ಡಿಕೆ ಶಿವಕುಮಾರ್​​ಗೆ ಬಯಕೆ ಈಡೇರಿಸುವ ಭರವಸೆ ನೀಡಿದ ಜಗದೀಶ್ವರಿ ದೇವಿ: ಅರ್ಚಕರು ಹೇಳಿದ್ದಿಷ್ಟು – Kannada News | DK Shivakumar seeks divine blessings at Andle Jagadeeshwari Temple amid CM speculation

ಕಾರವಾರ, ಡಿಸೆಂಬರ್​ 19: ರಾಜ್ಯ ಕಾಂಗ್ರೆಸ್​​ನಲ್ಲಿ ಕುರ್ಚಿ ಕಾಳಗದ ಮಧ್ಯೆ ಇಂದು ಡಿಸಿಎಂ ಡಿಕೆ ಶಿವಕುಮಾರ್​, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿರುವ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಡಿಕೆ ಶಿವಕುಮಾರ್​ ಪೂಜೆ ಸಲ್ಲಿಸಿದ ಬಗ್ಗೆ ಅರ್ಚಕ ಗಣೇಶ್ ನಾಯಕ್​ ಟವಿ9 ಜೊತೆಗೆ ಮಾತನಾಡಿದ್ದು, ದೇವಿ ಡಿ.ಕೆ. ಶಿವಕುಮಾರ್‌ಗೆ ಮೂರು ರೀತಿಯ ಸೂಚನೆಗಳನ್ನು ನೀಡಿದ್ದಾಳೆ. ಹಿಂದೆ ತಿಹಾರ್ ಜೈಲಿನಿಂದ ಬಿಡುಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯುವ ಕುರಿತು ದೇವಿ ಮುನ್ಸೂಚನೆ ನೀಡಿದ್ದಳು. ಈ ಬಾರಿಯೂ ಡಿ.ಕೆ. ಶಿವಕುಮಾರ್ ಅವರು ಕೇಳಿದ ದಿನಾಂಕದೊಳಗೆ ಅವರ ಬಯಕೆ ಈಡೇರುತ್ತದೆ ಎಂದು ದೇವಿ ಭರವಸೆ ನೀಡಿದ್ದಾಳೆ ಎಂದು ಅರ್ಚಕರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *