Headlines

48 ಗಂಟೆಗಳಲ್ಲಿ 15 ಕೋಟಿ ರೂ. ಮುಂಗಡ ಕಲೆಕ್ಷನ್ ಮಾಡಿದ ವಿಜಯ್ ಸಿನಿಮಾ ‘ಜನ ನಾಯಗನ್’ – Kannada News | Jana Nayagan Advance Booking Crosses 15 Crore Vijay Movie

ನಟನೆಯಿಂದ ರಾಜಕೀಯದತ್ತ ಮುಖ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಸುಮಾರು ಏಳು ತಿಂಗಳ ಸುದೀರ್ಘ ವಿಳಂಬದ ನಂತರ ಈ ವಾರ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಬಿಡುಗಡೆಗೆ ನಾಲ್ಕು ದಿನಗಳಿರುವಂತೆಯೇ ಭಾನುವಾರದಿಂದ ಆರಂಭವಾದ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ (Advance Bookings) ಪ್ರೇಕ್ಷಕರಿಂದ ಅಭೂತಪೂರ್ವ ಮತ್ತು ದಾಖಲೆ ಮಟ್ಟದ ಸ್ಪಂದನೆ ವ್ಯಕ್ತವಾಗಿದೆ.

ಮಂಗಳವಾರದ (ಜುಲೈ 21) ಹೊತ್ತಿಗೆ, ಭಾರತದಾದ್ಯಂತ ಮೊದಲ ದಿನದ ಪ್ರದರ್ಶನಕ್ಕೆ 6 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಈ ವರ್ಷದ ಅತಿ ದೊಡ್ಡ ಓಪನಿಂಗ್ ಪಡೆಯುವ ಭಾರತೀಯ ಸಿನಿಮಾಗಳ ಸಾಲಿನಲ್ಲಿ ‘ಜನ ನಾಯಗನ್’ ಸೇರಲು ಸಜ್ಜಾಗಿದೆ. ದೇಶಾದ್ಯಂತ ಸುಮಾರು 8000 ಶೋಗಳನ್ನು ಆಯೋಜಿಸಲಾಗಿದ್ದು, ಕೇವಲ ತಮಿಳುನಾಡಿನಲ್ಲೇ 3500ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳಲಿವೆ. ಜುಲೈ 23ರ ಬಿಡುಗಡೆಯ ದಿನದ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಈಗಾಗಲೇ 27 ಕೋಟಿ ರೂಪಾಯಿ ಬಿಸ್ನೆಸ್:

ಪ್ರಮುಖ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ಮಾಹಿತಿಯ ಪ್ರಕಾರ, ಸೋಮವಾರ (ಜುಲೈ 20) ರಾತ್ರಿ 9 ಗಂಟೆಯ ವೇಳೆಗೆ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಿಂದ 13 ಕೋಟಿ ರೂಪಾಯಿ ಗ್ರೋಸ್ ಕಲೆಕ್ಷನ್ ಆಗಿತ್ತು. ಮಂಗಳವಾರ ಬೆಳಿಗ್ಗೆ ವೇಳೆಗೆ ಈ ಮೊತ್ತ 15 ಕೋಟಿ ರೂಪಾಯಿ ಗಡಿ ದಾಟಿದೆ ಎಂದು ಚಿತ್ರರಂಗದ ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೊದಲ ವಾರಾಂತ್ಯದ ಮುಂಗಡ ಬುಕಿಂಗ್ ಬಿಸ್ನೆಸ್ ಈಗಾಗಲೇ 27 ಕೋಟಿ ರೂಪಾಯಿ ದಾಟಿದೆ. ಯಾವುದೇ ದೊಡ್ಡ ಪ್ಯಾನ್-ಇಂಡಿಯಾ ಪ್ರಚಾರವಿಲ್ಲದೆ, ಪ್ರಮುಖವಾಗಿ ತಮಿಳು ಮಾರುಕಟ್ಟೆಯನ್ನೇ ನೆಚ್ಚಿಕೊಂಡ ಚಿತ್ರವೊಂದಕ್ಕೆ ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಹೌಸ್‌ಫುಲ್ ಪ್ರದರ್ಶನಗಳು ಮತ್ತು ಹೆಚ್ಚಿದ ಒತ್ತಡ:

ತಮಿಳುನಾಡಿನಲ್ಲಿ ಜುಲೈ 19ರಿಂದ ಮುಂಗಡ ಬುಕಿಂಗ್ ಆರಂಭವಾಗಿದ್ದು, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡರಲ್ಲೂ ಕೆಲವೇ ಗಂಟೆಗಳಲ್ಲಿ 90,000ಕ್ಕೂ ಹೆಚ್ಚು ಟಿಕೆಟ್‌ಗಳು ಭರಪೂರ ಮಾರಾಟವಾಗಿವೆ. ರಾಜ್ಯಾದ್ಯಂತ ಟಿಕೆಟ್ ಬುಕಿಂಗ್‌ಗೆ ಭಾರಿ ಒತ್ತಡವಿದೆ. ಚೆನ್ನೈನ ಕಮಲಾ ಸಿನಿಮಾಸ್‌ನಲ್ಲಿ ಆನ್‌ಲೈನ್ ಪೋರ್ಟಲ್ ತೆರೆದ ಕೆಲವೇ ನಿಮಿಷಗಳಲ್ಲಿ 10,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾದರೆ, ಮಾಯಾಜಾಲ್ ಮಲ್ಟಿಪ್ಲೆಕ್ಸ್‌ನಲ್ಲಿ 48 ಶೋಗಳು ಒಂದೇ ಗಂಟೆಯಲ್ಲಿ ಹೌಸ್‌ಫುಲ್ ಆಗಿವೆ.

ಇದನ್ನೂ ಓದಿ: ‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು

ಸದ್ಯ ಚೆನ್ನೈನಲ್ಲಿ ರಾಜ್ಯ ಸರ್ಕಾರವು ಗರಿಷ್ಠ ಟಿಕೆಟ್ ದರವನ್ನು 190 ರೂಪಾಯಿ ಎಂದು ನಿಗದಿಪಡಿಸಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ನಟ ವಿಜಯ್ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಧುಮುಕುವ ಮುನ್ನ ನಟಿಸಿರುವ ಕೊನೆಯ ಚಿತ್ರವಾಗಿದೆ. ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆಯುವಲ್ಲಿ ಎದುರಾದ ವಿಳಂಬದಿಂದಾಗಿ ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಜುಲೈಗೆ ಮುಂದೂಡಲ್ಪಟ್ಟಿತ್ತು. ಈ ಮಧ್ಯೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಜಯಗಳಿಸಿ, ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *