ಕಲಬುರಗಿ, (ಜುಲೈ 01): ಡಿಕೆ ಶಿವಕುಮಾರ್ (DK Shivakumar) ಅವರು ಸಿಎಂ ಆದ ಬಳಿಕ ಮೊದಲ ಸಭೆಯಲ್ಲೇ ರಾಜ್ಯದಲ್ಲಿ ರೌಡಿ (Rowdy) ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದರು. ಅಲ್ಲದೇ ರೌಡಿ ನಿಗ್ರಹ ದಳ ರಚನೆಗೆ ಸೂಚಿಸಿದ್ದು. ಅದರಂತೆ ರಾಜ್ಯದ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆಗೆ ಈಗಾಗಲೇ ಆದೇಶಿಸಲಾಗಿದೆ. ಇದರ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಅವರ ಆಟಾಟೋಪಗಳಿಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಕಲಬುರಗಿಯಲ್ಲಿಂದು (Kalaburagi) ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ರೌಡಿ ಪರೇಡ್ ನಡೆಸಿದ್ದು, ರೌಡಿಸಂ ಬಿಡಬೇಕು ಇಲ್ಲಾಂದ್ರೆ ನಮ್ಮಿಂದ ಅಕ್ಷನ್ ಆಗಿ ಹೋಗ್ತಿಯಾ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯ ಕಮೀಷನರ್ ಕಚೇರಿ ಆವರಣದಲ್ಲಿ ಠಾಣಾವಾರು ಟಾಪ್ 10 ರೌಡಿ ಪರೇಡ್ ನಡೆಸಿದ್ದು, ಈ ವೇಳೆ ರೌಡಿ ಶೀಟರ್ ಗಜಾನನ್ ಗೆ ಕಮಿಷನರ್ ತರಾಟಗೆ ತೆಗೆದುಕೊಂಡಿದ್ದಾರೆ. ಚೆನ್ನಾಗಿ ಇರೋಕೆ ಆಗೋಲ್ವಾ? ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅಂದುಕೊಂಡಿದ್ದಿಯಾ? ಎಂದು ವಾರ್ನ್ ಮಾಡಿದ್ದಾರೆ.
