ಇಂದು 2026ರ ಜುಲೈ 20ರ ಸೋಮವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಶುಕ್ಲ ಪಕ್ಷ ಷಷ್ಠಿ ಹಾಗೂ ಹಸ್ತಾ ನಕ್ಷತ್ರದಿಂದ ಕೂಡಿದೆ. ಬೆಳಗ್ಗೆ 7:37 ರಿಂದ 9:13ರವರೆಗೆ ರಾಹುಕಾಲವಿರುತ್ತದೆ. ಇಂದು ಸ್ಕಂದ ಷಷ್ಠಿ ಮಹಾ ಪರ್ವ ದಿನವಾಗಿದ್ದು, ಮಕ್ಕಳ ಆರೋಗ್ಯ ಮತ್ತು ಕುಜ ದೋಷ ನಿವಾರಣೆಗಾಗಿ ಸುಬ್ರಹ್ಮಣ್ಯನ ದರ್ಶನ, ಹುತ್ತಕ್ಕೆ ಪೂಜೆ ಮತ್ತು ಹುತ್ತದ ಮಣ್ಣಿನ ಸ್ನಾನ ಮಾಡುವುದು ಶುಭ. ಅಲ್ಲದೆ, ನಾರಾಯಣ ಭಗವಾನ್ ಜಯಂತ್ಯೋತ್ಸವವೂ ಇದೆ. ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.