Category Archives: Blog

Your blog category

ಅಂಡರ್-19 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ; ಭಾರತದ ಮೂವರಿಗೆ ಅವಕಾಶ – Kannada News | U19 World Cup Team of the Tournament revealed 3 Indians in ICC Team

ಫೆಬ್ರವರಿ 6 ರಂದು ಹರಾರೆಯಲ್ಲಿ ನಡೆದ 2026 ರ ಅಂಡರ್-19 ವಿಶ್ವಕಪ್‌ (U19 World Cup) ಫೈನಲ್‌ನಲ್ಲಿ ಯುವ ಭಾರತ ತಂಡ, ಇಂಗ್ಲೆಂಡ್ (India vs England) ತಂಡವನ್ನು ಸೋಲಿಸಿ 6ನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು. ಭಾರತ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದಿದ್ದು ಇದು ಸತತ ಎರಡನೇ ಬಾರಿ. ಭಾರತ ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ತಂಡದ ಎಲ್ಲಾ ಆಟಗಾರರ ಕೊಡುಗೆ ಪ್ರಮುಖವಾಗಿತ್ತು. ಅದರಲ್ಲೂ ಫೈನಲ್ ಪಂದ್ಯದಲ್ಲಿ 175 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ವಿಶ್ವಕಪ್ ಮುಗಿದ ಮೂರು ದಿನಗಳ ಬಳಿಕ ಐಸಿಸಿ ಈ ಬಾರಿಯ ಅಂಡರ್-19 ವಿಶ್ವಕಪ್​ ತಂಡವನ್ನು ಘೋಷಿಸಿದೆ. ಈ ತಂಡದಲ್ಲಿ ಭಾರತದ ಮೂವರು ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ.

ಐಸಿಸಿ ವಿಶ್ವಕಪ್ ತಂಡದಲ್ಲಿ 12 ಆಟಗಾರರು

ಪ್ರತಿ ಐಸಿಸಿ ಈವೆಂಟ್ ಮುಗಿದ ಬಳಿಕ ಐಸಿಸಿ, ಟೂರ್ನಮೆಂಟ್ ತಂಡವನ್ನು ಪ್ರಕಟಿಸುತ್ತದೆ. ಆ ಪ್ರಕಾರ ಐಸಿಸಿ, ಅಂಡರ್-19 ವಿಶ್ವಕಪ್‌ನ ಅತ್ಯುತ್ತಮ ತಂಡವನ್ನು ಘೋಷಿಸಿದೆ. ಐಸಿಸಿ ಈ ತಂಡದಲ್ಲಿ ವೈಭವ್ ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ವೈಭವ್ ಹೊರತುಪಡಿಸಿ ಇಡೀ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ 12 ಆಟಗಾರರನ್ನು ಆಯ್ಕೆ ಮಾಡಿ ಐಸಿಸಿ ತಂಡವನ್ನು ಪ್ರಕಟಿಸಿದೆ.

ಭಾರತದ ಮೂವರಿಗೆ ಸ್ಥಾನ

12 ಸದಸ್ಯರ ತಂಡವನ್ನು ಇಯಾನ್ ಬಿಷಪ್, ಆಂಡಿ ಫ್ಲವರ್ ಮತ್ತು ಟೆಲ್ಫೋರ್ಡ್ ವೈಸ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ಆಯ್ಕೆ ಮಾಡಿದೆ. ವೈಭವ್ ಜೊತೆಗೆ, 12 ಸದಸ್ಯರ ತಂಡದಲ್ಲಿ ಇಬ್ಬರು ಭಾರತೀಯರಾದ ಕನಿಷ್ಕ್ ಚೌಹಾಣ್ ಮತ್ತು ಹೆನಿಲ್ ಪಟೇಲ್ ಕೂಡ ಇದ್ದಾರೆ. ಇಂಗ್ಲೆಂಡ್ ನಾಯಕ ಥಾಮಸ್ ರೆವ್ ಅವರನ್ನು ಟೂರ್ನಮೆಂಟ್ ತಂಡದ ನಾಯಕರನ್ನಾಗಿಯೂ ಆಯ್ಕೆ ಮಾಡಲಾಗಿದೆ.

ಭಾರತ- ಇಂಗ್ಲೆಂಡ್​ನಿಂದ ಅತ್ಯಧಿಕ ಆಟಗಾರರು

ಐಸಿಸಿ ಆಯ್ಕೆ ಮಾಡಿರುವ ತಂಡದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡದಿಂದ ತಲಾ 3 ಆಟಗಾರರು ಆಯ್ಕೆಯಾಗಿದ್ದಾರೆ. ಉಳಿದಂತೆ ಅಫ್ಘಾನಿಸ್ತಾನ ತಂಡದಿಂದ ಇಬ್ಬರು ಆಟಗಾರರು, ಶ್ರೀಲಂಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡದಿಂದ ತಲಾ ಒಬ್ಬರು ಆಟಗಾರರನ್ನು ಈ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಂತಹ ತಂಡಗಳ ಒಬ್ಬ ಆಟಗಾರನ್ನು ಸ್ಥಾನ ಪಡೆದಿಲ್ಲ.

ಐಸಿಸಿ ಅಂಡರ್-19 ವಿಶ್ವಕಪ್ ತಂಡ

1. ವೈಭವ್ ಸೂರ್ಯವಂಶಿ (ಭಾರತ)

2. ವೀರನ್ ಚಾಮುದಿತ (ಶ್ರೀಲಂಕಾ)

3. ಫೈಸಲ್ ಖಾನ್ ಶಿನೋಜಾಡಾ (ಅಫ್ಘಾನಿಸ್ತಾನ)

4. ಥಾಮಸ್ ರೆವ್ (ನಾಯಕ, ವಿಕೆಟ್ ಕೀಪರ್) (ಇಂಗ್ಲೆಂಡ್)

5. ಆಲಿವರ್ ಪೀಕ್ (ಆಸ್ಟ್ರೇಲಿಯಾ)

6. ಬೆನ್ ಮೇಯಸ್ (ಇಂಗ್ಲೆಂಡ್)

7. ಕಾನಿಷ್ಕ್ ಚೌಹಾಣ್ (ಭಾರತ)

8. ನೂರಿಸ್ತಾನಿ ಒಮರ್ಜೈ (ಅಫ್ಘಾನಿಸ್ತಾನ)

9. ವಿಟೆಲ್ ಲಾವ್ಸ್ (ವೆಸ್ಟ್ ಇಂಡೀಸ್)

10. ಅಲಿ ರಜಾ (ಪಾಕಿಸ್ತಾನ)

11. ಮನ್ನಿ ಲುಮ್ಸ್ಡೆನ್ (ಇಂಗ್ಲೆಂಡ್)

12. ಹೆನಿಲ್ ಪಟೇಲ್ (ಭಾರತ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿಡ್ನಿ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಮನೆಮದ್ದುಗಳು; ಬಾಬಾ ರಾಮದೇವ್ ಸಲಹೆ ಇದು – Kannada News | Kidney stones and other issues, Baba Ramdev suggests ayurvedic and home remedies

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಕಲ್ಲುಗಳು, ಉರಿಯೂತ ಮತ್ತು ಕಿಡ್ನಿ ಹಾನಿಯಂತಹ ಮೂತ್ರಪಿಂಡದ ಸಮಸ್ಯೆಗಳು (Kidney problems) ಸಾಮಾನ್ಯವಾಗಿದೆ. ನೀರಿನ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಅತಿಯಾದ ಕಬ್ಬಿಣದ ಮಟ್ಟಗಳು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು. ಮೂತ್ರಪಿಂಡದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸದಿದ್ದರೆ, ಅವು ಗಂಭೀರ ಕಾಯಿಲೆಗಳಾಗಿ ಪರಿಣಮಿಸಬಹುದು. ಮೂತ್ರಪಿಂಡದ ಸಮಸ್ಯೆಗಳನ್ನು ನಿವಾರಿಸಲು ಹಲವು ಚಿಕಿತ್ಸೆಗಳು ಮತ್ತು ಔಷಧಿಗಳು ಲಭ್ಯವಿದ್ದರೂ, ಆಯುರ್ವೇದ ವಿಧಾನಗಳನ್ನು ಬಳಸಿಕೊಂಡು ಅವುಗಳಿಗೆ ಚಿಕಿತ್ಸೆ ನೀಡಬಹುದು. ಈ ಆಯುರ್ವೇದ ವಿಧಾನವು ಹೆಚ್ಚು ಪರಿಣಾಮಕಾರಿಯಾಗಿದ್ದು, ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ ಎಂದು ಹೇಳಲಾಗುತ್ತದೆ.

ಆಯುರ್ವೇದ ತಜ್ಞ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತಾರೆ. ಈ ಬಾರಿ, ಯೋಗ ಗುರು ಬಾಬಾ ರಾಮ್‌ದೇವ್ ಮೂತ್ರಪಿಂಡ ಕಾಯಿಲೆಗೆ ಪರಿಣಾಮಕಾರಿ ಎನಿಸುವ ಜ್ಯೂಸ್​ವೊಂದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ರಸವು ಮೂತ್ರಪಿಂಡ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಮನೆಮದ್ದಾಗಿರುವ ಇದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Hair Fall Treatment: ಕೂದಲು ಉದುರುವಿಕೆ ನಿಲ್ಲಿಸಲು ಮನೆಮದ್ದುಗಳು: ಸರಳ ಪರಿಹಾರ ಸೂಚಿಸುವ ಬಾಬಾ ರಾಮದೇವ್

ಬಾಬಾ ರಾಮದೇವ್ ತಿಳಿಸಿದ ಮನೆಮದ್ದು ಇದೇ

ಬಾಬಾ ರಾಮದೇವ್ ಅವರು ಕಿಡ್ನಿ ಸ್ಟೋನ್ ಮತ್ತು ಉರಿಯೂತಕ್ಕೆ ವಿವಿಧ ಮನೆಮದ್ದುಗಳನ್ನು ಸೂಚಿಸಿದ್ದಾರೆ. ಇವು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪರಿಣಾಮಕಾರಿತ್ವವನ್ನು ತೋರಿಸುತ್ತವೆ. ಇವುಗಳಲ್ಲಿ ಬೇವು, ಅರಳಿ ಎಲೆಯ ರಸ, ಕಸ್ನಿ, ಗೋಖ್ರು, ಕೊತ್ತಂಬರಿ ಮತ್ತು ಪುದೀನದಂತಹ ಗಿಡಮೂಲಿಕೆಗಳ ಮಿಶ್ರಣವೂ ಸೇರಿದೆ. ಬಾಬಾ ರಾಮದೇವ್ ಅವರ ಪ್ರಕಾರ, ಪ್ರತಿದಿನ ತಮ್ಮ ಆಹಾರದಲ್ಲಿ ಕೊತ್ತಂಬರಿ ಸೊಪ್ಪು ಸೇವಿಸುವ ಜನರು ಆರೋಗ್ಯಕರ ಮೂತ್ರಪಿಂಡಗಳನ್ನು ಹೊಂದಿರುತ್ತಾರೆ. ವಾಸ್ತವವಾಗಿ, ಕೊತ್ತಂಬರಿ ಸೊಪ್ಪಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ ಎ, ಸಿ, ಕೆ ಮತ್ತು ಮಿನರಲ್​ಗಳು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಕಿಡ್ನಿಸ್ಟೋನ್ ತಡೆಗಟ್ಟಲು ಪರಿಣಾಮಕಾರಿ ಮಾರ್ಗಗಳು

ಯಾರಿಗಾದರೂ ಮೂತ್ರಪಿಂಡ, ಪಿತ್ತಕೋಶ (Gall Bladder) ಅಥವಾ ಮೇದೋಜ್ಜೀರಕ ಗ್ರಂಥಿಯ (Pancreas) ಕಲ್ಲು ಇದ್ದರೆ, ಅದನ್ನು ತೆಗೆದುಹಾಕಲು ನೀವು ಪ್ರತಿದಿನ ಹುರುಳಿಕಾಳು (Horse gram) ಸೇವಿಸಬಹುದು ಎಂದು ರಾಮದೇವ್ ವಿವರಿಸುತ್ತಾರೆ. ವಾರಕ್ಕೊಮ್ಮೆಯಾದರೂ ಹುರುಳಿಕಾಳನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ನಿರ್ಮಾಣವಾಗುವುದನ್ನು ತಡೆಯಬಹುದು.

ಇದನ್ನೂ ಓದಿ: ವಾತ ದೋಷದಿಂದ ಏನು ಆರೋಗ್ಯ ಸಮಸ್ಯೆ, ನಿವಾರಣೆ ಹೇಗೆ? ಬಾಬಾ ರಾಮದೇವ್ ಸಲಹೆ ಕೇಳಿ

ಮೂತ್ರಪಿಂಡದ ಕೆಲಸಕ್ಕೆ ಸಹಾಯವಾಗುವ ಬಾರ್ಲಿ

ಮೂತ್ರಪಿಂಡದ ಕಾರ್ಯವನ್ನು ಸಕ್ರಿಯವಾಗಿ ನಿರ್ವಹಿಸಲು ಬಾರ್ಲಿ ಹಿಟ್ಟಿನ ರೊಟ್ಟಿ ತುಂಬಾ ಪ್ರಯೋಜನಕಾರಿ. ಬಾಬಾ ರಾಮದೇವ್ ಅವರ ಪ್ರಕಾರ, ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಬಾರ್ಲಿ ಹಿಟ್ಟಿನ ರೊಟ್ಟಿ ತಿನ್ನುವುದರಿಂದ ನಿಮ್ಮ ಕಿಡ್ನಿಗಳು ಆರೋಗ್ಯವಾಗಿರುತ್ತವೆ ಮತ್ತು ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಮಧುಮೇಹಿಗಳು ಈ ಜ್ಯೂಸ್ ಕುಡಿಯಲೇಬೇಕು

ಬಾಬಾ ರಾಮದೇವ್ ಅವರು ಹಾಗಲಕಾಯಿ ರಸವನ್ನು ಕುಡಿಯಲು ಜನರಿಗೆ ಸಲಹೆ ನೀಡುತ್ತಾರೆ. ಹಾಗಲಕಾಯಿ ರಸವನ್ನು ಕುಡಿಯುವುದರಿಂದ ಹೊಟ್ಟೆಯು ಶುದ್ಧವಾಗುತ್ತದೆ ಎಂದು ಅವರು ಹೇಳುತ್ತಾರೆ. ಇದಲ್ಲದೆ, ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಲಕಾಯಿ ರಸ ಕುಡಿಯಲು ತುಂಬಾ ಕಹಿ ಎನಿಸಿದ್ದರೆ, ಅದಕ್ಕೆ ಟೊಮೆಟೊ ಸೇರಿಸಬಹುದು. ರಾಮದೇವ್ ಪ್ರಕಾರ, ವಾರಕ್ಕೊಮ್ಮೆಯಾದರೂ ಹಾಗಲಕಾಯಿ ರಸವನ್ನು ಕುಡಿಯುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ? – Kannada News | Is Gilli Nata talking to Kavya Shaiva on phone everyday after Bigg Boss Kannada 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಶೋನಲ್ಲಿ ಗಿಲ್ಲಿ ನಟ ಅವರು ಕಾವ್ಯಾ ಶೈವ ಜೊತೆ ಕ್ಲೋಸ್ ಆಗಿದ್ದರು. ಶೋ ಮುಗಿದ ನಂತರವೂ ಆ ಸ್ನೇಹ ಮುಂದುವರಿದಿದೆ. ಈಗ ಗಿಲ್ಲಿ ನಟ ಅಭಿನಯದ ‘ಸೂಪರ್ ಹಿಟ್’ ಸಿನಿಮಾದ ಸುದ್ದಿಗೋಷ್ಠಿ ಸೋಮವಾರ (ಫೆ.9) ನಡೆಯಿತು. ಆ ಬಳಿಕ ಅವರಿಗೆ ಕಾವ್ಯಾ (Kavya Shaiva) ಬಗ್ಗೆ ಪ್ರಶ್ನೆ ಎದುರಾಯಿತು. ‘ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದೀರಂತೆ ಹೌದಾ?’ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಗಿಲ್ಲಿ ಅವರು ಜಾಣತನದ ಉತ್ತರ ನೀಡಿದರು. ‘ನಿಮ್ಮ ಜೊತೆಯೂ ಸುಮಾರು ಸಲ ಮಾತನಾಡಿದ್​ದೇನೆ. ನೀವು ಎಷ್ಟೋ ಸಲ ನನಗೆ ಫೋನ್ ಮಾಡಿದ್ದೀರಿ. ನಾನು ಕೂಡ ಮಾಡಿದ್ದೇನೆ’ ಎಂದು ಗಿಲ್ಲಿ ನಟ (Gilli Nata) ಹೇಳಿದರು. ಆ ಮೂಲಕ ಕಾವ್ಯಾ ಜೊತೆಗಿನ ತಮ್ಮ ಮಾತಕಥೆ ತಂಬ ಸಹಜವಾದದ್ದು ಎಂಬರ್ಥದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಆ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಟ್ರೆಸ್ ಮಲಬದ್ದತೆಗೆ ಹೇಗೆ ಕಾರಣವಾಗುತ್ತೆ ಗೊತ್ತಾ? ಈ ಬಗ್ಗೆ ಡಾ ಅನುರಾಗ್ ಶೆಟ್ಟಿ ಏನ್ ಹೇಳ್ತಾರೆ ನೋಡಿ – Kannada News | Gut Health and Stress: Dr. Anurag Shetty’s Advice

ಇತ್ತೀಚಿನ ದಿನಗಳಲ್ಲಿ ಸ್ಟ್ರೆಸ್ ಅಥವಾ ಒತ್ತಡ (Stress) ಮನುಷ್ಯನ ಆರೋಗ್ಯವನ್ನು ಅರಿವಿಲ್ಲದಂತೆ ಹಾಳು ಮಾಡುತ್ತಿದೆ. ಆದರೆ ಒತ್ತಡ ಜೀರ್ಣಕಾರಿ ಸಮಸ್ಯೆಗೆ ಹಾನಿ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕರುಳು ಮತ್ತು ಮೆದುಳಿಗೆ ಪರಸ್ಪರ ಸಂಪರ್ಕವಿರುತ್ತದೆ. ಅದಕ್ಕಾಗಿಯೇ ಇವುಗಳನ್ನು ‘ಗಟ್ ಬ್ರೈನ್ ಎಕ್ಸಿಸ್’ (ಮೆದುಳು ಕರುಳಿನ ಅಕ್ಷ) ಎಂದು ಕರೆಯಲಾಗುತ್ತದೆ. ಇದು ದ್ವಿಮುಖ ಸಂಪರ್ಕ ವ್ಯವಸ್ಥೆಯಾಗಿದ್ದು ನರಗಳು, ಹಾರ್ಮೋನ್ ಗಳು ಮತ್ತು ಕರುಳಿನ ಮೈಕ್ರೊಬೈಟಾ ಈ ಸಂಪರ್ಕವನ್ನು ನಿರ್ವಹಿಸುತ್ತವೆ. ಈ ಗಟ್ ಬ್ರೈನ್ ಎಕ್ಸಿಸ್ ವ್ಯವಸ್ಥೆಯ ಕಾರಣ ಸ್ಟ್ರೆಸ್ ಅಥವಾ ಒತ್ತಡವು ನೇರವಾಗಿ ಮತ್ತು ಗಂಭೀರವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಲಬದ್ದತೆ (Constipation), ಅತಿಸಾರ, ಹೊಟ್ಟೆ ನೋವಿನಂತಹ ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್, ಡಾ ಅನುರಾಗ್ ಶೆಟ್ಟಿ ಅವರು ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದು ಹೆಚ್ಚಿನ ವಿವರಕ್ಕೆ ಸ್ಟೋರಿ ಓದಿ.

ಒತ್ತಡದ ಸಮಯದಲ್ಲಿ ಕಂಡುಬರುವ ಮಲಬದ್ಧತೆ ಸಮಸ್ಯೆಗೆ ಕಾರಣ, ಸಿಂಪತೆಟಿಕ್ ನರಗಳ ಅತಿಯಾದ ಚಟುವಟಿಕೆಯಿಂದ ಉಂಟಾಗುವ ಕರುಳಿನ ಚಲನವಲನಗಳ ನಿಧಾನಗೊಳ್ಳುವಿಕೆ. ಇದರೊಂದಿಗೆ ಸ್ಟ್ರೆಸ್ ಹಾರ್ಮೋನ್ ಗಳ ಶರೀರದಲ್ಲಿ ಉತ್ಪಾದನೆ, ಕರುಳಿನ ಭೇದ್ಯತೆ ಹೆಚ್ಚಳ, ಹಾಗೂ ಕರುಳಿನ ಸೂಕ್ಷ್ಮ ಜೀವಿಗಳಲ್ಲಿ ಕಂಡುಬರುವ ವ್ಯತ್ಯಾಸಗಳೆಲ್ಲವೂ ಸೇರಿ ಮಲಬದ್ದತೆಯನ್ನು ಹೆಚ್ಚಿಸುತ್ತದೆ. ಅಧ್ಯಯನಗಳು ಹೇಳುವ ಪ್ರಕಾರ, ಒತ್ತಡದ ಸಮಯದಲ್ಲಿ ಆಹಾರ ಸೇವನೆಯ ವಿಧಾನವೂ ಬದಲಾಗುತ್ತದೆ. ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸುವುದು, ಅಧಿಕ ಕೆಫೇನ್ ಸೇವನೆ, ಹೆಚ್ಚು ಸಂಸ್ಕರಿಸಿದ ಆಹಾರ ಪದಾರ್ಥ ಸೇವನೆ, ಫೈಬರ್ ಅಧಿಕವಾಗಿರುವ ಆಹಾರ ಸೇವಿಸದೇ ಇರುವುದು ಇವೆಲ್ಲವೂ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವಂತಹದ್ದಾಗಿರುತ್ತದೆ. ಇದೊಂದು ಚಕ್ರವ್ಯೂಹವಾಗಿದ್ದು ಒತ್ತಡವು ಮಲಬದ್ದತೆ ಹಾಗೂ ಮಲಬದ್ದತೆಯು ಪ್ರತಿಯಾಗಿ ಒತ್ತಡವನ್ನು ವರ್ದಿಸುತ್ತದೆ.

ಇದನ್ನೂ ಓದಿ: ಯಾವ ಕಾರಣಕ್ಕೂ ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡಬೇಡಿ, ಎಚ್ಚರಿಕೆ ನೀಡಿದ ಡಾ. ಭರತ್ ಕುಮಾರ್

ಮಲಬದ್ದತೆಗೆ ಒತ್ತಡ ಮಾತ್ರ ಕಾರಣವೇ?

ಸಾಮಾನ್ಯವಾಗಿ ಮಲಬದ್ದತೆ ಸಮಸ್ಯೆಗೆ ಒತ್ತಡ ಮಾತ್ರ ಕಾರಣವಲ್ಲ. ಆಹಾರ ಪದ್ದತಿಯಲ್ಲಿ ನಾರಿನಾಂಶದ ಕೊರತೆ, ಕಡಿಮೆ ನೀರು ಕುಡಿಯುವ ಅಭ್ಯಾಸ, ವ್ಯಾಯಾಮದ ಕೊರತೆ, ನಿತ್ಯ ಮಲವಿಸರ್ಜನೆ ಮಾಡುವುದನ್ನು ನಿರ್ಲಕ್ಷಿಸುವುದು ಕೂಡ ಮಲಬದ್ದತೆ ಸಮಸ್ಯೆಗೆ ಕಾರಣವಾಗಬಹುದು.

ಪರಿಹಾರವೇನು ?

ಒತ್ತಡ ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ. ನಾರಿನಾಂಶ ಅಧಿಕವಾಗಿರುವ ಹಣ್ಣು, ತರಕಾರಿಗಳ ಸೇವನೆ, ಮೊಳಕೆಕಾಳುಗಳ ಸೇವನೆ, ಅಗತ್ಯವಾಗಿರುವಷ್ಟು ನೀರು ಕುಡಿಯುವುದು. ಜೊತೆಗೆ ನಿತ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಅಗತ್ಯ. ಇದರ ಜೊತೆಗೆ ಮಲವಿಸರ್ಜನೆಯ ಸೂಚನೆಯನ್ನು ನಿರ್ಲಕ್ಷಿಸಬಾರದು. ಇದು ದೇಹ ಶುದ್ಧವಾಗಿರಲು ಅಗತ್ಯ ಎಂಬುದು ನೆನಪಿನಲ್ಲಿಡಿ. ಮಲಬದ್ದತೆ ಸಮಸ್ಯೆ ಸರಳ ವಿಧಾನದಿಂದ ಪರಿಹಾರವಾಗದಿದ್ದಲ್ಲಿ ಅಥವಾ ಸಮಸ್ಯೆ ತುಂಬಾ ಸಮಯದವರೆಗೆ ಮುಂದುವರೆದರೆ, ತೂಕ ಕಡಿಮೆಯಾದರೆ, ಹಿಮೊಗ್ಲೊಬಿನ್ ಮಟ್ಟದಲ್ಲಿ ಇಳಿತ ಕಂಡುಬಂದರೆ, ಮಲದಲ್ಲಿ ರಕ್ತ ಕಾಣಿಸಿಕೊಂಡರೆ ಅಥವಾ ಕುಟುಂಬದಲ್ಲಿ ಕೊಲನ್ ಕ್ಯಾನ್ಸರ್ ಇತಿಹಾಸವಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಏರ್​​ಪೋರ್ಟ್​​​ನಲ್ಲಿ 8 ಕೋಟಿ ರೂ ಮೌಲ್ಯದ ಗಾಂಜಾ ವಶಕ್ಕೆ: ಪ್ರಯಾಣಿಕರಿಬ್ಬರ ಬಂಧನ – Kannada News | Bengaluru Airport: Customs Officials Seize Ganja Worth 8 Crore; Two Passengers Arrested

ವಶಕ್ಕೆ ಪಡೆದಿರುವ ಗಾಂಜಾImage Credit source: tv9 kannada

ದೇವನಹಳ್ಳಿ, ಫೆಬ್ರವರಿ 09: ವಿದೇಶದಿಂದ ತಂದಿದ್ದ 8 ಕೋಟಿ ರೂ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು (hydroponic ganja)​​​ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದು, ಎನ್​ಡಿಪಿಎಸ್​​ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಯಾಣಿಕರಿಬ್ಬರು ವಿದೇಶದಿಂದ ಹೈಡ್ರೋಪೋನಿಕ್ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದರು. ಇಮಿಗ್ರೇಷನ್ ವಿಭಾಗದಲ್ಲಿ ಚೆಕಿಂಗ್ ಮಾಡಲಾಗಿದ್ದು, ಈ ವೇಳೆ ಲಗೇಜ್ ಬ್ಯಾಗ್​ನ ತಳಭಾಗದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆ ಆಗಿದೆ.

ಬೆಂಗಳೂರು ಕಸ್ಟಮ್ಸ್ ಟ್ವೀಟ್​

2 ಕೋಟಿ ರೂ. ಮೌಲ್ಯದ ವಜ್ರ ಸೇರಿ ವಿದೇಶಿ ಹಣ ಜಪ್ತಿ

ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ವಿದೇಶಕ್ಕೆ ಸಾಗಿಸಲಾಗುತ್ತಿದ್ದ 2 ಕೋಟಿ ರೂ. ಮೌಲ್ಯದ ವಜ್ರ ಸೇರಿದಂತೆ ವಿದೇಶಿ ಹಣವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು ಏರ್​​ಪೋರ್ಟ್​​​ನಲ್ಲಿ 38.60 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ

ಓರ್ವ ಪ್ರಯಾಣಿಕ ಅಕ್ರಮವಾಗಿ ವಿದೇಶಕ್ಕೆ ಸಾಗಿಸಲು ಮುಂದಾಗಿದ್ದ. ಇಮಿಗ್ರೇಷನ್ ವಿಭಾಗದಲ್ಲಿ ಚೆಕಿಂಗ್ ವೇಳೆ ವಜ್ರ, ವಿದೇಶಿ ಕರೆನ್ಸಿ ಪತ್ತೆ ಆಗಿದೆ. ಕಸ್ಟಮ್ಸ್ ಕಾಯ್ದೆಯಡಿ ಪ್ರಯಾಣಿಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

2 ಕೋಟಿ 97 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶಕ್ಕೆ

ನಿಷೇಧದ ನಡುವೆಯೂ ವಿದೇಶದಿಂದ ತಂದಿದ್ದ 2 ಕೋಟಿ 97 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ಥಾಣಕ್ಕೆ ನಿನ್ನೆ ಪುಕೆಟ್ ಮತ್ತು ಮಲೇಷಿಯಾದಿಂದ ಮೂವರು ಪ್ರಯಾಣಿಕರು ಆಗಮಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಏರ್​​ಪೋರ್ಟ್​ಗೆ ಬಂದವನ ಬ್ಯಾಗ್​ನಲ್ಲಿದ್ದವು ಹಾವುಗಳು, ಸರೀಸೃಪಗಳು!

ಎಲ್ಲಾ ಪ್ರಯಾಣಿಕರಂತೆ 2 ಪ್ರತ್ಯೇಕ ವಿಮಾನಗಳಲ್ಲಿ ಬಂದಿದ್ದ ಮೂವರ ಲಗೇಜ್ ಪರಿಶೀಲನೆ ನಡೆಸಿದಾಗ ಲಗೇಜ್​ನಲ್ಲಿ 8.5 ಕೆಜಿ ಹೈಡ್ರೊಪೋನಿಕ್ ಗಾಂಜಾ ಪತ್ತೆ ಆಗಿತ್ತು. ಇನ್ನು ಗಾಂಜಾ ಸಿಗುತ್ತಿದ್ದಂತೆ ಮೂವರು ಪ್ರಯಾಣಿಕರನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 8.5 ಕೆಜಿ ಗಾಂಜಾದ ಮಾರುಕಟ್ಟೆ ಮೌಲ್ಯ 2 ಕೋಟಿ 97 ಲಕ್ಷ ಅಂತ ಅಂದಾಜಿಸಿದ್ದಾರೆ. ಈ ಕುರಿತು ಕಸ್ಟಮ್ಸ್ ಅಧಿಕಾರಿಗಳು ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ಡಿಸಿಎಂ ದೆಹಲಿ ಪ್ರವಾಸ: ಡಿ.ಕೆ. ಶಿವಕುಮಾರ್​ ನಡೆಯೇ ಕುತೂಹಲ – Kannada News | D.K. Shivakumars Delhi Visit Sparks Political Speculation Amidst Skipped Budget Meeting

ಬೆಂಗಳೂರು, ಫೆಬ್ರವರಿ 09: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಬಜೆಟ್ ಪೂರ್ವಭಾವಿ ಸಭೆಯನ್ನು ಬಿಟ್ಟು ದೆಹಲಿಗೆ ಪ್ರಯಾಣ ಬೆಳೆಸುತ್ತಿರೋದು
ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಕರೆದಿರುವ ಸಭೆಯಲ್ಲಿ ಭಾಗವಹಿಸಲು ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಭೇಟಿಯು ಕೇವಲ ಚುನಾವಣಾ ಸಭೆಯ ಕಾರಣಕ್ಕೆ ಸೀಮಿತವಾಗಿಲ್ಲ, ಬದಲಿಗೆ ರಾಜ್ಯ ರಾಜಕಾರಣದಲ್ಲಿ ಪರೋಕ್ಷ ಸಂದೇಶ ರವಾನಿಸುವ ಉದ್ದೇಶ ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಜೆಟ್ ಸಿದ್ಧತೆಗೆ ವಿರೋಧ ಹಾಗೂ ತಮ್ಮ ನಾಯಕತ್ವದ ಮಹತ್ವಾಕಾಂಕ್ಷೆಯನ್ನು ಹೈಕಮಾಂಡ್‌ಗೆ ಮತ್ತು ಬೆಂಬಲಿಗರಿಗೆ ತಲುಪಿಸುವ ಪ್ರಯತ್ನ ಇದಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್​ಗೆ ಫೆ. 21ರವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್ – Kannada News | Supreme Court extends deadline for SIR in West Bengal by one week

ನವದೆಹಲಿ, ಫೆಬ್ರವರಿ 9: ಪಶ್ಚಿಮ ಬಂಗಾಳದಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಫೆಬ್ರವರಿ 14ರವರೆಗೆ ಇದ್ದ ಗಡುವನ್ನು ವಿಸ್ತರಿಸಿದೆ. ಮತಪಟ್ಟಿ ವಿಶೇಷ ಪರಿಷ್ಕರಣೆ (SIR) ಕುರಿತ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ (Supreme Court) ಪಶ್ಚಿಮ ಬಂಗಾಳದ ಡಿಜಿಪಿಗೆ ನೋಟಿಸ್ ಜಾರಿ ಮಾಡಿದೆ. ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಡಿಜಿಪಿಗೆ ನಿರ್ದೇಶನ ನೀಡಿದೆ.

ಚುನಾವಣಾ ಆಯೋಗದ ಪರವಾಗಿ SIR ಕರ್ತವ್ಯಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ಬೆದರಿಕೆ ಮತ್ತು ಹಿಂಸಾಚಾರದ ದೂರುಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದ ಡಿಜಿಪಿಗೆ ಶೋಕಾಸ್ ನೋಟಿಸ್ ನೀಡಿದೆ. ಹಾಗೇ, ಪಶ್ಚಿಮ ಬಂಗಾಳದ SIR ಕುರಿತ ವಿಚಾರಣೆಯ ಸಂದರ್ಭದಲ್ಲಿ SIR ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಅಡಚಣೆಗೆ ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Video:ಸುಪ್ರೀಂನಲ್ಲಿ ಎಸ್​ಐಆರ್ ವಿರುದ್ಧ ತಾವೇ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ ಬ್ಯಾನರ್ಜಿ

ತಮ್ಮ ಲಿಖಿತ ಸಲ್ಲಿಕೆಗಳನ್ನು ಉಲ್ಲೇಖಿಸಿ, ಚುನಾವಣಾ ಆಯೋಗದ ಪರ ವಕೀಲ ಶ್ಯಾಮ್ ದಿವಾನ್ ಅವರು ಫೆಬ್ರವರಿ 14ರೊಳಗೆ ಸಂಪೂರ್ಣ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದು ವಿಷಯದ ತುರ್ತುಸ್ಥಿತಿಯನ್ನು ಒತ್ತಿಹೇಳುತ್ತದೆ ಎಂದ ಅವರು ಫೆಬ್ರವರಿ 4ರಂದು ನ್ಯಾಯಾಲಯವು ಮಾಡಿದ ಅವಲೋಕನಗಳನ್ನು ಸಹ ಉಲ್ಲೇಖಿಸಿದರು. ದಿವಾನ್ ಪ್ರಕಾರ, ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 7.08 ಕೋಟಿ ಮತದಾರರಿದ್ದಾರೆ. ಇವರಲ್ಲಿ ಸುಮಾರು 6.75 ಕೋಟಿ ಮತದಾರರನ್ನು ಈಗಾಗಲೇ ಗುರುತಿಸಲಾಗಿದೆ. ಅವರನ್ನು ಅಸ್ತಿತ್ವದಲ್ಲಿರುವ ದಾಖಲೆಗಳೊಂದಿಗೆ ಲಿಂಕ್ ಮಾಡಲಾಗಿದೆ. ಆದರೆ ಸುಮಾರು 32 ಲಕ್ಷ ಮತದಾರರನ್ನು ಇನ್ನೂ ಗುರುತಿಸಲಾಗಿಲ್ಲ. ತಾರ್ಕಿಕ ವ್ಯತ್ಯಾಸ ಪ್ರಕ್ರಿಯೆಯ ಮೂಲಕ ಸುಮಾರು 1.36 ಕೋಟಿ ಮತದಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ (SIR) ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ಭಾರತೀಯ ಚುನಾವಣಾ ಆಯೋಗ (ಇಸಿಐ) ರಾಜಕೀಯ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮತದಾರರ ಪರಿಷ್ಕರಣೆ ಪ್ರಕ್ರಿಯೆಯನ್ನು ನಡೆಸುತ್ತಿರುವ ವಿಧಾನವು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸೇರಿದ ಲಕ್ಷಾಂತರ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಸ್​ಐಆರ್ ಒತ್ತಡದಿಂದ ಬಂಗಾಳದಲ್ಲಿ 150 ಜನ ಸಾವು; ಸುಪ್ರೀಂ ಕೋರ್ಟ್​ನಲ್ಲಿ ಮಮತಾ ಬ್ಯಾನರ್ಜಿ ವಾದ

ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಯಾವುದೇ ಮತದಾರರ ಹೆಸರನ್ನು ಅದರಲ್ಲೂ ವಿಶೇಷವಾಗಿ ತಾರ್ಕಿಕ ವ್ಯತ್ಯಾಸ ವರ್ಗದ ಅಡಿಯಲ್ಲಿ ಇರಿಸಲಾದ ಮತದಾರರ ಹೆಸರನ್ನು ಡಿಲೀಟ್ ಮಾಡದಂತೆ ಚುನಾವಣಾ ಆಯೋಗಕ್ಕೆ ಮಧ್ಯಂತರ ನಿರ್ದೇಶನಗಳನ್ನು ನೀಡುವಂತೆ ಅವರು ಕೋರಿದ್ದಾರೆ. ಹಿಂದಿನ ವಿಚಾರಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇಗೆ ನಿಗದಿಯಾಗುತ್ತೆ ನಮ್ಮ ಮೆಟ್ರೋ ಟಿಕೆಟ್ ದರ? ಯಾರು ಹೆಚ್ಚಳ ಮಾಡ್ತಾರೆ? ಇಲ್ಲಿದೆ ವಿವರ – Kannada News | How Will BMRCL Implement Metro Fare Price Hike? here Is Details

ಬೆಂಗಳೂರು, (ಫೆಬ್ರವರಿ 09): ಶೇ.5ರಷ್ಟು ಬೆಂಗಳೂರು ನಮ್ಮ ಮೆಟ್ರೋ (Namma Metro) ಟಿಕೆಟ್​ ದರ ಹೆಚ್ಚಳಕ್ಕೆ ಬಿಎಂಆರ್​​ಸಿಎಲ್ (BMRCL) ಮುಂದಾಗಿತ್ತು. ಆದ್ರೆ, ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯನ್ನ ಬಿಎಂಆರ್​​ಸಿಎಲ್ ಕೈ ಬಿಟ್ಟಿದೆ. ಹೀಗಾಗಿ ಮೆಟ್ರೋ ದರ ಯಥಾಸ್ಥಿತಿ ಮುಂದುವರಿಯಲಿದೆ. ಆದ್ರೆ ಇಲ್ಲಿ ನಾವು ಗಮನಿಸಬೇಕಿರುವುದು ಏನು ಅಂದ್ರೆ ತಾತ್ಕಾಲಿಕವಾಗಿ ಅಷ್ಟೇ ತಡೆ ಹಿಡಿದಿರುವುದು. ಹೀಗಾಗಿ ಮುಂದೆ ಯಾವ ಕ್ಷಣದಲ್ಲಿ ಯಾವ ನಿರ್ಧಾರ ಆದ್ರೂ ಅಚ್ಚರಿ ಏನಿಲ್ಲ.ಇಲ್ಲಿ ನಾವು ಸ್ಪಷ್ಟವಾಗಿ ಗಮನಿಸಬೇಕಿರುವುದು ಏನು ಅಂದ್ರೆ, ಮೆಟ್ರೋ ದರ ಏರಿಕೆಯಲ್ಲಿ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ. ಪ್ರಸ್ತಾವನೆ ಸಲ್ಲಿಸಬಹುದು ಅಷ್ಟೇ, ಆದ್ರೆ ಎಲ್ಲವೂ ಫೇರ್ ಫಿಕ್ಸೇಷನ್ ಕಮಿಟಿ ಶಿಫಾರಸ್ಸಿನಂತೆ ದರ ನಿಗದಿ ಆಗುತ್ತೆ.

ಹೇಗೆ ಹೆಚ್ಚಳವಾಗುತ್ತೆ ಮೆಟ್ರೋ ಟಿಕೆಟ್ ದರ?

ಮೆಟ್ರೋ O ಮತ್ತು M ಕಾಯ್ದೆ 2002ರಂತೆ ದರ ನಿಗದಿ ಆಗುತ್ತೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದರ ನಿಗದಿ ಸಮತಿ ರಚನೆ ಮಾಡಲಾಗುತ್ತೆ. ಸಮಿತಿಯಲ್ಲಿ ಹೈಕೋರ್ಟ್​​ನ ನಿವೃತ್ತ ಅಥವಾ ಹಾಲಿ ಜಡ್ಜ್ ಇರುತ್ತಾರೆ. ಹಿರಿಯ ಪ್ರಧಾನ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿ, ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇರಲಿದ್ದಾರೆ. ಇನ್ನು ದರ ಏರಿಕೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಮೆಟ್ರೋ ಸಂಸ್ಥೆ ಪ್ರಸ್ತಾಪ ಮಾಡಬಹುದು. ಆದ್ರೆ ನೇರವಾಗಿ ದರ ಹೆಚ್ಚಳ ಮಾಡುವ ಅಧಿಕಾರ ಯಾವ ಸರ್ಕಾರಕ್ಕೂ ಇರುವುದಿಲ್ಲ. ಸಮಿತಿಯ ನಿರ್ಧಾರವೇ ದರ ಪರಿಷ್ಕರಣೆ ಅಂತಿಮ ಆಗುತ್ತೆ.
ಕಳೆದ ವರ್ಷ ಅಂದ್ರೆ 2025ರ ಫೆಬ್ರವರಿ 9ರಂದು ಶೇ.51ರಷ್ಟು ದರ ಏರಿಕೆ ಮಾಡಿ ಸಮಿತಿ ಆದೇಶ ಮಾಡಿತ್ತು. ದರ ಏರಿಕೆ ಆಗಿ ಇಂದಿಗೆ ಕರೆಕ್ಟ್​ ಒಂದು ವರ್ಷ ಆಗಲಿದೆ. 2017ರಿಂದ 2025ರ ವರೆಗೂ ದರ ನಿಗದಿಯಾಗದ ಹಿನ್ನೆಲೆ ಮುಂದಿನ ಪ್ರತಿವರ್ಷವೂ ಶೇ. 5 ರಷ್ಟು ದರ ಹೆಚ್ಚಳಕ್ಕೆ ಸಮಿತಿ ಅನುಮತಿನೂ ಕೊಟ್ಟಿತ್ತು. ಅದರಂತೆಯೇ ಇಂದು ಶೇ.5ರಷ್ಟು ದರ ಹೆಚ್ಚಳಕ್ಕೆ BMRCL ಮುಂದಾಗಿತ್ತು. ಆದ್ರೆ ಇದೀಗ ತಡೆ ಹಿಡಿಯಲಾಗಿದೆ. ಆದ್ರೆ ದರ ಏರಿಕೆ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಮಧ್ಯೆ ಗುದ್ದಾಟ ಮಾತ್ರ ಜೋರಾಗಿಯೇ ನಡೆಯುತ್ತಿದೆ.

ಇದನ್ನೂ ಓದಿ: ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL

ಆರ್​.ವಿ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ದೊಡ್ಡ ಹಂಗಾಮವನ್ನೇ ಮಾಡಿತು. ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಖಾಲಿ ಟ್ರಂಕ್​ ಹಿಡಿದು, ಮೆಟ್ರೋದಲ್ಲಿ ಪ್ರಯಾಣಕ್ಕೆ ಮುಂದಾಗಿದ್ದರು. ಆದ್ರೆ ಪೊಲೀಸರು ಮೆಟ್ರೋ ಒಳಗೆ ಬಿಡಲಿಲ್ಲ. ಈ ವೇಳೆ ಸಂಸದರು, ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಜನಾಕ್ರೋಶ ಹೆಚ್ಚಾಗ್ತಿದ್ದಂತೆಯೇ ತಾತ್ಕಾಲಿಕವಾಗಿ ದರ ಹೆಚ್ಚಳಕ್ಕೆ ತಡೆ ಕೊಡಲಾಗಿದೆ. ಆದ್ರೆ BMRCL ಸಿಪಿಆರ್​ಒ ಯಶವಂತ್​ ಚೌಹಾಣ್ ಮಾತು ಕೇಳಿದ್ರೆ ಜನರಿಗೆ ಬರೆ ಬೀಳೋದು ಪಕ್ಕಾನಾ? ಅನ್ನೋ ಅನುಮಾನವೂ ಮೂಡ್ತಿದೆ. ಯಾಕೆಂದ್ರೆ ತಾತ್ಕಾಲಿಕವಾಗಿ ತಡೆ ಹಿಡಿದ್ರೂ ಕೂಡ, ಅದಕ್ಕೆ ಇಂತಿಷ್ಟು ಅವಧಿ ಅಂತಾ ಇರೋದಿಲ್ಲ ಅಂದಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:19 pm, Mon, 9 February 26

Source link

ಹೇಗೆ ನಿಗದಿಯಾಗುತ್ತೆ ನಮ್ಮ ಮೆಟ್ರೋ ಟಿಕೆಟ್ ದರ? ಯಾರು ಹೆಚ್ಚಳ ಮಾಡ್ತಾರೆ? ಇಲ್ಲಿದೆ ವಿವರ – Kannada News | How Will BMRCL Implement Metro Fare Price Hike? here Is Details

ಬೆಂಗಳೂರು, (ಫೆಬ್ರವರಿ 09): ಶೇ.5ರಷ್ಟು ಬೆಂಗಳೂರು ನಮ್ಮ ಮೆಟ್ರೋ (Namma Metro) ಟಿಕೆಟ್​ ದರ ಹೆಚ್ಚಳಕ್ಕೆ ಬಿಎಂಆರ್​​ಸಿಎಲ್ (BMRCL) ಮುಂದಾಗಿತ್ತು. ಆದ್ರೆ, ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯನ್ನ ಬಿಎಂಆರ್​​ಸಿಎಲ್ ಕೈ ಬಿಟ್ಟಿದೆ. ಹೀಗಾಗಿ ಮೆಟ್ರೋ ದರ ಯಥಾಸ್ಥಿತಿ ಮುಂದುವರಿಯಲಿದೆ. ಆದ್ರೆ ಇಲ್ಲಿ ನಾವು ಗಮನಿಸಬೇಕಿರುವುದು ಏನು ಅಂದ್ರೆ ತಾತ್ಕಾಲಿಕವಾಗಿ ಅಷ್ಟೇ ತಡೆ ಹಿಡಿದಿರುವುದು. ಹೀಗಾಗಿ ಮುಂದೆ ಯಾವ ಕ್ಷಣದಲ್ಲಿ ಯಾವ ನಿರ್ಧಾರ ಆದ್ರೂ ಅಚ್ಚರಿ ಏನಿಲ್ಲ.ಇಲ್ಲಿ ನಾವು ಸ್ಪಷ್ಟವಾಗಿ ಗಮನಿಸಬೇಕಿರುವುದು ಏನು ಅಂದ್ರೆ, ಮೆಟ್ರೋ ದರ ಏರಿಕೆಯಲ್ಲಿ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ. ಪ್ರಸ್ತಾವನೆ ಸಲ್ಲಿಸಬಹುದು ಅಷ್ಟೇ, ಆದ್ರೆ ಎಲ್ಲವೂ ಫೇರ್ ಫಿಕ್ಸೇಷನ್ ಕಮಿಟಿ ಶಿಫಾರಸ್ಸಿನಂತೆ ದರ ನಿಗದಿ ಆಗುತ್ತೆ.

ಹೇಗೆ ಹೆಚ್ಚಳವಾಗುತ್ತೆ ಮೆಟ್ರೋ ಟಿಕೆಟ್ ದರ?

ಮೆಟ್ರೋ O ಮತ್ತು M ಕಾಯ್ದೆ 2002ರಂತೆ ದರ ನಿಗದಿ ಆಗುತ್ತೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದರ ನಿಗದಿ ಸಮತಿ ರಚನೆ ಮಾಡಲಾಗುತ್ತೆ. ಸಮಿತಿಯಲ್ಲಿ ಹೈಕೋರ್ಟ್​​ನ ನಿವೃತ್ತ ಅಥವಾ ಹಾಲಿ ಜಡ್ಜ್ ಇರುತ್ತಾರೆ. ಹಿರಿಯ ಪ್ರಧಾನ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿ, ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇರಲಿದ್ದಾರೆ. ಇನ್ನು ದರ ಏರಿಕೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಮೆಟ್ರೋ ಸಂಸ್ಥೆ ಪ್ರಸ್ತಾಪ ಮಾಡಬಹುದು. ಆದ್ರೆ ನೇರವಾಗಿ ದರ ಹೆಚ್ಚಳ ಮಾಡುವ ಅಧಿಕಾರ ಯಾವ ಸರ್ಕಾರಕ್ಕೂ ಇರುವುದಿಲ್ಲ. ಸಮಿತಿಯ ನಿರ್ಧಾರವೇ ದರ ಪರಿಷ್ಕರಣೆ ಅಂತಿಮ ಆಗುತ್ತೆ.
ಕಳೆದ ವರ್ಷ ಅಂದ್ರೆ 2025ರ ಫೆಬ್ರವರಿ 9ರಂದು ಶೇ.51ರಷ್ಟು ದರ ಏರಿಕೆ ಮಾಡಿ ಸಮಿತಿ ಆದೇಶ ಮಾಡಿತ್ತು. ದರ ಏರಿಕೆ ಆಗಿ ಇಂದಿಗೆ ಕರೆಕ್ಟ್​ ಒಂದು ವರ್ಷ ಆಗಲಿದೆ. 2017ರಿಂದ 2025ರ ವರೆಗೂ ದರ ನಿಗದಿಯಾಗದ ಹಿನ್ನೆಲೆ ಮುಂದಿನ ಪ್ರತಿವರ್ಷವೂ ಶೇ. 5 ರಷ್ಟು ದರ ಹೆಚ್ಚಳಕ್ಕೆ ಸಮಿತಿ ಅನುಮತಿನೂ ಕೊಟ್ಟಿತ್ತು. ಅದರಂತೆಯೇ ಇಂದು ಶೇ.5ರಷ್ಟು ದರ ಹೆಚ್ಚಳಕ್ಕೆ BMRCL ಮುಂದಾಗಿತ್ತು. ಆದ್ರೆ ಇದೀಗ ತಡೆ ಹಿಡಿಯಲಾಗಿದೆ. ಆದ್ರೆ ದರ ಏರಿಕೆ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಮಧ್ಯೆ ಗುದ್ದಾಟ ಮಾತ್ರ ಜೋರಾಗಿಯೇ ನಡೆಯುತ್ತಿದೆ.

ಇದನ್ನೂ ಓದಿ: ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL

ಆರ್​.ವಿ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ದೊಡ್ಡ ಹಂಗಾಮವನ್ನೇ ಮಾಡಿತು. ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಖಾಲಿ ಟ್ರಂಕ್​ ಹಿಡಿದು, ಮೆಟ್ರೋದಲ್ಲಿ ಪ್ರಯಾಣಕ್ಕೆ ಮುಂದಾಗಿದ್ದರು. ಆದ್ರೆ ಪೊಲೀಸರು ಮೆಟ್ರೋ ಒಳಗೆ ಬಿಡಲಿಲ್ಲ. ಈ ವೇಳೆ ಸಂಸದರು, ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಜನಾಕ್ರೋಶ ಹೆಚ್ಚಾಗ್ತಿದ್ದಂತೆಯೇ ತಾತ್ಕಾಲಿಕವಾಗಿ ದರ ಹೆಚ್ಚಳಕ್ಕೆ ತಡೆ ಕೊಡಲಾಗಿದೆ. ಆದ್ರೆ BMRCL ಸಿಪಿಆರ್​ಒ ಯಶವಂತ್​ ಚೌಹಾಣ್ ಮಾತು ಕೇಳಿದ್ರೆ ಜನರಿಗೆ ಬರೆ ಬೀಳೋದು ಪಕ್ಕಾನಾ? ಅನ್ನೋ ಅನುಮಾನವೂ ಮೂಡ್ತಿದೆ. ಯಾಕೆಂದ್ರೆ ತಾತ್ಕಾಲಿಕವಾಗಿ ತಡೆ ಹಿಡಿದ್ರೂ ಕೂಡ, ಅದಕ್ಕೆ ಇಂತಿಷ್ಟು ಅವಧಿ ಅಂತಾ ಇರೋದಿಲ್ಲ ಅಂದಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳ ವಿರುದ್ಧ FIR ಹಾಕುವ ಪೊಲೀಸರಿಗೆ ಹೊಸ ಮಾರ್ಗಸೂಚಿ – Kannada News | Karnataka DGP Saleem new guidelines To Police For FIR Against social media posts

ಬೆಂಗಳೂರು, (ಫೆಬ್ರವರಿ 09): ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಪೊಲೀಸರ (Police) ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿರುವುದು ವರದಿಯಾಗಿವೆ. ಹೀಗಾಗಿ ರಾಜ್ಯದ ಪೊಲೀಸರಿಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ) ಎಂಎ ಸಲೀಂ (DG IGP dr Saleem) ಮಹತ್ವದ ಸೂಚನೆ ನೀಡಿದ್ದರು. ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಮಾರ್ಗಸೂಚಿಯನ್ನು ಹೊರಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸುವುದು ಮತ್ತು ಆರೋಪಿಗಳನ್ನು ಬಂಧಿಸುವ ಕುರಿತು ಡಿಜಿ, ಐಜಿಪಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿದ
ತೀರ್ಪಿನ ಮೇಲೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಇತ್ತೀಚಿನ ಪ್ರಕರಣವೊಂದರಲ್ಲಿ ನೀಡಿದ ನಿರ್ದೇಶನಗಳನ್ನು ಪಾಲಿಸುವಂತೆ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಯಮಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಇದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು? ಪೊಲೀಸರಿಗೆ ಮಾರ್ಗಸೂಚಿ ಬಿಡುಗಡೆ

ಹೊಸ ಮಾರ್ಗಸೂಚಿಯ 8 ಪ್ರಮುಖ ಅಂಶಗಳು ಇಂತಿವೆ

ದೂರುದಾರರ ಅರ್ಹತೆ ಪರಿಶೀಲನೆ: ಮಾನಹಾನಿ ಅಥವಾ ಅಂತಹುದೇ ಪ್ರಕರಣಗಳಲ್ಲಿ ದೂರು ನೀಡುವವರು ಕಾನೂನಿನ ಪ್ರಕಾರ ‘ನೊಂದ ವ್ಯಕ್ತಿ’ ಆಗಿರಬೇಕು. ಸಂಬಂಧವಿಲ್ಲದ ಮೂರನೇ ವ್ಯಕ್ತಿ ನೀಡುವ ದೂರುಗಳನ್ನು (ಗಂಭೀರ ಅಪರಾಧಗಳನ್ನು ಹೊರತುಪಡಿಸಿ) ಸ್ವೀಕರಿಸಬಾರದು.

ಪ್ರಾಥಮಿಕ ವಿಚಾರಣೆ ಕಡ್ಡಾಯ:ದೂರಿನಲ್ಲಿ ಉಲ್ಲೇಖಿಸಲಾದ ವಿಷಯವು ಮೇಲ್ನೋಟಕ್ಕೆ ಅಪರಾಧವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಫ್‌ಐಆರ್ ದಾಖಲಿಸುವ ಮುನ್ನ ಕಡ್ಡಾಯವಾಗಿ ಪ್ರಾಥಮಿಕ ವಿಚಾರಣೆ ನಡೆಸಬೇಕು.

ಹಿಂಸಾಚಾರಕ್ಕೆ ಪ್ರಚೋದನೆ ಇದ್ದರೆ ಮಾತ್ರ ಕೇಸ್: ದ್ವೇಷ ಬಿತ್ತುವುದು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು ಅಥವಾ ದೇಶದ್ರೋಹದಂತಹ ಆರೋಪಗಳಿದ್ದಾಗ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸ್ಪಷ್ಟ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಬೇಕು. ಕೇದಾರನಾಥ್ ಸಿಂಗ್ ಮತ್ತು ಶ್ರೇಯಾ ಸಿಂಘಾಲ್ ಪ್ರಕರಣದ ತೀರ್ಪುಗಳನ್ನು ಇಲ್ಲಿ ಪರಿಗಣಿಸಬೇಕು.

ರಾಜಕೀಯ ಟೀಕೆಗಳಿಗೆ ರಕ್ಷಣೆ:ಕಟುವಾದ ಅಥವಾ ಆಕ್ಷೇಪಾರ್ಹ ರಾಜಕೀಯ ಭಾಷಣ/ಪೋಸ್ಟ್‌ಗಳಿಗೆ ಯಾಂತ್ರಿಕವಾಗಿ ಕೇಸ್ ದಾಖಲಿಸಬಾರದು. ಸಂವಿಧಾನದ 19(1)(ಎ) ಅಡಿಯಲ್ಲಿರುವ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು. ಪೋಸ್ಟ್‌ನಿಂದ ಸಾರ್ವಜನಿಕ ಶಾಂತಿಗೆ ತಕ್ಷಣದ ಅಪಾಯವಿದ್ದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು.

ಮಾನಹಾನಿ ಅಸಂಜ್ಞೇಯ ಅಪರಾಧ:ಮಾನಹಾನಿಯು ‘ಅಸಂಜ್ಞೇಯ ಅಪರಾಧ’ ಆಗಿರುವುದರಿಂದ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸುವಂತಿಲ್ಲ. ದೂರುದಾರರಿಗೆ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್) ಮೊರೆ ಹೋಗಲು ಸೂಚಿಸಬೇಕು.

ಬಂಧನದ ನಿಯಮಗಳು:ಸುಪ್ರೀಂ ಕೋರ್ಟ್‌ನ ಅರ್ನೇಶ್ ಕುಮಾರ್ ಪ್ರಕರಣದ ಮಾರ್ಗಸೂಚಿಯಂತೆ, ಅನಗತ್ಯವಾಗಿ ಅಥವಾ ಯಾಂತ್ರಿಕವಾಗಿ ಯಾರನ್ನೂ ಬಂಧಿಸಬಾರದು.

ಕಾನೂನು ಸಲಹೆ ಪಡೆಯಬೇಕು :ರಾಜಕೀಯ ಪೋಸ್ಟ್‌ಗಳು ಅಥವಾ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಮುನ್ನ ಸರ್ಕಾರಿ ಅಭಿಯೋಜಕರಿಂದ ಕಾನೂನು ಸಲಹೆ ಪಡೆಯುವುದು ಕಡ್ಡಾಯ.

ಒಂದು ವೇಳೆ ದೂರುಗಳು ಸುಳ್ಳು, ದ್ವೇಷಪೂರಿತ ಅಥವಾ ರಾಜಕೀಯ ಪ್ರೇರಿತ ಎಂದು ಕಂಡುಬಂದರೆ, ಅಂತಹ ಪ್ರಕರಣಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್ 176(1) ಅಡಿಯಲ್ಲಿ ಮುಕ್ತಾಯಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಖಡಕ್ ಆಗಿ ಸೂಚನೆ ನೀಡಲಾಗಿದೆ. ಈ ಮೂಲಕ ಪ್ರತಿಯೊಂದಕ್ಕೂ ಎಫ್​ಐಆರ್ ದಾಖಲಿಸುವದಕ್ಕೆ ಕಡಿವಾಣ ಹಾಕಿದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:11 pm, Mon, 9 February 26

Source link