Category Archives: Blog

Your blog category

ವಿಧಾನಸೌಧದಲ್ಲೇ ಅಧಿಕಾರಿ, ಸಿಬ್ಬಂದಿ ಕಳ್ಳಾಟ: ಸಮಯ ಪಾಲನೆ ಉಲ್ಲಂಘನೆ; ಸಿಎಂ ಆದೇಶಕ್ಕೂ ಡೋಂಟ್ ಕೇರ್ – Kannada News | Vidhana Soudha Punctuality Lapse: Officials Ignore CM DK Shivakumar’s Order

ಬೆಂಗಳೂರು, ಜೂನ್​​ 15: ರಾಜ್ಯದ ಆಡಳಿತದ ನಾಡಿಮಿಡಿತವೇ ವಿಧಾನಸೌಧ (Vidhana Soudha). ಸರ್ಕಾರದ ಅನೇಕ ನಿರ್ಧಾರಗಳು ರೂಪುಗೊಳ್ಳುವುದು ಈ ಶಕ್ತಿಕೇಂದ್ರದಲ್ಲಿ. ಆದರೆ ಇದೇ ವಿಧಾನಸೌಧದಲ್ಲಿ ಇದೀಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಪಾಲನೆಯ ಕಳ್ಳಾಟ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ಆದೇಶಕ್ಕೂ ಡೋಂಟ್ ಕೇರ್​​ ಇಲ್ಲದಂತಾಗಿದೆ.

ಮುಖ್ಯಾಂಶಗಳು

  • ಅಧಿಕಾರಿಗಳು ಮತ್ತು ಸಿಬ್ಬಂದಿ ಕಳ್ಳಾಟ ಬಯಲು
  • ವಿಧಾನಸೌಧದಲ್ಲಿ ಸಮಯ ಪಾಲಿಸದೆ ನಿಯಮ ಉಲ್ಲಂಘನೆ
  • ಸರ್ಕಾರದ ರೂಲ್ಸ್ ಜನಸಾಮಾನ್ಯರಿಗೆ ಮಾತ್ರನಾ, ಅಧಿಕಾರಿಗಳಿಗೆ ಇಲ್ವಾ?

ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಅಸಲಿಯತ್ತು ಬಯಲು 

ಆಡಳಿತ ಯಂತ್ರಕ್ಕೆ ಚುರುಕು‌ ನೀಡಿ, ಸಾರ್ವಜನಿಕ ಧ್ವನಿಯಾಗಿ ಸರ್ಕಾರ ಕೆಲಸ ಮಾಡಬೇಕೆಂಬುದು ಸಿಎಂ ಡಿಕೆ‌ ಶಿವಕುಮಾರ್ ಅವರ ವಾಗ್ದಾನ. ಇದಕ್ಕಾಗಿಯೇ ಜನಪರ ಕೆಲಸ ಮಾಡಬೇಕೆಂದು ವಿಧಾನಸೌಧದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಿರಬೇಕೆಂದು ಸೂಚಿಸಿದ್ದರು. ಆದರೆ ಈ ಆದೇಶ ವಿಧಾನಸೌಧದಲ್ಲಿ ಪಾಲನೆ ಆಗದಿರುವುದು ಟಿವಿ9 ಕ್ಯಾಮರಾಗೆ ಕಂಡಿದೆ. ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಸಮಯ ಉಲ್ಲಂಘನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್​​​ ಖಡಕ್​ ಸೂಚನೆ

ವಿಧಾನಸೌಧದ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್​ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡ ಅಧಿಕೃತ ಆದೇಶ ಹೊರಡಿಸಿ, ಎಲ್ಲಾ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದ್ದರು. ಆದರೆ ನೆಲಮಟ್ಟದಲ್ಲಿ ಪರಿಸ್ಥಿತಿ ಮಾತ್ರ ಬೇರೆಯದೇ ಕಥೆ ಹೇಳುತ್ತಿದೆ. ಬೆಳಗ್ಗೆ 10 ಗಂಟೆಯ ಗಡುವು ಮುಗಿದರೂ ಹಲವರು ಕಚೇರಿಗೆ ಆಗಮಿಸಿರಲಿಲ್ಲ.  11 ಗಂಟೆಗೆ ಸಿಬ್ಬಂದಿ, ಅಧಿಕಾರಿಗಳು ಒಬ್ಬೊಬ್ಬರಾಗಿ ವಿಧಾನಸೌಧ ಪ್ರವೇಶಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಸಾರ್ವಜನಿಕರಲ್ಲಿ ಅಸಮಾಧಾನ

ಸಮಯಪಾಲನೆಗೆ ಮಾದರಿಯಾಗಬೇಕಾದ ಆಡಳಿತ ಕೇಂದ್ರದಲ್ಲೇ ಈ ರೀತಿಯ ನಿರ್ಲಕ್ಷ್ಯ ಕಂಡುಬರುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಸರ್ಕಾರದ ಆದೇಶಗಳು ಸಾಮಾನ್ಯ ಜನರಿಗೆ ಮಾತ್ರ ಅನ್ವಯವಾಗುತ್ತವೆಯಾ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಸಮಾನವಾಗಿ ಅನ್ವಯವಾಗುತ್ತವೆಯೇ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.

ವಿಧಾನಸೌಧದ ಸಿಬ್ಬಂದಿ ಸಮಯಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮಗಳ ಕೊರತೆ ಇದಕ್ಕೆ ಕಾರಣವೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ರಾಜ್ಯದ ಆಡಳಿತದ ಕೇಂದ್ರವಾಗಿರುವ ವಿಧಾನಸೌಧದಲ್ಲೇ ಸಮಯಪಾಲನೆ ಪಾಲನೆಯಾಗದಿದ್ದರೆ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳ ಸ್ಥಿತಿ ಏನಾಗಿರಬೇಡ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​: ವಿಡಿಯೋ ನೋಡಿ

ಸಿಎಂ ಸೂಚನೆ ಮತ್ತು ಮುಖ್ಯ ಕಾರ್ಯದರ್ಶಿಗಳ ಆದೇಶದ ಬಳಿಕವೂ ಪರಿಸ್ಥಿತಿ ಬದಲಾಗದಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:22 pm, Mon, 15 June 26

Source link

ರಾತ್ರಿ ಊಟ ಬಿಟ್ಟು ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ಬರುತ್ತೆ ಹುಷಾರ್! – Kannada News | Why You Should Not Sleep Without Dinner Every Day

ಇತ್ತೀಚಿನ ದಿನಗಳಲ್ಲಿ ಹಲವರು ತೂಕ ಇಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಥವಾ ಕೆಲಸದ ಒತ್ತಡ, ದಣಿವಿನ ಕಾರಣದಿಂದ ರಾತ್ರಿ ಊಟ (Dinner) ಮಾಡದೇ ಮಲಗುತ್ತಾರೆ. ಕೆಲವರಿಗೆ ಇದು ಆರೋಗ್ಯಕರ ಕ್ರಮವೆಂದು ಅನಿಸಿದರೂ, ಆರೋಗ್ಯ ತಜ್ಞರ ಅಭಿಪ್ರಾಯ ವಿಭಿನ್ನವಾಗಿದೆ. ಹೌದು ರಾತ್ರಿ ಹೊತ್ತು ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾದರೆ ನಮಗೆ ಒಳ್ಳೆಯದು ಎಂದು ಅನಿಸುವ ಈ ಅಭ್ಯಾಸದಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಸಿಡಿಟಿ ಮತ್ತು ಹೊಟ್ಟೆ ಉರಿ ಸಮಸ್ಯೆ

ಹೆಚ್ಚು ಸಮಯ ಹೊಟ್ಟೆ ಖಾಲಿಯಾಗಿ ಉಳಿದರೆ ಗ್ಯಾಸ್ಟ್ರಿಕ್ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಎಸಿಡಿಟಿ, ಎದೆ ಉರಿ, ಹೊಟ್ಟೆ ಉರಿ ಹಾಗೂ ಗ್ಯಾಸ್ಟ್ರೈಟಿಸ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ತಲೆನೋವು, ವಾಕರಿಕೆ, ಬಲಹೀನತೆ ಅನುಭವವಾಗಬಹುದು.

ನಿದ್ರೆಯ ಸರಿಯಾಗಿ ಬರದಿರಬಹುದು

ಹೊಟ್ಟೆ ಹಸಿದಿರುವಾಗ ಹೋಗಿ ಮಲಗುವುದರಿಂದ ಗಾಢ ನಿದ್ರೆ ಬರದೇ ಇರಬಹುದು. ಮಧ್ಯರಾತ್ರಿ ಪದೇಪದೇ ಎಚ್ಚರವಾಗುವುದು, ಹಸಿವಾಗಬಹುದು ಮತ್ತು ಬೆಳಿಗ್ಗೆ ಎದ್ದೇಳುವಾಗ ಸಾಮಾನ್ಯವಾಗಿ ದೇಹ ದಣಿದಿರಬಹುದು. ಹಾಗಾಗಿ ಚೆನ್ನಾಗಿ ನಿದ್ರೆ ಬರಲು ರಾತ್ರಿ ಸ್ವಲ್ಪ ಮಟ್ಟಿಗಾದರೂ ಆಹಾರ ಸೇವನೆ ಮಾಡುವುದು ಅಗತ್ಯವೆಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ

ಪೌಷ್ಟಿಕಾಂಶ ಕೊರತೆ ಅಪಾಯ

ರಾತ್ರಿ ಊಟವನ್ನು ನಿರಂತರವಾಗಿ ಬಿಡುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯದೇ ಹೋಗಬಹುದು. ಇದರ ಪರಿಣಾಮವಾಗಿ ಸ್ನಾಯು ಬಲಹೀನತೆ, ರೋಗನಿರೋಧಕ ಶಕ್ತಿ ಕುಸಿತ ಮತ್ತು ಸದಾ ದಣಿವು ಕಾಣಿಸಿಕೊಳ್ಳಬಹುದು.

ಮೆಟಾಬಾಲಿಸಂ ಮೇಲೆ ಪರಿಣಾಮ ಬೀರಬಹುದು

ನಿರಂತರವಾಗಿ ಊಟ ಬಿಟ್ಟರೆ ದೇಹದ ಮೆಟಾಬಾಲಿಸಂ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ಸುಲಿನ್ ಮಟ್ಟದಲ್ಲಿ ಅಸಮತೋಲನ ಉಂಟಾಗಿ ಹಾರ್ಮೋನ್ ಕಾರ್ಯವೈಖರಿಗೂ ತೊಂದರೆ ಉಂಟಾಗಬಹುದು. ದೀರ್ಘಕಾಲದಲ್ಲಿ ಇದು ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ರಾತ್ರಿ ಏನು ತಿನ್ನಬಹುದು?

ಖಾಲಿ ಹೊಟ್ಟೆಯಲ್ಲಿ ಮಲಗುವ ಬದಲು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ. ತರಕಾರಿ ಸೂಪ್, ಓಟ್ಸ್, ಹಣ್ಣುಗಳು, ಮೊಸರು, ಚಪಾತಿ ಅಥವಾ ಗಂಜಿ ಸೇವಿಸಿದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ದೊರೆಯುತ್ತದೆ. ತೂಕ ಇಳಿಸಿಕೊಳ್ಳಲು ಊಟವನ್ನು ಸಂಪೂರ್ಣ ಬಿಡುವುದು ಸರಿಯಾದ ಮಾರ್ಗವಲ್ಲ. ಮಲಗುವ ಮೊದಲು ಎರಡು ಅಥವಾ ಮೂರು ಗಂಟೆಗಳ ಹಿಂದೆಯೇ ಹಗುರ ಹಾಗೂ ಸಮತೋಲನ ಆಹಾರ ಸೇವಿಸಬೇಕು. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ದೀರ್ಘಕಾಲದ ಆರೋಗ್ಯಕ್ಕೆ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿನ್ನ ಗಂಡ ಮುದುಕ’ ಎಂದವರಿಗೆ ಖಡಕ್ ತಿರುಗೇಟು ಕೊಟ್ಟ ಅರ್ಬಾಜ್ ಖಾನ್ ಪತ್ನಿ – Kannada News | Arbaaz Khan wife Sshura Khan shuts down Age Shaming troll

ಬಾಲಿವುಡ್ ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ (Arbaaz Khan) ಅವರ ಪತ್ನಿ, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಶೂರಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತಮಗೂ ಮತ್ತು ತಮ್ಮ ಪತಿಗೂ ಇರುವ ವಯಸ್ಸಿನ ವ್ಯತ್ಯಾಸದ ಬಗ್ಗೆ ವ್ಯಂಗ್ಯವಾಡಿದ ಟ್ರೋಲರ್‌ಗೆ ಅವರು ಅತ್ಯಂತ ಜಾಣತನದಲ್ಲಿ ಹಾಗೂ ಖಡಕ್ ಆಗಿ ಉತ್ತರ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಶೂರಾ ಖಾನ್ (Sshura Khan) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ನೆಟ್ಟಿಗನೊಬ್ಬ, ಅರ್ಬಾಜ್ ಖಾನ್ ಅವರ ವಯಸ್ಸನ್ನು ಉಲ್ಲೇಖಿಸಿ, ‘ನೀವು ಆ ಮುದುಕನ ಜೊತೆ ಖುಷಿಯಾಗಿದ್ದೀರಾ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾನೆ.

ಈ ಉದ್ಧಟತನದ ಪ್ರಶ್ನೆಗೆ ಕಿಡಿಕಾರದೆ, ಅತ್ಯಂತ ಶಾಂತವಾಗಿ ಮತ್ತು ಹಾಸ್ಯಭರಿತವಾಗಿ ಉತ್ತರಿಸಿದ ಶೂರಾ ಖಾನ್, ‘ನೀವು ನಿಜವಾಗಿಯೂ ಕೇಳ್ತಿದ್ದೀರಾ? ಅವರು ಮುದುಕನಲ್ಲ. ಬದಲಿಗೆ, ಲಿಮಿಟೆಡ್ ಎಡಿಷನ್ ವಿಂಟೇಜ್ ಮಾಡೆಲ್’ ಎಂದು ಬರೆದುಕೊಂಡು ನೆಟ್ಟಿಗನ ಬಾಯಿ ಮುಚ್ಚಿಸಿದ್ದಾರೆ. ಅವರ ಈ ಖಡಕ್ ತಿರುಗೇಟು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದೇ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಮಸ್ತ್ ಆಗಿದೆ’ ಎಂದು ಉತ್ತರಿಸಿದ ಶೂರಾ, ಅರ್ಬಾಜ್ ಖಾನ್ ಅವರೊಂದಿಗಿನ ಮೊದಲ ಡೇಟಿಂಗ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ‘ನಾನು ಅವರೊಂದಿಗೆ ಒಂದು ಶರತ್ತು ಸೋತಿದ್ದೆ, ಹಾಗಾಗಿ ಮೊದಲ ಡೇಟ್‌ನಲ್ಲಿ ಅವರಿಗೆ ನಾನೇ ಡಿನ್ನರ್ ಟ್ರೀಟ್ ನೀಡಬೇಕಾಗಿ ಬಂತು’ ಎಂದು ತಮಾಷೆಯಾಗಿ ನೆನಪಿಸಿಕೊಂಡಿದ್ದಾರೆ.

ತಮ್ಮ ತಾಯ್ತನದ ಜರ್ನಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೂರಾ, ‘ಇದು ಒಂದು ಅದ್ಭುತವಾದ ಪ್ರಯಾಣ. ಇದು ದಣಿವು ತರುತ್ತದೆ, ಜೊತೆಗೆ ಅಷ್ಟೇ ಖುಷಿಯನ್ನೂ ನೀಡುತ್ತದೆ’ ಎಂದಿದ್ದಾರೆ. ಅಲ್ಲದೆ ಅಭಿಮಾನಿಯೊಬ್ಬರು ಮಗಳ ಹೆಸರನ್ನು ಯಾರು ಆಯ್ಕೆ ಮಾಡಿದ್ದು ಎಂದು ಕೇಳಿದ್ದಕ್ಕೆ, ‘ಅರ್ಬಾಜ್ ಅವರ ತಂದೆ ಸಲೀಂ ಖಾನ್ ಅವರೇ ನಮ್ಮ ಮಗಳ ಹೆಸರನ್ನು ಆಯ್ಕೆ ಮಾಡಿದರು’ ಎಂದು ಪ್ರೀತಿಯಿಂದ ತಿಳಿಸಿದ್ದಾರೆ.

ಇದನ್ನೂ ಓದಿ: ಐವತ್ತೇಳನೇ ವಯಸ್ಸಿಗೆ ತಂದೆ ಆದ ಸಲ್ಲು ಸಹೋದರ; ಖುಷಿಯಿಂದ ಹೇಳಿಕೊಂಡ ಅರ್ಬಾಜ್  

ಶೂರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ‘ಪಟ್ನಾ ಶುಕ್ಲಾ’ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಕೆಲಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ 2023ರ ಡಿಸೆಂಬರ್ 24ರಂದು ಮುಂಬೈನಲ್ಲಿರುವ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ಅತ್ಯಂತ ಸರಳವಾಗಿ ವಿವಾಹವಾದ್ದರು. ಇದು ಅರ್ಬಾಜ್ ಖಾನ್ ಅವರ ಎರಡನೇ ವಿವಾಹವಾಗಿದ್ದು, ಇದಕ್ಕೂ ಮುನ್ನ ಅವರು ನಟಿ ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರತಿಭಟನೆ ವೇಳೆ ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌

ಜೈಪುರ, (ಜೂನ್ 15): ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ  (CJP founder Abhijeet Dipke) ಮೇಲೆ ಸೋಮವಾರ(ಜೂ. 15) ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಹೌದು..ಇಂದು (ಜೂನ್ 15) ಜೈಪುರದ ಶಹೀದ್ ಸ್ಮಾರಕದ ಬಳಿ ಬೃಹತ್ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯತ್ತ ಅಭಿಜೀತ್ ಡಿಪ್ಕೆ ಅವರನ್ನು ಬೆಂಬಲಿಗರು ತಮ್ಮ ಹೆಗಲ ಮೇಲೆ ಹೊತ್ತು ತರುತ್ತಿದ್ದ ವೇಳೆ ದಿಢೀರ್ ಎಂದು ನುಗ್ಗಿದ ಕೆಲ ಕಿಡಿಗೇಡಿಗಳು, ಅವರ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ಎಳೆದು, ಮುಖಕ್ಕೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೆ, ಅವರನ್ನು ಕೆಳಗೆ ಬೀಳಿಸಲು ಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಮಹಿಳೆಯರಿಗೆ ಇಷ್ಟವಾಗೋದೇ ಪುರುಷರ ಈ ಗುಣಗಳು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says these are the qualities of men that women like

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಯಶಸ್ಸು, ಶ್ರೀಮಂತಿಕೆ, ದಾಂಪತ್ಯ ಜೀವನ, ಶಿಕ್ಷಣ, ಮದುವೆ ಹೀಗೆ ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರು ಮಹಿಳೆಯರ ವೈಯಕ್ತಿಕ ಜೀವನದ ಬಗ್ಗೆ ವಿವರಿಸಿದ್ದು, ಮಹಿಳೆಯರು ಯಾವ ರೀತಿಯ ಜೀವನ ಸಂಗಾತಿಯನ್ನು ಬಯಸುತ್ತಾರೆ, ಅವರು ಎಂತಹ ಪುರುಷರತ್ತ ಆಕರ್ಷಿತರಾಗುತ್ತಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಚಾಣಕ್ಯರು ಹೇಳಿರುವಂತೆ ಹೆಣ್ಮಕ್ಳಿಗೆ ಪುರುಷರ ಯಾವ ಗುಣಗಳು ಸಖತ್‌ ಇಷ್ಟ ಎಂಬುದನ್ನು ನೋಡೋಣ.

ಮಹಿಳೆಯರಿಗೆ ಪುರುಷರ ಯಾವ ಗುಣಗಳು ಇಷ್ಟವಾಗೋದು?

ಪ್ರಾಮಾಣಿಕತೆ: ಸಂಬಂಧಗಳಲ್ಲಿ ಪ್ರಾಮಾಣಿಕರಾಗಿರುವ ವ್ಯಕ್ತಿ ಜೀವನ ಸಂಗಾತಿಯಾಗಿ ಬರಬೇಕು ಎಂದು ಮಹಿಳೆಯರು ಬಯಸುತ್ತಾರೆ. ಇಂತಹ ಪುರುಷರು ಎಂದಿಗೂ ತಮ್ಮ ಹೆಂಡತಿ ಅಥವಾ ಪ್ರೇಯಸಿಗೆ ದ್ರೋಹ ಮಾಡಲು ಸಾಧ್ಯವಿಲ್ಲ. ಅಂತಹ ಪುರುಷರು ನಿರಂತರವಾಗಿ ತಮ್ಮ ಸಂಬಂಧಗಳನ್ನು ಬಲಪಡಿಸಲು ಶ್ರಮಿಸುತ್ತಾರೆ ಮತ್ತು ಎಂದಿಗೂ ಸುಳ್ಳನ್ನು ಹೇಳುವುದಿಲ್ಲ. ಈ ಗುಣವೇ ಮಹಿಳೆಯರಿಗೆ ಇಷ್ಟವಾಗೋದು.

ನಡವಳಿಕೆ: ಉತ್ತಮ ನಡವಳಿಕೆ, ಸಿಹಿ ಮಾತು ಮತ್ತು ಸಜ್ಜನಿಕೆಯಂತಹ ಗುಣಗಳನ್ನು ಪುರುಷರಿಂದ ಮಹಿಳೆಯರು ಹೆಚ್ಚಾಗಿ ನಿರೀಕ್ಷಿಸುತ್ತಾರೆ. ಅಲ್ಲದೆ ಈ ಗುಣವು ಮಹಿಳೆಯರನ್ನು ಬಹಳವಾಗಿ ಮೆಚ್ಚಿಸುತ್ತದೆ.

ಉತ್ತಮ ಕೇಳುಗರು: ಪ್ರತಿಯೊಬ್ಬ ಮಹಿಳೆಯೂ ತನ್ನ ಸಂಗಾತಿ ನೆರಳಿನಂತೆ ಇರಬೇಕೆಂದು ಬಯಸುತ್ತಾಳೆ. ಅವನು ಒಳ್ಳೆಯ ಕೇಳುಗನಾಗಿರಬೇಕು, ಆಕೆಯ ಆಲೋಚನೆಗಳನ್ನು ಗ್ರಹಿಸಬೇಕು, ತನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಬೇಕು ಎಂದು ಬಯಸುತ್ತಾಳೆ. ಈ ಗುಣ ಪ್ರತಿಯೊಬ್ಬ ಮಹಿಳೆಗೂ ಇಷ್ಟ.  ಅದೇ ಮಾತುಗಳಿಗೆ ಗಮನ ಕೊಡುದ ಮತ್ತು ನಿರ್ಲಕ್ಷ್ಯ ತೋರುವ ಪುರುಷರನ್ನು ಎಂದಿಗೂ ಇಷ್ಟಪಡುವುದಿಲ್ಲ.

ತಾಳ್ಮೆ:  ಜೀವನದ ಪ್ರತಿಯೊಂದು ಹಂತದಲ್ಲೂ ಏರಿಳಿತಗಳು ಇರುತ್ತವೆ, ಎಂತಹ ಕಷ್ಟದ ಸಂದರ್ಭದಲ್ಲೂ ತಾಳ್ಮೆಯಿಂದ ಇರುವ ವ್ಯಕ್ತಿ ಹಾಗೂ ಕೋಪ ಬಂದ ಸಂದರ್ಭದಲ್ಲಿ ಎದುರು ಮಾತಾಡದೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸುವ ವ್ಯಕ್ತಿಗಳೆಂದರೆ ಮಹಿಳೆಯರಿಗೆ ತುಂಬಾ ಇಷ್ಟ ಎನ್ನುತ್ತಾರೆ ಚಾಣಕ್ಯ. ತಾಳ್ಮೆಯನ್ನು ಹೊಂದಿರುವ ಪುರುಷರು ತಮ್ಮ ಜೀವನ ಸಂಗಾತಿಯನ್ನು ಎಂದಿಗೂ ನೋಯಿಸುವುದಿಲ್ಲ ಆಕೆಯನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಈ ಗುಣವನ್ನು ಹೊಂದಿರುವ ಪುರುಷರನ್ನೇ ಹೆಂಗಳೆಯರು ಮೆಚ್ಚಿಕೊಳ್ಳುವುದು.

ಇದನ್ನೂ ಓದಿ: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಕಲಿಸಬೇಕು ಎನ್ನುತ್ತಾರೆ ಚಾಣಕ್ಯ

ಹಾಸ್ಯ ಸ್ವಭಾವ: ಚಾಣಕ್ಯ ಹೇಳುವಂತೆ ಮಹಿಳೆಯರಿಗೆ  ಪುರುಷರ ಹಾಸ್ಯ ಸ್ವಭಾವವೂ ಇಷ್ಟ. ಹಾಸ್ಯ ಗುಣವನ್ನು ಹೊಂದಿರುವವರು ಯಾವಾಗಲೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಲೇ ಇರುತ್ತಾರೆ.  ಇತರರಿಗೆ ನೋವು ಮಾಡದೆ ಮುಖದಲ್ಲಿ ನಗು ತರಿಸುವ ವ್ಯಕ್ತಿಗಳತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ.

ಭಾವನಾತ್ಮಕವಾಗಿ ಬಲಿಷ್ಠ: ಆರ್ಯ ಚಾಣಕ್ಯ ಹೇಳುವಂತೆ ಮಹಿಳೆಯರು ಭಾವನಾತ್ಮಕವಾಗಿ ಬಲಿಷ್ಠರಾಗಿರುವ ಪುರುಷರನ್ನು ಬಯಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನ ಸಂಗಾತಿ ಭಾವನಾತ್ಮಕವಾಗಿ ಬಲಿಷ್ಠರಾಗಿರಬೇಕು ಎಂದು ಬಯಸುತ್ತಾರೆ.

ಕಾಳಜಿ ಗುಣ: ಪುರುಷರ ಇತರರ ಬಗ್ಗೆ ತೋರುವ ಕಾಳಜಿ, ಅವರ ಸಹಾಯ ಗುಣವನ್ನು ಮಹಿಳೆಯರು ಬಹಳವಾಗಿ ಮೆಚ್ಚುತ್ತಾರೆ. ಅಂತಹ ಪುರುಷರಿಗೆ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ತಿಳಿದಿರುತ್ತದೆ ಮತ್ತು ಅವರಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಆದ್ದರಿಂದ, ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿಯಲ್ಲಿ ಈ ಗುಣವನ್ನು ಬಯಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ತುರ್ತು ಶಸ್ತ್ರ ಚಿಕಿತ್ಸೆ ಅಂದ್ರು ವಿಚಿತ್ರ ಬೇಡಿಕೆ ಇಟ್ಟ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ – Kannada News | Employee who went to office on emergency surgery day

ಎಷ್ಟೇ ಒತ್ತಡಭರಿತ ಕೆಲಸವೇ (job) ಇರಲಿ, ಕೆಲಸ ಬಿಟ್ಟರೆ ಬೇರೆ ಉದ್ಯೋಗ ಸಿಗಲ್ಲ ಎನ್ನುವ ಅನಿವಾರ್ಯ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಆದರೆ ಈ ಬಾಸ್ ಗಲು ರಜೆ ವಿಷ್ಯದಲ್ಲಿ ಉದ್ಯೋಗಿಗಳಿಗೆ ಕೊಡುವ ಕಾಟ ಅಷ್ಟಿಷ್ಟಲ್ಲ. ಹುಷಾರಿಲ್ಲ ಅಂದ್ರು ನಮ್ಮ ಬಾಸ್ ರಜೆ ಕೊಡೋಕೆ ಹಿಂದೆ ಮುಂದೆ ನೋಡ್ತಾರೆ ಎಂದು ಅದೆಷ್ಟೋ ಜನ ಹೇಳೋದಿದೆ. ಈ ವ್ಯಕ್ತಿಯ ವಿಷ್ಯದಲ್ಲೂ ಹಾಗೆಯೇ ಆಗಿದೆ. ಈ ಉದ್ಯೋಗಿ ತನ್ನ ಕಠಿಣ ಪರಿಸ್ಥಿತಿಯನ್ನು ರೆಡ್ಡಿಟ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿದ್ದು ತುರ್ತು ಶಸ್ತ್ರಚಿಕಿತ್ಸೆಗೆ ನಿಗದಿಪಡಿಸಿದ ದಿನವೇ ಕೆಲಸಕ್ಕೆ ಹಾಜರಾಗಲು ತಮ್ಮ ಬಾಸ್ ಕೇಳಿಕೊಂಡಿದ್ದರು ಎನ್ನುವ ಪೋಸ್ಟ್ ಆನ್ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ರೆಡ್ಡಿಟ್ ಪೋಸ್ಟ್ ನಲ್ಲಿ ಸಂದರ್ಭಕ್ಕೆ ತಕ್ಕಂತೆ, ಕಳೆದ ವರ್ಷ ನನಗೆ ‘ಕನಸಿನ’ ಉದ್ಯಮದಲ್ಲಿ ಕೆಲಸ ಸಿಕ್ಕಿತು. ಆದಾಗ್ಯೂ, ಈ ಎರಡು ವರ್ಷಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಈ ಎರಡು ಬದಲಾವಣೆಗಳಾಗಿವೆ. ಆದರೆ, ನನ್ನ ಸಂಗಾತಿಯ ಕೆಲಸ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿದ್ದರಿಂದ, ಇನ್ನೊಂದು ನನಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಕಾರಣ. ನಾನು ಹತಾಶನಾಗಿದ್ದೆ, ಸಾಧ್ಯವಾದಷ್ಟು ಕಾಲ ಈ ಕೆಲಸವನ್ನು ಮಾಡಲು ನಾನು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನಾನು ಯಾವುದೇ ಪೂರ್ಣ ದಿನ ರಜೆ ತೆಗೆದುಕೊಂಡಿಲ್ಲ. ನಾನು ಪ್ರತಿ ಬಾರಿಯೂ ಪ್ರಯಾಣಿಸಿ ಕೆಲಸ ಮಾಡಿದ್ದೇನೆ. ನಾನು ವಾರಾಂತ್ಯದಲ್ಲಿ, ಬೆಳಿಗ್ಗೆ ಹಾಗೂ ರಾತ್ರಿ ಹೆಚ್ಚಾಗಿ ಕರೆಯಲ್ಲಿಯೇ ಕೆಲಸ ಮಾಡುತ್ತೇನೆ. ನಾನು ಸೆಲೆಬ್ರಿಟಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತೇನೆ. ತೆರಿಗೆಗಳನ್ನು ಸೇರಿಸಿ ಗಂಟೆಗೆ ಸುಮಾರು 13 ಡಾಲರ್‌ಗಳನ್ನು ಗಳಿಸುತ್ತೇನೆ ಎಂದಿದ್ದಾರೆ.

ಕಳೆದ ವಾರ ನನ್ನ ನಿಯಂತ್ರಣಕ್ಕೆ ಮೀರಿದ ಆರೋಗ್ಯ ಸಮಸ್ಯೆಯಿಂದ ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನನ್ನ ಬಾಸ್ ಅದೇ ದಿನ ಸಭೆಗೆ ಹಾಜರಾಗಲು ನನ್ನನ್ನು ಕೇಳಿದರು. ನಾನು ಕೂಡ ಹಾಜರಾದೆ. ಈಗ ನಾನು ಚೇತರಿಸಿಕೊಳ್ಳುತ್ತಿದ್ದರೂ ಅವರು ತುಂಬಾ ಬೇಡಿಕೆಯಿಡುತ್ತಿದ್ದಾರೆ. ನಾನು ಮಧ್ಯದಲ್ಲಿ ಸಿಲುಕಿಕೊಂಡಿದ್ದೇನೆ. ದುಃಖಿತನಾಗಿದ್ದೇನೆ. ನನ್ನ ರೆಸ್ಯೂಮ್‌ನಲ್ಲಿ ಗೌರವಿಸಲ್ಪಡಲು ಮಾತ್ರ. ಈ ನಿಂದನೀಯವೆಂದು ಭಾವಿಸುವ ನಡವಳಿಕೆಗಾಗಿ ನಾನು ನಿರಂತರವಾಗಿ ಹಿಂದಕ್ಕೆ ಬಾಗುತ್ತಿದ್ದೇನೆ. ನಾನು ಇನ್ನೊಂದು ವರ್ಷ ಈ ಕೆಲಸದಲ್ಲಿ ಮುಂದುವರಿಯಬೇಕೇ? ಎಂದು ಸಲಹೆ ಕೇಳಿದ್ದಾರೆ.

ಇದನ್ನೂ ಓದಿ: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಈ ರೆಡ್ಡಿಟ್ ಪೋಸ್ಟ್ ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಒಬ್ಬ ಬಳಕೆದಾರ, ಆರೋಗ್ಯದ ಮೇಲೆ ಗಮನವಿರಲಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಆರೋಗ್ಯವೇ ಸರ್ವಸ್ವ. ಈ ಕೆಲಸದಿಂದ ನಿಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತೀರಿ. ರಜೆಯನ್ನು ಕೇಳಿ ನಿರಾಕರಿಸಿದರೆ, ಹೆಚ್ ಆರ್ ಗೆ ಹೋಗಿ. ಶಸ್ತ್ರಚಿಕಿತ್ಸಕರಿಂದ ಇದನ್ನು ಪ್ರಮಾಣೀಕರಿಸುವ ಪತ್ರವನ್ನು ಬರೆಯಿಸಿ. ನಂತರ ನೀವು ಚೇತರಿಸಿಕೊಳ್ಳುವಾಗ ಬೇರೆ ಉದ್ಯೋಗವನ್ನು ಹುಡುಕಲು ಪ್ರಾರಂಭಿಸಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಈ ಕೆಲಸ ಬಿಟ್ಟು ಆರೋಗ್ಯದ ಬಗ್ಗೆ ಗಮನ ಕೊಡುವುದೇ ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಇಂದೇ ಕೊನೆಯ ದಿನ; ಡೆಡ್​ಲೈನ್ ಮಿಸ್ ಆದವರಿಗೆ ಏನು ದಂಡ? – Kannada News | Advance Tax India: June 15 Deadline & Who Must Pay to Avoid Penalties

ನವದೆಹಲಿ, ಜೂನ್ 15: ನಮ್ಮ ದೇಶದ ಆದಾಯ ತೆರಿಗೆ (Income Tax) ನಿಯಮಗಳ ಪ್ರಕಾರ, ಹಣಕಾಸು ವರ್ಷದ ಕೊನೆಯಲ್ಲಿ ಒಂದೇ ಬಾರಿಗೆ ಪೂರ್ಣ ತೆರಿಗೆ ಕಟ್ಟುವ ಬದಲಿಗೆ, ಮುಂಗಡವಾಗಿ ಒಂದಷ್ಟು ತೆರಿಗೆ ಕಟ್ಟುವ ವ್ಯವಸ್ಥೆ ಇರುತ್ತದೆ. ಅದು ಅಡ್ವಾನ್ಸ್ ಟ್ಯಾಕ್ಸ್ ಸಿಸ್ಟಂ (Advance Tax). ಪ್ರಸಕ್ತ ಆರ್ಥಿಕ ವರ್ಷದ (2026-27) ಮೊದಲ ಕಂತಿನ ಮುಂಗಡ ತೆರಿಗೆ ಪಾವತಿಸಲು ಜೂನ್ 15 ಕೊನೆಯ ದಿನವಾಗಿದೆ. ಅಂದರೆ ಇವತ್ತೇ ಅದರ ಡೆಡ್​ಲೈನ್ ಇದೆ. ಹಣಕಾಸು ವರ್ಷದ ಆರಂಭದಿಂದ ಇಲ್ಲಿಯವರೆಗೆ 10,000 ರೂಗಿಂತ ಹೆಚ್ಚಿನ ಮೊತ್ತದ ತೆರಿಗೆ ಬಾಧ್ಯತೆ ಹೊಂದಿರುತ್ತಾರೋ ಅಂಥವರು ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ಅಡ್ವಾನ್ಸ್ ಟ್ಯಾಕ್ಸ್ ಯಾರೆಲ್ಲಾ ಪಾವತಿಸಬೇಕು?

ಯಾವುದೇ ಒಬ್ಬ ತೆರಿಗೆದಾರನ (ಸಂಬಳ ಪಡೆಯುವವರು, ಸ್ವಯಂ ಉದ್ಯೋಗಿಗಳು, ಫ್ರೀಲ್ಯಾನ್ಸರ್‌ಗಳು ಅಥವಾ ಉದ್ಯಮಿಗಳು) ವಾರ್ಷಿಕ ಅಂದಾಜು ತೆರಿಗೆಯ ಮೊತ್ತವು ಟಿಡಿಎಸ್ (TDS) ಕಡಿತದ ನಂತರವೂ ₹10,000 ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆಯೋ, ಅವರು ಮುಂಗಡ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ.

ಸಾಮಾನ್ಯವಾಗಿ ಸಂಬಳ ಪಡೆಯುವವರ ಟಿಡಿಎಸ್ ಅನ್ನು ಕಂಪನಿಯೇ ಕಡಿತಗೊಳಿಸುತ್ತದೆ. ಆದರೆ, ಅವರಿಗೆ ಸಂಬಳದ ಜೊತೆಗೆ ಸ್ಥಿರ ಠೇವಣಿ (FD) ಮೇಲಿನ ಬಡ್ಡಿ, ಬಾಡಿಗೆ ಆದಾಯ ಅಥವಾ ಷೇರು ಮಾರುಕಟ್ಟೆಯಿಂದ ಬಂಡವಾಳ ಲಾಭ (Capital Gains) ಇದ್ದು, ಅದರಿಂದಾಗಿ ತೆರಿಗೆ ಮೊತ್ತ ₹10,000 ದಾಟಿದರೆ ಮುಂಗಡ ತೆರಿಗೆ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: ಮೇ ತಿಂಗಳಲ್ಲಿ ರಫ್ತು ಶೇ. 18 ಹೆಚ್ಚಳ; ಆಮದು ಹೊರೆಯೂ ಏರಿಕೆ; ಟ್ರೇಡ್ ಡೆಫಿಸಿಟ್ ಇಳಿಕೆ

ಹಿರಿಯ ನಾಗರಿಕರಿಗೆ ವಿನಾಯಿತಿ: 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ (Senior Citizens) ಯಾವುದೇ ವ್ಯವಹಾರ (Business) ಅಥವಾ ವೃತ್ತಿಪರ ಆದಾಯ (Professional Income) ಇಲ್ಲದಿದ್ದರೆ, ಅವರು ಮುಂಗಡ ತೆರಿಗೆ ಪಾವತಿಯಿಂದ ವಿನಾಯಿತಿ ಹೊಂದಿರುತ್ತಾರೆ.

ಮುಂಗಡ ತೆರಿಗೆ ಪಾವತಿಯ ಕಂತುಗಳು

ಸರ್ಕಾರವು ಮುಂಗಡ ತೆರಿಗೆಯನ್ನು ವರ್ಷದಲ್ಲಿ ನಾಲ್ಕು ಕಂತುಗಳಾಗಿ ವಿಂಗಡಿಸಿದೆ. ಮೊದಲ ಕಂತಿನಲ್ಲಿ ಒಟ್ಟು ಅಂದಾಜು ತೆರಿಗೆಯ ಶೇ. 15 ಅನ್ನು ಪಾವತಿಸಬೇಕಾಗುತ್ತದೆ. ಎರಡನೇ ಕಂತಿನಲ್ಲಿ ಒಟ್ಟು ತೆರಿಗೆ ಬಾಧ್ಯತೆಯ ಶೇ. 45ರಷ್ಟನ್ನು ಕಟ್ಟಬೇಕಾಗುತ್ತದೆ. ಮೂರನೇ ಕಂತಿನಲ್ಲಿ ಶೇ. 75 ಮತ್ತು ಕೊನೆಯ ಹಾಗೂ ನಾಲ್ಕನೇ ಕಂತಿನಲ್ಲಿ ಶೇ. 100 ತೆರಿಗೆ ಕಟ್ಟಬೇಕಾಗುತ್ತದೆ. ಇವುಗಳಿಗೆ ಈ ಹಣಕಾಸು ವರ್ಷದಲ್ಲಿ ಇರುವ ಡೆಡ್​ಲೈನ್ ಕ್ರಮವಾಗಿ ಜೂನ್ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು 2027ರ ಮಾರ್ಚ್ 15 ಆಗಿರುತ್ತದೆ.

ಪ್ರೆಸಂಪ್ಟಿವ್ ಟ್ಯಾಕ್ಸೇಷನ್ ಅಡಿಯಲ್ಲಿ ಬರುವ ಸಣ್ಣ ಉದ್ಯಮಿಗಳು ಮತ್ತು ವೃತ್ತಿಪರರು ಮಾರ್ಚ್ 15ರ ಒಳಗಾಗಿ ಒಂದೇ ಕಂತಿನಲ್ಲಿ 100% ಮುಂಗಡ ತೆರಿಗೆಯನ್ನು ಪಾವತಿಸಬಹುದು.

ಗಡುವು ತಪ್ಪಿದರೆ ಆಗುವ ನಷ್ಟವೇನು?

ನಿಗದಿಪಡಿಸಿದ ದಿನಾಂಕದೊಳಗೆ ಅಗತ್ಯವಿರುವಷ್ಟು ಮುಂಗಡ ತೆರಿಗೆಯನ್ನು ಪಾವತಿಸದಿದ್ದರೆ ಅಥವಾ ಕಡಿಮೆ ಪಾವತಿಸಿದರೆ, ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಬಡ್ಡಿ ರೂಪದ ದಂಡವನ್ನು ತೆರಬೇಕಾಗುತ್ತದೆ.

ಸೆಕ್ಷನ್ 425 (ಹಳೆಯ ಸೆಕ್ಷನ್ 234C) ಪ್ರಕಾರ, ತ್ರೈಮಾಸಿಕ ಕಂತುಗಳ ಗಡುವು ತಪ್ಪಿದರೆ, ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ತಿಂಗಳಿಗೆ ಶೇ.1 ರಂತೆ ಸರಳ ಬಡ್ಡಿಯನ್ನು ವಿಧಿಸಲಾಗುತ್ತದೆ.

ಸೆಕ್ಷನ್ 424 (ಹಳೆಯ ಸೆಕ್ಷನ್ 234B) ಪ್ರಕಾರ, ಆರ್ಥಿಕ ವರ್ಷದ ಕೊನೆಯಲ್ಲಿ (ಮಾರ್ಚ್ 31ರ ವೇಳೆಗೆ) ಒಟ್ಟು ತೆರಿಗೆಯ ಕನಿಷ್ಠ ಶೇ. 90 ರಷ್ಟನ್ನು ಪಾವತಿಸದೇ ಇದ್ದರೆ, ಮುಂದಿನ ವರ್ಷದ ಏಪ್ರಿಲ್ 1 ರಿಂದ ತೆರಿಗೆ ಕಟ್ಟುವವರೆಗೆ ಬಾಕಿ ಮೊತ್ತಕ್ಕೆ ತಿಂಗಳಿಗೆ ಶೇ 1 ರಷ್ಟು ಬಡ್ಡಿ ಅನ್ವಯವಾಗುತ್ತದೆ.

ಇದನ್ನೂ ಓದಿ: ಸಂಬಳ ₹15,000 ಇದ್ದರೂ ಸಾಲವಿಲ್ಲದೆ ಬದುಕಬಹುದೇ? ಹೌದು ಎನ್ನುತ್ತದೆ ಈ ಸರಳ ಬಜೆಟ್ ಸೂತ್ರ

ಅಡ್ವಾನ್ಸ್ ಟ್ಯಾಕ್ಸ್ ಅನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ?

ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್ (`incometax.gov.in`) ಗೆ ಭೇಟಿ ನೀಡಿ, ‘e-Pay Tax’ ಆಯ್ಕೆಯ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಯುಪಿಐ (UPI) ಬಳಸಿ ಸುಲಭವಾಗಿ ಈ ತೆರಿಗೆಯನ್ನು ಪಾವತಿಸಬಹುದು. ಪಾವತಿ ಮಾಡುವಾಗ ಸರಿಯಾದ ಮೌಲ್ಯಮಾಪನ ವರ್ಷ (Assessment Year) ಮತ್ತು ‘Advance Tax (100)’ ಕೋಡ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹನ್ನೆರಡು ವರ್ಷಗಳಿಗೆ ಒಮ್ಮೆ ಬರುವ ಯೋಗವಿದು: ಈ ನಾಲ್ಕು ರಾಶಿಯವರು ಲಕ್ಕಿ – Kannada News | Rare Guru Shukra Conjunction in Pushya Nakshatra: Horoscope Predictions for All 12 Zodiac Signs

ಪ್ರಾತಿನಿಧಿಕ ಚಿತ್ರImage Credit source: Getty images

ಕರ್ಕಾಟಕ ರಾಶಿಯ ಪುಷ್ಯ ನಕ್ಷತ್ರದಲ್ಲಿ ದೇವಗುರು ಬೃಹಸ್ಪತಿ ಮತ್ತು ದೈತ್ಯಗುರು ಶುಕ್ರರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಪರೂಪದ ಹಾಗೂ ಶುಭದಾಯಕ ವಿದ್ಯಮಾನವಾಗಿದೆ. ಪುಷ್ಯ ನಕ್ಷತ್ರದ ಅಧಿಪತಿ ಶನಿಯಾಗಿದ್ದು, ಕರ್ಕಾಟಕವು ಚಂದ್ರನ ಮನೆಯಾಗಿದೆ. ಇಲ್ಲಿ ಜ್ಞಾನಕಾರಕ ಗುರು ಮತ್ತು ಭೋಗಕಾರಕ ಶುಕ್ರರ ಮಿಲನವು ದ್ವಾದಶ ರಾಶಿಗಳ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಈ ಯೋಗವು ಜೂನ್ ೦೮ರಿಂದ ೧೭ರವರೆಗೆ ಇರುವ ಅತ್ಯಪರೂಪದ ಯೋಗವಾಗಿದೆ‌.

​ಉತ್ತಮ ಲಾಭ ರಾಶಿಗಳು

ಕರ್ಕಾಟಕ ರಾಶಿ: ಈ ಸಂಯೋಗವು ನಿಮ್ಮದೇ ರಾಶಿಯ ಮೊದಲ ಮನೆಯಲ್ಲಿ ನಡೆಯುವುದರಿಂದ ಅತ್ಯಂತ ಶ್ರೇಷ್ಠ ಫಲಗಳು ಲಭಿಸಲಿವೆ. ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದ್ದು, ನವವಿವಾಹಿತರಿಗೆ ಸಂತಾನ ಯೋಗವಿದೆ. ಬುದ್ಧಿಮತ್ತೆ ಮತ್ತು ಆಕರ್ಷಣೆ ಹೆಚ್ಚುತ್ತದೆ.

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

ವೃಷಭ ರಾಶಿ: ತೃತೀಯ ಭಾವದಲ್ಲಿ ನಡೆಯುವ ಈ ಸಂಯೋಗದಿಂದ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸಹೋದರ-ಸಹೋದರಿಯರಿಂದ ಬೆಂಬಲ ಸಿಗಲಿದೆ. ಕಲೆ, ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಇರುವವರಿಗೆ ಅಭೂತಪೂರ್ವ ಯಶಸ್ಸು ಸಿಗಲಿದೆ.

​ಕನ್ಯಾ ರಾಶಿ: ನಿಮ್ಮ ಲಾಭ ಸ್ಥಾನದಲ್ಲಿ ಗುರು‌ ಮತ್ತು ಶುಕ್ರರ ಮಿಲನವಾಗುವುದರಿಂದ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ದೀರ್ಘಕಾಲದ ಆಸೆಗಳು ಈಡೇರಲಿದ್ದು, ಮಿತ್ರರಿಂದ ಸಹಕಾರ ದೊರೆಯಲಿದೆ.

ವೃಶ್ಚಿಕ ರಾಶಿ: ಭಾಗ್ಯ ಸ್ಥಾನದಲ್ಲಿ ಈ ಯುತಿ ಏರ್ಪಡುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ತೀರ್ಥಯಾತ್ರೆ ಮಾಡುವ ಯೋಗವಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ.

​ಮಧ್ಯಮ ಫಲ ಪಡೆಯುವ ರಾಶಿಗಳು

ಮೇಷ, ಸಿಂಹ, ತುಲಾ ಮತ್ತು ಧನು ರಾಶಿ: ಈ ರಾಶಿಗಳವರಿಗೆ ಮಿಶ್ರ ಫಲಗಳು ದೊರೆಯಲಿವೆ. ಉದ್ಯೋಗದಲ್ಲಿ ಪ್ರಗತಿ ಕಂಡುಬಂದರೂ, ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಸುಖ-ಸಂತೋಷದ ಸಾಧನಗಳಿಗಾಗಿ ವೆಚ್ಚಗಳು ಅಧಿಕವಾಗಬಹುದು. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸುವುದು ಉತ್ತಮ.

​ಜಾಗರೂಕರಾಗಿರಬೇಕಾದ ರಾಶಿಗಳು

ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿ: ಈ ರಾಶಿಗಳವರಿಗೆ ಧನ ನಷ್ಟ ಅಥವಾ ಅನಗತ್ಯ ಖರ್ಚುಗಳು ಎದುರಾಗಬಹುದು. ಶತ್ರುಗಳ ಕಾಟ ಮತ್ತು ಆರೋಗ್ಯದ ಏರುಪೇರುಗಳ ಬಗ್ಗೆ ಎಚ್ಚರವಿರಲಿ. ಸಾಲ ಕೊಡುವಾಗ ಅಥವಾ ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?

​ಗುರು ಮತ್ತು ಶುಕ್ರರು ಪರಸ್ಪರ ಶತ್ರು ಗ್ರಹಗಳಾಗಿದ್ದರೂ, ಪುಷ್ಯ ನಕ್ಷತ್ರದ ಶುಭತ್ವ ಮತ್ತು ಕರ್ಕಾಟಕದ ಉಚ್ಛ ಸ್ಥಾನದಿಂದಾಗಿ ಈ ಸಂಯೋಗವು ಒಟ್ಟಾರೆಯಾಗಿ ಸಮಾಜದಲ್ಲಿ ಧಾರ್ಮಿಕತೆ, ಕಲಾತ್ಮಕತೆ ಮತ್ತು ಆರ್ಥಿಕ ಸುಧಾರಣೆಗೆ ಕಾರಣವಾಗುತ್ತದೆ.

ಲೋಹಿತ್ ಹೆಬ್ಬಾರ್ 

Source link

ಹಿಂದೂ ಧರ್ಮ ನೋಂದಣಿ ಆಗಿದೆಯೇ? ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್‌ ಭಾಗವತ್‌ ತಿರುಗೇಟು – Kannada News | Mohan Bhagwat hits back at Minister Priyank Kharge letter about RSS Details

ಬೆಂಗಳೂರು, (ಜೂನ್ 15): ಆರ್​ಎಸ್​ಎಸ್ (RSS)   ನೋಂದಣಿಗೆ ಆಗ್ರಹಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬರೆದ ಬಹಿರಂ ಪತ್ರಕ್ಕೆ ಸ್ವತಃ RSS ಮುಖ್ಯಸ್ಥ ಭಾಗವತ್ (Mohan bhagwat)​ ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಗಿಮಿಕ್, ನಮ್ಮ ಚಟುವಟಿಕೆಗಳು ರಹಸ್ಯವಾಗಿಲ್ಲ. ಹಿಂದೂ ಧರ್ಮ ಎಲ್ಲಾದರೂ ರಿಜಿಸ್ಟರ್ ಆಗಿದೆಯೇ? ಸರ್ಕಾರಿ ಅನುದಾನ ಪಡೆಯುವವರಿಗೆ ಮಾತ್ರ ನೋಂದಣಿ ಅಗತ್ಯವಿದ್ದು, 1950ರಲ್ಲೇ ನಮ್ಮ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು

  • ಆರ್​​ಎಸ್​​ಎಸ್​​ ಬಗ್ಗೆ ಸಚಿವ ಪ್ರಿಯಾಂಕ್ ಪತ್ರಕ್ಕೆ ಮೋಹನ್ ಭಾಗವತ್​ ಪ್ರತಿಕ್ರಿಯೆ
  • ನೋಂದಣಿ ಆಗದಿರುವ ಅನೇಕ ಚಟುವಟಿಕೆ ನಡೆಯುತ್ತವೆ, ನಾವು ಕದ್ದು‌ಮುಚ್ಚಿ ಯಾವುದನ್ನೂ ಮಾಡುತ್ತಿಲ್ಲ
  • ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಹಸ್ಯ ಸಂಘಟನೆ ಅಲ್ಲ
  • ಹಿಂದೂ ಧರ್ಮವೇ ನೋಂದಣಿ ಆಗಿಲ್ಲ, ಸಂಘವೂ ಆಗಿಲ್ಲ
  • ಕೇರಳಂನ ತ್ರಿಶ್ಶೂರ್​ನಲ್ಲಿ ನಡೆದ ಸಂವಾದದಲ್ಲಿ ಮೋಹನ್​ ಭಾಗವತ್​ ಹೇಳಿಕೆ

ಕೇರಳಂನ ತ್ರಿಶ್ಶೂರ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ನೋಂದಣಿ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್, ಇದಕ್ಕೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ನೋಂದಣಿ ಆಗದೇ ಇರುವ ಅನೇಕ ಚಟುವಟಿಕೆಗಳು ನಡೆಯುತ್ತಲೇ ಇವೆ. ನಾವು ಕದ್ದು‌ಮುಚ್ಚಿ ಯಾವುದೂ ಮಾಡುತ್ತಿಲ್ಲ. ನಮ್ಮ ಎಲ್ಲ ಚಟುವಟಿಕೆಗಳು ತೆರೆದ ಮೈದಾನದಲ್ಲೇ ನಡೆಯುತ್ತವೆ. ಜನರನ್ನು ಕರೆದು ಸಂಘದ ಬಗ್ಗೆ ಅವರಿಗೆ ಮುಕ್ತವಾಗಿ ತಿಳಿಸುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿದಿನ ಜನರ ನಡುವೆ ಇರುತ್ತಾರೆ. ಜನರು ನಮ್ಮನ್ನು ದಿನನಿತ್ಯ ನೋಡುತ್ತಾರೆ. ಹೀಗಿರುವಾಗ ನಾವು ರಹಸ್ಯವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಸುಳ್ಳು ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: RSS ವಿಚಾರವಾಗಿ ಮೋಹನ್ ಭಾಗವತ್​ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ

ಇದು ಕೇವಲ ರಾಜಕೀಯವಷ್ಟೇ. ರಾಜಕೀಯದಲ್ಲಿ ಈ ಎಲ್ಲ ಗಿಮಿಕ್ ಗಳನ್ನೂ ಮಾಡಲಾಗುತ್ತದೆ. ನ ಸಂಘದ ವಿರುದ್ಧ ಇಂತಹ ಗಿಮಿಕ್‌ಗಳನ್ನು ಮಾಡಲಾಗುತ್ತಿದೆ. ನಾವು ಇದಕ್ಕೆಲ್ಲಾ ಒಗ್ಗಿಕೊಂಡಿದ್ದೇವೆ. ಕಳೆದ ಹಲವು ವರ್ಷಗಳಿಂದ ಇಂತಹ ಆರೋಪಗಳನ್ನು ನಾವು ಎದುರಿಸಿಕೊಂಡು ಬಂದಿದ್ದೇವೆ. ನಮ್ಮ ಕೆಲಸಗಳಿಗೆ ಅಡ್ಡಿಪಡಿಸಲು ಮತ್ತು ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಅನುಮಾನ ಮೂಡಿಸಲು ಈ ರೀತಿ ಮಾಡಲಾಗುತ್ತಿದೆ, ಆದರೆ ಅದು ಸಾಧ್ಯವಿಲ್ಲ. ನಮಗೆ ಇದರ ಅರಿವಿದೆ. ಇದೆಲ್ಲವನ್ನೂ ಎದುರಿಸಿಕೊಂಡೇ ಬಂದಿದ್ದೇವೆ ಎಂದು ಹೇಳಿದ್ದಾರೆ.

ಹಿಂದೂ ಧರ್ಮ ಎಲ್ಲಾದರೂ ರಿಜಿಸ್ಟರ್ ಆಗಿದೆಯೇ?

ನೋಂದಣಿಯಾಗದೆ ಪ್ರಪಂಚದಲ್ಲಿ ಅನೇಕ ವಿಷಯಗಳು ನಡೆಯುತ್ತಿವೆ. ಉದಾಹರಣೆಗೆ, ‘ಹಿಂದೂ ಧರ್ಮ’ ಎಲ್ಲಾದರೂ ನೋಂದಣಿಯಾಗಿದೆಯೇ? ಸರ್ಕಾರದಿಂದ ನಿಧಿ ಪಡೆಯಲು ಬಯಸುವವರಿಗೆ ಮಾತ್ರ ನೋಂದಣಿಯ ಅಗತ್ಯವಿರುತ್ತದೆ ವಿನಃ ನಮಗಲ್ಲ ಎಂದು ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ ಬ್ರಿಟಿಷರ ಕಾಲದಲ್ಲೇ ಜನರ ಇಚ್ಛೆಯಿಂದ ಪ್ರಾರಂಭವಾದ ಸಂಸ್ಥೆ. 100 ವರ್ಷಗಳಿಂದ ಯಾರೂ ನಮಗೆ ರಿಜಿಸ್ಟರ್ ಮಾಡಿ ಎಂದು ಹೇಳಿಲ್ಲ. ನಮ್ಮದೇ ಆದ ಲಿಖಿತ ಸಂವಿಧಾನ ಇದೆ. ಅದನ್ನು 1950ರ ದಶಕದಲ್ಲೇ ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆಗ ಸರ್ಕಾರ ಮೊದಲು ರಿಜಿಸ್ಟರ್ ಮಾಡಿ ಆಮೇಲೆ ಸಂವಿಧಾನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿರಲಿಲ್ಲ.ಸಂಘದ ಬಗ್ಗೆ ಜನರ ಮನಸ್ಸಲ್ಲಿ ಅನುಮಾನ ಮೂಡಿಸುವ ಕೆಲಸ ಇದು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಒಂದು ಕಡೆ ಸಂಘದ ಸಾಮಾಜಿಕ ಕೆಲಸಗಳಿಗೆ ಉತ್ತೇಜ‌ನ‌ ನೀಡುತ್ತಿರಿ. ಮತ್ತೊಂದು ಕಡೆ ಅನುಮಾನ ಹುಟ್ಟಿಸುತ್ತೀರಿ. ಇದಕ್ಕೆಲ್ಲ ಯಾಕೆ ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:11 pm, Mon, 15 June 26

Source link

ಸಿಎಂ ಭಗವಂತ್ ಮಾನ್ ಗುರು ದ್ರೋಹಿ ಎಂದು ಘೋಷಿಸಿದ ಅಕಲ್ ತಖ್ತ್; ಚುನಾವಣೆಗೂ ಮೊದಲೇ ಆಪ್​ಗೆ ಹಿನ್ನಡೆ – Kannada News | Akal Takht declares Punjab CM Bhagwant Mann anti Guru Ahead Of Punjab Elections

ಅಮೃತಸರ, ಜೂನ್ 15: ಪಂಜಾಬ್ ರಾಜಕಾರಣದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (Bhagwant Mann) ಅವರನ್ನು ಸಿಖ್ ಧರ್ಮದ ಅತ್ಯುನ್ನತ ಧಾರ್ಮಿಕ ಪೀಠವಾದ ‘ಅಕಲ್ ತಖ್ತ್’ ಅಧಿಕೃತವಾಗಿ ಗುರು ದ್ರೋಹಿ ಎಂದು ಘೋಷಿಸಿದೆ. ಸಿಖ್ ಧರ್ಮದ ಸರ್ವೋಚ್ಚ ಸಂಸ್ಥೆಯ ಈ ಧಾರ್ಮಿಕ ಆದೇಶವು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಆಮ್ ಆದ್ಮಿ ಪಕ್ಷಕ್ಕೆ (AAP) ದೊಡ್ಡ ಆಘಾತವನ್ನು ನೀಡಿದೆ.

ಅಕಲ್ ತಖ್ತ್‌ನ ಜತ್ಹೇದಾರ್ ನೇತೃತ್ವದಲ್ಲಿ ನಡೆದ 5 ಮಂದಿ ಸಿಖ್ ಧರ್ಮಗುರುಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಖ್ ಧರ್ಮದಲ್ಲಿ ‘ಅಕಲ್ ತಖ್ತ್’ ನೀಡುವ ಆದೇಶಗಳನ್ನು ಅತ್ಯಂತ ಪವಿತ್ರ ಮತ್ತು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಿಯಮಗಳ ಉಲ್ಲಂಘನೆ, ಸಿಖ್ ಧರ್ಮದ ಗೌರವಕ್ಕೆ ಚ್ಯುತಿ ತರುವುದು ಅಥವಾ ಧಾರ್ಮಿಕ ಸಂಸ್ಥೆಗಳ ಆದೇಶಗಳನ್ನು ನಿರ್ಲಕ್ಷಿಸುವ ವ್ಯಕ್ತಿಗಳ ವಿರುದ್ಧ ಇಂತಹ ಕಠಿಣ ಕ್ರಮ ಜರುಗಿಸಲಾಗುತ್ತದೆ.

ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಧಾರ್ಮಿಕ ಸಭೆಗಳು ಮತ್ತು ಗುರುದ್ವಾರಗಳ ಆವರಣದಲ್ಲಿ ಸಿಖ್ ಮರ್ಯಾದೆ ಹಾಗೂ ಸಂಪ್ರದಾಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹಲವು ಸಿಖ್ ಸಂಘಟನೆಗಳು ಅಕಲ್ ತಖ್ತ್‌ಗೆ ದೂರು ನೀಡಿದ್ದವು. ಈ ಹಿಂದೆ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಅಕಲ್ ತಖ್ತ್ ಮುಂದೆ ಖುದ್ದಾಗಿ ಹಾಜರಾಗಿ ಸ್ಪಷ್ಟನೆ ನೀಡುವಂತೆ ಭಗವಂತ್ ಮಾನ್ ಅವರಿಗೆ ಆದೇಶಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಭಗವಂತ್ ಮಾನ್ ಈ ಧಾರ್ಮಿಕ ಸಮನ್ಸ್‌ಗಳನ್ನು ನಿರ್ಲಕ್ಷಿಸಿ ಸಭೆಗಳಿಗೆ ಗೈರಾಗಿದ್ದರು. ಇದು ಸಿಖ್ ಧರ್ಮದ ಸರ್ವೋಚ್ಚ ಪೀಠಕ್ಕೆ ಮಾಡಿದ ಅವಮಾನ ಎಂದು ಧರ್ಮಗುರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅನಾರೋಗ್ಯದಿಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಿಖ್ ಸಮುದಾಯದವರು ಭಗವಂತ್ ಮಾನ್ ಅವರೊಂದಿಗೆ ಯಾವುದೇ ಧಾರ್ಮಿಕ ಸಹಕಾರ ಅಥವಾ ನಂಟು ಹೊಂದಬಾರದು ಎಂಬ ಅರ್ಥದಲ್ಲಿ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಲಾಗಿದೆ. ಪಂಜಾಬ್‌ನಲ್ಲಿ ಸಿಖ್ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಮತ್ತು ಅಕಲ್ ತಖ್ತ್‌ನ ನಿರ್ಧಾರಗಳು ಚುನಾವಣಾ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಈ ನಿರ್ಧಾರದಿಂದ ಚುನಾವಣೆಗೂ ಮುನ್ನವೇ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.

ಇದನ್ನೂ ಓದಿ: ಪಂಜಾಬ್​ನ ಅವಳಿ ಸ್ಫೋಟದ ಹಿಂದೆ ಬಿಜೆಪಿ ಕೈವಾಡ; ಸಿಎಂ ಭಗವಂತ್ ಮಾನ್ ಆರೋಪ

ಪಂಜಾಬ್‌ನಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮುಖ್ಯಮಂತ್ರಿಯವರ ಮೇಲಿನ ಈ ಧಾರ್ಮಿಕ ನಿಷೇಧ ಅಥವಾ ನಕಾರಾತ್ಮಕ ಘೋಷಣೆ ದೊಡ್ಡ ಹಿನ್ನಡೆಯಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ (SAD) ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಆರಂಭಿಸಿವೆ. ಸಿಎಂ ಭಗವಂತ್ ಮಾನ್ ಅವರಿಗೆ ಪಂಜಾಬ್‌ನ ಸಂಸ್ಕೃತಿ ಮತ್ತು ಸಿಖ್ ಧರ್ಮದ ಮೇಲೆ ಗೌರವವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link