All posts by nagaraj11081993

ಮದುವೆ ಮನೆಯಲ್ಲೂ ಚುನಾವಣಾ ಫಲಿತಾಂಶದ ಕುತೂಹಲ: ಟಿವಿ9 ಕನ್ನಡ ವೀಕ್ಷಿಸಿದ ಅತಿಥಿಗಳು – Kannada News | By Election Fever: Davangere Wedding Hall Turns Into Result Viewing Centre

ದಾವಣಗೆರೆ, ಮೇ 04: ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಆಗಮಿಸಿದ್ದ ಅತಿಥಿಗಳು ಟಿವಿ9 ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮತ ಎಣಿಕೆಯ ನೇರಪ್ರಸಾರದ ವೀಕ್ಷಣೆಯಲ್ಲಿ ನಿರತರಾಗಿದ್ದರು. ದಾವಣಗೆರೆ ದಕ್ಷಿಣ, ಬಾಗಲಕೋಟೆ ಹಾಗೂ ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳನ್ನು ಜನರು ವಿಶೇಷ ಆಸಕ್ತಿಯಿಂದ ವೀಕ್ಷಿಸುತ್ತಿರೋ ದೃಶ್ಯ ಕಂಡುಬಂತು. ಮದುವೆ ಮನೆಯ ಆವರಣದಲ್ಲಿ ಟಿವಿ ಅಳವಡಿಸಲಾಗಿದ್ದು, ಸಾಮಾಜಿಕ ಕಾರ್ಯಕ್ರಮದ ನಡುವೆಯೂ ಚುನಾವಣಾ ಫಲಿತಾಂಶಗಳಿಗೆ ನೀಡಿದ ಗಮನ ರಾಜಕೀಯ ಪ್ರಜ್ಞೆಗೆ ಸಾಕ್ಷಿ ಎಂಬಂತಿತ್ತು.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

ದಳಪತಿ ವಿಜಯ್ ರಾಜಕೀಯ ಎಂಟ್ರಿ ಹಿಂದೆ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್? ಹೇಗಿತ್ತು ನೋಡಿ ಚುನಾವಣೆ ಪ್ರಚಾರದ ಬ್ಲೂಪ್ರಿಂಟ್ – Kannada News | Thalapathy Vijay’s TVK and PK’s Strategy: Decoding Tamil Nadu’s New Political Power

ತಮಿಳುನಾಡು, ಮೇ.4: ಪ್ರಶಾಂತ್ ಕಿಶೋರ್ ಅವರ ಕಾರ್ಯತಂತ್ರ ಮತ್ತು ದಳಪತಿ ವಿಜಯ್ ಅವರ ನಾಯಕತ್ವದ ಶೈಲಿಗೆ ಸಂಬಂಧಿಸಿದಂತೆ ನೀವು ಹೇಳಿದ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಟಿವಿಕೆ (TVK) ಪಕ್ಷದ ಅಡಿಪಾಯ ಮತ್ತು ವಿಜಯ್ ಅವರ ಸಿಸ್ಟಮ್ಯಾಟಿಕ್ ರಾಜಕೀಯ ಎಂಟ್ರಿ ಹಿಂದೆ ಪ್ರಶಾಂತ್ ಕಿಶೋರ್ ಅವರ ಬ್ಲೂಪ್ರಿಂಟ್ ಕೆಲಸ ಮಾಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಟಿವಿಕೆ ನಾಯಕ ವಿಜಯ್ ಅವರ ರಾಜಕೀಯ ನಡೆಗಳ ಹಿಂದೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಮಾರ್ಗದರ್ಶನವಿದೆ ಎನ್ನಲಾಗುತ್ತಿದೆ. ವಿಜಯ್ ಅವರು ಇತ್ತೀಚೆಗೆ ಹೇಳಿದ “ಕಾಡಿಗೆ ಒಬ್ಬನೇ ರಾಜ” ಎಂಬ ಮಾತುಗಳ ಹಿಂದೆ ದೊಡ್ಡ ಮಟ್ಟದ ಸಿದ್ಧತೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ನಾಯಕತ್ವದ ಶಕ್ತಿ ಮತ್ತು ಗುಂಪನ್ನು ಮುನ್ನಡೆಸುವ ಕಲೆಯನ್ನು ವಿಜಯ್ ಅವರು ತಮ್ಮ ಭಾಷಣಗಳಲ್ಲಿ ಸತತವಾಗಿ ಪ್ರದರ್ಶಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಈಗ ಕೇವಲ ಕ್ರಿಕೆಟ್​ ಅಲ್ಲ, ಇದು ದೊಡ್ಡ ಬಿಸಿನೆಸ್! – Kannada News | Muttiah Muralitharan’s Blunt Truth: IPL is Big Business

ಐಪಿಎಲ್ ಎಂದರೆ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಸಮಬಲದ ಹೋರಾಟ ಎಂದು ನೀವು ಭಾವಿಸಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ! ಆಧುನಿಕ ಕ್ರಿಕೆಟ್‌ನ ಈ ಚುಟುಕು ಸಮರ ಈಗ ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಬದಲಾಗಿ ಕೋಟಿ ಕೋಟಿ ಹಣ ಹರಿಯುವ ಒಂದು ಬೃಹತ್ ಉದ್ಯಮವಾಗಿ ಮಾರ್ಪಟ್ಟಿದೆ. ಹೀಗಂದಿರುವುದು ಮತ್ಯಾರೂ ಅಲ್ಲ. ಸನ್​ರೈಸರ್ಸ್ ಹೈದರಾಬಾದ್​ ತಂಡದ ಸ್ಪಿನ್ನರ್ ಕೋಚ್ ಹಾಗೂ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್.

ಮನೋರಂಜನೆಯೇ ಇಲ್ಲಿ ಮುಖ್ಯ:

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ 244 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನಂತರ ಮಾತನಾಡಿದ ಮುತ್ತಯ್ಯ ಮುರಳೀಧರನ್, ಪ್ರೇಕ್ಷಕರು ಮೈದಾನಕ್ಕೆ ಬರುವುದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡಲು. ಪಿಚ್ ಬೌಲರ್‌ಗಳಿಗೆ ಪೂರಕವಾಗಿದ್ದರೆ, ಪಂದ್ಯಗಳು ‘ಬೋರಿಂಗ್’ ಆಗುತ್ತವೆ ಎಂದು ಪ್ರಾಯೋಜಕರು ಮತ್ತು ಸಂಘಟಕರು ಭಾವಿಸುತ್ತಾರೆ. ಆದ್ದರಿಂದ, ಬ್ಯಾಟರ್‌ಗಳಿಗೆ ಪೂರಕವಾದ ಪಿಚ್‌ಗಳನ್ನು ಸಿದ್ಧಪಡಿಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೌಲರ್​ಗಳ ಸವಾಲು:

ಈ ಬಾರಿ ರನ್ ಗತಿ ಹೆಚ್ಚಾಗಲು ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವೇ ಮುಖ್ಯ ಕಾರಣ ಎಂದು ಮುತ್ತಯ್ಯ ಮುರಳಿಧರನ್ ಬೊಟ್ಟು ಮಾಡಿದ್ದಾರೆ. ಈ ನಿಯಮದಿಂದಾಗಿ ತಂಡಗಳಿಗೆ ಹೆಚ್ಚುವರಿ ಬ್ಯಾಟರ್ ಲಭ್ಯವಾಗುತ್ತಿದ್ದು, ವಿಕೆಟ್ ಬೀಳುವ ಭಯವಿಲ್ಲದೆ ಬ್ಯಾಟರ್‌ಗಳು ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುತ್ತಿದ್ದಾರೆ. ವೈಭವ್ ಸೂರ್ಯವಂಶಿಯಂತಹ ಯುವ ಆಟಗಾರರು ಬುಮ್ರಾದಂತಹ ದಿಗ್ಗಜ ಬೌಲರ್‌ಗಳಿಗೂ ಗೌರವ ನೀಡದೆ ಆಡುತ್ತಿರುವುದು ಕ್ರಿಕೆಟ್ ಬದಲಾಗುತ್ತಿರುವುದಕ್ಕೆ ಸಾಕ್ಷಿ ಎಂದಿದ್ದಾರೆ. ಇವುಗಳನ್ನೆಲ್ಲಾ ಎದುರಿಸುವುದು ಪ್ರಸ್ತುತ ಬೌಲರ್​ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಾನು ಅಥವಾ ಶೇನ್ ವಾರ್ನ್ ಈ ಕಾಲದಲ್ಲಿ ಬೌಲಿಂಗ್ ಮಾಡಿದ್ದರೂ ನಮಗೂ ಕೂಡ ಇದೇ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಹೇಳುವ ಮೂಲಕ ಬೌಲರ್‌ಗಳ ಅಸಹಾಯಕತೆಯನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಬೌಲರ್‌ಗಳು ಈ ಪರಿಸ್ಥಿತಿಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ.

ಐಪಿಎಲ್ ಎಂಬುದು ದೊಡ್ಡ ಬಿಸಿನೆಸ್ ಆಗಿರುವುದರಿಂದ ಬೌಲರ್‌ಗಳು ತಮ್ಮ ಕೌಶಲ್ಯವನ್ನು ಬದಲಾಯಿಸಿಕೊಂಡು, ರನ್ ನಿಯಂತ್ರಿಸುವುದನ್ನೇ ಸಾಧನೆ ಎಂದು ಭಾವಿಸಬೇಕಿದೆ ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.

ಇದನ್ನೂ ಓದಿ: ರೋವ್‌ಮನ್ ಪೊವೆಲ್ ಹಿಡಿದ ‘ಅಸಾಧ್ಯ’ ಕ್ಯಾಚ್‌ಗೆ ಕ್ರಿಕೆಟ್ ಲೋಕ ಫಿದಾ!

ಒಟ್ಟಾರೆಯಾಗಿ, ಐಪಿಎಲ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವು ಹಣಕಾಸಿನ ಲಾಭ ಮತ್ತು ಪ್ರೇಕ್ಷಕರ ಮನೋರಂಜನೆಯ ಮುಂದೆ ಮರೆಯಾಗುತ್ತಿದೆ ಎಂಬುದು ಮುತ್ತಯ್ಯ ಮುರಳಿಧರನ್ ಅವರ ಮಾತಿನ ಸಾರಾಂಶವಾಗಿದೆ. ಸ್ಪಿನ್ ದಿಗ್ಗಜನ ಹೇಳಿಕೆಯು ಬೌಲರ್​ಗಳ ಅಸಹಾಯಕತೆಯನ್ನು ಎತ್ತಿ ತೋರಿಸಿದೆ. ಇದಾಗ್ಯೂ ಐಪಿಎಲ್​ನ ಈ ಬಿಸಿನೆಸ್ ಮಾಡೆಲ್ ಬದಲಾಗುವ ಯಾವುದೇ ಸೂಚನೆ ಇಲ್ಲ. ಹೀಗಾಗಿ ಐಪಿಎಲ್ ಅಂಗಳದಲ್ಲಿ ಬೌಲರ್​ಗಳ ದಂಡನೆ ಮುಂದುವರೆಯುವ ಸಾಧ್ಯತೆಯೇ ಹೆಚ್ಚು.

Source link

‘ಇವತ್ತು ರಿಸಲ್ಟ್ ನಮ್ಮದೇ’ ಎಂದಿದ್ದಕ್ಕೆ ಖುಷಿಯಿಂದ ನಕ್ಕ ತ್ರಿಷಾ

ತ್ರಿಷಾ ಕೃಷ್ಣನ್ ಅವರಿಗೆ ಇಂದು (ಮೇ 4) ಜನ್ಮದಿನ. ಹೀಗಾಗಿ ತಿರುಪತಿಗೆ ಭೇಟಿ ನೀಡಿದ್ದಾರೆ. ದೇವಸ್ಥಾನ ಭೇಟಿಯ ಹಿಂದೆ ಇನ್ನೂ ಒಂದು ಕಾರಣ ಇರಬಹುದು ಎಂಬುದು ಅಭಿಮಾನಿಗಳ ಊಹೆ. ಅದೇನೆಂದರೆ ತ್ರಿಷಾ ಅವರು ವಿಜಯ್ ಜೊತೆ ಆಪ್ತತೆ ಹೊಂದಿದ್ದಾರೆ. ಹೀಗಾಗಿ, ವಿಜಯ್ ಅವರಿಗೆ ರಾಜಕೀಯ ದೃಷ್ಟಿಯಿಂದ ಪ್ರಮುಖ ದಿನ. ತಮಿಳುನಾಡು ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಕೋರುವ ಉದ್ದೇಶವೂ ಅವರಿಗೆ ಇದೆ ಎನ್ನಲಾಗಿದೆ. ದೇವಸ್ಥಾನದಲ್ಲಿ ‘ಮೇಡಂ ಇವತ್ತು ರಿಸಲ್ಟ್ ಪಕ್ಕಾ ಮನದೇ’ (ಮೇಡಂ, ಇಂದು ಫಲಿತಾಂಶ ಖಂಡಿತ ನಮ್ಮದೇ ಪಕ್ಕಾ) ಎಂದರು. ಆಗ ತ್ರಿಷಾ ನಕ್ಕರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸುನಾಮಿ: ಸುವೇಂದು ಅಧಿಕಾರಿ ಫಸ್ಟ್​​ ರಿಯಾಕ್ಷನ್​​ ನೋಡಿ – Kannada News | Suvendu Adhikari’s First Reaction to West Bengal Election 2026 Results

ಕೋಲ್ಕತ್ತಾ, ಮೇ 04: ಪಶ್ಚಿಮ ಬಂಗಾಳ ಚುನಾವಣೆ 2026 ಫಲಿತಾಂಶಗಳ ಕುರಿತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮಮತಾ ಬ್ಯಾನರ್ಜಿ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕೆಲವು ವಾರ್ಡ್‌ಗಳು ಬಿಜೆಪಿ ಪರವಾಗಿದ್ದರೂ, ಬಹುಸಂಖ್ಯಾತ ವಾರ್ಡ್‌ಗಳು ತೆರೆದಾಗ ತಮ್ಮ ಪರವಾಗಿ ಫಲಿತಾಂಶ ಬರುತ್ತದೆ ಎಂಬ ಟಿಎಂಸಿ ಹೇಳಿಕೆಯನ್ನೂ ಅಲ್ಲಗಳೆದಿರುವ ಅವರು ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​ಗೆ ಭರ್ಜರಿ ಮುನ್ನಡೆ: ಕೋಝಿಕ್ಕೋಡ್​ಗೆ ಧಾವಿಸಿದ ಸಚಿವ ಜಮೀರ್ ಅಹ್ಮದ್ – Kannada News | Kerala Election Results 2026: Zameer Ahmed Khan Rushes to Kozhikode as Congress led UDF Maintains Massive Lead

ಬೆಂಗಳೂರು, ಮೇ 4: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಯುಡಿಎಫ್ (ಕಾಂಗ್ರೆಸ್ ಮೈತ್ರಿಕೂಟ) ಭಾರಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಯಾಲಿಕಟ್ (ಕೋಝಿಕ್ಕೋಡ್) ನಗರಕ್ಕೆ ತೆರಳಿದ್ದಾರೆ. ಇದು ಯುಡಿಎಫ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಜಮೀರ್ ಅಹ್ಮದ್ ಖಾನ್ ಅವರು ಕೇರಳದಲ್ಲಿ ಯುಡಿಎಫ್ ಪರವಾಗಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದರು. ಪಕ್ಷದ ಹಿರಿಯ ನಾಯಕ ವೇಣುಗೋಪಾಲ್ ಅವರ ಸೂಚನೆಯ ಮೇರೆಗೆ ಅವರು ಕೇರಳಕ್ಕೆ ತೆರಳಿದ್ದರು. ಯುಡಿಎಫ್ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ್ದ ಜಮೀರ್ ಅಹ್ಮದ್, ಈಗ ಪಕ್ಷದ ಯಶಸ್ಸನ್ನು ಸಂಭ್ರಮಿಸಲು ಅಲ್ಲಿಗೆ ತಲುಪಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಡಿಗೆ ರಾಜನೊಬ್ಬನೇ, ಅವನು ಒಂಟಿಯಾಗಿದ್ದರೂ ಸರಿ! ಟಿವಿಕೆ ವಿಜಯ್ ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್!

ಒಂದು ದಟ್ಟವಾದ ಕಾಡಿನಲ್ಲಿ ನೂರಾರು ನರಿಗಳು ಮತ್ತು ಚಿರತೆಗಳಿದ್ದವು. ಅವೆಲ್ಲವೂ ಕಾಡಿನ ಮೇಲೆ ತಮ್ಮದೇ ಅಧಿಕಾರವೆಂದು ಮೆರೆಯುತ್ತಿದ್ದವು. ಒಂದು ದಿನ ಪ್ರಾಣಿಗಳೆಲ್ಲ ಸೇರಿ ತಮ್ಮಲ್ಲಿ ಯಾರು ಶಕ್ತಿಶಾಲಿ ಎಂದು ಚರ್ಚಿಸುತ್ತಿದ್ದಾಗ, ನರಿಯೊಂದು ಹೇಳಿತು, “ನಾವೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದೇವೆ, ಹಾಗಾಗಿ ಕಾಡು ನಮ್ಮದು!” ಎಂದು. ಆದರೆ, ಅದೇ ಸಮಯದಲ್ಲಿ ಅಲ್ಲಿಗೆ ಒಂದು ಸಿಂಹ ಆಗಮಿಸಿತು. ಅದರ ಹೆಜ್ಜೆಗಳ ಸದ್ದಿಗೆ ಇಡೀ ಕಾಡೇ ಸ್ತಬ್ಧವಾಯಿತು. ಸಿಂಹವು ವೇದಿಕೆಯ ಮೇಲೆ ನಿಂತಂತೆ ಒಂದು ಎತ್ತರದ ಬಂಡೆಯ ಮೇಲೆ ನಿಂತು ಹೇಳಿತು. “ಕಾಡಿನಲ್ಲಿ ಎಷ್ಟೇ ನರಿಗಳಿರಲಿ ಅಥವಾ ಬೇರೆ ಪ್ರಾಣಿಗಳಿರಲಿ, ಅಲ್ಲಿ ಇರುವುದು ಒಂದೇ ಸಿಂಹ! ಆ ಸಿಂಹ ಒಂಟಿಯಾಗಿದ್ದರೂ ಸಹ, ಅದುವೇ ಕಾಡಿನ ನಿಜವಾದ ರಾಜ.” ಇದು ಕೇವಲ ಮಾತಲ್ಲ, ಇದೊಂದು ಘೋಷಣೆ. ಸಿಂಹದ ಈ ಮಾತುಗಳು ಅದರ ಆಕರ್ಷಕ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತಿದ್ದವು. ಅದರ ಮುಂದೆ ನಿಂತಿದ್ದ ನೂರಾರು ಪ್ರಾಣಿಗಳು ಅದರ ಗಾಂಭೀರ್ಯಕ್ಕೆ ಮಣಿದವು. ಸಿಂಹವು ತನ್ನ ಎರಡು ಕೈಗಳನ್ನು ಎತ್ತಿ, ಜನಸಾಗರದಂತೆ ಕಾಣುವ ತನ್ನ ಪ್ರಾಣಿ ಸಂಕುಲದ ಮುಂದೆ ಹೆಮ್ಮೆಯಿಂದ ನಿಂತಿತು. ಅದರ ಒಂದು ಸಣ್ಣ ಗರ್ಜನೆ ಕಾಡಿನ ಪ್ರತಿಯೊಂದು ಮೂಲೆಗೂ ತಲುಪಿತು. ಇದು ನಾಯಕತ್ವದ ನಿಜವಾದ ಶಕ್ತಿ. ಗುಂಪಿನಲ್ಲಿ ಬರುವುದಕ್ಕಿಂತ, ಒಂಟಿಯಾಗಿ ನಿಂತು ಗುಂಪನ್ನು ಮುನ್ನಡೆಸುವವನೇ ನಿಜವಾದ “ಕಾಡಿನ ರಾಜ” ಎಂದು ಚುನಾವಣಾ ಪ್ರಚಾರದಲ್ಲಿ ಟಿವಿಕೆ ನಾಯಕ ವಿಜಯ್​​ ಅವರು ಹೇಳಿರುವ ಮಾತು ಇದೀಗ ಎಕ್ಸ್​​ನಲ್ಲಿ ಮತ್ತೆ ವೈರಲ್​ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪ ಚುನಾವಣೆ​: ಕಾಂಗ್ರೆಸ್​​ಗೆ ಮುನ್ನಡೆ; ಕಾರ್ಯಕರ್ತರ ಸಂಭ್ರಮ – Kannada News | Bagalkot By election: Congress Leads, Workers Celebrate Umesh Metis Initial Success

ಬಾಗಲಕೋಟೆ, ಮೇ 04: ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆರಂಭಿಕ ಸುತ್ತಿನಿಂದಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಮುನ್ನಡೆ ಸಾಧಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಹರ್ಷೋದ್ಗಾರ ಮೂಡಿದೆ. ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಸಂಭ್ರಮಾಚರಣೆ ನಡೆಸಿದ್ದು, ಕಾಂಗ್ರೆಸ್ ಬಾವುಟಗಳನ್ನು ಹಿಡಿದು, ಜೈಕಾರಗಳನ್ನು ಕೂಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಟೋ ಸೀಟ್​​ ವಿಚಾರಕ್ಕೆ ಮಾರಾಮಾರಿ: ಕುಸಿದು ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು – Kannada News | Padarayanapura: Auto Seat Fight Turns Fatal, Man Dies from Assault Injuries

ಬೆಂಗಳೂರು, ಮೇ 04: ಆಟೋ ಸೀಟ್​​ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ತೀವ್ರ ಹಲ್ಲೆಗೊಳಗಾಗಿದ್ದ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಪಾದರಾಯನಪುರದಲ್ಲಿ ನಡೆದಿದೆ. ಮೃತನನ್ನು ಪರಿಚಿತನಿಂದ ಹಲ್ಲೆಗೊಳಗಾಗಿದ್ದ ಮುಬಾರಕ್​​ (26) ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಬ್ರೇಜ್ (46) ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಮೇ 1ರಂದು ಮುಬಾರಕ್ ತನ್ನ ಆಟೋ ಸೀಟ್ ತೆಗೆದುಕೊಂಡಿದ್ದಾನೆ ಎಂದು ತಬ್ರೇಜ್ ಮೇಲೆ ಆರೋಪಿಸಿದ್ದ. ಇದೇ ವಿಚಾರವಾಗಿ ಬೆಳಗ್ಗೆ 10ಗಂಟೆ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ್ದ ಸ್ಥಳೀಯರು, ಇಬ್ಬರನ್ನೂ ಬೇರ್ಪಡಿಸಿದ್ದರು. ಹೀಗಿದ್ದರೂ ಮತ್ತೆ ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ತಬ್ರೇಜ್ ಮರದ ತುಂಡಿನಿಂದ ಮುಬಾರಕ್ ಮೇಲೆ ದಾಳಿ ನಡೆಸಿದ್ದ. ಭೀಕರ ದಾಳಿ ವೇಳೆ ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಪರಿಣಾಮ ಮುಬಾರಕ್ ಕುಸಿದು ಬಿದ್ದಿದ್ದ. ತಕ್ಷಣವೇ ಈತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮುಬಾರಕ್​​ ಕೋಮಾಗೆ ತಲುಪಿದ್ದು, ಚಿಕಿತ್ಸೆ ಫಲಿಸದೆ ಅಂತಿಮವಾಗಿ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ: ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಹಲ್ಲೆಗೊಳಗಾಗಿ ಮೃತಪಟ್ಟಿರುವ ಮುಬಾರಕ್​​ಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ ಎನ್ನಲಾಗಿದೆ. ಇನ್ನಯ ಘಟನೆ ಸಂಬಂಧ ಜಗಜೀವನರಾಮನಗರ ಪೊಲೀಸರು ಮೊದಲು ಕೊಲೆ ಯತ್ನ ಪ್ರಕರಣ ದಾಖಲಿಸಿ ತಬ್ರೇಜ್‌ನ್ನು ಬಂಧಿಸಿದ್ದರು. ಇದೀಗ ಮುಬಾರಕ್ ಸಾವಿನ ಹಿನ್ನೆಲೆ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಿದ್ದಾರೆ. ಕ್ಷುಲ್ಕ ವಿಚಾರಕ್ಕೆ ಶುರುವಾದ ಜಗಳ ಓರ್ವನ ಸಾವಿನಲ್ಲಿ ಅಂತ್ಯವಾಗಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೋವ್‌ಮನ್ ಪೊವೆಲ್ ಹಿಡಿದ ‘ಅಸಾಧ್ಯ’ ಕ್ಯಾಚ್‌ಗೆ ಕ್ರಿಕೆಟ್ ಲೋಕ ಫಿದಾ! – Kannada News | Ipl 2026: rovman powell catch

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎಂದಿಗೂ ಅದ್ಭುತಗಳಿಗೆ ಹೆಸರುವಾಸಿ. ಆದರೆ 2026ರ ಮೇ 3ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವೆ ನಡೆದ ಪಂದ್ಯದಲ್ಲಿ ರೋವ್‌ಮನ್ ಪೊವೆಲ್ ಹಿಡಿದ ಕ್ಯಾಚ್ ಐಪಿಎಲ್ ಇತಿಹಾಸದ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದಾಗಿ ದಾಖಲಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡವು ಸ್ಫೋಟಕ ಬ್ಯಾಟಿಂಗ್ ನಡೆಸುತ್ತಾ ಬೃಹತ್ ಮೊತ್ತದತ್ತ ಸಾಗುತ್ತಿತ್ತು. ಕ್ರೀಸ್‌ನಲ್ಲಿ ಅಪಾಯಕಾರಿ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಅಬ್ಬರಿಸುತ್ತಿದ್ದರು. ಕ್ಯಾಮರೋನ್ ಗ್ರೀನ್ ಎಸೆದ 11ನೇ ಓವರ್‌ನಲ್ಲಿ ಕ್ಲಾಸೆನ್ ಬಲವಾಗಿ ಪುಲ್ ಶಾಟ್ ಬಾರಿಸಿದರು. ಚೆಂಡು ಗಾಳಿಯಲ್ಲಿ ಅತಿ ವೇಗವಾಗಿ ಬೌಂಡರಿ ಗೆರೆಯತ್ತ ನುಗ್ಗುತ್ತಿತ್ತು.

ಆದರೆ ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋವ್‌ಮನ್ ಪೊವೆಲ್, ಸುಮಾರು 15 ಮೀಟರ್‌ಗಳಷ್ಟು ವೇಗವಾಗಿ ಓಡಿ ಬಂದು, ಗಾಳಿಯಲ್ಲಿ ಹಾರುತ್ತಾ ಕೇವಲ ಒಂದು ಕೈಯಿಂದ ಚೆಂಡನ್ನು ಹಿಡಿದರು. ನೆಲಕ್ಕೆ ಬಿದ್ದ ರಭಸಕ್ಕೆ ಅವರು ಧರಿಸಿದ್ದ ಸನ್ ಗ್ಲಾಸ್ (ಕನ್ನಡಕ) ಕೂಡ ತುಂಡಾಯಿತು! ಆದರೂ ಚೆಂಡನ್ನು ಬಿಡದೆ ಹಿಡಿದಿದ್ದ ಪೊವೆಲ್ ಅವರ ಸಮರ್ಪಣಾ ಮನೋಭಾವಕ್ಕೆ ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು.

ಹೆನ್ರಿಕ್ ಕ್ಲಾಸೆನ್  (11 ರನ್) ಔಟ್ ಆಗುತ್ತಿದ್ದಂತೆ ಸನ್ ರೈಸರ್ಸ್ ತಂಡ ದಿಕ್ಕೆಟ್ಟಿತು. 105ಕ್ಕೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಹೈದರಾಬಾದ್, ಅಂತಿಮವಾಗಿ 165 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮುಖ್ಯ ಕಾರಣ ರೋವ್​ಮನ್ ಪೊವೆಲ್ ಎಂದರೆ ತಪ್ಪಾಗಲಾರದು. ಏಕೆಂದರೆ ಪೊವೆಲ್ ಅವರ ಈ ಒಂದು ಕ್ಯಾಚ್ ಪಂದ್ಯದ ಸಂಪೂರ್ಣ ಚಿತ್ರಣವನ್ನೇ ಬದಲಿಸಿತ್ತು. ಹೀಗಾಗಿಯೇ ಇದೀಗ ಪೊವೆಲ್ ಅವರ ಅಸಾಧರಣ ಕ್ಯಾಚ್​​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

Source link