20 ಟಿಎಂಸಿ ಸಂಸದರು, 50 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ; ಬಿಜೆಪಿ ಸ್ಫೋಟಕ ಹೇಳಿಕೆ

ಕೊಲ್ಕತ್ತಾ, ಮೇ 27: ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಸುಮಾರು 20 ಸಂಸದರು ಮತ್ತು 50 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಬಿಜೆಪಿಯ ಹೈಕಮಾಂಡ್ ಅವರ ಸೇರ್ಪಡೆಗೆ ಅನುಮತಿ ನೀಡಿದರೆ ಪಕ್ಷ ಬದಲಾಯಿಸಲು ಸಿದ್ಧರಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಸೌಮಿತ್ರ ಖಾನ್ ಹೇಳಿದ್ದಾರೆ. ಚುನಾವಣೆಯ ಬಳಿಕ ಹಲವಾರು ಟಿಎಂಸಿ ಸಂಸದರು ಪಕ್ಷದೊಳಗೆ ಅತೃಪ್ತರಾಗಿದ್ದಾರೆ. ಅವರು ರಹಸ್ಯವಾಗಿ ಬಿಜೆಪಿ ಪಾಳಯದ ನಾಯಕರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂದು ಸೌಮಿತ್ರ ಖಾನ್ ಆರೋಪಿಸಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

  • ಟಿಎಂಸಿಯ 50 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಬಿಜೆಪಿ
  • ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್
  • ಬಂಗಾಳದಲ್ಲಿ ಸಂಪೂರ್ಣ ಪತನವಾಗುತ್ತಾ ಟಿಎಂಸಿ?

“20 ಟಿಎಂಸಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಬಯಸಿದರೆ, ಮುಂದಿನ ಕೆಲವು ದಿನಗಳಲ್ಲಿ ಇಡೀ ಟಿಎಂಸಿ ಅಂತ್ಯಗೊಳ್ಳುತ್ತದೆ” ಎಂದು ಸೌಮಿತ್ರ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ, ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾದ ಟಿಎಂಸಿ ಸಂಸದರ ಹೆಸರನ್ನು ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಸಹಿಸುವುದಿಲ್ಲ; ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ 42 ಸಂಸದರಲ್ಲಿ ಟಿಎಂಸಿ ಪ್ರಸ್ತುತ ಲೋಕಸಭೆಯಲ್ಲಿ 29 ಸಂಸದರನ್ನು ಹೊಂದಿದೆ. ಬಿಜೆಪಿ 12 ಮತ್ತು ಕಾಂಗ್ರೆಸ್ ಒಬ್ಬರು ಸಂಸದರನ್ನು ಹೊಂದಿದೆ. ಪಕ್ಷಾಂತರ ವಿರೋಧಿ ಕಾನೂನಿನಡಿ ಅನರ್ಹತೆಯಿಂದ ಪಾರಾಗಲು ಸಂಸದೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ಒಟ್ಟಾಗಿ ಪಕ್ಷ ಬದಲಾಯಿಸಬೇಕಾಗುತ್ತದೆ.

ಟಿಎಂಸಿ ನಿರಾಕರಣೆ:

ಸೌಮಿತ್ರ ಖಾನ್ ಅವರ ಹೇಳಿಕೆಗಳನ್ನು ನಿರಾಕರಿಸಿದ ಹಿರಿಯ ಟಿಎಂಸಿ ಸಂಸದ ಸೌಗತ ರಾಯ್ ಈ ವರದಿಗಳನ್ನು “ಆಧಾರರಹಿತ” ಎಂದು ಟೀಕಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಮುನ್ನ ಟಿಎಂಸಿಯ ಹಲವಾರು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಂಡ ನಂತರ ಅನೇಕರು ಮತ್ತೆ ಪಕ್ಷಕ್ಕೆ ಮರಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *