ಮುಸ್ಲಿಮರಿಗೆ ‘ವಂದೇ ಮಾತರಂ’ ಹಾಡು ನೋವುಂಟು ಮಾಡುತ್ತದೆ ಎಂದು ಬದಲಾವಣೆ ಮಾಡಿದ್ರು: ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ, ಡಿ.22: ವಂದೇ ಮಾತರಂಗೆ 150 ವರ್ಷಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಈ ಹಿಂದೆ ಚರ್ಚೆಯಾಗಿತ್ತು. ಇದೀಗ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ. ಜಿನ್ನಾ ಕಾಂಗ್ರೆಸ್ನಲ್ಲಿ ಇರುವವರೆಗೂ, ವಂದೇ ಮಾತರಂ ನಿರ್ಣಾಯಕ ವಿವಾದದ ಅಂಶವಾಗಿರಲಿಲ್ಲ. ಅವರು ಕಾಂಗ್ರೆಸ್ ತೊರೆದ ತಕ್ಷಣ, ಜಿನ್ನಾ ಅದನ್ನು ಮುಸ್ಲಿಂ ಲೀಗ್ನ ಸಾಧನವನ್ನಾಗಿ ಮಾಡಿಕೊಂಡರು ಮತ್ತು ಉದ್ದೇಶಪೂರ್ವಕವಾಗಿ ಹಾಡಿಗೆ ಕೋಮು ಬಣ್ಣವನ್ನು ನೀಡಿದರು….