Category Archives: Blog

Your blog category

Video: ದುಬೈನಿಂದ ಭಾರತಕ್ಕೆ ಮರಳಿದ ಕೇರಳದ ಮಹಿಳೆ; ಕಾರಣ ಇದೇ ನೋಡಿ – Kannada News | Kerala woman reveals true story after returning to India from Dubai

ಉತ್ತಮ ಗುಣಮಟ್ಟದ ಜೀವನ, ಅಧಿಕ ಸಂಬಳ ಸಿಗುವ ಕೆಲಸವೇ ಬೇಕೆಂದು ಕೆಲವರು ತಮ್ಮ ತಾಯ್ನಾಡು ಬಿಟ್ಟು ಅಮೆರಿಕ, ಕೆನಾಡ, ಜಪಾನ್‌ ಇತ್ಯಾದಿ ಅಭಿವೃದ್ಧಿಶೀಲ ದೇಶಗಳಿಗೆ ಹೋಗ್ತಾರೆ. ಕೆಲವರು ತಮ್ಮ ತಾಯ್ನಾಡಿಗೆ ಬರುವುದೇ ಅಪರೂಪ. ಆದರೆ ಕೇರಳದ (Kerala) ಮಹಿಳೆಯೊಬ್ಬರು ದುಬೈನಿಂದ ಭಾರತಕ್ಕೆ ಮರಳಿದ್ದು, ತಮ್ಮ ನಿರ್ಧಾರದ ಹಿಂದಿನ ಹತ್ತು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದಲ್ಲದೇ, ಹೆಚ್ಚುತ್ತಿರುವ ವೆಚ್ಚಗಳು, ಶಾಲಾ ಶಿಕ್ಷಣ ಮತ್ತು ಸಾಲಮುಕ್ತ ಜೀವನವು ಭಾರತಕ್ಕೆ ಮರಳುವ ನಿರ್ಧಾರವನ್ನು ಹೇಗೆ ಪ್ರೇರೇಪಿಸಿತು ಎನ್ನುವುದನ್ನು ಅನಿವಾಸಿ ಭಾರತೀಯ ಮಹಿಳೆ (NRI woman) ತಿಳಿಸಿದ್ದಾರೆ.

ಇತ್ತೀಚೆಗೆ ದುಬೈನಿಂದ ಕೇರಳಕ್ಕೆ ತಮ್ಮ ಕುಟುಂಬದೊಂದಿಗೆ ಹಿಂತಿರುಗಿದ ಲೀನಾ ಸುಬಿನ್ (@unfilteredvoiceswithinme) ಹೆಸರಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ. ಇದು ಹಠಾತ್ ನಿರ್ಧಾರವಾಗಿರಲಿಲ್ಲ. ಇದು ಸಮಯ ಹಾಗೂ ಮಾನಸಿಕ ಶಾಂತಿಯ ಬಗ್ಗೆ ಯೋಚಿಸಿ ತೆಗೆದುಕೊಂಡ ನಿರ್ಧಾರ. ಯುಎಇಯಲ್ಲಿ ಮನೆ ಬಾಡಿಗೆ ನವೀಕರಣದೊಂದಿಗೆ ವೀಸಾ ನವೀಕರಣವು ಹೊಂದಿಕೆಯಾದಾಗ ಮಹತ್ವದ ತಿರುವು ಪಡೆದುಕೊಂಡಿತು. ಈ ವಿರಾಮವು ನಾವು ಎಲ್ಲವನ್ನೂ ಶಾಂತವಾಗಿ, ಪ್ರಾಯೋಗಿಕವಾಗಿ ಮತ್ತು ಪ್ರಾಮಾಣಿಕವಾಗಿ ನೋಡುವಂತೆ ಮಾಡಿತು ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಶಿಕ್ಷಣವು ಮತ್ತೊಂದು ಪ್ರಮುಖ ಅಂಶವಾಗಿತ್ತು. ಕೇರಳದಲ್ಲಿ ತಮ್ಮ ಮನೆಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಇಂಟರ್ನ್ಯಾಷನಲ್ ಶಾಲೆಯನ್ನು ಕಂಡುಕೊಂಡೆ. 10 ನಿಮಿಷಗಳ ಸುಲಭ ಪ್ರಯಾಣ ಹಾಗೂ ತರಗತಿಗಳು ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನನ್ನ ಮಗು ಈ ಹಿಂದೆ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟು ದುಬೈನಲ್ಲಿ ಪ್ರತಿದಿನ ಸುಮಾರು 90 ನಿಮಿಷ ಪ್ರಯಾಣಿಸಬೇಕಾಗಿತ್ತು ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

ನನ್ನ ಕುಟುಂಬವು 2021 ರಲ್ಲಿ ಕೇರಳದಲ್ಲಿ ತಮ್ಮ ವಿಲ್ಲಾ ನಿರ್ಮಾಣವನ್ನು ಪೂರ್ಣಗೊಳಿಸಿತು. ಆದರೆ ಸ್ವತಂತ್ರ ಮನೆಯಲ್ಲಿ ವಾಸಿಸುವುದು ವಿದೇಶದಲ್ಲಿ ಕಾಣೆಯಾಗಿದೆ ಎಂದು ನಾನು ಅರಿತು ಕೊಂಡೆ. ಅದಲ್ಲದೇ, ನಾನು ಇಂದು ಸಾಲ ಕಟ್ಟಬೇಕಾಗಿಲ್ಲ, ಇಎಂಐ ಇಲ್ಲ. ಈ ಸಮಯದಲ್ಲಿ ಮಾನಸಿಕ ಸ್ವಾತಂತ್ರ್ಯವು ಹೆಚ್ಚು ಮುಖ್ಯವಾಗಿದೆ ಎಂದು ಅರ್ಥವಾಯ್ತು. ವಯಸ್ಸಾದ ಹೆತ್ತವರೊಂದಿಗೆ ಇರುವುದು ಮತ್ತೊಂದು ಪ್ರಮುಖ ಅಂಶವಾಗಿತ್ತು. ನನ್ನ ಹೆತ್ತವರು 70 ಮತ್ತು 80 ವಯಸ್ಸಿನವರಾಗಿರುವುದರಿಂದ ಅವರ, ಸಾಮೀಪ್ಯವು “ಜವಾಬ್ದಾರಿಗಿಂತ ಹೆಚ್ಚಾಗಿ ಸವಲತ್ತಿನಂತೆ ಭಾಸವಾಗುತ್ತದೆ ಎಂದಿದ್ದಾರೆ.

8 ವರ್ಷಗಳ ಹಿಂದೆ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಿದೆ. ಇದು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟಿತು. ನಾನು ಇಲ್ಲಿ ದೇಶಗಳನ್ನು ಹೋಲಿಸುತ್ತಿಲ್ಲ. ಬದಲಾಗಿ ಸುಸ್ಥಿರತೆಯ ಬಗ್ಗೆ ಮಾತನಾಡುತ್ತಿದ್ದೇನೆ. ಕೆಲವೊಮ್ಮೆ, ಜೀವನವು ಎಲ್ಲಿ ಉತ್ತಮವಾಗಿ ಕಾಣುತ್ತದೆ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಆದರೆ ಅದು ನಿಜವಾಗಿಯೂ ಎಲ್ಲಿ ಸುಸ್ಥಿರವಾಗಿರುತ್ತದೆ ಎಂಬುದು ಮುಖ್ಯ ಎಂದು ವಿವರಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ: ಫ್ರಾನ್ಸ್‌ಗಿಂತ ಭಾರತ ಉತ್ತಮ; ವಿದೇಶಿ ಮಹಿಳೆ ನೀಡಿದ ಕಾರಣ ನೋಡಿ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತಾಯ್ನಾಡಿನಲ್ಲಿ ಜೀವನ ನಡೆಸುವ ಖುಷಿ ಬೇರೆಲ್ಲೂ ಸಿಗಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪೋಷಕರು ನನ್ನ ಮೊದಲ ಆದ್ಯತೆ ಎನ್ನುವ ಮಾತು ಮನಸ್ಸಿಗೆ ಹತ್ತಿರವಾಯ್ತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮುಂಬೈನಲ್ಲಿ ಭಾರತದ ಮೊದಲ ‘ಮ್ಯೂಸಿಕಲ್ ರೋಡ್’, ವಾಹನ ಹೋದ್ರೆ ‘ಜೈ ಹೋ‘ ಹಾಡು ಕೇಳ್ಸುತ್ತೆ – Kannada News | Mumbai Introduces India’s First Singing Road That Plays Jai Ho for Drivers

ಮುಂಬೈ, ಫೆಬ್ರವರಿ 12: ಮುಂಬೈನಲ್ಲಿ ಮೊದಲ ಮ್ಯೂಸಿಕಲ್ ರೋಡ್ ನಿರ್ಮಿಸಲಾಗಿದ್ದು, ಆ ರಸ್ತೆಯ ಮೇಲೆ ವಾಹನ ಹೋದರೆ ಜೈ ಹೋ ಹಾಡು ಕೇಳುತ್ತದೆ. ಈ ರಸ್ತೆಯನ್ನು ಮುಂಬೈ ಕರಾವಳಿ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ರಸ್ತೆಯನ್ನು ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹ ಉಪಸ್ಥಿತರಿದ್ದರು. ಈ ಕಲ್ಪನೆಯನ್ನು ಮಾಜಿ ಸಂಸದ ರಾಹುಲ್ ಶೇವಾಲೆ ಪ್ರಸ್ತಾಪಿಸಿದ್ದರು.

ವಾಹನಗಳು ನಿಗದಿತ ವೇಗದಲ್ಲಿ ಚಲಿಸುವಾಗ ಮಾತ್ರ ಈ ಹಾಡನ್ನು ಕೇಳಬಹುದು. ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರದ ಜೈ ಹೋ ಹಾಡನ್ನು ನೀವು ಕೇಳಬಹುದು. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಹೋಗುವ ಲೇನ್‌ನಲ್ಲಿ ಬಿಎಂಸಿ ಈ ವಿಶೇಷ ರಸ್ತೆಯನ್ನು ನಿರ್ಮಿಸಿದೆ.ಈ ರಸ್ತೆಗೆ ಧೈರ್ಯಶಾಲಿ ಮತ್ತು ಸ್ವಾಭಿಮಾನಿ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹೆಸರನ್ನು ಇಡಲಾಗಿದೆ. ಇದು ವಿಶ್ವದ ಐದನೇ ಮ್ಯೂಸಿಕಲ್ ರಸ್ತೆ ಮತ್ತು ಭಾರತದಲ್ಲಿ ಮೊದಲನೆಯದು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಹೇಳಿದೆ. ಇದು ವರ್ಲಿ ಸುರಂಗದಿಂದ ಹೊರ ಬಂದ ಬಳಿಕ ಸುಮಾರು 500 ಮೀಟರ್ ಮುಂದೆ, ಮೊದಲ ಲೇನ್‌ನಲ್ಲಿ ಸ್ಥಾಪಿಸಲಾಗಿದೆ.

ವಾಹನಗಳು ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ, ಟೈರ್‌ಗಳು ಮತ್ತು ರಸ್ತೆಯ ನಡುವಿನ ಘರ್ಷಣೆಯು ಶಬ್ದ ತರಂಗಗಳನ್ನು ಸೃಷ್ಟಿಸುತ್ತದೆ ಎಂದು ಬಿಎಂಸಿ ವಿವರಿಸಿದೆ. ಈ ರಾಗವು ವಾಹನದ ಒಳಗೆ ಸ್ಪಷ್ಟವಾಗಿ ಕೇಳಿಸಬಲ್ಲದು.
ಚಾಲಕರಿಗೆ ಮುಂಚಿತವಾಗಿ ತಿಳಿಸಲು ಫಲಕಗಳನ್ನು ಅಳವಡಿಸಲಾಗಿದೆ ಎಂದು ನಿಗಮ ತಿಳಿಸಿದೆ. 500 ಮೀಟರ್, 100 ಮೀಟರ್ ಮತ್ತು 60 ಮೀಟರ್‌ಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಈ ಮ್ಯೂಸಿಕಲ್ ರೋಡ್ ಕಲ್ಪನೆ ಮೊದಲು 2007 ರಲ್ಲಿ ಜಪಾನ್‌ನಲ್ಲಿ ಶುರುವಾಗಿತ್ತು. ನಂತರ ಹಂಗೇರಿ, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಂತಹ ದೇಶಗಳಲ್ಲಿ ಇದೇ ರೀತಿಯ ರಸ್ತೆಗಳನ್ನು ನಿರ್ಮಿಸಲಾಯಿತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಂಪಿ ಉತ್ಸವಕ್ಕೆ ಈ ಅದ್ಭುತವನ್ನು ನೋಡುವುದಕ್ಕಾದ್ರೂ ಹೋಗಬೇಕು: ಮತ್ತೆ ಮರುಕಳಿಸಲಿದೆ ವಿಜಯನಗರ ಸಾಮ್ರಾಜ್ಯದ ವೈಭವ – Kannada News | Hampi Festival 2026: Ancient Glory with Modern Drone Tech

ವಿಜಯನಗರ, ಫೆ.12: ವಿಶ್ವವಿಖ್ಯಾತ ಹಂಪಿ ಉತ್ಸವ 2026 (Hampi Utsav 2026) ಕ್ಕೆ ದಿನಗಣನೆ ಆರಂಭವಾಗಿದ್ದು, ಫೆಬ್ರವರಿ 13 ರಿಂದ 15 ರವರೆಗೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಲಿದೆ. ಈ ಬಾರಿಯ ಉತ್ಸವವು ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇನ್ನು ಹಂಪಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳು ಇರಲಿದೆ. ಮೈಸೂರು ದಸರಾದಲ್ಲಿ ಜನಮನ ಗೆದ್ದಿದ್ದ ಮಾದರಿಯಲ್ಲೇ, ಈ ಬಾರಿ ಆಕಾಶದಲ್ಲಿ 1,000 ಡ್ರೋನ್‌ಗಳು ಚಿತ್ತಾರ ಬಿಡಿಸಲಿವೆ. ಗಾಯತ್ರಿ ಪೀಠದ ವೇದಿಕೆಯ ಸಮೀಪದಲ್ಲಿ ಈ ಹೈಟೆಕ್ ಪ್ರದರ್ಶನ ನಡೆಯಲಿದೆ.

ಈ ಡ್ರೂನ್​​ ಮೂಲಕ ವಿಜಯನಗರ ಸಾಮ್ರಾಜ್ಯದ ಉದಯ, ಸುರ್ಣ ಯುಗ ಮತ್ತು ಯುದ್ಧದ ಪ್ರಮುಖ ಕ್ಷಣಗಳನ್ನು ಚಿತ್ರಿಸಲಾಗುತ್ತದೆ. ಜತೆಗೆ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕ, ಪ್ರಖ್ಯಾತ ಅರಸರಾದ ಶ್ರೀಕೃಷ್ಣದೇವರಾಯ ಮತ್ತು ದೇವರಾಯರ ಚಿತ್ರಗಳು ಆಕಾಶದಲ್ಲಿ ಮೂಡಿಬರಲಿವೆ. ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ.

ಇದನ್ನೂ ಓದಿ: ಪ್ರವಾಸಿಗರೇ ಮೈಸೂರಿಗೆ ಹೋದ್ರೆ ‘ಮಧುವನ’ ಕ್ಕೆ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?

ಇನ್ನು ಈ ಬಾರಿಯ ಉತ್ಸವದಲ್ಲಿ ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿರುವ ಪ್ರಕಾರ, ಈ ವರ್ಷದ ಉತ್ಸವಕ್ಕೆ ದೇಶ-ವಿದೇಶಗಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ನೇತೃತ್ವದಲ್ಲಿ ಜಿಲ್ಲಾಡಳಿತವು ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mahashivaratri 2026: ಮಹಾಶಿವರಾತ್ರಿ ಯಾವಾಗ ಫೆಬ್ರವರಿ 15 ಅಥವಾ 16? ಸರಿಯಾದ ದಿನಾಂಕ ಮತ್ತು ಶುಭ ಮುಹೂರ್ತ ಇಲ್ಲಿದೆ – Kannada News | Mahashivaratri 2026: Date, Puja Timings and Significance for Shiva Devotees

ಮಹಾದೇವನ ಪ್ರಿಯವಾದ ಮಹಾಶಿವರಾತ್ರಿ ಹಿಂದೂಗಳಿಗೆ ಒಂದು ದೊಡ್ಡ ಹಬ್ಬ. ಶಿವರಾತ್ರಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಬರುತ್ತದೆ. ಮಹಾಶಿವರಾತ್ರಿ ಹಬ್ಬವು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬರುತ್ತದೆ. ಮನಸ್ಸು, ಬ್ರಹ್ಮ, ಮಾಯಾ, ಜೀವ, ಬುದ್ಧಿ, ಆಕಾಶ, ಗಾಳಿ, ಅಗ್ನಿ, ನೀರು ಮತ್ತು ಭೂಮಿ ಸೇರಿ ಶಿವಲಿಂಗವನ್ನು ರೂಪಿಸುತ್ತವೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಮಹಾಶಿವರಾತ್ರಿಯಂದು ಮಾಡುವ ಶಿವನ ಪೂಜೆಯು ಪ್ರತಿಯೊಂದು ಆಸೆಯನ್ನು ಈಡೇರಿಸುತ್ತದೆ ಎಂದು ನಂಬಲಾಗಿದೆ.

ಈ ವರ್ಷ ಫೆಬ್ರವರಿ 15 ಅಥವಾ 16 ರಂದು ಮಹಾಶಿವರಾತ್ರಿ ಯಾವಾಗ?

ಚತುರ್ದಶಿ ತಿಥಿ ಫೆಬ್ರವರಿ 15 ರಂದು ಭಾನುವಾರ ಸಂಜೆ 04:47 ಪ್ರಾರಂಭವಾಗಿ ಫೆಬ್ರವರಿ 16, ಸೋಮವಾರ ಸಂಜೆ 05:32 ಕ್ಕೆ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಹಬ್ಬಗಳು ಬೆಳಗಿನ ತಿಥಿ ಬರುವ ದಿನವನ್ನು ಪರಿಗಣಿಸಲಾಗುತ್ತದೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ತಿಥಿಯು ಮಹಾಶಿವರಾತ್ರಿ ಹಬ್ಬದ ರಾತ್ರಿಯಲ್ಲಿರುತ್ತದೆ. ಶಿವನು ಮಧ್ಯರಾತ್ರಿಯಲ್ಲಿ ಲಿಂಗ ರೂಪದಲ್ಲಿ ಹೊರಹೊಮ್ಮಿದ ಕಾರಣ. ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಸಮಯವನ್ನು ಮಹಾಶಿವರಾತ್ರಿ ಹಬ್ಬವೆಂದು ಪರಿಗಣಿಸಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಚತುರ್ಥಶಿ ತಿಥಿಯು ಫೆಬ್ರವರಿ 15 ರ ಭಾನುವಾರ ಸೂರ್ಯಾಸ್ತದ ಸಮಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 16 ರ ಸೋಮವಾರ ಸಂಜೆಯವರೆಗೆ ಮುಂದುವರಿಯುತ್ತದೆ. ಮಹಾಶಿವರಾತ್ರಿಯನ್ನು 15 ನೇ ದಿನ, ಅಂದರೆ ಮಧ್ಯರಾತ್ರಿ ಚತುರ್ಥಶಿಯಂದು ಆಚರಿಸಲಾಗುತ್ತದೆ.

ನಿಶಿತ ಕಾಲ ಮುಹೂರ್ತ – 12:09 ಮಧ್ಯರಾತ್ರಿ – 01:01 ಮಧ್ಯರಾತ್ರಿ

ಮಹಾಶಿವರಾತ್ರಿಯ ನಾಲ್ಕು ಪ್ರಹಾರ ಮುಹೂರ್ತ:

  • ರಾತ್ರಿಯ ಮೊದಲ ಪ್ರಹರ ಪೂಜೆಯ ಸಮಯ – ಫೆಬ್ರವರಿ 15, ಸಂಜೆ 06:11 ರಿಂದ ರಾತ್ರಿ 09:23(ಹಾಲು).
  • ರಾತ್ರಿ ಎರಡನೇ ಪ್ರಹರ ಪೂಜೆಯ ಸಮಯ – ಫೆಬ್ರವರಿ 15, ರಾತ್ರಿ 09:23 ರಿಂದ ಮಧ್ಯರಾತ್ರಿ 12:35 (ತುಪ್ಪ).
  • ಮೂರನೇ ಪ್ರಹರ ಪೂಜೆಯ ಸಮಯ – ಫೆಬ್ರವರಿ 16 ಮಧ್ಯರಾತ್ರಿ 12:35 – ಬೆಳಿಗ್ಗೆ 03:47 (ಮೊಸರು).
  • ನಾಲ್ಕನೇ ಪ್ರಹರ ಪೂಜೆಯ ಸಮಯ – ಫೆಬ್ರವರಿ 16 ಮುಂಜಾನೆ 03:47 – ಬೆಳಿಗ್ಗೆ 06:59 (ಜೇನುತುಪ್ಪ).

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈಕಮಾಂಡ್ ಮಾಹಿತಿ ಕೇಳಿದ ಬೆನ್ನಲ್ಲೇ ‘ಕೈ’ ಶಾಸಕರ ವಿದೇಶ ಪ್ರವಾಸದ ಬಗ್ಗೆ ಮತ್ತಷ್ಟು ಗೊಂದಲ: ಸಚಿವ ವೆಂಕಟೇಶ್ ಅಚ್ಚರಿಯ ಹೇಳಿಕೆ – Kannada News | Confusion Deepens Over Congress MLAs’ Foreign Tour: Minister K Venkatesh Says No Official Visit from Department

ಸಚಿವ ವೆಂಕಟೇಶ್ ಅಚ್ಚರಿಯ ಹೇಳಿಕೆImage Credit source: TV9 Network

ಬೆಂಗಳೂರು, ಫೆಬ್ರವರಿ 12: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಒಂದದೆಡೆ ಅಧಿಕಾರ ಹಂಚಿಕೆ ಕಿತ್ತಾಟ ತಾರಕಕ್ಕೇರಿದ್ದರೆ, ಮತ್ತೊಂದೆಡೆ ಶಾಸಕರ ವಿದೇಶ ಪ್ರವಾಸ ವಿಚಾರ ಚರ್ಚೆಯಲ್ಲಿದೆ. ಪಶುಸಂಗೋಪನೆ ಇಲಾಖೆ ವತಿಯಿಂದ ಕೆಲವು ಮಂದಿ ಕಾಂಗ್ರೆಸ್ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇದೀಗ, ಹೈಕಮಾಂಡ್ ವರದಿ ಕೇಳಿದ ಬೆನ್ನಲ್ಲೇ ಪಶುಸಂಗೋಪನೆ ಇಲಾಖೆ ಸಚಿವ ಕೆ ವೆಂಕಟೇಶ್ ಅಚ್ಚರಿಯ ಮಾಹಿತಿ ನೀಡಿದ್ದಾರೆ. ನಮ್ಮ ಇಲಾಖೆ ವತಿಯಿಂದ ವಿದೇಶ ಪ್ರವಾಸ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಕಾಂಗ್ರೆಸ್​​​ನ ಕೆಲವು ಶಾಸರ ವಿದೇಶ ಪ್ರವಾಸಕ್ಕೂ ನಮ್ಮ ಇಲಾಖೆಗೂ ಸಂಬಂಧ ಇಲ್ಲ. ನಮ್ಮ ಇಲಾಖೆ ವತಿಯಿಂದ ಪ್ರವಾಸ ಆಯೋಜನೆ ಮಾಡಿಲ್ಲ. ಪ್ರವಾಸಕ್ಕೆ ನನಗೂ ಆಹ್ವಾನ ಇತ್ತು, ಆದರೆ ನಾನು ಹೋಗುತ್ತಿಲ್ಲ. ನಾನೇ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

ಕೆಲ ಹಿರಿಯ ಶಾಸಕರು ವಿದೇಶ ಪ್ರವಾಸ ಹೋಗುತ್ತಿರುವುದು ನಿಜ. ಆದರೆ, ನನ್ನ ಅದು ಇಲಾಖೆಯಿಂದ ಆಯೋಜನೆಯಾದ ಪ್ರವಾಸವಲ್ಲ. ಪಶುಸಂಗೋಪನೆ ಇಲಾಖೆಗೂ ಈ ಪ್ರವಾಸಕ್ಕೂ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಸಕರ ವಿದೇಶ ಪ್ರವಾಸದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಬುಧವಾರ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರು ವಿದೇಶ ಪ್ರವಾಸ ಹೋಗುವ ಬಗ್ಗೆ ಮಾಹಿತಿ ಇಲ್ಲ. ಆದಾಗ್ಯೂ ಅವರ ದುಡ್ಡಿನಲ್ಲಿ ಅವರು ಹೋದರೆ ತಪ್ಪೇನು ಎಂದು ಪ್ರಶ್ನಿಸಿದ್ದರು.

ವರದಿ ಕೇಳಿದ್ದ ಹೈಕಮಾಂಡ್

ಮತ್ತೊಂದೆಡೆ, ಅಧಿಕಾರ ಹಂಚಿಕೆ ಜಟಾಪಟಿ ತೀವ್ರಗೊಳ್ಳುತ್ತಿರುವ ಈ ಹೊತ್ತಿನಲ್ಲೇ ಶಾಸಕರು ವಿದೇಶ ಪ್ರವಾಸ ಹೋಗುವುದಕ್ಕೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಕೂಡ ವಿರೋಧ ವ್ಯಕ್ತವಾಗಿತ್ತು. ಅಧಿಕಾರ ಹಂಚಿಕೆ ಸಂಬಂಧಿಸಿದ ರಾಜಕೀಯ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ವಿದೇಶ ಪ್ರವಾಸ ಬೇಕಿತ್ತಾ ಎಂಬ ಪ್ರಶ್ನೆ ಕೆಲ ನಾಯಕರಿಂದ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿದ್ದವು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಹೈಕಮಾಂಡ್ ಮಧ್ಯಪ್ರವೇಶಸಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪಕ್ಷದಲ್ಲೇ ಅಸಮಾಧಾನ: ವರದಿ ಕೇಳಿದ ಹೈಕಮಾಂಡ್

ಇದೀಗ ಸಚಿವ ವೆಂಕಟೇಶ್ ನೀಡಿರುವ ಸ್ಪಷ್ಟನೆ, ಹೈಕಮಾಂಡ್ ಮಧ್ಯ ಪ್ರವೇಶಿಸುತ್ತಿದ್ದಂತೆಯೇ ವಿದೇಶ ಪ್ರವಾಸ ವಿಚಾರದಲ್ಲಿ ಒಳಗೊಳಗೇ ಬದಲಾವಣೆ ಮಾಡಿಕೊಂಡರೇ ಎಂಬ ಪ್ರಶ್ನೆ ಮೂಡಿಸಿದೆ. ಅಲ್ಲದೆ, ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರದಲ್ಲಿ ಮತ್ತಷ್ಟು ಗೊಂದಲ ಮೂಡಿಸಿದ್ದಂತೂ ನಿಜ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಇದೆಂಥಾ ಮದುವೆ? ಸ್ಟಾರ್ಟರ್​​ ಬದಲು ಅತಿಥಿಗಳಿಗೆ ಬೀಡಿ, ಗುಟ್ಕಾ, ಸಿಗರೇಟ್ ಕೊಟ್ರು

ಭಾರತದ ವಿವಾಹಗಳೆಂದರೆ ಒಂದು ವಿಶಿಷ್ಟವಾದ ಸಂಭ್ರಮ. ಅವು ತಮ್ಮ ಸಂಪ್ರದಾಯಗಳು, ದುಬಾರಿ ಉಡುಪುಗಳು, ಭವ್ಯವಾದ ಸ್ಥಳಗಳು ಮತ್ತು ರುಚಿಕರವಾದ ಆಹಾರಕ್ಕೆ ಹೆಸರುವಾಸಿಯಾಗಿವೆ. ಅತಿಥಿಗಳನ್ನು ಖುಷಿಪಡಿಸಲು ಹೆಚ್ಚಿನ ಕಾಳಜಿವಹಿಸಲಾಗುತ್ತದೆ. ಆದರೆ ಇದೆಂಥಾ ಮದುವೆಯಪ್ಪಾ, ಸ್ಟಾರ್ಟರ್​ಗೆ ಅತಿಥಿಗಳಿಗೆ ಬೀಡಿ, ಸಿಗರೇಟ್, ಗುಟ್ಕಾ ಕೊಟ್ಟಿರುವ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವಿವಾಹದ ಅನಿರೀಕ್ಷಿತ ಆತಿಥ್ಯ ಎಲ್ಲರ ಗಮನಸೆಳೆದಿದೆ. ವಿಶಿಷ್ಟ ತಿಂಡಿಗಳು ಮತ್ತು ಪಾನೀಯಗಳ ಬದಲಿಗೆ, ಅತಿಥಿಗಳಿಗೆ ಸಿಗರೇಟ್, ಬೀಡಿ ಮತ್ತು ಗುಟ್ಕಾ ಸ್ಯಾಚೆಟ್‌ಗಳಿಂದ ತುಂಬಿದ ಟ್ರೇಗಳನ್ನು ನೀಡುತ್ತಿರುವುದನ್ನು ಕಾಣಬಹುದು. ವಂಶಿಕಾ ಎಂಬ ಬಳಕೆದಾರರು ಹಂಚಿಕೊಂಡ ಈ ಕ್ಲಿಪ್​ನಲ್ಲಿ ಅತಿಥಿಗಳು ತಂಬಾಕು ಉತ್ಪನ್ನಗಳನ್ನು ತೆಗೆದುಕೊಳ್ಳುವುದನ್ನು ಕಾಣಬಹುದು. ಕೆಲವು ವೀಕ್ಷಕರು ಆಘಾತಕ್ಕೊಳಗಾಗಿದ್ದಾರೆ, ಇತರರು ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ ಮತ್ತು ಗರ್ವಾಲ್ ಪ್ರದೇಶದ ಕೆಲವು ಭಾಗಗಳಲ್ಲಿ ಇದು ವಾಡಿಕೆ ಎಂದು ಹೇಳಿದ್ದಾರೆ. ಕೆಲವರು ಅಲ್ಲೇ ಸಿಗರೇಟ್ ಸೇದುತ್ತಾ ನಿಂತಿರುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆನಡಾ ಶಾಲೆಯಲ್ಲಿ ಗುಂಡು ಹಾರಿಸಿ 9 ಜನರ ಕೊಲ್ಲುವ ಮುನ್ನ ಮನೆಯಲ್ಲಿ ತಾಯಿ, ಸಹೋದರನ ಕೊಂದು ಬಂದಿದ್ದ ಟ್ರಾನ್ಸ್​​ಜೆಂಡರ್ – Kannada News | Canada School Shooting: Transgender Shooter Killed Family Before Deadly Rampage

ಒಟ್ಟಾವಾ, ಫೆಬ್ರವರಿ 12: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ(Firing) ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಂದು ಅವರೆಲ್ಲರ ಮೇಲೆ ಗುಂಡು ಹಾರಿಸಿದ್ದು ಓರ್ವ ಮಂಗಳಮುಖಿ ಎಂಬುದು ತಿಳಿದುಬಂದಿದೆ. ಅದಕ್ಕಿಂತಲೂ ಭಯಾನಕ ವಿಚಾರವೇನೆಂದರೆ ಆಕೆ ಶಾಲೆಯ ಮೇಲೆ ದಾಳಿ ನಡೆಸುವ ಮುನ್ನ ತನ್ನ ತಾಯಿ ಹಾಗೂ ತನ್ನ ಸಹೋದರನ ಮೇಲೆ ಗುಂಡು ಹಾರಿಸಿ ಇಬ್ಬರನ್ನೂ ಕೊಂದು ಬಂದಿದ್ದಳು.

ಆಕೆಗಿನ್ನೂ 18 ವರ್ಷ ವಯಸ್ಸು, ಆಕೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಆಕೆಯ ಹೆಸರು ತಾನು ಓದಿದ ಶಾಲೆಯ ಮೇಲೆಯೇ ಗುಂಡು ಹಾರಿಸಿದ್ದಾಳೆ. ಆದರೆ ಕೆನಡಾದ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಹತ್ಯಾಕಾಂಡ ಇದಾಗಿದ್ದು ಆದರೆ ಈ ಘಟನೆಗೆ ಕಾರಣವೇ ಇಲ್ಲ.

ಬ್ರಿಟಿಷ್ ಕೊಲಂಬಿಯಾದ ಪೆಸಿಫಿಕ್ ಪ್ರಾಂತ್ಯದ 2,400 ಜನರಿರುವ ದೂರದ ಸಮುದಾಯವಾದ ಟಂಬ್ಲರ್ ರಿಡ್ಜ್‌ನಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೂಟ್‌ಸೆಲಾರ್ ಒಬ್ಬ ಟ್ರಾನ್ಸ್‌ಜೆಂಡರ್ ಆಗಿದ್ದು, ಆಕೆ ಮೊದಲು ಗಂಡಾಗಿ ಜನಿಸಿ ಬಳಿಕ ಹೆಣ್ಣಾಗಿ ಬದಲಾಗಿದ್ದಳು. ನಾಲ್ಕು ವರ್ಷಗಳ ಹಿಂದೆ ಶಾಲೆಯಿಂದ ಹೊರಗುಳಿದಿದ್ದಳು ಎಂದು ಪೊಲೀಸ್ ಕಮಾಂಡರ್ ಡ್ವೇನ್ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

ಗುಂಡು ಹಾರಿಸಿದ ಮಹಿಳೆ ಈ ಹಿಂದೆ ಬಂದೂಕು ಪರವಾನಗಿಯನ್ನು ಹೊಂದಿದ್ದರು, ಆದರೆ ಅದು ಅವಧಿ ಮೀರಿತ್ತು ಮತ್ತು ಆಯುಧಗಳನ್ನು ಆಕೆಯ ನಿವಾಸದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು . ಆದರೆ ನಂತರ ಅವುಗಳನ್ನು ಹಿಂತಿರುಗಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ಓದಿ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ರೂಟ್‌ಸೆಲಾರ್‌ ಮಾನಸಿಕ ಅಸ್ವಸ್ಥತೆಯಿದ ಬಳಲುತ್ತಿದ್ದ ಕಾರಣ, ಪೊಲೀಸರು ಆಕೆಯ ಮನೆಗೆ ಹವು ಬಾರಿ ಭೇಟಿ ನೀಡಿ ವಿಚಾರಸುತ್ತಲೇ ಇದ್ದರು. ದಾಳಿ ನಡೆದ ಶಾಲೆಗೆ ಒಮ್ಮೆ ಅವರು ಹಾಜರಾಗಿದ್ದರು ಆದರೆ ನಾಲ್ಕು ವರ್ಷಗಳ ಹಿಂದೆ ಶಾಲೆಯನ್ನು ತೊರೆದಿದ್ದಳು. ಕೆನಡಾದಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 24 ಜನರು ಗಾಯಗೊಂಡಿದ್ದರು.

ರೂಟ್‌ಸೆಲಾರ್ ಮೊದಲು ತನ್ನ ತಾಯಿ, 39, ಮತ್ತು 11 ವರ್ಷದ ಮಲಸಹೋದರನನ್ನು ಕುಟುಂಬದ ಮನೆಯಲ್ಲಿ ಕೊಂದಿದ್ದಳು. ನಂತರ ನಾಲ್ಕು ವರ್ಷಗಳ ಹಿಂದೆ ಅವಳು ಓದುತ್ತಿದ್ದ ಹತ್ತಿರದ ಶಾಲೆಯ ಮೇಲೆ ದಾಳಿ ಮಾಡಿದ್ದಾಳೆ. ಈ ಹಂತದಲ್ಲಿ ಯಾರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದಳ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಉದ್ದನೆಯ ಬ್ಯಾರೆಲ್ ಗನ್ ಮತ್ತು ಪಿಸ್ತೂಲ್ ಹೊಂದಿದ್ದ ಶೂಟರ್, ಹತ್ಯಾಕಾಂಡದ ನಂತರ ತಾನೂ ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟಿದ್ದಾಳೆ.

ಕುಟುಂಬದ ಮತ್ತೊಬ್ಬ ಸದಸ್ಯರು ನೆರೆಹೊರೆಯವರಿಗೆ ಮಾಹಿತಿ ನೀಡಿದ ನಂತರ ಮನೆಯಲ್ಲಿ ಕೊಲೆಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

Published On – 9:48 am, Thu, 12 February 26

Source link

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ: 3 ಕೋಟಿ ರೂ. ವೆಚ್ಚದಲ್ಲಿ ಹಾಕಿದ ರಸ್ತೆ ಮೂರೇ ತಿಂಗಳಲ್ಲಿ ಮತ್ತೆ ಗುಂಡಿ – Kannada News | Commuters Struggle on Mandya Road as Potholes Reappear Despite Repeated Patchwork

ಮಂಡ್ಯ,ಫೆ.12: ರಾಜ್ಯಾದ್ಯಂತ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇದೇ ನಿಟ್ಟಿನಲ್ಲಿ ಮಂಡ್ಯದಿಂದ ಪಾಂಡವಪುರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಗೆ ತೇಪೆ ಹಾಕುವ ಕೆಲಸವನ್ನು ಮಾಡಲಾಗಿತ್ತು. ಆದರೆ, ದುರಸ್ತಿ ಕಾರ್ಯ ಮುಗಿದ ಮೂರೇ ತಿಂಗಳಲ್ಲಿ ರಸ್ತೆಯಲ್ಲಿ ಮತ್ತೆ ಬೃಹತ್ ಗುಂಡಿಗಳು ಕಾಣಿಸಿಕೊಂಡಿರುವುದು ಸ್ಥಳೀಯರು ಮತ್ತು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.ರಸ್ತೆಯ ಡಾಂಬರ್ ಪದೇ ಪದೇ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿಯ ಗುಣಮಟ್ಟವನ್ನು ಸ್ಪಷ್ಟವಾಗಿ ಇದು ತೋರಿಸುತ್ತದೆ. ಒಮ್ಮೆ ಡಾಂಬರ್ ಕಿತ್ತು ಹೋದ ನಂತರ, ಅದನ್ನು ಸರಿಪಡಿಸಲು ಮುಂದಾದರೂ, ಕೇವಲ ಹತ್ತು ದಿನಗಳಲ್ಲೇ ಮತ್ತೆ ಕಿತ್ತು ಬರುತ್ತದೆ. ಇದು “ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬಂತೆ ಕಂಟ್ರ್ಯಾಕ್ಟರ್‌ಗಳ ಜೇಬು ತುಂಬಿಸುವ ಕೆಲಸವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆಗಳನ್ನು ಸುರಕ್ಷಿತವಾಗಿ ಮಾಡುವ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಪಡೆದುಕೊಂಡು ಇಂತಹ ಕಳಪೆ ಕೆಲಸ ಮಾಡುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ರಸ್ತೆ ಕೇವಲ ಒಂದು ಸ್ಥಳದಲ್ಲಿ ಹಾಳಾಗಿಲ್ಲ. ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಈ ರೀತಿಯ ಗುಂಡಿಗಳು ಬಿದ್ದಿವೆ. ಈ ರಸ್ತೆ ಮಂಡ್ಯ ಮತ್ತು ಪಾಂಡವಪುರ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಗುಂಡಿಗಳಿಂದಾಗಿ ವಾಹನ ಸವಾರರು, ವಿಶೇಷವಾಗಿ ಬೈಕ್ ಸವಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಸಡನ್ ಆಗಿ ಗುಂಡಿಗಳು ಕಾಣಿಸುವುದರಿಂದ ಹಲವರು ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಮೂರ್ನಾಲ್ಕು ಜನ ಈಗಾಗಲೇ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Solar Eclipse 2026: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ? – Kannada News | Dr. Basavaraj Gurujis Predictions for Aries During Rahugrasta Surya Grahan 2026

ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, 2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಮೇಷ ರಾಶಿಯವರಿಗೆ 11ನೇ ಮನೆಯಲ್ಲಿ ಸಂಭವಿಸಲಿದ್ದು, ಇದು ಲಾಭ ಸ್ಥಾನವಾಗಿದೆ. ಈ ಗ್ರಹಣದ ಪ್ರಭಾವದಿಂದ ಮೇಷ ರಾಶಿಯವರು ಆರ್ಥಿಕವಾಗಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣುವರು. ಕುಟುಂಬದಲ್ಲಿ ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಂಡು, ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ. ಭೂಮಿ ಲಾಭ ಮತ್ತು ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಆಸೆ ಆಕಾಂಕ್ಷೆಗಳು ಈಡೇರುತ್ತವೆ.

ಮಿಲಿಟರಿ, ಬ್ಯಾಂಕ್ ಉದ್ಯೋಗಿಗಳಿಗೆ ಹಾಗೂ ಈ ರಾಶಿಯವರಿಗೆ ಅಧಿಕಾರ ಪ್ರಾಪ್ತಿಯ ಯೋಗವಿದೆ. ಉದ್ಯೋಗದಲ್ಲಿನ ಕಿರಿಕಿರಿಗಳು ಕಡಿಮೆಯಾಗಲಿದ್ದು, ವ್ಯಾಪಾರದಲ್ಲಿ ಲಾಭ ಸಿಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೆ ವಿದೇಶ ಯೋಗವಿದೆ. ಈ ಗ್ರಹಣದ ಪ್ರಭಾವದಿಂದ ಒಂದು ತಿಂಗಳೊಳಗಾಗಿ ಸಾಕಷ್ಟು ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ತಾಳ್ಮೆ ಮತ್ತು ಸಹನೆಯಿಂದ ಇರುವುದು ಒಳಿತು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈವೇ ಪಕ್ಕದಲ್ಲಿ ಎಸೆದಿದ್ದ ಸೂಟ್​ಕೇಸ್​​ನಲ್ಲಿ ಯುವತಿಯ ಅರೆಬೆಂದ ದೇಹ ಪತ್ತೆ – Kannada News | Punjab Highway Burnt Body: Bathinda Police Investigate Amidst Operation Prahar 2

ಬಟಿಂಡಾ, ಫೆಬ್ರವರಿ 12: ಹೆದ್ದಾರಿಯಲ್ಲಿ ಸೂಟ್​ಕೇಸ್​​ನಲ್ಲಿ ಯುವತಿಯ ಅರೆಬೆಂದ ದೇಹ ಪತ್ತೆಯಾಗಿರುವ ಘಟನೆ ಪಂಜಾಬ್​(Punjab)ನ ಬಟಿಂಡಾದಲ್ಲಿ ನಡೆದಿದೆ. ಯುವತಿಯ ದೇಹ ತೀವ್ರವಾಗಿ ಸುಟ್ಟು ಹೋಗಿತ್ತು. ಬ್ರೀಫ್​ಕೇಸ್​ ಅನ್ನು ರಸ್ತೆಯ ಪಕ್ಕದಲ್ಲಿ ಎಸೆಯಲಾಗಿತ್ತು.ಪೊಲೀಸರು ಪಂಜಾಬ್‌ನಾದ್ಯಂತ ಶೋಧ ಕಾರ್ಯಾಚರಣೆ ಮತ್ತು ಆಪರೇಷನ್ ಪ್ರಹಾರ್ ನಡೆಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ, ಮೃತರ ಗುರುತು ಪತ್ತೆಯಾಗಿಲ್ಲ. ಆರೋಪಿಯೂ ಕೂಡ ಸಿಕ್ಕಿಬಿದ್ದಿಲ್ಲ.

ಬಟಿಂಡಾದ ಬೆಹ್ಮನ್ ದಿವಾನಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕೆಂಪು ಬ್ರೀಫ್‌ಕೇಸ್‌ನಲ್ಲಿ ಯುವತಿಯ ಭಾಗಶಃ ಸುಟ್ಟ ಶವ ಪತ್ತೆಯಾಗಿದೆ. ವಿಧಿವಿಜ್ಞಾನ ತಂಡ ಮತ್ತು ಬಟಿಂಡಾ ಪೊಲೀಸ್ ಅಧಿಕಾರಿಗಳು ಶವವನ್ನು ವಶಪಡಿಸಿಕೊಂಡ ಸ್ಥಳವನ್ನು ಪರಿಶೀಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತ ಯುವತಿ ಯಾರೆಂದು ಇನ್ನೂ ತಿಳಿದುಬಂದಿಲ್ಲ, ಆದರೆ ಪೊಲೀಸರು ಅಪರಾಧದ ಬಗ್ಗೆ ಹೇಳಿಕೆ ನೀಡಿದ್ದು, ಗುರುತಿಸುವಿಕೆಗೆ ಅನುಕೂಲವಾಗುವಂತೆ ಶವವನ್ನು 72 ಗಂಟೆಗಳ ಕಾಲ ಶವಾಗಾರದಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ ಎಂದು ನಗರ ಸಾರ್ವಜನಿಕ ಸೇವಾ ಕಾರ್ಯಕರ್ತ ಸಂದೀಪ್ ಸಿಂಗ್ ಡಿಎಸ್ಪಿ ಹರ್ವಿಂದರ್ ಸಿಂಗ್ ತಿಳಿಸಿದ್ದಾರೆ.

ಆಪರೇಷನ್ ಪ್ರಹಾರ್ ಎಂಬುದು ಪಂಜಾಬ್ ಸರ್ಕಾರವು ವಾಂಟೆಡ್ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಕೈಗೊಂಡಿರುವ ಒಂದು ಕಠಿಣ ಕ್ರಮವಾಗಿದೆ. ಈ ಅಪರಾಧ ವಿರೋಧಿ ಕಾರ್ಯಾಚರಣೆಯ ಭಾಗವಾಗಿ, ಪಂಜಾಬ್‌ನಲ್ಲಿ ವಾಂಟೆಡ್ ಕ್ರಿಮಿನಲ್‌ಗಳ ವಿರುದ್ಧ 72 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 3,200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಮತ್ತಷ್ಟು ಓದಿ: ಗಾಳಿಪಟಕ್ಕೆ ದಾರ ಕೊಡಿಸಲಿಲ್ಲವೆಂದು 11 ವರ್ಷದ ಬಾಲಕ ಆತ್ಮಹತ್ಯೆ

ಈ ಕಾರ್ಯಾಚರಣೆಯ ಇತ್ತೀಚಿನ ಬೆಳವಣಿಗೆಯಲ್ಲಿ, ಸೋಮವಾರ ಪ್ರಾರಂಭವಾದ ಆಪರೇಷನ್ ಪ್ರಹಾರ್ 2 ಎಂಬ ಕಾರ್ಯಾಚರಣೆಯಲ್ಲಿ, ಪೊಲೀಸರು  ಅಪರಾಧಿಗಳು ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ 8,278 ದಾಳಿಗಳನ್ನು ನಡೆಸಿದ್ದಾರೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಅವರು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಹಿರಿಯ ಅಧಿಕಾರಿಗಳು ವಿವಿಧ ಪೊಲೀಸ್ ಜಿಲ್ಲೆಗಳಿಗೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ. 12,000 ಸಿಬ್ಬಂದಿಯನ್ನು ಒಳಗೊಂಡ 2,000 ಕ್ಕೂ ಹೆಚ್ಚು ಪೊಲೀಸ್ ತಂಡಗಳು ಇದರಲ್ಲಿ ಭಾಗಿಯಾಗಿದ್ದವು. ಕಾರ್ಯಾಚರಣೆಯ ಒಟ್ಟಾರೆ ಫಲಿತಾಂಶಗಳನ್ನು ಹಂಚಿಕೊಂಡ ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ, ರಾಜ್ಯಾದ್ಯಂತ 7,498 ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ 3,260 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಬಂಧಿತರಲ್ಲಿ 135 ಘೋಷಿತ ಅಪರಾಧಿಗಳು ಸೇರಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸ್ ತಂಡಗಳು 47 ಶಸ್ತ್ರಾಸ್ತ್ರಗಳು, 4.8 ಕೆಜಿ ಹೆರಾಯಿನ್, 3.6 ಕೆಜಿ ಅಫೀಮು, 42,797 ಮಾದಕ ದ್ರವ್ಯ ಮಾತ್ರೆಗಳು, 68 ಕೆಜಿ ಗಸಗಸೆ ಹಸ್ಕ್ ಮತ್ತು 30 ಲಕ್ಷ ರೂ. ನಗದು ವಶಪಡಿಸಿಕೊಂಡಿವೆ ಎಂದು ಅವರು ಹೇಳಿದರು. 72 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯು ನಿರೀಕ್ಷೆಗಳನ್ನು ಮೀರಿ ತನ್ನ ಉದ್ದೇಶಗಳನ್ನು ಸಾಧಿಸಿದೆ ಮತ್ತು ಪಂಜಾಬ್ ಅನ್ನು ಈ ಬೆದರಿಕೆಯಿಂದ ಮುಕ್ತಗೊಳಿಸುವವರೆಗೆ ‘ಗ್ಯಾಂಗ್‌ಸ್ಟರ್ ತೇ ವಾರ್’ ಅಭಿಯಾನ ಮುಂದುವರೆಯುತ್ತದೆ ಎಂದು ಯಾದವ್ ಹೇಳಿದರು.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link