Headlines

nagaraj11081993

ಬಿಡುಗಡೆ ಆಯ್ತು ‘ಅಯೋಗ್ಯ 2’ ಸಿನಿಮಾದ ಹೊಸ ಹಾಡು – Kannada News | Satish Ninasam and Rachita Ram starrer Ayogya 2 movie new song released

ಸತೀಶ್‌ ನಿನಾಸಂ (Satish Neenasam) ಹಾಗೂ ರಚಿತಾ ರಾಮ್‌ ಅಭಿನಯದ ‘ಅಯೋಗ್ಯ’ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಕಾಮಿಡಿ, ಹಾಡುಗಳು, ಆಕ್ಷನ್ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಇದೀಗ ಅದೇ ತಂಡ ‘ಅಯೋಗ್ಯ 2’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಹೊಸ ಹಾಡೊಂದು ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾದ ಹಾಡು ಬಿಡುಗಡೆಗಾಗಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಇಂದು (ಜೂನ್ 20) ನಟ ಸತೀಶ್‌ ಹುಟ್ಟುಹಬ್ಬ ಆಗಿದ್ದು, ಇದೇ ದಿನ ಹಾಡು ಬಿಡುಗಡೆ ಮಾಡಲಾಗಿದೆ. ‘ಅಯೋಗ್ಯ…

Read More

‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ – Kannada News | Arjun Janya talks about singer Pruthvi Bhatt singing

ಸತೀಶ್ ನೀನಾಸಂ, ರಚಿತಾ ರಾಮ್ (Rachita Ram) ನಟನೆಯ ‘ಅಯೋಗ್ಯ’ ಸಿನಿಮಾದ ಎರಡನೇ ಭಾಗ ‘ಅಯೋಗ್ಯ 2’ ಎಂಟು ವರ್ಷಗಳ ಬಳಿಕ ಬರಲು ಸಜ್ಜಾಗಿದೆ. ‘ಅಯೋಗ್ಯ’ ಸಿನಿಮಾ ರೀತಿಯಲ್ಲೇ ಹಾಸ್ಯಮಯ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿರಲಿದೆ. ಇಂದು (ಜೂನ್ 20) ‘ಅಯೋಗ್ಯ 2’ ಸಿನಿಮಾದ ಹಾಡು ಬಿಡುಗಡೆ ಆಯ್ತು. ಈ ವಿಶೇಷ ಹಾಡನ್ನು ಖ್ಯಾತ ಗಾಯಕ ಸಿದ್ ಶ್ರೀರಾಮ್ ಮತ್ತು ಯುವ ಗಾಯಕಿ ಪೃಥ್ವಿ ಭಟ್ ಹಾಡಿದ್ದಾರೆ. ಹಾಡು ಬಿಡುಗಡೆ ಮಾಡಿದ ಅರ್ಜುನ್ ಜನ್ಯ ಅವರು ಪೃಥ್ವಿ ಭಟ್…

Read More

ನಿಮ್ಮ ಸ್ನೇಹದಿಂದ ನನಗೇನೂ ಲಾಭವಾಗಿಲ್ಲ; ಟ್ರಂಪ್ ಆರೋಪಕ್ಕೆ ಮೆಲೋನಿ ಖಡಕ್ ಉತ್ತರ – Kannada News | Being Your Friend Has Not Helped My Popularity; Meloni Hits Back At Trump after he repeats selfie claim

ನವದೆಹಲಿ, ಜೂನ್ 20: ಜಿ7 ಶೃಂಗಸಭೆಯ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಟ್ರಂಪ್ ಅವರ ಅಹಂಕಾರಿ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೆಲೋನಿ, “ನಿಮ್ಮ ಸ್ನೇಹಿತೆಯಾಗಿರುವುದರಿಂದ ನನಗಂತೂ ಯಾವುದೇ ಸಹಾಯವಾಗಿಲ್ಲ. ನಿಮ್ಮ ಜೊತೆಗಿನ ಸ್ನೇಹದಿಂದ ನನಗೆ ಜನಪ್ರಿಯತೆಯೂ ಬಂದಿಲ್ಲ. ನನ್ನ ಜನಪ್ರಿಯತೆಯ ಬಗ್ಗೆ ಚಿಂತಿಸುವುದು ನಿಮಗೆ ಬೇಡದ ಕೆಲಸ” ಎಂದು ಟ್ರಂಪ್​ಗೆ ನೇರವಾಗಿಯೇ ಖಡಕ್ ಉತ್ತರ…

Read More

ಮಗಳ ಮನೆ ಹಾಳು ಕೃತ್ಯ: ಮರ್ಯಾದೆಗೆ ಹೆದರಿ ದುರಂತ ಅಂತ್ಯ ಕಂಡ ತಾಯಿ! – Kannada News | Mother Dies Amid Distress Over Daughter’s Insurance Crime Case

ತಾಯಿ ಮಹದೇವಿ ಬದಾಮಿ, ಮಗಳು ಸುಮಾ Image Credit source: tv9 kannada ಬೆಳಗಾವಿ, ಜೂನ್​ 20: ಎರಡು ಕೋಟಿ ರೂ ವಿಮೆ ಹಣಕ್ಕಾಗಿ ಪ್ರಿಯಕರೊಂದಿಗೆ ಸೇರಿ ಪತ್ನಿ ಸುಮಾ ಗಂಡನ ಕೊಲೆ ಪ್ರಕರಣ ಇಡೀ ಬೆಳಗಾವಿಯನ್ನು (belagavi) ಬೆಚ್ಚಿಬೀಳಿಸಿದೆ. ಕೊಲೆಯಾದ ಮೂರು ತಿಂಗಳ ಬಳಿಕ ಮರ್ಡರ್ ಮಿಸ್ಟ್ರಿ ಹೊರ ಬಂದಿತ್ತು. ಒಬ್ಬರಲ್ಲಾ ಇಬ್ಬರಲ್ಲಾ ಬರೋಬ್ಬರಿ 9 ಜನ ಕೊಲೆ ಕೇಸ್​ನಲ್ಲಿ ಹಿಂಡಲಗಾ ಜೈಲು ಸೇರಿದ್ದಾರೆ. ಆದರೆ ಇತ್ತ ಮಗಳು ಮಾಡಿದ ಕೃತ್ಯಕ್ಕೆ 57 ವರ್ಷದ ತಾಯಿ…

Read More

ಭಾರತ- ಲಂಕಾ ನಡುವೆ ತ್ರಿಕೋನ ಸರಣಿ ಫೈನಲ್; ಕೆಣಕ್ಕಿದವರ ವಿರುದ್ದ ಅಬ್ಬರಿಸ್ತಾರಾ ವೈಭವ್? – Kannada News | India A vs SL A Tri Series Final: Date, Time, Live Stream and Tilak Varma’s Challenge

ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡವು ಭಾನುವಾರ ನಡೆಯಲಿರುವ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ (India A vs Sri Lanka A) ತಂಡವನ್ನು ಎದುರಿಸುತ್ತಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಮೊದಲ ಮುಖಾಮುಖಿಯಲ್ಲಿ ಭಾರತ ಗೆದ್ದಿದ್ದರೆ, ಎರಡನೇ ಮುಖಾಮುಖಿಯಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಮುಖಾಮುಖಿಯಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಕೂಡ ಸಿಗಲಿದೆ. ಇದರ ಜೊತೆಗೆ ಕಳೆದ ಮುಖಾಮುಖಿಯಲ್ಲಿ ವೈಭವ್…

Read More

ಕೈ ಕೊಟ್ಟ ಮುಂಗಾರು: ಬೆಳೆದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು – Kannada News | Deficient monsoon rains in Karnataka: Farmers Use Tanker Water For Crops

ಬೆಳಗಾವಿ/ಬೀದರ್, (ಜೂನ್ 20): ಕರ್ನಾಟಕದ ಹಲವು ಭಾಗಗಳಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಮಳೆ ಇದೀಗ ಕೈಕೊಟ್ಟಿದ್ದು, ಮುಂಗಾರು ಮಳೆ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ.ಕೆಲ ಕಡೆ ಆರಂಭಿಕ ಮುಂಗಾರು ಹದಬರಿತವಾಗಿ ಆದ ಪರಿಣಾಮ ರೈತರು ಬಿತ್ತನೆ ಮಾಡಿದ್ದಾರೆ.ಇನ್ನೂ ಕೆಲ ಕಡೆ ಮಳೆಯಾಗದ ಕಾರಣ ಬಿತ್ತನೆಯೇ ಆಗಿಲ್ಲ.ಬಿತ್ತನೆ ಮಾಡಿದ ರೈತರು ಮಳೆಯಾಗದ ಹಿನ್ನೆಲೆ ಬೆಳೆ ಒಣಗಿ ನಷ್ಟ ಅನುಭವಿಸುತ್ತಿದ್ದರೆ, ಇನ್ನು ಅದೆಷ್ಟೊ ರೈತರು ಬಿತ್ತನೆ ಮಾಡದೆ ಆಕಾಶ ನೋಡುವಂತಾಗಿದೆ. ವರುಣ ಕೃಪೆತೋರದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು…

Read More

ನನ್ನೊಂದಿಗೆ ಫ್ರೆಂಡ್ ಆಗಲು ಮೆಲೋನಿ ಹಾತೊರೆಯುತ್ತಿದ್ದಾರೆ! ಮತ್ತೆ ಹಳೇ ರಾಗ ಹಾಡಿದ ಟ್ರಂಪ್ – Kannada News | Donald Trump repeats claim Giorgia Meloni asked over and over for selfie with him at G7 Summit

ವಾಷಿಂಗ್ಟನ್, ಜೂನ್ 20: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಜಿ7 ಶೃಂಗಸಭೆಯಲ್ಲಿ ಮೆಲೋನಿ ಅವರು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತೆ ಮತ್ತೆ ನನ್ನ ಬೆನ್ನ ಹಿಂದೆ ಬಿದ್ದಿದ್ದರು ಎಂದು ಟ್ರಂಪ್ ಹಳೆಯ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, “ಮೆಲೋನಿ ನನ್ನೊಂದಿಗೆ ಮತ್ತೆ ಸ್ನೇಹ ಬೆಳೆಸಲು ಹಂಬಲಿಸುತ್ತಿದ್ದಾರೆ” ಎಂದೂ ಟ್ರಂಪ್ ಲೇವಡಿ ಮಾಡಿದ್ದಾರೆ. ನಿನ್ನೆ ಕೂಡ ಟ್ರಂಪ್ ಇದೇ…

Read More

ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ವ್ಯತ್ಯಯ, ಆಸ್ಪತ್ರೆಗೆ ದಾಖಲು – Kannada News | Actor Vinod Prabhakar hospitalized due BP fluctuation

‘ಬಲರಾಮನ ದಿನಗಳು’ ಸಿನಿಮಾದ ಪ್ರಚಾರದಲ್ಲಿ ನಿರತವಾಗಿದ್ದ ನಟ ವಿನೋದ್ ಪ್ರಭಾಕರ್ (Vinod Prabhakar) ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡು ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್ ಪ್ರಭಾಕರ್ ಅವರ ರಕ್ತದೊತ್ತಡದಲ್ಲಿ ಏರು-ಪೇರು ಕಂಡು ಬಂದಿದ್ದು ಅವರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ವೈದ್ಯರು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾ ಪ್ರಚಾರಕ್ಕಾಗಿ ತೆರಳುತ್ತಿದ್ದಾಗ ವಿನೋದ್ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದು ಕೂಡಲೇ ಅವರನ್ನು ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದನ್ನು ದಾಖಲಿಸಲಾಗಿದೆ. ವಿನೋದ್…

Read More

ಕ್ಯಾಪ್ಸಿಕಂ ತಿನ್ನಲು ಇಷ್ಟವಿಲ್ಲವೇ? ಇದರ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ತಿನ್ನುತ್ತೀರಿ! – Kannada News | How Eating Capsicum Daily Can Improve Your Health

ಕ್ಯಾಪ್ಸಿಕಂ (Capsicum) ಕೇವಲ ಅಡುಗೆಯ ರುಚಿ ಹೆಚ್ಚಿಸುವ ತರಕಾರಿ ಮಾತ್ರವಲ್ಲ, ಅನೇಕ ಪೋಷಕಾಂಶಗಳ ಭಂಡಾರವೂ ಆಗಿದೆ. ವಿಟಮಿನ್‌, ಖನಿಜಾಂಶಗಳು ಮತ್ತು ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕ್ಯಾಪ್ಸಿಕಮ್ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಕ್ಯಾಪ್ಸಿಕಂ ಅಂದ್ರೆ ಅಷ್ಟಕ್ಕೇ ಅಷ್ಟೇ. ಇನ್ನು ಕೆಲವರಿಗೆ ಅದರಿಂದ ಬರುವ ಪರಿಮಳ ವಾಕರಿಕೆ ಹುಟ್ಟಿಸುತ್ತದೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು…

Read More

NEET 2026: ನೀಟ್ ಯುಜಿ ಮರುಪರೀಕ್ಷೆ ಬರೆಯಲಿದ್ದಾರೆ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು; ಸಿಸಿಟಿವಿ ಕಣ್ಗಾವಲು, ಹೈ-ಸೆಕ್ಯುರಿಟಿ – Kannada News | NEET UG Re exam preparations CCTV surveillance security tightened for over 22 lakh candidates

ನವದೆಹಲಿ, ಜೂನ್ 20: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ NEET-UG ಮರುಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಕೇಂದ್ರ ಸರ್ಕಾರ ಹಿಂದೆಂದೂ ಕಾಣದ ರೀತಿಯಲ್ಲಿ ಅಭೂತಪೂರ್ವ ಬಿಗಿ ಭದ್ರತೆಯನ್ನು ಕೈಗೊಂಡಿದೆ. 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ಬರೆಯಲಿರುವ ಈ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಪೇಪರ್ ಲೀಕ್ ಆಗದಂತೆ ತಡೆಯಲು ಸಿಸಿಟಿವಿ ಲೈವ್ ಕಣ್ಗಾವಲು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಪೊಲೀಸ್ ಬೆಂಗಾವಲು ಸೇರಿದಂತೆ ಹೈ-ಟೆಕ್ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪರೀಕ್ಷಾ…

Read More