All posts by nagaraj11081993

ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಈ ಅಹಾರಗಳನ್ನು ಸೇವನೆ ಮಾಡಿ – Kannada News | Eat these foods to get rid of laziness and stay active throughout the day

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಆಯಾಸ (fatigue) ಕಾಣಿಸಿಕೊಳ್ಳುವುದು ಸಹಜ.  ಆದರೆ ಕೆಲವರು ಆರೋಗ್ಯವಾಗಿದ್ದರೂ ಸಹ ಲವಲವಿಕೆಯೇ ಇಲ್ಲದೆ ಸುಸ್ತಾಗಿರುತ್ತಾರೆ. ಯಾವುದೇ ತೀರಾ ಸಣ್ಣ ಕೆಲಸ ಮಾಡಿದರೂ ಸಹ ಆಯಾಸವನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಅಗತ್ಯ ಪೋಷಕಾಂಶಗಳ ಕೊರತೆಯೇ ಮುಖ್ಯ ಕಾರಣ.  ನಮ್ಮ ಪ್ರಸ್ತುತ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆ ಅಭ್ಯಾಸಗಳು ನಮ್ಮ ದೇಹವನ್ನು ಒಳಗಿನಿಂದ ದುರ್ಬಲಗೊಳಿಸುತ್ತಿವೆ, ಇದರಿಂದಾಗಿ ದೇಹದಲ್ಲಿ ಸುಸ್ತು ಆವರಿಸಿದಂತಾಗುತ್ತದೆ. ಹೀಗಿರುವಾಗ ಆಲಸ್ಯವನ್ನು ಹೋಗಲಾಡಿಸಿ ದೇಹವನ್ನು ಪುನರುಜ್ಜೀವನಗೊಳಿಸಲು ಪ್ರತಿನಿತ್ಯ ಈ ಕೆಲವು ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಆಯಾಸವನ್ನು ಕಡಿಮೆ ಮಾಡಲು ನೀವು ಸೇವಿಸಬೇಕಾದ ಆಹಾರಗಳಿವು:

ಚಿಯಾ ಬೀಜಗಳು: ಚಿಯಾ ಬೀಜಗಳು ಶಕ್ತಿಯ ಶಕ್ತಿಕೇಂದ್ರವಾಗಿದೆ. ಅವು ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಈ ಪೋಷಕಾಂಶಗಳು ದೇಹಕ್ಕೆ ದೀರ್ಘಕಾಲೀನ ಶಕ್ತಿಯನ್ನು ಒದಗಿಸುತ್ತವೆ ಮತ್ತು ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತವೆ. ಅಲ್ಲದೆ ಚಿಯಾ ಬೀಜಗಳಲ್ಲಿರುವ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ದೌರ್ಬಲ್ಯ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ. ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ದೇಹಕ್ಕೆ ಜಲಸಂಚಯನ ದೊರೆಯುತ್ತದೆ, ಇದು ಆಯಾಸವನ್ನು ತ್ವರಿತವಾಗಿ ನಿವಾರಿಸಲು ಸಹಾಯ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣುಗಳು ನೈಸರ್ಗಿಕ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಅಂಶವನ್ನು ಹೊಂದಿರುವುದರಿಂದ ಇದು ಆಯಾಸವನ್ನು ನಿವಾರಿಸಿ ದೇಹಕ್ಕೆ  ತ್ವರಿತ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ಸ್ನಾಯು ದೌರ್ಬಲ್ಯ ಮತ್ತು ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6  ಸಮೃದ್ಧವಾಗಿದ್ದು, ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ಆಯಾಸವನ್ನು ಹೋಗಲಾಡಿಸಿ ದೇಹವನ್ನು ಹೆಚ್ಚು ಸಮಯ ಸಕ್ರಿಯವಾಗಿರಿಸುತ್ತದೆ.

ಬಾದಾಮಿ: ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿದ್ದು, ಇದನ್ನು ಸೇವನೆ ಮಾಡುವುದರಿಂದ ಆಯಾಸವನ್ನು ಹೋಗಲಾಡಿಸಬಹುದು.  ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ಅಂಶವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ. ಬಾದಾಮಿಗಳು ವಿಟಮಿನ್ ಇ ಮತ್ತು ಬಿ-ಕಾಂಪ್ಲೆಕ್ಸ್‌ನಲ್ಲಿ ಸಮೃದ್ಧವಾಗಿವೆ, ಇದು ಜೀವಕೋಶದ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಅವುಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹವನ್ನು ಸಕ್ರಿಯವಾಗಿರಿಸುತ್ತದೆ.

ಇದನ್ನೂ ಓದಿ: ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರೋಕೆ ಸರಳ ಮನೆಮದ್ದುಗಳನ್ನು ಟ್ರೈ ಮಾಡಿ

ವಾಲ್ನಟ್ಸ್: ವಾಲ್ನಟ್ಸ್ ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವುದರಿಂದ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಅವುಗಳ ಮೆಗ್ನೀಸಿಯಮ್ ಮತ್ತು ಕಬ್ಬಿಣಾಶವು ಸ್ನಾಯು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ವಾಲ್ನಟ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಮಾನಸಿಕ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ನಿಯಮಿತ, ಸರಿಯಾದ ಸೇವನೆಯು ದೇಹವನ್ನು ಆಕ್ಟಿವ್‌ ಆಗಿರಿಸಲು ಸಹಾಯ ಮಾಡುತ್ತದೆ.

ಓಟ್ಸ್:  ಓಟ್ಸ್ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿರುವುದರಿಂದ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ, ದೇಹವನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿರಿಸುತ್ತದೆ. ಇದರಲ್ಲಿರುವ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಅಲ್ಲದೆ ಓಟ್ಸ್ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಬಿ ಜೀವಸತ್ವಗಳನ್ನು ಹೊಂದಿರುತ್ತದೆ, ಇದು ಸ್ನಾಯುಗಳು ಮತ್ತು ನರಮಂಡಲವನ್ನು ಬಲಪಡಿಸುತ್ತದೆ, ಮಾನಸಿಕ ಮತ್ತು ದೈಹಿಕ ಆಯಾಸವನ್ನು ಕಡಿಮೆ ಮಾಡುತ್ತದೆ.

ಗ್ರೀನ್ ಟೀ: ಅತಿಯಾದ ಕೆಲಸವು ಆಯಾಸ ಮತ್ತು ಒತ್ತಡ ಎರಡನ್ನೂ ಉಂಟುಮಾಡಬಹುದು. ನಿಮಗೂ ಕೂಡ ಈ ರೀತಿಯ ಆಯಾಸ ಉಂಟಾದರೆ ಈ ಸಮಯದಲ್ಲಿ ನೀವು ಗ್ರೀನ್ ಟೀ ಕುಡಿಯಬೇಕು. ಇದು ತ್ವರಿತ ಶಕ್ತಿಯನ್ನು ಒದಗಿಸುವುದಲ್ಲದೆ, ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ವಿರುದ್ಧ ನೆಗೆಟಿವ್ ಪಿಆರ್ ಮಾಡ್ತಿರೋದು ಯಾರು? ದೊಡ್ಡ ಸಾಕ್ಷಿ ತಂದ ಫ್ಯಾನ್ಸ್ – Kannada News | Gilli Negative PR: Vinay Gowda’s Shocking Revelation, Fans Find Proof

ವಿನಯ್ ಗೌಡ ಅವರು ಇತ್ತೀಚೆಗೆ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಒಂದು ಶಾಕಿಂಗ್ ವಿಷಯ ಹೇಳಿದ್ದರು. ‘ಕೆಲವು ಪಿಆರ್​​ಗಳು ಗಿಲ್ಲಿ  ನಟ (Gilli Nata) ವಿರುದ್ಧ ನೆಗೆಟಿವ್ ಪ್ರಚಾರ ಮಾಡುತ್ತದ್ದಾರೆ’ ಎಂದಿದ್ದರು. ಇದು ನಿಜವಾಗಿದೆ. ಇದನ್ನು ಫ್ಯಾನ್ಸ್ ಸಾಕ್ಷಿ ಸಮೇತ ಹಿಡಿದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.

ಗಿಲ್ಲಿ ನಟ ಅವರದ್ದು ಎಲ್ಲರಿಗೂ ಇಷ್ಟ ಆಗೋ ವ್ಯಕ್ತಿತ್ವ. ಡೈಲಾಗ್ ಮೂಲಕ ತಮ್ಮ ಮಾತಿನ ಮೂಲಕ ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ಮಾಡೋ ಕಾಮಿಡಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅದರಲ್ಲೂ ಸಿನಿಮಾ ದೃಶ್ಯಗಳನ್ನು ಮನೆಯಲ್ಲಿ ನಡೆಯುವ ಘಟನೆಗಳಿಗೆ ಹೋಲಿಸಿ ಮಾಡುವ ಕಾಮಿಡಿಗಳು ಅದ್ಭುತವಾಗಿ ಇರುತ್ತವೆ. ಇಷ್ಟೆಲ್ಲ ಜನಪ್ರಿಯತೆ ಪಡೆದರೂ ಅವರ ವಿರುದ್ಧ ಕೆಲವರು ದ್ಷೇಷ ಹುಟ್ಟುವಂತೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  ಕ್ಯಾಪ್ಟನ್ಸಿ ನಂಗೇ ಕೊಡಿ ಎಂದು ಬಿಗ್ ಬಾಸ್ ಬಳಿ ಹಠ ಹಿಡಿದ ಅಶ್ವಿನಿ; ಇದೆಂಥಾ ಲಾಜಿಕ್?

ರಿಯಾಲಿಟಿ ಶೋ ಎಂದಾಗ ಎಲ್ಲಾ ವೀಕ್ಷಕರು ಓರ್ವ ಸ್ಪರ್ಧಿಗೆ ಅಭಿಮಾನಿಯಾಗಬೇಕು ಎಂಬ ನಿಯಮ ಏನು ಇಲ್ಲ. ಕೆಲವರಿಗೆ ಗಿಲ್ಲಿ ಹಾಗೂ ಅವನ ಮಾತು ಇಷ್ಟ ಆದರೆ, ಇನ್ನೂ ಕೆಲವರಿಗೆ ಅದು ಸರಿಯಾದ ಮಾತಲ್ಲ ಎನಿಸಬಹುದು. ಹೀಗಾಗಿ, ಫ್ಯಾನ್ಸ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಯೋದು ಸಾಮಾನ್ಯ. ಉಳಿದ ಸ್ಪರ್ಧಿಗಳ ಫ್ಯಾನ್ಸ್ ಗಿಲ್ಲಿ ವಿರುದ್ಧ ಪೋಸ್ಟ್ ಕೂಡ ಹಾಕಬಹುದು. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಗಿಲ್ಲಿ ವಿರುದ್ಧ ನೆಗೆಟಿವ್ ಪೋಸ್ಟ್ ಹಾಕುತ್ತಿರುವುದನ್ನು ಅವರ ಅಭಿಮಾನಿಗಳು ಕಂಡು ಹಿಡಿದಿದ್ದಾರೆ.

‘ಕಾವ್ಯಾ, ಅಶ್ವಿನಿ, ಧ್ರುವಂತ್ ಇಲ್ಲದೆ ಗಿಲ್ಲಿ ಏನೂ ಅಲ್ಲ. ಅವರಿಗೆ ರಿಯಾಕ್ಟ್ ಮಾಡಿದರೆ ಇವನಿಗೆ ಕಂಟೆಂಟ್. ಟಾಸ್ಕ್​​ನಲ್ಲಿ ಸೊನ್ನೆ, ಮನೆ ಕೆಲಸದಲ್ಲಿ ಸೊನ್ನೆ, ಬರೀ ಟ್ರಿಗರ್ ಮಾಡಿ ಕಂಟೆಂಟ್ ತೆಗೆದುಕೊಳ್ಳೋದು. ಈ ರೀತಿ ವಿನ್ ಆಗೋದ್ರಲ್ಲಿ ಏನರ್ಥವಿದೆ’ ಎಂಬ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಒಂದು ಪೋಸ್ಟರ್​ನ ಮೂರು ಖಾತೆಗಳ ಮೂಲಕ ಒಂದಕ್ಷರವೂ ಬದಲಾಗದಂತೆ ಹಂಚಿಕೊಳ್ಳಲಾಗಿದೆ. ಇದು ಯಾರೋ ಉದ್​ದೇಶಪೂರ್ವಕವಾಗಿ ಮಾಡುತ್ತಿರುವ ಕಿತಾಪತಿ ಎಂದು ಫ್ಯಾನ್ಸ್ ಕಂಡು ಹಿಡಿದಿದ್ದಾರೆ. ಈ ಕೆಲಸ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅದು ಕಸದ ತೊಟ್ಟಿಯಾಗಿತ್ತು; ಬೆಂಗಳೂರಿನ ಕೋಗಿಲು ಲೇಔಟ್ ನೆಲಸಮಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಸಮರ್ಥನೆ – Kannada News | Shashi Tharoor defends Bengalurus Kogilu Layout demolition drive says It was a garbage dump

ಬೆಂಗಳೂರು, ಜನವರಿ 3: ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ ನಡೆಸುತ್ತಿರುವ ಕೋಗಿಲು ಲೇಔಟ್​​ನ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಮೊದಲು ಅವರ ನಿವಾಸಕ್ಕೆ ನೋಟಿಸ್ ನೀಡಲಾಗಿದೆ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಕರ್ನಾಟಕ ಸರ್ಕಾರ ಕೋಗಿಲು ಲೇಔಟ್​​ನಲ್ಲಿ ಧ್ವಂಸ ಕಾರ್ಯಾಚರಣೆಯನ್ನು ಮುಂದುವರಿಸಲು ಎರಡು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. “ಮೊದಲನೆಯದಾಗಿ, ಆ ಭೂಮಿ ಸರ್ಕಾರಕ್ಕೆ ಸೇರಿದ್ದು, ಜನರು ಅಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಎರಡನೆಯದಾಗಿ, ಅದು ಕಸದ ತೊಟ್ಟಿಯಾಗಿತ್ತು ಮತ್ತು ವಿಷಕಾರಿ ತ್ಯಾಜ್ಯವು ನೀರನ್ನು ಕಲುಷಿತಗೊಳಿಸಿತ್ತು. ಆದ್ದರಿಂದ ಅದು ಜನರು ವಾಸಿಸಲು ಯೋಗ್ಯವಾದ ಸ್ಥಳವಾಗಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಕೋಗಿಲು ಬಡಾವಣೆಯ ನಿವಾಸಿಗಳಿಗೆ ಸರಿಯಾದ ಸಮಯಕ್ಕೆ ನೋಟಿಸ್‌ಗಳನ್ನು ನೀಡಲಾಗಿದೆ. ಅಲ್ಲಿನ ಜನರು ಬಡವರು ಎಂಬ ಒಂದೇ ಕಾರಣಕ್ಕೆ ಈ ಸಮಸ್ಯೆಯನ್ನು ರಾಜಕೀಯವಾಗಿ ಬಿಂಬಿಸುವುದರಲ್ಲಿ ಅರ್ಥವಿಲ್ಲ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಕೋಗಿಲು ಲೇಔಟ್ ನಿವಾಸಿಗಳಿಗೆ ಸರ್ಕಾರ ತಾತ್ಕಾಲಿಕ ವಸತಿ ಒದಗಿಸುವ ನಿರ್ಧಾರ ತೆಗೆದುಕೊಂಡಿದೆ. 5ರಿಂದ 6 ತಿಂಗಳೊಳಗೆ ಶಾಶ್ವತ ವಸತಿ ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:57 pm, Sat, 3 January 26

Source link

‘ಟಾಕ್ಸಿಕ್’ನಲ್ಲಿ ರೆಬೆಲ್ ‘ರೆಬೆಕಾ’: ಯಾರು ಈ ಸುಂದರಿ? – Kannada News | Tara Sutaria poster from Yash starrer Toxic movie released

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಯಶ್ ನಟಿಸಿ, ಕತೆ ರಚಿಸಿ, ಸಹ ನಿರ್ಮಾಣವೂ ಮಾಡಿರುವ ‘ಟಾಕ್ಸಿಕ್’ ಸಿನಿಮಾ ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ನೀಡುವ ಗುಣಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ದೊಡ್ಡ ಕಲಾವಿದರ ದಂಡನ್ನೇ ಯಶ್ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಒಟ್ಟು ಮಾಡಿದ್ದಾರೆ. ಅದರಲ್ಲೂ ‘ಟಾಕ್ಸಿಕ್’ನಲ್ಲಿ ಸುಂದರಿಯರ ದಂಡೇ ಇದೆ. ಈಗಾಗಲೇ ನಯನತಾರಾ, ಹುಮಾ ಖುರೇಷಿ ಮತ್ತು ಕಿಯಾರಾ ಅಡ್ವಾಣಿ ಅವರುಗಳ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದೀಗ ಮತ್ತೊಬ್ಬ ಸುಂದರಿಯ ಪೋಸ್ಟರ್ ಹಂಚಿಕೊಂಡಿದೆ.

ಯಶ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ, ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಪ್ರಮುಖ ಲೇಡಿ ಪಾತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ಸಖತ್ ರೆಬೆಲ್ ಆಗಿ ಕಾಣುತ್ತಿದೆ ಈ ಪಾತ್ರ. ಪಾತ್ರದ ಹೆಸರು ರೆಬೆಕಾ. ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿ ತಾರಾ ಸುತಾರಿಯಾ ರೆಬೆಕಾ ಪಾತ್ರದಲ್ಲಿ ಮಿಂಚಿದ್ದಾರೆ. ಈಗ ಅವರ ಪೋಸ್ಟರ್​​ನಲ್ಲಿ ಅವರ ಹೇರ್​ ಸ್ಟೈಲ್ ಸಖತ್ ಗಮನ ಸೆಳೆಯುತ್ತಿದೆ. ಹಾಲಿವುಡ್ ನಟಿಯ ರೀತಿ ತಾರಾ ಸುತಾರಿಯಾ ಕಾಣುತ್ತಿದ್ದಾರೆ.

ಅಂದಹಾಗೆ ತಾರಾ ಸುತಾರಿಯಾ ಬಾಲಿವುಡ್ ನಟಿ. ಹಿಂದಿ ಸಿನಿಮಾಗಳನ್ನು ಬಿಟ್ಟರೆ ಪರ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಿಲ್ಲ. ‘ಟಾಕ್ಸಿಕ್’ ಅವರ ಮೊಟ್ಟ ಮೊದಲ ಪರಭಾಷೆ ಸಿನಿಮಾ. ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತಾರಾ ಸುತಾರಿಯಾ ‘ತಡಪ್’, ಟೈಗರ್​ ಶ್ರಾಫ್ ಜೊತೆಗೆ ‘ಹೀರೊಪಂತಿ 2’, ಅರ್ಜುನ್ ಕಪೂರ್ ಜೊತೆಗೆ ‘ಏಕ್ ವಿಲನ್ ರಿಟರ್ನ್ಸ್’ ಹಾಗೂ ‘ಅಪೂರ್ವ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ತಾರಾ ಸುತಾರಿಯಾ ಅವರ ಏಳನೇ ಸಿನಿಮಾ.

ಇದನ್ನೂ ಓದಿ:ನನ್ನ ಬರವಣಿಗೆಯನ್ನೂ ಮೆಚ್ಚಬೇಕು; ಸಿಲ್ಲಿ ಲಲ್ಲಿಯಲ್ಲಿ ಹೇಳಿದ್ದ ಯಶ್

‘ಟಾಕ್ಸಿಕ್’ ಸಿನಿಮಾನಲ್ಲಿ ಒಟ್ಟು ಐದು ಮಂದಿ ನಾಯಕಿಯರಿದ್ದಾರೆ. ಲೇಡಿ ಸೂಪರ್​​ಸ್ಟಾರ್ ನಯನತಾರಾ ಅವರು ‘ಗಂಗ’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಹುಮಾ ಖುರೇಷಿ ಎಲಿಜೆಬೆತ್ ಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ನಾದಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಬ್ಬ ನಾಯಕಿ ರುಕ್ಮಿಣಿ ವಸಂತ್. ಆದರೆ ಅವರ ಪಾತ್ರದ ಪರಿಚಯವನ್ನು ಚಿತ್ರತಂಡ ಇನ್ನಷ್ಟೆ ಮಾಡಿಕೊಡಬೇಕಿದೆ.

‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕನಾಗಿ ಯಶ್ ನಟಿಸಿರುವುದು ಮಾತ್ರವಲ್ಲದೆ ಸಿನಿಮಾದ ಕತೆ ಸಹ ರಚಿಸಿದ್ದಾರೆ. ಕೆವಿಎನ್ ಮತ್ತು ಯಶ್ ಅವರ ಮಾನ್ಸ್​ಸ್ಟರ್ ಮೈಂಡ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಕನ್ನಡ ಮಾತ್ರವಲ್ಲದೆ ಭಾರತದ ಇತರೆ ಭಾಷೆಗಳ ಜೊತೆಗೆ ಇಂಗ್ಲೀಷ್​​ನಲ್ಲಿಯೂ ಏಕಕಾಲಕ್ಕೆ ನಿರ್ಮಾಣ ಆಗುತ್ತಿದೆ. ಕೆಲವು ಹಾಲಿವುಡ್ ತಂತ್ರಜ್ಞರು ಸಹ ಈ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಓವರ್​ನಲ್ಲಿ 34 ರನ್… ಸ್ಫೋಟಕ ಸೆಂಚುರಿ ಸಿಡಿಸಿದ ಹಾರ್ದಿಕ್ ಪಾಂಡ್ಯ – Kannada News | Hardik Pandya score hundred in 68 balls

ವಿಜಯ ಹಝಾರೆ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ. ಅದು ಕೂಡ ಕೇವಲ 68 ಎಸೆತಗಳಲ್ಲಿ ಎಂಬುದು ವಿಶೇಷ. ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿದರ್ಭ ಹಾಗೂ ಬರೋಡಾ ತಂಡಗಳು ಮುಖಾಮುಖಿಯಾಗಿದ್ದವು.

ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡಿದ್ದ ನಾಯಕ ಹರ್ಷ್ ದುಬೆ ನಿರ್ಧಾರವನ್ನು ಸಮರ್ಥಿಸುವಂತೆ ವಿದರ್ಭ ತಂಡದ ಬೌಲರ್​ಗಳು ದಾಳಿ ಸಂಘಟಿಸಿದ್ದರು. ಪರಿಣಾಮ ಬರೋಡಾ ತಂಡವು 71 ರನ್​ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲಿಗೆ 62 ಎಸೆತಗಳಲ್ಲಿ 66 ರನ್ ಬಾರಿಸಿದ್ದ ಪಾಂಡ್ಯ ಒಂದೇ ಓವರ್​ನಲ್ಲಿ 34 ರನ್​ ಚಚ್ಚಿದರು.

ಪಾರ್ಥ್ ರೇಖಾಡೆ ಎಸೆತದ ಈ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು. ಈ ಮೂಲಕ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿದರು.

ಶತಕದ ಬಳಿಕ ಕೂಡ ಸ್ಫೋಟಕ ಇನಿಂಗ್ಸ್ ಮುಂದುವರೆಸಿದ ಪಾಂಡ್ಯ 92 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ 8 ಫೋರ್​ಗಳೊಂದಿಗೆ 133 ರನ್ ಬಾರಿಸಿದರು.

ಹಾರ್ದಿಕ್ ಪಾಂಡ್ಯ ಅವರ ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಬರೋಡಾ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 293 ರನ್ ಕಲೆಹಾಕಿದೆ. ಈ ಮೂಲಕ ವಿದರ್ಭ ತಂಡಕ್ಕೆ 294 ರನ್​ಗಳ ಗುರಿ ನೀಡಿದೆ.

ವಿಶೇಷ ಎಂದರೆ ಇದು ಹಾರ್ದಿಕ್ ಪಾಂಡ್ಯ ಅವರ ಚೊಚ್ಚಲ ಲಿಸ್ಟ್​ ಎ ಶತಕವಾಗಿದೆ. ಇದಕ್ಕೂ ಮುನ್ನ ಅವರು 92 ರನ್​ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಪಾಂಡ್ಯ ಏಕದಿನ ಕ್ರಿಕೆಟ್​ನಲ್ಲಿ ಶತಕದ ಖಾತೆ ತೆರೆದಿದ್ದಾರೆ.

ಬರೋಡಾ ಪ್ಲೇಯಿಂಗ್ 11: ನಿತ್ಯ ಪಾಂಡ್ಯ , ಅಮಿತ್ ಪಾಸಿ , ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಹಾರ್ದಿಕ್ ಪಾಂಡ್ಯ , ಕೃನಾಲ್ ಪಾಂಡ್ಯ (ನಾಯಕ) , ವಿಷ್ಣು ಸೋಲಂಕಿ , ಪ್ರಿಯಾಂಶು ಮೋಲಿಯಾ , ಅತಿತ್ ಶೇಠ್ , ರಾಜ್ ಲಿಂಬಾನಿ , ಕರಣ್ ಉಮಟ್ , ಮಹೇಶ್ ಪಿಥಿಯಾ.

ಇದನ್ನೂ ಓದಿ: IPL 2026: ಐಪಿಎಲ್​ನಿಂದ ಬಾಂಗ್ಲಾದೇಶ್ ಆಟಗಾರನಿಗೆ ಗೇಟ್ ಪಾಸ್..!

ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಅಮನ್ ಮೊಖಡೆ , ಧ್ರುವ್ ಶೋರೆ , ನಚಿಕೇತ್ ಭೂತೆ , ಯಶ್ ರಾಥೋಡ್ , ರವಿಕುಮಾರ್ ಸಮರ್ಥ್ , ಅಕ್ಷಯ್ ವಾಡ್ಕರ್ (ವಿಕೆಟ್ ಕೀಪರ್ ), ಹರ್ಷ್ ದುಬೆ (ನಾಯಕ) , ಪಾರ್ಥ್ ರೇಖಾಡೆ , ಯಶ್ ಠಾಕೂರ್ , ಪ್ರಫುಲ್ ಹಿಂಜ್.

Source link

ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ – Kannada News | Raichur Homemaker Buys Refrigerator Using Gruha Lakshmi Scheme Savings, Thanks Karnataka Government

ರಾಯಚೂರು, ಜನವರಿ 3: ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ರಾಯಚೂರಿನಲ್ಲಿ ಗೃಹಿಣಿಯೊಬ್ಬರು ಫ್ರಿಡ್ಜ್ ಖರೀದಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ನಡುಲಮನಿ ಅವರು, ಸರ್ಕಾರದಿಂದ ಪ್ರತಿ ತಿಂಗಳು ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣವನ್ನು ಸಂಗ್ರಹಿಸಿ ಫ್ರಿಡ್ಜ್ ಖರೀದಿಸಿದ್ದಾರೆ. ಹನುಮಮ್ಮ ಅವರು ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಒಟ್ಟು 23 ಕಂತುಗಳ ಹಣವನ್ನು ಪಡೆದಿದ್ದು, ಆ ಹಣವನ್ನು ಖರ್ಚು ಮಾಡದೇ ಕೂಡಿಟ್ಟಿದ್ದರು. ಈ ಮೂಲಕ ಒಟ್ಟು 17 ಸಾವಿರ ರೂಪಾಯಿ ವೆಚ್ಚದಲ್ಲಿ ಫ್ರಿಡ್ಜ್ ಖರೀದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದರಿಂದ ತಮ್ಮ ಕುಟುಂಬದ ದಿನನಿತ್ಯದ ಜೀವನ ಸುಲಭವಾಗಿದ್ದು, ಆಹಾರ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅನುಕೂಲವಾಗಿದೆ ಎಂದು ಹನುಮಮ್ಮ ತಿಳಿಸಿದ್ದಾರೆ.

ಫ್ರಿಡ್ಜ್ ಖರೀದಿಸಿದ ನಂತರ ಮಾತನಾಡಿದ ಹನುಮಮ್ಮ ನಡುಲಮನಿ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RRB Recruitment 2025: ರೈಲ್ವೆಯಲ್ಲಿ 22 ಸಾವಿರ ಲೆವೆಲ್-1 ಹುದ್ದೆಗಳಿಗೆ ನೇಮಕಾತಿ; ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ – Kannada News | RRB Level 1 Recruitment 2025: 22,000 Railway Posts Coming Soon!

ಹೊಸ ವರ್ಷದ ಆರಂಭದಲ್ಲಿ, ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಜನರಿಗೆ ಗುಡ್​ ನ್ಯೂಸ್​ ಒಂದು ಇಲ್ಲಿದೆ . ರೈಲ್ವೆ ನೇಮಕಾತಿ ಮಂಡಳಿ (RRB) ಲೆವೆಲ್ -1 ಹುದ್ದೆಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ವರದಿಗಳ ಪ್ರಕಾರ, ಜನವರಿ ಮೂರನೇ ವಾರದಲ್ಲಿ ಅಧಿಕೃತ ಜಾಹೀರಾತು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ನೇಮಕಾತಿ ಪ್ರಕ್ರಿಯೆಗೆ ಸುಮಾರು 22,000 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿಗಳು ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ನಡೆಯಲಿವೆ. ಈ ಹಿಂದೆ, ರೈಲ್ವೆ ದೊಡ್ಡ ಪ್ರಮಾಣದ ನೇಮಕಾತಿಯನ್ನು ಘೋಷಿಸಿತ್ತು, ಮತ್ತು ಈಗ ಮತ್ತೊಮ್ಮೆ, ನಿರುದ್ಯೋಗಿ ಯುವಕರಿಗೆ ಮಹತ್ವದ ಅವಕಾಶ ಹೊರಹೊಮ್ಮುತ್ತಿದೆ.

22,000 ಲೆವೆಲ್-1 ಹುದ್ದೆಗಳ ನೇಮಕಾತಿಗೆ ಸಿದ್ಧತೆ:

ರೈಲ್ವೆ ನೇಮಕಾತಿ ಮಂಡಳಿಯು ಶೀಘ್ರದಲ್ಲೇ ಲೆವೆಲ್-1 ಹುದ್ದೆಗಳಿಗೆ ಹೊಸ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ಈ ನೇಮಕಾತಿಯಲ್ಲಿ ಟ್ರ್ಯಾಕ್ ನಿರ್ವಹಣೆದಾರರು, ಸಹಾಯಕರು ಮತ್ತು ಇತರ ಗ್ರೂಪ್ ಡಿ ಹುದ್ದೆಗಳು ಸೇರಿರಬಹುದು. ಒಟ್ಟು ಸುಮಾರು 22,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಂದಾಜಿಸಲಾಗಿದೆ. ರೈಲ್ವೆ ಮಂಡಳಿಯು ಸಿದ್ಧತೆಗಳನ್ನು ಪ್ರಾರಂಭಿಸಿದೆ ಮತ್ತು ಎಲ್ಲಾ ವಲಯಗಳಿಂದ ಹುದ್ದೆಯ ವಿವರಗಳನ್ನು ಕೋರಿದೆ. ಅಜ್ಮೀರ್ ಸೇರಿದಂತೆ ಎಲ್ಲಾ ರೈಲ್ವೆ ನೇಮಕಾತಿ ಮಂಡಳಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ.

ಭೋಪಾಲ್ ಆರ್‌ಆರ್‌ಬಿ ನೋಡಲ್ ಏಜೆನ್ಸಿ:

ಈ ಬಾರಿ, ರೈಲ್ವೆ ನೇಮಕಾತಿ ಮಂಡಳಿ, ಭೋಪಾಲ್ ಅನ್ನು ಲೆವೆಲ್-1 ನೇಮಕಾತಿಗಾಗಿ ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಇದರರ್ಥ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಭೋಪಾಲ್ ಮಂಡಳಿಯು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಂಯೋಜಿಸುತ್ತದೆ. ಈ ಹಿಂದೆ, 2025 ರಲ್ಲಿ, NTPC ಸೇರಿದಂತೆ ಹಲವಾರು ಕೇಡರ್‌ಗಳಿಗೆ ನೇಮಕಾತಿ ಜಾಹೀರಾತುಗಳನ್ನು ನೀಡಲಾಗುತ್ತಿತ್ತು. ಇದೇ ಅವಧಿಯಲ್ಲಿ 32,438 ಲೆವೆಲ್-1 ಹುದ್ದೆಗಳಿಗೆ ಜಾಹೀರಾತುಗಳನ್ನು ನೀಡಲಾಗಿತ್ತು, ಇದಕ್ಕಾಗಿ ಪ್ರಸ್ತುತ ಪರೀಕ್ಷಾ ಪ್ರಕ್ರಿಯೆ ನಡೆಯುತ್ತಿದೆ. ಈಗ, ರೈಲ್ವೆ ಮತ್ತೊಂದು ಹೊಸ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪೈಲಟ್‌ ಸಂಬಳ ಎಷ್ಟು? ಆಯ್ಕೆ ಪ್ರಕ್ರಿಯೆ ಮತ್ತು ಜವಾಬ್ದಾರಿ ತಿಳಿಯಿರಿ

ಹಿಂದಿನ ನೇಮಕಾತಿ ಮತ್ತು ವಯಸ್ಸಿನ ಮಿತಿಯ ಬಗ್ಗೆ ಮಾಹಿತಿ:

ಲೆವೆಲ್-1 ಹುದ್ದೆಗಳಿಗೆ ಕೊನೆಯ ನೇಮಕಾತಿ 2024 ರಲ್ಲಿ ಆಗಿದ್ದು, ಜನವರಿ 2025 ರಲ್ಲಿ ಜಾಹೀರಾತು ಬಿಡುಗಡೆಯಾಯಿತು. ಆ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಜನವರಿ 23 ರಿಂದ ಫೆಬ್ರವರಿ 22, 2025 ರವರೆಗೆ ಸ್ವೀಕರಿಸಲಾಯಿತು. ಆ ಸಮಯದಲ್ಲಿ, ವಯಸ್ಸಿನ ಮಿತಿಯನ್ನು 18 ರಿಂದ 36 ವರ್ಷಗಳಿಗೆ ನಿಗದಿಪಡಿಸಲಾಗಿತ್ತು. ಈ ಬಾರಿ ವಯಸ್ಸಿನ ಮಿತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ ಎಂದು ನಂಬಲಾಗಿದೆ. ಆದಾಗ್ಯೂ, ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರವೇ ಇದರ ಅಂತಿಮ ದೃಢೀಕರಣವನ್ನು ಮಾಡಲಾಗುತ್ತದೆ.

ಯುವಕರಿಗೆ ಸುವರ್ಣ ಅವಕಾಶ:

ಈ ಪ್ರಸ್ತಾವಿತ ರೈಲ್ವೆ ನೇಮಕಾತಿಯು ಲಕ್ಷಾಂತರ ಯುವಕರಿಗೆ ಉತ್ತಮ ಉದ್ಯೋಗಾವಕಾಶವಾಗಬಹುದು. ರೈಲ್ವೆಗೆ ಈಗಾಗಲೇ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿಯನ್ನು ಈಗಲೇ ಪರಿಶೀಲಿಸಲು ಪ್ರಾರಂಭಿಸಬೇಕು. ಜನವರಿ ಮೂರನೇ ವಾರದಲ್ಲಿ ಜಾಹೀರಾತು ಬಿಡುಗಡೆಯಾದ ತಕ್ಷಣ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗುವ ನಿರೀಕ್ಷೆಯಿದೆ, ಆದ್ದರಿಂದ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗಮನವಿರಲಿ ಎಂದು ಸೂಚಿಸಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಹಾನ್ಸ್–ಕಿದ್ವಾಯಿ ಆಸ್ಪತ್ರೆಗಳಲ್ಲಿ 55 ರೋಗಿಗಳು ನಾಪತ್ತೆ; ಮೂವರ ಸುಳಿವೇ ಇಲ್ಲ! – Kannada News | Bengaluru: 55 Patients Vanish from NIMHANS and Kidwai, 3 Untraced

ನಿಮ್ಹಾನ್ಸ್–ಕಿದ್ವಾಯಿ ಆಸ್ಪತ್ರೆಗಳಲ್ಲಿ 55 ರೋಗಿಗಳು ನಾಪತ್ತೆ

ಬೆಂಗಳೂರು, ಜನವರಿ 03: ಬೆಂಗಳೂರಿನ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಾದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS ) ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಗಳಿಂದ ಸಮಾಲೋಚನೆ ಮತ್ತು ಚಿಕಿತ್ಸೆಗೆ ಬಂದಿದ್ದ ಒಟ್ಟು 55 ರೋಗಿಗಳು ನಾಪತ್ತೆಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಸುಮಾರು 20 ತಿಂಗಳ ಅವಧಿಯಲ್ಲಿ ಈ ಎಲ್ಲಾ ರೋಗಿಗಳು ನಾಪತ್ತೆಯಾಗಿದ್ದು, ಈ ಪೈಕಿ ಇದುವರೆಗೂ ಮೂವರು ರೋಗಿಗಳ ಸುಳಿವೇ ಸಿಕ್ಕಿಲ್ಲವೆಂಬ ಮಾಹಿತಿ ಬಹಿರಂಗವಾಗಿದೆ.

ಅನಿರೀಕ್ಷಿತ ಸಂದರ್ಭಗಳಲ್ಲಿ ನಾಪತ್ತೆ

2024ರ ಜನವರಿ 1ರಿಂದ 2025ರ ಆಗಸ್ಟ್ 14ರವರೆಗೆ ನಾಪತ್ತೆಯಾದ ಹೆಚ್ಚಿನ ರೋಗಿಗಳು ಅತ್ಯಂತ ಅನಿರೀಕ್ಷಿತ ಸಂದರ್ಭಗಳಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ರೋಗಿಗಳ ಪೋಷಕರು ಬಿಲ್‌ಗಳನ್ನು ಪಾವತಿಸಲು, ಔಷಧಿ ಖರೀದಿಸಲು, ಫೋನ್ ಕರೆಗಳಲ್ಲಿ ನಿರತರಾಗಿದ್ದಾಗ ಅಥವಾ ಹೊರರೋಗಿ ವಿಭಾಗದಲ್ಲಿ (OPD) ಇತರರೊಂದಿಗೆ ಅನುಭವ ಹಂಚಿಕೊಳ್ಳುವ ವೇಳೆ ಈ ಘಟನೆಗಳು ನಡೆದಿವೆ ಎಂದು ದಾಖಲೆಗಳು ತಿಳಿಸುತ್ತವೆ.

ಪತ್ತೆಯಾಗದ ಮೂವರು

ಜಯನಗರದ ಸಿದ್ದಾಪುರ ಪೊಲೀಸ್ ಠಾಣೆಯ ನಾಪತ್ತೆ ಪ್ರಕರಣಗಳ ದಾಖಲೆ ಪ್ರಕಾರ,

  • ಕಾಡಪ್ಪ ರೋಡನ್ನವರ್ (81) – 23 ಮೇ 2024ರಂದು ನಿಮ್ಹಾನ್ಸ್‌ನಿಂದ ನಾಪತ್ತೆ
  • ಮುನಿಕೃಷ್ಣಪ್ಪ (70) – 6 ನವೆಂಬರ್ 2025ರಂದು ನಾಪತ್ತೆ
  • ಶಾಂತಸ್ವಾಮಿ (52) – 30 ಏಪ್ರಿಲ್ 2025ರಂದು ಕಿದ್ವಾಯಿ ಆಸ್ಪತ್ರೆ ಆವರಣದಿಂದ ನಾಪತ್ತೆ

ಈ ಮೂವರ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಮಾನಸಿಕ ಅಸ್ವಸ್ಥರಿಗೆ ಓಡಿಹೋಗುವ ಪ್ರವೃತ್ತಿ

ನಿಮ್ಹಾನ್ಸ್‌ನ ಉಪ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಚ್.ಆರ್ ಮಾತನಾಡಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೆಲವರಿಗೆ ಓಡಿಹೋಗುವ ಪ್ರವೃತ್ತಿ ಇರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ನಾವು ಅವರನ್ನು ಪತ್ತೆಹಚ್ಚಿ ಕುಟುಂಬಗಳಿಗೆ ಹಿಂತಿರುಗಿಸುತ್ತೇವೆ. ಆಸ್ಪತ್ರೆಯಲ್ಲಿ ನಾಪತ್ತೆಯಾದವರ ಪ್ರಕರಣಗಳನ್ನು ಪರಿಶೀಲಿಸಲು ವಿಶೇಷ ಘಟನೆ ವರದಿ ಸಮಿತಿಯಿದೆ ಎಂದರು. ನಾಪತ್ತೆಯಾಗುವವರಲ್ಲಿ ಹೆಚ್ಚಿನವರು ಸ್ಕಿಜೋಫ್ರೇನಿಯಾ, ಬೈಪೋಲಾರ್ ಅಸ್ವಸ್ಥತೆಗಳಿಂದ ಬಳಲುತ್ತಿದ್ದು, ಕೆಲವರಿಗೆ ಬುದ್ಧಿಮಾಂದ್ಯತೆ ಇರುವುದೂ ಕಂಡುಬಂದಿದೆ ಎಂದು ತಿಳಿಸಿದರು.

ಸಮವಸ್ತ್ರ ನೀಡಲು ಅವಕಾಶವಿಲ್ಲ

ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ–2017ರ ಪ್ರಕಾರ, ಮಾನಸಿಕ ಅಸ್ವಸ್ಥ ರೋಗಿಗಳನ್ನು ಗುರುತಿಸಲು ಯಾವುದೇ ಸಮವಸ್ತ್ರ ನೀಡುವಂತಿಲ್ಲ ಎಂದು ಡಾ. ಅರವಿಂದ್ ಸ್ಪಷ್ಟಪಡಿಸಿದ್ದಾರೆ. ಈ ಕಾಯ್ದೆಯಂತೆ ಆಸ್ಪತ್ರೆಗಳು ಇನ್ನು ಅಸೈಲಮ್​ಗಳಲ್ಲ. ರೋಗಿಗಳ ಗೌರವ ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು. ರೋಗಿಗಳನ್ನು OPDಗೆ ಕರೆತರುವಾಗ ಆರೈಕೆದಾರರು ಹೆಚ್ಚು ಜಾಗರೂಕರಾಗಿರಬೇಕು. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆವರಣದೊಳಗಿನ ಚಲನವಲನಗಳ ಮೇಲೂ ನಿಗಾ ಇಡುತ್ತಾರೆ ಎಂದರು.

ಕಿದ್ವಾಯಿ ನಿರ್ದೇಶಕರ ಪ್ರತಿಕ್ರಿಯೆ

ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ನವೀನ್ ಟಿ ಮಾತನಾಡಿ, ನಮ್ಮ ಬಳಿ ಬರುವ ಹೆಚ್ಚಿನ ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಭರವಸೆ ಕಳೆದುಕೊಳ್ಳದಂತೆ ಚಿಕಿತ್ಸೆ ಜೊತೆಗೆ ಮಾನಸಿಕ ಬೆಂಬಲ ನೀಡಲಾಗುತ್ತದೆ. ರೋಗಿಗಳು ಕಾಣೆಯಾಗದಂತೆ ಮತ್ತು ಚಿಕಿತ್ಸೆ ತಪ್ಪಿಸಿಕೊಳ್ಳದಂತೆ ರಾಜ್ಯ ಸರ್ಕಾರ 16 ಜಿಲ್ಲೆಗಳಲ್ಲಿ ಜಿಲ್ಲಾ ಡೇಕೇರ್ ಕಿಮೊಥೆರಪಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು.

ಅಪಾಯದಲ್ಲಿರುವ ರೋಗಿಗಳು

ಬೆಂಗಳೂರಿನ ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಸೈಕಿಯಾಟ್ರಿಸ್ಟ್ ಡಾ. ಎಚ್. ಚಂದ್ರಶೇಖರ್ ಮಾತನಾಡಿ, ಒಮ್ಮೆ ರೋಗಿಗಳು ಮನೆ ಅಥವಾ ಆಸ್ಪತ್ರೆಯಿಂದ ಕಾಣೆಯಾದರೆ, ಅವರು ದೈಹಿಕ ಮತ್ತು ಮಾನಸಿಕ ಅಪಾಯಕ್ಕೆ ಒಳಗಾಗುತ್ತಾರೆ. ಪುರುಷರು ಹಲ್ಲೆಗೆ ಒಳಗಾಗುವ ಸಾಧ್ಯತೆ ಇದ್ದರೆ, ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯವೂ ಇದೆ. ಅಪರೂಪದ ಸಂದರ್ಭಗಳಲ್ಲಿ ಆರೈಕೆದಾರರೇ ಅವರನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವ ಘಟನೆಗಳೂ ಕಂಡುಬಂದಿವೆ ಎಂದು ಎಚ್ಚರಿಸಿದರು. ಮಾನಸಿಕ ಅಸ್ವಸ್ಥತೆಯ ರೋಗಿಗಳು ಕಾಣೆಯಾಗಲು ಅರಿವಿನ ಕೊರತೆ, ಚಿಕಿತ್ಸೆ ಸೌಲಭ್ಯಗಳ ಅಭಾವ, ಸಾಮಾಜಿಕ ಕಳಂಕ, ಕುಟುಂಬ ಸಮಸ್ಯೆಗಳು ಮತ್ತು ಬಡತನ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದರು.

ನಾಪತ್ತೆಯಾದವರ ಸಂಖ್ಯೆ (ಡೇಟಾ)

2024

  • ನಿಮ್ಹಾನ್ಸ್: 27 ರೋಗಿಗಳು
  • ಕಿದ್ವಾಯಿ: 3 ರೋಗಿಗಳು

2025

  • ನಿಮ್ಹಾನ್ಸ್: 22 ರೋಗಿಗಳು
  • ಕಿದ್ವಾಯಿ: 3 ರೋಗಿಗಳು

ಪ್ರತಿಷ್ಠಿತ ಆಸ್ಪತ್ರೆಗಳಿಂದಲೇ ರೋಗಿಗಳು ನಾಪತ್ತೆಯಾಗುತ್ತಿರುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಮುಜುಗರ ತಂದಿದೆ. ರೋಗಿಗಳ ಸುರಕ್ಷತೆ, ಆರೈಕೆದಾರರ ಜವಾಬ್ದಾರಿ ಮತ್ತು ಸಂಸ್ಥಾತ್ಮಕ ಮೇಲ್ವಿಚಾರಣೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..! – Kannada News | BBL 2026: Brisbane Heat have won another thriller at The Gabba

ದಿ ಗಬ್ಬಾ ಮೈದಾನದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ 20ನೇ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿತು.

196 ರನ್​ಗಳ ಗುರಿ ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್ ಬ್ರ್ಯಾಂಟ್ ಪಂದ್ಯದ ಗತಿಯನ್ನೇ ಬದಲಿಸಿದರು. 

ಕೊನೆಯ 3 ಓವರ್​ಗಳಲ್ಲಿ 44 ರನ್​ಗಳ ಗುರಿ ಪಡೆದಿದ್ದ ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟರ್​ಗಳು ಪೀಟರ್ ಸಿಡ್ಲ್ ಎಸೆದ 18ನೇ ಓವರ್​ನಲ್ಲಿ ಕಲೆಹಾಕಿದ್ದು ಬರೋಬ್ಬರಿ 17 ರನ್​ಗಳು. ಇನ್ನು ಟಾಮ್ ಕರನ್ ಎಸೆದ 19ನೇ ಓವರ್​ನಲ್ಲೂ 17 ರನ್​ಗಳಿಸಿದರು.

ಅದರಂತೆ ಕೊನೆಯ ಓವರ್​ನಲ್ಲಿ 10 ರನ್​ಗಳ ಗುರಿ ಪಡೆದ ಬ್ರಿಸ್ಬೇನ್ ಹೀಟ್ ತಂಡಕ್ಕೆ ಮ್ಯಾಕ್ಸ್ ಬ್ರ್ಯಾಂಟ್ ಆಸರೆಯಾಗಿ ನಿಂತರು. ಅಲ್ಲದೆ ಹಾರಿಸ್ ರೌಫ್ ಎಸೆದ ಕೊನೆಯ ಓವರ್​ನ 4 ಎಸೆತಗಳಲ್ಲೇ 10 ರನ್​ಗಳಿಸುವ ಮೂಲಕ ಬ್ರ್ಯಾಂಟ್ ಬ್ರಿಸ್ಬೇನ್ ಹೀಟ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಅಂತಿಮ ಹಂತದಲ್ಲಿ ಕೇವಲ 26 ಎಸೆತಗಳನ್ನು ಎದುರಿಸಿದ್ದ ಮ್ಯಾಕ್ಸ್ ಬ್ರ್ಯಾಂಟ್ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 48 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

 

Source link

ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ – Kannada News | Kogilu Layout Encroachment Report Submitted: Final Findings Handed Over to GBA, Triggers Political Debate

ಬೆಂಗಳೂರು, ಜನವರಿ 3: ಕೋಗಿಲು ಲೇಔಟ್​​ನಲ್ಲಿ (Kogilu Layout) ಒತ್ತುವರಿ ತೆರವು ಸಂಬಂಧ ಮನೆ ಕಳೆದುಕೊಂಡವರಿಗೆ ಸರ್ಕಾರ ಫ್ಲಾಟ್ ನೀಡಲು ಮುಂದಾಗಿದೆ. ಈಗಾಗಲೇ ಲೇಔಟ್​​ಗೆ ತೆರಳಿ ಮನೆ ಕಳೆದುಕೊಂಡವರ ಮಾಹಿತಿ ಸಂಗ್ರಹಿಸಲಾಗಿದ್ದು, ಕಂದಾಯ ಇಲಾಖೆ ಮತ್ತು ಉತ್ತರ ಪಾಲಿಕೆ ಇಲಾಖೆ ಅಧಿಕಾರಿಗಳೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಅಂತಿಮ ವರದಿ ಸಲ್ಲಿಸಿದ್ದಾರೆ. ಕೋಗಿಲು ಲೇಔಟ್​ನ ಒಟ್ಟು ಮೂರು ಕಾಲೋನಿಗಳಲ್ಲಿ ಮನೆ ತೆರವಿಯಿಂದ ಎಷ್ಟು ಜನ ನಿರಾಶ್ರಿತರಾಗಿದ್ದಾರೆ ಅನ್ನೋ ಕುರಿತು ವರದಿ ನೀಡಲಾಗಿದೆ.

ಜಿಬಿಎಗೆ ಸಲ್ಲಿಕೆಯಾಗಿರುವ ವರದಿಯಂತೆ, ಫಕೀರ್ ಕಾಲೋನಿಯ 40 ಮನೆ ತೆರವು ಮಾಡಲಾಗಿದ್ದು, 56 ಮಂದಿ ಮನೆಯ ಮುಖ್ಯಸ್ಥರಿದ್ದು, 96 ವಯಸ್ಕರಿದ್ದಾರೆ. 140 ಮಕ್ಕಳಿದ್ದು, ಒಟ್ಟು 292 ಜನರಿದ್ದಾರೆ. ಇನ್ನು ನ್ಯೂ ಫಕೀರ್ ಲೇಔಟ್​ನಲ್ಲಿ ಒಟ್ಟು 45 ಮನೆ ತೆರವು ಮಾಡಲಾಗಿದ್ದು, 50 ಮಂದಿ ಮನೆಯ ಮುಖ್ಯಸ್ಥರಿದ್ದು, ವಯಸ್ಕರು 128, 116 ಮಕ್ಕಳಿದ್ದು, ಒಟ್ಟು 294 ಮಂದಿ ಇದ್ದಾರೆ. ಇನ್ನು ವಸೀಂ ಲೇಔಟ್​ನಲ್ಲಿ, 82 ಮನೆ ತೆರವು ಮಾಡಲಾಗಿದ್ದು, ಮನೆ ಮುಖ್ಯಸ್ಥರು 82 ಜನರಿದ್ದಾರೆ. 201 ವಯಸ್ಕರು, 394 ಮಕ್ಕಳಿದ್ದು, ಒಟ್ಟು 394 ಜನರಿದ್ದಾರೆ. ಹೀಗೆ ಮೂರು ಕಾಲೋನಿಯ ಒಟ್ಟು ಒಂದು ಸಾವಿರ ಏಳು ಮಂದಿ ನಿರಾಶ್ರಿತರಾಗಿದ್ದಾರೆ. ಈ ಮೂರು ಲೇಔಟ್​ಗಳಲ್ಲಿ 156 ಮುಸ್ಲಿಂ ಸಮುದಾಯದ ಕುಟುಂಬದವರಿದ್ದಾರೆ. 31 ಹಿಂದೂ ಕುಟುಂಬಗಳಿವೆ. ಒಂದು ಕುಟುಂಬ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದೆ.

ಸದ್ಯ ಈ ಕುರಿತು ಮತ್ತೊಂದು ಸುತ್ತಿನ ಪರಿಶೀಲನೆ ನಡೆಯಲಿದ್ದು, ಬಳಿಕ ಜಿಬಿಎ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಈ ಮಧ್ಯೆ ಇಂದು ಕೋಗಿಲು ಲೇಔಟ್​ಗೆ ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ ನೀಡುತ್ತಿದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಅರ್ಜಿ ಸಲ್ಲಿಸಿ, ಮನೆ ಸಿಗದೇ ರೋಸಿ ಹೋಗಿದ್ದವರು ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅವರು ಶನಿವಾರ ಕೂಡಾ ರಾಜೀವ್ ಗಾಂಧಿ ವಸತಿ ಕಚೇರಿಗೆ ಬಂದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಕನ್ನಡ ಸಂಘಟನೆಗಳು ಒತ್ತುವರಿದಾರರಿಗೆ ಮನೆ ಹಂಚಿಕೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿವೆ. ಸರ್ಕಾರ ನಿರ್ಧಾರ ಬದಲಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿವೆ. ಈ ಮಧ್ಯೆ ಶಾಸಕ ಎಸ್​.ಟಿ.ಸೋಮಶೇಖರ್ ಸಹ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದ ನ್ಯಾಯ ಕೊಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್

ಇನ್ನು ಕೋಗಿಲು ಲೇಔಟ್ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಅಕ್ರಮ ಮನೆಗಳ ತೆರವು ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪ ಪಡೆದಿದ್ದರೂ, ಕಂದಾಯ ಸಚಿವರು ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹೀಗೆಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ‘ಸಚಿವ ಕೃಷ್ಣ ಭೈರೇಗೌಡ ಕಾಣೆಯಾಗಿದ್ದಾರೆ’ ಎಂದು ಪೋಸ್ಟರ್ ಅಭಿಯಾನ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link