ಹಾಸನದ ಎಸ್ಪಿ ಕಚೇರಿಗೆ ಬಂದು ದೂರು ನೀಡಿದ ಬಳಿಕ ಯಶ್ (Yash) ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಿವೇಶನದ ಗಲಾಟೆಗೆ ಸಂಬಂಧಿಸಿದಂತೆ ಅವರು ದೂರು ನೀಡಿದ್ದಾರೆ. ‘ನಮ್ಮ ಬಳಿ ಇರುವ ಪ್ರತಿಯೊಂದು ದಾಖಲೆಯನ್ನೂ ನೀಡಿದ್ದೇವೆ. ನಮ್ಮ ಮನೆಗೆ ಬಂದು ತೊಂದರೆ ಕೊಟ್ಟಿದ್ದಾರೆ. ಇದುವರೆಗೂ ಜೆಸಿಬಿ ಸೀಜ್ ಮಾಡಿಲ್ಲ. ಆ ಪೇಪರ್ಗೂ ನಮಗೂ ಸಂಬಂಧ ಇಲ್ಲ. ಏಕಾಏಕಿ ಬಂದು ಒಡೆದಿದ್ದಾರೆ ಎಂಬುದನ್ನು ತಿಳಿಸಿದ್ದೇನೆ. ಮಹಿಳೆಯಾಗಿ ನಾನು ಖದ್ದಾಗಿ ಬಂದಿದ್ದೇನೆ. ನಮಗೇ ಹೀಗೆ ಆದರೆ ಬೇರೆಯವರ ಕಥೆ ಏನು? ನಮಗೆ ತೊಂದರೆ ಕೊಟ್ಟವರನ್ನು ಯಾಕೆ ಬಂಧಿಸಿಲ್ಲ ಎಂಬುದನ್ನು ಕೇಳಿದ್ದೇನೆ. ರಾಘವೇಂದ್ರ ಇದರಲ್ಲಿ ಭಾಗಿ ಆಗಿದ್ದಾರೆ. ಆದ್ದರಿಂದಲೇ ಇದು ಇಲ್ಲಿಯ ತನಕ ಬಂದಿದೆ. ನಮಗೆ ಭದ್ರತೆ ಬೇಕೇ ಬೇಕೂ. ಮನೆಯಲ್ಲಿ ಏನಾದರೂ ಹೆಚ್ಚೂ ಕಡಿಮೆ ಆದರೆ ನಿಮ್ಮ ಜವಾಬ್ದಾರಿ ಅಂತ ಹೇಳಿದ್ದೇನೆ’ ಎಂದ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಮಾಹಿತಿ ಹಂಚಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
