Headlines

nagaraj11081993

ಹೈದರಾಬಾದ್​​ಗೆ ಮರಳಿ ಬರುತ್ತಿದೆ ‘ಐಮ್ಯಾಕ್ಸ್’, ‘ವಾರಣಾಸಿ’ಯೇ ಕಾರಣ

ಐಮ್ಯಾಕ್ಸ್, ವಿಶ್ವದ ಅತ್ಯುತ್ತಮ ಸಿನಿಮಾ ಸ್ಕ್ರೀನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಧಿಕೃತ ಐಮ್ಯಾಕ್ಸ್ (IMAX) ಸ್ಕ್ರೀನ್​​ನಲ್ಲಿ ಸಿನಿಮಾ ನೋಡಿದರಷ್ಟೆ ನಿಜವಾದ ಸಿನಿಮಾ ಅನುಭವ ಪಡೆದಂತೆ ಎಂಬ ನಂಬಿಕೆ ಇದೆ. ಹಾಲಿವುಡ್​​ನ ಪರಮೋಚ್ಛ ನಿರ್ದೇಶಕರುಗಳು ನಿರ್ದಿಷ್ಟವಾಗಿ ಐಮ್ಯಾಕ್ಸ್ ಸ್ಕ್ರೀನ್​​ಗಳಿಗೆಂದೇ ಸಿನಿಮಾ ಮಾಡುತ್ತಾರೆ. ಇದೀಗ ರಾಜಮೌಳಿ ಸಹ ಐಮ್ಯಾಕ್ಸ್​ ಸ್ಕ್ರೀನ್​​ನ ಅನುಪಾತದಲ್ಲಿಯೇ ‘ವಾರಣಾಸಿ’ (Varanasi) ಸಿನಿಮಾ ಮಾಡಿದ್ದಾರೆ. ಆದರೆ ಅದನ್ನು ಪ್ರದರ್ಶಿಸಲು ತೆಲುಗು ರಾಜ್ಯಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್​​ಗಳು ಇರಲಿಲ್ಲ. ಇದೀಗ ಮೊದಲ ಬಾರಿಗೆ ಹೈದರಾಬಾದ್​​ಗೆ ಐಮ್ಯಾಕ್ಸ್ ಸ್ಕ್ರೀನ್ ಬರುತ್ತಿದೆ. ಐಮ್ಯಾಕ್ಸ್…

Read More

ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ – Kannada News

ಶ್ರವಣ್ ಕುಮಾರ್ ವಿಶ್ವಕರ್ಮImage Credit source: Instagram @Sharvankrvishwakarma ಕಾನಪುರದ ರಸ್ತೆಗಳಲ್ಲಿ ಟೆಂಪೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬರು, ಇಂದು ದೇಶದ ಅತ್ಯಂತ ಕಠಿಣ ಮತ್ತು ಕೋಟ್ಯಂತರ ರೂಪಾಯಿ ಬಂಡವಾಳ ಬೇಡುವ ವಿಮಾನಯಾನ (Aviation) ಕ್ಷೇತ್ರಕ್ಕೆ ಕಾಲಿಟ್ಟು ಸ್ವಂತ ಏರ್‌ಲೈನ್ಸ್ ಕಂಪನಿ ಆರಂಭಿಸುತ್ತಿದ್ದಾರೆ ಎಂದರೆ ಅದು ಸಿನಿಮಾ ಕಥೆಯಂತೆ ಕೇಳಿಸಬಹುದು. ಆದರೆ ಇದು 35 ವರ್ಷದ ಶ್ರವಣ್ ಕುಮಾರ್ ವಿಶ್ವಕರ್ಮ (Shravan Kumar Vishwakarma) ಅವರ ನಿಜ ಜೀವನದ ರೋಮಾಂಚಕ ಯಶೋಗಾಥೆ! ಅವರು ಸ್ಥಾಪಿಸಿರುವ ‘ಶಂಖ್ ಏರ್’ (Shankh…

Read More

ಟೆಸ್ಟ್​ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ..! – Kannada News

ಟೆಸ್ಟ್ ಕ್ರಿಕೆಟ್‌ನಲ್ಲಿ ಮಂದಬೆಳಕಿನ ಕಾರಣದಿಂದ ಪಂದ್ಯಗಳು ಬೇಗನೆ ಸ್ಥಗಿತಗೊಳ್ಳುವುದು ಮತ್ತು ಪ್ರೇಕ್ಷಕರು ನಿರಾಶರಾಗುವುದು ಹಲವು ವರ್ಷಗಳ ಹಳೆಯ ಸಮಸ್ಯೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಐಸಿಸಿ ಇದೀಗ ಮಹತ್ವದ ಹೆಜ್ಜೆಯನ್ನಟ್ಟಿದೆ. ಅದರಂತೆ ಇನ್ಮುಂದೆ ಮಂದ ಬೆಳಕಿನ ವೇಳೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ ಪಿಂಕ್ ಬಾಲ್ ಬಳಸಲು ಅನುಮತಿ ನೀಡಲಾಗಿದೆ. ಡೇ ಟೆಸ್ಟ್ ಪಂದ್ಯದ ದಿನದಾಟದ ಅಂತ್ಯದ ವೇಳೆ ಮಂದ ಬೆಳಕಿನ ಸಮಸ್ಯೆ ಎದುರಾಗುವುದು ಸಾಮಾನ್ಯ. ಸಂಜೆ ವೇಳೆ ಕತ್ತಲಾರಂಭಿಸಿದರೆ ಇಲ್ಲಾ ಕಾರ್ಮೋಡ ಕವಿದಾಗ ಫ್ಲಡ್​…

Read More

87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ – Kannada News

ನವದೆಹಲಿ, ಜೂನ್ 02: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ಬಂದು ಹೋಗುತ್ತವೆ. ಆದರೆ, ಕೆಲವು ವಿಡಿಯೋಗಳು ಹೃದಯಕ್ಕೆ ಹತ್ತಿರವಾಗಿ, ಸಂಬಂಧಗಳ ನಿಜವಾದ ಮೌಲ್ಯವನ್ನು ನೆನಪಿಸುತ್ತವೆ. ಅಂತಹದೇ ಒಂದು ಅಪರೂಪದ ಹಾಗೂ ಭಾವುಕ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಜನರ ಮನ ಗೆದ್ದಿದೆ. 87 ವರ್ಷದ ಅಜ್ಜಿ(Grand Mother)ಯೊಬ್ಬರು ತಮ್ಮ ಜೀವಿತಾವಧಿಯಲ್ಲೇ ಮೊದಲ ಬಾರಿಗೆ ಬೀಚ್‌(Beach)ಗೆ ಭೇಟಿ ನೀಡಿ ಆನಂದಿಸುತ್ತಿರುವ ದೃಶ್ಯ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ‘ಹರ್ಷೆ ಇನೆನಿ’ ಎಂಬ ಕಂಟೆಂಟ್ ಕ್ರಿಯೇಟರ್ ಈ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ….

Read More

Kuja in Vrishabha Rashi: ಜೂನ್‌ನಲ್ಲಿ ಕುಜ ವೃಷಭ ರಾಶಿಯಲ್ಲಿ ಸಂಚಾರ; 12ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ? – Kannada News

ಕುಜ ವೃಷಭ ರಾಶಿಯಲ್ಲಿ ಸಂಚಾರImage Credit source: Pinterest ಕುಜ ಗ್ರಹವು ಜೂನ್ ತಿಂಗಳಿನಲ್ಲಿ ವೃಷಭ ರಾಶಿಯಲ್ಲಿ ಸಂಚರಿಸುತ್ತಾ ಶುಕ್ರನ ದ್ರೇಕ್ಕಾಣ, ಚಂದ್ರನ ಹೋರೆ, ಗುರುವಿನ ನವಾಂಶ, ಬುಧನ ತ್ರಿಂಶಾಂಶ ಮತ್ತು ಚಂದ್ರನ ದ್ವಾದಶಾಂಶದಲ್ಲಿ ಸ್ಥಿತನಾಗಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ಫಲಗಳನ್ನು ನೀಡುತ್ತದೆ. ​ಸ್ಥಿರ ಹಾಗೂ ಭೂತತ್ವದ ವೃಷಭ ರಾಶಿಯಲ್ಲಿ ಅಗ್ನಿತತ್ವದ ಕುಜನಿರುವುದು ಸಾಮಾನ್ಯವಾಗಿ ನಿಧಾನಗತಿಯ ಆದರೆ ದೃಢವಾದ ಪ್ರಯತ್ನಗಳನ್ನು ಸೂಚಿಸುತ್ತದೆ. ಇಲ್ಲಿ ಚಂದ್ರ, ಗುರು, ಶುಕ್ರರ ಪ್ರಭಾವವು ಹೆಚ್ಚಿರುವುದರಿಂದ ಕುಜನ ತೀಕ್ಷ್ಣತೆ ಮತ್ತು…

Read More

ಒಂದೇ ಸಿನಿಮಾ ಮಾಡಿದ ನಿರ್ದೇಶಕನಿಗೆ ಚಾನ್ಸ್ ಕೊಟ್ಟ ರಜನಿಕಾಂತ್-ಕಮಲ್ – Kannada News

ಸೂಪರ್ ಸ್ಟಾರ್ ರಜನಿಕಾಂತ್ ಅವರ (Rajinikanth) ಮುಂದಿನ ಬಹುನಿರೀಕ್ಷಿತ ಚಿತ್ರ ‘ತಲೈವರ್ 173’ ನಿರ್ದೇಶಕರು ಯಾರು ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಸಿನಿರಂಗದಲ್ಲಿ ಭಾರಿ ಚರ್ಚೆ ಆಗಿತ್ತು. ಹಲವು ದೊಡ್ಡ ನಿರ್ದೇಶಕರ ಹೆಸರುಗಳು ಈ ಪ್ರಾಜೆಕ್ಟ್ ಜೊತೆ ಕೇಳಿಬರುತ್ತಿದ್ದವು. ಆದರೆ, ಈಗ ಈ ಎಲ್ಲಾ ಚರ್ಚೆ ಮತ್ತು ಸಸ್ಪೆನ್ಸ್‌ಗಳಿಗೆ ಚಿತ್ರತಂಡ ಅಧಿಕೃತವಾಗಿ ತೆರೆ ಎಳೆದಿದ್ದು, ಚಿತ್ರದ ಹೊಸ ಸಾರಥಿಯನ್ನು ಅದ್ಧೂರಿಯಾಗಿ ಪರಿಚಯಿಸಿದೆ. ರಜನಿಕಾಂತ್ ಅವರ 173ನೇ ಸಿನಿಮಾವನ್ನು ಕಮಲ್ ಹಾಸನ್ ಅವರು ‘ರಾಜ್ ಕಮಲ್ ಫಿಲ್ಮ್ಸ್’…

Read More

ಐಸಿಸಿಯಿಂದ ಕ್ರಿಕೆಟ್ ಕೆನಡಾ ಸದಸ್ಯತ್ವ ಅಮಾನತು! – Kannada News

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ಕೆನಡಾ (Cricket Canada) ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಕೆನಡಾ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ವೈಫಲ್ಯಗಳು, ಭ್ರಷ್ಟಾಚಾರದ ಆರೋಪಗಳು ಹಾಗೂ ನಿಯಮಾವಳಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಬೋರ್ಡ್ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಮೂಲಕ ಕೆನಡಾ ಕ್ರಿಕೆಟ್ ಮಂಡಳಿಯನ್ನು ಅಮಾನಲ್ಲಿಡಲಾಗಿದೆ. ಇದಕ್ಕೆ ಐಸಿಸಿ ನೀಡಿರುವ ಕಾರಣಗಳು ಈ ಕೆಳಗಿನಂತಿವೆ… ಫಿಕ್ಸಿಂಗ್ ಆರೋಪ: ಕೆನಡಾದ…

Read More

ಡಿಕೆ ಶಿವಕುಮಾರ್ ಸಂಪುಟಕ್ಕೆ ಹೈಕಮಾಂಡ್‌ನಿಂದ ‘ಏಜ್ ಬೇಸ್ಡ್ ಫಾರ್ಮುಲಾ’: ಸಚಿವಾಕಾಂಕ್ಷಿಗಳಲ್ಲಿ ಢವಢವ – Kannada News

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್Image Credit source: tv9 ನವದೆಹಲಿ, ಜೂನ್ 2: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರ ಸ್ವೀಕರಿಸಲಿರುವ ಬೆನ್ನಲ್ಲೇ, ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಹಂತಕ್ಕೆ ತಲುಪಿದೆ. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಂತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಪ್ರತ್ಯೇಕ ಪಟ್ಟಿ ನೀಡಿ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ದಿಢೀರ್ ಬಿಗ್ ಶಾಕ್ ನೀಡಿದೆ. ಸಂಪುಟದಲ್ಲಿ ಯುವಕರು ಮತ್ತು ಹಿರಿಯ…

Read More

ಗ್ರಾಹಕರಿಗೆ ಗುಡ್ ನ್ಯೂಸ್: ಬೆಂಗಳೂರಿನ ಹೋಟೆಲ್‌ಗಳಲ್ಲಿ ಸದ್ಯಕ್ಕೆ ತಿಂಡಿ, ಊಟದ ಬೆಲೆ ಹೆಚ್ಚಳವಿಲ್ಲ! – Kannada News

ಬೆಂಗಳೂರಿನ ಹೋಟೆಲ್‌ಗಳಲ್ಲಿ ಸದ್ಯಕ್ಕೆ ತಿಂಡಿ, ಊಟದ ಬೆಲೆ ಹೆಚ್ಚಳವಿಲ್ಲ! Image Credit source: gettyimages.com ಬೆಂಗಳೂರು, ಜೂನ್ 02: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದರೂ, ಸಿಲಿಕಾನ್ ಸಿಟಿ ಬೆಂಗಳೂರಿನ ಗ್ರಾಹಕರಿಗೆ ಸದ್ಯಕ್ಕೆ ಯಾವುದೇ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ. ವಾಣಿಜ್ಯ ಸಿಲಿಂಡರ್ ದರ ಹೆಚ್ಚಳವಾಗಿದ್ದರೂ ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಹೋಟೆಲ್‌ಗಳ ಮೆನು ದರವನ್ನು ಸದ್ಯಕ್ಕೆ ಪರಿಷ್ಕರಿಸದಿರಲು ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಮುಖ್ಯಾಂಶಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾದರೂ…

Read More

ನಾನು, ಎಂಜಿಆರ್​ ಗಿಂತಲೂ ಗ್ರೇಟ್ ಎಂದರೇ ವಿಜಯ್: ಹೇಳಿದ್ದೇನು?

ವಿಜಯ್ (Vijay) ತಮಿಳುನಾಡಿನ ಸಿಎಂ ಆಗಿ ಇತಿಹಾಸ ಬರೆದಿದ್ದಾರೆ. ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಅವರಿಗೆ ವಿಜಯ್ ಧಕ್ಕಿದೆ. ಸಿಎಂ ಆದಬಳಿಕವೂ ಕೆಲ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಂಡು ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದಾರೆ. ವಿಜಯ್ ತಮ್ಮ ವಿನಯತೆ, ಗಾಂಭೀರ್ಯತೆಯಿಂದಲೂ ಗಮನ ಸೆಳೆಯುತ್ತಿದ್ದಾರೆ. ಇದೆಲ್ಲ ಇರುವಾಗ ಇದೀಗ ವಿಜಯ್ ನೀಡಿರುವ ಹೇಳಿಕೆ ಖುದ್ದು ಅವರ ಅಭಿಮಾನಿಗಳಿಗೇ ಇರುಸು-ಮುರುಸು ಉಂಟು ಮಾಡಿದೆ. ವಿನಯದಿಂದ ವರ್ತಿಸುವ ವಿಜಯ್, ತಮ್ಮನ್ನು ತಮಿಳು ಚಿತ್ರರಂಗದ ದಿಗ್ಗಜ, ಎಂಜಿಆರ್​​ ಜೊತೆಗೆ ಹೋಲಿಸಿಕೊಂಡಿರುವುದು ಮಾತ್ರವಲ್ಲ, ಪರೋಕ್ಷವಾಗಿ ತಾವು ಎಂಜಿಆರ್​​ಗಿಂತಲೂ ಗ್ರೇಟ್ ಎಂದಿದ್ದಾರೆ….

Read More