ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ ಮಧ್ಯೆ ಕಲ್ಲು, ದೊಣ್ಣೆಗಳಿಂದ ಬಡಿದಾಟ
ಕೋಲಾರ, ಡಿಸೆಂಬರ್ 19: ವಕ್ಫ್ ಬೋರ್ಡ್ ಆಸ್ತಿಗಾಗಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿರುವಂತಹ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ನಡೆದಿದೆ. ಮಾಸ್ತಿ ಗ್ರಾಮದಲ್ಲಿರುವ ವಕ್ಫ್ ಬೋರ್ಡಿಗೆ ಸೇರಿದ 11 ಎಕರೆ ಜಮೀನಿಗಾಗಿ ಗಲಾಟೆ ನಡೆದಿದೆ. ಸಯ್ಯದ್ ರಸೂಲ್ ದರ್ವೇಶ್ ವಂಸಸ್ಥರು ವಕ್ಫ್ ಬೋರ್ಡ್ಗೆ ಜಮೀನು ದಾನವಾಗಿ ನೀಡಿದ್ದಾರೆ. ಇದರಲ್ಲಿರುವ ಈದ್ಗಾ, ಬಾಡಿಗೆ ಕಟ್ಟಡ ಎಲ್ಲವೂ ವಕ್ಫ್ ಬೋರ್ಡಿಗೆ ಬರುತ್ತೆ. ಆದರೆ ಈ ಆಸ್ತಿ ನಮ್ಮದು ಎಂದು ಸಯ್ಯದ್ ರಸೂಲ್ ಕುಟುಂಬಸ್ಥರು ಗಲಾಟೆ ಮಾಡಿ…