೇವ್ ತಮ್ಮ ಉಡುಪಿನ ಬಗ್ಗೆ ಅಪಹಾಸ್ಯಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಇಂದು ಆರೋಪಿಸಿದ್ದು, ಈ ವಿಚಾರ ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿ ಕಲಾಪವನ್ನು ಮುಂದೂಡಲಾಯಿತು. ಬಿಜೆಪಿ ಸಂಸದೆ ತಮ್ಮನ್ನು ಲುಂಗಿವಾಲಾ ಎಂದು ಕರೆದಿದ್ದಾರೆ ಎಂದು ಆರೋಪಿಸಿದ ಬ್ರಿಟಾಸ್, ಈ ಹೇಳಿಕೆಯು ತಮ್ಮ ಪ್ರಾದೇಶಿಕ ಅಸ್ಮಿತೆಯನ್ನು ತಾರತಮ್ಯದಿಂದ ನೋಡುವಂತಿದೆ ಎಂದು ಹೇಳಿದರು.
ಬ್ರಿಟಾಸ್ ಅವರ ಆರೋಪದ ನಂತರ, ಈ ಘಟನೆಗೆ ಸಂಬಂಧಿಸಿದಂತೆ ಸುಶ್ಮಿತಾ ದೇವ್ ಅವರಿಗೂ ತಮ್ಮ ವಿವರಣೆ ನೀಡಲು ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ಬ್ರಿಟಾಸ್ ಅವರ ಹೇಳಿಕೆ ಈಗ ದಾಖಲಾಗಿದೆ ಮತ್ತು ಯಾರ ವಿರುದ್ಧ ಆರೋಪ ಮಾಡಲಾಗಿದೆಯೋ ಆ ಸದಸ್ಯರಿಗೂ ಉತ್ತರಿಸಲು ಅವಕಾಶ ನೀಡಬೇಕು ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ