Category Archives: Blog

Your blog category

ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು! – Kannada News | EVM Trust High in Karnataka: Survey Shows 83.61 percent Voter Confidence, Strongest Support in Siddaramaiah, Kharge Strongholds

ಬೆಂಗಳೂರು, ಜನವರಿ 2: ಕರ್ನಾಟಕದಲ್ಲಿ ಶೇಕಡ 83.61 ರಷ್ಟು ಮತದಾರರು ವಿದ್ಯುನ್ಮಾನ ಮತಯಂತ್ರಗಳ (EVM) ಬಗ್ಗೆ ವಿಶ್ವಾಸಾರ್ಹತೆ ಹೊಂದಿರುವುದಾಗಿ ತಿಳಿಸಿರುವುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ವಿಶೇಷವೆಂದರೆ, ಇವಿಎಂ ಬಗ್ಗೆ ಸದಾ ತಕರಾರು ತೆಗೆಯುತ್ತಿರುವ ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತವರು ಜಿಲ್ಲೆ ಕಲಬುರಗಿಯಲ್ಲೇ (Kalaburagi) ಅತಿ ಹೆಚ್ಚು ಮತದಾರರು ಇವಿಎಂ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ. ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಅಧೀನದಲ್ಲಿ ಕರ್ನಾಟಕ ಮಾನಿಟರಿಂಗ್ ಆ್ಯಂಡ್ ಎವ್ಯಾಲ್ಯೂಯೇಶನ್ ಅಥಾರಿಟಿ ವಿದ್ಯುನ್ಮಾನ ಮತ ಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸಮೀಕ್ಷೆ ನಡೆಸಿದೆ.

ಕರ್ನಾಟಕದಲ್ಲಿ ಒಟ್ಟು ಶೇಕಡ 83.61 ರಷ್ಟು ಮತದಾರರು ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಕಲಬುರಗಿಯಲ್ಲಿ ಶೇಕಡ 94.8ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶೇಕಡ 88.59ರಷ್ಟು ಮತದಾರರು ಇವಿಎಂ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತಯಂತ್ರಗಳನ್ನು ನಿಖರತೆಯ ಕುರಿತು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. 2025ರ ಆಗಸ್ಟ್‌ನಲ್ಲಿ ಸಮೀಕ್ಷಾ ವರದಿಯನ್ನು ಸಲ್ಲಿಸಲಾಗಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಏನು?

ಇವಿಎಂ ಕುರಿತು ನಡೆಸಿದ ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆಯೇ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಸಮೀಕ್ಷೆ ನಡೆಸಿದ ಏಜೆನ್ಸಿ ಬಗ್ಗೆ ಪ್ರಸ್ತಾಪ ಮಾಡಿರುವ ಮಾಡಿರುವ ಅವರು, ರಾಜ್ಯ ಸರ್ಕಾರವು ಅದನ್ನು ಆ ಸಮೀಕ್ಷೆಯನ್ನು ಅನುಮೋದಿಸಿಲ್ಲ ಎಂದಿದ್ದಾರೆ. ‘ಮೊದಲನೆಯದಾಗಿ ಅದು ರಾಜ್ಯ ಸರ್ಕಾರ ಮಾಡಿಸಿದ ಸಮೀಕ್ಷೆಯೇ ಅಲ್ಲ. ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಸಮೀಕ್ಷೆಗಾಗಿ ಬಾಲಕೃಷ್ಣನ್ ಅಥವಾ ಬಾಲಸುಬ್ರಮಣಿಯನ್ ನಡೆಸುತ್ತಿರುವ ಎನ್​ಜಿಒದ ಸಹಾಯವನ್ನು ಕೋರಲಾಗಿತ್ತು. ನನಗಿರುವ ಮಾಹಿತಿ ತಪ್ಪಲ್ಲವೆಂದಾದರೆ, ಬಾಲಕೃಷ್ಣನ್ ಅವರು ಪ್ರಧಾನ ಮಂತ್ರಿಯವರಿಗಾಗಿ ಬರೆದ ಪುಸ್ತಕದ ಲೇಖಕರಾಗಿದ್ದಾರೆ ಮತ್ತು ಪ್ರಧಾನ ಮಂತ್ರಿ ಕಚೇರಿಯೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತಾರೆ. ಅಂಥವರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ವೋಟ್ ಚೋರಿ ಆರೋಪ ಮಾಡುತ್ತಿರುವ ಮತ್ತು ಸದಾ ಇವಿಎಂ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ನಡೆಸಿದ ಸಮೀಕ್ಷಾ ವರದಿನ್ನು ಮುಂದಿಟ್ಟುಕೊಡು ಬಿಜೆಪಿ ತಿರುಗೇಟು ನೀಡಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗ ಪ್ರತಿ ಬಾರಿ ರಾಹುಲ್ ಗಾಂಧಿ ಇವಿಎಂ ಅನ್ನು ಹಾಗೂ ಚುನಾವಣಾ ಆಯೋಗವನ್ನು ದೂಷಿಸುತ್ತಾರೆ. ಹಾಗೆ ಮಾಡಿದಾಗಲೆಲ್ಲ ಅವರ ಆರೋಪಗಳು ಸುಳ್ಳೆಂಬುದಕ್ಕೆ ಪುರಾವೆಗಳು ಸಿಗುತ್ತವೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಹೇಳಿದ್ದಾರೆ.

ಇದನ್ನೂ ಓದಿ: EVM ಬದಲಿಗೆ ಬ್ಯಾಲೆಟ್ ಪೇಪರ್: ಸರ್ಕಾರದ ನಡೆ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರು ಹೇಳಿದ್ದೇನು?

ಕರ್ನಾಟಕದಲ್ಲಿ ಜನರು ಇವಿಎಂಗಳನ್ನು ಸುರಕ್ಷಿತವೆಂದು ಪರಿಗಣಿಸುತ್ತಾರೆ ಮತ್ತು ಅವುಗಳನ್ನು ನಂಬುತ್ತಾರೆ ಎಂದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ರಾಹುಲ್ ಗಾಂಧಿ ಪ್ರತಿ ಬಾರಿ ಇವಿಎಂಗಳನ್ನು ಅಥವಾ ವ್ಯವಸ್ಥೆಯನ್ನು ದೂಷಿಸಿದಾಗ ಅವರಿಗೆ ವಾಸ್ತವದ ಅರಿವು ಮೂಡಿಸುವಂಥ ವಿದ್ಯಮಾನಗಳು ನಡೆಯತ್ತವೆ ಎಂದು ಶೆಹಜಾದ್ ಪೂನವಾಲ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಲಕ್ಷ್ಮೀಗೆ ಅಶ್ಲೀಲ ಕಮೆಂಟ್ ಹಾಕಿದ ಇಬ್ಬರು ಅರೆಸ್ಟ್; ಬಂಧಿತರು ಯಾರು? – Kannada News | Vijayalakshmi’s Complaints lead to Leads to Two Arrests In Social Media Harassment case

ಸೋಶಿಯಲ್ ಮೀಡಿಯಾದಲ್ಲಿ ತಮಗೆ ಬರೋ ಅಶ್ಲೀಲ ಕಮೆಂಟ್​ಗಳು, ಮೆಸೇಜ್​​ಗಳನ್ನು ಸೆಲೆಬ್ರಿಟಿಗಳು ಮೊದಲು ಸಹಿಸಿಕೊಳ್ಳುತ್ತಿದ್ದರು. ಆದರೆ, ಈಗ ಇದರ ವಿರುದ್ಧ ಸಿಟ್ಟಿಗೇಳುತ್ತಿದ್ದಾರೆ. ಅನೇಕರು ಈ ವಿಷಯದಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಾರೆ. ರಮ್ಯಾ ಅವರು ಇದೇ ರೀತಿ ಮಾಡಿದ್ದರು. ಆ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi) ಕೂಡ ಅಶ್ಲೀಲ ಕಮೆಂಟ್ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಈಗ ಇಬ್ಬರನ್ನು ಬಂಧಿಸಲಾಗಿದೆ. ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯಲಕ್ಷ್ಮೀ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್​​ಗಳು ಬಂದಿದ್ದವು. ಇದರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದರು. ‘ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಆರೋಪಿಸಿದ್ದರು.ಈ ಬೆನ್ನಲ್ಲೇ ಇಬ್ಬರ ಬಂಧನ ನಡೆದಿದೆ.

ಬೆಂಗಳೂರಿನ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಬಂಧಿತರು. ಇಬ್ಬರೂ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಇವರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಕಮೆಂಟ್ ಹಾಕಿದವರಿಗೆ ಸಂಕಷ್ಟ; ದೂರು ದಾಖಲಿಸಿ, ದಾಖಲೆ ಕೊಟ್ಟ ವಿಜಯಲಕ್ಷ್ಮೀ

ತಪ್ಪಿಸಿಕೊಳ್ಳಲು ನಡೆದಿತ್ತು ಪ್ರಯತ್ನ

ಅಶ್ಲೀಲ ಪದಗಳಿಂದ ನಿಂದನೆ ನೋಡಿ ಸಹಿಸದ ವಿಜಯಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಇವರು, ಪೋಸ್ಟ್​​ಗಳನ್ನು ಡಿಲೀಟ್ ಮಾಡಿದ್ದರು. ಈ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಐಪಿ ಅಡ್ರೆಸ್ ಮೂಲಕ ಇವರ ಮೂಲ ಪತ್ತೆ ಹಚ್ಚಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಅರೆಸ್ಟ್ ಆಗುವ ಸಾಧ್ಯತೆ ಇದೆ. ಅಂದಹಾಗೆ ಇವರು ಯಾವ ನಟನ ಅಭಿಮಾನಿಗಳು ಎಂಬುದು ಇನ್ನೂ ತಿಳಿದಿಲ್ಲ.

(ವರದಿ: ಪ್ರಜ್ವಲ್ ಎನ್​ವೈ)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:20 pm, Fri, 2 January 26

Source link

Weekly Love Horoscope: ಜನವರಿ 04ರಿಂದ 10ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ – Kannada News | Weekly Love Horoscope Jan 4 10: Zodiac Predictions and Relationship Tips

ಜನವರಿ 04ರಿಂದ ಜನವರಿ 10ರ ವರೆಗೆ ಪ್ರೇಮಿಗಳಿಗೆ ಮಿಶ್ರವಾರ. ನಡತೆಗಳು ಪರಸ್ಪರ ವಿರೋಧ, ವೈಮನಸ್ಯಕ್ಕೆ ಕಾರಣವಾಗಲಿದೆ. ಸಾಂತ್ವನದಿಂದ ಮುಂದುವರಿಯಲೂ ಇದು ಸಕಾಲ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸತತ ಯತ್ನ ಬೇಕು. ಕೆಲವರಿಗೆ ಕಹಿ ಅನುಭವದಿಂದ ಹೊರಬರಲು ಆಗದು. ಯಾವುನ್ನೂ ಅತಿಯಾಗಿಸಿಕೊಳ್ಳದೇ ಸಮಚಿತ್ತದಿಂದ ಮುಂದುವರಿಯಬೇಕು ಹಾಗೂ ತಾಳ್ಮೆಯನ್ನು ಬಿಡದಿರಬೇಕು. ಶುಕ್ರದಶೆಯವರಿಗೆ ಶುಭಕಾಲ.

ಮೇಷ ರಾಶಿ:

ಹೊಸ ವರ್ಷದ ಮೊದಲನೇ ವಾರ ಮೊದಲನೇ ರಾಶಿಯವರಿಗೆ ಪ್ರೇಮದಲ್ಲಿ ಉತ್ಸಾಹ ಹೆಚ್ಚಾದರೂ ಒಳಗಿರುವ ಭಯ ಹಾಗೂ ಶಂಕೆಗಳು ಕಾಡುತ್ತವೆ. ಮಾತಿನ ತಪ್ಪಿನಿಂದ ನೋವು ಸಾಧ್ಯ. ಕ್ಷಣಿಕ ಅನ್ಯಾಸಕ್ತಿ ದೂರ ತರಬಹುದು. ಈ ವಾರ ದುರಭ್ಯಾಸಗಳಿಂದ ಜಾಗರೂಕತೆ ವಹಿಸಿಕೊಳ್ಳಬೇಕು. ಮೋಜಿನ ಪ್ರಯಾಣ ಅಥವಾ ಸ್ನೇಹಿತರ ಜೊತೆಗಿನ ಓಡಾಟ ಮನಸ್ಸಿಗೆ ಹಗುರತೆ ನೀಡಿ ಸಂಬಂಧಕ್ಕೆ ಹೊಸ ಚೈತನ್ಯ ತರುತ್ತದೆ.

ವೃಷಭ ರಾಶಿ:

ಎರಡನೇ ರಾಶಿಯವರಿಗೆ ಈ ವಾರ ಪ್ರೀತಿಯಲ್ಲಿ ಸ್ಥಿರತೆ ಇದ್ದರೂ ಶಂಕೆ ಮನಸ್ಸನ್ನು ಕಾಡಬಹುದು. ನಿರೀಕ್ಷೆ ಪೂರೈಸದಾಗ ನೋವು ಮತ್ತು ದುಃಖ. ಅನ್ಯರಲ್ಲಿ ಆಸಕ್ತಿ ಬಂದರೂ ಸಂಬಂಧ ಮುರಿಯದೇ ಇರಬಹುದು. ದುರಭ್ಯಾಸ ತಪ್ಪಿಸಿದರೆ ಸುಖ. ಈ ವಾರ ಸಂಗಾತಿಯ ಜೊತೆ ಮೋಜಿನ ಪ್ರಯಾಣ ಅಥವಾ ಸಣ್ಣ ಪ್ರವಾಸ ಪ್ರೇಮವನ್ನು ಮತ್ತೆ ಹತ್ತಿರವಾಗಿಸಬಹುದು.

ಮಿಥುನ ರಾಶಿ:

ಜನವರಿಯ ಮೊದಲ ವಾರ ವಿಚಿತ್ರ ಉತ್ಸಾಹ ಮತ್ತು ಗೊಂದಲ ಎರಡೂ ಜೊತೆಗಿರುತ್ತವೆ. ಶಂಕೆ ಮತ್ತು ಭಯದಿಂದ ವಿರಹದ ಭಾವನೆ ನಿಮ್ಮೊಳಗಾಗಲಿದೆ. ಮಾತಿನಲ್ಲಿ ಉಂಟಾದ ಅಸ್ಥಿರತೆಯಿಂದ ನೋವು ಬರಬಹುದು. ನಿಮ್ಮ ಅನ್ಯಾಸಕ್ತಿ ಕ್ಷಣಿಕ ಕಾಲ ಕೆಲಸಮಾಡುವುದು. ಒತ್ತಡದಿಂದ ಮಾಡಿಸುವ ದುರಭ್ಯಾಸದಿಂದ ದೂರವಿದ್ದರೆ ಉತ್ತಮ. ಮೋಜಿನ ಪ್ರಯಾಣ, ಹೊಸ ಅನುಭವಗಳು ಪ್ರೀತಿಯಲ್ಲಿ ನಾವೀನ್ಯತೆ ತರುತ್ತವೆ.

ಕರ್ಕಾಟಕ ರಾಶಿ:

ಚಂದ್ರನ‌ ಆಧಿಪತ್ಯದ ಈ ರಾಶಿಗೆ ಭಾವನಾತ್ಮಕವಾದ ಈ ಪ್ರೇಮದಲ್ಲಿ ಭಯ ಹೆಚ್ಚಾಗುತ್ತದೆ. ಶಂಕೆಯಿಂದ ಮನಸ್ಸು ನೋವಿನಲ್ಲಿ ಮುಳುಗಬಹುದು. ವಿರಹ ಹಾಗೂ ದುಃಖದ ಕ್ಷಣಗಳು ಸಾಧ್ಯ. ಅನ್ಯಾಸಕ್ತಿ ಸಂಬಂಧಕ್ಕೆ ಹಾನಿ. ದುರಭ್ಯಾಸ ತ್ಯಜಿಸುವೆನೆಂದರೂ ಸುಲಭಕ್ಕೆ ಸಾಧ್ಯವಾಗದು. ಸಂಗಾತಿಯೊಂದಿಗೆ ಪಯಣ ಹಳೆಯ ಸಂತೋಷ ಮರಳಿ ತರುತ್ತದೆ.

ಸಿಂಹ ರಾಶಿ:

ಈ ವಾರ ನಿಮಗೆ ಪ್ರೇಮದಲ್ಲಿ ಉತ್ಸಾಹ ಇದ್ದರೂ ಸ್ವಾಭಿಮಾನದಿಂದ ಯಾವುದನ್ನೂ ತೋರಿಸಿಕೊಳ್ಳಲಾರಿರಿ. ಮಾತಿನ ಘರ್ಷಣೆ ನೋವು ತರಬಹುದು. ಕ್ಷಣಿಕ ವಿರಹದಿಂದ ದುಃಖ‌ ಉಮ್ಮಳಿಸುವುದು. ಈ ವಾರ ನೀವು ಪ್ರಯತ್ನದಿಂದ ಅನ್ಯಾಸಕ್ತಿಯನ್ನು ತಪ್ಪಿಸಿ. ದುರಭ್ಯಾಸದಿಂದ ದೂರವಿರಿ. ದಿನದ ವಾತಾವರಣಕ್ಕಿಂತ ಹೊರಗಿನ ಸುತ್ತಾಟ ಪ್ರೀತಿಗೆ ತಾಜಾತನ ಬರಲು ಅವಕಾಶ ಕೊಡಲಿದೆ.

ಕನ್ಯಾ ರಾಶಿ:

ಬುಧನ ಆಧಿಪತ್ಯದ ಈ ರಾಶಿಗೆ ಪ್ರೀತಿಯಲ್ಲಿ ಹೆಚ್ಚು ಯೋಚನೆ ಉಂಟಾಗಲಿದೆ. ಹಳೆಯ ಪ್ರೆಮಿಯ ಆಗಮನದ ಶಂಕೆ ಮತ್ತು ಭಯದಿಂದ ಮನಸ್ಸಿಗೆ ನೋವು. ವಿರಹದ ಅನುಭವವನ್ನು ಹೇಳಿಕೊಳ್ಳದೇ ಇರಲು ಸಾಧ್ಯವಿಲ್ಲ. ಅನ್ಯಾಸಕ್ತಿಯು ಸಂಬಂಧವನ್ನು ತಣ್ಣಗಾಗಿಸಬಹುದು. ಶೊಕಿಗಾಗಿ ಬಂದ ದುರಭ್ಯಾಸ ಬಿಡುವುದು ಒಳಿತು. ಒಟ್ಟಿಗೆ ಸಮಯ ಕಳೆಯುವುದು ಪ್ರೇಮವನ್ನು ಮರುಜೀವಂತಗೊಳಿಸುತ್ತದೆ.

ತುಲಾ ರಾಶಿ:

ಏಳನೇ ರಾಶಿಯವರಿಗೆ ಪ್ರೀತಿಯಲ್ಲಿ ಉತ್ಸಾಹವೂ ಇದ್ದು ಅತಿಯಾದ ಆಕರ್ಷಣೆಯೂ ಬರಲಿದೆ. ಆದರೆ ಆಗಾಗ ಬರುವ ಶಂಕೆಯಿಂದ ಸಣ್ಣ ದುಃಖಕ್ಕೆ ಕಾರಣವೂ ಆಗುವುದು. ಮಾತುಕತೆ ಕೊರತೆಯಿಂದ ವಿರಹದ ಅನುಭವ. ಹಠವನ್ನು ಹಿಡಿದರೂ ದುರಭ್ಯಾಸವನ್ನು ತಪ್ಪಿಸಲಾಗದು. ಮೋಜಿನ ಪ್ರಯಾಣ ಮತ್ತು ಭೇಟಿಗಳು ಸಂಬಂಧಕ್ಕೆ ಸಮತೋಲನ ತರುತ್ತವೆ.

ವೃಶ್ಚಿಕ ರಾಶಿ:

ಈ ವಾರ ಇದ್ದಕ್ಕಿದ್ದಂತೆ ಬರುವ ತೀವ್ರವಾದ ಪ್ರೇಮದ ಜೊತೆಗೆ ಭಯ ಮತ್ತು ಶಂಕೆ ಜೊತೆಗೇ ಬರಲಿವೆ. ಅಸೂಯೆಯಿಂದ ನೋವು ಮತ್ತು ವಿರಹ. ದುಃಖದ ಕ್ಷಣಗಳನ್ನೂ ನೀವು ನಿರೀಕ್ಷಿಸಬಹುದು. ಅನ್ಯಾಸಕ್ತಿ ಹಾಗೂ ದುರಭ್ಯಾಸ ಸಂಬಂಧಕ್ಕೆ ಅಪಾಯ. ಆದರೆ ಗುಪ್ತ ಭೇಟಿಗಳು ಭಾವನೆಗಳನ್ನು ಮೃದುವಾಗಿಸುತ್ತವೆ.

ಧನು ರಾಶಿ:

ಈ ರಾಶಿಯವರಿಗೆ ಮೊದಲ ವಾರ ಪ್ರೇಮದಲ್ಲಿ ಉತ್ಸಾಹ ಇದ್ದರೂ ಬದ್ಧತೆಯಯನ್ನು ಉಳಿಸಿಕೊಳ್ಳುವ ಭಯ. ಅವಕಾಶಗಳು ಶಂಕೆಯಿಂದ ದೂರವಾಗಲಿದೆ. ಸಂಗಾತಿಯ ನಿರ್ಲಕ್ಷ್ಯ ನಿಮಗೆ ನೋವು ತರಿಸಬಹುದು. ಅನ್ಯರ ಮೇಲಿನ ಆಸಕ್ತಿ ತಾತ್ಕಾಲಿಕ. ಸಾಹಸಮಯ ಓಡಾಟ ಪ್ರೀತಿಗೆ ಹೊಸ ಚೈತನ್ಯ ನೀಡುತ್ತದೆ.

ಮಕರ ರಾಶಿ:

ಶನಿಯ ಆಧಿಪತ್ಯದ ಈ ರಾಶಿಯವರಿಗೆ ಭಾವನೆಗಳನ್ನು ಒಳಗಿಟ್ಟುಕೊಳ್ಳುವ ಸ್ವಭಾವದಿಂದ ವಿರಹ ಮತ್ತು ದುಃಖ ಹೆಚ್ಚಾಗಲಿದೆ. ಶಂಕೆ ಮನಸ್ಸಿಗೆ ಭಯ ತರುತ್ತದೆ. ಅನ್ಯಾಸಕ್ತಿ ಸಂಬಂಧ ತಣ್ಣಗಾಗಿಸಬಹುದು. ದುರಭ್ಯಾಸದಿಂದ ಸಂಗಾತಿಯು ನಿಮ್ಮನ್ನು ದೂರ ಮಾಡುವರು. ವಿರಾಮದ ಸುಖವನ್ನು ಎಲ್ಲರೊಂದಿಗೆ ಅನುಭವಿಸುವಿರಿ.

ಕುಂಭ ರಾಶಿ:

ಮೊದಲ ವಾರದಲ್ಲಿ ಈ ರಾಶಿಯವರಿಗೆ ಅನಿರೀಕ್ಷಿತ ಉತ್ಸಾಹದ ಜೊತೆಗೆ ಅಸ್ಥಿರತೆ. ಶಂಕೆದಿಂದ ಮನಸ್ಸಿಗೆ ಅತಿಯಾದ ಘಾಸಿ. ವಿರಹದ ಅನುಭವವನ್ನು ತಡೆದುಕೊಳ್ಳುವಿರಿ. ಅನ್ಯಾಸಕ್ತಿ ಹೆಚ್ಚಾದರೂ ದೀರ್ಘಕಾಲ ಉಳಿಯದು. ಸ್ನೇಹದ ಜೊತೆಗೆ ಪ್ರೀತಿಯೂ ಅರಳಲು ಆರಂಭಿಸುವುದು.

ಮೀನ ರಾಶಿ:

ಕೊನೆಯ ರಾಶಿಯವರಿಗೆ ಮೊದಲ ವಾರದಲ್ಲಿ ಸಮಾರಂಭದಲ್ಲಿ ಉತ್ಸಾಹದ ಜೊತೆ ಭಯವೂ ಕಾಡಬಹುದು. ಪ್ರೇಮದಲ್ಲಿ ಇರುವ ಅತಿಭಾವನೆ ನೋವು ಹಾಗೂ ದುಃಖ ತರಬಹುದು. ವಿರಹದ ಕ್ಷಣಗಳನ್ನು ಸಹಿಸಲು ಸಾಧ್ಯವಾಗದು. ಅನ್ಯಾಸಕ್ತಿಯಿಂದಾಗಿ ಸಂಬಂಧಕ್ಕೆ ಪರೀಕ್ಷೆ ವಾರ. ದುರಭ್ಯಾಸಸವನ್ನು ತೋರಿಸಿಕೊಳ್ಳಲಾರಿರಿ. ಆತ್ಮೀಯ ಕ್ಷಣಗಳು ಪ್ರೀತಿಗೆ ನೆಮ್ಮದಿ ನೀಡುತ್ತವೆ.

– ಲೋಹಿತ ಹೆಬ್ಬಾರ್ – 8762924271 (what’s app only)

Published On – 11:41 am, Fri, 2 January 26

Source link

ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ! ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ – Kannada News | Mobile Theft Gang Targets Roadside Phone Users in Nelamangala Dabaspet

ನೆಲಮಂಗಲ, ಜನವರಿ 02: ನೆಲಮಂಗಲ ಡಾಬಸ್ ಪೇಟೆಯಲ್ಲಿ ಮೊಬೈಲ್ ಕಳ್ಳತನ ಮಾಡುವ ಗ್ಯಾಂಗ್ ಸಕ್ರಿಯವಾಗಿದೆ. ಬೈಕ್‌ನಲ್ಲಿ ಬರುವ ಕಳ್ಳರು ಕ್ಷಣಾರ್ಧದಲ್ಲಿ ಪಾದಾಚಾರಿಗಳ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಬಿಲ್ಲಿನಕೋಟೆ ಗ್ರಾಮದಲ್ಲಿ ನಡೆದ ಇಂತಹ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಬದಿಯಲ್ಲಿ ಫೋನ್‌ನಲ್ಲಿ ಮಾತನಾಡುವಾಗ ಎಷ್ಟು ಎಚ್ಚರಿಕೆ ವಹಿಸಬೇಕೆಂದು ಈ ಪ್ರಕರಣದಿಂದ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ – Kannada News | J&K rural police questions cricketer Furqan Bhat, who allegedly wears Palestine flag on helmet during match

ಶ್ರೀನಗರ್, ಜನವರಿ 2: ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರನೊಬ್ಬ ಪ್ಯಾಲೆಸ್ಟೀನ್ ಧ್ವಜ ಹಾಕಿಕೊಂಡು ಆಡುವ ಮೂಲಕ ವಿವಾದ ಸೃಷ್ಟಿಸಿದ್ದಾನೆ. ಆ ಆಟಗಾರನ ಹೆಸರು ಫರ್ಖಾನ್ ಭಟ್ (Furqan Bhat). ಈತ ಜೆಕೆ11 ತಂಡದ ಆಟಗಾರ. ನಿನ್ನೆ ಗುರುವಾರ (ಜ. 1) ಜಮ್ಮು ಟ್ರೇಲ್​ಬ್ಲೇಜರ್ಸ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುವಾಗ ಪ್ಯಾಲೆಸ್ಟೀನ್ ಬಾವುಟದ (Palestine flag) ಸ್ಟಿಕರ್ ಅಂಟಿಸಲಾದ ಹೆಲ್ಮೆಟ್ ಧರಿಸಿದ್ದು ಬೆಳಕಿಗೆ ಬಂದಿದೆ.

ಪೂರ್ವಾನುಮತಿ ಇಲ್ಲದೇ ಇನ್ನೊಂದು ದೇಶದ ಬಾವುಟ ಧರಿಸುವುದು ನಿಯಮ ಬಾಹಿರ. ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಪೊಲೀಸರು ಫರ್ಖಾನ್ ಭಟ್​ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದೇಶದ್ರೋಹ ಆರೋಪಿ ಉಮರ್ ಖಾಲೀದ್​ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ

ಈ ಹಿಂದೆ ಭಾರತದ ಕೆಲವೆಡೆ ಜನರು ಪ್ಯಾಲೆಸ್ಟೀನ್​ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ, ಮೆರವಣಿಗೆ ಇತ್ಯಾದಿ ಮಾಡಿರುವುದುಂಟು. ಕ್ರಿಕೆಟಿಗ ಫರ್ಖಾನ್ ಭಟ್ ಅವರು ಪ್ಯಾಲೆಸ್ಟೀನ್ ಧ್ವಜವನ್ನು ಯಾವ ಕಾರಣಕ್ಕೆ ಹಾಕಿದ್ದರು ಎಂಬುದು ಗೊತ್ತಾಗಿಲ್ಲ. ಪ್ಯಾಲೆಸ್ಟೀನ್​ಗೆ ಬೆಂಬಲ ಸೂಚಕವಾಗಿ ಇದನ್ನು ಧರಿಸಿದ್ದರೋ, ಅಥವಾ ಇನ್ಯಾರದೋ ಒತ್ತಡಕ್ಕೆ ಇದನ್ನು ಧರಿಸಿದ್ದರೋ ಎಂಬ ವಿವರ ಗೊತ್ತಾಗಬೇಕಿದೆ.

ಇದೇ ವೇಳೆ, ಪೊಲೀಸರು ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಮೇಲೆ ನಿಗಾ ಇರಿಸಿದ್ದಾರೆ. ಟೂರ್ನಿಯ ಆಯೋಜಕ ಝಾಹಿದ್ ಭಟ್ ಅವರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಮೇಲೂ ದೃಷ್ಟಿ ಹಾಕಲಾಗಿದೆ. ಆದರೆ, ತನಗೂ ಈ ಟೂರ್ನಿಗೂ ಸಂಬಂಧ ಇಲ್ಲ. ಫರ್ಖಾನ್ ಭಟ್ ತಮ್ಮ ಅಸೋಸಿಯೇಶನ್​ನ ಸದಸ್ಯನೂ ಅಲ್ಲ ಎಂದು ಜೆಕೆಸಿಎ ಹೇಳಿದೆ.

ಇದನ್ನೂ ಓದಿ: ಶ್ರವಣಕುಮಾರನ ಸಾಹಸ… ಟೆಂಪೋ ಡ್ರೈವರ್ ಆಗಿದ್ದವ ನಾಲ್ಕೇ ವರ್ಷದಲ್ಲಿ ವಿಮಾನ ಸಂಸ್ಥೆ ಕಟ್ಟಿದ ಕಥೆ..!

ಪ್ಯಾಲೆಸ್ಟೀನ್ ವಿಚಾರ ಭಾರತದ ರಾಜತಾಂತ್ರಿಕ ಸ್ಥಿತಿಗೆ ಸೂಕ್ಷ್ಮವಾಗಿದೆ. ಹೀಗಾಗಿ, ಭಾರತದೊಳಗೆ ಪ್ಯಾಲೆಸ್ಟೀನ್ ಪರವಾಗಿಯಾಗಲೀ, ವಿರೋಧವಾಗಿಯಾಗಲೀ ನಡೆಯುವ ಪ್ರತಿಭಟನೆಗಳ ಮೇಲೆ ನಿಗಾ ಇರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ನಾಲ್ಕು ತಿಂಗಳ ಬಳಿಕ ಮನೆಗೆ ಮರಳಿದ ಮಗನಿಗೆ ಅದ್ದೂರಿ ಸ್ವಾಗತ ಕೋರಿದ ತಾಯಿ – Kannada News | A mother’s lavish welcome as her son returns home after going to a distant town for studies

ಪ್ರತಿಯೊಬ್ಬ ತಂದೆ ತಾಯಂದಿರು (parents) ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸುವುದು ಸಹಜ. ಹೀಗಾಗಿ ಓದಿಗಾಗಿ, ಉದ್ಯೋಗಕ್ಕಾಗಿ ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಡುತ್ತಾರೆ.  ಈ ವೇಳೆ ತಮ್ಮ ಮಕ್ಕಳು ಮನೆಗೆ ಬರುತ್ತಾರೆ ಎಂದರೆ ಹೆತ್ತವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಈ ವಿಡಿಯೋ ಇದೀಗ ತಾಯಿಯ (mother) ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಓದಲು ದೂರದ ಊರಿಗೆ ಹೋದ ಮಗನು, ನಾಲ್ಕು ತಿಂಗಳ ಬಳಿಕ ಮನೆಗೆ ಮರಳುತ್ತಿದ್ದಂತೆ ತಾಯಿಯೂ ಅದ್ದೂರಿ ಸ್ವಾಗತ ಕೋರಿದ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ತಾಯಿ ಮಗನ ಬಾಂಧವ್ಯ ಸಾರುವ ಈ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.

ಶ್ರೀ ಸಾಯಿ ಶ್ವೇತ ಚೆನ್ನುಪತಿ (swetharahul003) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ತಾಯಿ- ಮಗನ ಭಾವನಾತ್ಮಕ ಪುನರ್ಮಿಲನದ ದೃಶ್ಯವನ್ನು ಕಾಣಬಹುದು. ಮಗನನ್ನು ಸ್ವಾಗತಿಸಲು ತಾಯಿಯೂ ಕಾತುರಳಾಗಿದ್ದಾಳೆ. ಮನೆಯನ್ನು  ಸುಂದರವಾಗಿ ಅಲಂಕರಿಸಿದ್ದು, ಪ್ರವೇಶದ್ವಾರದ ಬಳಿ ಆರ್ಕಷಕ ರಂಗೋಲಿ ಬಿಡಿಸಿದ್ದಾಳೆ. ಅಷ್ಟೇ ಅಲ್ಲದೆ, ಮುಚ್ಚಿದ ಬಾಗಿಲಿನ ಹಿಂದೆ ಕೈಯಲ್ಲಿ ಕಾನ್ಫೆಟ್ಟಿ ಸ್ಟ್ರೀಮರ್‌ಗಳನ್ನು ಹಿಡಿದು ನಿಂತು ಕೊಂಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಬಾಗಿಲು ತೆರೆಯುತ್ತಿದ್ದಂತೆ, ಮಗ ತನ್ನ ತಂದೆಯೊಂದಿಗೆ ಮನೆಯೊಳಗೆ ಪ್ರವೇಶಿಸಿದ್ದಾನೆ. ಮಗನ ಆಗಮನವನ್ನು ಸಂಭ್ರಮಿಸುತ್ತಾ ತಾಯಿಯು ತನ್ನ ಕೈಯಲ್ಲಿದ್ದ ಕಾನ್ಫೆಟ್ಟಿಯನ್ನು ಸಿಡಿಸಿ ಮಗುವಿನಂತೆ ಕುಣಿದಾಡಿದ್ದಾಳೆ. ತನ್ನ ತಾಯಿಯ ಅದ್ದೂರಿ ಸ್ವಾಗತಕ್ಕೆ ಕಂಡು ಮಗನಿಗೆ ಖೂಷಿಯಾಗಿದೆ. ಕೊನೆಗೆ, ಇಬ್ಬರೂ ಅಪ್ಪಿಕೊಂಡು ಆ ಕ್ಷಣವನ್ನು ಸಂಭ್ರಮಿಸಿದ್ದಾರೆ. ಅಲ್ಲೇ ಇದ್ದ ತಂದೆಯೂ, ತಾಯಿ ಹಾಗೂ ಮಗನ ಖುಷಿಯನ್ನು ಕಣ್ತುಂಬಿಸಿಕೊಳ್ಳುವುದನ್ನು ಕಾಣಬಹುದು.

ಇದನ್ನೂ ಓದಿ:ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆ

ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತಾಯಿ ಮತ್ತೆ ಮಗುವಾದರು ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ತಂದೆ ತಾಯಿಯಿಂದ ಅದ್ದೂರಿ ಸ್ವಾಗತಕ್ಕೆ ಇದುವೇ ನಿಜವಾದ ಸಂತೋಷ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:48 am, Fri, 2 January 26

Source link

ಎರಡು ತಿಂಗಳಿಂದ ಬೀದಿಗೆ ಬಿದ್ದಿರುವ ಕುಟುಂಬಗಳು; ಕೋಗಿಲು ಲೇಔಟ್‌ಗೆ ತಕ್ಷಣ ಪರಿಹಾರ, KG ಹಳ್ಳಿಗೆ ಅನ್ಯಾಯವೇ? – Kannada News | KG Halli Eviction: Bengaluru’s 80 Families Homeless, Awaiting Justice for 2 Months

ರೈಲ್ವೆ ಟ್ರ್ಯಾಕ್ ಪಕ್ಕದ ಶೆಡ್​ನಲ್ಲಿಯೇ ವಾಸಿಸುತ್ತಿರುವ ಕುಟುಂಬಗಳು

ಬೆಂಗಳೂರು,ಜನವರಿ 02: ಬೆಂಗಳೂರಿನ ಕಾಡುಗೊಂಡನಹಳ್ಳಿ (KG Halli) ರೈಲ್ವೆ ಟ್ರ್ಯಾಕ್ ಸಮೀಪದ ಚುನಾ ಲೈನ್ ಪ್ರದೇಶದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರ ದುಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಅಕ್ರಮವಾಗಿ ಕೋಗಿಲು ಲೇಔಟ್​ನಲ್ಲಿ ನೆಲೆಸಿದ್ದರೂ ಅಲ್ಲಿನ ನಿವಾಸಿಗಳಿಗೆ ಸರ್ಕಾರ ಕೊಟ್ಟ ಆಸರೆ ಕೆ ಜಿ ಹಳ್ಳಿ ನಿವಾಸಿಗಳಿಗೆ ಸಿಗದಂತಾಗಿದೆ.

ಶತಮಾನಗಳಿಂದ ನೆಲೆಸಿರುವವರಿಗಿಲ್ಲ ಆಶ್ರಯ

ಕಳೆದ ವರ್ಷದ ಅಕ್ಟೋಬರ್ 30ರಂದು ರೈಲ್ವೆ ಇಲಾಖೆ ನಡೆಸಿದ ತೆರವು ಕಾರ್ಯಾಚರಣೆಯಿಂದಾಗಿ ಸುಮಾರು 30 ಮನೆಗಳಲ್ಲಿ ವಾಸವಾಗಿದ್ದ 80ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿದ್ದು, ಎರಡು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಇನ್ನೂ ಯಾವುದೇ ಪರಿಹಾರ ಅಥವಾ ಪರ್ಯಾಯ ವಸತಿ ಸಿಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ವೇ ನಂಬರ್ 71ಕ್ಕೆ ಸೇರಿದ ಈ ಜಾಗದಲ್ಲಿ ಕಳೆದ 150 ವರ್ಷಗಳಿಂದ 88 ಕುಟುಂಬಗಳು ಬದುಕು ಕಟ್ಟಿಕೊಂಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಹಲವಾರು ದಶಕಗಳಿಂದ ಇಲ್ಲಿಯೇ ವಾಸವಿರುವ ಕುರಿತು ದಾಖಲೆಗಳನ್ನೂ ಅವರು ಹೊಂದಿದ್ದಾರೆ. 2016-17ರಲ್ಲಿ ಬಿಬಿಎಂಪಿಯೇ ಈ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯ ನೀಡಿದ್ದೂ ಇದೆ ಎನ್ನಲಾಗಿದೆ.

ಇದನ್ನೂ ಓದಿ 150 ವರ್ಷಗಳಿಂದ ವಾಸವಿದ್ದ 29 ಕುಟುಂಬಗಳ ಮನೆ ನೆಲಸಮ: ಕೆಜಿ ಹಳ್ಳಿ, ಡಿಜೆ ಹಳ್ಳಿ‌ ನಿವಾಸಿಗಳಿಗೆ ಇನ್ನೂ ಇಲ್ಲ ಸೂರಿನ ಬಾಗ್ಯ

ರೈಲ್ವೆ ಟ್ರ್ಯಾಕ್ ಪಕ್ಕದ ಶೆಡ್​ನಲ್ಲಿಯೇ ವಾಸಿಸುತ್ತಿರುವ ಕುಟುಂಬಗಳು

ಸದ್ಯ ನಿರಾಶ್ರಿತರು ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ತಾತ್ಕಾಲಿಕ ಶೇಡ್‌ಗಳಲ್ಲಿ ವಾಸಿಸುತ್ತಿದ್ದು, ಮಳೆ, ಚಳಿಯಲ್ಲಿಯೇ ದಿನ ನೂಕುತ್ತಿದ್ದಾರೆ. ಮನೆಗಳನ್ನು ಒದಗಿಸುವುದಾಗಿ ಶಾಸಕ ಕೆ.ಜೆ. ಜಾರ್ಜ್ ಭರವಸೆ ನೀಡಿದ್ದರೂ ಅವರಿಂದ ಯಾವುದೇ ಸ್ಪಂದನೆ ಇಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಿಗೆ ತ್ವರಿತ ಪರಿಹಾರ ದೊರೆತಿದ್ದರೆ, KG ಹಳ್ಳಿ ನಿರಾಶ್ರಿತರಿಗೆ ಮಾತ್ರ ತಿಂಗಳುಗಳಾದರೂ ನ್ಯಾಯ ಸಿಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು ಮಾನವೀಯ ನೆಲೆಯಲ್ಲಿ ಪರಿಹಾರ ನೀಡಬೇಕೆಂಬುದು ಹಳ್ಳಿಗರು ಒತ್ತಾಯಿಸಿದ್ದಾರೆ.

ವರದಿ: ಅರುಣ್​ ಕುಮಾರ್ ಆರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vastu Tips: ಮನೆಯಲ್ಲಿ ಗಂಗಾಜಲವಿದ್ದರೆ ಈ ತಪ್ಪು ಮಾಡಲೇಬೇಡಿ; ಅಶಾಂತಿ, ಬಡತನಕ್ಕೆ ಕಾರಣವಾಗಬಹುದು – Kannada News | Ganga Jal at Home: Rules, Benefits and Vastu Tips for Positive Energy

ಹಿಂದೂ ಧರ್ಮದಲ್ಲಿ, ಗಂಗಾ ಜಲ ವಿಶೇಷ ಮಹತ್ವವಿದೆ. ಅದರಂತೆ ಯಾವ ಮನೆಯಲ್ಲಿ ಗಂಗಾ ಜಲ ಇದೆಯೋ ಆ ಮನೆಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಗಂಗಾ ಜಲ ಸಂಗ್ರಹಿಸುವಾಗ ಕೆಲವು ನಿಯಮಗಳನ್ನು ಪಾಲಿಸದಿದ್ದರೆ, ಅದು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ ಮನೆಯಲ್ಲಿ ಗಂಗಾ ಜಲ ಇಡಲು ಕೆಲವು ಪ್ರಮುಖ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿ

ಪ್ಲಾಸ್ಟಿಕ್ ಪಾತ್ರೆ ತಪ್ಪಿಸಿ:

ಜನರು ಸಾಮಾನ್ಯವಾಗಿ ಹರಿದ್ವಾರ ಅಥವಾ ಋಷಿಕೇಶದಿಂದ ಗಂಗಾ ಜಲವನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತಂದು ಹಾಗೆಯೇ ಸಂಗ್ರಹಿಸುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಗಂಗಾ ಜಲವನ್ನು ಎಂದಿಗೂ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಬಾರದು. ಪ್ಲಾಸ್ಟಿಕ್ ಅನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಅದನ್ನು ಯಾವಾಗಲೂ ತಾಮ್ರ, ಹಿತ್ತಾಳೆ, ಬೆಳ್ಳಿ ಅಥವಾ ಗಾಜಿನ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.

ಸರಿಯಾದ ದಿಕ್ಕು ಮತ್ತು ಸ್ಥಳ:

ಗಂಗಾ ಜಲವನ್ನು ಮನೆಯ ಯಾವುದೇ ಮೂಲೆಯಲ್ಲಿ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ , ಇದನ್ನು ದೇವರುಗಳ ದಿಕ್ಕು ಎಂದು ಪರಿಗಣಿಸಲಾಗಿರುವುದರಿಂದ, ಈಶಾನ್ಯ ದಿಕ್ಕಿನಲ್ಲಿ ಇಡುವುದು ಯಾವಾಗಲೂ ಅತ್ಯಂತ ಮಂಗಳಕರವಾಗಿದೆ. ನೀವು ಅದನ್ನು ನಿಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿಯೂ ಇಡಬಹುದು.

ಕತ್ತಲೆ ಮತ್ತು ಕೊಳಕಿನಿಂದ ದೂರ:

ಗಂಗಾ ಜಲವನ್ನು ಎಂದಿಗೂ ಕತ್ತಲೆಯ ಕೋಣೆಯಲ್ಲಿ ಅಥವಾ ಬೆಳಕಿಗೆ ತಲುಪದ ಕಪಾಟಿನ ಮೂಲೆಯಲ್ಲಿ ಸಂಗ್ರಹಿಸಬೇಡಿ. ಅಲ್ಲದೆ, ಅದರ ಸುತ್ತಲಿನ ಸ್ವಚ್ಛತೆಗೆ ವಿಶೇಷ ಗಮನ ಕೊಡಿ. ಅದನ್ನು ಎಂದಿಗೂ ಅಡುಗೆಮನೆ ಅಥವಾ ಸ್ನಾನಗೃಹದ ಬಳಿ ಇಡಬಾರದು.

ಶುಚಿತ್ವವನ್ನು ಕಾಪಾಡಿಕೊಳ್ಳಿ:

ಗಂಗಾ ಜಲವನ್ನು ಎಂದಿಗೂ ತೊಳೆಯದ ಅಥವಾ ಕೊಳಕು ಕೈಗಳಿಂದ ಮುಟ್ಟಬಾರದು. ಮುಟ್ಟುವ ಮೊದಲು ಯಾವಾಗಲೂ ಸ್ನಾನ ಮಾಡಿ ಅಥವಾ ಕೈಕಾಲುಗಳನ್ನು ತೊಳೆಯಿರಿ. ಗಂಗಾ ಜಲವನ್ನು ಇಡುವ ಮನೆಗಳಲ್ಲಿ ಮಾಂಸ ಮತ್ತು ಮದ್ಯವನ್ನು ಎಂದಿಗೂ ಸೇವಿಸಬಾರದು, ಏಕೆಂದರೆ ಇದು ಅಶಾಂತಿ ಮತ್ತು ಬಡತನಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಮನೆಯಾದ್ಯಂತ ಸಿಂಪಡಿಸಿ:

ಗಂಗಾ ಜಲವನ್ನು ಕೇವಲ ಸಂಗ್ರಹಿಸಿಟ್ಟರೆ ಸಾಲದು. ಶುಭ ಫಲಿತಾಂಶಗಳಿಗಾಗಿ, ನಿಯತಕಾಲಿಕವಾಗಿ ಮನೆಯಾದ್ಯಂತ (ವಿಶೇಷವಾಗಿ ಹುಣ್ಣಿಮೆಯ ದಿನಗಳು ಅಥವಾ ಹಬ್ಬಗಳಂದು) ಸಿಂಪಡಿಸಿ. ಇದು ಮನೆಗೆ ವಾಸ್ತು ಶಾಂತಿಯನ್ನು ತರುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.

ಶನಿ ದೋಷದಿಂದ ಮುಕ್ತಿ:

ಯಾರಾದರೂ ಶನಿಯ ಸಾಡೇ ಸಾತಿ ಅಥವಾ ಧೈಯದ ಪ್ರಭಾವಕ್ಕೆ ಒಳಗಾಗಿದ್ದರೆ, ಶನಿವಾರದಂದು, ಒಂದು ಪಾತ್ರೆಯಲ್ಲಿ ಶುದ್ಧ ನೀರಿನಿಂದ ತುಂಬಿಸಿ, ಕೆಲವು ಹನಿ ಗಂಗಾ ಜಲವನ್ನು ಸೇರಿಸಿ, ಅದನ್ನು ಅರಳಿ ಮರಕ್ಕೆ ಅರ್ಪಿಸಿ. ಇದು ಶನಿದೋಷವನ್ನು ಕಡಿಮೆ ಮಾಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:58 am, Fri, 2 January 26

Source link

ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್ – Kannada News | Kogilu Eviction Row: Major Doubts Over Displaced Families, Police and District Administration Begin Verification Drive

ಬೆಂಗಳೂರು, ಜನವರಿ 2: ಕೋಗಿಲು ಲೇಔಟ್‌ನಲ್ಲಿನ (Kogilu Layout) ಸರ್ಕಾರಿ ಜಾಗ ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪುನರ್ವಸತಿ ಒದಗಿಸುವ ಕರ್ನಾಟಕ (Karnataka) ಕಾಂಗ್ರೆಸ್ ಸರ್ಕಾರದ ಯೋಜನೆಯ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲನೆಗೆ ಮುಂದಾಗಿವೆ. ಪುನರ್ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ವಸೀಮ್ ಲೇಔಟ್ ಹಾಗೂ ಫಕೀರ್ ಲೇಔಟ್‌ನ ಸಂತ್ರಸ್ತರ ಪೈಕಿ ಕೆಲವರು ಬಾಂಗ್ಲಾದೇಶ (Bangladesh) ಮೂಲದವರಾಗಿರಬಹುದೆಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆ ಜಿಲ್ಲಾಡಳಿತವು ಪುನರ್ವಸತಿ ನೀಡುವ ಮುನ್ನ ಪೊಲೀಸ್ ವೇರಿಫಿಕೇಶನ್ ನಡೆಸಲು ತೀರ್ಮಾನಿಸಿದೆ.

ಈ ಸಂಬಂಧ ಪೊಲೀಸ್ ಇಲಾಖೆಗೆ ಅಧಿಕೃತ ಪತ್ರ ಬರೆಯಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಅರ್ಜಿ ಸಲ್ಲಿಸಿರುವ ಸಂತ್ರಸ್ತರ ಮೂಲ ಎಲ್ಲಿ ಎಂಬುದನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುತ್ತದೆ ಎನ್ನಲಾಗಿದೆ.

ಜಿಲ್ಲಾಡಳಿತದಿಂದ ದಾಖಲೆಗಳ ಕೂಲಂಕಷ ಪರಿಶೀಲನೆ

ಇದರ ಜೊತೆಗೆ ಪೊಲೀಸ್ ವೇರಿಫಿಕೇಶನ್‌ಗೆ ಮುನ್ನವೇ ಜಿಲ್ಲಾಡಳಿತದಿಂದ ದಾಖಲೆಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದೆ. ಅರ್ಜಿದಾರರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ನಕಲಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಬಳಕೆ ಮಾಡಿಕೊಂಡಿರುವವರು ಇದ್ದಾರೆಯೇ ಎಂಬುದನ್ನೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಾನೂನುಬದ್ಧವಾಗಿ ಅರ್ಹರಾದವರಿಗೆ ಮಾತ್ರ ಪುನರ್ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈ ಪರಿಶೀಲನೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರಿಗೆ ತಕ್ಷಣವೇ ಮನೆ ಸಿಗೋದು ಡೌಟ್! ಎದುರಾಯ್ತು ದೊಡ್ಡ ತೊಡಕು

ಕೋಗಿಲು ಬಡಾವಣೆ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರತಿಪಕ್ಷ ಬಿಜೆಪಿ ನಿಯೋಗ ಕೂಡ, ಸ್ಥಳದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೆ, ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವ ಬಗ್ಗೆಯೂ ಸಂಶಯ ವ್ಯಕ್ತಪಡಿಸಿತ್ತು. ಮತ್ತೊಂದೆಡೆ, ರಾಜೀವ್ ಗಾಂಧಿ ವಸತಿ ಸ್ಕೀಂನ ಆಶ್ರಯ ಯೋಜನೆ ಅಡಿ ಮನೆಗಳನ್ನು ವಿತರಿಸುವುದಕ್ಕೆ ಅಧಿಕಾರಿಗಳಿಗೆ ನಿಯಮಗಳ ತೊಡಕು ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೋಗಿಲು ಬಡಾವಣೆಯ ನಿವಾಸಿಗಳ ಮೂಲ ಪತ್ತೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶದ್ರೋಹ ಆರೋಪಿ ಉಮರ್ ಖಾಲೀದ್​ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ – Kannada News | Delhi Riots accused Umar Khalid gets support from 8 US lawmakers and New York Mayor Zohran Mamdani

ನವದೆಹಲಿ, ಜನವರಿ 2: ಐದು ವರ್ಷದ ಹಿಂದೆ ದೆಹಲಿಯಲ್ಲಿ ಸಂಭವಿಸಿದ ದಂಗೆ, ಪ್ರತಿಭಟನೆಯಲ್ಲಿ ಪಿತೂರಿ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಉಮರ್ ಖಾಲೀದ್​ಗೆ ಅಮೆರಿಕದಲ್ಲಿ ಈಗ ಒಂದು ಗುಂಪು ಬೆಂಬಲ ಕೊಡಲು ಯತ್ನಿಸುತ್ತಿದೆ. ಅಮೆರಿಕದ ಎಂಟು ಮಂದಿ ಜನಪ್ರತಿನಿಧಿಗಳು ಉಮರ್ ಖಾಲೀದ್ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲೀದ್ ಅವರು ಹಾಗೂ ಇತರ ಸಹ-ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಎಂಟು ಜನರು ಪತ್ರ ಬರೆದಿದ್ದಾರೆ.

ಡಿಸೆಂಬರ್ 30ರಂದು ಬರೆಯಲಾಗಿರುವ ಈ ಪತ್ರವನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಮೋಹನ್ ಕ್ವಾತ್ರ ಅವರಿಗೆ ಕೊಡಲಾಗಿದೆ. ಉಮರ್ ಖಾಲೀದ್​ರನ್ನು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಜಾಮೀನು ನೀಡಿ, ನ್ಯಾಯಯುತವಾಗಿ ವಿಚಾರಣೆ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ:

ನ್ಯೂಯಾರ್ಕ್ ಮೇಯರ್ ಜೋಹ್ರನ್ ಮಮ್ದಾನಿ ಅವರಿಂದಲೂ ಬೆಂಬಲ

ಖ್ಯಾತ ಚಿತ್ರ ತಯಾರಕಿ ಮೀರಾ ನಾಯರ್ ಅವರ ಮಗ, ಹಾಗೂ ನ್ಯೂಯಾರ್ಕ್ ಸಿಟಿಯ ಹೊಸ ಮೇಯರ್ ಜೋಹ್ರನ್ ಮಮ್ದಾನಿ ಅವರು ಉಮರ್ ಖಾಲೀದ್​ಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ. ‘ನಿಮ್ಮ ಬಗ್ಗೆಯೇ ಚಿಂತಿಸುತ್ತಿದ್ದೇವೆ’ ಎಂದು ಹೇಳಿ ತಮ್ಮ ಕೈಯಿಂದಲೇ ಬರೆದ ಪತ್ರವನ್ನು ಡಿಸೆಂಬರ್ ತಿಂಗಳಲ್ಲಿ ಉಮರ್ ಖಾಲೀದ್ ಅವರ ಪೋಷಕರಿಗೆ ಕೊಟ್ಟಿದ್ದಾರೆ. ಉಮರ್ ಅವರ ಪೋಷಕರು ಅಮೆರಿಕಕ್ಕೆ ಹೋಗಿದ್ದಾಗ ಈ ಪತ್ರ ಕೊಡಲಾಗಿದೆ.

ಉಮರ್ ಖಾಲೀದ್ ಅವರ ಸಹಚರೆಯಾದ ಬನಜ್ಯೋತ್ಸ್ನಾ ಲಾಹಿರಿ ಅವರು ತಮ್ಮ ಎಕ್ಸ್​ನಲ್ಲಿ ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.

‘ಪ್ರಿಯ ಉಮರ್, ಜೀವನದ ಕಹಿ ಹಾಗೂ ಅದು ಸ್ವನಾಶಕ್ಕೆ ಆಸ್ಪದ ಕೊಡದೇ ತಡೆಯುವುದು ಎಷ್ಟು ಮುಖ್ಯ ಎಂದು ನೀವು ಹೇಳಿದ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ನಿಮ್ಮ ಪೋಷಕರನ್ನು ಭೇಟಿ ಮಾಡಿದ್ದು ಸಂತಸ ತಂದಿತು. ನಾವೆಲ್ಲರೂ ನಿಮ್ಮದೇ ಯೋಚನೆಯಲ್ಲಿದ್ದೇವೆ’ ಎಂದು ಜೋಹ್ರಾನ್ ಮಮ್ದಾನಿ ಆ ಪತ್ರದಲ್ಲಿ ಬರೆದಿದ್ದಾರೆ.

ದಿಲ್ಲಿ ದಂಗೆ ಪ್ರಕರಣದಲ್ಲಿ ಉಮರ್ ಖಾಲೀದ್ ಆರೋಪಿ

ದೆಹಲಿಯ ಜೆಎನ್​ಯು ಯೂನಿವರ್ಸಿಟಿಯ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲೀದ್ ಅವರನ್ನು 2020ರ ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ದಂಗೆಗೆ ಪಿತೂರಿ ನಡೆಸಿದ ಆರೋಪ ಉಮರ್ ಖಾಲೀದ್ ಹಾಗೂ ಇತರ ಕೆಲವರ ಮೇಲೆ ಇದೆ. ಐದು ವರ್ಷದಿಂದಲೂ ಅವರನ್ನು ಬಂಧನದಲ್ಲಿಡಲಾಗಿದೆ. ಡಿಸೆಂಬರ್ 16-29ರವರೆಗೆ ಅವರ ಸಹೋದರಿಯ ಮದುವೆ ನಿಮಿತ್ತ ಜಾಮೀನು ಕೊಡಲಾಗಿತ್ತು. ಡಿಸೆಂಬರ್ 29ರಿಂದಲೂ ಮತ್ತೆ ಅವರು ಬಂಧನದಲ್ಲೇ ಮುಂದುವರಿದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link