ಬಿಡುಗಡೆಗೆ ಸಜ್ಜಾಗಿರುವ ‘ಕೆಡಿ’ ಸಿನಿಮಾದ (KD Movie) ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇಂದು (ಏಪ್ರಿಲ್ 27) ಬೆಂಗಳೂರಿನಲ್ಲಿ ಧ್ರುವ ಸರ್ಜಾ, ಕಿಚ್ಚ ಸುದೀಪ್, ಜೋಗಿ ಪ್ರೇಮ್ ಹಾಗೂ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರೀಷ್ಮಾ ಅವರಿಗೆ ಯಾರೂ ಕೂಡ ಪ್ರಶ್ನೆ ಕೇಳಿಲ್ಲ ಎಂಬುದನ್ನು ಸುದೀಪ್ (Kichcha Sudeep) ಗಮನಿಸಿದರು. ‘ನಮ್ಮ ಮಧ್ಯೆ ಒಂದು ಹುಡುಗಿ ಕೂತಿದೆ. ಇಷ್ಟು ಜನರಿಂದ ಅವರಿಗೆ ಒಂದು ಪ್ರಶ್ನೆ ಕೂಡ ಇಲ್ಲವಾ? ಅವರು ಕೂಡ ಕಲಾವಿದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಯಾರೂ ಪ್ರಶ್ನೆ ಕೇಳದೇ ಇರುವುದು ನ್ಯಾಯವಲ್ಲ. ಅವರಿಗೆ ನಾನು ಪ್ರಶ್ನೆ ಕೇಳುತ್ತೇನೆ’ ಎಂದು ಕಿಚ್ಚ ಸುದೀಪ್ ಅವರು ನಟಿಯ ಬೆಂಬಲಕ್ಕೆ ನಿಂತರು. ಅವರ ಈ ಬೆಂಬಲಕ್ಕೆ ರೀಷ್ಮಾ ನಾಣಯ್ಯ (Reeshma Nanaiah) ಅವರು ಧನ್ಯವಾದ ತಿಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.