Category Archives: Blog

Your blog category

ಮದುವೆಯಾಗಿ ಇಬ್ಬರು ಮಕ್ಕಳಿರೋದನ್ನು ಮುಚ್ಚಿಟ್ಟು ಯುವಕನೊಂದಿಗೆ ವಿವಾಹವಾದ ಮಹಿಳೆ! ಆಮೇಲೇನಾಯ್ತು ಗೊತ್ತೇ?

Source link

ಭಾರತೀಯರ ಬ್ಯಾಟ್​​ನಲ್ಲಿ ರಬ್ಬರ್ ಇದೆ: ಹೊಸ ಚರ್ಚೆ ಹುಟ್ಟುಹಾಕಿದ ಲಂಕಾ ಕ್ರಿಕೆಟಿಗ – Kannada News | Indian players using rubber coated Bat: Bhanuka Rajapaksa

ಭಾರತೀಯರು ಬಳಸುವ ಬ್ಯಾಟ್​ಗೆ ರಬ್ಬರ್ ಪದರ ಅನ್ವಯಿಸಲಾಗುತ್ತಿದೆ. ಇದರಿಂದ ಅವರು ಸುಲಭವಾಗಿ ರನ್​ಗಳಿಸುತ್ತಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟಿಗ ಭಾನುಕಾ ರಾಜಪಕ್ಸೆ ಗಂಭೀರ ಆರೋಪ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಭಾನುಕಾ, ಭಾರತೀಯ ಆಟಗಾರರು ಬಳಸುವ ಬ್ಯಾಟ್ ವಿಶೇಷವಾಗಿರುತ್ತದೆ. ಅಂತಹ ಬ್ಯಾಟ್​ಗಳು ಎಲ್ಲೂ ಸಿಗುವುದಿಲ್ಲ ಎಂಬುದೇ ಅಚ್ಚರಿ.

ಭಾರತೀಯ ಆಟಗಾರರ ಬಳಿ ಇರುವ ಬ್ಯಾಟ್‌ಗಳು ನಾವು ಖರೀದಿಸುವ ಅತ್ಯುತ್ತಮ ಬ್ಯಾಟ್‌ಗಳಿಗಿಂತ ಬಹಳ ಶ್ರೇಷ್ಠವಾಗಿರುತ್ತವೆ. ಅದರ ಮೇಲೆ ರಬ್ಬರ್ ಪದರವನ್ನು ಅನ್ವಯಿಸಿದಂತೆ ಭಾಸವಾಗುತ್ತದೆ. ಅದು ಹೇಗೆ ಸಾಧ್ಯ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅಂತಹ ಬ್ಯಾಟ್​ಗಳು ಇತರರಿಗೆ ಸಿಗುವುದಿಲ್ಲ. ಈ ವಿಚಾರ ಎಲ್ಲರಿಗೂ ತಿಳಿದಿದೆ ಎಂದು ಭಾನುಕಾ ರಾಜಪಕ್ಸೆ ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರರ ಬ್ಯಾಟ್ ಮೇಲೆ ರಬ್ಬರ್ ಪದರ ಇರುವುದರಿಂದ ಅವರು ಸುಲಭವಾಗಿ ರನ್​ಗಳಿಸುತ್ತಿದ್ದಾರೆ. ಅಂತಹ ಬ್ಯಾಟ್​ಗಳು ಇತರೆ ದೇಶದ ಆಟಗಾರರಿಗೆ ಸಿಗುವುದಿಲ್ಲ. ಅಲ್ಲದೆ ಅಂತಹ ಬ್ಯಾಟ್​​ಗಳನ್ನು ಇತರರು ಖರೀದಿಸಲು ಸಹ ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟಿಗ ಹೇಳಿದ್ದಾರೆ.

ಭಾನುಕಾ ರಾಜಪಕ್ಸೆಯ ಈ ಹೇಳಿಕೆಯು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಅದರಲ್ಲೂ ಪರೋಕ್ಷವಾಗಿ ಭಾರತೀಯರು ನಿಯಮಬಾಹಿರ ಬ್ಯಾಟ್​ಗಳನ್ನು ಬಳಸುತ್ತಿದ್ದಾರೆ ಎಂದು ರಾಜಪಕ್ಸೆ ಆರೋಪಿಸಿದ್ದಾರೆ. ಹೀಗಾಗಿಯೇ ಈ ವಿಷಯವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತ ತನ್ನ ಹೇಳಿಕೆಯು ಮಹತ್ವ ಪಡೆದುಕೊಳ್ಳುತ್ತಿದ್ದಂತೆ ಭಾನುಕಾ ರಾಜಪಕ್ಸೆ ಯೂಟರ್ನ್ ಹೊಡೆದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿರುವ ಅವರು, ಸಂದರ್ಶನದಲ್ಲಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅನುವಾದದಲ್ಲಿ ವ್ಯತ್ಯಾಸಗಳಾಗಿವೆ.

ನನ್ನ ಮಾತು ಹೊಗಳಿಕೆಯ ಉದ್ದೇಶವಾಗಿತ್ತು. ಭಾರತೀಯ ಕ್ರಿಕೆಟ್, ಅದರ ವ್ಯವಸ್ಥೆಗಳು ಮತ್ತು ಮೂಲಸೌಕರ್ಯದಿಂದ ಅದರ ಸಲಕರಣೆಗಳ ಮಾನದಂಡಗಳವರೆಗೆ ನಂಬಲಾಗದಷ್ಟು ಮುಂದುವರೆದಿದೆ. ಅವರ ಬ್ಯಾಟ್ ತಯಾರಕರು ನಿಜವಾಗಿಯೂ ವಿಶ್ವದ ಅತ್ಯುತ್ತಮ ತಯಾರಕರಲ್ಲಿ ಒಬ್ಬರು. ಇದನ್ನೇ  ನಾನು ಭಾರತೀಯರು ಬಳಸುವ ಬ್ಯಾಟ್​ ಅತ್ಯುತ್ತಮವಾಗಿದೆ ಅಂದಿರುವುದು. ಇದನ್ನು ಬೇರೆ ಅರ್ಥದಲ್ಲಿ ಅನುವಾದಿಸಲಾಗಿದೆ ಎಂದು ಭಾನುಕಾ ರಾಜಪಕ್ಸೆ ಸ್ಪಷ್ಟೀಕರಣ ನೀಡಿದ್ದಾರೆ.

ಐಸಿಸಿ ನಿಯಮ ಹೇಳುವುದೇನು?

ಅಂತರಾಷ್ಟ್ರೀಯ ಕ್ರಿಕೆಟ್ ನಿಯಮಗಳ ಪ್ರಕಾರ ಬ್ಯಾಟ್ ತಯಾರಿಕೆಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳಿವೆ. ಆ ನಿಯಮಗಳಾವುವು ಎಂದು ನೋಡುವುದಾದರೆ…

  • ಬ್ಯಾಟ್‌ಗಳನ್ನು ಕೇವಲ ಮರದಿಂದ ಮಾತ್ರ ತಯಾರಿಸಬೇಕು. ಒಳಗೆ ರಬ್ಬರ್ ಅಥವಾ ಇತರ ಯಾವುದೇ ಶಕ್ತಿ ವರ್ಧಕ ವಸ್ತುಗಳನ್ನು ಬಳಸುವುದು ನಿಯಮಬಾಹಿರ.
  • ಪಂದ್ಯದ ಅಧಿಕಾರಿಗಳು ನಿಯಮಿತವಾಗಿ ಆಟಗಾರರ ಕ್ರೀಡಾ ಸಲಕರಣೆಗಳನ್ನು ತಪಾಸಣೆ ಮಾಡುತ್ತಾರೆ. ಈ ವೇಳೆ ಬ್ಯಾಟ್ ಅನ್ನು ಸಹ ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಅಲೆನ್ ಆರ್ಭಟಕ್ಕೆ ಅಭಿಷೇಕ್ ವಿಶ್ವ ದಾಖಲೆ ಉಡೀಸ್

ಇನ್ನು ಭಾರತೀಯ ಆಟಗಾರರು ಬಳಸುವ SG, SS ನಂತಹ ಬ್ರ್ಯಾಂಡ್‌ಗಳ ಬ್ಯಾಟ್​ಗಳನ್ನು ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲ್ಪಟ್ಟಿರುತ್ತವೆಯೇ ಹೊರತು ಅವುಗಳಲ್ಲಿ ಯಾವುದೇ ಕಾನೂನುಬಾಹಿರ ಮಾರ್ಪಾಡುಗಳಿರುವುದಿಲ್ಲ.

ಅಲ್ಲದೆ SG, SS ಮತ್ತು MRF ಬ್ಯಾಟ್​ಗಳಿಗಾಗಿ ಅತ್ಯುನ್ನತ ದರ್ಜೆಯ ‘ಗ್ರೇಡ್ 1’ ಇಂಗ್ಲಿಷ್ ವಿಲೋ ಮರವನ್ನು ಬಳಸಲಾಗುತ್ತದೆ. ಈ ಮರವು ನೈಸರ್ಗಿಕವಾಗಿಯೇ ಹೆಚ್ಚು “ಪಿಂಗ್” (ಚೆಂಡು ತಗುಲಿದಾಗ ಚಿಮ್ಮುವ ಶಕ್ತಿ) ಹೊಂದಿರುತ್ತದೆ.

ಹಾಗೆಯೇ ಅತ್ಯುತ್ತಮ ಪ್ರೆಸ್ಸಿಂಗ್​ನೊಂದಿಗೆ ಬ್ಯಾಟ್​ನ ಪಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ. ಇದು ನೋಡುಗರಿಗೆ ರಬ್ಬರ್ ತರಹದ ಎಫೆಕ್ಟ್ ನೀಡಬಹುದು. ಇದೇ ಕಾರಣದಿಂದಾಗಿ ಭಾನುಕಾ ರಾಜಪಕ್ಸೆ ಕೂಡ ಭಾರತೀಯರ ಬ್ಯಾಟ್​ ಮೇಲೆ ರಬ್ಬರ್ ಕೋಟಿಂಗ್ ಇರುವಂತೆ ಭಾಸವಾಗುತ್ತದೆ ಎಂದಿರುವುದು.

Source link

Mahalakshmi Rajayoga: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ – Kannada News | Mahalakshmi Rajayoga: Unlocking Wealth and Success in Vedic Astrology

ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಮತ್ತು ಸಂಚಾರಗಳು ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ ಎಂದು ನಂಬಲಾಗುತ್ತದೆ. ಒಂಬತ್ತು ಗ್ರಹಗಳು ಕಾಲಕ್ರಮೇಣ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವಾಗ ವಿವಿಧ ಶುಭ ಹಾಗೂ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅವುಗಳಲ್ಲಿ ಅತ್ಯಂತ ಶುಭಕರ ಮತ್ತು ಶಕ್ತಿಶಾಲಿ ಯೋಗಗಳಲ್ಲಿ ಒಂದು ಮಹಾಲಕ್ಷ್ಮಿ ರಾಜಯೋಗ. ಈ ಯೋಗವು ಬಹಳ ವಿರಳವಾಗಿ ಕೆಲವೇ ಜಾತಕಗಳಲ್ಲಿ ಕಾಣಿಸಿಕೊಳ್ಳುವುದರಿಂದ, ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಯೋಗ ಹೊಂದಿರುವವರ ಜೀವನದಲ್ಲಿ ಧನ, ವೈಭವ, ಗೌರವ ಮತ್ತು ಸಾಮಾಜಿಕ ಪ್ರತಿಷ್ಠೆ ಸ್ವಾಭಾವಿಕವಾಗಿ ಲಭಿಸುತ್ತವೆ.

ಮಹಾಲಕ್ಷ್ಮಿ ರಾಜಯೋಗವು ಲಗ್ನ ಜಾತಕದಲ್ಲಿ ಮಂಗಳ (ಕುಜ) ಮತ್ತು ಚಂದ್ರ ಒಂದೇ ಭಾವದಲ್ಲಿ ಸೇರುವುದರಿಂದ ರೂಪುಗೊಳ್ಳುತ್ತದೆ. ವಿಶೇಷವಾಗಿ ಈ ಸಂಯೋಗ ಎರಡನೇ, ಒಂಬತ್ತನೇ, ಹತ್ತನೇ ಅಥವಾ ಹನ್ನೊಂದನೇ ಭಾವಗಳಲ್ಲಿ ಇದ್ದರೆ, ಯೋಗದ ಪರಿಣಾಮ ಮತ್ತಷ್ಟು ಬಲವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಗ್ರಹಗಳ ಸಂಯೋಗ ವ್ಯಕ್ತಿಯ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ನೀಡುವ ಜೊತೆಗೆ ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಯಶಸ್ಸನ್ನು ತರಲು ಸಹಾಯಕವಾಗುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಈ ಯೋಗದ ಪ್ರಭಾವ ಇರುವವರು ಕಡಿಮೆ ಪ್ರಯತ್ನದಲ್ಲೇ ಹೆಚ್ಚಿನ ಸಾಧನೆಗಳನ್ನು ಗಳಿಸುವ ಸಾಧ್ಯತೆ ಹೊಂದಿರುತ್ತಾರೆ. ಅವರಿಗೆ ಆರ್ಥಿಕ ಸಂಕಷ್ಟಗಳು ಕಡಿಮೆಯಾಗಿದ್ದು, ಉದ್ಯೋಗ, ವ್ಯಾಪಾರ, ಹೂಡಿಕೆ ಅಥವಾ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ನಿರಂತರ ಪ್ರಗತಿ ಸಾಧಿಸುತ್ತಾರೆ. ಜೊತೆಗೆ ಸಮಾಜದಲ್ಲಿ ಗೌರವ ಮತ್ತು ಪ್ರಭಾವ ಹೆಚ್ಚಾಗಿ, ನಾಯಕತ್ವ ಗುಣಗಳು ಬೆಳೆಯುತ್ತವೆ.

ಒಟ್ಟಾರೆ, ಮಹಾಲಕ್ಷ್ಮಿ ರಾಜಯೋಗವು ಲಕ್ಷ್ಮೀ ದೇವಿಯ ಕೃಪೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಯೋಗವಿರುವವರ ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ಯಶಸ್ಸು ಸದಾ ಜೊತೆಯಾಗಿರುತ್ತದೆ ಎಂದು ವೈದಿಕ ಜ್ಯೋತಿಷ್ಯ ತಿಳಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸತ್ತಿನಲ್ಲಿ ರಾಜಕೀಯ ಸಮರ, ಮಾರ್ಚ್​ 9ರಂದು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ – Kannada News | Lok Sabha Speaker Om Birla No Confidence Motion: March 9 Vote Likely, Key Details here

ನವದೆಹಲಿ, ಫೆಬ್ರವರಿ 11: ಲೋಕಸಭಾ ಸ್ಪೀಕರ್ ಓಂ ಬಿರ್ಲಾ(Om Birla) ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಮಾರ್ಚ್ 9 ರಂದು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಓಂ ಬಿರ್ಲಾ ಅವರನ್ನು ಲೋಕಸಭಾ ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಆರಂಭಿಸಿರುವಂತೆಯೇ ಈ ಬೆಳವಣಿಗೆ ಸಂಭವಿಸಿದೆ.

ಕಾಂಗ್ರೆಸ್(Congress) ಪಕ್ಷವು ಇತರೆ ವಿರೋಧ ಪಕ್ಷಗಳೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಗೊತ್ತುವಳಿಯ ನೋಟಿಸ್​ ಅನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಅವರಿಗೆ ಫೆಬ್ರವರಿ 10ರಂದು ಸಲ್ಲಿಸಿತ್ತು. ಇದಾದ ಬಳಿಕ ಓಂ ಬಿರ್ಲಾ ಸದನದಿಂದ ಹಿಂದೆ ಸರಿದಿದ್ದಾರೆ.

ಸಂವಿಧಾನದ 96ನೇ ವಿಧಿ ಏನು ಹೇಳುತ್ತೆ?
ಸಂವಿಧಾನದ 94C ವಿಧಿಯು ಲೋಕಸಭೆಯ ಸ್ಪೀಕರ್ ಅಥವಾ ಉಪ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ನಿಬಂಧನೆಗಳ ಬಗ್ಗೆ ಹೇಳುತ್ತದೆ. ಸಂವಿಧಾನದ 96 ನೇ ವಿಧಿಯು ಸ್ಪೀಕರ್‌ಗೆ ಸದನದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಸ್ಪೀಕರ್ ಅನ್ನು ಪದಚ್ಯುತಗೊಳಿಸುವ ನಿರ್ಣಯದ ಮೇಲೆ ಸ್ಪೀಕರ್ ತಮ್ಮ ಮತ ಚಲಾಯಿಸಬಹುದು, ಆದರೆ ಸಮಬಲದ ಸಂದರ್ಭದಲ್ಲಿ ಮತದಾನದಿಂದ ದೂರವಿರಬಹುದು.

ಮತ್ತಷ್ಟು ಓದಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು

ಲೋಕಸಭೆಯಲ್ಲಿ ಗದ್ದಲ
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಭಾರತ-ಚೀನಾ ಸಂಘರ್ಷವನ್ನು ಉಲ್ಲೇಖಿಸುವ ಪುಸ್ತಕದ ಆಯ್ದ ಭಾಗವನ್ನು ಓದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಅವಕಾಶ ನೀಡದ ಕಾರಣ ಫೆಬ್ರವರಿ 2 ರಿಂದ ಲೋಕಸಭೆಯಲ್ಲಿ ಗದ್ದಲ ಉಂಟಾಗಿದೆ. ಫೆಬ್ರವರಿ 4 ರಂದು ವಿರೋಧ ಪಕ್ಷಗಳು ಸೃಷ್ಟಿಸಿದ ಗದ್ದಲದಿಂದಾಗಿ, ಪ್ರಧಾನಿ ಮೋದಿಯವರು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಫೆಬ್ರವರಿ 5 ರಂದು ಪ್ರಧಾನಿ ಭಾಷಣವಿಲ್ಲದೆಯೇ ವಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ವಿರೋಧ ಪಕ್ಷದ ಆರೋಪ ಸೇರಿದಂತೆ 4 ಘಟನೆಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಚೀನಾದೊಂದಿಗಿನ 2020 ರ ಬಿಕ್ಕಟ್ಟನ್ನು ಪ್ರಸ್ತಾಪಿಸುವಾಗ ಗಾಂಧಿಯವರು ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಚಾಲಕನ ಪ್ರಾಮಾಣಿಕತೆ: ಕ್ಯಾಬ್​​​​​ನಲ್ಲಿ ಬ್ಯಾಗ್ ಮರೆತ ಪ್ರಯಾಣಿಕನಿಗಾಗಿ ಮಧ್ಯರಾತ್ರಿ ಹುಡುಕಾಟ ನಡೆಸಿದ ಚಾಲಕ – Kannada News | Cab Driver Uttam Who Won Kannadigas’ Hearts: Story of Returning Lost Passport

ಬೆಂಗಳೂರು, ಫೆ,11: ನಗರದಲ್ಲಿ ಕ್ಯಾಬ್​​​, ಬಸ್​​​​ ಚಾಲಕರ ಪ್ರಾಮಾಣಿಕತೆ ಮೆರೆದ ಸುದ್ದಿಗಳು ಆಗ್ಗಾಗೆ ವೈರಲ್​ ಆಗುತ್ತ ಇರುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ (Bangalore cab driver) ಇಂತಹದೇ ಘಟನೆಯೊಂದು ವೈರಲ್​ ಆಗಿದೆ. ಬೆಂಗಳೂರಿನ ಕ್ಯಾಬ್ ಚಾಲಕ ಉತ್ತಮ್ ಅವರ ಪ್ರಾಮಾಣಿಕತೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಕಂಪನಿಯೊಂದರ ಮಾನ್ಯೇಜರ್​​​​​​ ಗ್ಲೆನ್ ಇವಾನ್ ಎಂಬುವವರು ತಮ್ಮ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಇರುವ ಬ್ಯಾಗ್​​ನ್ನು ಕ್ಯಾಬ್​​ನಲ್ಲೇ ಮರೆತು ಹೋಗಿದ್ದರು. ಇದನ್ನು ನೋಡಿದ ಕ್ಯಾಬ್​​ ಚಾಲಕ ಉತ್ತಮ್​​​​​, ಈ ಬ್ಯಾಗಿನ ಮಾಲೀಕರನ್ನು ಹುಡುಕಲು ಆರಂಭಿಸಿದ್ದಾರೆ. ಪಾಸ್‌ಪೋರ್ಟ್ ನಲ್ಲಿರುವ ವಿಳಾಸ ಮೂಲಕ ಗ್ಲೆನ್ ಇವಾನ್ ಅವರ ಪ್ರದೇಶಕ್ಕೆ ಹೋಗಿದ್ದಾರೆ. ​​​ಅಲ್ಲಿರುವ ಸ್ಥಳೀಯರ ಬಳಿಯೂ ಕೇಳಿದ್ರು ಕೂಡ ಯಾರೂ ಕೂಡ ಸರಿಯಾಗಿ ಉತ್ತರಿಸಿಲ್ಲ. ಕೊನೆಗೆ ಗ್ಲೆನ್ ಇವಾನ್ ಅವರ ತಂದೆಯ ಅದೇ ರಸ್ತೆಯಲ್ಲಿ ಸಿಕ್ಕಿದ್ದಾರೆ. ಅವರ ಜತೆಗೆ ಹೋಗಿ ಉತ್ತಮ್​​​​​​ ಬ್ಯಾಗ್​​ ನೀಡಿದ್ದಾರೆ. ಈ ಬಗ್ಗೆ ಗ್ಲೆನ್ಲಿಂಗ್ ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಬೆಂಗಳೂರಿನ ನಿಜವಾದ ಹೀರೋ ಉತ್ತಮ್, ನಾನು ಮಧ್ಯರಾತ್ರಿ 2.30ರ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಮನೆಗೆ ಕ್ಯಾಬ್​​​ ಒಂದರಲ್ಲಿ ಬಂದೆ. ತುಂಬಾ ನಿದ್ರೆ ಬರುತ್ತಿದ್ದ ಕಾರಣ, ಕಾರಿನಲ್ಲಿ ಗಾಢವಾಗಿ ನಿದ್ದೆಗೆ ಜಾರಿದೆ. ಈ ವೇಳೆ, ನಿದ್ದೆ ಕಣ್ಣಿನಲ್ಲೇ ಕ್ಯಾಬ್​​​ನಿಂದ ಇಳಿದು ಮನೆಗೆ ಬಂದೆ, ಈ ವೇಳೆ ನನ್ನ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಕಾರಿನಲ್ಲೇ ಮರೆತು ಬಂದಿದ್ದೇನೆ. ಬೆಳಿಗ್ಗೆ 10:30 ರ ವೇಳೆ ಅಪ್ಪ, ನಿನ್ನ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಬ್ಯಾಗ್​​ ಕಳೆದುಕೊಂಡಿದ್ದೀಯಾ ಎಂದು ಕೇಳಿದ್ದಾರೆ. ಅಲ್ಲಿಯವರೆಗೆ ನನಗೆ ಈ ಬ್ಯಾಗ್​​​​ ಕಳೆದು ಹೋಗಿದೆ ಎಂಬುದು ಗೊತ್ತೇ ಇರಲಿಲ್ಲ ಎಂದು ಗ್ಲೆನ್ ಇವಾನ್ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಉತ್ತಮ್​​ ಅವರು ಪಾಸ್‌ಪೋರ್ಟ್ ನಲ್ಲಿ ವಿಳಾಸ ಇದ್ದ ಕಾರಣ ಮನೆಯ ಹತ್ತಿರ ಬಂದಿದ್ದಾರೆ. ಆದರೆ ನಮ್ಮ ಮನೆ ಯಾವುದು ಎಂದು ಅವರಿಗೆ ಗೊತ್ತಾಗಿಲ್ಲ. ಅಕ್ಕಪಕ್ಕದ ಮನೆಯವರ ಬಾಗಿಲು ಬಡಿದು, ನಮ್ಮ ಮನೆಯ ವಿಳಾಸ ಕೇಳಿದ್ದಾರೆ. ಅದೃಷ್ಟವಶಾತ್ ಅದೇ ಬೀದಿಯಲ್ಲಿ ನನ್ನ ತಂದೆಯನ್ನು ಭೇಟಿಯಾಗಿದ್ದಾರೆ. ನಂತರ ನಮ್ಮ ಮನೆಗೆ ಬಂದು ನನ್ನ ದಾಖಲೆಗಳನ್ನು ನೀಡಿದ್ದಾರೆ. ಆ ಬ್ಯಾಗ್​ನಲ್ಲಿ​​​ ಮೌಲ್ಯಯುತವಾದ ದಾಖಲೆಗಳು ಹಾಗೂ ವಸ್ತುಗಳು ಇತ್ತು. ಉತ್ತಮ್​​ ಅವರ ಪ್ರಾಮಾಣಿಕತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಗ್ಲೆನ್ ಇವಾನ್ ಹೇಳಿದ್ದಾರೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್‌ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್​​​ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ ‘ಸಖಿ ಆಟೋ’

ಈ ಪೋಸ್ಟ್​​ ಹಂಚಿಕೊಂಡ ನಂತರ ಇನ್ಸ್ಟಾಗ್ರಾಮ್​​ನಲ್ಲಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯಾಕ್​​ ಚಾಲಕನ ಪ್ರಾಮಾಣಿಕತೆಗೆ ಶಬ್ಬಾಷ್​​ ಎಂದು ಹೇಳಿದ್ದಾರೆ. ಉತ್ತಮ್ – ಪ್ರಾಮಾಣಿಕ ಮತ್ತು ಒಳ್ಳೆಯ ವ್ಯಕ್ತಿಯಂತೆ ಕಾಣಿಸುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಎಂತಹ ಅದ್ಭುತ ಮನುಷ್ಯ. ನಿಮ್ಮ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಕಳೆದುಕೊಂಡರೆ ಎಷ್ಟು ನೋವಾಗುತ್ತಿತ್ತು, ಅಷ್ಟೆ, ನಿಮ್ಮ ಎಲ್ಲಾ ವಸ್ತುಗಳು ಮರಳಿ ನೀಡಿದು ಕೂಡ ಸಂತೋಷವಾಗಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಹೇರ್​​ಸ್ಟೈಲ್​ನಲ್ಲಿ ಕಾಣಿಸಿಕೊಂಡ ಮಾಳು ನಿಪ್ಪನಾಳ – Kannada News | Malu Nipanal’s New Hairstyle Goes viral After Bigg Boss

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಮಾಳು ನಿಪ್ಪನಾಳ ಅವರು ಹೊಸ ಹೇರ್​​ಸ್ಟೈಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಚಾಲೆಂಜ್ ಒಂದರಲ್ಲಿ ಅವರು ತಲೆಯ ಎರಡೂ ಸೈಡ್ ಕೂದಲು ಕಟ್ ಮಾಡಿಸಿಕೊಂಡು, ಮಧ್ಯದಲ್ಲಿ ಮಾತ್ರ ಕೂದಲು ಬಿಟ್ಟುಕೊಂಡಿದ್ದರು. ಆದರೆ, ಈಗ ಅವರು ಹೊಸ ಹೇರ್​​ಸ್ಟೈಲ್​ ಅಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಆ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫ್ಲ್ಯಾಟ್, ಚಿನ್ನದ ವ್ಯವಹಾರದಲ್ಲಿ ಉದ್ಯಮಿಗೆ ಕೋಟಿ ಕೋಟಿ ದೋಖಾ! ಶೆಟ್ಟಿ ದಂಪತಿ ಮೇಲೆ ಕೇಸ್ – Kannada News | Udupi Flat Gold Fraud Case Against Couple

ಸುಹಾಸಿನಿ ಶೆಟ್ಟಿ ಹಾಗೂ ಅವರ ಪತಿ ಪುನೀತ್ ಶೆಟ್ಟಿ

ಉಡುಪಿ, ಫೆಬ್ರವರಿ 11: ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನದ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿಗೆ ಸುಮಾರು 4.78 ಕೋಟಿ ರೂ. ವಂಚನೆ ನಡೆಸಿರುವ ಆರೋಪ ಉಡುಪಿಯ (Udupi) ದಂಪತಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸುಹಾಸಿನಿ ಶೆಟ್ಟಿ ಹಾಗೂ ಅವರ ಪತಿ ಪುನೀತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಎರಡು ವರ್ಷಗಳಲ್ಲಿ ಹಂತ ಹಂತವಾಗಿ ವಂಚನೆ

ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ ಸುಹಾಸಿನಿ, 2024ರ ಜನವರಿಯಿಂದ ಜೂನ್‌ವರೆಗೆ ಹಂತ ಹಂತವಾಗಿ 4.78 ಕೋಟಿ ರೂ. ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹರಾಜಿನಲ್ಲಿ ಚಿನ್ನ, ಫ್ಲ್ಯಾಟ್ ಹಾಗೂ ಸ್ಕ್ರಾಪ್ ವ್ಯವಹಾರದಲ್ಲಿ ಲಾಭಕರ ಹೂಡಿಕೆ ಮಾಡಿಕೊಡುವುದಾಗಿ ಭರವಸೆ ನೀಡಿ ಹಣ ಪಡೆದುಕೊಂಡಿದ್ದರೂ, ನಂತರ ಯಾವುದೇ ಆಸ್ತಿಯನ್ನೂ ಖರೀದಿಸಿ ಕೊಡದೆ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಇದನ್ನೂ ಓದಿ ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪಡೆದು ಟೋಪಿ ಹಾಕುತ್ತಿದ್ದ ಪೀಟರ್ ಡ್ಯಾಡಿ ಮನೆ ಮೇಲೆ ಸಿಐಡಿ ದಾಳಿ!

ಈ ಬಗ್ಗೆ 2024ರಲ್ಲಿ ಉಡುಪಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸುಹಾಸಿನಿ ಶೆಟ್ಟಿ ನ್ಯಾಯಾಲಯದಿಂದ ಪ್ರಕರಣಕ್ಕೆ ಸ್ಟೇ ಆದೇಶ ಪಡೆದಿದ್ದರು ಎನ್ನಲಾಗಿದೆ. ನಂತರ ಕಿಶೋರ್ ಶೆಟ್ಟಿ ಮತ್ತು ನವೀನ್ ಮೂಲ್ಕಿ ಎನ್ನುವವರ ಮೂಲಕ ಸಂಧಾನ ಮಾತುಕತೆ ನಡೆದಿದ್ದರೂ ಅದು ವಿಫಲವಾಗಿದೆ. ಇದೀಗ ಸುಹಾಸಿನಿ ಮತ್ತು ಪತಿ ಮಣಿಪಾಲದಿಂದ ಮಂಗಳೂರಿಗೆ ಸ್ಥಳಾಂತರಗೊಂಡ ಹಿನ್ನೆಲೆ, ಮಮತಾ ಶೆಟ್ಟಿ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಮರು ತನಿಖೆಗೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಮರು ಪರಿಶೀಲಿಸುವುದಾಗಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vande Mataram New Guidelines: ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡುವುದು ಕಡ್ಡಾಯ – Kannada News | Vande Mataram Mandatory: Home Ministry Directive for Govt Events and Schools, 6 Stanzas Before National Anthem

ಅಮಿತ್ ಶಾ ಹಾಗೂ ಇತರೆ ನಾಯಕರುImage Credit source: Frontline

ನವದೆಹಲಿ, ಫೆಬ್ರವರಿ 11: ರಾಷ್ಟ್ರಗೀತೆ ‘ಜನಗಣಮನ’ದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ (Vande Mataram)ಗೀತೆಯನ್ನು ಹಾಡುವುದು ಕೂಡ ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಆದೇಶದಲ್ಲಿ, ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡಬೇಕು ಎಂದು ಹೇಳಲಾಗಿದೆ. ಹಾಗೆಯೇ ಗೀತೆಯನ್ನು ನುಡಿಸಿದರೆ ಅಥವಾ ಹಾಡಿದರೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ತಿಳಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ತನ್ನ ನಿರ್ದೇಶನದಲ್ಲಿ ಆರು ಚರಣಗಳನ್ನು ವಂದೇ ಮಾತರಂ’ ಗೀತೆಯ 3.10 ನಿಮಿಷಗಳ ಗೀತೆಯನ್ನು ನುಡಿಸಬೇಕು ಅಥವಾ ಹಾಡಬೇಕು ಎಂದು ಹೇಳಿದೆ. ಇದರಲ್ಲಿ ತ್ರಿವರ್ಣ ಧ್ವಜ ಹಾರಿಸುವಾಗ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ಸಮಯದಲ್ಲಿ, ಅವರ ಭಾಷಣಗಳು ಮತ್ತು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೊದಲು ಮತ್ತು ನಂತರ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರವೂ ಸೇರಿದೆ. ಯಾವುದೇ ಸಾಕ್ಷ್ಯಚಿತ್ರಗಳ ಪ್ರದರ್ಶನಗಳ ಮಧ್ಯೆ ಗೀತೆ ಹಾಡಿದರೆ ಎದ್ದುನಿಲ್ಲುವ ಅಗತ್ಯವಿಲ್ಲ.

6 ಚರಣಗಳಿರುವ ‘ವಂದೇ ಮಾತರಂ’ ಗೀತೆಯನ್ನು ಹಾಡುವುದು ಕಡ್ಡಾಯ
ಈ ನಿರ್ದೇಶನವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೀಡಲಾಗಿದೆ. ಇಲ್ಲಿಯವರೆಗೆ, ವಂದೇ ಮಾತರಂ ಹಾಡಲು ಯಾವುದೇ ಅಧಿಕೃತ ಶಿಷ್ಟಾಚಾರವಿರಲಿಲ್ಲ. ಆದರೆ ಜನ ಗಣ ಮನ ಗೀತೆಯು ರಾಗ, ಸಮಯ ಮತ್ತು ಗಾಯನದ ಬಗ್ಗೆ ಸ್ಪಷ್ಟ ನಿಯಮಗಳನ್ನು ಹೊಂದಿತ್ತು. ಹಾಡಿನ ವಿಸ್ತೃತ, ಆರು-ಚರಣಗಳ ಆವೃತ್ತಿಯನ್ನು ಇಲ್ಲಿಯವರೆಗೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಿರಲಿಲ್ಲ, ಆದರೆ ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ.

ಮತ್ತಷ್ಟು ಓದಿ: ಬ್ರಿಟಿಷರ ನಿದ್ದೆ ಕಸಿದುಕೊಂಡಿದ್ದ ವಂದೇ ಮಾತರಂ ಗೀತೆಗೆ 150 ವರ್ಷ, ಈ ಹಾಡಿನ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ

ಯಾವಾಗ ವಂದೇ ಮಾತರಂ ಹಾಡಬೇಕು?
ನಾಗರಿಕ ಪುರಸ್ಕಾರ ಸಮಾರಂಭಗಳು, ಸರ್ಕಾರ ಆಯೋಜಿಸುವ ರಾಜ್ಯ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನ, ಅಖಿಲ ಭಾರತ ರೇಡಿಯೋ ಮತ್ತು ದೂರದರ್ಶನದಲ್ಲಿ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣದ ಮೊದಲು ಮತ್ತು ನಂತರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದೊಳಗಿನ ಔಪಚಾರಿಕ ರಾಜ್ಯ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರು-ಲೆಫ್ಟಿನೆಂಟ್ ಗವರ್ನರ್ ಅವರ ಆಗಮನ ಮತ್ತು ನಿರ್ಗಮನ, ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಹೊರತರುವ ಸಮಯ ಮತ್ತು ಭಾರತ ಸರ್ಕಾರವು ವಿಶೇಷ ಆದೇಶಗಳನ್ನು ಹೊರಡಿಸಬಹುದಾದ ಯಾವುದೇ ಇತರ ಸಂದರ್ಭಗಳಲ್ಲಿ ಸೇರಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಂದೇ ಮಾತರಂ ಹಾಡುವ ಮೊದಲು ಡ್ರಮ್ ರೋಲ್
ರಾಷ್ಟ್ರಗೀತೆ ನುಡಿಸಲಾಗುವುದು ಎಂದು ಪ್ರೇಕ್ಷಕರಿಗೆ ಸೂಚಿಸಲು ಡ್ರಮ್ ರೋಲ್ ಅದರ ಮೊದಲು ಇರುತ್ತದೆ. ರೋಲ್ ನಿಧಾನಗತಿಯಲ್ಲಿ ಪ್ರಾರಂಭವಾಗುತ್ತದೆ, ನಂತರ ಗರಿಷ್ಠ ಸಂಭವನೀಯ ಧ್ವನಿ ಮಟ್ಟವನ್ನು ತಲುಪುತ್ತದೆ, ಮತ್ತು ನಂತರ ಕ್ರಮೇಣ ಅದರ ಮೂಲ ಕಡಿಮೆ ಪಿಚ್‌ಗೆ ಮರಳುತ್ತದೆ, ಆದರೆ 7 ನೇ ಬೀಟ್‌ನವರೆಗೆ ಕೇಳಿಸುತ್ತದೆ. ನಂತರ ರಾಷ್ಟ್ರಗೀತೆ ಪ್ರಾರಂಭವಾಗುವ ಮೊದಲು ಒಂದು ಬೀಟ್‌ನ ವಿರಾಮ ಇರುತ್ತದೆ.

ಶಾಲೆಗಳಲ್ಲಿಯೂ ‘ವಂದೇ ಮಾತರಂ’ ಹಾಡಲು ಸಲಹೆ

ಎಲ್ಲಾ ಶಾಲೆಗಳು ತಮ್ಮ ದಿನವನ್ನು ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಪ್ರಾರಂಭಿಸಲಾಗುತ್ತದೆ ಇನ್ನುಮುಂದೆ ಅದರ ಜತೆ ವಂದೇ ಮಾತರಂ ಕೂಡ ಹಾಡಬಹುದು. ಈ ವರ್ಷ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನ 150 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.

ಬಂಕಿಮ್ ಚಂದ್ರ 1875 ರಲ್ಲಿ ದೇಶಭಕ್ತಿ ಗೀತೆ ‘ವಂದೇ ಮಾತರಂ’ ರಚನೆ
ಈ ಸಂಯೋಜನೆಯ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ವರದಿಗಳ ಪ್ರಕಾರ, ಬ್ರಿಟಿಷ್ ಆಡಳಿತಗಾರರು ಪ್ರತಿ ಸಮಾರಂಭದಲ್ಲಿ ಇಂಗ್ಲೆಂಡ್ ರಾಣಿಗೆ ಗೌರವ ಸಲ್ಲಿಸುವ ‘ಸೇವ್​ ದಿ ಕ್ವೀನ್’ ಎಂಬ ಹಾಡನ್ನು ಹಾಡುವುದನ್ನು ಕಡ್ಡಾಯಗೊಳಿಸಿದ್ದರು. ಇದು ಬಂಕಿಮ್ ಚಂದ್ರ ಸೇರಿದಂತೆ ಅನೇಕ ದೇಶವಾಸಿಗಳನ್ನು ಕೆರಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು 1874 ರಲ್ಲಿ ವಂದೇ ಮಾತರಂ ಎಂಬ ಹಾಡನ್ನು ರಚಿಸಿದರು.

ಈ ಹಾಡಿನ ಕೇಂದ್ರ ವಿಷಯವೆಂದರೆ ಭಾರತದ ಭೂಮಿಯನ್ನು ತಾಯಿ ಎಂದು ಸಂಬೋಧಿಸುವುದು. ಈ ಹಾಡನ್ನು ನಂತರ ಅವರ 1882 ರ ಕಾದಂಬರಿ ‘ಆನಂದಮಠ’ದಲ್ಲಿ ಸೇರಿಸಲಾಯಿತು. ಐತಿಹಾಸಿಕ ಮತ್ತು ಸಾಮಾಜಿಕ ರಚನೆಗಳಿಂದ ಹೆಣೆಯಲಾದ ಈ ಕಾದಂಬರಿಯು ದೇಶದಲ್ಲಿ ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸಲು ಗಮನಾರ್ಹವಾಗಿ ಕೊಡುಗೆ ನೀಡಿತು.

ವಂದೇ ಮಾತರಂ ಅನ್ನು ಮೊದಲ ಬಾರಿಗೆ ಹಾಡಿದ್ದು 1896 ರಲ್ಲಿ,  ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಲ್ಪಾವಧಿಯಲ್ಲಿಯೇ, ದೇಶಭಕ್ತಿಯ ಸಂಕೇತವಾದ ಈ ಹಾಡು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯ ಕ್ರಾಂತಿಕಾರಿಗಳ ನೆಚ್ಚಿನ ಹಾಡು ಮತ್ತು ಮುಖ್ಯ ಘೋಷಣೆಯಾಯಿತು. ದೇಶಾದ್ಯಂತ, ಕ್ರಾಂತಿಕಾರಿ ಮಕ್ಕಳು, ಯುವಕರು, ವಯಸ್ಕರು ಮಾತ್ರವಲ್ಲದೆ, ಭಾರತೀಯ ಮಹಿಳೆಯರು ಸಹ ಸ್ವಾತಂತ್ರ್ಯ ಹೋರಾಟದ ಅದೇ ಘೋಷಣೆಯನ್ನು ಪ್ರತಿಧ್ವನಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ: ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ – Kannada News | Karnataka Congress Rift Deepens: Tour Politics vs Resort Politics Amid Leadership Change Buzz

ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ!Image Credit source: tv9

ಬೆಂಗಳೂರು, ಫೆಬ್ರವರಿ 11: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಕುರ್ಚಿ ಕದನ ತಾರಕಕ್ಕೇರುವ ಸುಳಿವುಗಳು ಗೋಚರಿಸುತ್ತಿವೆ. ಟೂರ್ ಪಾಲಿಟಿಕ್ಸ್ ಹಾಗೂ ರೆಸಾರ್ಟ್ ಪಾಲಿಟಿಕ್ಸ್ ಜತೆಗೆ ಆಂತರಿಕ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಸಕರ ವಿದೇಶ ಪ್ರವಾಸ ಯೋಜನೆ ಇನ್ನೂ ಜೀವಂತವಾಗಿದ್ದು, ಇದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಡಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 35 ಶಾಸಕರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸಿರುವುದು ಗಮನ ಸೆಳೆದಿದೆ.

ಫೆಬ್ರವರಿ 16ರಿಂದ ಮಾರ್ಚ್ 3ರವರೆಗೆ ಪ್ರವಾಸಕ್ಕೆ ಪ್ಲ್ಯಾನ್ ಮಾಡಲಾಗಿದ್ದು, ಇದರ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬ ಅನುಮಾನಗಳು ಬಲವಾಗಿವೆ. ವಿದೇಶಿ ಪ್ರವಾಸದ ಮೂಲಕ ಶಾಸಕರ ವಿಶ್ವಾಸವನ್ನು ಗಟ್ಟಿಗೊಳಿಸಿಕೊಳ್ಳುವ ಲೆಕ್ಕಾಚಾರ ನಡೆದಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್

ಟೂರ್ ಪಾಲಿಟಿಕ್ಸ್​ಗೆ ಕೌಂಟರ್ ಆಗಿ ಕೆಲ ಶಾಸಕರು ರೆಸಾರ್ಟ್ ರಾಜಕೀಯದತ್ತ ಮುಖ ಮಾಡುವ ಸಾಧ್ಯತೆಯೂ ಇದೆ. ಪ್ರಭಾವಿ ನಾಯಕರ ಬೆಂಬಲಿತ ಶಾಸಕರು ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ರೆಸಾರ್ಟ್‌ನಲ್ಲಿ ಸಭೆ ನಡೆಸುವ ಮೂಲಕ ಮತ್ತೊಂದು ಶಕ್ತಿ ಪ್ರದರ್ಶನ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ ಎಂಬ ಸುಳಿವು ದೊರೆತಿದೆ.

ಡಿಕೆಶಿ ದೆಹಲಿಯಿಂದ ವಾಪಸಾದ ಬೆನ್ನಲ್ಲೇ ಗರಿಗೆದರಲಿದೆ ರಾಜಕೀಯ ಚಟುವಟಿಕೆ

ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಿಂದ ವಾಪಸ್ ಬಂದ ಬಳಿಕ ಈ ರಾಜಕೀಯ ಬೆಳವಣಿಗೆಗಳು ಇನ್ನಷ್ಟು ಚುರುಕು ಪಡೆಯುವ ಸಾಧ್ಯತೆ ಇದೆ. ಬೆಂಬಲಿಗ ಶಾಸಕರು ಸಭೆ ಸೇರಿ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಕುರ್ಚಿ ಕಾಳಗ ದೆಹಲಿಗೆ ಶಿಫ್ಟ್: ದೆಹಲಿ ತಲುಪುತ್ತಿದ್ದಂತೆಯೇ ಡಿಕೆಶಿ ನಂಬರ್ ಗೇಮ್!

ಫಾರಿನ್ ಟ್ರಿಪ್ ಮೂಲಕ ಒಂದು ಸಂದೇಶ ನೀಡಲು ಹಾಗೂ ರೆಸಾರ್ಟ್ ಪಾಲಿಟಿಕ್ಸ್ ಮೂಲಕ ಮತ್ತೊಂದು ಸಂದೇಶ ರವಾನಿಸಲು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ಇದೇ ವೇಳೆ, ವಿದೇಶಿ ಪ್ರವಾಸದ ಮಾಹಿತಿಯನ್ನು ‘ಕೈ’ ನಾಯಕರು ಬಹುತೇಕ ಗುಟ್ಟಾಗಿಯೇ ಇಟ್ಟಿರುವುದು ಕುತೂಹಲವನ್ನು ಹೆಚ್ಚಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣವೀರ್​ಗೆ ನೀಡಿದ ಭದ್ರತೆಯಿಂದ ನೆರೆಯವರಿಗೆ ತೊಂದರೆ; ಬದಲಾಗುತ್ತಾ ದಂಪತಿ ಮನೆ? – Kannada News | Ranveer Singh Threat: Extortion and Police Security Boost Amid ‘Dhurandhar 2’ Buzz

ಮುಂಬರುವ ಚಿತ್ರ ‘ಧುರಂಧರ್ 2’ಗಾಗಿ (Dhurandhar 2) ಸುದ್ದಿಯಲ್ಲಿರುವ ನಟ ರಣವೀರ್ ಸಿಂಗ್ ಅವರಿಗೆ ಗಂಭೀರ ಬೆದರಿಕೆ ಎದುರಾಗಿದೆ. ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದ್ದು, ಕೋಟ್ಯಂತರ ರೂಪಾಯಿ ಪರಿಹಾರ ನೀಡುವಂತೆ ಕೇಳಲಾಗಿದೆ. ಈ ಘಟನೆಯ ನಂತರ, ಮುಂಬೈ ಪೊಲೀಸರು ತಕ್ಷಣ ಕ್ರಮ ಕೈಗೊಂಡು ರಣವೀರ್ ಸಿಂಗ್ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಈ ರೀತಿಯ ಘಟನೆ ಮರುಕಳಿಸುತ್ತಿರುವುದರಿಂದ ಹಳೆಯ ಬಾಲಿವುಡ್ ಸ್ಥಿತಿ ಮರಳುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರ ಜುಹುವಿನಲ್ಲಿರುವ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ನಂತರ ರಣವೀರ್ ಸಿಂಗ್ ಅವರಿಗೆ ಈ ಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್‌ನಲ್ಲಿ ವಾಯ್ಸ್ ನೋಟ್ ಕಳುಹಿಸಿ ನೇರವಾಗಿ ಅವರಿಗೆ ಬೆದರಿಕೆ ಹಾಕಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬೆದರಿಕೆಯ ನಂತರ, ರಣವೀರ್ ಸಿಂಗ್ ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆದರಿಕೆ ಬಗ್ಗೆ ಮಾಹಿತಿ ಬಂದ ತಕ್ಷಣ ಮುಂಬೈ ಪೊಲೀಸರು ಕ್ರಮ ಕೈಗೊಂಡರು. ರಣವೀರ್ ಸಿಂಗ್ ಅವರ ಮನೆಯ ಹೊರಗೆ ಹೆಚ್ಚುವರಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದ್ದು, ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. ವಾಯ್ಸ್ ನೋಟ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಸೈಬರ್ ಸೆಲ್ ಮತ್ತು ಅಪರಾಧ ವಿಭಾಗದ ಸಹಾಯವನ್ನು ಕೋರಲಾಗುತ್ತಿದೆ. ಬೆದರಿಕೆ ಬಗ್ಗೆ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಕರೆ ವಿವರಗಳು ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ.

ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ವಾಸಿಸುವ ಸೊಸೈಟಿಯ ನಿವಾಸಿಗಳು ಸಹ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದು ಸೊಸೈಟಿಯ ನಿವಾಸಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಸೊಸೈಟಿ ಆಡಳಿತವು ಈ ನಿಟ್ಟಿನಲ್ಲಿ ಪೊಲೀಸರಿಗೆ ಪತ್ರ ಬರೆದು ತನ್ನ ನಿಲುವನ್ನು ವ್ಯಕ್ತಪಡಿಸಿದೆ. ನಟನ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದರೆ, ಮತ್ತೊಂದೆಡೆ, ಈ ಹೆಚ್ಚಿದ ಭದ್ರತೆಯು ನಿವಾಸಿಗಳ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ನಟನಿಗೆ ಮನೆ ಬದಲಿಸುವಂತೆ ಒತ್ತಾಯ ಬರಬಹುದು.

ಇದನ್ನೂ ಓದಿ: ‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು

ಈ ಎರಡೂ ಘಟನೆಗಳು ಮುಂಬೈನ ಪ್ರಮುಖ ನಟರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ರಣವೀರ್ ಸಿಂಗ್‌ಗೆ ಬೆದರಿಕೆ ಹಾಕಿರುವ ಪ್ರಕರಣಕ್ಕೂ ರೋಹಿತ್ ಶೆಟ್ಟಿ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಘಟನೆಗೂ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:24 am, Wed, 11 February 26

Source link