ಬೆಂಗಳೂರಿಗರೇ ನೆಮ್ಮದಿಯಾಗಿ ಉಸಿರಾಡಿ
ಬೆಂಗಳೂರು, ಆಗಸ್ಟ್ 05: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇಂದಿನ ಗಾಳಿಯ ಗುಣಮಟ್ಟ (AQI) ಅತ್ಯಂತ ಉತ್ತಮ ಮಟ್ಟದಲ್ಲಿದೆ. ಸಕ್ರಿಯ ಮುಂಗಾರು ಮಳೆಯಿಂದಾಗಿ ಧೂಳು ಹಾಗೂ ಹೊಗೆಯ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 38 ರಿಂದ 41ರಷ್ಟಿದೆ. PM10 ಪ್ರಮಾಣವು ಸುಮಾರು 47 µg/m³ ಮತ್ತು PM2.5 ಪ್ರಮಾಣವು 20 µg/m³ ಮಟ್ಟದಲ್ಲಿದೆ. ಜಯನಗರ, ಮಲ್ಲೇಶ್ವರಂ ಮತ್ತು ಕೆಂಗೇರಿ ಭಾಗಗಳಲ್ಲಿ ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ. ಸಿಲ್ಕ್ ಬೋರ್ಡ್, ಹೆಬ್ಬಾಳ ಮತ್ತು ಟಿನ್ಫ್ಯಾಕ್ಟರಿ ಜಂಕ್ಷನ್ಗಳಲ್ಲೂ AQI 50 ರಿಂದ 68 ರ ನಡುವೆ ಇದ್ದು, ಸಾಧಾರಣ ಮಟ್ಟ ಕಾಯ್ದುಕೊಂಡಿದೆ.
ಕರ್ನಾಟಕದ ಪ್ರಮುಖ ನಗರಗಳ ಗಾಳಿಯ ಸ್ಥಿತಿಗತಿ
- ಮೈಸೂರು ಮತ್ತು ಮಡಿಕೇರಿ: 30 ರಿಂದ 35 AQI ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಶುದ್ಧ ಹಾಗೂ ಸೌಮ್ಯ ವಾತಾವರಣ ಇಲ್ಲಿದೆ.
- ಕೋಲಾರ ಮತ್ತು ತುಮಕೂರು: 45 ರಿಂದ 50 AQI ನೊಂದಿಗೆ ಉತ್ತಮ ಶ್ರೇಣಿಯಲ್ಲಿದೆ.
- ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ: 50 ರಿಂದ 65 AQI ನೊಂದಿಗೆ ಸಾಧಾರಣ ಮಟ್ಟದಲ್ಲಿದೆ.
- ಮಂಗಳೂರು ಹಾಗೂ ಉಡುಪಿ: ಕರಾವಳಿ ಭಾಗದ ಮಳೆಯಿಂದಾಗಿ AQI 32 ಕ್ಕಿಂತ ಕಡಿಮೆಯಿದೆ.
ಗಾಳಿಯ ಗುಣಮಟ್ಟವು ಉತ್ತಮವಾಗಿರುವುದರಿಂದ ಉಸಿರಾಟದ ತೊಂದರೆ ಇರುವವರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಹೊರಂಗಣ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ. ಮುಂಗಾರು ಮಳೆ ಮುಂದುವರಿಯುವ ಸೂಚನೆ ಇರುವುದರಿಂದ ಮುಂಬರುವ ದಿನಗಳಲ್ಲೂ ರಾಜ್ಯದ ವಾಯು ಗುಣಮಟ್ಟ ಇದೇ ರೀತಿ ಉತ್ತಮವಾಗಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
