All posts by nagaraj11081993

ವರುಣನ ಅಬ್ಬರಕ್ಕೆ ದಾವಣಗೆರೆಯಲ್ಲಿ ಅಲ್ಲೋಲ ಕಲ್ಲೋಲ: ಅಡಿಕೆ ತೋಟ ಸರ್ವನಾಶ

ದಾವಣಗೆರೆ, ಮೇ 17: ಜಿಲ್ಲೆಯ ಹಲವೆಡೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯು ವ್ಯಾಪಕ ಅವಾಂತರಕ್ಕೆ ಕಾರಣವಾಗಿದೆ. ಬೇಸಿಗೆ ಮಳೆಯು ಆಲಿಕಲ್ಲು ಸಹಿತ ಅಪ್ಪಳಿಸಿದ್ದು, ಗಾಳಿಯ ರಭಸಕ್ಕೆ ದೇವಸ್ಥಾನದ ತಗಡಿನ ಶೀಟ್‌ಗಳು ಹಾರಿಹೋಗಿವೆ. ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಬಿರುಗಾಳಿ ಮತ್ತು ಮಳೆಯಿಂದ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ. ಬಸವಾಪಟ್ಟಣ ಗ್ರಾಮದ ಶಾಂತಗೌಡರು ಎಂಬುವರ ತೋಟದಲ್ಲಿ ಅರ್ಧ ಎಕರೆಯಷ್ಟು ಅಡಿಕೆ ಮರಗಳು ಬುಡ ಸಮೇತ ಕಿತ್ತು ಬಿದ್ದಿವೆ. ಹತ್ತಾರು ವರ್ಷಗಳಿಂದ ಫಲ ನೀಡುತ್ತಿದ್ದ ಅಡಿಕೆ ಮರಗಳು ನೆಲಸಮಗೊಂಡಿರುವುದು ರೈತರಿಗೆ ಆರ್ಥಿಕ ನಷ್ಟ ಉಂಟುಮಾಡಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಮಳೆಯಿಂದ ಉಂಟಾದ ಹಾನಿಯ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

20 ಸಿಕ್ಸ್​… ಅಲೆನ್ ಆರ್ಭಟಕ್ಕೆ ಹೊಸ ಇತಿಹಾಸ ನಿರ್ಮಾಣ!

Source link

Video: ಶ್ರೀಮದ್ ಭಾಗವತ ಸಪ್ತಾಹ; ಗಾಯಕನ ಗಾಯನಕ್ಕೆ ಮನಸೋತು ಹಣದ ಮಳೆ ಸುರಿಸಿದ ಭಕ್ತರು! – Kannada News | Viral Junagadh Dayro: Millions Showered on Gopal Sadhu for Girls’ Education Charity

ಜೂನಾಗಢ್: ಸಾಂಪ್ರದಾಯಿಕ ಗುಜರಾತಿ ‘ಡಾಯ್ರೋ’ (Dayro) ಕಾರ್ಯಕ್ರಮವೊಂದರಲ್ಲಿ ಜನಪ್ರಿಯ ಗಾಯಕರೊಬ್ಬರ ಮೇಲೆ ಭಕ್ತರು ಅಪಾರ ಪ್ರಮಾಣದ ಹಣದ ನೋಟುಗಳನ್ನು ಸುರಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಖಂಭಾಲಿಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾರಪೂರ್ತಿಯ ‘ಶ್ರೀಮದ್ ಭಾಗವತ್ ಸಪ್ತಾಹ’ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಸಂಗೀತ, ಕಥಾವಾಚನ, ಹಾಸ್ಯ ಮತ್ತು ಭಕ್ತಿಗೀತೆಗಳ ಮಿಶ್ರಣವಿರುವ ಗುಜರಾತ್‌ನ ಸಾಂಪ್ರದಾಯಿಕ ‘ಡಾಯ್ರೋ’ ಶೈಲಿಯ ಪ್ರದರ್ಶನ ನೀಡುತ್ತಿದ್ದ ಖ್ಯಾತ ಗಾಯಕ ಗೋಪಾಲ್ ಸಾಧು ಅವರ ಮೇಲೆ ಭಕ್ತರು ಕಂತೆ ಕಂತೆ ಹಾಗೂ ಚೀಲಗಟ್ಟಲೆ ನೋಟುಗಳನ್ನು ಸುರಿದಿದ್ದಾರೆ.

ನೋಟಿನ ರಾಶಿಯ ನಡುವೆಯೂ ನಿಲ್ಲದ ಗಾಯನ:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ, ಗಾಯಕ ಗೋಪಾಲ್ ಸಾಧು ಅವರು ಹಾರ್ಮೋನಿಯಂ ನುಡಿಸುತ್ತಾ ಅತ್ಯಂತ ಶಾಂತಚಿತ್ತರಾಗಿ ಹಾಡುವುದನ್ನು ಮುಂದುವರಿಸಿರುವುದು ಕಂಡುಬಂದಿದೆ. ಅವರ ಸುತ್ತಲೂ 10, 20, 50, 100 ಹಾಗೂ 500 ರೂ. ಮುಖಬೆಲೆಯ ನೋಟುಗಳು ಮಳೆಯಂತೆ ಸುರಿದು ದೊಡ್ಡ ಬೆಟ್ಟದಂತೆ ರಾಶಿ ಬಿದ್ದಿದ್ದವು. ಒಂದು ಹಂತದಲ್ಲಂತೂ ಹಣದ ರಾಶಿ ಎಷ್ಟು ಹೆಚ್ಚಾಯಿತೆಂದರೆ, ಗಾಯಕ ಬಹುತೇಕ ಆ ನೋಟುಗಳ ಅಡಿಯಲ್ಲೇ ಮುಳುಗಿಹೋಗಿದ್ದಾರೆ. ಆದರೂ ತಮ್ಮ ಗಾಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!

ದಾನ ಕಾರ್ಯಕ್ಕೆ ಬಳಕೆಯಾಗಲಿದೆ ಕೋಟ್ಯಂತರ ಹಣ:

ಅಹೀರ್ ಸಮಾಜದ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಘಟಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗುಜರಾತ್‌ನ ಜಾನಪದ ಸಂಗೀತ ಕೂಟಗಳಲ್ಲಿ ಕಲಾವಿದರನ್ನು ಗೌರವಿಸುವ ಈ ಸಾಂಪ್ರದಾಯಿಕ ಪದ್ಧತಿಯನ್ನು ‘ಉಚ್ಚಮ್ನಿ’ (Uchchamni) ಎಂದು ಕರೆಯಲಾಗುತ್ತದೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಸಂಪೂರ್ಣ ಹಣವನ್ನು ಅಹೀರ್ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯಕ್ಕಾಗಿ ಅಹಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಗುಜರಾತ್ ಅಹೀರ್ ಕನ್ಯಾ ಛಾತ್ರಾಲಯ’ ಯೋಜನೆಗೆ ದೇಣಿಗೆಯಾಗಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ! – Kannada News | IPL 2026: 10 Matches, 8 Teams, 4 Playoff Spots

IPL 2026: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಠಿಣ ಪ್ಲೇಆಫ್ ರೇಸ್‌ಗೆ 2026ರ ಸೀಸನ್ ಸಾಕ್ಷಿಯಾಗಿದೆ. ಲೀಗ್​ ಹಂತದ 60 ಪಂದ್ಯಗಳು ಮುಗಿದರೂ ಇನ್ನೂ ಕೂಡ ಯಾವುದೇ ತಂಡದ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ಉಳಿದಿರುವ ಕೊನೆಯ 10 ಲೀಗ್ ಪಂದ್ಯಗಳು 8 ತಂಡಗಳ ಭವಿಷ್ಯವನ್ನು ನಿರ್ಧರಿಸಲಿವೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ.

ಇದೀಗ 8 ತಂಡಗಳ ನಡುವೆ 4 ಸ್ಥಾನಗಳಿಗಾಗಿ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಈ ವಾರದೊಳಗೆ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

8 ತಂಡಗಳ ಪ್ಲೇಆಫ್  ಸಮೀಕರಣಗಳು:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – ಅಂಕಗಳು: 16
  •  ಉಳಿದಿರುವ ಪಂದ್ಯಗಳು: 2 (vs PBKS, SRH)
  • ಸಮೀಕರಣ: ಹಾಲಿ ಚಾಂಪಿಯನ್ಸ್ ಆರ್‌ಸಿಬಿ ಸದ್ಯ ಅತ್ಯುತ್ತಮ ನೆಟ್ ರನ್ ರೇಟ್ (+1.053) ಹೊಂದಿದೆ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದರೂ ಪ್ಲೇಆಫ್ ಆಡುವುದು ಖಚಿತವಾಗಲಿದೆ. ಎರಡೂ ಪಂದ್ಯ ಗೆದ್ದರೆ ಟಾಪ್-2 ಸ್ಥಾನ ಸಿಗಲಿದೆ.

  • ಗುಜರಾತ್ ಟೈಟಾನ್ಸ್ (GT) – ಅಂಕಗಳು: 16
  • ಉಳಿದಿರುವ ಪಂದ್ಯ: 1 (vs CSK)
  • ಸಮೀಕರಣ: ಗುಜರಾತ್ ಟೈಟಾನ್ಸ್ ಈಗಾಗಲೇ 13 ಪಂದ್ಯಗಳನ್ನು ಆಡಿದ್ದು 16 ಅಂಕ ಗಳಿಸಿದೆ. ಕೊನೆಯ ಪಂದ್ಯವನ್ನು ಗೆದ್ದರೆ ಪ್ಲೇಆಫ್ ಜೊತೆಗೆ ಟಾಪ್-2 ರೇಸ್‌ನಲ್ಲಿ ಉಳಿಯಲಿದೆ. ಒಂದು ವೇಳೆ ಸೋತರೆ ಪ್ಲೇಆಫ್​ಗೇರಲು ಇತರ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
  • ಸನ್‌ರೈಸರ್ಸ್ ಹೈದರಾಬಾದ್ (SRH) – ಅಂಕಗಳು: 14
  • ಉಳಿದಿರುವ ಪಂದ್ಯಗಳು: 2 (vs CSK, RCB)
  • ಸಮೀಕರಣ: ಎಸ್‌ಆರ್‌ಹೆಚ್ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಸುಲಭವಾಗಿ 18 ಅಂಕಗಳೊಂದಿಗೆ ಕ್ವಾಲಿಫೈ ಆಗಲಿದೆ. ಒಂದು ಪಂದ್ಯ ಗೆದ್ದು 16 ಅಂಕ ಗಳಿಸಿದರೂ ಉತ್ತಮ ರನ್ ರೇಟ್ ನೆರವಿನಿಂದ ಪ್ಲೇಆಫ್​ಗೇರುವ ಅವಕಾಶ ಇದೆ.
  • ಪಂಜಾಬ್ ಕಿಂಗ್ಸ್ (PBKS) – ಅಂಕಗಳು: 13
  •  ಉಳಿದಿರುವ ಪಂದ್ಯಗಳು: 2 (vs RCB, LSG)
  • ಸಮೀಕರಣ: ಸತತ 5 ಸೋಲುಗಳಿಂದ ಕಂಗಾಲಾಗಿರುವ ಪಂಜಾಬ್ ಕಿಂಗ್ಸ್​ ತಂಡಕ್ಕೆ ಇನ್ನುಳಿದ ಪಂದ್ಯಗಳು ‘ಡೂ ಆರ್ ಡೈ ಮ್ಯಾಚ್’. ಪಂಜಾಬ್ ಪಡೆ 17 ಅಂಕ ತಲುಪಲು ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ಸೋತರೆ ರೇಸ್‌ನಿಂದ ಹೊರಬೀಳುವ ಆತಂಕವಿದೆ.
  • ರಾಜಸ್ಥಾನ್ ರಾಯಲ್ಸ್ (RR) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 3 (vs DC, LSG, MI)
  • ಸಮೀಕರಣ: ರಾಜಸ್ಥಾನ್ ರಾಯಲ್ಸ್​ ಕೈಯಲ್ಲಿ ಇನ್ನೂ 3 ಪಂದ್ಯಗಳಿವೆ. ಈ ಮೂರನ್ನೂ ಗೆದ್ದರೆ ಯಾವುದೇ ಅಡೆತಡೆಯಿಲ್ಲದೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.
  •  ಚೆನ್ನೈ ಸೂಪರ್ ಕಿಂಗ್ಸ್ (CSK) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 2 (vs SRH, GT)
  • ಸಮೀಕರಣ: ಸಿಎಸ್​ಕೆ ತಂಡವು  ಪ್ಲೇಆಫ್ ಆಸೆಯನ್ನು ಜೀವಂತವಾಗಿಡಲು ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು 16 ಅಂಕ ಗಳಿಸಬೇಕು. ಹಾಗೆಯೇ ಇತರ ತಂಡಗಳ ಸೋಲನ್ನು ಸಹ ಎದುರು ನೋಡಬೇಕು.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಅಂಕಗಳು: 11
  • ಉಳಿದಿರುವ ಪಂದ್ಯಗಳು: 2 (vs MI, DC)
  • ಸಮೀಕರಣ: ಕೆಕೆಆರ್ ಗರಿಷ್ಠ 15 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯ. ಪ್ಲೇಆಫ್ ತಲುಪುವ ಸಾಧ್ಯತೆ ಕೇವಲ 3.6% ರಷ್ಟಿದ್ದು, ಪವಾಡಗಳು ಸಂಭವಿಸಿದರೆ ಮಾತ್ರ ಕೊಲ್ಕತ್ತಾ ನೈಟ್ ರೈಡರ್ಸ್​ ಮುಂದಿನ ಹಂತಕ್ಕೇರಬಹುದು.
  • ಡೆಲ್ಲಿ ಕ್ಯಾಪಿಟಲ್ಸ್ (DC) – ಅಂಕಗಳು: 10
  • ಉಳಿದಿರುವ ಪಂದ್ಯಗಳು: 2 (vs RR, KKR)
  • ಸಮೀಕರಣ: ಡೆಲ್ಲಿ ಕ್ಯಾಪಿಟಲ್ಸ್​ ತಂಡ ಉಳಿದಿರುವ 2 ಮ್ಯಾಚ್​ಗಳನ್ನು ಗೆದ್ದರೂ ಗರಿಷ್ಠ 14 ಅಂಕ ತಲುಪಬಹುದು. ಆದರೆ ಅತ್ಯಂತ ಕಳಪೆ ನೆಟ್ ರನ್ ರೇಟ್ (-0.993) ಹೊಂದಿರುವುದರಿಂದ ಇವರ ಪ್ಲೇಆಫ್ ಕನಸು ಬಹುತೇಕ ಅಂತ್ಯವಾಗಿದೆ ಎನ್ನಬಹುದು.

ಇದನ್ನೂ ಓದಿ: IPL 2026: ಇಂದಿನ  ಪಂದ್ಯಕ್ಕೂ RCB ತಂಡದ ಸ್ಟಾರ್ ಆಟಗಾರ ಅಲಭ್ಯ!

ಇನ್ನು 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದ್ದು, ಇದಾಗ್ಯೂ ಈ ತಂಡಗಳ ವಿರುದ್ಧದ ಫಲಿತಾಂಶಗಳು ಇತರೆ ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧರಿಸಲಿದೆ.

Published On – 10:32 am, Sun, 17 May 26

Source link

ಇಂಧನ ಬೆಲೆ ಮತ್ತಷ್ಟು ಹೆಚ್ಚಳ: ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ – Kannada News | Fuel Price Hike: Experts Warn of Eight to Ten Rupee Increase Amid Global Oil Crisis

ಬೆಂಗಳೂರು, ಮೇ 17: ಇಂಧನ ಬೆಲೆ ಏರಿಕೆ ದೇಶದಲ್ಲಿ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್ ಮತ್ತು ಡಿಸೇಲ್ ದರಗಳು ಲೀಟರ್‌ಗೆ ಮೂರು ರೂಪಾಯಿ ಏರಿಕೆಯಾಗಿರುವ ಬೆನ್ನಲ್ಲೇ, ಸಿಎನ್‌ಜಿ ಬೆಲೆಯು ಸಹ ಕಳೆದ ಎರಡು ದಿನಗಳಲ್ಲಿ ಒಟ್ಟು ಮೂರು ರೂಪಾಯಿ ಹೆಚ್ಚಾಗಿದೆ. ಆದರೆ, ತಜ್ಞರ ಪ್ರಕಾರ, ಈ ಏರಿಕೆ ಕೇವಲ ಆರಂಭವಷ್ಟೇ. ಜಾಗತಿಕ ತೈಲ ಬಿಕ್ಕಟ್ಟು ಮತ್ತು ಬೆಲೆ ಏರಿಕೆಯ ಪ್ರವೃತ್ತಿ ಗಮನಿಸಿದರೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಬರುವ ದಿನಗಳಲ್ಲಿ ಎಂಟರಿಂದ ಹತ್ತು ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಈ ಇಂಧನ ಬೆಲೆ ಏರಿಕೆಯು ಕೇವಲ ವಾಹನ ಸವಾರರ ಮೇಲೆ ಮಾತ್ರವಲ್ಲದೆ, ಇಡೀ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಡಿಸೇಲ್ ಬೆಲೆ ಹೆಚ್ಚಳದಿಂದ ಸರಕು ಸಾಗಣೆ ವಾಹನಗಳ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದ್ದು, ಇದು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಪೆಟ್ರೋಲಿಯಂ ಇಲಾಖೆಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಕನಿಷ್ಠ 55 ಲಕ್ಷ ಬ್ಯಾರೆಲ್ ಕಚ್ಚಾ ತೈಲಕ್ಕೆ ಬೇಡಿಕೆಯಿದ್ದು, ಸದ್ಯ 65 ದಿನಗಳಿಗೆ ಸಾಕಾಗುವಷ್ಟು ಪೆಟ್ರೋಲ್ ಮತ್ತು ಡಿಸೇಲ್ ಸಂಗ್ರಹವಿದೆ. ಈ ಪರಿಸ್ಥಿತಿಯು ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ತರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಔಷಧಗಳ ಬೆಲೆಯೂ ಏರಿಕೆ!

ಬೆಂಗಳೂರು, ಮೇ 17: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಈಗ ಬಿಪಿ, ಶುಗರ್ ಸೇರಿದಂತೆ ದಿನಬಳಕೆಯ ಔಷಧಿಗಳ ಬೆಲೆಯೂ ಶೇ 15 ರಿಂದ 20 ರಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ . ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋ ಕೆಮಿಕಲ್ ಅತ್ಯಗತ್ಯವಾಗಿದ್ದು, ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಇದರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಹಳೆಯ ಎಂಆರ್‌ಪಿ ದರದಲ್ಲೇ ಔಷಧಿಗಳು ಸಿಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಕೊರತೆಯಿಂದ ಬೆಲೆ ಹೆಚ್ಚಾಗುವ ಭೀತಿ ಇದೆ ಎಂದು ಮೆಡಿಕಲ್ ವಿತರಕರು ತಿಳಿಸಿದ್ದಾರೆ. ಸಾಗಾಣಿಕೆ ವೆಚ್ಚವೂ ಹೆಚ್ಚುತ್ತಿರುವುದರಿಂದ ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನೈಜ ಘಟನೆಗಳ ಆಧಾರಿತ ‘ಬೇಲ್’ ಸಿನಿಮಾ ಟೀಸರ್; ಗಮನ ಸೆಳೆದ ಶಿವಣ್ಣ ಲುಕ್ – Kannada News | Shiva Rajkumar starrer Bail Kannada movie teaser by Pavan Wadeyar KVN Productions

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ (Shiva Rajkumar) ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಪಾತ್ರಗಳ ಮೂಲಕ ಅಭಿಮಾನಿಗಳ ಎದುರು ಬರುತ್ತಾರೆ. ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಆ ಪೈಕಿ ಕನ್ನಡದ ‘ಬೇಲ್’ ಸಿನಿಮಾ (Bail Kannada Movie) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಎಂಬುದು ವಿಶೇಷ. ಈಗ ‘ಬೇಲ್’ ಸಿನಿಮಾದ ಟೀಸರ್ (Bail Teaser) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶಿವರಾಜ್​ಕುಮಾರ್ ಅವರ ಲುಕ್ ರಿವೀಲ್ ಆಗಿದೆ. ಅಭಿಮಾನಿಗಳಿಗೆ ಶಿವಣ್ಣನ ಈ ಲುಕ್ ಇಷ್ಟ ಆಗಿದೆ.

‘ಬೇಲ್’ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್​ನಿಂದ ನಿರೀಕ್ಷೆ ಜಾಸ್ತಿ ಆಗಿದೆ. ಇದರಲ್ಲಿ ಶಿವರಾಜ್​ಕುಮಾರ್ ಅವರು ಖಡಕ್ ಡೈಲಾಗ್ ಹೊಡೆದಿದ್ದಾರೆ. ಇದು ಪಕ್ಕಾ ಮಾಸ್ ಸಿನಿಮಾ ಎಂಬುದು ಸ್ಪಷ್ಟವಾಗಿದೆ.

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಬೇಲ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಟೀಸರ್​ನಲ್ಲಿ ಅದ್ದೂರಿತನ ಕಾಣಿಸುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಅವರು ವಿಜಿ ಎಂಬ ಪಾತ್ರ ಮಾಡುತ್ತಿದ್ದಾರೆ. ‘ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವತ್ತೂ ಆಗೋದಿಲ್ಲ’ ಎಂಬ ಡೈಲಾಗ್ ಈಗ ಟ್ರೆಂಡ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ‘ಬೇಲ್’ ಸಿನಿಮಾ ಬಿಡುಗಡೆ ಆಗಲಿದೆ.

‘ಬೇಲ್’ ಸಿನಿಮಾ ಟೀಸರ್:

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರು ಡಿಫರೆಂಟ್ ಸಿನಿಮಾಗಳನ್ನು ನೀಡಿದ್ದಾರೆ. ಸ್ಟಾರ್ ನಟರ ಜೊತೆ ಕೆಲಸ ಮಾಡಿ ಅವರು ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಶಿವರಾಜ್​ಕುಮಾರ್ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಇನ್ನಷ್ಟು ಹೆಚ್ಚಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಚಿತ್ರ ಆದ್ದರಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

ಈಗ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆದಿದೆಯಾದರೂ ಚಿತ್ರದ ಕಥೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಈ ಸಣ್ಣ ತುಣುಕಿನಿಂದ ಕಥೆ ಬಗ್ಗೆ ಕುತೂಹಲ ಡಬಲ್ ಆಗಿದೆ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ ಚೋಳರ ಕಾಲದ ತಾಮ್ರ ಶಾಸನಗಳು! – Kannada News | 11th Century Chola Copper Plates Repatriated to India from Netherlands: PM Modi

ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ ಚೋಳರ ಕಾಲದ ತಾಮ್ರ ಶಾಸನಗಳು!
Image Credit source: PM Narendra Modi X account

ನೆದರ್​ಲ್ಯಾಂಡ್ಸ್, ಮೇ 17: ಪ್ರತಿ ಭಾರತೀಯನೂ ಹೆಮ್ಮೆ ಪಡುವಂತಹ ಐತಿಹಾಸಿಕ ಕ್ಷಣವೊಂದಕ್ಕೆ ನೆದರ್ಲ್ಯಾಂಡ್ಸ್ ಸಾಕ್ಷಿಯಾಗಿದೆ. 11ನೇ ಶತಮಾನಕ್ಕೆ ಸೇರಿದ ಪ್ರಸಿದ್ಧ ಚೋಳ ಸಾಮ್ರಾಜ್ಯದ ತಾಮ್ರದ ಶಾಸನಗಳು (Copper Plates) ಸುದೀರ್ಘ ವರ್ಷಗಳ ನಂತರ ನೆದರ್ಲ್ಯಾಂಡ್ಸ್‌ನಿಂದ ಮತ್ತೆ ಭಾರತಕ್ಕೆ ಮರಳುತ್ತಿವೆ. ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅವರ ಸಮ್ಮುಖದಲ್ಲಿ ನಡೆದ ಈ ಐತಿಹಾಸಿಕ ಹಸ್ತಾಂತರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಎಲ್ಲಾ ಭಾರತೀಯರಿಗೂ ಅತ್ಯಂತ ಸಂತೋಷದ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ಚೋಳರ ಕಾಲದ ತಾಮ್ರ ಶಾಸನಗಳು ವಾಪಸ್ ಬರಲಿವೆ.
  • ತಮಿಳು ಭಾಷೆಯಲ್ಲಿರುವ ಈ ಶಾಸನಗಳು ಚೋಳರ ನೌಕಾ ಪರಾಕ್ರಮ ಸಾರುತ್ತವೆ.
  • ಶಾಸನಗಳನ್ನು ಸಂರಕ್ಷಿಸಿದ್ದ ಲೈಡನ್ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.

ಚೋಳರ ತಾಮ್ರ ಶಾಸನಗಳ ವಿಶೇಷತೆಗಳು

ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಶಾಸನದ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಶಾಸನಗಳ ಸಂಗ್ರಹದಲ್ಲಿ ಒಟ್ಟು 21 ದೊಡ್ಡ ತಾಮ್ರದ ಫಲಕಗಳು ಮತ್ತು 3 ಸಣ್ಣ ಫಲಕಗಳಿವೆ. ಇವುಗಳನ್ನು ಕಂಚಿನ ಉಂಗುರದಿಂದ ಒಟ್ಟಿಗೆ ಜೋಡಿಸಲಾಗಿದ್ದು, ಅದರ ಮೇಲೆ ಚೋಳ ರಾಜವಂಶದ ರಾಜಮುದ್ರೆ ಇದೆ. ಈ ಶಾಸನಗಳಲ್ಲಿನ ಹೆಚ್ಚಿನ ಬರಹಗಳನ್ನು ವಿಶ್ವದ ಅತ್ಯಂತ ಸುಂದರವಾದ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯಲ್ಲಿ ಕೆತ್ತಲಾಗಿದೆ. ಇದರೊಂದಿಗೆ ಕೆಲವು ಭಾಗಗಳು ಸಂಸ್ಕೃತ ಭಾಷೆಯನ್ನೂ ಒಳಗೊಂಡಿವೆ ಎಂದಿದ್ದಾರೆ.

ಚೋಳ ಸಾಮ್ರಾಜ್ಯದ ಶ್ರೇಷ್ಠ ದೊರೆ ರಾಜರಾಜ ಚೋಳ I ಅವರು ನೀಡಿದ್ದ ಮೌಖಿಕ ಭರವಸೆಯನ್ನು, ಅವರ ಮಗನಾದ ಸಾಮ್ರಾಟ್ ರಾಜೇಂದ್ರ ಚೋಳ I ಅವರು ಈ ತಾಮ್ರದ ಶಾಸನಗಳ ಮೂಲಕ ಅಧಿಕೃತಗೊಳಿಸಿದ್ದರು. ಇವು ಚೋಳರ ಭವ್ಯ ಸಂಸ್ಕೃತಿ, ಆಡಳಿತ ಮತ್ತು ನೌಕಾಪಡೆಯ ಪರಾಕ್ರಮವನ್ನು ಜಗತ್ತಿಗೆ ಸಾರುತ್ತವೆ ಎಂದು ತಮ್ಮ ಪೋಸ್ಟ್​ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ನೆದರ್ಲ್ಯಾಂಡ್ಸ್ ಸರ್ಕಾರಕ್ಕೆ ಪ್ರಧಾನಿ ಧನ್ಯವಾದ

19ನೇ ಶತಮಾನದ ಮಧ್ಯಭಾಗದಿಂದ (1862) ಈ ಅಮೂಲ್ಯವಾದ ತಾಮ್ರದ ಶಾಸನಗಳನ್ನು ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಟ್ಟಿದ್ದ ನೆದರ್ಲ್ಯಾಂಡ್ಸ್ ಸರ್ಕಾರ ಮತ್ತು ವಿಶೇಷವಾಗಿ ಅಲ್ಲಿನ ಲೈಡನ್ ವಿಶ್ವವಿದ್ಯಾಲಯಕ್ಕೆ (Leiden University) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಭಾರತವು ಕಳೆದ 14 ವರ್ಷಗಳಿಂದ ಈ ಶಾಸನಗಳ ವಾಪಸಾತಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿತ್ತು. ಚೋಳರ ಈ ಸಾಂಸ್ಕೃತಿಕ ಪರಂಪರೆಯು ಭಾರತಕ್ಕೆ ಮರಳುತ್ತಿರುವುದು ದೇಶದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:06 am, Sun, 17 May 26

Source link

ತಿರುವನಂತಪುರಂ–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ಸಿನಿಮಾ ಸ್ಟೈಲ್​​ನಲ್ಲಿ ಪ್ರಯಾಣಿಕರ ರಕ್ಷಣೆ – Kannada News | Fire Breaks Out in Thiruvananthapuram–Hazrat Nizamuddin Rajdhani Express in Madhya Pradesh

ಭೋಪಾಲ್, ಮೇ 17:ತಿರುವನಂತಪುರಂ–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬಿ-1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಲೂನಿ ರಿಚ್ಛಾ (LNR) ಮತ್ತು ವಿಕ್ರಮ್‌ಗಢ್ ಅಲೋಟ್ (VMA) ನಿಲ್ದಾಣಗಳ ಮಧ್ಯೆ ಈ ಅವಘಡ ಸಂಭವಿಸಿದೆ. ಕೋಚ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಯಾವುದೇ ಪ್ರಯಾಣಿಕರು ಅಥವಾ ರೈಲ್ವೆ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 5.15ಕ್ಕೆ ತಿರುವನಂತಪುರಂನಿಂದ ನಿಜಾಮುದ್ದೀನ್‌ಗೆ ತೆರಳುತ್ತಿದ್ದ 12431 ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಹಿಂಭಾಗದ SLR ಹಾಗೂ B1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಗಮನಕ್ಕೆ ಬರುತ್ತಿದ್ದಂತೆ ರೈಲ್ವೆ ಸಿಬ್ಬಂದಿ ತಕ್ಷಣ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬೆಂಕಿ ತಗುಲಿದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

World Telecommunication Day 2026: ವಿಶ್ವ ದೂರಸಂಪರ್ಕ ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ – Kannada News | World Telecommunication Day 2026: Do you know the purpose of celebrating World Telecommunication Day?

ವಿಶ್ವ ದೂರ ಸಂಪರ್ಕ ದಿನImage Credit source: png magic

ಮಾನವ ಇತಿಹಾಸದುದ್ದಕ್ಕೂ ಸಂವಹನ ಸಾಧನಗಳು ನಿರಂತರವಾಗಿ ವಿಕಸನ ಹೊಂದುತ್ತಾ ಬಂದಿದೆ. ಹಿಂದೆಲ್ಲಾ ದೂರದೂರಿನಲ್ಲಿರುವ ತಮ್ಮ ಸಂಬಂಧಿಕರು, ತಮ್ಮ ಮನೆಯವರೊಂದಿಗೆ ಕೇವಲ ಪತ್ರಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ಅದೇ ದೂರಸಂಪರ್ಕ (Telecommunication) ವ್ಯವಸ್ಥೆ ಬಂದ ನಂತರ ಜಗತ್ತು ತುಂಬಾನೇ ಹತ್ತಿರವಾಗಿದೆ ಅಂತಾನೇ ಹೇಳಬಹುದು. ಇಂಟರ್ನೆಟ್, ಮೊಬೈಲ್ ನೆಟ್‌ವರ್ಕ್‌ಗಳು, ಉಪಗ್ರಹ ಸಂವಹನಗಳು ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳಾಗಿರಲಿ, ಈ ಎಲ್ಲಾ ತಂತ್ರಜ್ಞಾನಗಳು, ದೂರಸಂಪರ್ಕ ವ್ಯವಸ್ಥೆಗಳು ಇಂದು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಡಿಜಿಟಲ್ ಯುಗದಲ್ಲಿ, ದೂರಸಂಪರ್ಕ ವ್ಯವಸ್ಥೆ ಕೇವಲ ಸಂದೇಶಗಳನ್ನು ಕಳುಹಿಸುವುದಕ್ಕೆ ಸೀಮಿತವಾಗಿಲ್ಲ, ಇದು ಶಿಕ್ಷಣ, ವ್ಯವಹಾರ, ಆರೋಗ್ಯ, ಸರ್ಕಾರಿ ಸೇವೆಗಳು ಮತ್ತು ಜಾಗತಿಕ ಸಹಕಾರದ ಅಡಿಪಾಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಸಂವಹನ ತಂತ್ರಜ್ಞಾನಗಳ ನಿರ್ಣಾಯಕ ಪಾತ್ರ ಮತ್ತು ದೂರ ಸಂಪರ್ಕ ವ್ಯವಸ್ಥೆಗಳ ಬಗ್ಗೆ ಅರಿವನ್ನು ಮೂಡಿಸಲು ಪ್ರತಿವರ್ಷ ಮೇ 17 ರಂದು ವಿಶ್ವ ದೂರ ಸಂಪರ್ಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ದೂರಸಂಪರ್ಕ ದಿನದ ಇತಿಹಾಸವೇನು?

ಅಂತರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟ (ITU) ಸ್ಥಾಪನೆಯಾದ ಸ್ಮರಣಾರ್ಥವಾಗಿ 1969 ರ ಮೇ 17 ರಂದು ವಿಶ್ವ ದೂರಸಂಪರ್ಕ ದಿನದ ಆಚರಣೆಯನ್ನು ಸ್ಥಾಪಿಸಲಾಯಿತು. 1865 ರ ಮೇ  17 ರಂದು ಪ್ಯಾರಿಸ್‌ನಲ್ಲಿ ನಡೆದ ಸಮಾವೇಶದಲ್ಲಿ ಸಹಿ ಹಾಕುವ ಮೂಲಕ ಅಂತರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟವನ್ನು ರಚಿಸಲಾಯಿತು.  ನಂತರ 1932 ರಲ್ಲಿ ಇದರ ಹೆಸರನ್ನು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಎಂದು ಮರು ನಾಮಕರಣ ಮಾಡಲಾಯಿತು. ನಂತರ 1947 ರಲ್ಲಿ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಯಿತು.

ಇದರ ನಂತರ, 2005 ರಲ್ಲಿ , ವಿಶ್ವ ಶೃಂಗಸಭೆಯ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಸ್ತಾವನೆಯ ಮೇರೆಗೆ, ಮೇ 17 ಅನ್ನು ವಿಶ್ವ ಮಾಹಿತಿ ದಿನವೆಂದು ಘೋಷಿಸಲಾಯಿತು. 2006 ರ ನವೆಂಬರ್ ತಿಂಗಳಲ್ಲಿ  ಟರ್ಕಿಯ ಅಂಟಲ್ಯದಲ್ಲಿ ನಡೆದ ITU ಪ್ಲೆನಿಪೊಟೆನ್ಷಿಯರಿ ಸಮ್ಮೇಳನದಲ್ಲಿ, ಮೇ 17 ಅನ್ನು ವಿಶ್ವ ದೂರಸಂಪರ್ಕ ದಿನ ಮತ್ತು ವಿಶ್ವ ಮಾಹಿತಿ ಸೊಸೈಟಿ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಮೇ 15 ರಂದೇ ಅಂತಾರಾಷ್ಟ್ರೀಯ ಕುಟುಂಬ ದಿನ ಆಚರಿಸುವುದು ಏಕೆ?

ವಿಶ್ವ ದೂರಸಂಪರ್ಕ ದಿನದ ಮಹತ್ವವೇನು?

  • ಆರ್ಥಿಕತೆ, ಸಮಾಜ ಮತ್ತು ವೈಯಕ್ತಿಕ ಜೀವನವನ್ನು ರೂಪಿಸುವಲ್ಲಿ ಇಂಟರ್ನೆಟ್‌, ಮೊಬೈಲ್‌ ನೆಟ್‌ವರ್ಕ್‌ ಸೇರಿದಂತೆ ಇತದೆ ಡಿಜಿಟಲ್‌ ತಂತ್ರಜ್ಞಾನಗಳಂತಹ ಸಂವಹನ ಸಾಧನಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
  • ವಿಶ್ವ ದೂರಸಂಪರ್ಕ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ ದೂರಸಂಪರ್ಕದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.
  • ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಮತ್ತು ಇತರ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಬಳಸುವ ಸಾಧ್ಯತೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಪರಸ್ಪರ ಸಂವಹನವನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದ ಬಳಕೆಗೆ ಇದು ಒತ್ತು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link