ಹಲವು ಸರ್ಕಾರಿ ನೌಕರರಿಗೆ ಇನ್ನೂ ಆಗಿಲ್ಲ ಮಾರ್ಚ್​​ ಸಂಬಳ: ಗೃಹಲಕ್ಷ್ಮೀಗೆ ಬಳಕೆಯಾಯ್ತಾ ಹಣ? – Kannada News | March Salary Withheld for Karnataka Govt Staff: Financial Crisis or Glitch?

ಬೆಂಗಳೂರು, ಏಪ್ರಿಲ್​​ 19: ಸಾಮಾನ್ಯವಾಗಿ ತಿಂಗಳ ಮೊದಲವಾರವೇ ರಾಜ್ಯದ ಸರ್ಕಾರಿ ನೌಕರರಿಗೆ ಪಾವತಿಯಾಗುತ್ತಿದ್ದ ಹಿಂದಿನಿ ತಿಂಗಳ ಸಂಬಳ ಈ ಸಲ ಭಾರಿ ವಿಳಂಬವಾಗಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್​​ 18 ಕಳೆದರೂ ಹಲವು ಇಲಾಖೆಗಳ ನೌಕರರಿಗೆ ಮಾರ್ಚ್​​ ಸಂಬಳ ಇನ್ನೂ ಕೈ ಸೇರಿಲ್ಲ. ಇದರಿಂದಾಗಿ ಆದಾಯ, ಶಿಕ್ಷಣ, ಪೊಲೀಸ್, ಪಶುಸಂಗೋಪನೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸೇರಿದಂತೆ ಪ್ರಮುಖ ಇಲಾಖೆಗಳ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರಿಗೆ ಏಪ್ರಿಲ್ 9–10ರಂದು ಸಂಬಳ ಬಂದಿದೆಯಾದರೂ, ಬಹಳಷ್ಟು ಮಂದಿ ಇನ್ನೂ ಕಾಯುತ್ತಿದ್ದಾರೆ ಎನ್ನಲಾಗಿದೆ.

ಹಣದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಸೋಮವಾರದೊಳಗೆ ಸಂಬಳ ಪಾವತಿ ಆಗಬಹುದು ಎಂದು ಖಜಾನೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಾಜ್ಯದ ಸುಮಾರು 6.4 ಲಕ್ಷ ನೌಕರರಲ್ಲಿ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಮೂಲಗಳ ಪ್ರಕಾರ ತಾಂತ್ರಿಕ ಸಮಸ್ಯೆಗಳು ಮತ್ತು ಹಣಕಾಸಿನ ಕೊರತೆಯೇ ಮಾರ್ಚ್​​ ತಿಂಗಳಿನ ಸಂಬಳ ವಿಳಂಬಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಅಂತ್ಯದಲ್ಲಿ ಒಂದು-ಎರಡು ವಾರ ಸಂಬಳ ವಿಳಂಬ ಆಗುವುದುಂಟು. ಆದರೆ ಇಷ್ಟು ವಿಳಂಬ ಅಪರೂಪ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ; ದೇಶದ ಮಹಿಳೆಯರ ಗೆಲುವು ಎಂದ ಕೈ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗೂ ಮುನ್ನ ಗೃಹಲಕ್ಷ್ಮಿ ಯೋಜನೆಗೆ 6,000 ಕೋಟಿ ಹಣ ನೀಡಲಾಗಿದೆ. ಸುಮಾರು ಮೂರು ತಿಂಗಳ ಬಾಕಿ ಪಾವತಿಗಾಗಿ ದೊಡ್ಡ ಮೊತ್ತದ ಹಣವನ್ನು ವ್ಯಯಿಸಿರುವ ಕಾರಣಕ್ಕೆ ಈಗ ಸರ್ಕಾರಿ ನೌಕರರ ಸಂಬಳಕ್ಕೆ ದುಡ್ಡಿನ ಸಮಸ್ಯೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಗೃಹಲಕ್ಷ್ಮಿ ಯೋಜನೆಗೆ ಸಂಬಳದ ಹಣವನ್ನು ನೀಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕೆಲವು ಇಲಾಖೆಗಳ ಡಿಡಿಒಗಳು ನಿಧಾನವಾಗಿದ್ದಾರೆ. ಸಂಬಳ ಪಾವತಿ ಇಲಾಖೆಯ ಮುಖ್ಯಸ್ಥರ ಹೊಣೆ ಎಂದು ತಿಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *