ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ! – Kannada News | Caste Clash Erupts During Grama Devata Procession in Chikkaballapura
ಚಿಕ್ಕಬಳ್ಳಾಪುರ, ಜನವರಿ 19: ತಾಲೂಕಿನ ಎ. ಕೊತ್ತೂರು ಗ್ರಾಮದಲ್ಲಿ ಗ್ರಾಮ ದೇವತೆಯ ಮೆರವಣಿಗೆ ವೇಳೆ ದಲಿತರು ಮತ್ತು ಸವರ್ಣೀಯರ ನಡುವೆ ತೀವ್ರ ಗುಂಪು ಘರ್ಷಣೆ ಸಂಭವಿಸಿದೆ. ಗ್ರಾಮದ ಎಲ್ಲಾ ಜಾತಿ ಸಮುದಾಯದವರು ಒಟ್ಟಾಗಿ ಚಂದಾ ವಸೂಲಿ ಮಾಡಿ, ಗಂಗಮ್ಮ ದೇವರ ಜಾತ್ರೆ ಮತ್ತು ಮೆರವಣಿಗೆಯನ್ನು ಆಯೋಜಿಸಿದ್ದರು. ಬೆಳಗ್ಗೆ ಹತ್ತು ಗಂಟೆಯಿಂದ ಗ್ರಾಮ ದೇವತೆಯ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯು ಸಾಗುತ್ತಿದ್ದಾಗ, ಚಂದಾ ನೀಡಿದ್ದ ದಲಿತ ಯುವಕರು ಸಹ ತಾವು ದೇವರನ್ನು ಹೊರಬೇಕು, ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆಗ್ರಹಿಸಿ…