Category Archives: Blog

Your blog category

ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್ – Kannada News | Wife, Lover Among Nine Held For Killing Ex Serviceman To Claim Rs 2 Crore Insurance at Belagavi

ಬೆಳಗಾವಿ, ಜೂನ್ 15): ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತ ಕೊಲೆ ನಡೆದಿದೆ. ಇಲ್ಲಿ ಎಫ್ಎಸ್ಎಲ್ ಅಧಿಕಾರಿಗಳೇ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು ತನಿಖೆಯಲ್ಲಿ ಬಯಲಾಗಿದೆ. ಹೌದು…ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯ ಮಾಜಿ ಸೈನಿಕ ( Ex Serviceman) ಸಂದೀಪ್ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಸುಮಾ, ತನ್ನ ಪತಿ ಮಾಜಿ ಸೈನಿಕನಾಗಿದ್ದ ಸಂದೀಪ್​​​​ ಮಂಜರಗಿಯನ್ನ ಹತ್ಯೆಗೈದು ಬಳಿಕ ಆಡಿದ್ದ ನೌಟಂಕಿ ಆಟ ಬಟಾಬಯಲಾಗಿದೆ. ಪ್ರಿಯಕರನ ತೆಕ್ಕೆಗಾಗಿ, 2 ಕೋಟಿ ರೂಪಾಯಿ ಇನ್ಶುರೆನ್ಸ್​​ ಹಣಕ್ಕಾಗಿ ಗಂಡನನ್ನೇ ಕೊಂದಿದ್ದ ಹಂತಕಿ ಇವಳು. ಪತಿ ಹತ್ಯೆಗಾಗಿ ಈಕೆ ಮಾಡಿದ್ದ ಮಸಲತ್ತು, ಕೊಲೆ ಸಾಕ್ಷ್ಯಗಳನ್ನ ಮುಚ್ಚಾಕಲು ಈಕೆ ಬಳಸಿದ್ದ ತಂತ್ರ ಕಂಡು ಪೊಲೀಸರು ಶಾಕ್ ಆಗಿದ್ದಾರೆ.. ಯಾಕಂದ್ರೆ, ಸಿನಿಮಾಗಳನ್ನೂ ಮೀರಿಸವಂತೆ ಸಂಚು ರೂಪಿಸಿದ್ದಾಳೆ.

2 ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣವನ್ನು ಜಿಲ್ಲೆಯ ಯಮಕನಮರಡಿ ಠಾಣೆ ಪೊಲೀಸರು ಭೇದಿಸಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಹಣ ಪಡೆದು, ಎಫ್ಎಸ್ಎಲ್ ಪ್ರಯೋಗಾಲಯದ ಸಿಬ್ಬಂದಿ ಸಹಾಯದಿಂದ ಆರೋಪಿಗಳು ವರದಿಯನ್ನೇ ಬದಲಿಸಿರುವುದು ರಾಜ್ಯದಲ್ಲೇ ಮೊದಲ ಪ್ರಕರಣ .

Source link

ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ – Kannada News | US Iran Peace Deal: Why It’s Bad News for India, Says Ex Israeli Spokesperson Eylon Levy

ನವದೆಹಲಿ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಏರ್ಪಟ್ಟಿರುವುದು ಭಾರತಕ್ಕೆ ಖುಷಿ ಸುದ್ದಿಯಲ್ಲ. ಭಾರತ ಕಳವಳಪಡಬೇಕಾದ ಸಂಗತಿ ಎಂದು ಇಸ್ರೇಲ್​ನ ಮಾಜಿ ವಕ್ತಾರರಾದ ಐಲಾನ್ ಲೆವಿ (Eylon Levy) ಎಚ್ಚರಿಸಿದ್ದಾರೆ. ಭಾರತ ಈ ಒಪ್ಪಂದವನ್ನು ಜಾಗರೂಕತೆಯಿಂದ ಸ್ವಾಗತಿಸಿದೆ. ಆದರೆ, ಭಾರತಕ್ಕೆ ಇದು ದುರಂತ ತರುತ್ತದೆ ಎಂದು ಲೆವಿ ವಾದಿಸಿದ್ಧಾರೆ. ಈ ಶಾಂತಿ ಒಪ್ಪಂದವು ಭಾರತಕ್ಕೆ ಹೇಗೆ ಹಿನ್ನಡೆ ತರಬಲ್ಲುದು ಎಂದು ಅವರು ಕೆಲ ನಿದರ್ಶನಗಳನ್ನು ನೀಡಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಸ್ಥಾನಮಾನ ಹೆಚ್ಚಳ

ಈ ಒಪ್ಪಂದದ ಸಂಧಾನ ಮಾತುಕತೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರಮುಖ ಪಾತ್ರ ವಹಿಸಿದ್ದಾರೆ. ಐಲಾನ್ ಲೆವಿ ಅವರ ಪ್ರಕಾರ, “ಈ ಒಪ್ಪಂದವು ಭಾರತದ ಪರಮ ವೈರಿಯಾದ ಪಾಕಿಸ್ತಾನವನ್ನು ಜಾಗತಿಕ ಶಾಂತಿ ಸಂರಕ್ಷಕನ ಸ್ಥಾನಕ್ಕೆ ಏರಿಸಿದೆ”. ಪಾಕಿಸ್ತಾನದ ಭಯೋತ್ಪಾದನಾ ಪರ ನೀತಿಯನ್ನು ಜಗತ್ತಿನೆದುರು ಬಯಲು ಮಾಡಲು ಭಾರತ ನಡೆಸುತ್ತಿದ್ದ ಪ್ರಯತ್ನಗಳಿಗೆ ಇದು ಹಿನ್ನಡೆ ತರಲಿದ್ದು, ಇಸ್ಲಾಮಾಬಾದ್ ಅನ್ನು ಗ್ಲೋಬಲ್ ಸೌತ್​ನ (Global South) ನಾಯಕನನ್ನಾಗಿ ಬಿಂಬಿಸಲು ಸಹಾಯ ಮಾಡುತ್ತದೆ ಎಂಬುದು ಅವರ ವಾದ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಭಾರತದ ವ್ಯಾಪಾರ ಮಾರ್ಗಕ್ಕೆ ಕುತ್ತು

ಭಾರತವು ಪಶ್ಚಿಮ ಏಷ್ಯಾದ ಮೂಲಕ ಯುರೋಪ್ ತಲುಪಲು ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC) ಯೋಜನೆಗೆ ಈ ಒಪ್ಪಂದದಿಂದ ಧಕ್ಕೆಯಾಗಬಹುದು. ನಿರ್ಬಂಧಗಳಿಂದ ಮುಕ್ತಿ ಪಡೆದು ಆರ್ಥಿಕವಾಗಿ ಬಲಗೊಳ್ಳುವ ಇರಾನ್, ಬ್ಯಾಲಿಸ್ಟಿಕ್ ಕ್ಷಿಪಣಿಗಳ ನೆರವಿನಿಂದ ಭಾರತದ ಪಶ್ಚಿಮದ ವ್ಯಾಪಾರ ಹೆಬ್ಬಾಗಿಲನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬಹುದು. ಇದರಿಂದಾಗಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಮುಕ್ತವಾಗಿ ಓಡಾಡುವಂತಾಗಿ, ಹಿಂದೂ ಮಹಾಸಾಗರ ಮತ್ತು ಕೆಂಪು ಸಮುದ್ರದ ಹಡಗು ಮಾರ್ಗಗಳಿಗೆ ಹೊಸ ಭದ್ರತಾ ಆತಂಕ ಎದುರಾಗಲಿದೆ ಎಂದು ಐಲಾನ್ ಲೆವಿ ಎಚ್ಚರಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿರುವ 1 ಕೋಟಿ ಭಾರತೀಯರ ಭದ್ರತೆಗೆ ಅಪಾಯ

ಮಧ್ಯಪ್ರಾಚ್ಯ ಅಥವಾ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 10 ಮಿಲಿಯನ್ (1 ಕೋಟಿ) ಭಾರತೀಯ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ಈ ಒಪ್ಪಂದವು ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಭೀತಿಯನ್ನು ಸಂಪೂರ್ಣವಾಗಿ ತೊಡೆದುಹಾಕಿಲ್ಲ. ಈ ಪ್ರದೇಶದಲ್ಲಿ ಇರಾನ್‌ನ ಬೆದರಿಕೆಗಳು ಸಂಪೂರ್ಣವಾಗಿ ಶಾಂತವಾಗದ ಹೊರತು, ಅಲ್ಲಿರುವ ಭಾರತೀಯ ಕಾರ್ಮಿಕರ ರಕ್ಷಣೆ ಮತ್ತು ಅವರು ಭಾರತಕ್ಕೆ ಕಳುಹಿಸುವ ಹಣದ (Remittances) ಭದ್ರತೆಗೆ ಆತಂಕ ಮುಂದುವರಿಯಲಿದೆ ಎಂದು ಇಸ್ರೇಲ್​ನ ಮಾಜಿ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಪರಮಾಣು ಸಮಸ್ಯೆಗೆ ಪರಿಹಾರ ಸಿಗದಿರುವುದು

ಈ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ತಡೆಯುವ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲ. ಅಮೆರಿಕ ತನ್ನ ಸಂಪೂರ್ಣ ಹಿಡಿತವನ್ನು ಬಿಟ್ಟುಕೊಟ್ಟು ಶರಣಾಗಿರುವುದರಿಂದ, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಇರಾನ್ ಭವಿಷ್ಯದಲ್ಲಿ ಪರಮಾಣು ಅಸ್ತ್ರಗಳನ್ನು ಹೊಂದಬಹುದು. ಇದು ಭಾರತದ ರಾಷ್ಟ್ರೀಯ ಭದ್ರತೆಗೆ ದೀರ್ಘಕಾಲದ ದೊಡ್ಡ ಬೆದರಿಕೆಯಾಗಲಿದೆ ಎಂದೂ ಲೆವಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ಭೌಗೋಳಿಕ ರಾಜಕೀಯ ವಿಶ್ಲೇಷಕರಾದ ಇಯಾನ್ ಬ್ರೆಮ್ಮರ್ ಕೂಡ ಇದನ್ನು ಬೆಂಬಲಿಸಿದ್ದು, “ವಿಶ್ವಕ್ಕೆ ಹಾರ್ಮುಜ್ ಜಲಮಾರ್ಗ ಮುಕ್ತವಾಗಬೇಕಿರುವುದು ಅನಿವಾರ್ಯವಾಗಿತ್ತು. ಆದರೆ ಪರಮಾಣು ಮತ್ತು ಕ್ಷಿಪಣಿ ನಿಯಂತ್ರಣದ ಬಗ್ಗೆ ಒಪ್ಪಂದದಲ್ಲಿ ಯಾವುದೇ ಉಲ್ಲೇಖವಿಲ್ಲದಿರುವುದು ಟ್ರಂಪ್ ಆಡಳಿತದ ಬಹುದೊಡ್ಡ ವಿದೇಶಾಂಗ ನೀತಿಯ ವಿಫಲತೆ” ಎಂದು ಕರೆದಿದ್ದಾರೆ.

ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ಭಾರತವು ಹೊಂದಿರುವ ‘ತಟಸ್ಥ ನೀತಿ’ಯನ್ನು (Neutrality) ಇನ್ನು ಮುಂದೆ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು ಮತ್ತು ಭಾರತವು ಇಸ್ರೇಲ್‌ನೊಂದಿಗೆ ಮತ್ತಷ್ಟು ಹತ್ತಿರದ ಕಾರ್ಯತಂತ್ರದ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗಲಿದೆ ಎಂದು ಲೆವಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ನನಗೆ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ – Kannada News | PM Modi never wanted power Union Minister Pralhad Joshi reveals interesting Details

ಬೆಂಗಳೂರು, ಜೂನ್ 15: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಿವಿ9 ಜೊತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ದಾಖಲೆಯ ಆಡಳಿತಾವಧಿ ಮತ್ತು ನಾಯಕತ್ವದ ಕುರಿತು ಮಾತನಾಡಿದ್ದಾರೆ. ಟಿವಿ9ನ ರಂಗನಾಥ್ ಭಾರದ್ವಾಜ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದಾಖಲೆಯ ಆಡಳಿತಾವಧಿ ಮತ್ತು ನಾಯಕತ್ವದ ಕುರಿತು ಪ್ರಲ್ಹಾದ್ ಜೋಶಿ (Pralhad Joshi) ಸುದೀರ್ಘವಾಗಿ ಮಾತನಾಡಿದ್ದಾರೆ.

ಆರಂಭದಲ್ಲಿ ಯು.ಆರ್. ಅನಂತಮೂರ್ತಿ ಅವರಂತಹ ಕೆಲವರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದರು. ಇದು ಅವರ ನಾಯಕತ್ವದ ಬಗ್ಗೆ ಇದ್ದ ಆರಂಭಿಕ ಅನುಮಾನಗಳನ್ನು ಸೂಚಿಸುತ್ತದೆ. ಆದರೆ ಮೋದಿ ಅವರು ಇದೇ ವ್ಯವಸ್ಥೆಯಲ್ಲಿ ಕೆಲಸ ಮಾಡಿ, ರಾಷ್ಟ್ರ ಮೊದಲು ಎಂಬ ತತ್ವವನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದರು. ಅವರಿಗೆ ಅಧಿಕಾರದ ಆಸಕ್ತಿ ಇರಲಿಲ್ಲ. 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ತಮ್ಮ ಕೆಲಸ ಮುಗಿದ ನಂತರ, ಅವರು ಸಂಘಟನಾ ಕಾರ್ಯಕ್ಕೆ ಮರಳಲು ಯೋಚಿಸಿದ್ದರು. ಇದು ಅವರ ನಿರ್ಲಿಪ್ತ ಸ್ವಭಾವವನ್ನು ತೋರಿಸುತ್ತದೆ. ಮೋದಿ ಎಂದಿಗೂ ಅಧಿಕಾರಕ್ಕೆ ಆಸೆ ಪಡಲಿಲ್ಲ. ಅವರು ಅಧಿಕಾರ ಸಾಕು ಎಂದಿದ್ದರು. ಮೋದಿ ಅವರು ಜನರಲ್ಲಿ ನಿರಾಶೆಯನ್ನು ತುಂಬುವ ಬದಲು, ಭರವಸೆ ಮತ್ತು ಆಸೆಯನ್ನು ತುಂಬುವ ನಾಯಕರಾಗಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಬಣ್ಣಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್‌ನಲ್ಲಿ ತುರ್ತು ಪರಿಸ್ಥಿತಿ ಮನಸ್ಥಿತಿ ಇನ್ನೂ ಜೀವಂತವಾಗಿದೆ; ಅಶೋಕ್ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ತಿರುಗೇಟು – Kannada News | Congress has not shed Emergency mindset BJP Hits back on Ashok Gehlot’s remarks

ನವದೆಹಲಿ, ಜೂನ್ 15: ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ (Ashok Gehlot) ಇಂದು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಇಂದು ಇಂದಿರಾ ಗಾಂಧಿ ಬದುಕಿರುತ್ತಿದ್ದರೆ, ಅವರು ಅಧಿಕಾರದಲ್ಲಿರುತ್ತಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡುತ್ತಿದ್ದರು ಎಂದು ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕತ್ವಕ್ಕೆ ಇಂದಿಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅವರು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಬಯಸುತ್ತಾರೆ ಎಂದು ಬಿಜೆಪಿ ಆರೋಪಿಸಿದೆ.

“ಕಾಂಗ್ರೆಸ್ ಪಕ್ಷಕ್ಕೆ ಇಂದಿಗೂ 1975ರ ತುರ್ತು ಪರಿಸ್ಥಿತಿಯ ಸರ್ವಾಧಿಕಾರಿ ಮನಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಒಂದು ವೇಳೆ ಇವರು ಮತ್ತೆ ಅಧಿಕಾರಕ್ಕೆ ಬಂದರೆ ವಿರೋಧ ಪಕ್ಷಗಳನ್ನೇ ನಿಷೇಧಿಸಿ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುತ್ತಾರೆ” ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಇಂದಿರಾ ಗಾಂಧಿ ಬದುಕಿದ್ದರೆ ಬಿಜೆಪಿಗೆ ನಿಷೇಧ ಹೇರುತ್ತಿದ್ದರು; ವಿವಾದಕ್ಕೀಡಾದ ಅಶೋಕ್ ಗೆಹ್ಲೋಟ್

ಜೈಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೈದ್ಧಾಂತಿಕ ನಿಲುವುಗಳು ದೇಶಕ್ಕೆ ಅಪಾಯಕಾರಿ. ಒಂದು ವೇಳೆ ಇಂದು ಇಂದಿರಾ ಗಾಂಧಿಯವರಂತಹ ನಾಯಕರು ಅಧಿಕಾರದಲ್ಲಿರುತ್ತಿದ್ದರೆ, ಅವರು ಬಿಜೆಪಿಯಂತಹ ಪಕ್ಷವನ್ನು ಖಂಡಿತವಾಗಿಯೂ ನಿಷೇಧಿಸುತ್ತಿದ್ದರು. ಹಿಂದುತ್ವ ಮತ್ತು ಧರ್ಮದ ಹೆಸರಿನಲ್ಲಿ ನೀವು ರಾಜಕೀಯ ಪಕ್ಷವನ್ನು ನಡೆಸಲು ಸಾಧ್ಯವಿಲ್ಲ. ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಲು ನಮ್ಮ ಸಂವಿಧಾನ ಅನುಮತಿ ನೀಡುವುದಿಲ್ಲ. ದೇಶದಲ್ಲಿ ಸದ್ಯದ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ” ಎಂದು ಹೇಳಿದ್ದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಡಿ (ED), ಸಿಬಿಐ (CBI) ಮತ್ತು ಐಟಿ ಇಲಾಖೆಗಳಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದೆ. ಚುನಾವಣಾ ಆಯೋಗವು ಬಿಜೆಪಿಯ ಏಜೆಂಟ್‌ನಂತೆ ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ; ಕಮಲನಾಥ್, ಅಶೋಕ್ ಗೆಹ್ಲೋಟ್ ಪುತ್ರರಿಗೆ ಸ್ಥಾನ

ಅಶೋಕ್ ಗೆಹ್ಲೋಟ್ ಹೇಳಿಕೆ ಹೊರಬೀಳುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮತ್ತು ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ವಿರುದ್ಧ ವೀಡಿಯೊ ಮೂಲಕ ವಾಗ್ದಾಳಿ ನಡೆಸಿದ್ದಾರೆ. “ಅಶೋಕ್ ಗೆಹ್ಲೋಟ್ ಅವರ ಹೇಳಿಕೆ ಕಾಂಗ್ರೆಸ್ ಇಂದಿಗೂ ಪ್ರಜಾಪ್ರಭುತ್ವ ವಿರೋಧಿ ಎಂಬುದನ್ನು ಸ್ಪಷ್ಟಪಡಿಸಿದೆ. ಗಾಂಧಿ-ವಾದ್ರಾ ಕುಟುಂಬವೇ ಭಾರತೀಯ ಪ್ರಜಾಪ್ರಭುತ್ವಕ್ಕೆ ಇರುವ ಅತಿ ದೊಡ್ಡ ಗಂಡಾಂತರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ ಎಂಬುದು ಇದರಿಂದ ಸಾಬೀತಾಗಿದೆ” ಎಂದು ಪ್ರದೀಪ್ ಭಂಡಾರಿ ಹೇಳಿದ್ದಾರೆ.

“ವಿರೋಧ ಪಕ್ಷಗಳನ್ನು ನಿಷೇಧಿಸುವುದು ಕಾಂಗ್ರೆಸ್‌ನ ಹಳೆಯ ರೋಗ. ಜನಬೆಂಬಲ ಕಳೆದುಕೊಂಡಿರುವ ಕಾಂಗ್ರೆಸ್, ಈಗ ಇಂತಹ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದೆ. ಕಾಂಗ್ರೆಸ್ ಈ ಹಿಂದೆ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಗಾಗಿ ದೇಶದ ಜನರ ಕ್ಷಮೆ ಕೇಳುವ ಬದಲು, ಇಂದಿಗೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕುಟುಂಬಕ್ಕೆ ರಾಜಕೀಯ ಎದುರಾಳಿಗಳನ್ನು ನಿಷೇಧಿಸುವ ಸರ್ವಾಧಿಕಾರಿ ಆಸೆ ಇದೆ” ಎಂದು ಬಿಜೆಪಿ ಆರೋಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸೌಧದಲ್ಲೇ ಅಧಿಕಾರಿ, ಸಿಬ್ಬಂದಿ ಕಳ್ಳಾಟ: ಸಮಯ ಪಾಲನೆ ಉಲ್ಲಂಘನೆ; ಸಿಎಂ ಆದೇಶಕ್ಕೂ ಡೋಂಟ್ ಕೇರ್ – Kannada News | Vidhana Soudha Punctuality Lapse: Officials Ignore CM DK Shivakumar’s Order

ಬೆಂಗಳೂರು, ಜೂನ್​​ 15: ರಾಜ್ಯದ ಆಡಳಿತದ ನಾಡಿಮಿಡಿತವೇ ವಿಧಾನಸೌಧ (Vidhana Soudha). ಸರ್ಕಾರದ ಅನೇಕ ನಿರ್ಧಾರಗಳು ರೂಪುಗೊಳ್ಳುವುದು ಈ ಶಕ್ತಿಕೇಂದ್ರದಲ್ಲಿ. ಆದರೆ ಇದೇ ವಿಧಾನಸೌಧದಲ್ಲಿ ಇದೀಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಪಾಲನೆಯ ಕಳ್ಳಾಟ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ಆದೇಶಕ್ಕೂ ಡೋಂಟ್ ಕೇರ್​​ ಇಲ್ಲದಂತಾಗಿದೆ.

ಮುಖ್ಯಾಂಶಗಳು

  • ಅಧಿಕಾರಿಗಳು ಮತ್ತು ಸಿಬ್ಬಂದಿ ಕಳ್ಳಾಟ ಬಯಲು
  • ವಿಧಾನಸೌಧದಲ್ಲಿ ಸಮಯ ಪಾಲಿಸದೆ ನಿಯಮ ಉಲ್ಲಂಘನೆ
  • ಸರ್ಕಾರದ ರೂಲ್ಸ್ ಜನಸಾಮಾನ್ಯರಿಗೆ ಮಾತ್ರನಾ, ಅಧಿಕಾರಿಗಳಿಗೆ ಇಲ್ವಾ?

ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಅಸಲಿಯತ್ತು ಬಯಲು 

ಆಡಳಿತ ಯಂತ್ರಕ್ಕೆ ಚುರುಕು‌ ನೀಡಿ, ಸಾರ್ವಜನಿಕ ಧ್ವನಿಯಾಗಿ ಸರ್ಕಾರ ಕೆಲಸ ಮಾಡಬೇಕೆಂಬುದು ಸಿಎಂ ಡಿಕೆ‌ ಶಿವಕುಮಾರ್ ಅವರ ವಾಗ್ದಾನ. ಇದಕ್ಕಾಗಿಯೇ ಜನಪರ ಕೆಲಸ ಮಾಡಬೇಕೆಂದು ವಿಧಾನಸೌಧದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಿರಬೇಕೆಂದು ಸೂಚಿಸಿದ್ದರು. ಆದರೆ ಈ ಆದೇಶ ವಿಧಾನಸೌಧದಲ್ಲಿ ಪಾಲನೆ ಆಗದಿರುವುದು ಟಿವಿ9 ಕ್ಯಾಮರಾಗೆ ಕಂಡಿದೆ. ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಸಮಯ ಉಲ್ಲಂಘನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್​​​ ಖಡಕ್​ ಸೂಚನೆ

ವಿಧಾನಸೌಧದ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್​ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡ ಅಧಿಕೃತ ಆದೇಶ ಹೊರಡಿಸಿ, ಎಲ್ಲಾ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದ್ದರು. ಆದರೆ ನೆಲಮಟ್ಟದಲ್ಲಿ ಪರಿಸ್ಥಿತಿ ಮಾತ್ರ ಬೇರೆಯದೇ ಕಥೆ ಹೇಳುತ್ತಿದೆ. ಬೆಳಗ್ಗೆ 10 ಗಂಟೆಯ ಗಡುವು ಮುಗಿದರೂ ಹಲವರು ಕಚೇರಿಗೆ ಆಗಮಿಸಿರಲಿಲ್ಲ.  11 ಗಂಟೆಗೆ ಸಿಬ್ಬಂದಿ, ಅಧಿಕಾರಿಗಳು ಒಬ್ಬೊಬ್ಬರಾಗಿ ವಿಧಾನಸೌಧ ಪ್ರವೇಶಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಸಾರ್ವಜನಿಕರಲ್ಲಿ ಅಸಮಾಧಾನ

ಸಮಯಪಾಲನೆಗೆ ಮಾದರಿಯಾಗಬೇಕಾದ ಆಡಳಿತ ಕೇಂದ್ರದಲ್ಲೇ ಈ ರೀತಿಯ ನಿರ್ಲಕ್ಷ್ಯ ಕಂಡುಬರುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಸರ್ಕಾರದ ಆದೇಶಗಳು ಸಾಮಾನ್ಯ ಜನರಿಗೆ ಮಾತ್ರ ಅನ್ವಯವಾಗುತ್ತವೆಯಾ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಸಮಾನವಾಗಿ ಅನ್ವಯವಾಗುತ್ತವೆಯೇ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.

ವಿಧಾನಸೌಧದ ಸಿಬ್ಬಂದಿ ಸಮಯಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮಗಳ ಕೊರತೆ ಇದಕ್ಕೆ ಕಾರಣವೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ರಾಜ್ಯದ ಆಡಳಿತದ ಕೇಂದ್ರವಾಗಿರುವ ವಿಧಾನಸೌಧದಲ್ಲೇ ಸಮಯಪಾಲನೆ ಪಾಲನೆಯಾಗದಿದ್ದರೆ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳ ಸ್ಥಿತಿ ಏನಾಗಿರಬೇಡ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​: ವಿಡಿಯೋ ನೋಡಿ

ಸಿಎಂ ಸೂಚನೆ ಮತ್ತು ಮುಖ್ಯ ಕಾರ್ಯದರ್ಶಿಗಳ ಆದೇಶದ ಬಳಿಕವೂ ಪರಿಸ್ಥಿತಿ ಬದಲಾಗದಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:22 pm, Mon, 15 June 26

Source link

ರಾತ್ರಿ ಊಟ ಬಿಟ್ಟು ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ಬರುತ್ತೆ ಹುಷಾರ್! – Kannada News | Why You Should Not Sleep Without Dinner Every Day

ಇತ್ತೀಚಿನ ದಿನಗಳಲ್ಲಿ ಹಲವರು ತೂಕ ಇಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಥವಾ ಕೆಲಸದ ಒತ್ತಡ, ದಣಿವಿನ ಕಾರಣದಿಂದ ರಾತ್ರಿ ಊಟ (Dinner) ಮಾಡದೇ ಮಲಗುತ್ತಾರೆ. ಕೆಲವರಿಗೆ ಇದು ಆರೋಗ್ಯಕರ ಕ್ರಮವೆಂದು ಅನಿಸಿದರೂ, ಆರೋಗ್ಯ ತಜ್ಞರ ಅಭಿಪ್ರಾಯ ವಿಭಿನ್ನವಾಗಿದೆ. ಹೌದು ರಾತ್ರಿ ಹೊತ್ತು ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾದರೆ ನಮಗೆ ಒಳ್ಳೆಯದು ಎಂದು ಅನಿಸುವ ಈ ಅಭ್ಯಾಸದಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಸಿಡಿಟಿ ಮತ್ತು ಹೊಟ್ಟೆ ಉರಿ ಸಮಸ್ಯೆ

ಹೆಚ್ಚು ಸಮಯ ಹೊಟ್ಟೆ ಖಾಲಿಯಾಗಿ ಉಳಿದರೆ ಗ್ಯಾಸ್ಟ್ರಿಕ್ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಎಸಿಡಿಟಿ, ಎದೆ ಉರಿ, ಹೊಟ್ಟೆ ಉರಿ ಹಾಗೂ ಗ್ಯಾಸ್ಟ್ರೈಟಿಸ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ತಲೆನೋವು, ವಾಕರಿಕೆ, ಬಲಹೀನತೆ ಅನುಭವವಾಗಬಹುದು.

ನಿದ್ರೆಯ ಸರಿಯಾಗಿ ಬರದಿರಬಹುದು

ಹೊಟ್ಟೆ ಹಸಿದಿರುವಾಗ ಹೋಗಿ ಮಲಗುವುದರಿಂದ ಗಾಢ ನಿದ್ರೆ ಬರದೇ ಇರಬಹುದು. ಮಧ್ಯರಾತ್ರಿ ಪದೇಪದೇ ಎಚ್ಚರವಾಗುವುದು, ಹಸಿವಾಗಬಹುದು ಮತ್ತು ಬೆಳಿಗ್ಗೆ ಎದ್ದೇಳುವಾಗ ಸಾಮಾನ್ಯವಾಗಿ ದೇಹ ದಣಿದಿರಬಹುದು. ಹಾಗಾಗಿ ಚೆನ್ನಾಗಿ ನಿದ್ರೆ ಬರಲು ರಾತ್ರಿ ಸ್ವಲ್ಪ ಮಟ್ಟಿಗಾದರೂ ಆಹಾರ ಸೇವನೆ ಮಾಡುವುದು ಅಗತ್ಯವೆಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ

ಪೌಷ್ಟಿಕಾಂಶ ಕೊರತೆ ಅಪಾಯ

ರಾತ್ರಿ ಊಟವನ್ನು ನಿರಂತರವಾಗಿ ಬಿಡುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯದೇ ಹೋಗಬಹುದು. ಇದರ ಪರಿಣಾಮವಾಗಿ ಸ್ನಾಯು ಬಲಹೀನತೆ, ರೋಗನಿರೋಧಕ ಶಕ್ತಿ ಕುಸಿತ ಮತ್ತು ಸದಾ ದಣಿವು ಕಾಣಿಸಿಕೊಳ್ಳಬಹುದು.

ಮೆಟಾಬಾಲಿಸಂ ಮೇಲೆ ಪರಿಣಾಮ ಬೀರಬಹುದು

ನಿರಂತರವಾಗಿ ಊಟ ಬಿಟ್ಟರೆ ದೇಹದ ಮೆಟಾಬಾಲಿಸಂ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ಸುಲಿನ್ ಮಟ್ಟದಲ್ಲಿ ಅಸಮತೋಲನ ಉಂಟಾಗಿ ಹಾರ್ಮೋನ್ ಕಾರ್ಯವೈಖರಿಗೂ ತೊಂದರೆ ಉಂಟಾಗಬಹುದು. ದೀರ್ಘಕಾಲದಲ್ಲಿ ಇದು ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ರಾತ್ರಿ ಏನು ತಿನ್ನಬಹುದು?

ಖಾಲಿ ಹೊಟ್ಟೆಯಲ್ಲಿ ಮಲಗುವ ಬದಲು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ. ತರಕಾರಿ ಸೂಪ್, ಓಟ್ಸ್, ಹಣ್ಣುಗಳು, ಮೊಸರು, ಚಪಾತಿ ಅಥವಾ ಗಂಜಿ ಸೇವಿಸಿದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ದೊರೆಯುತ್ತದೆ. ತೂಕ ಇಳಿಸಿಕೊಳ್ಳಲು ಊಟವನ್ನು ಸಂಪೂರ್ಣ ಬಿಡುವುದು ಸರಿಯಾದ ಮಾರ್ಗವಲ್ಲ. ಮಲಗುವ ಮೊದಲು ಎರಡು ಅಥವಾ ಮೂರು ಗಂಟೆಗಳ ಹಿಂದೆಯೇ ಹಗುರ ಹಾಗೂ ಸಮತೋಲನ ಆಹಾರ ಸೇವಿಸಬೇಕು. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ದೀರ್ಘಕಾಲದ ಆರೋಗ್ಯಕ್ಕೆ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿನ್ನ ಗಂಡ ಮುದುಕ’ ಎಂದವರಿಗೆ ಖಡಕ್ ತಿರುಗೇಟು ಕೊಟ್ಟ ಅರ್ಬಾಜ್ ಖಾನ್ ಪತ್ನಿ – Kannada News | Arbaaz Khan wife Sshura Khan shuts down Age Shaming troll

ಬಾಲಿವುಡ್ ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ (Arbaaz Khan) ಅವರ ಪತ್ನಿ, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಶೂರಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತಮಗೂ ಮತ್ತು ತಮ್ಮ ಪತಿಗೂ ಇರುವ ವಯಸ್ಸಿನ ವ್ಯತ್ಯಾಸದ ಬಗ್ಗೆ ವ್ಯಂಗ್ಯವಾಡಿದ ಟ್ರೋಲರ್‌ಗೆ ಅವರು ಅತ್ಯಂತ ಜಾಣತನದಲ್ಲಿ ಹಾಗೂ ಖಡಕ್ ಆಗಿ ಉತ್ತರ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಶೂರಾ ಖಾನ್ (Sshura Khan) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ನೆಟ್ಟಿಗನೊಬ್ಬ, ಅರ್ಬಾಜ್ ಖಾನ್ ಅವರ ವಯಸ್ಸನ್ನು ಉಲ್ಲೇಖಿಸಿ, ‘ನೀವು ಆ ಮುದುಕನ ಜೊತೆ ಖುಷಿಯಾಗಿದ್ದೀರಾ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾನೆ.

ಈ ಉದ್ಧಟತನದ ಪ್ರಶ್ನೆಗೆ ಕಿಡಿಕಾರದೆ, ಅತ್ಯಂತ ಶಾಂತವಾಗಿ ಮತ್ತು ಹಾಸ್ಯಭರಿತವಾಗಿ ಉತ್ತರಿಸಿದ ಶೂರಾ ಖಾನ್, ‘ನೀವು ನಿಜವಾಗಿಯೂ ಕೇಳ್ತಿದ್ದೀರಾ? ಅವರು ಮುದುಕನಲ್ಲ. ಬದಲಿಗೆ, ಲಿಮಿಟೆಡ್ ಎಡಿಷನ್ ವಿಂಟೇಜ್ ಮಾಡೆಲ್’ ಎಂದು ಬರೆದುಕೊಂಡು ನೆಟ್ಟಿಗನ ಬಾಯಿ ಮುಚ್ಚಿಸಿದ್ದಾರೆ. ಅವರ ಈ ಖಡಕ್ ತಿರುಗೇಟು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದೇ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಮಸ್ತ್ ಆಗಿದೆ’ ಎಂದು ಉತ್ತರಿಸಿದ ಶೂರಾ, ಅರ್ಬಾಜ್ ಖಾನ್ ಅವರೊಂದಿಗಿನ ಮೊದಲ ಡೇಟಿಂಗ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ‘ನಾನು ಅವರೊಂದಿಗೆ ಒಂದು ಶರತ್ತು ಸೋತಿದ್ದೆ, ಹಾಗಾಗಿ ಮೊದಲ ಡೇಟ್‌ನಲ್ಲಿ ಅವರಿಗೆ ನಾನೇ ಡಿನ್ನರ್ ಟ್ರೀಟ್ ನೀಡಬೇಕಾಗಿ ಬಂತು’ ಎಂದು ತಮಾಷೆಯಾಗಿ ನೆನಪಿಸಿಕೊಂಡಿದ್ದಾರೆ.

ತಮ್ಮ ತಾಯ್ತನದ ಜರ್ನಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೂರಾ, ‘ಇದು ಒಂದು ಅದ್ಭುತವಾದ ಪ್ರಯಾಣ. ಇದು ದಣಿವು ತರುತ್ತದೆ, ಜೊತೆಗೆ ಅಷ್ಟೇ ಖುಷಿಯನ್ನೂ ನೀಡುತ್ತದೆ’ ಎಂದಿದ್ದಾರೆ. ಅಲ್ಲದೆ ಅಭಿಮಾನಿಯೊಬ್ಬರು ಮಗಳ ಹೆಸರನ್ನು ಯಾರು ಆಯ್ಕೆ ಮಾಡಿದ್ದು ಎಂದು ಕೇಳಿದ್ದಕ್ಕೆ, ‘ಅರ್ಬಾಜ್ ಅವರ ತಂದೆ ಸಲೀಂ ಖಾನ್ ಅವರೇ ನಮ್ಮ ಮಗಳ ಹೆಸರನ್ನು ಆಯ್ಕೆ ಮಾಡಿದರು’ ಎಂದು ಪ್ರೀತಿಯಿಂದ ತಿಳಿಸಿದ್ದಾರೆ.

ಇದನ್ನೂ ಓದಿ: ಐವತ್ತೇಳನೇ ವಯಸ್ಸಿಗೆ ತಂದೆ ಆದ ಸಲ್ಲು ಸಹೋದರ; ಖುಷಿಯಿಂದ ಹೇಳಿಕೊಂಡ ಅರ್ಬಾಜ್  

ಶೂರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ‘ಪಟ್ನಾ ಶುಕ್ಲಾ’ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಕೆಲಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ 2023ರ ಡಿಸೆಂಬರ್ 24ರಂದು ಮುಂಬೈನಲ್ಲಿರುವ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ಅತ್ಯಂತ ಸರಳವಾಗಿ ವಿವಾಹವಾದ್ದರು. ಇದು ಅರ್ಬಾಜ್ ಖಾನ್ ಅವರ ಎರಡನೇ ವಿವಾಹವಾಗಿದ್ದು, ಇದಕ್ಕೂ ಮುನ್ನ ಅವರು ನಟಿ ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರತಿಭಟನೆ ವೇಳೆ ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌

ಜೈಪುರ, (ಜೂನ್ 15): ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ  (CJP founder Abhijeet Dipke) ಮೇಲೆ ಸೋಮವಾರ(ಜೂ. 15) ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಹೌದು..ಇಂದು (ಜೂನ್ 15) ಜೈಪುರದ ಶಹೀದ್ ಸ್ಮಾರಕದ ಬಳಿ ಬೃಹತ್ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯತ್ತ ಅಭಿಜೀತ್ ಡಿಪ್ಕೆ ಅವರನ್ನು ಬೆಂಬಲಿಗರು ತಮ್ಮ ಹೆಗಲ ಮೇಲೆ ಹೊತ್ತು ತರುತ್ತಿದ್ದ ವೇಳೆ ದಿಢೀರ್ ಎಂದು ನುಗ್ಗಿದ ಕೆಲ ಕಿಡಿಗೇಡಿಗಳು, ಅವರ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ಎಳೆದು, ಮುಖಕ್ಕೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೆ, ಅವರನ್ನು ಕೆಳಗೆ ಬೀಳಿಸಲು ಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಮಹಿಳೆಯರಿಗೆ ಇಷ್ಟವಾಗೋದೇ ಪುರುಷರ ಈ ಗುಣಗಳು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says these are the qualities of men that women like

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಯಶಸ್ಸು, ಶ್ರೀಮಂತಿಕೆ, ದಾಂಪತ್ಯ ಜೀವನ, ಶಿಕ್ಷಣ, ಮದುವೆ ಹೀಗೆ ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರು ಮಹಿಳೆಯರ ವೈಯಕ್ತಿಕ ಜೀವನದ ಬಗ್ಗೆ ವಿವರಿಸಿದ್ದು, ಮಹಿಳೆಯರು ಯಾವ ರೀತಿಯ ಜೀವನ ಸಂಗಾತಿಯನ್ನು ಬಯಸುತ್ತಾರೆ, ಅವರು ಎಂತಹ ಪುರುಷರತ್ತ ಆಕರ್ಷಿತರಾಗುತ್ತಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಚಾಣಕ್ಯರು ಹೇಳಿರುವಂತೆ ಹೆಣ್ಮಕ್ಳಿಗೆ ಪುರುಷರ ಯಾವ ಗುಣಗಳು ಸಖತ್‌ ಇಷ್ಟ ಎಂಬುದನ್ನು ನೋಡೋಣ.

ಮಹಿಳೆಯರಿಗೆ ಪುರುಷರ ಯಾವ ಗುಣಗಳು ಇಷ್ಟವಾಗೋದು?

ಪ್ರಾಮಾಣಿಕತೆ: ಸಂಬಂಧಗಳಲ್ಲಿ ಪ್ರಾಮಾಣಿಕರಾಗಿರುವ ವ್ಯಕ್ತಿ ಜೀವನ ಸಂಗಾತಿಯಾಗಿ ಬರಬೇಕು ಎಂದು ಮಹಿಳೆಯರು ಬಯಸುತ್ತಾರೆ. ಇಂತಹ ಪುರುಷರು ಎಂದಿಗೂ ತಮ್ಮ ಹೆಂಡತಿ ಅಥವಾ ಪ್ರೇಯಸಿಗೆ ದ್ರೋಹ ಮಾಡಲು ಸಾಧ್ಯವಿಲ್ಲ. ಅಂತಹ ಪುರುಷರು ನಿರಂತರವಾಗಿ ತಮ್ಮ ಸಂಬಂಧಗಳನ್ನು ಬಲಪಡಿಸಲು ಶ್ರಮಿಸುತ್ತಾರೆ ಮತ್ತು ಎಂದಿಗೂ ಸುಳ್ಳನ್ನು ಹೇಳುವುದಿಲ್ಲ. ಈ ಗುಣವೇ ಮಹಿಳೆಯರಿಗೆ ಇಷ್ಟವಾಗೋದು.

ನಡವಳಿಕೆ: ಉತ್ತಮ ನಡವಳಿಕೆ, ಸಿಹಿ ಮಾತು ಮತ್ತು ಸಜ್ಜನಿಕೆಯಂತಹ ಗುಣಗಳನ್ನು ಪುರುಷರಿಂದ ಮಹಿಳೆಯರು ಹೆಚ್ಚಾಗಿ ನಿರೀಕ್ಷಿಸುತ್ತಾರೆ. ಅಲ್ಲದೆ ಈ ಗುಣವು ಮಹಿಳೆಯರನ್ನು ಬಹಳವಾಗಿ ಮೆಚ್ಚಿಸುತ್ತದೆ.

ಉತ್ತಮ ಕೇಳುಗರು: ಪ್ರತಿಯೊಬ್ಬ ಮಹಿಳೆಯೂ ತನ್ನ ಸಂಗಾತಿ ನೆರಳಿನಂತೆ ಇರಬೇಕೆಂದು ಬಯಸುತ್ತಾಳೆ. ಅವನು ಒಳ್ಳೆಯ ಕೇಳುಗನಾಗಿರಬೇಕು, ಆಕೆಯ ಆಲೋಚನೆಗಳನ್ನು ಗ್ರಹಿಸಬೇಕು, ತನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಬೇಕು ಎಂದು ಬಯಸುತ್ತಾಳೆ. ಈ ಗುಣ ಪ್ರತಿಯೊಬ್ಬ ಮಹಿಳೆಗೂ ಇಷ್ಟ.  ಅದೇ ಮಾತುಗಳಿಗೆ ಗಮನ ಕೊಡುದ ಮತ್ತು ನಿರ್ಲಕ್ಷ್ಯ ತೋರುವ ಪುರುಷರನ್ನು ಎಂದಿಗೂ ಇಷ್ಟಪಡುವುದಿಲ್ಲ.

ತಾಳ್ಮೆ:  ಜೀವನದ ಪ್ರತಿಯೊಂದು ಹಂತದಲ್ಲೂ ಏರಿಳಿತಗಳು ಇರುತ್ತವೆ, ಎಂತಹ ಕಷ್ಟದ ಸಂದರ್ಭದಲ್ಲೂ ತಾಳ್ಮೆಯಿಂದ ಇರುವ ವ್ಯಕ್ತಿ ಹಾಗೂ ಕೋಪ ಬಂದ ಸಂದರ್ಭದಲ್ಲಿ ಎದುರು ಮಾತಾಡದೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸುವ ವ್ಯಕ್ತಿಗಳೆಂದರೆ ಮಹಿಳೆಯರಿಗೆ ತುಂಬಾ ಇಷ್ಟ ಎನ್ನುತ್ತಾರೆ ಚಾಣಕ್ಯ. ತಾಳ್ಮೆಯನ್ನು ಹೊಂದಿರುವ ಪುರುಷರು ತಮ್ಮ ಜೀವನ ಸಂಗಾತಿಯನ್ನು ಎಂದಿಗೂ ನೋಯಿಸುವುದಿಲ್ಲ ಆಕೆಯನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಈ ಗುಣವನ್ನು ಹೊಂದಿರುವ ಪುರುಷರನ್ನೇ ಹೆಂಗಳೆಯರು ಮೆಚ್ಚಿಕೊಳ್ಳುವುದು.

ಇದನ್ನೂ ಓದಿ: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಕಲಿಸಬೇಕು ಎನ್ನುತ್ತಾರೆ ಚಾಣಕ್ಯ

ಹಾಸ್ಯ ಸ್ವಭಾವ: ಚಾಣಕ್ಯ ಹೇಳುವಂತೆ ಮಹಿಳೆಯರಿಗೆ  ಪುರುಷರ ಹಾಸ್ಯ ಸ್ವಭಾವವೂ ಇಷ್ಟ. ಹಾಸ್ಯ ಗುಣವನ್ನು ಹೊಂದಿರುವವರು ಯಾವಾಗಲೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಲೇ ಇರುತ್ತಾರೆ.  ಇತರರಿಗೆ ನೋವು ಮಾಡದೆ ಮುಖದಲ್ಲಿ ನಗು ತರಿಸುವ ವ್ಯಕ್ತಿಗಳತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ.

ಭಾವನಾತ್ಮಕವಾಗಿ ಬಲಿಷ್ಠ: ಆರ್ಯ ಚಾಣಕ್ಯ ಹೇಳುವಂತೆ ಮಹಿಳೆಯರು ಭಾವನಾತ್ಮಕವಾಗಿ ಬಲಿಷ್ಠರಾಗಿರುವ ಪುರುಷರನ್ನು ಬಯಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನ ಸಂಗಾತಿ ಭಾವನಾತ್ಮಕವಾಗಿ ಬಲಿಷ್ಠರಾಗಿರಬೇಕು ಎಂದು ಬಯಸುತ್ತಾರೆ.

ಕಾಳಜಿ ಗುಣ: ಪುರುಷರ ಇತರರ ಬಗ್ಗೆ ತೋರುವ ಕಾಳಜಿ, ಅವರ ಸಹಾಯ ಗುಣವನ್ನು ಮಹಿಳೆಯರು ಬಹಳವಾಗಿ ಮೆಚ್ಚುತ್ತಾರೆ. ಅಂತಹ ಪುರುಷರಿಗೆ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ತಿಳಿದಿರುತ್ತದೆ ಮತ್ತು ಅವರಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಆದ್ದರಿಂದ, ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿಯಲ್ಲಿ ಈ ಗುಣವನ್ನು ಬಯಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ತುರ್ತು ಶಸ್ತ್ರ ಚಿಕಿತ್ಸೆ ಅಂದ್ರು ವಿಚಿತ್ರ ಬೇಡಿಕೆ ಇಟ್ಟ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ – Kannada News | Employee who went to office on emergency surgery day

ಎಷ್ಟೇ ಒತ್ತಡಭರಿತ ಕೆಲಸವೇ (job) ಇರಲಿ, ಕೆಲಸ ಬಿಟ್ಟರೆ ಬೇರೆ ಉದ್ಯೋಗ ಸಿಗಲ್ಲ ಎನ್ನುವ ಅನಿವಾರ್ಯ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಆದರೆ ಈ ಬಾಸ್ ಗಲು ರಜೆ ವಿಷ್ಯದಲ್ಲಿ ಉದ್ಯೋಗಿಗಳಿಗೆ ಕೊಡುವ ಕಾಟ ಅಷ್ಟಿಷ್ಟಲ್ಲ. ಹುಷಾರಿಲ್ಲ ಅಂದ್ರು ನಮ್ಮ ಬಾಸ್ ರಜೆ ಕೊಡೋಕೆ ಹಿಂದೆ ಮುಂದೆ ನೋಡ್ತಾರೆ ಎಂದು ಅದೆಷ್ಟೋ ಜನ ಹೇಳೋದಿದೆ. ಈ ವ್ಯಕ್ತಿಯ ವಿಷ್ಯದಲ್ಲೂ ಹಾಗೆಯೇ ಆಗಿದೆ. ಈ ಉದ್ಯೋಗಿ ತನ್ನ ಕಠಿಣ ಪರಿಸ್ಥಿತಿಯನ್ನು ರೆಡ್ಡಿಟ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿದ್ದು ತುರ್ತು ಶಸ್ತ್ರಚಿಕಿತ್ಸೆಗೆ ನಿಗದಿಪಡಿಸಿದ ದಿನವೇ ಕೆಲಸಕ್ಕೆ ಹಾಜರಾಗಲು ತಮ್ಮ ಬಾಸ್ ಕೇಳಿಕೊಂಡಿದ್ದರು ಎನ್ನುವ ಪೋಸ್ಟ್ ಆನ್ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ರೆಡ್ಡಿಟ್ ಪೋಸ್ಟ್ ನಲ್ಲಿ ಸಂದರ್ಭಕ್ಕೆ ತಕ್ಕಂತೆ, ಕಳೆದ ವರ್ಷ ನನಗೆ ‘ಕನಸಿನ’ ಉದ್ಯಮದಲ್ಲಿ ಕೆಲಸ ಸಿಕ್ಕಿತು. ಆದಾಗ್ಯೂ, ಈ ಎರಡು ವರ್ಷಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಈ ಎರಡು ಬದಲಾವಣೆಗಳಾಗಿವೆ. ಆದರೆ, ನನ್ನ ಸಂಗಾತಿಯ ಕೆಲಸ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿದ್ದರಿಂದ, ಇನ್ನೊಂದು ನನಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಕಾರಣ. ನಾನು ಹತಾಶನಾಗಿದ್ದೆ, ಸಾಧ್ಯವಾದಷ್ಟು ಕಾಲ ಈ ಕೆಲಸವನ್ನು ಮಾಡಲು ನಾನು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನಾನು ಯಾವುದೇ ಪೂರ್ಣ ದಿನ ರಜೆ ತೆಗೆದುಕೊಂಡಿಲ್ಲ. ನಾನು ಪ್ರತಿ ಬಾರಿಯೂ ಪ್ರಯಾಣಿಸಿ ಕೆಲಸ ಮಾಡಿದ್ದೇನೆ. ನಾನು ವಾರಾಂತ್ಯದಲ್ಲಿ, ಬೆಳಿಗ್ಗೆ ಹಾಗೂ ರಾತ್ರಿ ಹೆಚ್ಚಾಗಿ ಕರೆಯಲ್ಲಿಯೇ ಕೆಲಸ ಮಾಡುತ್ತೇನೆ. ನಾನು ಸೆಲೆಬ್ರಿಟಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತೇನೆ. ತೆರಿಗೆಗಳನ್ನು ಸೇರಿಸಿ ಗಂಟೆಗೆ ಸುಮಾರು 13 ಡಾಲರ್‌ಗಳನ್ನು ಗಳಿಸುತ್ತೇನೆ ಎಂದಿದ್ದಾರೆ.

ಕಳೆದ ವಾರ ನನ್ನ ನಿಯಂತ್ರಣಕ್ಕೆ ಮೀರಿದ ಆರೋಗ್ಯ ಸಮಸ್ಯೆಯಿಂದ ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನನ್ನ ಬಾಸ್ ಅದೇ ದಿನ ಸಭೆಗೆ ಹಾಜರಾಗಲು ನನ್ನನ್ನು ಕೇಳಿದರು. ನಾನು ಕೂಡ ಹಾಜರಾದೆ. ಈಗ ನಾನು ಚೇತರಿಸಿಕೊಳ್ಳುತ್ತಿದ್ದರೂ ಅವರು ತುಂಬಾ ಬೇಡಿಕೆಯಿಡುತ್ತಿದ್ದಾರೆ. ನಾನು ಮಧ್ಯದಲ್ಲಿ ಸಿಲುಕಿಕೊಂಡಿದ್ದೇನೆ. ದುಃಖಿತನಾಗಿದ್ದೇನೆ. ನನ್ನ ರೆಸ್ಯೂಮ್‌ನಲ್ಲಿ ಗೌರವಿಸಲ್ಪಡಲು ಮಾತ್ರ. ಈ ನಿಂದನೀಯವೆಂದು ಭಾವಿಸುವ ನಡವಳಿಕೆಗಾಗಿ ನಾನು ನಿರಂತರವಾಗಿ ಹಿಂದಕ್ಕೆ ಬಾಗುತ್ತಿದ್ದೇನೆ. ನಾನು ಇನ್ನೊಂದು ವರ್ಷ ಈ ಕೆಲಸದಲ್ಲಿ ಮುಂದುವರಿಯಬೇಕೇ? ಎಂದು ಸಲಹೆ ಕೇಳಿದ್ದಾರೆ.

ಇದನ್ನೂ ಓದಿ: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಈ ರೆಡ್ಡಿಟ್ ಪೋಸ್ಟ್ ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಒಬ್ಬ ಬಳಕೆದಾರ, ಆರೋಗ್ಯದ ಮೇಲೆ ಗಮನವಿರಲಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಆರೋಗ್ಯವೇ ಸರ್ವಸ್ವ. ಈ ಕೆಲಸದಿಂದ ನಿಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತೀರಿ. ರಜೆಯನ್ನು ಕೇಳಿ ನಿರಾಕರಿಸಿದರೆ, ಹೆಚ್ ಆರ್ ಗೆ ಹೋಗಿ. ಶಸ್ತ್ರಚಿಕಿತ್ಸಕರಿಂದ ಇದನ್ನು ಪ್ರಮಾಣೀಕರಿಸುವ ಪತ್ರವನ್ನು ಬರೆಯಿಸಿ. ನಂತರ ನೀವು ಚೇತರಿಸಿಕೊಳ್ಳುವಾಗ ಬೇರೆ ಉದ್ಯೋಗವನ್ನು ಹುಡುಕಲು ಪ್ರಾರಂಭಿಸಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಈ ಕೆಲಸ ಬಿಟ್ಟು ಆರೋಗ್ಯದ ಬಗ್ಗೆ ಗಮನ ಕೊಡುವುದೇ ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link