Category Archives: Blog

Your blog category

‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ – Kannada News | Dhurandhar Making Video to release in theatres after box office success

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಚಿತ್ರಗಳು ಸದ್ಯ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿವೆ. 2025ರ ಡಿಸೆಂಬರ್‌ನಲ್ಲಿ ಮೊದಲ ಭಾಗ ಮತ್ತು 2026ರ ಮಾರ್ಚ್ 19ರಂದು ಎರಡನೇ ಭಾಗ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿದ್ದವು. ಇದೀಗ ರಣವೀರ್ ಸಿಂಗ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋವನ್ನು (BTS Video) ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ‘ಧುರಂಧರ್ 2’ ಸಿನಿಮಾ ಅನೇಕ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಭಾರತದ ಮೂರನೇ ಅತಿದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿ ಮೇಕಿಂಗ್ ವಿಡಿಯೋ ಬಿಡುಗಡೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚಿತ್ರದ ಶೂಟಿಂಗ್ ಹಂತದ ಸ್ವಾರಸ್ಯಕರ ಘಟನೆಗಳು, ತಾಂತ್ರಿಕ ಸವಾಲುಗಳು ಮತ್ತು ನಟ-ನಟಿಯರ ವಿಶೇಷ ಸಂದರ್ಶನಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಡಾಕ್ಯುಮೆಂಟರಿ ರೂಪಿಸಲಾಗುತ್ತಿದೆ. ಅದನ್ನು 2026ರ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಸಿದ್​ಧವಾಗಿದೆ ಎನ್ನಲಾಗಿದೆ.

ಚಿತ್ರಮಂದಿರದಲ್ಲಿ ರಿಲೀಸ್ ಆದ ನಂತರ ಇದೇ ಸಾಕ್ಷ್ಯಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ. ಈ ಪ್ಲ್ಯಾನ್ ಇರುವ ಕಾರಣದಿಂದಲೇ ರಣವೀರ್ ಸಿಂಗ್, ಅರ್ಜುನ್ ರಾಮ್​ಪಾಲ್ ಮತ್ತು ನಿರ್ದೇಶಕ ಆದಿತ್ಯ ಧರ್ ಸದ್ಯಕ್ಕೆ ಮಾಧ್ಯಮಗಳಿಂದ ದೂರವಿದ್ದು, ತಮ್ಮ ಮೊದಲ ಅಧಿಕೃತ ಸಂದರ್ಶನಗಳನ್ನು ಈ ಮೇಕಿಂಗ್ ಸಿನಿಮಾದಲ್ಲೇ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಧುರಂಧರ್ ಕಥೆ ಕದ್ದ ಆರೋಪ: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ

ಹಾಗಂತ ‘ಧುರಂಧರ್’ ತಂಡದವರು ಚಿತ್ರಮಂದಿರದಲ್ಲಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದು ಸಂಪೂರ್ಣ ಹೊಸ ಐಡಿಯಾ ಏನಲ್ಲ. ಈ ಹಿಂದೆ ವಿಕ್ರಾಂತ್ ಮಾಸ್ಸಿ ಅಭಿನಯದ ‘12th ಫೇಲ್’ ಚಿತ್ರದ ಮೇಕಿಂಗ್ ವಿಡಿಯೋವನ್ನು ‘ಜೀರೋ ಸೆ ರಿಸ್ಟಾರ್ಟ್’ ಹೆಸರಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಅದೇ ಹಾದಿಯಲ್ಲಿ ‘ಧುರಂಧರ್’ ಚಿತ್ರತಂಡ ಕೂಡ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರಲಿದೆ ಆಲ್ಕೋಹಾಲ್ ಆಧಾರಿತ ಸುಂಕ; ಇಲ್ಲಿವೆ ಕರ್ನಾಟಕದ ಪ್ರಸ್ತಾಪಿತ ಹೊಸ ಮದ್ಯ ನೀತಿ ಮುಖ್ಯಾಂಶಗಳು – Kannada News | Karnataka liquor rules draft, higher alcohol content attracts higher tax

ಕರ್ನಾಟಕದ ಹೊಸ ಮದ್ಯ ನೀತಿImage Credit source: AI/Mediaforge/TV9

ಬೆಂಗಳೂರು, ಏಪ್ರಿಲ್ 21: ಕರ್ನಾಟಕ ಸರ್ಕಾರವು ಇತ್ತೀಚೆಗೆ ರಾಜ್ಯದ ಅಬಕಾರಿ ನೀತಿಯಲ್ಲಿ (Karnataka Excise Policy) ಐತಿಹಾಸಿಕ ಬದಲಾವಣೆಗಳನ್ನು ತರಲು ಪ್ರಸ್ತಾಪಿಸಿದೆ. ಈ ಹೊಸ ನಿಯಮಗಳು ಮದ್ಯದ ಬೆಲೆ, ಮಾರಾಟ ಮತ್ತು ಪರವಾನಗಿ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರಲಿವೆ. ಹೆಚ್ಚು ಪಾರದರ್ಶಕವಾದ ಮತ್ತು ವೈಜ್ಞಾನಿಕವಾದ ಟ್ಯಾಕ್ಸ್ ಸಿಸ್ಟಂ ತರುವುದು ಇದರ ಉದ್ದೇಶ. 1968ರ ಕರ್ನಾಟಕ ಅಬಕಾರಿ ನಿಯಮಗಳಿಗೆ ಕರಡು ತಿದ್ದುಪಡಿಯನ್ನು ಸರ್ಕಾರ ಹೊರಡಿಸಿದೆ. ಡ್ರಿಂಕ್ಸ್​ನಲ್ಲಿ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಅಬಕಾರಿ ಸುಂಕ ವಿಧಿಸುವ ಕ್ರಮವನ್ನು ಯೋಜಿಸಲಾಗಿದೆ.

ಕರ್ನಾಟಕದ ಹೊಸ ಮದ್ಯ ನೀತಿ: ಕರಡು ನಿಯಮಗಳ ಮುಖ್ಯಾಂಶಗಳು

1. ಮದ್ಯದ ಬೆಲೆ ನಿಗದಿ ಪ್ರಕ್ರಿಯೆಯಲ್ಲಿ ಬದಲಾವಣೆ

ಪ್ರಸ್ತುತ ಮದ್ಯದ ಬೆಲೆಯನ್ನು ಸರ್ಕಾರವೇ ನಿರ್ಧರಿಸುತ್ತದೆ. ಆದರೆ ಕರಡು ಪ್ರಸ್ತಾವನೆಯಲ್ಲಿ, ಮದ್ಯದ ಬೆಲೆ ನಿಗದಿಪಡಿಸುವ ಹಕ್ಕನ್ನು ಮಾರುಕಟ್ಟೆ ಅಥವಾ ಉತ್ಪಾದಕರಿಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಯಲ್ಲಿದೆ. ಇದರಿಂದ ಪ್ರೀಮಿಯಂ ಮದ್ಯದ ಬೆಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.

2. ಆಲ್ಕೋಹಾಲ್ ಪ್ರಮಾಣದ ಆಧಾರಿತ ತೆರಿಗೆ (AIB)

ಮದ್ಯದ ಮೇಲಿನ ತೆರಿಗೆಯನ್ನು ಬಾಟಲಿಯ ಗಾತ್ರಕ್ಕಿಂತ ಹೆಚ್ಚಾಗಿ, ಅದರಲ್ಲಿರುವ ಆಲ್ಕೋಹಾಲ್ ಅಂಶದ (Alcohol content) ಆಧಾರದ ಮೇಲೆ ವಿಧಿಸಲು ಸರ್ಕಾರ ಉದ್ದೇಶಿಸಿದೆ.

ಇದನ್ನೂ ಓದಿ: ಬೆಂಗಳೂರು ಟೆಕ್ಕಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ರಾದ್ದಾಂತ; ಬ್ಲ್ಯಾಕ್​ಮೈಲ್, ಆತ್ಮಹತ್ಯೆ ಬೆದರಿಕೆ, ಅಶ್ಲೀಲ ಚಿತ್ರಗಳ ಕರ್ಮಕಾಂಡ

ಈ ನಿಯಮ ಜಾರಿಯಾದರೆ ಕಡಿಮೆ ಆಲ್ಕೋಹಾಲ್ ಇರುವ ಬಿಯರ್, ವೈನ್ ಇತ್ಯಾದಿ ಪಾನೀಯಗಳಿಗೆ ಕಡಿಮೆ ಸುಂಕ ಇರುತ್ತದೆ. ವೈನ್ ಮತ್ತು ಬಿಯರ್​ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಶೇ. 5ರಿಂದ 10ರಷ್ಟು ಇರುತ್ತದೆ. ಕಂಟ್ರಿ ಸಾರಾಯಿಗಳಲ್ಲಿ ಶೇ. 40ಕ್ಕಿಂತಲೂ ಹೆಚ್ಚು ಆಲ್ಕೋಹಾಲ್ ಇರುವುದರಿಂದ, ಅಂಥವು ದುಬಾರಿಗೊಳ್ಳಬಹುದು. ಪ್ರೀಮಿಯಮ್ ವಿಸ್ಕಿ, ಬ್ರಾಂಡಿ ಇತ್ಯಾದಿ ಹಾಟ್ ಡ್ರಿಂಕ್ಸ್​ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಸುಮಾರು ಶೇ. 40ರಷ್ಟು ಇರುತ್ತದೆ.

3. ಪರವಾನಗಿ (Licence) ಅವಧಿಯ ವಿಸ್ತರಣೆ

ಈಗಿರುವ ನಿಯಮದಂತೆ ಪ್ರತಿ ವರ್ಷ ಮದ್ಯದ ಅಂಗಡಿಗಳ ಪರವಾನಗಿ ನವೀಕರಿಸಬೇಕು. ಆದರೆ ಹೊಸ ಕರಡು ಪ್ರಸ್ತಾವನೆಯಲ್ಲಿ ಈ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದು ವ್ಯಾಪಾರಿಗಳಿಗೆ ಪದೇ ಪದೇ ಪರವಾನಗಿ ನವೀಕರಣದ ಕಿರಿಕಿರಿ ತಪ್ಪಿಸಲಿದೆ.

4. ಇ-ಹರಾಜು ಮೂಲಕ ಹೊಸ ಪರವಾನಗಿ

ರಾಜ್ಯದಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಅಥವಾ ಹಂಚಿಕೆಯಾಗದ CL-2 (Retail) ಮತ್ತು CL-9 (Bar and Restaurant) ಪರವಾನಗಿಗಳನ್ನು ಪಾರದರ್ಶಕವಾಗಿ ಇ-ಹರಾಜಿನ (E-auction) ಮೂಲಕ ನೀಡಲು ಸರ್ಕಾರ ಯೋಜಿಸುತ್ತಿದೆ.

5. ಮದ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ

ಬ್ರೂವರಿ ಮತ್ತು ಡಿಸ್ಟಿಲರಿಗಳಲ್ಲಿ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ನೀಡುವುದು ಮತ್ತು ಅಲ್ಲಿಯೇ ಮದ್ಯದ ರುಚಿ ನೋಡುವ (Tasting units) ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಕರಡಿನಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ರಾಜ್‌ಕೋಟ್ ಸೈಬರ್ ವಂಚನೆ: 2,500 ಕೋಟಿ ರೂ ಹಗರಣ ಬಯಲು, ಪ್ರಮುಖ ಬ್ಯಾಂಕ್ ಅಧಿಕಾರಿಗಳ ಬಂಧನ

ಇವುಗಳು ಕೇವಲ ಪ್ರಸ್ತಾವನೆಗಳು. ಸಾರ್ವಜನಿಕರು ಮತ್ತು ಮದ್ಯ ಮಾರಾಟಗಾರರ ಸಂಘದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪಡೆದ ನಂತರವೇ ಸರ್ಕಾರ ಅಂತಿಮ ಅಧಿಸೂಚನೆಯನ್ನು ಹೊರಡಿಸಲಿದೆ. ಅಲ್ಲಿಯವರೆಗೆ ಈಗಿರುವ ಹಳೆಯ ನಿಯಮಗಳೇ ಮುಂದುವರಿಯಲಿವೆ. ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆ ಅಥವಾ ನಿಯಮಗಳ ಬದಲಾವಣೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಲಿದೆ.

(ಗಮನಿಸಿ: ಆಲ್ಕೋಹಾಲ್​ಯುಕ್ತ ಪಾನೀಯ ಅಥವಾ ಮದ್ಯ ಆರೋಗ್ಯಕ್ಕೆ ಹಾನಿಕರ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿ: ಮೂರೇ ದಿನದಲ್ಲಿ 10 ಮಂದಿ ಕಾವೇರಿ ಪಾಲು! – Kannada News | 2 Students Drown in Cauvery at Talakad, 10 Lives Lost in 3 Days to River Tragedy

ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿImage Credit source: Tv9 Kannada

ಮೈಸೂರು, ಏಪ್ರಿಲ್​​ 21: ಕಾವೇರಿ ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಚಾರ್ವಿ(15), ರಮ್ಯಾ(16) ಮೃತ ಬಾಲಕಿಯರಾಗಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಸುಚಿತ್ರಾ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಶಾಲೆಯಿಂದ ಪ್ರವಾಸಕ್ಕೆಂದು 72 ವಿದ್ಯಾರ್ಥಿಗಳು ತಲಕಾಡಿಗೆ ಆಗಮಿಸಿದ್ದರು ಎನ್ನಲಾಗಿದೆ.

3 ದಿನಗಳಲ್ಲಿ 10 ಮಂದಿ ಕಾವೇರಿ ನದಿ ಪಾಲು

ಈಜಲು ಹೋಗಿ ಕಾವೇರಿ ನದಿ ಪಾಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಳೆದ 3 ದಿನಗಳ ಅವಧಿಯಲ್ಲಿಯೇ 10 ಜನ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಊರುಸ್​​ ಹಿನ್ನೆಲೆ ಮೈಸೂರು ಜಿಲ್ಲೆಯ ಕೆ.ಆರ್.ನಗರಕ್ಕೆ ಬಂದಿದ್ದ ಎಂಟು ಜನರ ತಂಡ ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿ ನೀರುಪಾಲಾಗಿತ್ತು. ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದರೆ, ಉಳಿದ 6 ಮಂದಿ ಜೀವ ಕಳೆದುಕೊಂಡಿದ್ದರು. ಮೃತರನ್ನು ಬೆಂಗಳೂರಿನ ಯಾಸಿನ್​(23) ಹಾಗೂ ಹೈಮಾ(13), ಊಟಿ ಮೂಲದ ಸೈದ್ ಫಾತಿಮಾ (38), ಮೈಸೂರು ಜಿಲ್ಲೆಯ ನೇಹಾ(20), ಉಮೇರ್(7) ಮತ್ತು ಅಫಿಯಾ(20) ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ: ಕಾವೇರಿ ನದಿಯಲ್ಲಿ 6 ಜನ‌ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ

ಮತ್ತೊಂದು ದುರ್ಘಟನೆಯಲ್ಲಿ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಪ್ರಾಣಕಳೆದುಕೊಂಡಿದ್ದರು. ಪಟ್ಟಣದಲ್ಲಿ ಟೈಲ್ಸ್‌ ಮತ್ತು ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಭಾನುವಾರ ಮಧ್ಯಾಹ್ನ ಈಜಲೆಂದು ನದಿಗೆ ತೆರಳಿದ್ದರು. ಈ ವೇಳೆ ಗಣೇಶ್ (22) ಮತ್ತು ಇಮ್ರಾನ್ (28) ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತಿಬ್ಬರು ಬಾಲಕಿಯರು ಕಾವೇರಿ ನದಿ ಪಾಲಾಗಿರೋದು ಭಾರಿ ಆತಂಕಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

CSK ತಂಡಕ್ಕೆ ಬಿಗ್ ಶಾಕ್: ಯುವ ದಾಂಡಿಗ ಐಪಿಎಲ್​ನಿಂದ ಔಟ್

Source link

IPL 2026: ಐಪಿಎಲ್‌ನಲ್ಲಿ ಇದುವರೆಗೆ ಯಾರು ಮಾಡಿರದ ದಾಖಲೆಯ ಸನಿಹದಲ್ಲಿ ವಿರಾಟ್ ಕೊಹ್ಲಿ – Kannada News | Virat Kohli: IPL 9000 Runs Record Awaits vs GT at Chinnaswamy

ಐಪಿಎಲ್​ನ ಮೊದಲ ಆವೃತ್ತಿಯಿಂದಲೂ ಆಡುತ್ತಿರುವ ವಿರಾಟ್ ಕೊಹ್ಲಿ ಈ ಲೀಗ್​ನಲ್ಲಿ ನೂರಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕೊಹ್ಲಿ ಆಟಕ್ಕೆ ಮುರಿಯದ ದಾಖಲೆಗಳಿಲ್ಲ. ಪ್ರತಿ ಆವೃತ್ತಿಯಲ್ಲೂ ಕೊಹ್ಲಿ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಅದರಂತೆ ಐಪಿಎಲ್‌ 2026 ರಲ್ಲೂ ಕೊಹ್ಲಿಯ ದಾಖಲೆಗಳ ಪುಸ್ತಕಕ್ಕೆ ಮತ್ತೊಂದು ದಾಖಲೆ ಸೇರುವ ಸನಿಹದಲ್ಲಿದೆ.

ಏಪ್ರಿಲ್ 24 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ನಿರ್ಮಿಸುವ ಅವಕಾಶವನ್ನು ಹೊಂದಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ಯಾವುದೇ ಆಟಗಾರನಿಗೂ ಈ ದಾಖಲೆಯನ್ನು ಸೃಷ್ಟಿಸಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಏಪ್ರಿಲ್ 24 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ವಿರಾಟ್ ಕೊಹ್ಲಿ 92 ರನ್ ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ 9000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಈ ಬೃಹತ್ ದಾಖಲೆಯ ಹತ್ತಿರಕ್ಕೂ ಬಂದಿಲ್ಲ. ಕೊಹ್ಲಿ ಈ ಸಾಧನೆ ಮಾಡಿದರೆ, ಐಪಿಎಲ್ ಟಿ20 ಲೀಗ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಬರೆಯುತ್ತಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ 273 ಐಪಿಎಲ್ ಪಂದ್ಯಗಳನ್ನು ಆಡಿದ್ದು, 39.76 ರ ಸರಾಸರಿಯಲ್ಲಿ 8908 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಇದುವರೆಗೆ 276 ಪಂದ್ಯಗಳಲ್ಲಿ 29.92 ರ ಸರಾಸರಿಯಲ್ಲಿ 7183 ರನ್ ಗಳಿಸಿದ್ದಾರೆ.

2026ರ ಐಪಿಎಲ್​ನಲ್ಲಿ ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೊಹ್ಲಿ ಎರಡು ಅರ್ಧಶತಕಗಳ ಸಹಾಯದಿಂದ 49.40 ರ ಸರಾಸರಿಯಲ್ಲಿ 247 ರನ್ ಗಳಿಸಿದ್ದಾರೆ. ಕೊಹ್ಲಿ ಈ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಆಡಿರುವ ಆರು ಪಂದ್ಯಗಳಿಂದ ನಾಲ್ಕು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಎಂಟು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್​ ರೇಟ್ +1.121. ಆದಾಗ್ಯೂ, ಮುಂದಿನ ಪಂದ್ಯದಲ್ಲಿ ಕೊಹ್ಲಿ ಅಪರೂಪದ ದಾಖಲೆಯನ್ನು ಮುರಿಯುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

Published On – 4:24 pm, Tue, 21 April 26

Source link

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ನಿಮಗಿದ್ಯಾ? ಇದು ವೆರಿಕೋಸ್ ವೇನ್ಸ್‌ಗೆ ಕಾರಣವಾಗುತ್ತಾ? – Kannada News | Crossed Legs Side Effects: Myths and Medical Facts

Crossed Legs Side Effects: Myths and Medical FactsImage Credit source: Getty Images

ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು (‘ಕ್ರಾಸ್ ಲೆಗ್ ಪೋಷಿಷನ್) ಬಹಳ ಸಾಮಾನ್ಯವಾಗಿದೆ. ಮೊದಲೆಲ್ಲಾ ಈ ರೀತಿ ದೊಡ್ಡವರ ಮುಂದೆ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಹಾಗಲ್ಲ, ತಮಗಿಷ್ಟವಾದ ರೀತಿ ಕುಳಿತುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಈ ರೀತಿ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು (Crossed Legs) ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತಿತ್ತು. ಈ ರೀತಿಯಾಗಿ ಕೂತರೆ ಬೆನ್ನೆಲುಬು ವಕ್ರವಾಗುತ್ತದೆ, ರಕ್ತ ಸಂಚಲನ ಕುಂಠಿತವಾಗುತ್ತದೆ ಮತ್ತು ವೆರಿಕೋಸ್ ವೇನ್ಸ್ (Varicose Veins) ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಅಧ್ಯಯನಗಳು ಮತ್ತು ವೈದ್ಯರ ಅಭಿಪ್ರಾಯಗಳು ಈ ವಿಚಾರಕ್ಕೆ ಬೇರೆ ಚಿತ್ರಣವನ್ನೇ ನೀಡಿದೆ. ಹಾಗಾದರೆ ಯಾವುದು ಸತ್ಯ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಅಪಾಯಕಾರಿಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆನ್ನೆಲುಬಿನ ಮೇಲೆ ಪರಿಣಾಮ ಬೀರುತ್ತದೆಯೇ?

ತಜ್ಞರ ಪ್ರಕಾರ, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ನರಗಳ ಮೇಲೆ ಸ್ವಲ್ಪ ಒತ್ತಡ ಬೀಳಬಹುದು. ಇದರಿಂದ ಕೆಲವೊಮ್ಮೆ ಕಾಲಿನಲ್ಲಿ ಜುಮ್ ಎಂಬ ಅನುಭವ ಅಥವಾ ಸಣ್ಣ ನೋವು ಕಾಣಿಸಬಹುದು. ಆದರೆ ಇದು ಸಾಮಾನ್ಯವಾಗಿ ತಾತ್ಕಾಲಿಕವಾಗಿದ್ದು, ದೀರ್ಘಕಾಲಿಕ ಹಾನಿಗೆ ಕಾರಣವಾಗುವುದಿಲ್ಲ. ಅನೇಕರು ಈ ಭಂಗಿಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಮಾನವ ದೇಹದ ಬೆನ್ನೆಲುಬು ಬಹಳ ಬಲವಾದ ಮತ್ತು ನವೀನತೆಯುಳ್ಳ ರಚನೆಯಾಗಿದೆ. ಇದು ವಿವಿಧ ರೀತಿಯ ಕುಳಿತ ಭಂಗಿಗಳನ್ನು ಸಹಿಸಬಲ್ಲದು. ಬೆನ್ನುನೋವು ಅಥವಾ ಸೊಂಟದ ನೋವಿಗೆ ಪ್ರಮುಖ ಕಾರಣ ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕೂತಿರುವುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್‌ ಹೆಗ್ಡೆ

ವೆರಿಕೋಸ್ ವೇನ್ಸ್‌ಗೆ ಕಾರಣವೇ?

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ವೆರಿಕೋಸ್ ವೇನ್ಸ್ ಉಂಟಾಗುತ್ತದೆ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ ತಜ್ಞರು ಹೇಳುವಂತೆ, ಈ ಸಮಸ್ಯೆಯ ಮುಖ್ಯ ಕಾರಣ ರಕ್ತನಾಳಗಳ ವಾಲ್ವ್ ಸರಿಯಾಗಿ ಕೆಲಸ ಮಾಡದಿರುವುದು. ವಯಸ್ಸು, ಜೀನ್ಸ್, ಅತಿಯಾದ ಕೊಬ್ಬು ಅಥವಾ ಬೊಜ್ಜು, ಗರ್ಭಾವಸ್ಥೆ ಮತ್ತು ದೀರ್ಘಕಾಲ ನಿಂತಿರುವುದು ಇದರ ಪ್ರಮುಖ ಕಾರಣಗಳು. ಕುಳಿತ ಭಂಗಿ ಮಾತ್ರ ಇದಕ್ಕೆ ನೇರ ಕಾರಣವಲ್ಲ.

ತಜ್ಞರ ಸಲಹೆ ಏನು?

ನೀವು ಯಾವ ರೀತಿಯಲ್ಲಿ ಕೂತರೂ, ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಇರಬಾರದು. ಮಧ್ಯ ಮಧ್ಯದಲ್ಲಿ ಭಂಗಿ ಬದಲಾಯಿಸುವುದು ಮತ್ತು ಸ್ವಲ್ಪ ನಡೆಯುವುದು ರಕ್ತ ಸಂಚಲನ ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಹಾನಿಕರವಾಗಿಲ್ಲ. ಆದರೆ ದೀರ್ಘಕಾಲ ಒಂದೇ ಸ್ಥಿತಿಯಲ್ಲಿ ಕೂತಿರುವುದನ್ನು ತಪ್ಪಿಸುವುದೇ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ’: ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ – Kannada News | Nalapad Speaks Out: ED Raid Timed to Prevent Father N.A. Harriss Ministerial Position

ಬೆಂಗಳೂರು, ಏ.21: ನಲಪಾಡ್ ನಿವಾಸದ ಮೇಲೆ ಇತ್ತೀಚೆಗೆ ನಡೆದ ಇಡಿ ದಾಳಿಯ ಕುರಿತು ಮೊಹಮ್ಮದ್ ಹಾರಿಸ್ ನಲಪಾಡ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ದಾಳಿ ತಮ್ಮ ತಂದೆ ಎನ್.ಎ. ಹಾರಿಸ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ದಾಳಿಯು ತಮ್ಮ ಮತ್ತು ತಮ್ಮ ಸಹೋದರ ಉಮರ್ ಹ್ಯಾರಿಸ್ ನಲಪಾಡ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ತಮ್ಮ ತಂದೆ ಸಚಿವ ಸ್ಥಾನ ಪಡೆಯುವುದನ್ನು ತಡೆಯಲು ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮೊಹಮ್ಮದ್ ಹಾರಿಸ್ ನಲಪಾಡ್ ಅವರ ಪ್ರಕಾರ, ಇಡಿ ಅಧಿಕಾರಿಗಳು ಅವರ ಕುಟುಂಬದ ನಿವಾಸಕ್ಕೆ ಬಂದಿದ್ದು, ತಾವು ಎನ್.ಎ. ಹಾರಿಸ್ ಅವರ ಮಕ್ಕಳು ಮತ್ತು ಆ ಮನೆಯಲ್ಲಿ ವಾಸಿಸುತ್ತಿರುವುದರಿಂದ ಮಾತ್ರ. ಈ ಪ್ರಕರಣಕ್ಕೂ ಮತ್ತಿ ನಮ್ಮ ತಂದೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ. 2021 ರಲ್ಲಿ ಇಸಿಐಆರ್ (ECIR) ದಾಖಲಾಗಿತ್ತಾದರೂ, ದಾಳಿಯನ್ನು ಐದು-ಆರು ವರ್ಷಗಳ ನಂತರ, ಅಂದರೆ 2026 ರಲ್ಲಿ ನಡೆಸಲು ಅಧಿಕಾರಿಗಳು ಬಂದಿರುವುದನ್ನು ಅವರು ಪ್ರಶ್ನಿಸಿದ್ದಾರೆ. “ಯಾರಾದರೂ ಅಪರಾಧ ಮಾಡಿದರೆ, ಆರು ವರ್ಷಗಳ ಕಾಲ ಸಾಕ್ಷ್ಯಗಳನ್ನು ಇಟ್ಟುಕೊಂಡು ಮನೆ ಶೋಧ ಮಾಡಲು ಕಾಯುತ್ತಾರಾ?” ಎಂದು ನಲಪಾಡ್ ಪ್ರಶ್ನಿಸಿದ್ದಾರೆ.

ಈ ದಾಳಿಯು ತಮ್ಮ ತಂದೆಗೆ ಮಂತ್ರಿ ಸ್ಥಾನ ಸಿಗದಂತೆ ತಡೆಯಲು ಮತ್ತು ಅವರ ಮೇಲೆ ಗೂಬೆ ಕೂರಿಸುವ ಉದ್ದೇಶದಿಂದ ನಡೆದಿದೆ ಎಂದು ನಲಪಾಡ್ ಆರೋಪಿಸಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದ್ದು, ಆಡಳಿತಾರೂಢ ಬಿಜೆಪಿಯವರು ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಬಿಟ್‌ಕಾಯಿನ್ ಪ್ರಕರಣದ ಕುರಿತು 2020 ರಲ್ಲಿ ಸದನದಲ್ಲಿ ಬಿಜೆಪಿಯೇ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಅಲ್ಲದೆ, ಎಸ್ಐಟಿ (SIT) ತನಿಖೆಯಲ್ಲೂ ಯಾವುದೇ ರೀತಿಯ ಅಕ್ರಮಗಳು ಪತ್ತೆಯಾಗಿಲ್ಲ. ಆದರೂ ಈಗ ತಮ್ಮ ಮತ್ತು ತಮ್ಮ ಸಹೋದರನ ಮೇಲೆ ದಾಳಿ ನಡೆಸಲಾಗಿದೆ ಎಂದು ನಲಪಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾಳಿಯ ಕುರಿತು ಮಾಹಿತಿ ನೀಡಿದ ನಲಪಾಡ್, ಸುಮಾರು 21 ಗಂಟೆಗಳ ಕಾಲ ತನಿಖೆ ನಡೆದಿದೆ ಎಂದು ತಿಳಿಸಿದ್ದಾರೆ. ಯೂಟ್ಯೂಬ್ ವಿವರಣೆಯ ಪ್ರಕಾರ 14 ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಶೋಧದಲ್ಲಿ ತಮ್ಮ ಮನೆಯಿಂದ ಕೇವಲ ಎರಡು ಮೊಬೈಲ್ ಫೋನ್‌ಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದು, “ಒಂದು ನಯ ಪೈಸೆ” ಕೂಡ ಪತ್ತೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವೈಯಕ್ತಿಕ ನೆಲೆಯಲ್ಲಿ ಮಾತನಾಡಿದ ಮೊಹಮ್ಮದ್ ಹಾರಿಸ್ ನಲಪಾಡ್, “ನಾನು ಒಬ್ಬ ಒಳ್ಳೆಯ ಮಗನಂತೂ ಆಗಕ್ಕೆ ಆಗಿಲ್ಲ. ಯಾವಾಗಲೂ ನನ್ನ ತಂದೆ ತಾಯಿಗೆ ನನ್ನಿಂದ ಕೆಟ್ಟದ್ದೇ ಆಗಿರೋದು” ಎಂದು ಭಾವುಕರಾಗಿ ಹೇಳಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿ, ಪೋಷಕರಿಗೆ ಒಳ್ಳೆಯ ಹೆಸರು ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ತಂದೆಯಂತೆ ಉತ್ತಮ ಮಗನಾಗಿ ಬಾಳಲು ಪ್ರಯತ್ನಿಸುತ್ತಿದ್ದರೂ, ಪ್ರತಿ ಬಾರಿ ಇಂತಹ ಕೇಸುಗಳನ್ನು ಇಟ್ಟುಕೊಂಡು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ದಾಳಿಯು ತಮ್ಮ ತಂದೆಗೆ ಸ್ಥಾನಮಾನ ಸಿಗದಂತೆ ತಡೆಯುವ ಉದ್ದೇಶದಿಂದ, ಸೂಕ್ತ ಸಮಯದಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಡು ಬಿಸಿಲಿಗೆ ಬಸವಳಿದ ಮೂಕ ಜೀವಿಗಳಿಗೆ ಈ ರೀತಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ – Kannada News | How can we care stray animals and birds during the summer?

ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಆರೈಕೆImage Credit source: Getty Images

ಮನುಷ್ಯರಾದ ನಾವು ಏನೋ ಸರ್ಕಸ್‌ ಮಾಡಿ ಈಗಿರುವ ಸುಡು ಬಿಸಿಲ ತಾಪದಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದೇವೆ. ದಾಹ ನೀಗಿಸಿಕೊಳ್ಳಲು ನೀರು, ಎಳನೀರು ಅಂತೆಲ್ಲಾ ಬಗೆ ಬಗೆಯ ಪಾನೀಯಗಳನ್ನು ಸೇವನೆ ಮಾಡುತ್ತೇವೆ. ಆದರೆ ಬೇಸಿಗೆಯ ತಾಪಕ್ಕೆ (Summer heat) ಬಸವಳಿದ ಮೂಕ ಪ್ರಾಣಿ ಪಕ್ಷಿಗಳು ನಮಗೆ ನೀರು, ಆಹಾರ ಕೊಡಿ, ಸುಡು ಬಿಸಿಲಿಗೆ ಬಸವಳಿದಿದ್ದೇವೆ ರಕ್ಷಣೆ ಕೊಡಿ ಎಂದು ಹೇಗೆ ಕೇಳಿಯಾವು? ಅದರಲ್ಲೂ ಹಲವು ಕಡೆ ನೀರಿನ ಮೂಲಗಳೇ ಬರಿದಾಗಿದ್ದು, ನೀರು ಆಹಾರ ಸಿಗದೆ ಪ್ರಾಣಿ-ಪಕ್ಷಿ ಸಂಕುಲವೇ ತತ್ತರಿಸಿ ಹೋಗಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲಾ ಬಲ್ಲವರಾದ ನಾವು ಮೂಕ ಜೀವಿಗಳ ರಕ್ಷಣೆಗಾಗಿ ಸಣ್ಣ ಅಳಿಲು ಸೇವೆಯನ್ನು ಮಾಡಬಹುದು. ಹೀಗೆ ಈ ಬೇಸಿಗೆಯಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ಯಾವ ರೀತಿ ಎಲ್ಲಾ ನಿಮ್ಮ ಕೈಲಾದಷ್ಟು ಸಹಾಯ ಮಾಡಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಬಸವಳಿದ ಪ್ರಾಣಿ-ಪಕ್ಷಿಗಳಿಗೆ ನಾವು ಹೇಗೆಲ್ಲಾ ಸಹಾಯ ಮಾಡಬಹುದು?

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ: ಈ ಸುಡು ಬೇಸಿಗೆಯಲ್ಲಿ ಬಾಯಾರಿಕೆ ತೀರಾ ಹೆಚ್ಚು. ಹಾಗಾಗಿ ಮನೆಯ ಕಾಂಪೌಂಡ್‌ ಹೊರಗಡೆ, ಕಾಂಪೌಂಡ್‌ ಮೇಲೆ ಸಣ್ಣ ಬಕೆಟ್‌ಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ನೀರಿಡಿ.  ಹೀಗೆ ಮಾಡುವುದರಿಂದ ಪ್ರಾಣಿ ಪಕ್ಷಿಗಳಿಗೂ ಕುಡಿಯಲು ಸಾಕಷ್ಟು ಪ್ರಮಾಣದ ನೀರು ಸಿಗುತ್ತದೆ. ಇದರಿಂದ ಸುಡುವ ಶಾಖದಲ್ಲೂ ಪ್ರಾಣಿಗಳಿಗೆ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಪ್ರಾಣಿಗಳಿಗೆ ನೆರಳು ಒದಗಿಸಿ: ಈ ಸುಡು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ನೆರಳನ್ನು ಹರಸುತ್ತಾ ಅಲೆದಾಡುತ್ತಿರುತ್ತವೆ. ಹೀಗಿರುವಾಗ ನಿಮ್ಮ ಮನೆಯ ಹೊರಗಡೆ ಪುಟ್ಟ ಜಾಗದಲ್ಲಿ ಬಟ್ಟೆ, ಕಾರ್ಡ್‌ಬೋರ್ಡ್ ಅಥವಾ ಛತ್ರಿಗಳನ್ನು ಬಳಸಿ ನೆರಳಿನ, ತಂಪಾದ ಜಾಗವನ್ನು ಸೃಷ್ಟಿಸಿ, ಇದು ಪ್ರಾಣಿಗಳಿಗೆ ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ಮುಖ್ಯವಾಗಿ ನೆರಳಿರುವ ಜಾಗದಲ್ಲಿ ವಿಶ್ರಾಂತಿ ಪಡೆಯುವ ಬೀಡಾಡಿ ಪ್ರಾಣಿಗಳನ್ನು ಕಲ್ಲು ಹೊಡೆದು ಓಡಿಸುವ ತಪ್ಪನ್ನೂ ಮಾಡದಿರಿ.

ಪ್ರಾಣಿಗಳಿಗೆ ಆಹಾರ ನೀಡಿ: ಬೆಳಗಿನ ಜಾವ ಅಥವಾ ಸಂಜೆ ಸಮಯದಲ್ಲಿ ಬೀಡಾಡಿ ಪ್ರಾಣಿಗಳಿಗೆ ಆಹಾರವನ್ನು ನೀಡಿ. ಈ ಸಮಯದಲ್ಲಿ ಆಹಾರ ನೀಡುವುದರಿಂದ ಮಧ್ಯಾಹ್ನದ ತೀವ್ರ ಶಾಖವನ್ನು ತಪ್ಪಿಸಲು ಅವುಗಳಿಗೆ ಸಹಾಯವಾಗುತ್ತದೆ. ಮುಖ್ಯವಾಗಿ ನೆರಳಿನ ಪ್ರದೇಶದಲ್ಲಿ ಅವುಗಳಿಗೆ ಆಹಾರವನ್ನು ಇಟ್ಟುಬಿಡಿ.

ಪಕ್ಷಿಗಳಿಗೆ ನೀರು ಒದಗಿಸಿ: ಬೇಸಿಗೆಯ ಸಮಯದಲ್ಲಿ ಗುಬ್ಬಚ್ಚಿ ಮುಂತಾದ ಸಣ್ಣ ಪಕ್ಷಿಗಳಿಗೆ ಕುಡಿಯಲು ನೀರನ್ನು ಒದಸಿ, ಇದಕ್ಕಾಗಿ ಛಾವಣಿಯ ಮೇಲೆ ನೀರಿನಿಂದ ತುಂಬಿದ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಹಾಗೂ ಕಾಳುಗಳನ್ನು ಇಡಬಹುದು.

ಇದನ್ನೂ ಓದಿ: ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವಾಗ ಅಗತ್ಯವಾಗಿ ವಸ್ತುಗಳನ್ನು ನಿಮ್ಮೊಂದಿಗೆ ಒಯ್ಯಿರಿ

ದುರ್ಬಲ ಅಥವಾ ಗಾಯಗೊಂಡ ಪ್ರಾಣಿಗಳಿಗೆ ಸಹಾಯ ಮಾಡಿ: ಶಾಖದ ಅಲೆ ತೀವ್ರವಿರುವ ಸಮಯದಲ್ಲಿ ಯಾವುದಾದರೂ  ದುರ್ಬಲ ಅಥವಾ ಗಾಯಗೊಂಡ ಪ್ರಾಣಿಯನ್ನು ನೀವು ನೋಡಿದರೆ, ಅದಕ್ಕೆ ನೀರುಣಿಸಿ ಮತ್ತು ಕೈಲಾದ ಸಹಾಯವನ್ನು ಮಾಡಿ.

ನೀರುಣಿಸಲು ಮಣ್ಣಿನ ಪಾತ್ರೆಗಳನ್ನೇ ಬಳಸಿ: ಮಣ್ಣಿನ ಮಡಕೆಗಳು ನೀರನ್ನು ದೀರ್ಘಕಾಲ ತಂಪಾಗಿರಿಸುತ್ತವೆ, ಮಣ್ಣಿನ ಪಾತ್ರೆಗಳ ನೀರು ಸೇವನೆ ಮಾಡುವುದರಿಂದ ಪ್ರಾಣಿ ಪಕ್ಷಿಗಳ ದೇಹವೂ ತಂಪಾಗಿರುತ್ತವೆ.

ಇತರರನ್ನೂ ಪ್ರೋತ್ಸಾಹಿಸಿ: ನೆರೆಹೊರೆಯವರು ಮತ್ತು ಸ್ನೇಹಿತರಿಗೂ ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಒದಗಿಸುವಂತೆ ಪ್ರೋತ್ಸಾಹಿಸುವುದರಿಂದ  ಬೀಡಾಡಿ ಪ್ರಾಣಿಗಳಿಗೆ ಸುರಕ್ಷಿತ ತಾಣಗಳನ್ನು ಸೃಷ್ಟಿಸಲು ಸಹಾಯವಾಗುತ್ತದೆ. ಅಲ್ಲದೆ ನೀವು ನಿಮ್ಮ ಮನೆ ಸುತ್ತಲೂ ಮರಗಿಡಗಳನ್ನೂ ನೆಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಸ್.ಕೆ. ಉಮೇಶ್ ಬರೆದ ‘ಐ ವಿಟ್ನೆಸ್’ ಕೃತಿ ಆಧಾರಿತ ಸಿನಿಮಾ ‘ಚಾರ್ಜ್‌ಶೀಟ್ 03-08’ – Kannada News | Chargesheet 03 08 Kannada movie based on Eye Witness book by SK Umesh

ನಿಜ ಜೀವನದಲ್ಲಿ ನಡೆದ ಕ್ರೈಂ ಘಟನೆಗಳನ್ನು ಆಧರಿಸಿದ ‘ಚಾರ್ಜ್‌ಶೀಟ್ 03-08’ (Chargesheet 03-08) ಸಿನಿಮಾ ಮೂಡಿಬರುತ್ತಿದೆ. ಸದ್ಯಕ್ಕೆ ಈ ಸಿನಿಮಾದ ಪೋಸ್ಟರ್ ಲಾಂಚ್ ಮಾಡಲಾಗಿದೆ. ಬೆಚ್ಚಿಬೀಳಿಸುವ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ (Kannada Cinema) ನಿರ್ಮಾಣ ಆಗುತ್ತಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ (SK Umesh) ಬರೆದ ‘ಐ ವಿಟ್ನೆಸ್’ ಕೃತಿ ಆಧರಿಸಿ ಈ ಸಿನಿಮಾವನ್ನು ಮಾಡಲಾಗುತ್ತಿದೆ.

2003ರಲ್ಲಿ ಬೆಂಗಳೂರಿನಲ್ಲಿ ನಡೆದ ನಿಜ ಘಟನೆಯ ಆಧಾರದ ಮೇಲೆ ರೂಪುಗೊಂಡಿರುವ ಸಿನಿಮಾ ಇದು. ನೈಜ ಘಟನೆಗೆ ಸಿನಿಮೀಯ ಸ್ಪರ್ಶ ನೀಡಲಾಗುತ್ತಿದೆ. ಉಮೇಶ್ ಅವರ ನೈಜ ಅನುಭವಗಳನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಪೋಸ್ಟರ್‌ನಲ್ಲಿ ಮೂಡಿಬಂದಿರುವ ಗಂಭೀರ ವಾತಾವರಣ, ರಹಸ್ಯಮಯ ದೃಶ್ಯ ವಿನ್ಯಾಸ ಹಾಗೂ ತನಿಖೆಯ ತೀವ್ರತೆಯನ್ನು ಸೂಚಿಸುವ ದೃಶ್ಯಗಳು ಕೌತುಕ ಮೂಡಿಸಿವೆ.

ಚಿತ್ರತಂಡ ಹೇಳುವ ಪ್ರಕಾರ, ‘ಚಾರ್ಜ್‌ಶೀಟ್ 03-08’ ಕೇವಲ ಒಂದು ಸಿನಿಮಾ ಅಲ್ಲ. ಇದು ನ್ಯಾಯಕ್ಕಾಗಿ ನಡೆದ ಹೋರಾಟದ ದಾಖಲೆ. ಸಮಾಜದ ಕತ್ತಲೆ ಮುಖವನ್ನೂ, ಸತ್ಯದ ದಾರಿಯಲ್ಲಿನ ಸಂಕಷ್ಟಗಳನ್ನೂ ಬಿಂಬಿಸುವ ಈ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ನಡುಗಿಸುವ ಶಕ್ತಿಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿದೆ. ಸಿನಿಮಾದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಲಕ್ಷ್ಮಣ್ ಮತ್ತು ದಿನೇಶ್ ಅವರು ನಿರ್ಮಾಣ ಮಾಡಿರುವ ‘ಚಾರ್ಜ್‌ಶೀಟ್ 03-08’ ಸಿನಿಮಾದಲ್ಲಿ ಸುಂದರ್ ರಾಜ್, ಹರ್ಷಾರ್ಜುನ್, ಸತ್ಯಶ್ರೀ, ಅಮರ್, ಚೇತನಾ ಖೋಟ್, ಡಾ. ಪ್ರಮೋದ್ ಹಿರೇಮಠ್, ವೆಂಕಟ್ ಭರದ್ವಾಜ್, ಡಾ. ಸುಧಾಕರ್ ಶೆಟ್ಟಿ, ರೂಪೇಶ್ ಮುಂತಾದವರು ನಟಿಸಿದ್ದಾರೆ. ಎಸ್.ಕೆ. ಉಮೇಶ್ ಬರೆದ ಕಥೆಗೆ ವೆಂಕಟ್ ಭಾರದ್ವಾಜ್ ಅವರು ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ನಟಿಯ ಪರ್ಸ್​​ನಿಂದ ಮಾಯವಾಯ್ತು 50 ಸಾವಿರ; ಕಳ್ಳ ಯಾರು?

‘ಚಾರ್ಜ್‌ಶೀಟ್ 03-08’ ಸಿನಿಮಾಗೆ ಸಮೀರ್ ಕುಲಕರ್ಣಿ ಅವರು ಸಂಗೀತ ನೀಡಿದ್ದಾರೆ. ಶಮೀಕ್ ವಿ. ಭಾರದ್ವಾಜ್ ಅವರು ಸಂಕಲನ ಮಾಡಿದ್ದಾರೆ. ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ‘ಅರ್ಜುನ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ – Kannada News | Likely Black Magic Performed Against Siddaramaiah Alleged By Congress Leader KN Rajanna Over CM Silent

ಬೆಂಗಳೂರು, (ಏಪ್ರಿಲ್ 21): ರಾಜ್ಯ ರಾಜಕೀಯದಲ್ಲಿ ಮಾಟ, ಮಂತ್ರ  (Black Magic )ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ (Congress) ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಮಾಟ ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಸಂಶಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆಎನ್ ರಾಜಣ್ಣ(KN Rajanna), ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ.

ಇಂದು (ಏಪ್ರಿಲ್ 21) ಬೆಂಗಳೂರಿನಲ್ಲಿ ಮಾತನಾಡಿದ ರಾಜಣ್ಣ, ನನ್ನ ಅನುಭವದ ಪ್ರಕಾರ ನಾನು ಸಿಎಂ ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದೇನೆ. ಸಿಎಂ ಇಷ್ಟೊಂದು ಅಸಹಾಯಕರಾಗಿದ್ದಾರೆ ಅನ್ನೋದನ್ನ ನೋಡಿದ್ರೆ ಅವರ ಮೇಲೆ ಯಾರಾದ್ರು ಮಾಟ ಮಂತ್ರ ಮಾಡಿದ್ದಾರೋ ಎನೋ ಅನ್ನಿಸುತ್ತಿದೆ. ಆ ಬಗ್ಗೆ ನಾನು ವಿಚಾರ ಮಾಡುತ್ತಿದ್ದೇನೆ. ಅದರ ಬಗ್ಗೆ ತನಿಖೆ ಮಾಡಿಸುತ್ತಿದ್ದೇನೆ. ಮನುಷ್ಯರ ಮೇಲೆ ಪರಿಣಾಮ ಆಗಬೇಕು ಅಂದ್ರೆ ಅವರು ಆಸ್ತಿಕರಾಗಿರಬೇಕು ಅಂತ ಇಲ್ಲ. ಸಿಎಂ ಹಾಗೂ ನಾನು ಮಾಟ ಮಂತ್ರದಲ್ಲಿ ನಂಬಿಕೆ ಇಲ್ಲದವರು. ನಾನು ಸಿಎಂ ಅವರು ಅಸಹಾಯಕರು ಅಂತಾ ಹೇಳಿದ ಮೇಲೆ ಅವರು ಕರೆದು ಮಾತನಾಡಿದ್ದಾರೆ. ಗಟ್ಟಿಯಾಗಿ ನಿಲ್ಲಿ ಅಂತ ಹೇಳಿಸಿಕೊಳ್ಳುವಷ್ಟು ಅಸಹಾಯಕತೆ ಸಿಎಂಗೆ ಬಂದಿಲ್ಲ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link