Category Archives: Blog

Your blog category

ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಸ್ಫೋಟದ ಹೊಸ ಸಿಸಿಟಿವಿ ವಿಡಿಯೋ ವೈರಲ್ – Kannada News | Rajasthan Bhiwadi chemical factory explosion Watch Viral CCTV footage

ಭಿವಾಡಿ, ಫೆಬ್ರವರಿ 16: ರಾಜಸ್ಥಾನದ ಭಿವಾಡಿಯ ರಾಸಾಯನಿಕ ಕಾರ್ಖಾನೆಯಲ್ಲಿ (Chemical Factory) ಸ್ಫೋಟ ಉಂಟಾಗಿ 8 ಕಾರ್ಮಿಕರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಅವರಲ್ಲಿ ಹಲವರು ಅಸ್ಥಿಪಂಜರಗಳಾಗಿ ಹೋಗಿದ್ದಾರೆ. ಅವರ ದೇಹದ ಭಾಗಗಳು ತುಂಡುಗಳಾಗಿ ಬಿದ್ದಿವೆ. 4 ಮಂದಿಯ ಸ್ಥಿತಿ ಗಂಭೀರವಾಗಿದೆ. ಇಲ್ಲಿ ಪಟಾಕಿಗಳನ್ನು ಅಕ್ರಮವಾಗಿ ತಯಾರಿಸಲಾಗುತ್ತಿತ್ತು. ಈ ವೇಳೆ ದುರಂತ ಸಂಭವಿಸಿದೆ. ಈ ಘಟನೆಯ ಮತ್ತೊಂದು ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಿಸ್ಸಾಂಕ ಅಜೇಯ ಶತಕ; ಲಂಕಾ ವಿರುದ್ಧ ಸೋತ ಆಸ್ಟ್ರೇಲಿಯಾಕ್ಕೆ ಸೂಪರ್ 8 ಹಾದಿ ಕಠಿಣ – Kannada News | T20 World Cup 2026: Sri Lanka Stuns Australia, Qualifies for Super 8 from Pallekele

ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಡೆದ 2026 ರ ಟಿ20 ವಿಶ್ವಕಪ್​ನ 30ನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಸೂಪರ್ 8 ಸುತ್ತಿಗೇರುವ ದೃಷ್ಟಿಕೋನದಿಂದ ಈ ಪಂದ್ಯ ಉಭಯ ತಂಡಗಳಿಗೆ ಬಹಳ ಮುಖ್ಯವಾಗಿತ್ತು. ಅದರಲ್ಲೂ ಜಿಂಬಾಬ್ವೆ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾಕ್ಕೆ ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 181 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಆದರೆ ಆಸೀಸ್ ಬೌಲರ್‌ಗಳನ್ನು ಹೈರಾಣಾಗಿಸಿದ ಲಂಕಾ ಬ್ಯಾಟರ್​ಗಳು ಆಸೀಸ್ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಈ ಗೆಲುವಿನೊಂದಿಗೆ ಲಂಕಾ ತಂಡ ಸೂಪರ್ 8ಸುತ್ತಿಗೆ ಅರ್ಹತೆ ಪಡೆದರೆ, ಆಸೀಸ್ ತಂಡ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.

ಆಸ್ಟ್ರೇಲಿಯಾಕ್ಕೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭ ನೀಡಿದರು. ಈ ಜೋಡಿ ಕೇವಲ 8.3 ಓವರ್​ಗಳಲ್ಲಿ ಮೊದಲ ವಿಕೆಟ್‌ಗೆ 104 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಆದ್ದರಿಂದ ಆಸೀಸ್ ಪಡೆ 200 ಕ್ಕೂ ಹೆಚ್ಚು ರನ್‌ ಕಲೆಹಾಕುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ. ಈ ಜೋಡಿ ಪೆವಿಲಿಯನ್ ಸೇರಿಕೊಂಡ ನಂತರ ಆಸ್ಟ್ರೇಲಿಯಾದ ಇನ್ನಿಂಗ್ಸ್ ಕುಸಿಯಿತು.

ಲಂಕಾ ಬೌಲರ್​ಗಳ ಮ್ಯಾಜಿಕ್

ಜೋಶ್ ಇಂಗ್ಲಿಸ್ 27 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 22 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್​ಗೆ ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಕ್ಯಾಮರೂನ್ ಗ್ರೀನ್ 3, ಟಿಮ್ ಡೇವಿಡ್ 6, ಮಾರ್ಕಸ್ ಸ್ಟೊಯಿನಿಸ್ 4, ಕೂಪರ್ ಕಾನೊಲಿ 3, ಕ್ಸೇವಿಯರ್ ಬಾರ್ಟ್ಲೆಟ್ 0 ಮತ್ತು ಆಡಮ್ ಜಂಪಾ 1 ರನ್ ಗಳಿಸಿ ಔಟಾದರು. ಲಂಕಾ ಪರ ದಶುನ್ ಹೇಮಂತ 3 ವಿಕೆಟ್ ಮತ್ತು ದುಶ್ಮಂತ ಚಮೀರಾ 2 ವಿಕೆಟ್ ಪಡೆದರು.

ನಿಸ್ಸಾಂಕ ಅಜೇಯ ಶತಕ

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 8 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಕುಶಾಲ್ ಪೆರೆರಾ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಆ ನಂತರ ಜೊತೆಯಾದ ಪಾಥುಮ್ ನಿಸ್ಸಂಕಾ ಮತ್ತು ಕುಶಾಲ್ ಮೆಂಡಿಸ್ ತಂಡದ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್‌ಗೆ 97 ರನ್‌ಗಳ ಪಾಲುದಾರಿಕೆಯನ್ನು ನೀಡಿತು. ಕುಶಾಲ್ ಮೆಂಡಿಸ್ 51 ರನ್ ಗಳಿಸಿ ಔಟಾದರು. ನಂತರ ಪವನ್ ರತ್ನಾಯಕೆ ಅವರೊಂದಿಗೆ ಪಾಥುಮ್ ಇನ್ನಿಂಗ್ಸ್ ತಂಡವನ್ನು ಗೆಲುವಿನ ಕೊಂಡೊಯ್ಯುವ ಕೆಲಸ ಮಾಡಿದರು. ಈ ಜೋಡಿ ಅಜೇಯವಾಗಿ ಉಳಿದ ತಂಡಕ್ಕೆ ಜಯ ತಂದುಕೊಟ್ಟಿತು. ಪಾಥುಮ್ ನಿಸ್ಸಂಕಾ 52 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದರು. ಅವರ ಇನ್ನಿಂಗ್ಸ್​ನಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು.

ಈ ಗೆಲುವಿನೊಂದಿಗೆ, ಶ್ರೀಲಂಕಾ ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ. ಉಳಿದ ಒಂದು ಸ್ಥಾನಕ್ಕೆ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಪೈಪೋಟಿ ನಡೆಸುತ್ತಿವೆ. ಆದರೆ ಆಸ್ಟ್ರೇಲಿಯಾಕ್ಕಿಂತ ಜಿಂಬಾಬ್ವೆಗೆ ಸ್ಥಾನ ಪಡೆಯುವ ಅವಕಾಶ ಹೆಚ್ಚಿದೆ. ಜಿಂಬಾಬ್ವೆ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ, ಅದು ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆಯುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 pm, Mon, 16 February 26

Source link

ದಾರಿ ಬಿಡುವ ವಿಚಾರಕ್ಕೆ ಬಸ್- ಆಟೋ ಚಾಲಕ ಹೊಡೆದಾಟ, ವಿಡಿಯೋ ನೋಡಿ – Kannada News | Bus And Auto Driver Fighting In Hubballi Over Side

ಹುಬ್ಬಳ್ಳಿ, (ಫೆಬ್ರವರಿ 16): ದಾರಿ ಬಿಡುವ ವಿಚಾರಕ್ಕೆ ಬಸ್ ಚಾಲಕ ಹಾಗೂ ಆಟೋ ಚಾಲಕನ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನೂರಾಣಿ ರಸ್ತೆಯ ಆಶ್ರಯ ಲಾಡ್ಜ್ ಬಳಿ ನಡೆದಿದೆ. ಬಸ್ ಹಾಗೂ ಆಟೋ ಹುಬ್ಬಳ್ಳಿಯ ನೂರಾಣಿ ರಸ್ತೆಯ ಆಶ್ರಯ ಲಾಡ್ಜ್ ಬಳಿ ಎದುರು ಬದುರಾಗಿ ಬಂದು ನಿಂತಿದ್ದು, ದಾರಿ ಬಿಡುವ ವಿಚಾರಕ್ಕೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ತನಕ ಹೋಗಿದ್ದು, ಬಸ್​ ಚಾಲಕ, ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಟ್ರಾಪಿಕ್ ಜಾಮ್ ಉಂಟಾಗಿದ್ದರೂ ಸಹ ಸ್ಥಳಕ್ಕೆ ಪೊಲೀಸರ ಬರಲೇ ಇಲ್ಲ. ಇನ್ನು ಸ್ಥಳೀಯರು ಜಗಳ ಬಿಡಿಸಲು ಹರಸಾಹಸಪಟ್ಟಿದ್ದಾರೆ.

Source link

ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವಾಗ ಕಾಲು ಜಾರಿ ಕೆಳಗೆ ಬಿದ್ದ ಮಹಿಳೆ; ವಿಡಿಯೋ ಇಲ್ಲಿದೆ – Kannada News | Woman falls from balcony in Indore while drying clothes

ಇಂದೋರ್, ಫೆಬ್ರವರಿ 16: ಇಂದೋರ್‌ನಲ್ಲಿ ಮನೆಯೊಂದರಲ್ಲಿ ಬಟ್ಟೆ ಒಣಗಿಸುವಾಗ 25 ವರ್ಷದ ಮಹಿಳೆಯೊಬ್ಬರು ತಮ್ಮ ರೂಮಿನ ಬಾಲ್ಕನಿಯಿಂದ ಕೆಳಗೆ ಬಿದ್ದ ಘಟನೆ ನಡೆದಿದೆ. ಈ ದೃಶ್ಯ ಆ ಮನೆಯ ಕೆಳಗಿನ ಮಹಡಿಯಲ್ಲಿದ್ದ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ (Viral Video) ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಬಟ್ಟೆ ಒಣಗಿಸುವಾಗ ಮಹಿಳೆ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಫಾ ಎಂಬ ಮಹಿಳೆ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ತಮ್ಮ ಮನೆಯಲ್ಲಿ ಬಟ್ಟೆ ಒಣಗಿಸುವಾಗ ಕಾಲು ಜಾರಿ ಬಿದ್ದಿದ್ದಾಗಿ ಆಕೆ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮುಖ ಮತ್ತು ಕೈಕಾಲುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ವರ್ಷದ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? – Kannada News | Solar Eclipse on 17 February: here Is What Effects on Zodiac Signs

ವರ್ಷದ ಮೊದಲ ಸೂರ್ಯಗ್ರಹಣ (Solar Eclipse) ನಾಳೆ ಅಂದರೆ ಫೆಬ್ರವರಿ 17 ರಂದು ಸಂಭವಿಸಲಿದೆ. ವರ್ಷದ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ವರ್ಷದ ಮೊದಲ ಸೂರ್ಯಗ್ರಹಣವು ರಾಷ್ಟ್ರ ಮತ್ತು ಪ್ರಪಂಚದ ಮೇಲೆ ಹಾಗೂ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಸೂರ್ಯಗ್ರಹಣವು ಮೇಷದಿಂದ ಮೀನ ರಾಶಿಯವರಿಗೆ ಯಾವ ಪರಿಣಾಮ ಬೀರುತ್ತದೆ? ಅದಕ್ಕೆ ಪರಿಹಾರವೇನು ಎನ್ನುವುದನ್ನು ತಿಳಿದುಕೊಳ್ಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್ – Kannada News | Kichcha Sudeep reveals real reason for Billa Ranga Baasha movie delay

ಕಿಚ್ಚ ಸುದೀಪ್ ಅವರು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಮುಗಿಯಿತು. ‘ಬಿಲ್ಲ ರಂಗ ಬಾಷ’ (Billa Ranga Baasha) ಸಿನಿಮಾ ಸೆಟ್ಟೇರುವುದು ತಡ ಆಗುತ್ತಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಸುದೀಪ್ ಅವರು ವಿವರಿಸಿದ್ದಾರೆ. ‘ನಾನು ಮಾರ್ಕ್ ಸಿನಿಮಾಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದೆ. ಬಳಿಕ ಸಿಸಿಎಲ್ ನನಗೆ ಸ್ವಲ್ಪ ರಿಲೀಫ್ ನೀಡಿತು. ನಾನು ಕೂಡ ಮನುಷ್ಯ. ಸಿನಿಮಾ ಮಾಡಬೇಕು. ಆದರೆ ಯಾಂತ್ರಿಕವಾಗಿ ಸಿನಿಮಾ ಮಾಡೋಕೆ ನನ್ನಿಂದ ಆಗಲ್ಲ. ನನಗೆ ಒಂದು ಸಣ್ಣ ಬ್ರೇಕ್ ಬೇಕು. ಯಾವುದನ್ನಾದರೂ ನಾವು ತುಂಬಾ ಪ್ರೀತಿಸಿದರೆ ಅದರಿಂದ ನಾವು ಸ್ವಲ್ಪ ದೂರ ಇರಬೇಕು. ಆಗ ಮತ್ತೆ ಪ್ರೀತಿ ಬೆಳೆಯುತ್ತದೆ. ಒಮ್ಮೆ ಬಿಲ್ಲ ರಂಗ ಬಾಷ ಶುರುವಾದರೆ ಮತ್ತೆ ಈ ಕಡೆ ತಿರುಗಿ ನೋಡಲ್ಲ. 8-9 ತಿಂಗಳು ಅದರಲ್ಲೇ ಕಳೆಯುತ್ತದೆ’ ಎಂದು ಸುದೀಪ್ (Kichcha Sudeep) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರನ್ನೂ ನಂಬಬೇಡಿ; ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸದಂತೆ ಸುಪ್ರೀಂ ಕೋರ್ಟ್ ಸಲಹೆ – Kannada News | Don’t Trust Anyone Before Marriage Supreme Court Advises Cautions Pre Marital Physical Relations

ನವದೆಹಲಿ, ಫೆಬ್ರವರಿ 16: ಮದುವೆಯ ಭರವಸೆ ನೀಡಿ ಅತ್ಯಾಚಾರ ನಡೆಸಿದ ಆರೋಪಗಳನ್ನು ಒಳಗೊಂಡ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ವಿವಾಹಪೂರ್ವ ಸಂಬಂಧಗಳ ಕುರಿತು ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು ಇಂದು ಆ ಸಮಯದಲ್ಲಿ ಈಗಾಗಲೇ ಮದುವೆಯಾಗಿದ್ದರೂ, ಆ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ಆಕೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ ಆರೋಪ ಹೊತ್ತಿರುವ ವ್ಯಕ್ತಿಯ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದೆ.

ವಿಚಾರಣೆಯ ಸಂದರ್ಭದಲ್ಲಿ ಸಲಹೆ ನೀಡಿದ ನ್ಯಾಯಮೂರ್ತಿ ನಾಗರತ್ನ, ಮದುವೆಗೂ ಮುನ್ನ ದೈಹಿಕ ಸಂಬಂಧ ಬೆಳೆಸುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. “ಬಹುಶಃ ನಾವು ಹಳೆಯ ಕಾಲದವರಾಗಿರಬಹುದು. ಆದರೆ, ಮದುವೆಗೂ ಮೊದಲು ಒಬ್ಬ ಹುಡುಗ ಮತ್ತು ಹುಡುಗಿ ಅಪರಿಚಿತರಾಗಿರುತ್ತಾರೆ. ಅವರ ಸಂಬಂಧ ಎಷ್ಟೇ ಗಾಢವಾಗಿದ್ದರೂ ಮದುವೆಗೆ ಮೊದಲು ಅವರು ಹೇಗೆ ದೈಹಿಕ ಸಂಬಂಧದಲ್ಲಿರುತ್ತಾರೆ ಎಂಬುದನ್ನು ನಮಗೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಹಳೆಯ ಕಾಲದವರಿಗೆ ಇದು ವಿಚಿತ್ರವಾದ ಸಂಗತಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

“ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ಮದುವೆಗೆ ಮೊದಲು ಯಾರೂ ಯಾರನ್ನೂ ನಂಬಬಾರದು” ಎಂದು ಅವರು ಸಲಹೆ ನೀಡಿದ್ದಾರೆ. ಆ ಮಹಿಳೆ ಮತ್ತು ಪುರುಷ 2022ರಲ್ಲಿ ಮ್ಯಾಟ್ರಿಮೊನಿ ವೆಬ್‌ಸೈಟ್ ಮೂಲಕ ಭೇಟಿಯಾಗಿದ್ದರು. ಮೊದಲೇ ಮದುವೆಯಾಗಿದ್ದರೂ ಆತ ಮಹಿಳೆಗೆ ತಾನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅದೇ ನಂಬಿಕೆಯಿಂದ ಆಕೆ ಆತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಳು.

ಅವರ ಲೈಂಗಿಕ ಸಂಭೋಗದ ವೀಡಿಯೊಗಳನ್ನು ಮಹಿಳೆಯ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡಲಾಗಿದೆ. ಅದನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಷಕರಿಗೆ ದೊಡ್ಡ ಸವಾಲಾದ ಮಕ್ಕಳ ಮೊಬೈಲ್ ಅಡಿಕ್ಷನ್: ನಿಮ್ಹಾನ್ಸ್ ಮೊರೆ ಹೋದ ಹೆತ್ತವರು – Kannada News | Children’s Mobile Addiction: NIMHANS Launches Parent Training and SHUT Clinic

ಪ್ರಾತಿನಿಧಿಕ ಚಿತ್ರImage Credit source: happiesthealth

ಬೆಂಗಳೂರು, ಫೆಬ್ರವರಿ 16: ಕೊರೊನಾ ಬಳಿಕ ಮಕ್ಕಳ ಕಲಿಕೆಯ ಜೊತೆಗೆ ವರ್ತನೆಗಳಲ್ಲಿ ಬದಲಾಗಿ ಹೋಗಿವೆ. ಮನೆಯವರನ್ನು ಮರಿಬಹುದು, ಆದರೆ ಮೊಬೈಲ್ (Mobile) ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ ಸದ್ಯದ ಮಕ್ಕಳ ಪರಿಸ್ಥಿತಿ. ಅದರಲ್ಲೂ ಕೋವಿಡ್ (covide) ಸಮಯದಲ್ಲಿ ಮಕ್ಕಳು ಮೊಬೈಲ್​​ನಲ್ಲೇ ಕಳೆದುಹೋಗುತ್ತಿದ್ದರು. ಅತಿಯಾದ ಮೊಬೈಲ್ ಬಳಕೆ ಮಕ್ಕಳನ್ನ ಕೆಟ್ಟ ಚಟಕ್ಕೆ ದುಡುತ್ತಿದೆ. ಹೀಗಾಗಿ ಪೋಷಕರು ನಿಮ್ಹಾನ್ಸ್ ಮೊರೆ ಹೋಗುತ್ತಾರೆ.

ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಅಂತ ದಿನದ 10ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಸುತ್ತಿದ್ದು. ನಿತ್ಯ ಮೊಬೈಲ್, ಇಂಟರ್ನೆಟ್ ಲೋಕದಲ್ಲಿ ಇರುವ ವಿದ್ಯಾರ್ಥಿಗಳಿಗೆ ಇದೀಗ ಮೊಬೈಲ್ ಚಟವಾಗಿ ಹೋಗಿದೆ. ಮೊಬೈಲ್ ಇಲ್ಲದೆ ಕೆಲಸನೇ ಇಲ್ಲ. ಓದು ಮೊದಲೇ ಇಲ್ಲ ಅಂತಿದ್ದಾರೆ. ಮೊಬೈಲ್ ಅಡಿಕ್ಷನ್​ಗೆ ಬಲಿ ಆಗುತ್ತಿದ್ದಾರೆ. ಇದರಿಂದ ನೊಂದ 8000 ಸಾವಿರಕ್ಕೂ ಹೆಚ್ಚು ಪೋಷಕರು ಮೊಬೈಲ್ ಅಡಿಕ್ಷನ್ ಕಡಿಮೆ ಮಾಡುವಂತೆ ನಿಮ್ಹಾನ್ಸ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಮಕ್ಕಳು ಮೊಬೈಲ್, ಟಿವಿ ಮುಂದೆ ಕುಳಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಿ

ಮಕ್ಕಳಲ್ಲಿ ಗೇಮಿಂಗ್ ಚಟ ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿ ಮೊಬೈಲ್ ಅಡಿಕ್ಷನ್​ನಿಂದ ಮೂರು ಮಕ್ಕಳು ಬಲಿಯಾಗಿದ್ದಾರೆ. ಪಬ್​ಜಿ ಗೀಳಿನಿಂದ 23 ವರ್ಷದ ಯುವಕನಿಗೆ ಬ್ರೇನ್ ಅಟ್ಯಾಕ್ ಆಗಿದೆ. ಈ ಬೆನ್ನಲ್ಲೇ ನಿಮ್ಹಾನ್ಸ್ ಕದ ತಟ್ಟುತ್ತಿರುವರ ಪೋಷಕರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹೀಗಾಗಿ ಮೊಬೈಲ್ ಅಡಿಕ್ಷನ್ ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನಲೆ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಚಟವನ್ನು ನಿಯಂತ್ರಿಸಲು ನಿಮ್ಹಾನ್ಸ್‌ ‘ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ SHUT – ಶಟ್’ ಕ್ಲಿನಿಕ್ ಶುರುವಾಗಿದ್ದು, ಪೋಷಕರಿಗಾಗಿಯೇ ವಿಶೇಷ ಆನ್‌ಲೈನ್ ತರಬೇತಿಯನ್ನು ಆಯೋಜನೆ ಮಾಡಲಾಗುತ್ತಿದೆ.

ಮಕ್ಕಳ ಮೊಬೈಲ್ ಅಡಿಕ್ಷನ್ ಬಿಡಿಸುವುದು ಹೇಗೆ ಅಂತ ಆನ್ಲೈನ್ ಸೆಷನ್ ಮೂಲಕ ವೈದ್ಯರು ಪೋಷಕರಿಗೆ ತರಬೇತಿ ನೀಡುತ್ತಿದ್ದಾರೆ. ಗೇಮಿಂಗ್ ಮತ್ತು ಅಶ್ಲೀಲತೆಯ ವ್ಯಸನ ಮುಕ್ತರಾಗುವ ಬಗ್ಗೆಯೂ ವಿಶೇಷ ತರಬೇತಿ ಶುರು ಮಾಡಿದ್ದಾರೆ. ಈಗಾಗಲೇ 8 ಸಾವಿರ ಕರೆಗಳು ರಿಜಿಸ್ಟರ್ ಆಗಿದ್ದು, ಮುಂದಿನ ದಿನಗಳಲ್ಲಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್​ಗಳಲ್ಲಿ ಆರಂಭ ಮಾಡಲು ನಿಮ್ಹನ್ಸ್ ಮುಂದಾಗಿದೆ.

ಏನಿದು ತರಬೇತಿ ಕಾರ್ಯಕ್ರಮ?

ತಂತ್ರಜ್ಞಾನದ ವ್ಯಸನ ನಿರ್ವಹಣೆಗಾಗಿ ಪೋಷಕರ ಗುಂಪು PGMTA ಎಂಬ ಹೆಸರಿನಲ್ಲಿ ಪ್ರತಿ ಶನಿವಾರ ಆನ್‌ಲೈನ್ ಮೂಲಕ ಪೋಷಕರಿಗೆ ತರಬೇತಿ ನೀಡಲಾಗುತ್ತಿದೆ. ಕಳೆದ ವರ್ಷ ಆರಂಭವಾದ ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೂ ಸುಮಾರು 8000ಕ್ಕೂ ಹೆಚ್ಚು ಪೋಷಕರು ಇದರ ಲಾಭ ಪಡೆದಿದ್ದಾರೆ.

ಆರಂಭದಲ್ಲೇ ಎಚ್ಚರವಹಿಸಿ: ಪೋಷಕರಿಗೆ ವೈದ್ಯರ ಸಲಹೆ

ಇತ್ತೀಚೆಗೆ ಮೊಬೈಲ್ ಕೊಡದಿದ್ದರೆ ಊಟ ಮಾಡುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುವುದು, ಸುಳ್ಳು ಹೇಳುವುದು ಅಥವಾ ಆಕ್ರಮಣಕಾರಿಯಾಗಿ ವರ್ತಿಸುವುದು ಮಕ್ಕಳಲ್ಲಿ ಕಂಡುಬರುತ್ತಿದೆ. ಈ ಭಯದಿಂದಲೇ ಪೋಷಕರು ಅಸಹಾಯಕರಾಗಿದ್ದಾರೆ. ಇಂತಹ ಘಟನೆಗಳು ಅನೇಕ ಕುಟುಂಬಗಳಲ್ಲಿ ಗಂಭೀರ ಜಗಳಗಳಿಗೆ ಕಾರಣವಾಗಿದ್ದು, ಕೌನ್ಸಿಲಿಂಗ್‌ಗಾಗಿ ಮನಶಾಸ್ತ್ರಜ್ಞರನ್ನು ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೋಷಕರು ಆರಂಭದಲ್ಲೇ ಎಚ್ಚರವಹಿಸುವಂತೆ ಮನೋವೈದ್ಯೆ ಡಾ. ಮಾಲಾ ಮುರಳೀಧರ್​​ ಸಲಹೆ ನೀಡಿದ್ದಾರೆ.

ಇನ್ನು ಕೊರೊನಾದಿಂದ ವಿದ್ಯಾರ್ಥಿಗಳಲ್ಲಿ ಮೊಬೈಲ್ ಅಡಿಕ್ಷನ್​​ಗೆ ತುತ್ತಾಗಿರುವ ಪ್ರಮಾಣ ಏರಿಕೆ ಕಂಡಿದೆ. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ನಾನಾ ಅವಾಂತರಗಳಿಗೆ ಬಲಿ ಆಗತ್ತಿದ್ದಾರೆ. ಕೋವಿಡ್ ಹಾವಳಿ ತಗ್ಗಿ ಆನ್ಲೈನ್ ಕ್ಲಾಸ್​ನಿಂದ ಶಿಕ್ಷಣ ಇಲಾಖೆ ಹೊರ ಬಂದು ಆಫ್ ಲೈನ್ ಕ್ಲಾಸ್ ಶುರುವಾದರೂ ಮಕ್ಕಳು ಮಾತ್ರ ಮೊಬೈಲ್ ಗೀಳಿನಿಂದ ಹೊರ ಬಂದಿಲ್ಲ. ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸದ್ಯ ಮಕ್ಕಳಲ್ಲಿ ಹೆಚ್ಚಾದ ಮೊಬೈಲ್ ಗೀಳು ನಾನಾ ಮಾನಸಿಕ, ದೈಹಿಕ ಸಮಸ್ಯೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಈ ಸಮಸ್ಯೆಯಿಂದ ಪೋಷಕರಿಗೆ ಮಾನಸಿಕ ಒತ್ತಡ ಹೆಚ್ಚಾಗಿದೆ.

ಇದನ್ನೂ ಓದಿ: ಶಿಶುವಿಗೆ ಹಸುವಿನ ಹಾಲು ನೀಡುವುದಕ್ಕೆ ಸರಿಯಾದ ಸಮಯವಿದೆಯೇ? ಯಾವಾಗ ಆರಂಭ ಮಾಡಬೇಕು ತಿಳಿದುಕೊಳ್ಳಿ

ಒಟ್ಟಿನಲ್ಲಿ ಮಕ್ಕಳು ಮೊಬೈಲ್​​ಗೆ ದಾಸರಾಗಿರುವುದು ಸುಳ್ಳಲ್ಲ. ಮೀತಿಮಿರಿದ ಮೊಬೈಲ್ ಬಳಕೆ ಮಕ್ಕಳ ಮಾನಸಿಕ, ದೈಹಿಕ ಸಮಸ್ಯೆಗೂ ಕಾರಣವಾಗಿದ್ದು, ಪೊಷಕರ ವರ್ಗ ಎಚ್ಚರವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

6,6,6,6,6,6..! ಆಂಗ್ಲರ ವಿರುದ್ಧ 25 ಎಸೆತಗಳಲ್ಲಿ 60 ರನ್ ಚಚ್ಚಿದ ಇಟಲಿ ಬ್ಯಾಟರ್ – Kannada News | T20 World Cup: Ben Manenti’s Explosive 60 Dazzles in Italy’s Brave Fight vs England

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಇಟಲಿ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿರಬಹುದು. ಆದರೆ ಎಲ್ಲಾ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ನೀಡಿದೆ. ಚೊಚ್ಚಲ ವಿಶ್ವಕಪ್​ನಲ್ಲೇ ತನ್ನ ಪ್ರದರ್ಶನದಿಂದ ವಿಶ್ವ ಕ್ರಿಕೆಟ್​ನ ಗಮನ ಸೆಳೆದಿರುವ ಇಟಲಿ ಸೋಮವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಕೆಚ್ಚೆದೆಯ ಹೋರಾಟ ನೀಡಿತು. ಅದರಲ್ಲೂ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಬೆನ್ ಮಾನೆಂಟಿ (Ben Manenti) ಕೇವಲ 25 ಎಸೆತಗಳಲ್ಲಿ 60 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

25 ಎಸೆತಗಳಲ್ಲಿ 60 ರನ್ ಬಾರಿಸಿದ ಬೆನ್

ಇಂಗ್ಲೆಂಡ್ ನೀಡಿದ 203 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಟಲಿ ಆರಂಭದಲ್ಲೇ ಎಡವಿದರೂ, ಮಧ್ಯಮ ಕ್ರಮಾಂಕದಲ್ಲಿ ಬಂದ ಮಾನೆಂಟಿ ತಮ್ಮ ವೀರೋಚಿತ ಪ್ರದರ್ಶನದಿಂದ ಇಂಗ್ಲೆಂಡ್ ಬೌಲರ್‌ಗಳನ್ನು ಭಯಭೀತಗೊಳಿಸಿದರು. ಕೇವಲ 25 ಎಸೆತಗಳಲ್ಲಿ 60 ರನ್ ಬಾರಿಸಿ ಇಂಗ್ಲೆಂಡ್ ತಂಡವನ್ನು ಬಹುತೇಕ ಸೋಲಿನ ಅಂಚಿಗೆ ಕೊಂಡೊಯ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಬೆನ್ ಮಾನೆಂಟಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೃಹತ್ ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಇದರ ಜೊತೆಗೆ ಜಸ್ಟಿನ್ ಮಾಸ್ಕೋ ಜೊತೆ 92 ರನ್‌ಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಂಚಿಕೊಂಡರು.

ಮಾನೆಂಟಿ ಕ್ರೀಸ್​ನಲ್ಲಿರುವವರೆಗೂ ಇಟಲಿ ತಂಡಡ ಗೆಲ್ಲುವುದು ಖಚಿತವೆನಿಸಿತ್ತು. ಆದಾಗ್ಯೂ, ವಿಲ್ ಜ್ಯಾಕ್ಸ್ ಅವರ ಬೌಲಿಂಗ್​ನಲ್ಲಿ ದೊಡ್ಡ ಹೊಡೆತವನ್ನು ಹೊಡೆಯಲು ಯತ್ನಿಸಿದ ಮಾನೆಂಟಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮಾನೆಂಟಿ ವಿಕೆಟ್ ಪತನದ ಬಳಿಕ ಇಟಲಿ ಇನ್ನಿಂಗ್ಸ್ ಹಳಿ ತಪ್ಪಿತು. ಆದಾಗ್ಯೂ, ವಿಶ್ವ ಚಾಂಪಿಯನ್ ಇಂಗ್ಲೆಂಡ್‌ಗೆ ತಮ್ಮ ಚೊಚ್ಚಲ ವಿಶ್ವಕಪ್​ನಲ್ಲೇ ಈ ಮಟ್ಟದಲ್ಲಿ ಸ್ಪರ್ಧೆಯನ್ನು ನೀಡಿದ್ದ ಇಟಲಿ ತಂಡವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ.

‘ಅಜ್ಞಾನಿ, ಮೂರ್ಖ, ಹೇಡಿ’; ಸಲ್ಮಾನ್, ಬಾಬರ್​ಗೆ ಛೀಮಾರಿ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ

ಇಟಲಿಯ ಗಮನಾರ್ಹ ಪ್ರದರ್ಶನ

ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿರುವ ಇಟಲಿ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋತರೂ, ನೇಪಾಳವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಮಾಸ್ಕೊ ಸಹೋದರರು ಮತ್ತು ಬೆನ್ ಮಾನೆಂಟಿಯಂತಹ ಹಿಟರ್‌ಗಳ ಸ್ಥಿರ ಆಟದೊಂದಿಗೆ, ಈ ತಂಡವು ಗ್ರೂಪ್-ಸಿಯಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಇಂಗ್ಲೆಂಡ್ ವಿರುದ್ಧ ಮಾನೆಂಟಿಯ ಇನ್ನಿಂಗ್ಸ್ ಇಟಾಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ಉಳಿಯುತ್ತದೆ.

ಒಂದು ಕಾಲದಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ತಂಡಗಳಿಗೆ ಸೀಮಿತವಾಗಿದ್ದ ಕ್ರಿಕೆಟ್, ಈಗ ಇಟಲಿಯಂತಹ ದೇಶಗಳಲ್ಲಿ ವೇಗವಾಗಿ ವಿಸ್ತರಿಸುತ್ತಿದೆ. ಇಂಗ್ಲೆಂಡ್‌ನ ಬೌಲರ್‌ಗಳನ್ನು ಹೀಗೆ ಹಿಗ್ಗಮುಗ್ಗ ದಂಡಿಸುವುದು ಸಣ್ಣ ಸಾಧನೆಯಲ್ಲ. ಈ ಪಂದ್ಯದ ಫಲಿತಾಂಶ ಏನೇ ಇರಲಿ, ಇಟಲಿಯ ಪ್ರದರ್ಶನವು ವಿಶ್ವ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ರಿವೇಣಿ ಕಾದಂಬರಿ ಆಧಾರಿತ ‘ಸರಳ ಸುಬ್ಬರಾವ್’ ಸಿನಿಮಾ ಫೆ.20ಕ್ಕೆ ರಿಲೀಸ್

Source link