ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿದ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಟ್ಟ ರೈತ – Kannada News | A Chikkamagaluru Farmer Mocks with brings banana And bread to Officer Who In Shivamogga Jail in Bribe Case
ಶಿವಮೊಗ್ಗ (ಫೆಬ್ರವರಿ .17): ಸಾಮಾನ್ಯವಾಗಿ ಜೈಲಿನಲ್ಲಿರುವ ಬಂಧು-ಮಿತ್ರರನ್ನು ನೋಡಲು ಹೋಗುವವರು ಹಣ್ಣು-ಹಂಪಲು ತೆಗೆದುಕೊಂಡು ಹೋಗುವುದು ಸಹಜ. ಆದರೆ, ಲಂಚ (Bribe) ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಭೂಸ್ವಾಧಿನ ಅಧಿಕಾರಿ ಸದ್ಯ ಶಿವಮೊಗ್ಗದ (Shivamogga) ಸೋಗಾನೆ ಕೇಂದ್ರ ಕಾರಾಗೃಹದಲ್ಲಿದ್ದು, ಜೈಲುಪಾಲಾಗಿರುವ ಭೂಸ್ವಾಧಿನ ಅಧಿಕಾರಿ ಸಿದ್ದಲಿಂಗರೆಡ್ಡಿ ಅವರಿಗಾಗಿ ಚಿಕ್ಕಮಗಳೂರಿನ ರೈತರೊಬ್ಬರು ಬ್ರೆಡ್, ಬಾಳೆಹಣ್ಣು ಹಾಗೂ ಸೊಳ್ಳೆಬತ್ತಿಯನ್ನು ನೀಡಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ದೃಶ್ಯ ಮಾತ್ರ ಎಲ್ಲರ ಹುಬ್ಬೇರಿಸುವಂತಿತ್ತು. ಈ ಮೂಲಕ ಸಾರ್ವಜನಿಕವಾಗಿ ಕೆಎಎಸ್ ಅಧಿಕಾರಿಯ ಮಾನ ಹರಾಜು ಹಾಕಿರುವ…