Category Archives: Blog

Your blog category

ತ್ರಿವೇಣಿ ಕಾದಂಬರಿ ಆಧಾರಿತ ‘ಸರಳ ಸುಬ್ಬರಾವ್’ ಸಿನಿಮಾ ಫೆ.20ಕ್ಕೆ ರಿಲೀಸ್

Source link

ಅಮೆರಿಕದ ಟ್ಯಾರಿಫ್ ಪರಿಣಾಮ ನಡುವೆಯೂ ಜನವರಿಯಲ್ಲಿ ಭಾರತದ ರಫ್ತು ಶೇ. 13.16 ಹೆಚ್ಚಳ – Kannada News | India’s exports rise on January 2026, and trade deficit too widens

ನವದೆಹಲಿ, ಫೆಬ್ರುವರಿ 16: ಜನವರಿ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕು ಮತ್ತು ಸೇವೆಗಳ ರಫ್ತು (India total exports) 80.45 ಬಿಲಿಯನ್ ಡಾಲರ್ ಮೊತ್ತದಷ್ಟಿದೆ. ಕಳೆದ ವರ್ಷದ (2025) ಜನವರಿಯಲ್ಲಿ 71.09 ಬಿಲಿಯನ್ ಡಾಲರ್ ರಫ್ತು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 13.16ರಷ್ಟು ರಫ್ತು ಹೆಚ್ಚಳ ಆಗಿದೆ. ಆದರೆ, ಆಮದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ. 76.48 ಬಿಲಿಯನ್ ಡಾಲರ್ ಇದ್ದದ್ದು 90.83 ಬಿಲಿಯನ್ ಡಾಲರ್​ಗೆ ಏರಿದೆ. ಇದರಿಂದ ಒಟ್ಟರೆ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ 5.39 ಬಿಲಿಯನ್ ಡಾಲರ್​ನಿಂದ 10.38 ಬಿಲಿಯನ್ ಡಾಲರ್​ಗೆ ಏರಿದಂತಾಗಿದೆ.

ಸರಕುಗಳ ವ್ಯಾಪಾರ ಕೊರತೆ ಹೆಚ್ಚಳ

ಜನವರಿಯಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 34.68 ಬಿಲಿಯನ್ ಡಾಲರ್ ಇದೆ. ಆರ್ಥಿಕ ತಜ್ಞರು 26 ಬಿಲಿಯನ್ ಡಾಲರ್ ಟ್ರೇಡ್ ಡೆಫಿಸಿಟ್ ನಿರೀಕ್ಷಿಸಿದ್ದರು. ಡಿಸೆಂಬರ್ ತಿಂಗಳಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 25.04 ಬಿಲಿಯನ್ ಡಾಲರ್ ಇತ್ತು.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್​ನಲ್ಲಿ 38.51 ಬಿಲಿಯನ್ ಡಾಲರ್ ಇದ್ದ ಸರಕುಗಳ ರಫ್ತು ಜನವರಿಯಲ್ಲಿ 36.56 ಬಿಲಿಯನ್ ಡಾಲರ್​ಗೆ ಇಳಿದಿದೆ. ಆದರೆ, ಹಿಂದಿನ ವರ್ಷದ ಜನವರಿಗೆ ಹೋಲಿಸಿದರೆ ಸರಕು ರಫ್ತು ತುಸು ಏರಿಕೆ ಆಗಿದೆ. ಇದೇ ವೇಳೆ, ಸರಕುಗಳ ಆಮದು 63.55 ಬಿಲಿಯನ್ ಡಾಲರ್​ನಿಂದ 71.24 ಬಿಲಿಯನ್ ಡಾಲರ್​ಗೆ ಏರಿದೆ. ಹೀಗಾಗಿ, ಸರಕುಗಳ ಟ್ರೇಡ್ ಡೆಫಿಸಿಟ್ ನಿರೀಕ್ಷೆಮೀರಿ ಹೆಚ್ಚಿದೆ. ಚಿನ್ನ ಮತ್ತು ಬೆಳ್ಳಿ ಆಮದು ಮೌಲ್ಯ ಹೆಚ್ಚಾದ್ದರಿಂದ ಒಟ್ಟಾರೆ ಸರಕು ಆಮದು ಏರಿಕೆ ಆಗಲು ಕಾರಣ ಎನ್ನಲಾಗಿದೆ.

ಭಾರತದ ಮೇಲೆ ಅಮೆರಿಕ ತನ್ನ ಟ್ಯಾರಿಫ್​ಗಳನ್ನು ಈ ತಿಂಗಳು ಕಡಿಮೆ ಮಾಡಿದೆ. ಶೇ. 50ರಷ್ಟು ಇದ್ದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಿದೆ. ಆದರೆ, ಜನವರಿಯಲ್ಲಿ ಶೇ. 50 ಟ್ಯಾರಿಫ್ ಕ್ರಮವೇ ಜಾರಿಯಲ್ಲಿದ್ದದ್ದು. ಹೀಗಾಗಿ, ಅಧಿಕ ಟ್ಯಾರಿಫ್ ನಡುವೆಯೂ ಭಾರತದ ಸರಕುಗಳ ರಫ್ತು ತೀರಾ ಹೆಚ್ಚು ಕುಸಿತ ಕಂಡಿಲ್ಲ ಎಂಬುದು ಗಮನಾರ್ಹ.

ಫೆಬ್ರುವರಿಯಲ್ಲಿ ಭಾರತಕ್ಕೆ ಅಮೆರಿಕದ ಟ್ಯಾರಿಫ್ ಶೇ. 25ರಷ್ಟು ಮಾತ್ರವೇ ಇರಲಿದೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲಿರುವುದರಿಂದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಬಹುದು. ಮಾರ್ಚ್ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಬಹುದು.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

2026ರ ಜನವರಿಯಲ್ಲಿ ಭಾರತದ ರಫ್ತು ದತ್ತಾಂಶ

  • ಸರಕುಗಳ ರಫ್ತು: 36.56 ಬಿಲಿಯನ್ ಡಾಲರ್
  • ಸೇವೆಗಳ ರಫ್ತು: 43.90 ಬಿಲಿಯನ್ ಡಾಲರ್
  • ಒಟ್ಟಾರೆ ರಫ್ತು: 80.45 ಬಿಲಿಯನ್ ಡಾಲರ್
  • ಒಟ್ಟಾರೆ ಆಮದು: 90.83 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಅಜ್ಞಾನಿ, ಮೂರ್ಖ, ಹೇಡಿ’; ಸಲ್ಮಾನ್, ಬಾಬರ್​ಗೆ ಛೀಮಾರಿ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ – Kannada News | Basit Ali Slams Pakistan Team: Agha “Foolish,” Hesson “Ignorant,” Babar Lacks Etiquette

2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026)  ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡ ಹಾಗೂ ನಾಯಕ ಸಲ್ಮಾನ್ ಆಘಾ (Salman Agha) ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಭಿಮಾನಿಗಳಿಂದ ಹಿಡಿದು ಮಾಜಿ ಆಟಗಾರರು ಇಡೀ ತಂಡದ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಸಲ್ಮಾನ್ ಆಘಾ ಅವರನ್ನು ಅಜ್ಞಾನಿ, ಮೂರ್ಖ ಮತ್ತು ಹೇಡಿ ಎಂದು ಜರಿದಿದ್ದಾರೆ. ಸಲ್ಮಾನ್ ಆಘಾ ಅವರ ತಂತ್ರಗಾರಿಕೆಯ ಲೋಪದಿಂದ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋತಿತು ಎಂದಿರುವ ಅಲಿ, ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರನ್ನು ಅಜ್ಞಾನಿ ಎಂದೂ, ಬಾಬರ್ ಆಝಂ ಬ್ಯಾಟಿಂಗ್ ಶಿಷ್ಟಾಚಾರ ಹೊಂದಿಲ್ಲ ಎಂದು ಟೀಕಿಸಿದ್ದಾರೆ.

ತಾಳ್ಮೆ ಕಳೆದುಕೊಂಡ ಬಸಿತ್ ಅಲಿ

ವೃತ್ತಿಪರ ಕ್ರಿಕೆಟ್‌ನಲ್ಲಿ 27 ಶತಕಗಳನ್ನು ಬಾರಿಸಿರುವ ಬಸಿತ್ ಅಲಿ, ಪಾಕಿಸ್ತಾನಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ತಂಡವನ್ನು ತೀವ್ರವಾಗಿ ಟೀಕಿಸಿದರು. ‘ನಾನು ಅಳತೆ ಮೀರಿ ಮಾತನಾಡುತ್ತಿದ್ದೇನೆ ನನ್ನನನು ಕ್ಷಮಿಸಿ. ಕೊಲಂಬೊದಲ್ಲಿ ಇದುವರೆಗೆ ಮೂರು ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೂರನ್ನೂ ಗೆದ್ದಿದೆ ಎಂದು ಆ ಅಜ್ಞಾನಿ ಜನರಿಗೆ ತಿಳಿದಿಲ್ಲ. ನಾವು ಜಿಂಬಾಬ್ವೆ ವಿರುದ್ಧ ಪಂದ್ಯವನ್ನಾಡಿ, ಆಗ ಟಾಸ್ ಗೆದ್ದು ಬೌಲಿಂಗ್ ಮಾಡಿದ್ದರೆ ಓಕೆ, ಏಕೆಂದರೆ ನಮ್ಮ ಸ್ಪಿನ್ ವಿಭಾಗ ಬಲಿಷ್ಠವಾಗಿದೆ. ಹೀಗಾಗಿ ಜಿಂಬಾಬ್ವೆ ತಂಡವನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕಬಹುದಿತ್ತು. ಆದರೆ ಭಾರತದಂತಹ ತಂಡದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಳ್ಳಲು ಇವರಿಗೆ ಹೇಳಿದ್ಯಾರು?

ಸೋಲುತ್ತಾರೆಂದು ಈಗಾಗಲೇ ತಿಳಿದಿತ್ತು

ಅಭಿಷೇಕ್ ಶರ್ಮಾ ಅವರಂತಹ ಆಟಗಾರ ಮೊದಲ ಓವರ್‌ನಲ್ಲೇ ಔಟ್ ಆಗುತ್ತಾರೆ, ಅದು ಕೂಡ ಸಲ್ಮಾನ್ ಆಘಾ ಅವರ ಬೌಲಿಂಗ್‌ನಲ್ಲಿ. ಮೊದಲ ಎರಡು ಓವರ್‌ಗಳಲ್ಲಿ 10 ರನ್‌ಗಳನ್ನು ಬಿಟ್ಟುಕೊಟ್ಟ ಅಘಾ, ಆ ಬಳಿಕ ಬೌಲಿಂಗ್ ಮಾಡಲಿಲ್ಲ. ಅವರು ಮಕ್ಕಳಂತೆ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಸೋಲುತ್ತಾರೆಂದು ನಮಗೆ ಈಗಾಗಲೇ ತಿಳಿದಿತ್ತು. ಹೀಗಾಗಿ ಮಳೆ ಬಂದು ಅಂಕಗಳು ವಿಭಜನೆಯಾಗುತ್ತವೆ ಎಂದು ನಾವು ಆಶಿಸಿದ್ದೆವು. ಮೊದಲು ಬೌಲ್ ಮಾಡಬೇಕೆ ಅಥವಾ ಮೊದಲು ಬ್ಯಾಟ್ ಮಾಡಬೇಕೆ ಎಂದು ತಿಳಿಯದ ಈ ಅಜ್ಞಾನಿಗಳು ಈಗ ಪಾಕಿಸ್ತಾನದ ಮುಖ್ಯ ತರಬೇತುದಾರರಾಗಿದ್ದಾರೆ’.

ENG vs ITA: ಇಟಲಿ ವಿರುದ್ಧ ಇಂಗ್ಲೆಂಡ್​ಗೆ ಪ್ರಯಾಸದ ಗೆಲುವು; ಸೂಪರ್​ 8 ಸುತ್ತಿಗೆ ಎಂಟ್ರಿ

ಬಾಬರ್ ವಿರುದ್ಧ ಕೆರಳಿದ ಅಲಿ

ಇನ್ನು ಬಾಬರ್ ಅವರ ಕಳಪೆ ಆಟದ ಬಗ್ಗೆ ಬಸಿತ್ ಅಲಿ ಪ್ರತಿಕ್ರಿಯಿಸಿ, ‘ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬಾಬರ್ ಅಜಮ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅಕ್ಷರ್ ಪಟೇಲ್ ವಿರುದ್ಧ ಕ್ರಾಸ್ ಶಾಟ್ ಬಾರಿಸುತ್ತಾರೆ. ಯಾರಾದರೂ ಅವರಿಗೆ ಬ್ಯಾಟಿಂಗ್ ಶಿಷ್ಟಾಚಾರವನ್ನು ಕಲಿಸಬೇಕು. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್, ಅವರು ಹೊಡೆದ ಸಿಕ್ಸರ್‌ಗಳನ್ನು ನೋಡಿ. ಇಶಾನ್ ಔಟಾದ ಬಳಿಕ ಅವರು ಪಾಲುದಾರಿಕೆಯನ್ನು ನಿರ್ಮಿಸಿದರು. ಆದರೆ ಬಾಬರ್ ಜೊತೆಯಾಟ ಕಟ್ಟುವ ಕೆಲಸ ಮಾಡದೆ ಬಿಗ್ ಶಾಟ್ ಆಡಲು ಯತ್ನಿಸಿ ವಿಕೆಟ್ ಕಳೆದುಕೊಂಡರು’ ಎಂದು ಬಸಿತ್ ಅಲಿ ಆಕ್ರೋಶ ಹೊರಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:02 pm, Mon, 16 February 26

Source link

ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ – Kannada News | Vijayalakshmi Darshan happily returns from jail after meeting Darshan

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರು ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇಂದು (ಫೆಬ್ರವರಿ 16) ಅವರ ಜನ್ಮದಿನ. ಅವರನ್ನು ನೋಡಲು ಕುಟುಂಬದವರು ಮತ್ತು ಆಪ್ತರು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ದರ್ಶನ್, ಮಗ ವಿನೀಶ್, ಸಹೋದರ ದಿನಕರ್ ತೂಗುದೀಪ್, ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಟ ಧನ್ವೀರ್ ಅವರು ಪರಪ್ಪನ ಅಗ್ರಹಾರ ಜೈಲಿಯಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ವಾಪಸ್ ತೆರಳುವಾಗಿ ವಿಜಯಲಕ್ಷ್ಮಿ (Vijayalakshmi Darshan) ಅವರ ಮುಖದಲ್ಲಿ ನಗು ಕಾಣಿಸಿದೆ. ಅದನ್ನು ಕಂಡು ಅಭಿಮಾನಿಗಳಿಗೆ ಸಮಾಧಾನ ಆಗಿದೆ. ಆದಷ್ಟು ಬೇಗ ದರ್ಶನ್ ಹೊರಗೆ ಬರಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ. ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಗತ್ತಿನೆಲ್ಲೆಡೆ ಎಕ್ಸ್ ಡೌನ್; ಆ್ಯಪ್, ವೆಬ್​ಸೈಟ್ ಲೋಡ್ ಆಗದೆ ಬಳಕೆದಾರರ ಪರದಾಟ – Kannada News | X Down for users Globally Thousands Report Issues Accessing App and Website

ಬೆಂಗಳೂರು, ಫೆಬ್ರವರಿ 16: ಇಂದು (ಸೋಮವಾರ) ಸಂಜೆ ಸಾಮಾಜಿಕ ಮಾಧ್ಯಮ ಬಳಕೆದಾರರು ದೇಶ ಮತ್ತು ಪ್ರಪಂಚದ ವ್ಯವಹಾರಗಳ ಸ್ಥಿತಿಯನ್ನು ಪರಿಶೀಲಿಸಲು ತಮ್ಮ ನೆಚ್ಚಿನ ಅಪ್ಲಿಕೇಶನ್ X (ಹಿಂದಿನ ಟ್ವಿಟರ್) ಅನ್ನು ತೆರೆದಾಗ ಅವರಿಗೆ ನಿರಾಸೆ ಕಾದಿತ್ತು. ಇಂದು ಸಂಜೆಯಿಂದ ಭಾರತದಲ್ಲಿ X.comನ ಸೇವೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಈ ಸಮಸ್ಯೆ ಅವರ ಇಂಟರ್ನೆಟ್‌ನಲ್ಲಿದೆಯೇ ಅಥವಾ ಅಪ್ಲಿಕೇಶನ್‌ನಲ್ಲಿದೆಯೇ ಎಂದು ತಿಳಿಯದೆ ಸಾವಿರಾರು ಬಳಕೆದಾರರು ಗೊಂದಲಕ್ಕೊಳಗಾಗಿದ್ದರು.

ಎಕ್ಸ್ ವೆಬ್‌ಸೈಟ್‌ನಲ್ಲಿನ ಗ್ರಾಫ್ ಇಂದು ಸಂಜೆ 7 ಗಂಟೆಯ ಸುಮಾರಿಗೆ ದೂರುಗಳಲ್ಲಿ ಗಮನಾರ್ಹ ಏರಿಕೆಯನ್ನು ತೋರಿಸಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಇಂದು ಸಂಜೆ 7.02ರ ಹೊತ್ತಿಗೆ 3,000ಕ್ಕೂ ಹೆಚ್ಚು ಬಳಕೆದಾರರು X ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ರಿಪೋರ್ಟ್ ಮಾಡಿದ್ದಾರೆ. ಈ ಅಂಕಿ ಅಂಶವು ದೂರುಗಳನ್ನು ಸಲ್ಲಿಸಿದವರನ್ನು ಮಾತ್ರ ಪ್ರತಿನಿಧಿಸುತ್ತದೆ. ಆದರೆ, ಎಕ್ಸ್​ ಪೇಜ್ ಓಪನ್ ಆಗದೆ ತೊಂದರೆ ಅನುಭವಿಸಿದವರ ಸಂಖ್ಯೆ ಇನ್ನೂ ಹೆಚ್ಚಿದೆ.

ಇದನ್ನೂ ಓದಿ: ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್​​ನ ಗ್ರೋಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಈ ಸಮಸ್ಯೆ ಮೊಬೈಲ್ ಅಪ್ಲಿಕೇಶನ್‌ಗೆ ಸೀಮಿತವಾಗಿಲ್ಲ, ಆದರೆ ಡೆಸ್ಕ್‌ಟಾಪ್ ಆವೃತ್ತಿಯೂ ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಬಳಕೆದಾರರು X.com ಅನ್ನು ತೆರೆದಾಗ, ಸಂಪೂರ್ಣವಾಗಿ ಖಾಲಿ ಪರದೆ ಅಥವಾ ಅದೇ ಹಳೆಯ ಫೀಡ್‌ ಕಂಡುಬರುತ್ತಿದೆ. ಹೊಸ ವಿಷಯ ಲೋಡ್ ಆಗುತ್ತಿಲ್ಲ. ಯಾರ ಪ್ರೊಫೈಲ್ ಕೂಡ ಓಪನ್ ಆಗುತ್ತಿಲ್ಲ. ದೈನಂದಿನ ಸುದ್ದಿ ಮತ್ತು ಅಪ್​ಡೇಟ್​​ಗಳಿಗಾಗಿ ಎಲಾನ್ ಮಸ್ಕ್ ಅವರ ಎಕ್ಸ್​ ಪ್ಲಾಟ್​​ಫಾರ್ಮ್ ಅನ್ನು ಹೆಚ್ಚು ಅವಲಂಬಿಸಿರುವವರಿಗೆ ಇದರಿಂದ ತೊಂದರೆ ಉಂಟಾಗಿದೆ.

ಇದನ್ನೂ ಓದಿ: BitChat: ವಾಟ್ಸ್ಆ್ಯಪ್ ಕ್ರೇಜ್ ಅಂತ್ಯ: ಟ್ವಿಟರ್ ಸಂಸ್ಥಾಪಕನಿಂದ ಸಿಮ್-ಇಂಟರ್ನೆಟ್ ಇಲ್ಲದೆ ಚಾಟಿಂಗ್ ಮಾಡುವ ಆ್ಯಪ್ ಬಿಡುಗಡೆ

X ನಿಜವಾಗಿಯೂ ಡೌನ್ ಆಗಿದೆಯೇ ಅಥವಾ ಅವರ ಫೋನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅನೇಕ ಬಳಕೆದಾರರು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಹ ಆಶ್ರಯಿಸಿದ್ದಾರೆ. ಈ ಎಕ್ಸ್​ ಸ್ಥಗಿತದ ಹಿಂದಿನ ನಿಜವಾದ ತಾಂತ್ರಿಕ ಕಾರಣದ ಕುರಿತು ಕಂಪನಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ನಿಮಗೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದರೆ ಪೇಜನ್ನು ಪದೇಪದೆ ರಿಫ್ರೆಶ್ ಮಾಡುವ ಬದಲು ಇನ್ನೂ ಕೊಂಚ ಸಮಯ ಕಾಯುವುದು ಒಳಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗಳ ಮದುವೆ ಸಾಲ ತೀರಿಸೋಕೆ ದುಡಿಯುತ್ತಿದ್ದ ಅಪ್ಪ-ಮಗ ಒಟ್ಟಿಗೆ ಸಾವು: ಸಂಬಂಧಿ ಹೇಳಿದ್ದಿಷ್ಟು – Kannada News | Bidar Tragedy: Father and Son Drown in Canal

ಬೀದರ್, ಫೆಬ್ರವರಿ 16: ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ಆಕಸ್ಮಿಕವಾಗಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ, ಮಗ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಘಟನೆಗೆ ಮೃತರ ಸಂಬಂಧಿ ಟಿವಿ9 ಜೊತೆಗೆ ಮಾತನಾಡಿದ್ದು, ಮಗಳ ಮದುವೆ ಸಾಲ ತೀರಿಸುವುದಕ್ಕೆ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಿದ್ದರು. ಸಾಲದ ಹೊರೆ ಹೆಚ್ಚಾಗಿದ್ದರಿಂದ ತಂದೆ, ಮಗ ಲಾರಿ ಹಮಾಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಡುವೆ ಕಾರಂಜಾ ಕಾಲುವೆ (ಬೆಳ್ಳೆ ಕೆನಲ್) ಬಳಿ ಕೈ, ಕಾಲು ತೊಳೆಯುವ ವೇಳೆ ಘಟನೆ ಸಂಭವಿಸಿ ಇಬ್ಬರು ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜೇನುತುಪ್ಪದ ಪ್ರಯೋಜನಗಳೇನು, ಪತಂಜಲಿ ಜೇನುತುಪ್ಪದ ಶುದ್ಧತೆ ಎಷ್ಟು? ಇಲ್ಲಿದೆ ಮಾಹಿತಿ – Kannada News | Baba Ramdev tells the benefits of honey for healthier life, research reveals quality of Patanjali honey

ಆಯುರ್ವೇದದಲ್ಲಿ ಜೇನುತುಪ್ಪವನ್ನು (Honey) ನೈಸರ್ಗಿಕ ಮತ್ತು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುವ ಅನೇಕ ಅಗತ್ಯ ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ನೈಸರ್ಗಿಕ ಸಕ್ಕರೆಯಿಂದ ಸಮೃದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಕಲಬೆರಕೆ ಜೇನು ಬಗ್ಗೆ ಜನರು ಹೆಚ್ಚು ಆತಂಕಿತರಾಗಿದ್ದಾರೆ. ಶುದ್ಧ ಜೇನುತುಪ್ಪಕ್ಕೆ ಬೇಡಿಕೆ ಮತ್ತು ಅಗತ್ಯತೆ ಬಹಳ ಹೆಚ್ಚಿದೆ. ಈ ಸಂದರ್ಭದಲ್ಲಿ, ಪತಂಜಲಿ ಆಯುರ್ವೇದ (Patanjali Ayurveda) ಸಂಸ್ಥೆಯು ಜೇನುತುಪ್ಪದ ಶುದ್ಧತೆಯ ಬಗ್ಗೆ ವೈಜ್ಞಾನಿಕ ಅಧ್ಯಯನವೊಂದನ್ನು ಪ್ರಕಟಿಸಿದೆ.

ತನ್ನ ಜೇನುತುಪ್ಪವು ಸ್ಥಾಪಿತ ಮಾನದಂಡಗಳನ್ನು ಪೂರೈಸುತ್ತದೆ. ಗ್ರಾಹಕರಿಗೆ ಇದು ಸುರಕ್ಷಿತವಾಗಿಯೂ ಇದೆ ಎಂದು ಪತಂಜಲಿ ಸಂಸ್ಥೆ ಹೇಳಿಕೊಂಡಿದೆ. ಶುದ್ಧ ಜೇನುತುಪ್ಪದ ನಿಯಮಿತ ಮತ್ತು ಸಮತೋಲಿತ ಸೇವನೆಯು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಆಯುರ್ವೇದದ ಪ್ರಕಾರ, ಜೇನುತುಪ್ಪದಲ್ಲಿ ಔಷಧೀಯ ಗುಣಗಳಿವೆ. ಅನೇಕ ಮನೆಮದ್ದುಗಳಲ್ಲಿ ಇದನ್ನು ಬಳಸಲಾಗುತ್ತದೆ. ಆಯುರ್ವೇದದಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು, ಮತ್ತು ಇದರ ಸಂಶೋಧನೆ ಹೇಳುವುದೇನು ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: ಪತಂಜಲಿ ಲೋಹಾಸವ ಸಿರಪ್; ಏನಿದು, ಯಾಕಾಗಿ ಬೇಕು, ಇದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

ಜೇನುತುಪ್ಪ ಸೇವನೆಯಿಂದ ಪ್ರಯೋಜನಗಳೇನು?

ಆಯುರ್ವೇದದ ಪ್ರಕಾರ, ಜೇನುತುಪ್ಪವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಗಂಟಲು ನೋವು, ಕೆಮ್ಮು ಮತ್ತು ಶೀತ ಸಮಸ್ಯೆ ನಿವಾರಿಸಲು ಬಳಸಲಾಗುತ್ತದೆ. ಜೇನುತುಪ್ಪವು ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ಬೆಚ್ಚಗಿನ ನೀರಿನೊಂದಿಗೆ ಜೇನುತುಪ್ಪ ಸೇವಿಸಿದಾಗ ಕೊಬ್ಬು ಕರಗುತ್ತದೆ. ಜೇನುತುಪ್ಪದಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ಗಳು ದೇಹಕ್ಕೆ ಇಮ್ಯೂನಿಟಿ ಶಕ್ತಿ ಹೆಚ್ಚಿಸುತ್ತದೆ.

ಜೇನುತುಪ್ಪವು ನ್ಯಾಚುರಲ್ ಮಾಯಿಶ್ಚರೈಸರ್ ಗುಣ ಹೊಂದಿರುವುದರಿಂದ ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದಲ್ಲಿ ಗಾಯಗಳನ್ನು ಗುಣಪಡಿಸಲು ಮತ್ತು ಇಮ್ಯೂನಿಟಿ ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಇದನ್ನು ನಿಯಮಿತವಾಗಿ ಮತ್ತು ಮಿತವಾಗಿ ಸೇವಿಸುವುದರಿಂದ ದೇಹವು ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ.

ಪತಂಜಲಿ ಆಯುರ್ವೇದದ ಜೇನುತುಪ್ಪದ ಬಗ್ಗೆ ರಿಸರ್ಚ್ ಏನು ಹೇಳುತ್ತದೆ?

ಎಲ್ಸೆವಿಯರ್ (Elsevier) ರಿಸರ್ಚ್ ಪ್ರಕಾರ, ಪತಂಜಲಿ ಆಯುರ್ವೇದದ ಜೇನುತುಪ್ಪದ ಶುದ್ಧತೆ ಮತ್ತು ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ. ಅಧ್ಯಯನದಲ್ಲಿ ಜೇನುತುಪ್ಪದ ನೈಸರ್ಗಿಕ ಅಂಶಗಳು ಮತ್ತು ಸ್ಥಾಪಿತ ಮಾನದಂಡಗಳನ್ನು ಪರಿಗಣಿಸಲಾಗಿದೆ. ಜೇನುತುಪ್ಪವು ಸ್ಥಾಪಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದೆ ಎಂದು ಈ ರಿಸರ್ಚ್ ವರದಿ ಹೇಳಿದೆ.

ಇದನ್ನೂ ಓದಿ: ಪತಂಜಲಿ ಫುಡ್ಸ್​ನ ‘ಸೂಪರ್-ಫಾಸ್ಟ್’ ಗಳಿಕೆ! 9 ತಿಂಗಳಲ್ಲಿ ₹29,000 ಕೋಟಿ ಆದಾಯ

ಕಲಬೆರಕೆಗೆ ಸ್ಪಷ್ಟ ಎವಿಡೆನ್ಸ್ ಇಲ್ಲ. ಸರಿಯಾಗಿ ತಯಾರಿಸಿ ಪರೀಕ್ಷಿಸಿದ ಜೇನುತುಪ್ಪವನ್ನು ಸುರಕ್ಷಿತವಾಗಿ ಸೇವಿಸಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಕಂಪನಿಯ ಪ್ರಕಾರ, ಈ ಅಧ್ಯಯನವು ಪತಂಜಲಿಯ ಜೇನುತುಪ್ಪದ ಗುಣಮಟ್ಟವನ್ನು ಸಾಬೀತುಪಡಿಸುತ್ತದೆ.

ಜೇನುತುಪ್ಪವನ್ನು ಹೇಗೆ ಸೇವಿಸಬೇಕು?

ಜೇನುತುಪ್ಪವನ್ನು ಮಿತವಾಗಿ ಸೇವಿಸಬೇಕು. ಬೆಳಿಗ್ಗೆ ಒಂದು ಟೀ ಚಮಚ ಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಕೆಮ್ಮು ಅಥವಾ ಗಂಟಲು ನೋವಿಗೆ, ಶುಂಠಿ ಅಥವಾ ತುಳಸಿ ರಸದೊಂದಿಗೆ ಸೇವಿಸಬಹುದು. ಜೇನುತುಪ್ಪವನ್ನು ಅತಿಯಾಗಿ ಬಿಸಿ ಮಾಡದಂತೆ ಎಚ್ಚರವಹಿಸಿ ಮತ್ತು ಒಂದು ವರ್ಷದೊಳಗಿನ ಮಕ್ಕಳಿಗೆ ನೀಡುವುದನ್ನು ತಪ್ಪಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಗೇಪಲ್ಲಿ SN ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳ್ಳಲು ಸ್ಫೋಟಕ ಕಾರಣ ಬಿಚ್ಚಿಟ್ಟ ಲಾಯರ್ – Kannada News | Advocate Nalini Mayagowda Talks about Why High Court disqualified Bagepalli Congress Subbareddy MLA Post

ಬೆಂಗಳೂರು, (ಫೆಬ್ರವರಿ 16): ಬಾಗೇಪಲ್ಲಿ (Bagepalli) ಕಾಂಗ್ರೆಸ್‌ (Congress) ಶಾಸಕ ಸುಬ್ಬಾರೆಡ್ಡಿಯವರ (Subbareddy) ಅವರ ಆಯ್ಕೆ ಶಾಸಕಅಸಿಂಧುಗೊಳಿಸಿ ಹೈಕೋರ್ಟ್‌ (High Court) ಮಹತ್ವದ ಆದೇಶ ಹೊರಡಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್‌ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023 ಜೂನ್ 24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್‌ ಅಸಿಂಧುಗೊಳಿಸಿದೆ.

ಅಸಿಂಧುಗೊಳಿಸಲು ಕಾರಣ ತಿಳಿಸಿದ ಲಾಯರ್

ಇನ್ನು ಈ ಬಗ್ಗೆ ಟಿವಿ9ಗೆ ಹಿರಿಯ ವಕೀಲೆ ನಳೀನಿ ಮಾಯಗೌಡ ಅವರು ಪ್ರತಿಕ್ರಿಯಿಸಿ, ಸುಬ್ಬಾರೆಡ್ಡಿ ಅವರು ಪ್ರಾಪರ್ಟಿ ಡಿಸ್ಲೋಸ್ ಮಾಡಿರಲಿಲ್ಲ. ಜಿಎಸ್ಟಿ ಫೈಲ್ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಸುಬ್ಬಾರೆಡ್ಡಿ ಅವರನ್ನ ಹೈಕೋರ್ಟ್ ಅಸಿಂಧು ಮಾಡಿದೆ. ಇದರ ಜೊತೆ ನನ್ನನ್ನ ಶಾಸಕನಾಗಿ ಡಿಕ್ಲೇರೇಷನ್ ಕೊಡಿ ಎಂದು ಮುನಿರಾಜು ಅವರು ಕೇಳಿದರು. ಈಗ ಎರಡೂವರೆ ವರ್ಷ ವಾದ ಮಾಡಿ ಕೋರ್ಟ್ ಅಸಿಂಧು ಮಾಡಿದೆ. ಶಾಸಕರನ್ನ ಅನರ್ಹ ಮಾಡಿದೆ, ಈಗ ಅವರು ಶಾಸಕರು ಅಲ್ಲ. ಒಂದು ವೇಳೆ ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಗೆ ಹೋದ್ರೆ ಹೈಕೋರ್ಟ್ ಆದೇಶ ಸ್ಟೇ ಆಗಬಹುದು ಎಂದರು.

ಇದನ್ನೂ ಓದಿ: ಕಾಂಗ್ರೆಸ್ MLA​ಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಎರಡು ಕೋಟಿ ರೂ. ತೆರಿಗೆ ಕಟ್ಟಿಲ್ಲ

ನಾವು ಪ್ರಾಪರ್ಟಿ ಟ್ಯಾಕ್ಸ್ ಪೇ ಮಾಡಿ ಎಂದು ವಾದ ಮಾಡಿದ್ವಿ. ಹೋಟೆಲ್, ಲಿಕ್ಕರ್ ಅಂಗಡಿಯ ಟ್ಯಾಕ್ಸ್ ಕಟ್ಟಿರಲಿಲ್ಲ. ಅದಕ್ಕೆ ದಾಖಲಾತಿ ಕೊಟ್ಟಿದ್ವಿ. ಜೊತೆ ಜಿಎಸ್ಟಿ ಕಟ್ಟಿರಲಿಲ್ಲ. ಅವರ ಹೆಂಡತಿ, ಪುತ್ರಿಯ ಪ್ರಾಪರ್ಟಿ ಬಹಿರಂಗ ಮಾಡಿರಲಿಲ್ಲ. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಗೆ ಹೋದ್ರೂ ನಾವು ದಾಖಲೆ ಸಮೇತ ಹೋರಾಟ ಮಾಡುತ್ತೇವೆ. ಎರಡು ಕೋಟಿ ರೂ. ತೆರಿಗೆ ಕಟ್ಟಿಲ್ಲ. ಶಾಸಕರೇ ಟ್ಯಾಕ್ಸ್ ಕಟ್ಟಿಲ್ಲ ಎಂದು ವಾದ ಮಾಡಿದ್ವಿ.ಕರಪ್ಟ್ ಶಾಸಕರನ್ನ ಮುಂದುವರಿಯೋಕೆ ಬಿಡಬಾರದು ಎಂದು ವಾದ ಮಾಡಿದ್ವಿ ಎಂದು ತಿಳಿಸಿದರು.

ಗೆಜೆಟ್ ನೋಟಿಫಿಕೇಷನ್ ಆದ್ರೆ ಅನರ್ಹ

ಸುಪ್ರೀಂ ಕೋರ್ಟ್ ನವರು ಕೂಡ ನಮ್ಮ ವಾದಕ್ಕೆ ಅವರು ತೀರ್ಪು ಕೊಡಬಹುದು. ಇಲ್ಲಂದ್ರೆ ಹೊಸ ಚುನಾವಣೆ ಗೆ ಹೋಗಬಹುದು. ಮುನಿರಾಜು ಗೆಲುವು ಅಂತ ಕೋರ್ಟ್ ಹೇಳಿಲ್ಲ, ಇದಕ್ಕೆ ಕಾರಣವೂ ಕೊಟ್ಟಿಲ್ಲ. ಎರಡನೇ ಅತೀ ಹೆಚ್ಚು ಮತ ತೆಗೆದುಕೊಂಡಿದ್ಧು ಮುನಿರಾಜು. ಅವರು ತೀರ್ಮಾನ ಮಾಡಿದ್ರೆ ಸುಪ್ರೀಂ ಕೋರ್ಟ್ ಗೆ ಹೋಗಬಹುದು. ಗೆಜೆಟ್ ನೋಟಿಫೀಕೇಷನ್‌ ಆಗಬೇಕು. ಪ್ರೆಸಿಡೆಂಟ್ ನಿಂದ ಅಪ್ರೊವಲ್ ಆಗಿ ಬರಬೇಕು. ಗೆಜೆಟ್ ನೋಟಿಫಿಕೇಷನ್ ಆದ್ರೆ ಅನರ್ಹ ಎಂದು ಆದೇಶ ಆಗುತ್ತದೆ ಎಂದು ಹಿರಿಯ ವಕೀಲೆ ನಳೀನಿ ಮಾಯಗೌಡ ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶೇಷ 2016: ಪ್ರಮೋದ್ ಶೆಟ್ಟಿ ಹೊಸ ಸಿನಿಮಾ ಮಾರ್ಚ್ 6ರಂದು ತೆರೆಗೆ – Kannada News | Pramod Shetty starrer Shesha 2016 movie OTT rights sold to Amazon Prime Video

ಪ್ರಮೋದ್ ಶೆಟ್ಟಿ (Pramod Shetty) ಅವರಿಗೆ ಪೊಲೀಸ್ ಪಾತ್ರಗಳು ಹೆಚ್ಚಾಗಿ ಇರುತ್ತವೆ. ‘ಶೇಷ 2016’ (Shesha 2016) ಸಿನಿಮಾದಲ್ಲಿ ಕೂಡ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಒಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಪಡೆದುಕೊಂಡಿವೆ. ಈ ಖುಷಿಯ ವಿಷಯ ತಿಳಿಸಲು ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು.

‘ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್’ ಮೂಲಕ ಉಮೇಶ್ ಗೌಡ , ಮಂಜುವಾಣಿ ವಿ.ಎಸ್. ಮತ್ತು ವೀಣಾ ಎಸ್. ಅವರು ‘ಶೇಷ 2016’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ಅರಸೀಕೆರೆ ಅವರು ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಜಾನ್ ಕೈಪ್ಪಲ್ಲಿ, ಸಿದ್ಲಿಂಗು ಶ್ರೀಧರ್, ದೇವರಾಜ್, ಸಾಯಿ ಭೈರವ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರ್.ಎಸ್. ಆನಂದ್ ಕುಮಾರ್ ಅವರ ಛಾಯಾಗ್ರಹಣವಿದೆ.

ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕಥೆ ಆದ್ದರಿಂದ ‘ಶೇಷ 2016’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಎಸಿಪಿ ಗಣೇಶ್ ಮತ್ತು ಮೋಹನ್ ಕುಮಾರ್ ದಾನಪ್ಪ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ‘ಜನರಲ್ಲಿ ಜಾಗೃತಿ ಮೂಡಿಸುವ ಸಮಾಜಕ್ಕೆ ಉತ್ತಮ ಚಿತ್ರಗಳನ್ನು ಕೊಡುವ ಕೆಲಸ ಆಗಬೇಕು’ ಎಂದು ಎಸಿಪಿ ಗಣೇಶ್ ಅವರು ಹೇಳಿದರು. ‘ಕನ್ನಡದ ಉತ್ತಮ , ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದು ಮೋಹನ್ ಕುಮಾರ್ ದಾನಪ್ಪ ಅವರು ಹೇಳಿದರು.

ಒಟಿಟಿ ರೈಟ್ಸ್ ಮಾರಾಟ ಆಗಿದ್ದಕ್ಕೆ ಪ್ರಮೋದ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ‘ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಮಲಯಾಳಂ ಡಬ್ ಕೂಡ ನಾನೇ ಮಾಡಿದ್ದೇನೆ. ಇದು ಸ್ಟೇಷನ್ ಸುತ್ತ ನಡೆಯುವ ಘಟನೆ. ಒಂದು ರೀತಿ ಬೆಲ್ ಬಾಟಮ್ ಸಿನಿಮಾ ರೀತಿಯ ಫೀಲ್ ಕೊಡುತ್ತದೆ’ ಎಂದು ಪ್ರಮೋದ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ರಿಷಬ್ ಶೆಟ್ಟಿ​ ಹೀಗೆ ಇರೋದು ಏಕೆ? ವಿವರಿಸಿದ ಪ್ರಮೋದ್ ಶೆಟ್ಟಿ

ನಿರ್ದೇಶಕ ಪ್ರದೀಪ್ ಅರಸೀಕೆರೆ ಅವರು ಮಾತನಾಡಿ, ‘2016ರ ಕಾಲದ ಘಟ್ಟದಲ್ಲಿ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ನಡೆಯುವಂತಹ ಕಾಲ್ಪನಿಕ ಘಟನೆಗಳ ಸುತ್ತ ಹೆಣೆದ ಕಥೆ ಈ ಸಿನಿಮಾದಲ್ಲಿ ಇದೆ. ಹಗಲು ರಾತ್ರಿ ಎನ್ನದೇ ಸುಮಾರು 35 ದಿನ ಶೂಟಿಂಗ್ ಮಾಡಿದ್ದೇವೆ. ಮಾರ್ಚ್ 6ರಂದು ನಮ್ಮ ಸಿನಿಮಾ ಬಿಡುಗಡೆ ಆಗುತ್ತದೆ’ ಎಂದು ಹೇಳಿದರು. ಇದು ಅವರ ಮೊದಲ ಸಿನಿಮಾ. ಕರ್ನಾಟಕ ಮತ್ತು ಕೇರಳದ ಹಲವು ಭಾಗಗಳಲ್ಲಿ ಪ್ರಚಾರ ಮಾಡಲು ನಿರ್ಮಾಪಕ ಉಮೇಶ್ ಗೌಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಕಲಿ ದಾಖಲೆ ಸೃಷ್ಟಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿ ವರ್ಗಾವಣೆ: ಪರಿಶೀಲನೆ ಬಳಿಕ ಅಸಲಿ ಸತ್ಯ ಬಯಲು – Kannada News | KSRTC Staff Transferred Using Fake Documents; Truth Revealed After Verification

ಬೆಂಗಳೂರು, ಫೆಬ್ರವರಿ 16: ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಲಿದ್ದರು ಕೆಎಸ್​ಆರ್​ಟಿಸಿ (KSRTC) ಸಿಬ್ಬಂದಿ ವರ್ಗಾವಣೆ (Transfer) ನಡೆದಿರುವಂತಹ ಘಟನೆಯೊಂದು ನಗರದಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕ ಎಂ.ಜಯದೇವರನ್ನು ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಪರಿಶೀಲನೆ ವೇಳೆ ಯಾರೋ ಇವರ ಹೆಸರಿನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದ್ದು, ವಿಧಾನಸೌಧ ಠಾಣೆಯಲ್ಲಿ ಸಚಿನ್ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ.

ನಡೆದಿದ್ದೇನು? 

ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂ.ಜಯದೇವರನ್ನು ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಫಾರಸಿನ ಮೇಲೆ ವರ್ಗಾವಣೆ ಆಗಿತ್ತು.

ಇದನ್ನೂ ಓದಿ: ಪ್ರಯಾಣಿಕರಿಗೆ ಶಾಕ್ ಕೊಟ್ಟ ಕೆಎಸ್​ಆರ್​ಟಿಸಿ: ಇಂದಿನಿಂದಲೇ ಈ ದರ ಹೆಚ್ಚಳ

ವರ್ಗಾವಣೆ ಬಗ್ಗೆ ಅನುಮಾನ ಹಿನ್ನೆಲೆ ಜಯದೇವ ಪರಿಶೀಲನೆ ಮಾಡಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಗೆ ಭೇಟಿ ನೀಡಿದ್ದ ಸಿಬ್ಬಂದಿ, ಜಯದೇವ ಹೆಸರಿನಲ್ಲಿ ಸಚಿವರು ಶಿಫಾರಸು ಮಾಡಿ ಪತ್ರ ನೀಡಿರುವುದು ಪತ್ತೆಯಾಗಿತ್ತು. ಹೀಗಾಗಿ ನಾನು ವರ್ಗಾವಣೆ ಕೋರಿ ಮನವಿ ಪತ್ರ ಸಲ್ಲಿಸಿಲ್ಲ. ಯಾರೋ ನನ್ನ ಹೆಸರಿನ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ವಿಧಾನಸೌಧ ಠಾಣೆಗೆ ಜಯದೇವ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ? 

ಈ ಹಿಂದೆ ನಾನು (ಜಯದೇವ) ಬೆಂಗಳೂರು ಕೇಂದ್ರೀಯ ವಿಭಾಗದ 6ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಿನಾಂಕ 11.11.2025 ರಂದು ಮುಖ್ಯ ಸಂಚಾರ ವ್ಯವಸ್ಥಾಪಕರಾದ ಅಂತೋಣಿ ಜಾರ್ಜ್ ರವರು ನನ್ನನ್ನು ಏಕಾಏಕಿ ಬೆಂಗಳೂರು ಕೇಂದ್ರೀಯ ದಿಂದ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಈ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ನನ್ನ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಯಿತು.

ಇದನ್ನೂ ಓದಿ: ಬಿಗ್ ಶಾಕ್ ಕೊಟ್ಟ KSRTC: ನಾಳೆಯಿಂದಲೇ ನೂತನ ಪರಿಷ್ಕ್ರತ ದರ ಜಾರಿಗೆ

ನಂತರ ಕೆಎಸ್​​ಆರ್​​ಟಿಸಿ ಕೇಂದ್ರ ಕಚೇರಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆರ್​ಟಿಐ ಮೂಲಕ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಪಡೆದು ಪರಿಶೀಲಿಸಿದಾಗ ನನ್ನ ಹೆಸರಿನಲ್ಲಿ ನಕಲಿ ಸಹಿ ಮಾಡಿ, ನಕಲಿ ದಾಖಲೆ ಸೃಷ್ಟಿ ಮಾಡಿ ನಾನು ಕೋರಿರುವಂತೆ ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ದಿನಾಂಕ 24.09.2025 ರಂದು ಮನವಿ ಸಲ್ಲಿಸಿದ್ದು, ಸಚಿವರ ನಡವಳಿ ಪತ್ರ ಸ್ವೀಕರಿಸಿ ತೆಗೆದುಕೊಂಡು ಹೋದ ಸಚಿನ್ ನನ್ನು ವಿಚಾರಿಸಿ, ಸದರಿ ನಕಲಿ ದಾಖಲಾತಿಯನ್ನು ಸೃಷ್ಟಿಸಿ, ಸಚಿವರ ಕಚೇರಿಗೆ ಸಲ್ಲಿಸಿ ವರ್ಗಾವಣೆಗೆ ಕಾರಣರಾಗಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link