All posts by nagaraj11081993

Holidays Calendar 2026: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ – Kannada News | Holidays Calendar 2026 : Plan Long Weekends and Vacations Smartly!

ಹೊಸ ವರ್ಷದ ಆಚರಣೆ ಆರಂಭವಾಗಿದೆ. ಹೊಸ ವರ್ಷದ ಆಚರಣೆಗಳು ಮಾತ್ರವಲ್ಲ, ಮುಂಬರುವ ರಜಾದಿನಗಳ ಬಗ್ಗೆಯೂ ಉತ್ಸಾಹ ಹೆಚ್ಚುತ್ತಿದೆ. ಏಕೆಂದರೆ ಜನವರಿ ತಿಂಗಳ ಮೊದಲ ವಾರದಿಂದ ಅನೇಕ ಸರ್ಕಾರಿ ರಜಾದಿನಗಳು, ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳು ಇರುತ್ತವೆ. ಇದು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ. 2026 ಹೊಸ ವರ್ಷದೊಂದಿಗೆ ಸ್ವಾಗತಿಸುವುದರಿಂದ ಹಿಡಿದು ಡಿಸೆಂಬರ್​ ತಿಂಗಳನ್ನು ಕೊನೆಗೊಳಿಸುವವರೆಗೆ.. ಪ್ರತೀ ತಿಂಗಳು ವಿರಾಮ ತೆಗೆದುಕೊಂಡು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಈ ವರ್ಷ ಎಷ್ಟು ರಜೆಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪ್ರತೀ ತಿಂಗಳಲ್ಲಿ ಲಾಂಗ್​​ ವೀಕೆಂಡ್​ ಪಡೆಯಲು ಈ ರೀತಿ ಪ್ಲಾನ್​ ಮಾಡಿ:

ಜನವರಿ 01 ಹೊಸ ವರ್ಷದ ಆಗಿರುವುದರಿಂದ ಕಛೇರಿಯಲ್ಲಿ ರಜೆ ಇದ್ದರೆ ಮರುದಿನ ಶುಕ್ರವಾರ ರಜೆ ತಗೆದುಕೊಳ್ಳಿ. ಜೊತೆಗೆ ಶನಿವಾರ, ಆದಿತ್ಯವಾರ ರಜೆ ಇರುವುದರಿಂದ ನೀವು ಒಟ್ಟಾಗಿ 4 ರಜೆಗಳು ನಿಮ್ಮ ಕೈಯಲ್ಲಿ ಇರುತ್ತದೆ. ಆದ್ದರಿಂದ ಈ 4 ದಿನದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಲಾಂಗ್​​ ವೀಕೆಂಡ್​ ರಜೆ ತೆಗೆದುಕೊಳ್ಳಬಹುದಾಗಿದೆ. ಇದೇ ತಿಂಗಳಲ್ಲಿ ಸಂಕ್ರಾಂತಿ ಹಬ್ಬವು (ಜನವರಿ 14) ಬುಧವಾರ ಬರುವುದರಿಂದ 15 ಮತ್ತು 16ರಂದು ರಜೆ ಪಡೆದು ಐದು ದಿನಗಳ ಲಾಂಗ್ ಬ್ರೇಕ್ ಪಡೆಯಬಹುದು. ಅದೇ ರೀತಿ ಗಣರಾಜ್ಯೋತ್ಸವ (ಜನವರಿ 26) ಇರುವುರಿಂದ ಆವಾಗಲೂ ಕೂಡ ನೀವು ಮೂರು ದಿನಗಳ ರಜೆಯನ್ನು ಪಡೆಯಬಹುದು.

ಮಾರ್ಚ್ ತಿಂಗಳಲ್ಲಿಯೂ ಕೂಡ ನೀವು ದೀರ್ಘ ರಜೆಯೊಂದಿಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯಬಹುದಾಗಿದೆ. ಮಾರ್ಚ್ 4ರಂದು ಹೋಳಿ ಹಬ್ಬ ಅಂದರೆ ಬುಧವಾರ ಬಂದಿರುವುದರಿಂದ ನೀವು 5 ಮತ್ತು 6ರಂದು ರಜೆ ತೆಗೆದುಕೊಂಡರೆ ವಾರಾಂತ್ಯ ಸೇರಿ ಐದು ದಿನಗಳ ರಜೆ ಸಿಗುತ್ತದೆ. ಅದರಂತೆ ಯುಗಾದಿ ಹಬ್ಬವೂ ಮತ್ತೊಂದು ಉತ್ತಮ ಅವಕಾಶವನ್ನು ನೀಡುತ್ತದೆ.

ಏಪ್ರಿಲ್‌ ತಿಂಗಳಲಿನಲ್ಲಿಯೂ ಕೂಡ ನೀವೂ ಕೆಲಸದ ಕಿರಿಕಿರಿ ಮಧ್ಯೆ ಲಾಂಗ್ ಬ್ರೇಕ್ ಪಡೆಯಬಹುದು. ಏಪ್ರಿಲ್‌ ತಿಂಗಳ ಮೂರನೇ ತಾರೀಕಿನಂದು ಅಂದರೆ ಶುಕ್ರವಾರ ಗುಡ್ ಫ್ರೈಡೇ ಬರುವುದರಿಂದ ನೀವು ಶುಕ್ರವಾರ, ಶನಿವಾರ–ಭಾನುವಾರದೊಂದಿಗೆ ಮೂರು ದಿನಗಳ ದೀರ್ಘ ರಜೆಯನ್ನು ಪಡೆಯಬಹುದು. ಈ ಮೂರು ದಿನದಲ್ಲಿ ನೀವು ಸುಂದರ ವೀಕೆಂಡ್ ಟ್ರಿಪ್ ಯೋಜಿಸಬಹುದು.

ಇದನ್ನೂ ಓದಿ: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ

ಮೇ ತಿಂಗಳಲ್ಲಿ ಕಾರ್ಮಿಕ ದಿನ (ಮೇ 1) ಶುಕ್ರವಾರವಾಗಿದ್ದು, ಮೂರು ದಿನಗಳ ಬ್ರೇಕ್ ಸಿಗುತ್ತದೆ. ಅದರಂತೆ ಜೂನ್‌ನಲ್ಲಿ ಮೊಹರಂ (ಜೂನ್ 26) ಶುಕ್ರವಾರ ಬಂದು ವಾರಾಂತ್ಯ ಸೇರಿ ಲಾಂಗ್ ರಜೆ ನೀಡುತ್ತದೆ. ಆದ್ದರಿಂದ ಮೇ ಮತ್ತು ಜೂನ್​ ಎರಡು ತಿಂಗಳಿನಲ್ಲಿ ಸಿಗುವ ಈ ದೀರ್ಘ ರಜೆಯನ್ನು ಮಿಸ್​ ಮಾಡ್ಲೇ ಬೇಡಿ.

ಸೆಪ್ಟೆಂಬರ್‌ ತಿಂಗಳಿನಲ್ಲಿ ಗಣೇಶ ಚತುರ್ಥಿ 14 ಅಂದರೆ ಸೋಮವಾರದಂದು ಬಂದಿರುವುದರಿಂದ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಲು ಸೂಕ್ತ ಸಮಯ. ನೀವು ಈ ತಿಂಗಳು ಶನಿವಾರ ಮತ್ತು ಆದಿತ್ಯವಾರ ಜೊತೆಗೆ ಸೋಮವಾರದ ಲಾಂಗ್​ ಬ್ರೇಕ್​ ತೆಗೆದುಕೊಂಡು ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬಹುದು.

ಅಕ್ಟೋಬರ್‌ನಲ್ಲಿ ಗಾಂಧಿ ಜಯಂತಿ ಮತ್ತು ದಸರಾ ಹಬ್ಬಗಳು ಲಾಂಗ್ ಹಾಲಿಡೇಗೆ ಉತ್ತಮ ಅವಕಾಶ ಕೊಡುತ್ತವೆ. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ (ಡಿಸೆಂಬರ್ 25) ಶುಕ್ರವಾರ ಬರುವುದರಿಂದ ವರ್ಷಾಂತ್ಯವನ್ನು ಪ್ರವಾಸದೊಂದಿಗೆ ಸ್ಮರಣೀಯವಾಗಿಸಬಹುದು. ಈ ಮೂಲಕ ನಿಮ್ಮ ಪೂರ್ತಿ ವರ್ಷವನ್ನು ಸುಂದರವಾಗಿ ಕಳೆಯಬಹುದು. ಇನ್ನೇಕೆ ತಡ ಕೆಲಸದ ಜಂಜಾಟ ಬಿಟ್ಟು ಆರಾಮವಾಗಿ ಪ್ರವಾಸದ ಪ್ಲಾನ್​ ಮಾಡಿ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಂದರ ಸಮಯವನ್ನು ಕಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:53 pm, Thu, 1 January 26

Source link

Chanakya Niti: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಅನುಸರಿಸಿ – Kannada News | Chanakya Niti: If you want success, follow these tips from Acharya Chanakya

ಪ್ರತಿಯೊಬ್ಬರೂ ಜೀವನದಲ್ಲಿ ಪ್ರಗತಿ, ಯಶಸ್ಸನ್ನು (success) ಸಾಧಿಸುವ ಓಟದಲ್ಲಿರುತ್ತಾರೆ. ಈ ಪ್ರಯಾಣದಲ್ಲಿ, ಕೆಲವರು ಛಲದಿಂದ ಮುಂದೆ ಸಾಗಿದರೆ, ಇನ್ನೂ ಕೆಲವರು ತಾವು ಇಡುವ ತಪ್ಪು ಹೆಜ್ಜೆಗಳ ಕಾರಣದಿಂದ ಪ್ರಗತಿಯನ್ನು ಸಾಧಿಸದೆ ಹಿಂದೆಯೇ ಉಳಿದುಬಿಡುತ್ತಾರೆ. ಕೆಲವರು ಈ ಸೋಲುಗಳಿಗೆ ತಲೆ ಕೆಡಿಸಿಕೊಳ್ಳದೆ ಹೊಸ ವರ್ಷದ ಸಂದರ್ಭದಲ್ಲಿ ಹೊಸ ಆರಂಭ, ಭರವಸೆಗಳೊಂದಿಗೆ ಯಶಸ್ಸಿನತ್ತ ಹೆಜ್ಜೆ ಇಡಲು ಶ್ರಮಿಸುತ್ತಾರೆ. 2026 ರ ಈ ಹೊಸ ವರ್ಷದಲ್ಲಿ ನೀವು ಸಹ ಜೀವನದಲ್ಲಿ ಯಶಸ್ಸು ಸಾಧಿಸಲು, ಸಂತೋಷದಾಯಕ ಜೀವನವನ್ನು ನಡೆಸಲು ಬಯಸಿದರೆ ಆಚಾರ್ಯ ಚಾಣಕ್ಯರ ಈ ಯಶಸ್ಸಿನ ತತ್ವಗಳನ್ನು ಪಾಲಿಸಿ. ಇವುಗಳನ್ನು ಪಾಲಿಸಿದ್ದೇ ಆದಲ್ಲಿ ಈ ವರ್ಷ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು ಖಂಡಿತ,

ಯಶಸ್ಸನ್ನು ಸಾಧಿಸಲು ಚಾಣಕ್ಯರ ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:

ಅಹಂಕಾರ ಬಿಟ್ಟು ಬಿಡಿ: ಚಾಣಕ್ಯರ ಪ್ರಕಾರ , ಕೋಪ ಮತ್ತು ಅಹಂಕಾರವು ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ತಡೆಯನ್ನು ಉಂಟುಮಾಡುತ್ತವೆ. ಅಹಂ ಮತ್ತು ಕೋಪ ನಿಮ್ಮ ಜೀವನದ ಕಠಿಣ ಪರಿಶ್ರಮವನ್ನು ಹಾಳುಮಾಡುತ್ತದೆ. ಅವು ನಿಮ್ಮ ಸಾಮಾಜಿಕ ಗೌರವವನ್ನೂ ಕಸಿದುಕೊಳ್ಳುತ್ತವೆ. ಹಾಗಾಗಿ ಈ ಹೊಸ ವರ್ಷದ ಆರಂಭದಲ್ಲಿಯೇ ಕೋಪ ಮತ್ತು ಅಹಂಕಾರವನ್ನು ತ್ಯಾಜಿಸಿ.  ಇದು ನಿಮಗೆ ಯಶಸ್ಸನ್ನು ತರುವುದು ಖಚಿತ.

ಟೀಕೆಗೆ ಹೆದರಬೇಡಿ: ಜೀವನದಲ್ಲಿ ಟೀಕೆಗೆ ಎಂದಿಗೂ ಭಯಪಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ಜೀವನದಲ್ಲಿ ಟೀಕೆಗೆ ಹೆದರುವ ವ್ಯಕ್ತಿ ತನ್ನ ಗುರಿಗಳನ್ನು ತಲುಪಲು ಸಾಧ್ಯವಿಲ್ಲ ಹಾಗಾಗಿ ಜೀವನದಲ್ಲಿ ಟೀಕೆಗೆ ಹೆದರಬೇಡಿ ಬದಲಾಗಿ ತಾಳ್ಮೆಯಿಂದ ಇದ್ದು, ಗುರಿ ಸಾಧಿಸುವತ್ತ ಗಮನಹರಿಸಿ.

ಸ್ವಾಭಿಮಾನ:  ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಇತರರನ್ನು ಗೌರವಿಸುವ ಮೊದಲು ತನ್ನನ್ನು ತಾನು ಗೌರವಿಸಿಕೊಳ್ಳಬೇಕು, ತನ್ನ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ನಿಮ್ಮ ಶಕ್ತಿಯ ಮೇಲೆ ನಂಬಿಕೆ ಇದ್ದರೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ.

ಒಳ್ಳೆಯವರ ಸಹವಾಸ: ಕೆಟ್ಟವರ ಸಹವಾಸದಿಂದ ಹಾನಿಯೇ ಹೆಚ್ಚು. ಹಾಗಾಗಿ ಈ ವರ್ಷ ಆದಷ್ಟು ಒಳ್ಳೆಯ, ಸಕಾರಾತ್ಮಕ ಮನಸ್ಸಿನ ಜನರೊಂದಿಗೆ ಬೆರೆಯಿರಿ. ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ಸಹವಾಸವು ನಿಮ್ಮ ಯಶಸ್ಸು ಹಾಗೂ ನಿಮ್ಮ ಸಾಮಾಜಿಕ ಇಮೇಜ್‌ನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಎಂದಿಗೂ ಕೆಟ್ಟವರ ಸಹವಾಸ ಮಾಡಬಾರದು. ಕೆಟ್ಟ ಸಹವಾಸವು ನಿಮ್ಮತನವನ್ನು ಹಾಳುಮಾಡುವುದಲ್ಲದೆ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ವೈಯಕ್ತಿಯ ವಿಚಾರಗಳನ್ನು ಅಪ್ಪಿತಪ್ಪಿಯೂ ಸಂಬಂಧಿಕರ ಬಳಿ ಶೇರ್‌ ಮಾಡಬೇಡಿ

ಗುರಿಯನ್ನು ರೂಪಿಸಿ: ಗುರಿಯಿಲ್ಲದ ವ್ಯಕ್ತಿಯು ಎಂದಿಗೂ ಯಶಸ್ಸನ್ನು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ. ಆದ್ದರಿಂದ, ನೀವು ಜೀವನದಲ್ಲಿ ಒಂದು ಗುರಿಯನ್ನು ಹೊಂದಿರಬೇಕು ಮತ್ತು ಆ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕು. 2026 ರ ಈ ಹೊಸ ವರ್ಷದಲ್ಲಿ ಗುರಿಗಳನ್ನು ಹೊಂದಿಸಿ, ಅದರ ಮೇಲೆ ಕೆಲಸ ಮಾಡುವ ಮೂಲಕ ನೀವು ಯಶಸ್ಸಿನತ್ತ ಸಾಗಬಹುದು.

ಜ್ಞಾನ ಸಂಪಾದನೆ: ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ, ಹೊಸ ವಿಷಯಗಳನ್ನು ಕಲಿಯುತ್ತಲೇ ಇರಿ.  ಈ ಜ್ಞಾನವು ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡುವುದಲ್ಲದೆ, ಸಮಾಜದಲ್ಲಿ ನಿಮಗೆ ಗೌರವವನ್ನು ಸಿಗುವಂತೆ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಟಿ20 ವಿಶ್ವಕಪ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ – Kannada News | T20 World Cup 2026: Australia Squad Announced, Shock Selections and Captain

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗಾಗಿ (T20 World Cup 2026) ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ನಾಯಕ ಮಿಚೆಲ್ ಮಾರ್ಷ್ (Mitchell Marsh) ನಾಯಕತ್ವದ 15 ಸದಸ್ಯರ ತಂಡವನ್ನು ಮಿನಿ ವಿಶ್ವಸಮರಕ್ಕೆ ಆಯ್ಕೆ ಮಾಡಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, 2025 ರಲ್ಲಿ ಟಿ20 ಮಾದರಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಆಟಗಾರನನ್ನು ಆಯ್ಕೆ ಮಂಡಳಿ ಕೈಬಿಟ್ಟಿದ್ದರೆ, ಇತ್ತ ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದ ಆಟಗಾರನನ್ನು ಆಯ್ಕೆ ಮಾಡುವ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತೊಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ.

ಮಿಚೆಲ್ ಓವನ್ ಔಟ್

2026 ರ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ ತಂಡದ ಆಯ್ಕೆಯಲ್ಲಿ ಎರಡು ಅಚ್ಚರಿಯ ವಿಚಾರಗಳೆಂದರೆ ಮಿಚೆಲ್ ಓವನ್ ಅವರನ್ನು ಕೈಬಿಟ್ಟಿರುವುದು ಮತ್ತು ಕೂಪರ್ ಕಾನೊಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದು. ಕಳೆದ ವರ್ಷ ಬಿಬಿಎಲ್‌ನಲ್ಲಿ ಸಿಡ್ನಿ ಥಂಡರ್ ವಿರುದ್ಧ ಹೋಬಾರ್ಟ್ ಹರಿಕೇನ್ಸ್ ಪರ ಬಿರುಗಾಳಿಯ ಶತಕ ಗಳಿಸುವ ಮೂಲಕ ಮಿಚೆಲ್ ಓವನ್ ಎಲ್ಲರ ಗಮನ ಸೆಳೆದಿದ್ದರು. ಅವರು ಕೇವಲ 42 ಎಸೆತಗಳಲ್ಲಿ 11 ಸಿಕ್ಸರ್‌ಗಳ ಸಹಿತ 108 ರನ್ ಕಲೆಹಾಕಿದ್ದರು. ಆದಾಗ್ಯೂ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಕೂಪರ್ ಕೊನೊಲಿಗೆ ಜಾಕ್​ಪಾಟ್

ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಆಸ್ಟ್ರೇಲಿಯಾ ತಂಡದ ಭಾಗವಾಗಿರದ ಕೂಪರ್ ಕೊನೊಲಿ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೂಪರ್ ಕೊನೊಲಿ ಜೊತೆಗೆ, ಮ್ಯಾಥ್ಯೂ ಶಾರ್ಟ್, ಮ್ಯಾಟ್ ಕುನ್ಹೆಮನ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರನ್ನು 2026 ರ ಟಿ20 ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ. ಈ ಎಲ್ಲಾ ಆಟಗಾರರಿಗೆ ಇದು ಮೊದಲ ಟಿ20 ವಿಶ್ವಕಪ್ ಆಗಲಿದೆ.

ತಂಡವು ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್‌ರಂತಹ ಆಟಗಾರರ ಅನುಭವವನ್ನು ಹೊಂದಿದೆ. ಹಾಗೆಯೇ ಆಡಮ್ ಜಂಪಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ.

U19 World Cup: ಅಂಡರ್-19 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡ ಪ್ರಕಟ

2026 ರ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಹೇಜಲ್‌ವುಡ್, ನಾಥನ್ ಎಲ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ಮ್ಯಾಥ್ಯೂ ವೇಡ್, ಕೂಪರ್ ಕಾನೊಲಿ, ಆಡಮ್ ಜಂಪಾ, ಮ್ಯಾಟ್ ಕುನ್ಹೆಮನ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:06 pm, Thu, 1 January 26

Source link

Video: ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ – Kannada News | Caught on Video: Monkey Bites Elderly Woman in Delhi Neighbourhood

ನವದೆಹಲಿ, ಡಿಸೆಂಬರ್ 31: ದೆಹಲಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಲ್ಲಿನ ಬಾತ್ರಾ ಕಾಲೋನಿಯಲ್ಲಿ ಮನೆಯ ಎದುರು ಕುಳಿತಿದ್ದ ವೃದ್ಧೆ ಮೇಲೆ ಕೋತಿಗಳು ದಾಳಿ ನಡೆಸಿವೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ವಸತಿ ಕಟ್ಟಡದ ಪ್ರವೇಶದ್ವಾರದ ಬಳಿ ಗೋಡೆಯ ವಿರುದ್ಧ ಇರಿಸಲಾದ ಪ್ಲಾಸ್ಟಿಕ್ ಕುರ್ಚಿಯ ಮೇಲೆ ವೃದ್ಧ ಮಹಿಳೆ ಶಾಂತವಾಗಿ ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಕೋತಿಗಳ ಗುಂಪು ಹತ್ತಿರದ ಓಣಿಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು.

ಕೆಲವು ಕ್ಷಣಗಳ ನಂತರ, ಒಂದು ಕೋತಿ ಇದ್ದಕ್ಕಿದ್ದಂತೆ ದೂರ ಸರಿದು, ಮಹಿಳೆಯ ಕಡೆಗೆ ಓಡಿ, ಆಕ್ರಮಣಕಾರಿಯಾಗಿ ಆಕೆಯ ದೇಹದ ಕೆಳಭಾಗಕ್ಕೆ ಹಾರಿ ಕಚ್ಚುತ್ತದೆ. ಕೆಲವು ಕ್ಷಣಗಳ ನಂತರ ಇಡೀ ಹಿಂಡು ಮಹಿಳೆಯ ತಲೆಯ ಮೇಲೆ, ಆಕೆಯ ಕಾಲುಗಳ ಮೇಲೆ ದಾಳಿ ಮಾಡುವುದು ಕಂಡುಬರುತ್ತದೆ.

ಗಾಬರಿಗೊಂಡು ನಡುಗುತ್ತಿರುವಂತೆ ತೋರುತ್ತಿದ್ದ ಆ ಮಹಿಳೆ, ಸ್ವಲ್ಪ ಹೊತ್ತು ಹೆಣಗಾಡುತ್ತಿದ್ದಾಗ ಕೋತಿ ಅವರನ್ನು ಹಿಡಿದುಕೊಂಡಿತು, ನಂತರ ಬೇಗನೆ ಬಿಟ್ಟು ಓಡಿಹೋಯಿತು. ವರದಿಗಳ ಪ್ರಕಾರ, ಮಹಿಳೆಯ ದೇಹದ ಮೇಲೆ ಮೂರು ಕಡಿತದ ಗುರುತುಗಳಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇದೆಂಥಾ ಬದಲಾವಣೆ; ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹಾಡಿ ಹೊಗಳಿದ ಮಾಳು – Kannada News | Malu Nipanal’s U Turn! Now Says Gilli Can Win The Bigg Boss Kannada 12 Cup

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಮೂರು ತಿಂಗಳು ಇದ್ದ ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿ ಹೊರ ಬಂದರು. ಅವರು ಈಗ ಊರಿಗೆ ತೆರಳಿದ್ದಾರೆ. ಅಲ್ಲಿಯೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಅವರಿಗೆ ಈಗ ತಪ್ಪಿನ ಅರಿವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಮೊದಲು ಯಾರು ಗೆದ್ದರೂ ಒಪ್ಪಿಕೊಳ್ಳಲ್ಲ ಎನ್ನುತ್ತಿದ್ದ ಅವರು ಈಗ, ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹೇಳಿದ್ದಾರೆ. ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.

ಈ ಮೊದಲು ಟಿವಿ9 ಕನ್ನಡದ ಜೊತೆ ಮಾತನಾಡಿದ್ದ ಮಾಳು ಅವರು, ‘ಈ ಸೀಸನ್ ಅಲ್ಲಿ ಯಾರೇ ಗೆದ್ದರೂ ಅದನ್ನು ಒಪ್ಪಿಕೊಳ್ಳೋದಿಲ್ಲ’ ಎಂದು ಹೇಳಿದ್ದರು. ತಾವೇ ಕಪ್ ಗೆಲ್ಲುತ್ತೇನೆ ಎಂಬ ನಂಬಿಕೆಯಲ್ಲಿ ಇದ್ದ ಅವರು, ‘ಮನೆಯಲ್ಲಿರೋ ಯಾರಿಗೂ ಕಪ್ ಗೆಲ್ಲಲು ಅರ್ಹತೆ ಇಲ್ಲ’ ಎಂದು ನೇರವಾಗಿ ಹೇಳಿದ್ದರು. ಅವರು ಮಾತು ಚರ್ಚೆಗೆ ಕಾರಣ ಆಗಿತ್ತು.

ಪ್ರತಿ ಸಂದರ್ಶನದಲ್ಲಿ ಮಾತನಾಡುವಾಗ, ‘ಕಪ್ ಯಾರು ಗೆಲ್ತಾರೆ’ ಎಂದು ಕೇಳಿದಾಗ ಅವರು ಇದಕ್ಕೆ ಸೂಕ್ತ ಉತ್ತರ ನೀಡಿರಲಿಲ್ಲ. ‘ಯಾರು ಗೆಲ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಏನು ಬೇಕಿದ್ದರೂ ಆಗಬಹುದು’ ಎಂದು ಉತ್ತರ ನೀಡಿದ್ದರು. ಈಗ ಮಾಳು ಅವರು ಬದಲಾಗಿದ್ದಾರೆ. ಗಿಲ್ಲಿ ಕಪ್ ಗೆಲ್ಲುವ ಸಾಧ್ಯತೆ ಇದೆ ಎಂದಿದ್ದಾರೆ.

ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಳು, ‘ನಮ್ಮ ಇಬ್ಬರ ಮಧ್ಯೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಇಬ್ಬರ ಹಾದಿ, ವ್ಯಕ್ತಿತ್ವ ಬೇರೆ. ಇಬ್ಬರ ಮಧ್ಯೆ ಹೋಲಿಕೆ ಸಾಧ್ಯವಿಲ್ಲ. ಗಿಲ್ಲಿ ಕೆಟ್ಟವನಲ್ಲ. ಎಲ್ಲರನ್ನೂ ನಗಿಸುತ್ತಾನೆ. ಟಾಸ್ಕ್ ಚೆನ್ನಾಗಿ ಆಡಲ್ಲ ಅನ್ನೋದಷ್ಟೇ ನನಗೆ ಅವರಲ್ಲಿ ಕಂಡ ಕೊರತೆ. ಅವರು ತಪ್ಪು ತಿದ್ದುಕೊಂಡರೆ ಫಿನಾಲೆ ತಲುಪಿ ಕಪ್ ಗೆಲ್ಲಬಹುದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೀ ಕೊಡೋದ್ರಲ್ಲಿ ಮಾಸ್ಟರ್​; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ

ಇದಕ್ಕೆ ನಾನಾ ರೀತಿಯ ಕಮೆಂಟ್ ಬಂದಿದೆ. ‘ಗಿಲ್ಲಿ ಹವಾ ಏನು ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಮಾಳು ಬದಲಾಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇತ್ತೀಚೆಗೆ ಮಾಳು ವೇದಿಕೆ ಏರಿದಾಗ ‘ಗಿಲ್ಲಿ ಗಿಲ್ಲಿ’ ಎಂದು ಕೂಗಿದ್ದರು. ಇದರಿಂದ ಅವರಿಗೆ ಮುಜುಗರ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಆಗಿದ್ದು 167 ಮನೆ, ಫ್ಲಾಟ್​ಗಾಗಿ ಸಲ್ಲಿಕೆಯಾದ ಅರ್ಜಿ 250ಕ್ಕೂ ಹೆಚ್ಚು! – Kannada News | Kogilu Layout Housing Row: 167 illegal Homes Demolished, Over 250 Applications Filed for Flats

ಬೆಂಗಳೂರು, ಜನವರಿ 1: ಬೆಂಗಳೂರಿನ ಕೋಗಿಲು ಲೇಔಟ್​ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್, ಮನೆಗಳ ತೆರವು ವಿಚಾರ ವಿವಾದಕ್ಕೀಡಾಗಿತ್ತು. ನಂತರ ನಿರಾಶ್ರಿತರಿಗೆ ಮನೆ ನೀಡುವುದಾಗಿ ಕರ್ನಾಟಕ (Karnataka) ಕಾಂಗ್ರೆಸ್ (Congress) ಸರ್ಕಾರ ಘೋಷಣೆ ಮಾಡಿದ್ದೂ ಸಹ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಡೆಗೆ ವ್ಯಾಪಕ ಆಕ್ಷೇಪವೂ ವ್ಯಕ್ತವಾಗಿದೆ. ಏತನ್ಮಧ್ಯೆ ಇದೀಗ ಹೊಸ ಸಮಸ್ಯೆ ಎದುರಾಗಿದೆ. ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಮಾಡಲಾದ ಮನೆಗಳ ಲೆಕ್ಕಾಚಾರದ ಆಧಾರದಲ್ಲಿ, ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 167 ಫ್ಲಾಟ್​​ಗಳನ್ನು ನೀಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಇದೀಗ ಮನೆಗಳಿಗಾಗಿ 25ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ಪ್ರಕ್ರಿಯೆ ಇದೀಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಡೆಮಾಲಿಷನ್ ಆಗಿರುವ ಒಂದೇ ಮನೆಯ ವಿಳಾಸದಿಂದ ಇಬ್ಬರು, ಮೂವರು ಮನೆಗಾಗಿ ಅರ್ಜಿ ಸಲ್ಲಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಕೋಗಿಲು ಲೇಔಟ್‌ನ ನಿವಾಸಿಗಳೇ ಅಲ್ಲದವರೂ ಮನೆಗಾಗಿ ಅರ್ಜಿ ಹಾಕಿರುವುದಾಗಿ ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಸೂಚನೆಯಂತೆ, ಇಲಾಖಾ ಅಧಿಕಾರಿಗಳ ತಂಡ ಅಲ್ಲಿನ ನಿವಾಸಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ವಸತಿ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ.

ನಿರಾಶ್ರಿತರಿಂದ ಬಂದಿರುವ ಎಲ್ಲ ಅರ್ಜಿಗಳ ನೈಜತೆ ಪರಿಶೀಲನೆ ಕಾರ್ಯ ಇಂದು ಹಾಗೂ ನಾಳೆ ನಡೆಸಲಾಗುತ್ತಿದೆ. ಪರಿಶೀಲನೆ ಬಳಿಕ ಅಂತಿಮ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಕನ್ನಡಿಗರು, ಪರಭಾಷಿಕರು ಎಂದು ಪಟ್ಟಿ

ಮನೆ ಹಂಚಿಕೆ ಸಂಬಂಧವಾಗಿ ಅಧಿಕಾರಿಗಳು ಈಗಾಗಲೇ ಕನ್ನಡಿಗರು ಹಾಗೂ ಪರಭಾಷಿಕರು ಎಂಬ ಎರಡು ಪ್ರತ್ಯೇಕ ಪಟ್ಟಿಗಳನ್ನು ಸಿದ್ಧಪಡಿಸಿದ್ದಾರೆ. ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿದ ನಂತರ ವಸತಿ ಇಲಾಖೆ ಮನೆ ಹಂಚಿಕೆ ಕುರಿತ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ.

ಇದನ್ನೂ ಓದಿ: ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?

ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್, ಮನೆಗಳನ್ನು ನಿರ್ಮಿಸಿದ್ದವರಿಗೆ ವಸತಿ ಒದಗಿಸಿಕೊಡುವ ಸರ್ಕಾರದ ತೀರ್ಮಾನಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ ವಿವಿಧ ಕಾರಣಗಳಿಂದ ಸಂತ್ರಸ್ತರಾಗಿರುವ ಅರ್ಹ ಫಲಾನುಭವಿಗಳಿಗೇ ದಶಕಗಳಿಂದ ಪರಿಹಾರ ನೀಡಿಲ್ಲ. ಅಂಥದ್ದರಲ್ಲಿ ಇದೀಗ ಏಕಾಏಕಿ ಎಲ್ಲಿಂದಲೋ ಬಂದ ವಲಸಿಗರಿಗೆ, ಅದೂ ಸಹ ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ಪರಿಹಾರ ಏಕೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indian Railways: ಭಾರತೀಯ ರೈಲುಗಳ ಬೋಗಿಗಳು ವಿಭಿನ್ನ ಬಣ್ಣಗಳನ್ನು ಹೊಂದಿರುವುದೇಕೆ? – Kannada News | More Than Just Paint: The Meaning Behind India’s Colourful Trains

ನವದೆಹಲಿ, ಜನವರಿ 1: ಸಾಮಾನ್ಯವಾಗಿ ಭಾರತದವರು ರೈಲಿನಲ್ಲಿ ಪ್ರಯಾಣಿಸಿಯೇ ಇರುತ್ತಾರೆ. ಆದರೆ ರೈಲಿನ ಬೋಗಿಗಳು ಏಕರೂಪವಾಗಿಲ್ಲ ಎಂಬುದನ್ನು ಯಾರಾದರೂ ಗಮನಿಸಿದ್ದೀರಾ. ಕೆಲವು ರೈಲು(Train)ಗಳಲ್ಲಿ ಕೆಂಪು ಬೋಗಿಗಳು, ಕೆಲವು ಹಸಿರು ಇನ್ನೂ ಕೆಲವು ನೀಲಿ ಬಣ್ಣದ ಬೋಗಿಗಳನ್ನು ಹೊಂದಿರುತ್ತವೆ. ಇದರ ಹಿಂದಿನ ಕಾರಣದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿರುತ್ತದೆ.

ಭಾರತೀಯ ರೈಲು ಬೋಗಿಗಳ ಬಣ್ಣಗಳು ಕೇವಲ ಸೌಂದರ್ಯ ಮತ್ತು ನೋಟಕ್ಕಾಗಿ ಮಾತ್ರವಲ್ಲ, ಅವು ರೈಲಿನ ಬಗ್ಗೆಯೂ ಬಹಳಷ್ಟು ಬಹಿರಂಗಪಡಿಸುತ್ತವೆ. ಈ ಬಣ್ಣಗಳು ರೈಲಿನ ಪ್ರಕಾರ, ವೇಗ ಮತ್ತು ಬಳಸಿದ ಕೋಚ್ ತಂತ್ರಜ್ಞಾನದ ಪ್ರಕಾರವನ್ನು ಸೂಚಿಸುತ್ತವೆ. ಇದು ರೈಲ್ವೆ ಉದ್ಯೋಗಿಗಳಿಗೆ ರೈಲನ್ನು ಸುಲಭವಾಗಿ ನಿರ್ವಹಿಸಲು, ದುರಸ್ತಿ ಮಾಡಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ನೀಲಿ ಕೋಚ್
ನೀಲಿ ಕೋಚ್‌ಗಳನ್ನು ಹೊಂದಿರುವ ರೈಲುಗಳು ಹೆಚ್ಚು ಗೋಚರಿಸುತ್ತವೆ. ಇವುಗಳನ್ನು ಇಂಟಿಗ್ರೇಟೆಡ್ ಕೋಚ್‌ಗಳು ಎಂದು ಕರೆಯಲಾಗುತ್ತದೆ. ನೀಲಿ ಕೋಚ್‌ಗಳನ್ನು ಹೊಂದಿರುವ ರೈಲುಗಳು ಗಂಟೆಗೆ 70 ರಿಂದ 140 ಕಿಲೋಮೀಟರ್ ವೇಗವನ್ನು ತಲುಪಬಹುದು. ಈ ಕೋಚ್‌ಗಳನ್ನು ಕಬ್ಬಿಣದಿಂದ ತಯಾರಿಸಲಾಗುತ್ತದೆ ಮತ್ತು ಏರ್ ಬ್ರೇಕ್‌ಗಳನ್ನು ಸಹ ಅಳವಡಿಸಲಾಗಿದೆ. ಮೇಲ್, ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳಲ್ಲಿ ನೀಲಿ ಕೋಚ್‌ಗಳನ್ನು ಬಳಸಲಾಗುತ್ತದೆ.

ಮತ್ತಷ್ಟು ಓದಿ: ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ

ಕೆಂಪು ಕೋಚ್
ರೈಲುಗಳಲ್ಲಿರುವ ಕೆಂಪು ಬಣ್ಣದ ಕೋಚ್‌ಗಳನ್ನು ಲಿಂಕ್ ಹಾಫ್‌ಮನ್ ಎಂದೂ ಕರೆಯುತ್ತಾರೆ. ಅವುಗಳನ್ನು ಜರ್ಮನಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತವು 2000 ನೇ ಇಸವಿಯಲ್ಲಿ ಈ ಕೋಚ್‌ಗಳನ್ನು ಆಮದು ಮಾಡಿಕೊಂಡಿತು. ಈಗ, ಅವುಗಳನ್ನು ಪಂಜಾಬ್‌ನ ಕಪುರ್ತಲಾದಲ್ಲಿ ತಯಾರಿಸಲಾಗುತ್ತದೆ. ಅವುಗಳನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತದೆ.

ರಾಜಧಾನಿ ರೈಲುಗಳಲ್ಲಿ ಕೆಂಪು ಬಣ್ಣದ ಕೋಚ್‌ಗಳನ್ನು ಬಳಸಲಾಗುತ್ತದೆ. ಈ ಕೋಚ್‌ಗಳು ಹಗುರವಾಗಿರುತ್ತವೆ, ಇದರಿಂದಾಗಿ ಅವು ಹೆಚ್ಚಿನ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಕೋಚ್‌ಗಳು ಡಿಸ್ಕ್ ಬ್ರೇಕ್‌ಗಳನ್ನು ಸಹ ಹೊಂದಿವೆ. ಇವು ಇತರ ಕೋಚ್‌ಗಳಿಗಿಂತ ಕಡಿಮೆ ತೂಕ ಹೊಂದಿರುತ್ತವೆ.

ಹಸಿರು ಕೋಚ್
ನೀವು ರೈಲುಗಳಲ್ಲಿ ಹಸಿರು ಬಣ್ಣದ ಕೋಚ್‌ಗಳನ್ನು ಹೆಚ್ಚಾಗಿ ನೋಡಿರಬಹುದು. ಗರೀಬ್ ರಥ ರೈಲುಗಳಲ್ಲಿ ಹಸಿರು ಬಣ್ಣದ ಕೋಚ್‌ಗಳನ್ನು ಬಳಸಲಾಗುತ್ತದೆ. ಈ ರೈಲುಗಳು ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ವಿವಿಧ ಬಣ್ಣದ ಕೋಚ್‌ಗಳು ರೈಲಿನ ವೈಶಿಷ್ಟ್ಯಗಳು ಮತ್ತು ಪ್ರಕಾರಗಳನ್ನು ಸೂಚಿಸುತ್ತವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ? – Kannada News | New Bengaluru Mangaluru Vande Bharat Train: Faster Travel for Karnataka

ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ಸಂಚಾರಿಸಲಿದೆ. ಈ ಮೂಲಕ ಕರಾವಳಿ ಪ್ರದೇಶಗಳ ಪುಣ್ಯಕ್ಷೇತ್ರಕ್ಕೆ ಹೋಗುವವರಿಗೆ ಇದು ಒಳ್ಳೆಯ ಪ್ರಯಾಣ ನೀಡಲಿದೆ.

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಸೆಮಿ ಹೈ-ಸ್ಪೀಡ್ ರೈಲು ಸಂಪೂರ್ಣವಾಗಿ ವಿದ್ಯುತ್ ಶಕ್ತಿಯಿಂದ ಚಲಿಸುವ ಕಾರಣ, ಇದು ಪ್ರಯಾಣದ ವೇಗವನ್ನು ಹೆಚ್ಚಿಸುತ್ತದೆ. ಜತೆಗೆ, ಸ್ವಚ್ಛವಾದ ಗಾಳಿ, ಮಾಲಿನ್ಯರಹಿತ ಪರಿಸರವನ್ನು ಉಂಟು ಮಾಡುತ್ತದೆ. ಜತೆಗೆ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.

ಮಂಗಳೂರು ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ವಂದೇ ಭಾರತ್ ರೈಲು ಓಡಾಟ ಆರಂಭಿಸುವ ಸಮಯ ಹತ್ತಿರವಾಗಿದೆ ಎಂದು ಅವರು ಎಕ್ಸ್​​ನಲ್ಲಿ ಪೋಸ್ಟ್​​​ ಮಾಡಿದ್ದಾರೆ.

ಸಾಮಾನ್ಯ ರೈಲುಗಳು ಈ ಮಾರ್ಗವನ್ನು ಕ್ರಮಿಸಲು ಸರಿಸುಮಾರು 9 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ವಂದೇ ಭಾರತ್ ರೈಲು ಅದನ್ನು ಕೇವಲ 5 ಗಂಟೆಗಳವರೆಗೆ ಕಡಿಮೆ ಮಾಡಬಹುದು, ಇದು ವ್ಯಾಪಾರ ಪ್ರಯಾಣಿಕರು ಮತ್ತು ರಜಾದಿನಗಳಲ್ಲಿ ಈ ರೈಲು ಹೆಚ್ಚು ಸಹಾಯವಾಗಲಿದೆ.

ಸೆಮಿ ಹೈ-ಸ್ಪೀಡ್ ಸೇವೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ, ಪ್ರವಾಸೋದ್ಯಮ, ವ್ಯಾಪಾರ ಪ್ರವಾಸಗಳಿಗೆ ಇದೊಂದು ಉತ್ತಮ ಆಯ್ಕೆಯಾಗಿರುತ್ತದೆ

ಬೆಂಗಳೂರು, ತುಮಕೂರು, ಹಾಸನ ಮತ್ತು ಮಂಗಳೂರು ಎಂಬ ನಾಲ್ಕು ಜಿಲ್ಲೆಗಳಿಗೆ ಇದು ಅನುಕೂಲವಾಗಲಿದೆ. ಇದಕ್ಕೆ 50,000 ಕೋಟಿ ರೂ. ಬಜೆಟ್ ನೀಡಲಾಗಿದೆ

Published On – 11:32 am, Thu, 1 January 26

Source link

Video: ನಮ್ಗೆ ಪುರುಷ ಮ್ಯಾನೇಜರ್ ಸಾಕು, ಮಹಿಳಾ ಮ್ಯಾನೇಜರ್ ಬೇಡ್ವೇ ಬೇಡ; ಪ್ರಾಮಾಣಿಕ ಉತ್ತರ ನೀಡಿದ ಉದ್ಯೋಗಿಗಳು – Kannada News | No need for a female manager; Noida employees give honest answers

ಪುರುಷರು ಅಥವಾ ಮಹಿಳೆಯ ಉದ್ಯೋಗಿಗಳೇ ಇರಲಿ, ಮ್ಯಾನೇಜರ್ ಯಾರಿರಬೇಕೆಂದು ಕೇಳಿದಾಗ ಪುರುಷರೇ ಮ್ಯಾನೇಜರ್ (female manager) ಇರಬೇಕೆಂದು ಬಯಸುತ್ತಾರೆ. ಹೌದು, ನೋಯ್ಡಾದ (Noida) ಖಾಸಗಿ ಕಂಪನಿಯೊಂದರ ಉದ್ಯೋಗಿಗಳ ಅಭಿಪ್ರಾಯವು ಅದೇ ಆಗಿದೆ. ಆದರೆ ಇದೀಗ ನೋಯ್ಡಾ ಮೂಲದ ‘ಕ್ಲೌಡ್ ಸೈನ್ಸ್ ಲ್ಯಾಬ್ಸ್’ ಕಂಪನಿಯ ಉದ್ಯೋಗಿಗಳ ಸಮೀಕ್ಷೆಯ ವಿಡಿಯೋ ಸದ್ಯ ವೈರಲ್ ಆಗಿದೆ. ಇಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳು ಪುರುಷರೇ ಬಾಸ್ ಆಗಿ ಇರಬೇಕೆಂದು ಪ್ರಾಮಾಣಿಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಸದ್ಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನ್ಯೂಸ್ ಅಲ್ಗೆಬ್ರಾ (News algebra) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ತಮಾಷೆ ವಿಡಿಯೋ ಇದಾಗಿದೆ. ಈ ವಿಡಿಯೋಗೆ ನೋಯ್ಡಾದ ಖಾಸಗಿ ಕಂಪನಿಯ ಉದ್ಯೋಗಿಗಳು ಮಹಿಳಾ ಬಾಸ್‌ಗಳಿಗಿಂತ ಪುರುಷ ಬಾಸ್ ಗಳನ್ನೇ ಆಯ್ಕೆ ಮಾಡಿಕೊಂಡರು. “ಇದು ಅಥವಾ ಅದು” ಈ ಸಮೀಕ್ಷೆಯಲ್ಲಿ ಭಾಗವಹಿಸುವವರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ. ಆದರೆ ಆಶ್ಚರ್ಯಕರವಾಗಿ ಎಲ್ಲರೂ ಪುರುಷ ಮ್ಯಾನೇಜರ್ ರನ್ನೇ ಆಯ್ಕೆ ಮಾಡಿದರು. ಇದರಲ್ಲಿ ಮಹಿಳಾ ಉದ್ಯೋಗಿಗಳೂ ಸೇರಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಉದ್ಯೋಗಿಗಳಿಗೆ ಕಂಪನಿಯ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದಕ್ಕೆ ಅನುಸಾರವಾಗಿ ಉದ್ಯೋಗಿಗಳು ತಮ್ಮ ಆಯ್ಕೆಯ ಮುಂದೆ ನಿಲ್ಲಬೇಕು. ಅದರಂತೆ ಆಫೀಸ್ ಟ್ರಿಪ್ – ಲಾಂಗ್ ವೀಕೆಂಡ್, ಅರ್ಲಿ ಲಾಗ್ ಇನ್, ಲೇಟ್ ಲಾಗ್ ಔಟ್, ವರ್ಕ್ ಫ್ರಮ್ ಹೋಮ್, ವರ್ಕ್ ಫ್ರಮ್ ಆಫೀಸ್ ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಇದರಲ್ಲಿ ಒಂದು ಪ್ರಮುಖ ಪ್ರಶ್ನೆಯೆಂದರೆ ‘ನೀವು ಮಹಿಳಾ ಮ್ಯಾನೇಜರ್ ಬಯಸುತ್ತೀರಾ ಅಥವಾ ಪುರುಷ ಮ್ಯಾನೇಜರ್ ರನ್ನು ಬಯಸುತ್ತೀರಾ? ಎನ್ನುವುದಾಗಿದ್ದು, ಎಲ್ಲಾ ಉದ್ಯೋಗಿಗಳು ‘ಪುರುಷ ಮ್ಯಾನೇಜರ್’ ಆಯ್ಕೆಯನ್ನು ಆರಿಸಿಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ತಿಂಗಳಿಗೆ 4 ಲಕ್ಷ ರೂ ಸಂಪಾದನೆ ಮಾಡಿದ್ರೂ ಖುಷಿ ಅನ್ನೋದೇ ಇಲ್ಲ ಎಂದ ಉದ್ಯಮಿ

ಜನವರಿ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪ್ರಸ್ತುತ ಮ್ಯಾನೇಜರ್ ಪುರುಷರೇ ಆಗಿರುವುದರಿಂದ ಈ ರೀತಿ ಆಯ್ಕೆ ಮಾಡಲಾಯಿತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಕೆಲಸದ ಸ್ಥಳದಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳ ಒಂದು ಗಮನಾರ್ಹ ಚಿತ್ರಣ – ಲಿಂಗ ಸಮಾನತೆ ಇನ್ನೂ ಹಲವು ಮೈಲಿಗಳಷ್ಟು ದೂರ ಸಾಗಬೇಕಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಹಿಳೆಯರು ಕೂಡ ಪುರುಷ ಬಾಸ್‌ಗಳನ್ನು ಆಯ್ಕೆ ಮಾಡುತ್ತಾರೆ. ಪಕ್ಷಪಾತವು ಆಳವಾಗಿ ಬೇರೂರಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಭಟನೆ ವೇಳೆ ಪಿಎಸ್​​ಐಗೆ ಸ್ವಾಮೀಜಿಯಿಂದ ಕಪಾಳಮೋಕ್ಷ: ಅಷ್ಟಕ್ಕೂ ಆಗಿದ್ದೇನು? – Kannada News | Vijayapura Protest: Swamiji Slaps PSI Over Medical College Row

ವಿಜಯಪುರ, ಜನವರಿ 01: ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಫ್ತಿಯಲ್ಲಿದ್ದ ಪಿಎಸ್​ಐಗೆ ಸ್ವಾಮೀಜಿ ಕಪಾಳಮೋಕ್ಷ ಮಾಡಿರುವ ಘಟನೆ ವಿಜಯಪುರ- ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್​​ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರು ಸ್ವಾಮೀಜಿ ಬೊಬೈಲ್​​ ಕಸಿದುಕೊಂಡಿದ್ದಾರೆ. ಇದರಿಂದ ಸಿಟ್ಟಾದ ಅವರು ಪೊಲೀಸ್​​ ಅಧಿಕಾರಿ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.

ಘಟನೆ ಏನು?

ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧಿಸಿ ಕಳೆದ ನೂರಾರು ದಿನಗಳಿಂದ ಹೋರಾಟ ನಡೆದುಕೊಂಡುಬಂದಿದೆ. ಇದರ ಭಾಗವಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ಮತ್ತು ಇತರ ಸಂಘಟನೆಗಳು ಇಂದು ಉಸ್ತುವಾರಿ ಸಚಿವರ ಮನೆ ಮುತ್ತಿಗೆ ಯತ್ನ ನಡೆಸಿವೆ. ಈ ವೇಳೆ ಹೋರಾಟಗಾರರನ್ನು ವಿಜಯಪುರ-ಸೊಲ್ಲಾಪುರ ರಸ್ತೆಯಲ್ಲಿಯೇ ಪೊಲೀಸರು ತಡೆದಿದ್ದು, ರಸ್ತೆ ಮಧ್ಯ ಹೋರಾಟ ಮಾಡದಂತೆ ಮನವಿ ಮಾಡಿದ್ದಾರೆ. ಜೊತೆಗೆ ಹೋರಾಟದಲ್ಲಿ ಭಾಗಿಯಾಗಿದ್ದ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಸಂಗನಬಸವ ಸ್ವಾಮೀಜಿ ಮೊಬೈಲ್​​ ಕಸಿದಿದ್ದಾರೆ. ಇದರಿಂದ ಕೋಪಗೊಂಡ ಸ್ವಾಮೀಜಿ ಪೊಲೀಸ್​​ ಯೂನಿಫಾರ್ಮ್​​ ಧರಿಸಿರದ ಪಿಎಸ್​ಐ ಸೀತಾರಾಮ್ ಲಮಾಣಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ನಾನು ತಪ್ಪು ಮಾಡಿಲ್ಲ, ಕರೆ ಮಾಡುತ್ತೇನೆಂದರೂ ಮೊಬೈಲ್ ಕಸಿದರು ಎಂದು ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ. ಆದರೆ ಶ್ರೀಗಳನ್ನು ಎಳೆದು ತಮ್ಮ ವಾಹನದಲ್ಲಿ ಪೊಲೀಸರು ಕೂರಿಸಿದ್ದಾರೆ. ಕರ್ತವ್ಯ ನಿರತ ಅಧಿಕಾರಿ ಮೇಲೆ ಸ್ವಾಮೀಜಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದು, ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಬಳಿಕ ಎಲ್ಲ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link