ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಣೆ: ಕೊಳೆತ ತರಕಾರಿ ಸಮೇತ ಶಾಸಕರ ಮನೆಗೆ ಬಂದು ವಿದ್ಯಾರ್ಥಿಗಳಿಂದ ದೂರು – Kannada News

ಶಾಸಕರ ಮನೆಗೆ ಕೊಳೆತ ತರಕಾರಿ ಹಿಡಿದುಬಂದ ವಿದ್ಯಾರ್ಥಿಗಳುImage Credit source: Tv9 Kannada

ಬೀದರ್​​, ಜೂನ್​ 04: ಶಿಕ್ಷಣಕ್ಕಾಗಿ ಪ್ರತಿ ವರ್ಷ ಕೋಟ್ಯಾಂತರ ಹಣವನ್ನು ಸರ್ಕಾರ ವೆಚ್ಚ ಮಾಡುತ್ತೆ. ಹೀಗಿದ್ದರೂ ಅವುಗಳು ಮಾತ್ರ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳನ್ನು ತಲುಪುತ್ತೆ ಎಂಬುದನ್ನು ಮಾತ್ರ ಆ ಭಗವಂತನೇ ಬಲ್ಲ. ಮಳೆ ಬಂದರೆ ಸೋರುವ ಶಾಲಾ ಕಟ್ಟಡಗಳು, ಸುಣ್ಣ-ಬಣ್ಣವಿಲ್ಲದ ಗೋಡೆಗಳು ಹೀಗೆ ಕೆಲ ಶಾಲೆ-ಕಾಲೇಜುಗಳ ದುಃಸ್ಥಿತಿ ಹೇಳತೀರದು. ಹಾಸ್ಟೆಲ್​​ಗಳ ಅವ್ಯವಸ್ಥೆಯೂ ಇದಕ್ಕೆ ಹೊರತಾಗಿಲ್ಲ. ಈ ನಡುವೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿಗಳಿಗೆ ತೀರಾ ಕಳಪೆ ಮಟ್ಟದ ಆಹಾರ ಒದಗಿಸುತ್ತಿರುವ ಘಟನೆ ಬೀದರ್​​ನಲ್ಲಿ ನಡೆದಿದೆ. ಅಷ್ಟಕ್ಕೂ ಯಾವುದೋ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಈ ವಿಚಾರ ಬಯಲಾಗಿದ್ದಲ್ಲ. ಬದಲಾಗಿ ಆಹಾರ, ಕೊಳೆತ ತರಕಾರಿಗಳನ್ನು ಹಿಡಿದು ವಿದ್ಯಾರ್ಥಿಗಳೇ ಶಾಸಕರ ಮನೆ ಬಾಗಿಲು ತಟ್ಟಿದ್ದಾರೆ.

ವಾರ್ಡನ್​​ ಮತ್ತು ಅಧಿಕಾರಿಗಳ ಮೇಲೆ ಶಾಸಕರು ಗರಂ

ವಿದ್ಯಾರ್ಥಿಗಳು ತಂದಿದ್ದ ಕಳಪೆ ಗುಣಮಟ್ಟದ ಆಹಾರ ಮತ್ತು ತರಕಾರಿಗಳನ್ನು ಕಂಡು ಗರಂ ಆದ ಬಸವಕಲ್ಯಾಣ ಶಾಸಕ ಶಾಸಕ ಶರಣು ಸಲಗರ್, ದೂರವಾಣಿ ಕರೆ ಮಾಡಿ ವಾರ್ಡನ್​​ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ‌ ಮಕ್ಕಳಿಗೂ ಇದೇ ರೀತಿ ಊಟ ಕೋಡ್ತಿರಾ ಎಂದು ವಾರ್ಡ‌ನ್​​ರನ್ನು ಪ್ರಶ್ನಿಸಿರುವ ಶಾಸಕರು, ಮಕ್ಕಳಿಗೆ ಚೆನ್ನಾಗಿರುವ ಊಟ ಕೊಡಿ ಅಂತಾ ಸರ್ಕಾರ ಹಣ ಕೊಡುತ್ತೆ, ಆದರೆ ನೀವೇನು ಮಾಡುತ್ತಿದ್ದೀರಾ ಎಂದು ತರಾಟೆಗೆ ಪಡೆದಿದ್ದಾರೆ.

ಇದನ್ನೂ ಓದಿ: ಹರಿದ ಬಟ್ಟೆಯ ಗುಡಿಸಲೇ ಇವರ ಅರಮನೆ; ಕತ್ತಲ ಕೂಪದಲ್ಲಿ ಹಕ್ಕಿಪಿಕ್ಕಿ ಸಮುದಾಯ

ಶಾಸಕರ ಮನೆಯಲ್ಲಿಯೇ ಊಟ ಸವಿದ ವಿದ್ಯಾರ್ಥಿಗಳು

ಅಧಿಕಾರಿಗಳಿಗೆ ಖಡಕ್​​ ಎಚ್ಚರಿಕೆ ಬಳಿಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇ ಊಟ ನೀಡುವ ಮೂಲಕ ಶಾಸಕರು ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳೂ ಸಾಲಾಗಿ ಕೂತು ಭೋಜನ ಸವಿದಿದ್ದಾರೆ. ಇನ್ನುಮುಂದೆ ಈ ರೀತಿ ಸಮಸ್ಯೆ ಆಗದಂತೆ ಕ್ರಮ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ವಿದ್ಯಾರ್ಥಿಗಳಿಗೆ ಶಾಸಕ ಶರಣು ಸಲಗರ್​ ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:15 am, Thu, 4 June 26

Source link

Leave a Reply

Your email address will not be published. Required fields are marked *