All posts by nagaraj11081993

ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ – Kannada News | PM Modis Call for Economic Patriotism Sees Sharp Drop in Bengaluru Gold and Fuel Consumption

ಬೆಂಗಳೂರು, ಮೇ 17: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತಾಸಕ್ತಿ ಕಾಪಾಡಲು ನೀಡಿರುವ ಕರೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ ಮತ್ತು ಇಂಧನ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟವು ಶೇಕಡ 50ರಷ್ಟು ಕಡಿಮೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಸಹ ಕೊಂಚ ಇಳಿಕೆಯನ್ನು ಕಂಡಿದೆ. ಬಂಕ್‌ಗಳಲ್ಲಿ ಪ್ರತಿದಿನ 150 ರಿಂದ 250 ಲೀಟರ್ ಇಂಧನ ಮಾರಾಟ ಕಡಿಮೆಯಾಗಿದ್ದು, ನಾಗರಿಕರು ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಮೆಟ್ರೋ ಮತ್ತು ಸಾರಿಗೆ ಬಸ್‌ಗಳತ್ತ ಮುಖ ಮಾಡಿದ್ದಾರೆ. ಆಭರಣ ಪ್ರಿಯರು ಸಹ ಚಿನ್ನಾಭರಣ ಖರೀದಿಯನ್ನು ಕಡಿಮೆ ಮಾಡಿಕೊಂಡಿದ್ದು, ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಮದುವೆ ಸೇರಿದಂತೆ ಅನಿವಾರ್ಯ ಕಾರ್ಯಕ್ರಮಗಳಿಗಾಗಿ ತಾಳಿ ಬೊಟ್ಟು, ಉಂಗುರಗಳಂತಹ ಅಗತ್ಯ ಚಿನ್ನಾಭರಣಗಳನ್ನು ಮಾತ್ರ ಜನರು ಖರೀದಿಸುತ್ತಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿ ಭಾವುಕರಾದ ಶಾಸಕ ರಘುಮೂರ್ತಿ!

ಚಿತ್ರದುರ್ಗ, ಮೇ 17: ಚಳ್ಳಕೆರೆಯಲ್ಲಿ ನಡೆದ ದಿವಂಗತ ಶಾಸಕ ಡಿ. ಸುಧಾಕರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಹಾಲಿ ಶಾಸಕ ಟಿ. ರಘುಮೂರ್ತಿ ಭಾವುಕರಾಗಿ ಮಾತನಾಡಿದ್ದಾರೆ. ಡಿ. ಸುಧಾಕರ್ ಅವರೊಂದಿಗಿನ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಅವರಿಬ್ಬರ ನಡುವೆ ಸಹೋದರ ಸಂಬಂಧವಿತ್ತು ಎಂದು ರಘುಮೂರ್ತಿ ಸ್ಮರಿಸಿಕೊಂಡರು. 2008ರಲ್ಲಿ ತಾವು ಶಾಸಕರಾಗಲು ಬಂದ ದಿನಗಳಿಂದ ಸುಧಾಕರ್ ಅವರೊಂದಿಗಿನ ಸಂಪರ್ಕವನ್ನು ನೆನಪಿಸಿಕೊಂಡರು.

 

 

Source link

ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್; ವಿಡಿಯೋ ನೋಡಿ – Kannada News | Actress Rachita Ram offers Koragajja Daiva Kola Seva at Bantwal

ನಟಿ ರಚಿತಾ ರಾಮ್ (Rachita Ram) ಅವರು ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷಗಳು ಕಳೆದಿವೆ. ಈಗಲೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ರಚಿತಾ ಅವರು ದೈವ ಭಕ್ತೆ ಕೂಡ ಹೌದು. ಈಗ ಅವರು ಕೊರಗಜ್ಜ ದೈವದ ಕೋಲ ಸೇವೆಯಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ (Koragajja) ಸನ್ನಿಧಿಯಲ್ಲಿ ರಚಿತಾ ರಾಮ್ ಅವರು ಕೋಲ ಸೇವೆ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ಕೋಲ ಸೇವೆಯಲ್ಲಿ ಭಾಗಿಯಾದ ರಚಿತಾ ರಾಮ್ ಅವರ ವಿಡಿಯೋ ಲಭ್ಯವಾಗಿದೆ. ಧ್ರುವ ಸರ್ಜಾ ಜೊತೆ ‘ಕ್ರಿಮಿನಲ್’ ಹಾಗೂ ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ಸಿನಿಮಾಗಳಲ್ಲಿ ರಚಿತಾ ರಾಮ್ ಅವರು ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಅವರ ಹೊಸ ಸಿನಿಮಾಗಳು ಘೋಷಣೆ ಆಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿರಾಟ್ ಕೊಹ್ಲಿ ಯಾರಿಗೆ ಏನು ಸಾಬೀತುಪಡಿಸಬೇಕು? ಅಶ್ವಿನ್ ನೇರ ಪ್ರಶ್ನೆ! – Kannada News | Nothing Left to Prove: Ashwin Backs Virat Kohli

ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ದಿಢೀರ್ ನಿವೃತ್ತಿಯ ಹಿಂದಿನ ಅಸಲಿ ಕಾರಣ ಈಗ ಬಯಲಾಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿ ಪಂದ್ಯದ ಬಳಿಕವೂ ಸಾಮರ್ಥ್ಯ ಸಾಬೀತುಪಡಿಸಬೇಕಾದ ‘ವಿಷಕಾರಿ ವಾತಾವರಣ’ದಿಂದ ಬೇಸತ್ತು ತಾವು ರೆಡ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾಗಿ ಕೊಹ್ಲಿ ನೀಡಿದ್ದ ಸ್ಪೋಟಕ ಹೇಳಿಕೆಯನ್ನು ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ.

ಭಾರತಕ್ಕೆ ಅಸಂಖ್ಯಾತ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಕೊಹ್ಲಿ, ಇನ್ನು ಯಾರಿಗಾಗಿ ತನ್ನ ಯೋಗ್ಯತೆ ಸಾಬೀತುಪಡಿಸಬೇಕು?” ಎಂದು ಪ್ರಶ್ನಿಸಿರುವ ಅಶ್ವಿನ್, ವಿಮರ್ಶಕರ ಧೋರಣೆಗೆ ಖಡಕ್ ಚಾಟಿಯೇಟು ನೀಡಿದ್ದಾರೆ. ಟೀಕಾಕಾರರ ಬಾಯಿ ಮುಚ್ಚಿಸಿದ ಇಬ್ಬರು ದಿಗ್ಗಜರ ಈ ರೋಚಕ ಒಡನಾಟದ ಸಂಪೂರ್ಣ ವಿವರ ಇಲ್ಲಿದೆ.

ವಿಷಕಾರಿ ವಾತಾವರಣ!

ತಮ್ಮ ನಿವೃತ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ವಿರಾಟ್ ಕೊಹ್ಲಿ, “ನಾನು ಪ್ರತಿ ಪಂದ್ಯ ಆಡಿದ ನಂತರವೂ ನನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಬೇಕಾದ ವಾತಾವರಣ ಇತ್ತು. ಇಷ್ಟು ವರ್ಷ ದೇಶಕ್ಕಾಗಿ ಆಡಿದ ಮೇಲೂ ಈ ರೀತಿ ನಿರಂತರವಾಗಿ ಕಠಿಣ ಪರೀಕ್ಷೆಗೆ ಒಳಗಾಗುವುದು ನನಗೊಂದು ವಿಷಕಾರಿ ವಾತಾವರಣದಂತೆ ಭಾಸವಾಯಿತು. ಅದಕ್ಕಾಗಿಯೇ ನಾನು ರೆಡ್-ಬಾಲ್ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿದೆ” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು. 123 ಟೆಸ್ಟ್ ಪಂದ್ಯಗಳಿಂದ 9,230 ರನ್ ಗಳಿಸಿರುವ ರನ್ ಮಷಿನ್ ಕೊಹ್ಲಿ ಅವರ ಈ ಮಾತುಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಅಶ್ವಿನ್ ಖಡಕ್ ಪ್ರಶ್ನೆ!

ವಿರಾಟ್ ಕೊಹ್ಲಿಯ ಈ ಸ್ಪೋಟಕ ಹೇಳಿಕೆಗೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಧ್ವನಿಗೂಡಿಸಿರುವ ರವಿಚಂದ್ರನ್ ಅಶ್ವಿನ್, ವಿರಾಟ್ ನಿರ್ಧಾರವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಕೊಹ್ಲಿ ಯಾರಿಗೆ ಸಾಬೀತುಪಡಿಸಬೇಕು ಎಂದು ನೇರ ಪ್ರಶ್ನೆ ಮಾಡಿದ್ದಾರೆ.

ತನ್ನ ಜೀವಮಾನದಲ್ಲಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ, ಯಾರಿಗೆ ಏನನ್ನು ಸಾಬೀತುಪಡಿಸಬೇಕು ಎಂಬುದು ಗೊತ್ತಾಗಬೇಕು. ದಶಕಕ್ಕೂ ಹೆಚ್ಚು ಕಾಲ ದೇಶಕ್ಕಾಗಿ ಆಡಿ, ಸಾವಿರಾರು ರನ್ ಹಾಗೂ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಆಟಗಾರನ ಸಾಮರ್ಥ್ಯಕ್ಕೆ ಆತನ ಅಂಕಿ-ಅಂಶಗಳೇ ಅತಿ ದೊಡ್ಡ ಪುರಾವೆಯಾಗಿರುತ್ತವೆ.

ಇಷ್ಟು ಸಾಧನೆ ಮಾಡಿದ ಮೇಲೂ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ತಮ್ಮ ಯೋಗ್ಯತೆಯನ್ನು ಸಾಬೀತುಪಡಿಸಬೇಕಾಗಿ ಬಂದರೆ, ಅದು ವಿಮರ್ಶಕರ ಮತ್ತು ಈ ವ್ಯವಸ್ಥೆಯ ದೋಷವೇ ಹೊರತು ಆಟಗಾರನದ್ದಲ್ಲ ಎಂದು ಅಶ್ವಿನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  • ಯಾರಿಗೂ ಏನೂ ಸಾಬೀತುಪಡಿಸಬೇಕಾಗಿಲ್ಲ: “ಭಾರತ ತಂಡಕ್ಕೆ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಕೊಹ್ಲಿ ಅವರಂತಹ ಶ್ರೇಷ್ಠ ಆಟಗಾರ ಇನ್ನು ಯಾರ ಮುಂದೆ ತನ್ನ ಯೋಗ್ಯತೆಯನ್ನು ಸಾಬೀತುಪಡಿಸಬೇಕು? ಸಾರ್ವಜನಿಕರು ಮತ್ತು ವಿಮರ್ಶಕರು ನೀಡುವ ಈ ನಿರಂತರ ಒತ್ತಡ ಅರ್ಥಹೀನ” ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
  • ಪ್ರಬುದ್ಧತೆಯ ಸಂಕೇತ: “ಒಬ್ಬ ಕ್ರೀಡಾಪಟು ಹೊರಗಿನ ಜಗತ್ತಿನ ಕಹಿ ವಿಮರ್ಶೆಗಳೊಂದಿಗೆ ಹೋರಾಡುವುದನ್ನು ನಿಲ್ಲಿಸಿ, ಕೇವಲ ತನ್ನ ಆಂತರಿಕ ನೆಮ್ಮದಿಯತ್ತ ಗಮನ ಹರಿಸಲು ಮುಂದಾಗುತ್ತಾನೋ, ಅದೇ ಆತನ ನಿಜವಾದ ಮಾನಸಿಕ ಪ್ರಬುದ್ಧತೆ. ಕೊಹ್ಲಿ ಈಗ ಆ ಹಂತದಲ್ಲಿದ್ದಾರೆ” ಎಂದು ಅಶ್ವಿನ್ ಶ್ಲಾಘಿಸಿದ್ದಾರೆ.
  • ನನ್ನ ಪರಿಸ್ಥಿತಿಯೂ ಇದೇ ಆಗಿತ್ತು: ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅಶ್ವಿನ್, ತಮಗೂ ಇಂತಹದ್ದೇ ಆಲೋಚನೆಗಳು ಬಂದಿದ್ದವು ಎಂದಿದ್ದಾರೆ. ಯಾವುದೇ ಪಶ್ಚಾತ್ತಾಪವಿಲ್ಲದೆ, ಯೋಚಿಸಿಯೇ ತಾವು ಕೂಡ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ಅಂದರೆ ಇಲ್ಲಿ ವಿರಾಟ್ ಕೊಹ್ಲಿಯಂತೆ ಅಶ್ವಿನ್ ಅವರನ್ನು ಕೂಡ ಟೀಮ್ ಮ್ಯಾನೇಜ್ಮೆಂಟ್​ ಗುರಿಯಾಗಿಸಿದ್ದಾರಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ಸರಣಿಯ ಮಧ್ಯೆದಲ್ಲೇ ನಿವೃತ್ತಿ ಘೋಷಿಸಿದ್ದರು. ವಿರಾಟ್ ಕೊಹ್ಲಿ ಸರಣಿ ಬಳಿಕ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಅಂದರೆ ಇಬ್ಬರು ದಿಗ್ಗಜ ಆಟಗಾರರು ಆಸ್ಟ್ರೇಲಿಯಾ ಸರಣಿ ವೇಳೆ ಒತ್ತಡಕ್ಕೆ ಸಿಲುಕಿದ್ದು ದಿಟ. ಹೀಗಾಗಿಯೇ ಅಶ್ವಿನ್ ಕೂಡ ತಮಗೂ ಇಂತಹದ್ದೇ ಆಲೋಚನೆಗಳು ಬಂದಿದ್ದವು ಎಂದಿದ್ದಾರೆ.

ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ಮತ್ತು ಅಶ್ವಿನ್ ಅವರ ಈ ಮಾತುಗಳು ಕೇವಲ ನಿವೃತ್ತಿಯ ಬಗೆಗಿನ ಹೇಳಿಕೆಗಳಲ್ಲ. ಬದಲಿಗೆ, ಇದು ಆಧುನಿಕ ಕ್ರಿಕೆಟ್ ವಲಯದಲ್ಲಿ ಆಟಗಾರರ ಮೇಲೆ ಹೇರಲಾಗುವ ಅತಿಯಾದ ನಿರೀಕ್ಷೆ ಮತ್ತು ಒತ್ತಡದ ವಿರುದ್ಧದ ದನಿಯಾಗಿದೆ.

ಇದನ್ನೂ ಓದಿ: RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ!

ದಾಖಲೆಗಳ ಶಿಖರವನ್ನೇ ನಿರ್ಮಿಸಿದ ಮೇಲೂ ನಿರಂತರವಾಗಿ ಯೋಗ್ಯತೆ ಸಾಬೀತುಪಡಿಸಬೇಕಾದ ಅನಿವಾರ್ಯತೆ ಕ್ರಿಕೆಟ್‌ನ ವಾಣಿಜ್ಯೀಕರಣವನ್ನು ಎತ್ತಿ ತೋರಿಸುತ್ತದೆ. ಟೆಸ್ಟ್ ಕ್ರಿಕೆಟ್‌ನಿಂದ ಈ ಇಬ್ಬರು ದಿಗ್ಗಜರು ಹೊರನಡೆದಿರಬಹುದು, ಆದರೆ ಅವರು ಮೈದಾನದಲ್ಲಿ ಬಿಟ್ಟುಹೋಗಿರುವ ಪ್ರಬುದ್ಧ ಆಲೋಚನೆಗಳು ಭಾರತೀಯ ಕ್ರಿಕೆಟ್‌ನ ಮುಂದಿನ ತಲೆಮಾರಿಗೆ ಅತ್ಯಂತ ಮುಖ್ಯವಾದ ಪಠ್ಯವಾಗಲಿವೆ.

Source link

ನೂತನ ರೈಲಿಗೆ ಚಾಲನೆ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯ: ಸಚಿವ ವಿ. ಸೋಮಣ್ಣ ಹೇಳಿದ್ದೇನು? – Kannada News | Kannada Language Ignored at Bengaluru Mumbai Train Inauguration

ನೂತನ ರೈಲಿಗೆ ಚಾಲನೆ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯImage Credit source: Tv9 Kannada

ಬೆಂಗಳೂರು, ಮೇ 17: ಬೆಂಗಳೂರು-ಮುಂಬೈ ನಡುವೆ ಸಂಚಾರ ಮಾಡಲಿರುವ ಹೊಸ ಎಕ್ಸ್ಪ್ರೆಸ್ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೇ ನಿಲ್ದಾಣದಲ್ಲಿ ಇಂದು (ಮೇ 17) ಚಾಲನೆ ನೀಡಲಾಗಿದೆ. ದುರ್ದೈವ ಅಂದ್ರೆ ರೈಲ್ವೇ ಇಲಾಖೆಯ ಈ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯವಾಗಿತ್ತು. ಮುಖ್ಯ ವೇದಿಕೆಯಲ್ಲಿ ಹಾಕಿರುವ ಫ್ಲೆಕ್ಸ್​​ನಲ್ಲಿಇಂಗ್ಲಿಷ್​​ನಲ್ಲಿ ಮಾತ್ರ ನಾಮ ಫಲಕ ಹಾಕಲಾಗಿದ್ದು, ಕರ್ನಾಟಕದ ಸಂಸದ ವಿ.ಸೋಮಣ್ಣ ಅವರೇ ರೈಲ್ವೇ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದರೂ ಕನ್ನಡದ ಬಗ್ಗೆ ಇಷ್ಟು ನಿರ್ಲಕ್ಷ್ಯ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಮುಖ್ಯಾಂಶಗಳು

  • ಬೆಂಗಳೂರು-ಮುಂಬೈ ನಡುವೆ ಹೊಸ ಎಕ್ಸ್​​ಪ್ರೆಸ್​ ರೈಲಿಗೆ ಚಾಲನೆ
  • ರೈಲ್ವೇ ಇಲಾಖೆಯ ಈ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯ
  • ಬೇಕಂತಲೇ ಕನ್ನಡವನ್ನು ನಿರ್ಲಕ್ಷಿಸಿದರಾ ಹಿರಿಯ ಅಧಿಕಾರಿಗಳು?

ಕನ್ನಡ ಫೆಕ್ಸ್ ಹಾಕಲು ಹಿರಿಯ ಅಧಿಕಾರಿಗಳ ಅಡ್ಡಿ?

ಇನ್ನು ಕಾರ್ಯಕ್ರಮ ಸಂಬಂಧ ಕನ್ನಡದಲ್ಲಿ ಫ್ಲೆಕ್ಸ್​​ ಹಾಕಲು ಅಡ್ಡಿಪಡಿಸಿರೋದು ಇಲಾಖೆಯ ಹಿರಿಯ ಅಧಿಕಾರಿಗಳು ಎಂಬ ಮಾತುಗಳೂ ಕೇಳಿಬಂದಿವೆ. ರಾಜ್ಯದ ರೈಲ್ವೆ ಅಧಿಕಾರಿಗಳು ಸ್ಥಳೀಯ ಭಾಷೆಯಾದ ಕನ್ನಡದಲ್ಲಿಯೇ ಫ್ಲೆಕ್ಸ್​ ಹಾಕಲು ಮುಂದಾಗಿದ್ದರು. ಆದರೆ ಹಿರಿಯ ರೈಲ್ವೇ ಅಧಿಕಾರಿಗಳು ಈ ಫ್ಲೆಕ್ಸ್​​ ಅಳವಡಿಸಲು ಅವಕಾಶ ನೀಡಿಲ್ಲವಂತೆ. ಹೀಗಾಗಿ ಕನ್ನಡದಲ್ಲಿ ಪ್ರಿಂಟ್​​ ಆಗಿದ್ದ ಫ್ಲೆಕ್ಸ್​​ಗಳನ್ನು ವೇದಿಕೆಯ ಹಿಂಭಾಗದಲ್ಲಿ ಇಟ್ಟಿರುವುದು ಕಂಡುಬಂದಿದೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​; ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ

ಸಚಿವ ಸೋಮಣ್ಣ ಏನಂದ್ರು?

ಇನ್ನು ಕಾರ್ಯಕ್ರಮದ ಫ್ಲೆಕ್ಸ್​​ನಲ್ಲಿ ಕನ್ನಡದಲ್ಲಿ ಒಂದೇ ಒಂದು ಪದ ಇಲ್ಲದಿರುವ ಬಗ್ಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದು ದಿಢೀರ್​​ ಕಾರ್ಯಕ್ರಮ. ನಿನ್ನೆ ನಾನು ಬೇರೆ ಕಾರ್ಯಕ್ರಮದಲ್ಲಿ ಇದ್ದೆ. ನಾನು ಸಚಿವನಾದ ಮೇಲೆ ಕನ್ನಡಕ್ಕೆ ಆದ್ಯತೆ ಕೊಟ್ಟಿದ್ದೇನೆಯೋ ಇಲ್ಲವೋ ನೀವೇ ಹೇಳಿ. ಮುಂದೆ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rate: ಚಿನ್ನ, ಬೆಳ್ಳಿ ಬೆಲೆ ಸತತ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 17th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 17: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ವಾರಾಂತ್ಯದಲ್ಲಿ 290 ರೂಗಳಷ್ಟು ಬೆಲೆ ತಗ್ಗಿದೆ. ಈ ವಾರ ಬಂಗಾರದ ದರ (Gold Rate) ಗ್ರಾಮ್​ಗೆ ಹೆಚ್ಚೂಕಡಿಮೆ ಒಂದು ಸಾವಿರ ರೂಗಳಷ್ಟು ಇಳಿದಿರುವುದು ಗಮನಾರ್ಹ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಸತತ ಇಳಿಕೆ ಆಗುತ್ತಿದೆ. ಚಿನ್ನದಂತೆ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆಯಾಗಿದೆ. ಈ ವಾರ ಬಹುತೇಕ 30 ರೂಗಳಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,693 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,385 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,770 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,693 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,385 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,385 ರೂ
  • ಚೆನ್ನೈ: 14,750 ರೂ
  • ಮುಂಬೈ: 14,385 ರೂ
  • ದೆಹಲಿ: 14,400 ರೂ
  • ಕೋಲ್ಕತಾ: 14,385 ರೂ
  • ಕೇರಳ: 14,385 ರೂ
  • ಅಹ್ಮದಾಬಾದ್: 14,390 ರೂ
  • ಜೈಪುರ್: 14,400 ರೂ
  • ಲಕ್ನೋ: 14,400 ರೂ
  • ಭುವನೇಶ್ವರ್: 14,385 ರೂ

ಇದನ್ನೂ ಓದಿ: ಆಟೋ, ಟ್ಯಾಕ್ಸಿ​ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: CNG ದರ ಕೆಜಿಗೆ 1 ರೂ. ಹೆಚ್ಚಳ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 558 ರಿಂಗಿಟ್ (13,558 ರುಪಾಯಿ)
  • ದುಬೈ: 506.50 ಡಿರಾಮ್ (13,238 ರುಪಾಯಿ)
  • ಅಮೆರಿಕ: 142 ಡಾಲರ್ (13,632 ರುಪಾಯಿ)
  • ಸಿಂಗಾಪುರ: 180.70 ಸಿಂಗಾಪುರ್ ಡಾಲರ್ (13,546 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (13,273 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (13,175 ರುಪಾಯಿ)
  • ಓಮನ್: 53.70 ಒಮಾನಿ ರಿಯಾಲ್ (13,390 ರುಪಾಯಿ)
  • ಕುವೇತ್: 41.71 ಕುವೇತಿ ದಿನಾರ್ (13,070 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 200 ರೂ.ಗಾಗಿ ನಡೀತು ಕೊಲೆ! ತಾಯಿಗೇ ಚಾಕು ಇರಿದಿದ್ದವನಿಂದ ಮತ್ತೊಂದು ಹೇಯ ಕೃತ್ಯ – Kannada News | Karnataka Crime News: Tea Shop Owner Killed Over Rs 200; Ex BSF Soldier Murdered in Kalaburagi

ಕೇವಲ 200 ರೂ.ಗಾಗಿ ನಡೀತು ಕೊಲೆ! ತಾಯಿಗೇ ಚಾಕು ಇರಿದಿದ್ದವನಿಂದ ಮತ್ತೊಂದು ಹೇಯ ಕೃತ್ಯ

ಬೆಂಗಳೂರು, ಮೇ 17: ಸಮಾಜದಲ್ಲಿ ಹಳೆಯ ದ್ವೇಷಕ್ಕೆ, ರೋಷಕ್ಕೆ ಕೊಲೆ ನಡೆದ ಉದಾಹರಣೆಗಳಿವೆ. ಹೆಣ್ಣಿಗಾಗಿ, ಹಣಕ್ಕಾಗಿಯೂ ಕೊಲೆ, ಸುಲಿಗೆಗಳು ನಡೆಯುತ್ತವೆ. ಆದರೆ ಕೇವಲ 200 ರೂ. ಸಾಲ (Loan) ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ ಪ್ರಕರಣ ಇದೇ ಮೊದಲಿರಬಹುದು. ಹೌದು, ಟೀ ಅಂಗಡಿ ಮಾಲೀಕ ಬಾಕಿ ಇರುವ ಹಣ ನೀಡುವಂತೆ ಕೇಳಿದ ಕಾರಣಕ್ಕೇ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್​ನಲ್ಲಿ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಮುಖ್ಯಾಂಶಗಳು

  • ದೊಡ್ಡಬಳ್ಳಾಪುರದಲ್ಲಿ ಕೇವಲ 200 ರೂಪಾಯಿ ಸಾಲದ ಜಗಳಕ್ಕೆ ಟೀ ಮಾಲೀಕನ ಕೊಲೆಯಾಗಿದೆ.
  • ತಾಯಿಗೆ ಚಾಕು ಹಾಕಿದ್ದ ಹಳೇ ಆರೋಪಿ ಮುನಿಯಪ್ಪ ಈಗ ಮಂಜುನಾಥ್‌ನನ್ನು ಕೊಂದಿದ್ದಾನೆ.
  • ಕಲಬುರಗಿಯಲ್ಲಿ ಜಾಗದ ವಿವಾದಕ್ಕೆ ನಿವೃತ್ತ ಬಿಎಸ್‌ಎಫ್ ಸೈನಿಕ ರವಿಚಂದ್ರನ ಬರ್ಬರ ಹತ್ಯೆಯಾಗಿದೆ.

ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದಿದ್ದ ಮಾಲೀಕ

ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ. ಮೇ 12 ರಂದು ಅಪ್ಪಕಾರನಹಳ್ಳಿಯ ಮುನಿಯಪ್ಪ ಎಂಬಾತ ಮಂಜುನಾಥ್ ಅವರ ಟೀ ಅಂಗಡಿಗೆ ಬಂದು ಮತ್ತೆ ಸಾಲ ಕೇಳಿದ್ದ. ಈ ವೇಳೆ ಮಾಲೀಕ ಮಂಜುನಾಥ್, ಹಳೆಯ ಟೀ ಸಾಲದ ಬಾಕಿ ಹಣ 200 ರೂ.ಕೊಡು, ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದು ಹೇಳಿದ್ದ.

ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ ಮುನಿಯಪ್ಪ, ಪಕ್ಕದಲ್ಲೇ ಇದ್ದ ನೀಲಗಿರಿ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ತಲೆಗೆ ಮನಸೋಇಚ್ಛೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಹೆತ್ತ ತಾಯಿಗೂ ಚಾಕು ಹಾಕಿದ್ದ ಆರೋಪಿ!

ಆರೋಪಿ ಮುನಿಯಪ್ಪ ಈ ಹಿಂದೆ ಹೆತ್ತ ತಾಯಿಗೂ ಚಾಕು ಹಾಕಿ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಗೆ ಬಂದಿದ್ದ ಈತ ಈಗ ಮತ್ತೊಂದು ಕೊಲೆ ಮಾಡಿದ್ದಾನೆ. ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕಬ್ಬಿಣದ ರಾಡ್‌ನಿಂದ ಹೊಡೆದು ಮಾಜಿ ಬಿಎಸ್‌ಎಫ್ ಸೈನಿಕನ ಹತ್ಯೆ!

ಕಲಬುರಗಿ ನಗರದ ರಾಮಮಂದಿರದ ಬಳಿ ನಿವೃತ್ತ ಸೈನಿಕ ರವಿಚಂದ್ರ ಖೇಡ್ (45) ಎಂಬುವವರನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಬರ್ಬರ ಹತ್ಯೆ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಬಿಎಸ್‌ಎಫ್‌ನಿಂದ (BSF) ನಿವೃತ್ತಿಯಾಗಿದ್ದ ಇವರು, ಪ್ರಸ್ತುತ ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ ಪೋಕ್ಸೋ ಕೇಸ್​​ನಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಪುತ್ರ ಭಗೀರಥ್ ಸಾಯಿ ಅರೆಸ್ಟ್​​

ರವಿಚಂದ್ರ ನೈಟ್ ಶಿಫ್ಟ್‌ನಲ್ಲಿದ್ದಾಗ ಖಾಸಗಿ ಜಾಗದಲ್ಲಿ ಈ ಕೊಲೆ ನಡೆದಿದೆ. ಕಳೆದ ತಿಂಗಳು ಈ ವಿವಾದಿತ ಜಾಗದಲ್ಲಿ ಟಿನ್ ಶೆಡ್ ಕಾಂಪ್ಲೆಕ್ಸ್ ನಿರ್ಮಿಸಲಾಗಿತ್ತು. ಆದರೆ ವಿರೋಧಿ ಗುಂಪೊಂದು ರಾತ್ರೋರಾತ್ರಿ ಜೆಸಿಬಿ ತಂದು ಅದನ್ನು ಕೆಡವಿ ಹಾಕಿತ್ತು. ಇದೇ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಮಾಜಿ ಸೈನಿಕನನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ! – Kannada News | IPL 2026 PBKS vs RCB: Dharamsala Pitch Report

IPL 2026: ಐಪಿಎಲ್ 2026 ರ 61 ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮೈದಾನದಲ್ಲಿ ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು.

ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಿದೆ. ಅತ್ತ ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲ್ಲುವುದು ಅನಿವಾರ್ಯ. ಹೀಗಾಗಿ ಈ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇನ್ನು ಧರ್ಮಶಾಲಾದ ಪಿಚ್ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ? ಇಲ್ಲಿನ ಸರಾಸರಿ ಸ್ಕೋರ್ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿರಲಿದೆ…

ವೇಗದ ಬೌಲರ್‌ಗಳ ಸ್ವರ್ಗ:

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮೈದಾನದ ಪಿಚ್ ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಸ್ವರ್ಗ ಎನಿಸಿಕೊಂಡಿದೆ.

  • ಸ್ವಿಂಗ್ ಮತ್ತು ಬೌನ್ಸ್: ಇಲ್ಲಿನ ಪಿಚ್‌ನಲ್ಲಿ ಹೊಸ ಚೆಂಡಿನಲ್ಲಿ ವೇಗಿಗಳಿಗೆ ಅತ್ಯುತ್ತಮ ಸೀಮ್, ಬೌನ್ಸ್ ಮತ್ತು ಸ್ವಿಂಗ್ ಲಭ್ಯವಾಗುತ್ತದೆ.
  •  ವೇಗಿಗಳ ದರ್ಬಾರ್: ಈ ಸೀಸನ್‌ನಲ್ಲಿ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ (PBKS Vs DC) ಒಂದೂ ಓವರ್ ಸ್ಪಿನ್ ಬೌಲಿಂಗ್ ಮಾಡಲಾಗಿರಲಿಲ್ಲ, ಎಲ್ಲಾ ಓವರ್‌ಗಳನ್ನು ವೇಗಿಗಳೇ ಎಸೆದಿದ್ದರು. ಎರಡನೇ ಪಂದ್ಯದಲ್ಲೂ ವೇಗಿಗಳದ್ದೇ ಮೇಲುಗೈ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಫಾಸ್ಟ್ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.

ಬ್ಯಾಟರ್‌ಗಳಿಗೆ ಪರಾಕ್ರಮ:

ಇಲ್ಲಿನ ಪಿಚ್​ ವೇಗಿಗಳಿಗೆ ಆರಂಭದಲ್ಲಿ ನೆರವು ನೀಡಿದರೂ, ಒಮ್ಮೆ ಕ್ರೀಸ್‌ನಲ್ಲಿ ಸೆಟ್ ಆದ ನಂತರ ಬ್ಯಾಟರ್‌ಗಳು ಇಲ್ಲಿ ಸುಲಭವಾಗಿ ರನ್ ಗಳಿಸಬಹುದು.

  • ತೆಳು ಗಾಳಿಯ ಪ್ರಭಾವ: ಧರ್ಮಶಾಲಾ ಮೈದಾನವು ಸಮುದ್ರ ಮಟ್ಟದಿಂದ ಸುಮಾರು 1,457 ಮೀಟರ್ ಎತ್ತರದಲ್ಲಿದೆ. ಇಲ್ಲಿ ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ ಚೆಂಡು ಗಾಳಿಯಲ್ಲಿ ವೇಗವಾಗಿ ಚಲಿಸುತ್ತದೆ. ಇದರಿಂದಾಗಿ ಬ್ಯಾಟರ್‌ಗಳಿಗೆ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವುದು ತುಂಬಾ ಸುಲಭವಾಗುತ್ತದೆ.
  • ಹೈ-ಸ್ಕೋರಿಂಗ್ ಪಂದ್ಯಗಳು: ಐಪಿಎಲ್ 2026 ರಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳು ಹೈ-ಸ್ಕೋರಿಂಗ್ ಆಗಿದ್ದು, ತಂಡಗಳು 200+ ರನ್‌ಗಳನ್ನು ಸುಲಭವಾಗಿ ದಾಟಿವೆ. ಈ ಮೈದಾನದಲ್ಲಿ ಸ್ಪರ್ಧಾತ್ಮಕ ಮೊತ್ತವೆಂದರೆ 190 ರಿಂದ 210 ರನ್.

ಇದನ್ನೂ ಓದಿ: ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ!

ಸ್ಪಿನ್ನರ್‌ಗಳಿಗೆ ಕಠಿಣ ಸವಾಲು:

ಧರ್ಮಶಾಲಾ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಯಾವುದೇ ರೀತಿಯ ಟರ್ನ್ ಅಥವಾ ಹೆಚ್ಚಿನ ನೆರವು ಸಿಗುವುದಿಲ್ಲ. ಸ್ಪಿನ್ನರ್‌ಗಳು ಇಲ್ಲಿ ವಿಕೆಟ್ ಪಡೆಯುವುದಕ್ಕಿಂತ ರನ್ ನಿಯಂತ್ರಿಸುವುದರ ಕಡೆಗೇ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಅವರು ತಮ್ಮ ಲೈನ್, ಲೆಂತ್ ಮತ್ತು ವೇಗದಲ್ಲಿ ವೈವಿಧ್ಯತೆ ತಂದರೆ ಮಾತ್ರ ರನ್ ಹರಿವಿಗೆ ಬ್ರೇಕ್ ಹಾಕಬಹುದು.

 ಟಾಸ್ ಮತ್ತು ಚೇಸಿಂಗ್:

  • ಮಧ್ಯಾಹ್ನದ ಪಂದ್ಯ: ಇಂದಿನ ಪಂದ್ಯವು ಮಧ್ಯಾಹ್ನ 3:30 ಕ್ಕೆ ಆರಂಭವಾಗುತ್ತಿರುವುದರಿಂದ ಇಬ್ಬನಿಯ  ಯಾವುದೇ ಪ್ರಭಾವ ಇರುವುದಿಲ್ಲ.
  •  ಚೇಸಿಂಗ್ ಸುಲಭ: ಈ ಸೀಸನ್‌ನಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳೇ ಗೆಲುವು ಸಾಧಿಸಿವೆ.
  • ಟಾಸ್ ಆಯ್ಕೆ: ಪಂದ್ಯ ಸಾಗಿದಂತೆ ಪಿಚ್ ಬ್ಯಾಟಿಂಗ್‌ಗೆ ಮತ್ತಷ್ಟು ಉತ್ತಮಗೊಳ್ಳುವುದರಿಂದ, ಟಾಸ್ ಗೆಲ್ಲುವ ನಾಯಕ ಮೊದಲು ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚು.

Published On – 11:47 am, Sun, 17 May 26

Source link

ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು? – Kannada News | Narendra Modi and Dutch PM roundtable meet with 16 CEOs; Economic ties and investments discussed

ನೆದರ್​ಲ್ಯಾಂಡ್ಸ್ ದೇಶದ ಕಂಪನಿಗಳ ಮುಖ್ಯಸ್ಥರೊಂದಿಗೆ ಮೋದಿ ಸಭೆImage Credit source: Narendra Modi’s X account

ನವದೆಹಲಿ, ಮೇ 17: ನೆದರ್‌ಲ್ಯಾಂಡ್ಸ್‌ನ ‘ದಿ ಹೇಗ್’ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ (Rob Jetten) ಅವರೊಂದಿಗೆ ಜಂಟಿಯಾಗಿ ಪ್ರಮುಖ ಡಚ್ ಕಂಪನಿಗಳ 16 ಸಿಇಒಗಳ (CEO) ಜೊತೆ ದುಂಡುಮೇಜಿನ (Roundtable meet) ಸಭೆ ನಡೆಸಿದರು. ಭಾರತದಲ್ಲಿ ಬಂಡವಾಳ ಹೂಡಿಕೆ, ನಾವೀನ್ಯತೆ ಹಾಗೂ ಉದ್ಯಮವನ್ನು ವಿಸ್ತರಿಸುವಂತೆ ಜಾಗತಿಕ ಉದ್ಯಮಿಗಳಿಗೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಮುಕ್ತ ಆಹ್ವಾನ ನೀಡಿದರು.

ಮುಖ್ಯ ಒಪ್ಪಂದ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮೈತ್ರಿ

ಸಭೆಗೂ ಮುನ್ನ ಭಾರತದ ಉದ್ಯಮ ರಂಗದಲ್ಲಿ ಐತಿಹಾಸಿಕ ಒಪ್ಪಂದವೊಂದು ಏರ್ಪಟ್ಟಿತು. ಜಾಗತಿಕ ಸೆಮಿಕಂಡಕ್ಟರ್ ದೈತ್ಯ ಕಂಪನಿಯಾದ ASML ಮತ್ತು ಭಾರತದ ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದವು. ಗುಜರಾತ್‌ನ ಧೋಲೇರಾದಲ್ಲಿ ಸ್ಥಾಪನೆಯಾಗಲಿರುವ ಭಾರತದ ಮೊದಲ ಅತ್ಯಾಧುನಿಕ ‘ಫ್ರಂಟ್-ಎಂಡ್ ಸೆಮಿಕಂಡಕ್ಟರ್ ಫ್ಯಾಬ್’ (Semiconductor FAB) ನಿರ್ಮಾಣಕ್ಕೆ ಈ ಒಪ್ಪಂದವು ಭಾರಿ ಬೆಂಬಲ ನೀಡಲಿದೆ.

ಭಾರತವು ವೇಗ ಮತ್ತು ಸ್ಥಿರತೆಯ ಸಂಕೇತ: ಮೋದಿ

ಇಂದಿನ ಭಾರತವು ಜಾಗತಿಕ ಮಟ್ಟದಲ್ಲಿ ಸ್ಥಿರತೆ ಹಾಗೂ ಬೃಹತ್ ಮಾರುಕಟ್ಟೆಯ ಸಂಕೇತವಾಗಿದೆ. ಮೂಲಸೌಕರ್ಯ, ಸ್ವಚ್ಛ ಇಂಧನ ಮತ್ತು ಸಂಪರ್ಕದ (Connectivity) ವಿಷಯದಲ್ಲಿ ಜಗತ್ತಿನ ಯಾವುದೇ ದೇಶವೂ ಭಾರತದ ವೇಗಕ್ಕೆ ಸಾಟಿಯಿಲ್ಲ. ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಪ್ರಸ್ತುತ ಶೇಕಡಾ 17 ರಷ್ಟು ಕೊಡುಗೆ ನೀಡುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು

ಭಾರತದ ಆರ್ಥಿಕತೆಯ ಡಿಎನ್‌ಎಯನ್ನು ನಿರಂತರ ಸುಧಾರಣೆಗಳ ಮೂಲಕ ಬದಲಾಯಿಸಲಾಗಿದೆ. ಖಾಸಗಿ ವಲಯಕ್ಕೆ ಹೆಚ್ಚಿನ ಸ್ಥಿರ ನೀತಿ (Predictability) ನೀಡಲು ಬಾಹ್ಯಾಕಾಶ, ಗಣಿಗಾರಿಕೆ ಮತ್ತು ಪರಮಾಣು ಇಂಧನ ಕ್ಷೇತ್ರಗಳನ್ನು ಮುಕ್ತಗೊಳಿಸಲಾಗಿದೆ. ತೆರಿಗೆ, ಕಾರ್ಮಿಕ ಕಾಯ್ದೆ ಹಾಗೂ ಸುಲಭ ವ್ಯಾಪಾರ (Ease of Doing Business) ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂದು ನರೇಂದ್ರ ಮೋದಿ ವಿವರಿಸಿದರು.

ಚರ್ಚೆಯಾದ ವಿಷಯಗಳು

ಉದ್ಯಮಿಗಳನ್ನು ಪ್ರಮುಖವಾಗಿ ಮೂರು ಗುಂಪುಗಳಾಗಿ (Clusters) ವಿಂಗಡಿಸಿ ವಿಚಾರ ಮಂಡನೆ (Presentations) ಆಲಿಸಲಾಯಿತು:

  • ಸೆಮಿಕಂಡಕ್ಟರ್ಸ್, ತಂತ್ರಜ್ಞಾನ ಮತ್ತು ನಾವೀನ್ಯತೆ (Innovation)
  • ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಕಡಲ ಉದ್ಯಮ (Maritime)
  • ಸುಸ್ಥಿರತೆ, ಹಸಿರು ಇಂಧನ ಮತ್ತು ಕೃಷಿ ಕ್ಷೇತ್ರ

ಪ್ರಧಾನಿ ಮೋದಿ ಅವರು ಕಡಲ ಉದ್ಯಮ, ನವೀಕರಿಸಬಹುದಾದ ಇಂಧನ, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಭಾರತದಲ್ಲಿರುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಲು ಡಚ್ ಕಂಪನಿಗಳಿಗೆ ಕರೆ ನೀಡಿದರು. ಇದರೊಂದಿಗೆ ಭಾರತ-ಇಯು (India-EU) ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಶೀಘ್ರವಾಗಿ ಜಾರಿಗೆ ತರಲು ಉಭಯ ದೇಶಗಳ ಪ್ರಧಾನಿಗಳು ಒಲವು ತೋರಿದರು.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ಮೋದಿಯವರನ್ನು ಭೇಟಿಯಾದ 16 ಡಚ್ ಸಿಇಒಗಳು ಮತ್ತು ಕಂಪನಿಗಳ ಪಟ್ಟಿ

  1. ಎಪಿಎಂ ಟರ್ಮಿನಲ್ಸ್ (APM Terminals) ಸಿಇಒ ಕೀತ್ ಸ್ವೆಂಡ್ಸೆನ್
  2. ಎಎಸ್‌ಎಂಎಲ್ (ASML) ಸಿಇಒ ಕ್ರಿಸ್ಟೋಫ್ ಫೌಕೆಟ್
  3. ಡೇಮೆನ್ ಶಿಪ್‌ಯಾರ್ಡ್ಸ್ ಗ್ರೂಪ್ (Damen Shipyards Group) ಸಿಇಒ ಅರ್ನೌಟ್ ಡೇಮೆನ್
  4. ಹೇನಿಕನ್ (Heineken) ಸಿಇಒ ಡಾಲ್ಫ್ ವಾನ್ ಡೆನ್ ಬ್ರಿಂಕ್
  5. ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ (KLM) ಸಿಇಒ ಮಾರ್ಜನ್ ರಿಂಟೆಲ್
  6. ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ (NXP Semiconductors) ನೆದರ್​ಲ್ಯಾಂಡ್ಸ್ ಸಿಇಒ ಮಾರಿಸ್ ಗೆರಾಟ್ಸ್
  7. ಫಿಲಿಪ್ಸ್ (Philips) ಸಿಇಒ ರಾಯ್ ಜಾಕೋಬ್ಸ್
  8. ಪೋರ್ಟ್ ಆಫ್ ರೋಟರ್‌ಡ್ಯಾಮ್ (Port of Rotterdam) – ಬೌಡೆವಿಜ್ನ್ ಸೀಮನ್ಸ್ (ಸಿಇಒ)
  9. ಪವರ್2ಎಕ್ಸ್ (Power2X) ಸಿಇಒ ಒಕ್ಕೊ ರೂಲೋಫ್ಸೆನ್
  10. ಪ್ರೊಸಸ್ (Prosus) ಸಿಇಒ ಫ್ಯಾಬ್ರಿಸಿಯೊ ಬ್ಲೋಯಿಸಿ
  11. ರಾಂಡ್‌ಸ್ಟಾಡ್ (Randstad) ಸಿಇಒ ಸ್ಯಾಂಡರ್ ವ್ಯಾನ್ ‘ಟ್ ನೂರ್ಡೆಂಡೆ
  12. ರಿಜ್ಕ್ ಜ್ವಾನ್ (Rijk Zwaan) ಸಿಇಒ ಮಾರ್ಟಿಜ್ನ್ ಎಗ್ಗಿಂಕ್
  13. ರಾಯಲ್ ಎಚ್‌ಝಡ್‌ಪಿಸಿ ಗ್ರೂಪ್ (Royal HZPC Group) ಸಿಇಒ ಹಾನ್ಸ್ ಹುಯಿಸ್ಟ್ರಾ
  14. ರಾಯಲ್ ಐಎಚ್‌ಸಿ (Royal IHC) ಸಿಇಒ ಡೆರ್ಕ್ ಟೆ ಬೊಕ್ಕೆಲ್
  15. ರಾಯಲ್ ವೋಪಾಕ್ (Royal Vopak) ಸಿಇಒ ಡಿಕ್ ರಿಚೆಲ್
  16. ವ್ಯಾನ್ ಊರ್ಡ್ (Van Oord) ಸಿಇಒ ಗೋವರ್ಟ್ ವ್ಯಾನ್ ಊರ್ಡ್

ಈ ಎಲ್ಲಾ ಉದ್ಯಮಿಗಳು ಭಾರತ ಸರ್ಕಾರದ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ್ದು, ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಅತ್ಯಂತ ಆಸಕ್ತಿ ಹೊಂದಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ – Kannada News | Optical illusion can you find the butterfly hiding in this picture

ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: TinEye

ಒಗಟು ಎಂದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಹೀಗಾಗಿ ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳತ್ತ ಆಸಕ್ತಿ ತೋರಿಸುತ್ತಾರೆ. ಇದು ನಿಮ್ಮ ಕಣ್ಣಿನ ದೃಷ್ಟಿ, ತಾಳ್ಮೆ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೀಗ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಕೇವಲ 5 ಸೆಕೆಂಡುಗಳಲ್ಲಿ ಬಣ್ಣದ ಚಿಟ್ಟೆಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.

ಈ ಚಿತ್ರ ನೋಡಿದಾಗ ಏನು ಕಾಣಿಸಿತು?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ನೂರಕ್ಕೆ ನೂರರಷ್ಟು ಪರೀಕ್ಷಿಸುತ್ತದೆ. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಲಿವಿಂಗ್ ರೂಮ್. ಈ ರೂಮ್‌ನಲ್ಲಿ ವೃದ್ಧ ವ್ಯಕ್ತಿ ಕುಳಿತುಕೊಂಡಿದ್ದಾನೆ. ಆತನ ಪಕ್ಕದಲ್ಲಿ ಫೋಟೋ ಫ್ರೇಮ್‌ಗಳಿವೆ. ಮನೆಯ ಸಾಕು ನಾಯಿ ಕೂಡ ಪಕ್ಕದ ಸೋಫಾದಲ್ಲಿ ಕುಳಿತಿದೆ, ಇಲ್ಲಿ ಚಿಟ್ಟೆಯೊಂದಿದೆ. ನೀವು ಅದನ್ನು ಕೇವಲ 5 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.

ಇದನ್ನೂ ಓದಿ: ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಕಂಡು ಹಿಡಿಯಿರಿ

ನಿಮ್ಮ ಕಣ್ಣಿಗೆ ಚಿಟ್ಟೆ ಕಾಣಿಸಿತೇ ?

ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯ. ಈ ಚಿತ್ರದಲ್ಲಿ ಚಿಟ್ಟೆಯೊಂದಿದೆ. ತೀಕ್ಷ್ಣವಾದ ಕಣ್ಣು ನಿಮ್ಮದಾಗಿದ್ದರೆ ಈ ಚಿತ್ರದ ಇಂಚಿಂಚು ಕಣ್ಣಾಯಿಸಿ. ಎಷ್ಟೇ ಪ್ರಯತ್ನ ಪಟ್ಟರೂ ಚಿಟ್ಟೆ ಕಣ್ಣಿಗೆ ಬಿದ್ದಿಲ್ಲವೇ, ನಾವೇ ನಿಮಗೆ ಈ ಒಗಟಿನ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link