Astrology: ಈ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಜಾತಕದಲ್ಲಿ ಸೂರ್ಯ ದುರ್ಬಲ ಸ್ಥಾನದಲ್ಲಿದ್ದಾನೆ ಎಂದರ್ಥ – Kannada News | Weak Sun in Astrology: Symptoms and Remedies for Sun Affliction in Kundali

ಜಾತಕದಲ್ಲಿ ಸೂರ್ಯ ದುರ್ಬಲImage Credit source: Pinterest

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ‘ಗ್ರಹಗಳ ರಾಜ’ ಎಂದು ಕರೆಯಲಾಗುತ್ತದೆ. ಸೂರ್ಯನು ಕೇವಲ ಬೆಳಕಿನ ಮೂಲವಲ್ಲ, ಬದಲಿಗೆ ವ್ಯಕ್ತಿಯ ಶಕ್ತಿ, ಗೌರವ, ಯಶಸ್ಸು ಮತ್ತು ಆತ್ಮವಿಶ್ವಾಸದ ಸಂಕೇತ. ಜಾತಕದಲ್ಲಿ ಸೂರ್ಯನು ಬಲಿಷ್ಠನಾಗಿದ್ದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಆದರೆ, ಅದೇ ಸೂರ್ಯನು ದುರ್ಬಲ ಅಥವಾ ನೀಚ ಸ್ಥಾನದಲ್ಲಿದ್ದರೆ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ನಿಮ್ಮ ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದಾನೆ ಎಂದು ತಿಳಿಯುವುದು ಹೇಗೆ? ಅದರ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ.

ಸೂರ್ಯ ದುರ್ಬಲ ಸ್ಥಾನದಲ್ಲಿದ್ದರೆ ತಿಳಿಯುವುದು ಹೇಗೆ?

ಆತ್ಮವಿಶ್ವಾಸದ ಕುಸಿತ:

ಸೂರ್ಯನು ಆತ್ಮಬಲದ ಕಾರಕ. ಸೂರ್ಯ ದುರ್ಬಲನಾಗಿದ್ದರೆ ವ್ಯಕ್ತಿಯಲ್ಲಿ ವಿಪರೀತ ಭಯ ಮತ್ತು ಕೀಳರಿಮೆ ಕಾಡುತ್ತದೆ. ಸಣ್ಣ ನಿರ್ಧಾರ ತೆಗೆದುಕೊಳ್ಳಲು ಕೂಡ ಇತರರ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಆರೋಗ್ಯ ಸಮಸ್ಯೆಗಳು (ಮೂಳೆ ಮತ್ತು ಕಣ್ಣು):

ದೈಹಿಕವಾಗಿ ಸೂರ್ಯನು ಕಣ್ಣಿನ ದೃಷ್ಟಿ ಮತ್ತು ಮೂಳೆಗಳಿಗೆ ಸಂಬಂಧಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ ಕಾಣಿಸಿಕೊಳ್ಳುವುದು ಅಥವಾ ಪದೇ ಪದೇ ಕೀಲು ನೋವು ಅನುಭವಿಸುವುದು ಸೂರ್ಯನ ದೋಷದ ಲಕ್ಷಣಗಳಾಗಿವೆ.

ತಂದೆಯೊಂದಿಗೆ ಭಿನ್ನಾಭಿಪ್ರಾಯ:

ಜ್ಯೋತಿಷ್ಯದ ಪ್ರಕಾರ ಸೂರ್ಯನು ಪಿತೃತ್ವದ ಸಂಕೇತ. ಜಾತಕದಲ್ಲಿ ಸೂರ್ಯ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ತಂದೆಯೊಂದಿಗೆ ಸೈದ್ಧಾಂತಿಕ ಸಂಘರ್ಷ ಉಂಟಾಗಬಹುದು ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

ಗೌರವಕ್ಕೆ ಚ್ಯುತಿ:

ನೀವು ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಸಮಾಜದಲ್ಲಿ ಅಥವಾ ಕಚೇರಿಯಲ್ಲಿ ನಿಮಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲವೇ? ಕಾರಣವಿಲ್ಲದೆ ಕಳಂಕ ಅಥವಾ ಅಪಪ್ರಚಾರ ಎದುರಿಸುತ್ತಿದ್ದರೆ ಅದಕ್ಕೆ ಸೂರ್ಯ ದುರ್ಬಲ ಸ್ಥಾನದಲ್ಲಿರುವುದೇ ಕಾರಣವಿರಬಹುದು.

ವೃತ್ತಿ ಬದುಕಿನಲ್ಲಿ ಹಿನ್ನಡೆ:

ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅಥವಾ ಉದ್ಯೋಗದಲ್ಲಿ ಬಡ್ತಿ ನಿರೀಕ್ಷಿಸುತ್ತಿರುವವರಿಗೆ ಸೂರ್ಯನ ಬಲ ಬಹಳ ಮುಖ್ಯ. ದುರ್ಬಲ ಸೂರ್ಯನು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡುತ್ತದೆ ಮತ್ತು ವೃತ್ತಿಜೀವನದಲ್ಲಿ ಅಡೆತಡೆಗಳನ್ನು ತರುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮಾನಸಿಕ ಅಶಾಂತಿ:

ಸೂರ್ಯನ ಪ್ರಭಾವ ಕಡಿಮೆಯಾದಾಗ ವ್ಯಕ್ತಿಯು ಸಂಕುಚಿತ ಮನೋಭಾವ ಬೆಳೆಸಿಕೊಳ್ಳಬಹುದು. ಇದು ಅತಿಯಾದ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ದಾರಿ ಮಾಡಿಕೊಡುತ್ತದೆ.

ಜಾತಕದಲ್ಲಿ ಸೂರ್ಯನ ಬಲ ಹೆಚ್ಚಿಸಲು ಸರಳ ಪರಿಹಾರಗಳು:

ನಿಮ್ಮ ಜೀವನದಲ್ಲಿ ಈ ಮೇಲಿನ ಸಮಸ್ಯೆಗಳಿದ್ದರೆ ಸೂರ್ಯನನ್ನು ಪ್ರಸನ್ನಗೊಳಿಸಲು ಈ ಕ್ರಮಗಳನ್ನು ಅನುಸರಿಸಿ:

  • ಅರ್ಘ್ಯ ಅರ್ಪಣೆ: ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ತಾಮ್ರದ ಪಾತ್ರೆಯಿಂದ ಸೂರ್ಯನಿಗೆ ನೀರನ್ನು ಅರ್ಪಿಸಿ.
  • ಮಂತ್ರ ಪಠನೆ: ಪ್ರತಿನಿತ್ಯ 108 ಬಾರಿ “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
  • ದಾನದ ಮಹತ್ವ: ಭಾನುವಾರದಂದು ಬೆಲ್ಲ, ಗೋಧಿ, ತಾಮ್ರ ಅಥವಾ ಕೆಂಪು ಬಟ್ಟೆಯನ್ನು ದಾನ ಮಾಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.
  • ಭಾನುವಾರ ಉಪವಾಸ: ಸೂರ್ಯ ದೇವರ ಪ್ರೀತ್ಯರ್ಥ ಭಾನುವಾರದಂದು ಉಪವಾಸ ಆಚರಿಸಿ ಮತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಮತ್ತು ಯಶಸ್ಸು ಲಭಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *