Category Archives: Blog

Your blog category

ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ – Kannada News | Trusted Tech Alliance formed by 15 companies, including Jio, Anthropic, Ericsson

ನವದೆಹಲಿ, ಫೆಬ್ರುವರಿ 15: ಎಐ ಸೆಕ್ಟರ್ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿರುವಂತೆಯೇ ಜಾಗತಿಕವಾಗಿ ಸಹಭಾಗಿತ್ವ, ಹೊಂದಾಣಿಕೆ, ಮೈತ್ರಿಗಳು ಏರ್ಪಡುವ ಟ್ರೆಂಡ್ ಶುರುವಾದಂತಿದೆ. ಜಿಯೋ ಪ್ಲಾಟ್​ಫಾರ್ಮ್ಸ್ನಿಂದ (Jio Platforms) ಹಿಡಿದು ಆಂಥ್ರೋಪಿಕ್​ವರೆಗೆ 15 ಕಂಪನಿಗಳು ಗುಂಪು ಮಾಡಿಕೊಂಡಿವೆ. ಸೆಮಿಕಂಡಕ್ಟರ್​ನಿಂದ ಹಿಡಿದು ಕ್ಲೌಡ್ ಇನ್​ಫ್ರಾಸ್ಟ್ರಕ್ಚರ್​ವರೆಗೆ ಎಐ ಸಂಬಂಧಿತ ಕ್ಷೇತ್ರಗಳಲ್ಲಿರುವ ಈ ಕಂಪನಿಗಳು ಒಟ್ಟಿಗೆ ಸೇರಿ ಟ್ರಸ್ಟೆಡ್ ಟೆಕ್ ಅಲಾಯನ್ಸ್ (Trusted Tech Alliance- ವಿಶ್ವಾಸೀ ತಂತ್ರಜ್ಞಾನ ಮೈತ್ರಿ) ಕೂಟ ರಚಿಸಿವೆ.

ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್​ನಲ್ಲಿ (Munich Security Conference) ಈ ಎಐ ಮೈತ್ರಿಕೂಟ ಗುಂಪನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಏಷ್ಯಾ, ಆಫ್ರಿಕಾ ಯೂರೋಪ್ ಮತ್ತು ಉತ್ತರ ಅಮೆರಿಕದ 15 ಕಂಪನಿಗಳು ಸದ್ಯ ಈ ಹೊಂದಾಣಿಕೆ ಮಾಡಿಕೊಂಡಿವೆ.

ಇದನ್ನೂ ಓದಿ: ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ಟ್ರಸ್ಟೆಡ್ ಟೆಕ್ ಅಲಾಯನ್ಸ್​ನ 15 ಕಂಪನಿಗಳು

  1. ಆಂಥ್ರೋಪಿಕ್, ಅಮೆರಿಕ
  2. ಅಮೇಜಾನ್ ವೆಬ್ ಸರ್ವಿಸಸ್ (ಎಡಬ್ಲ್ಯುಎಸ್), ಅಮೆರಿಕ
  3. ಕಸ್ಸಾವ ಟೆಕ್ನಾಲಜೀಸ್, ದಕ್ಷಿಣ ಆಫ್ರಿಕಾ
  4. ಕೋಹೀರ್ (Cohere), ಕೆನಡಾ
  5. ಎರಿಕ್ಸನ್, ಸ್ವೀಡನ್, ಯುರೋಪ್
  6. ಗೂಗಲ್ ಕ್ಲೌಡ್, ಅಮೆರಿಕ
  7. ಹ್ಯಾನ್​ವಾ (Hanwha), ದಕ್ಷಿಣ ಕೊರಿಯಾ
  8. ಜಿಯೋ ಪ್ಲಾಟ್​ಫಾರ್ಮ್ಸ್, ಭಾರತ
  9. ಮೈಕ್ರೋಸಾಫ್ಟ್, ಅಮೆರಿಕ
  10. ನೊಕಿಯಾ, ಫಿನ್​ಲ್ಯಾಂಡ್ (ಯೂರೋಪ್)
  11. ಎನ್​ಸ್ಕೇಲ್ (Nscale), ಯೂರೋಪ್
  12. ಎನ್​ಟಿಟಿ, ಜಪಾನ್
  13. ರಾಪಿಡಸ್, ಜಪಾನ್
  14. ಸಾಬ್, ಅಮೆರಿಕ
  15. ಎಸ್​ಎಪಿ, ಜರ್ಮನಿ

ಎಐ ಹೊಂದಾಣಿಕೆಗೆ ಐದು ಅಂಶಗಳು

ಟ್ರಸ್ಟೆಡ್ ಟೆಕ್ ಅಲಾಯನ್ಸ್ ಅಥವಾ ವಿಶ್ವಾಸೀ ತಂತ್ರಜ್ಞಾನ ಮೈತ್ರಿಗೆ ಐದು ಅಂಶಗಳು ಆಧಾರವಾಗಿರುತ್ತವೆ. ಪಾರದರ್ಶಕ ಕಾರ್ಪೊರೇಟ್ ಆಡಳಿತ ಮತ್ತು ನೈತಿಕ ನಡಾವಳಿ; ಕಾರ್ಯಾಚರಣೆಯ ಪಾರದರ್ಶಕತೆ; ಸುಭದ್ರ ಅಭಿವೃದ್ಧಿ ಮೊದಲಾದವರು ಸೇರಿವೆ.

ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಂಟೆಂಟ್​ಗೆ ಲೇಬಲಿಂಗ್ ಕಡ್ಡಾಯ; ಫೇಸ್​ಬುಕ್, ಇನ್ಸ್​ಟಾಗಳಿಗೆ ಕಠಿಣ ನಿಯಮ

ಆಯಾ ನಾಡಿನ ಕಾನೂನು ಕಟ್ಟಳೆಗಳಿಗೆ ಗೌರವ ಕೊಡುವುದು, ಡಾಟಾ ರಕ್ಷಣೆ, ಉತ್ತಮ ಪೂರೈಕೆ ಸರಪಳಿ ನಿರ್ಮಿಸುವುದು, ಸುಭದ್ರವಾದ ಡಿಜಿಟಲ್ ಇಕೋಸಿಸ್ಟಂ ನಿರ್ಮಿಸುವುದು ಇವೇ ಮುಂತಾದ ಕಾರ್ಯಗಳಿಗೆ ಈ ಮೈತ್ರಿಕೂಟ ಆದ್ಯತೆ ಕೊಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ? – Kannada News | Solar Eclipse 2026: What Kumbha Rashi Can Expect, According to Dr. Basavaraj Guruji

2026ರ ರಾಹುಗ್ರಸ್ತ ಸೂರ್ಯಗ್ರಹಣವು ಕುಂಭ ರಾಶಿಯಲ್ಲಿ ಜನ್ಮ ಗ್ರಹಣವಾಗಿ ಸಂಭವಿಸುತ್ತಿದ್ದು, ಈ ರಾಶಿಯವರಿಗೆ ಡಾ. ಬಸವರಾಜ ಗುರೂಜಿ ಅವರು ಕೆಲವು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ಧನಿಷ್ಠಾ, ಶತಭಿಷಾ, ಮತ್ತು ಪೂರ್ವಾಭಾದ್ರಾ ನಕ್ಷತ್ರದವರು, ಮಹಿಳೆಯರು ಮತ್ತು ಮಕ್ಕಳು ವಿಶೇಷವಾಗಿ ಜಾಗ್ರತರಾಗಿರಬೇಕು. ಈ ಅವಧಿಯಲ್ಲಿ ದೇಹದಲ್ಲಿ ಅನಗತ್ಯ ಬದಲಾವಣೆಗಳು, ಬೇಕಾದವರು ದೂರವಾಗುವುದು, ಆರ್ಥಿಕ ನಿರ್ಧಾರಗಳಲ್ಲಿ ಗೊಂದಲ ಮತ್ತು ಅಧಿಕಾರದಲ್ಲಿ ಹಿನ್ನಡೆ ಸಂಭವಿಸಬಹುದು. ಮಧ್ಯಾಹ್ನ 3:26 ರಿಂದ ಸಂಜೆ 7:50ರವರೆಗೆ ಪ್ರಯಾಣಿಸುವುದು ಶುಭವಲ್ಲ, ವಿಶೇಷವಾಗಿ ಗರ್ಭಿಣಿಯರು, ವೃದ್ಧರು, ಅಸಹಾಯಕರು, ಮತ್ತು ಮಾನಸಿಕ ಅಸ್ವಸ್ಥರು ಹೊರಗೆ ಹೋಗದಿರುವುದು ಉತ್ತಮ.

ಮೋಸ, ನಷ್ಟ, ಸಾಲಗಾರರ ಕಾಟ, ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ, ಮಕ್ಕಳ ವಿಷಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು, ಮತ್ತು ಪ್ರೇಮ ವ್ಯವಹಾರಗಳಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು. ಹಿತಶತ್ರುಗಳ ಕಾಟ ಮತ್ತು ವಿವಾಹ ವಿಳಂಬ ಸಾಧ್ಯತೆಯೂ ಇದೆ. ಆರೋಗ್ಯದ ವಿಚಾರದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಪರಿಹಾರವಾಗಿ, ಶಿವನ ಸ್ತೋತ್ರ, ಶಿವನಾಮ ಸ್ಮರಣೆ, ಕಾಲಭೈರವನ ಸ್ತೋತ್ರಗಳನ್ನು ಜಪಿಸಬೇಕು. ಗೋವಿನ ದರ್ಶನ, ತಾಮ್ರದ ಪದಾರ್ಥಗಳ ದಾನ, ಬೆಲ್ಲದ ಪಾಯಸ ದಾನ, ಅನ್ನದಾನ, ನವಧಾನ್ಯಗಳನ್ನು ಕೆಂಪು ವಸ್ತ್ರದಲ್ಲಿ ದೇವಸ್ಥಾನಕ್ಕೆ ನೀಡುವುದು ಶುಭ ಫಲಗಳನ್ನು ನೀಡುತ್ತದೆ. ಗುರುವಿನ ದೃಷ್ಟಿಯಿಂದ ಕಷ್ಟದ ಸಮಯದಲ್ಲಿ ನೆರವು ದೊರೆಯುತ್ತದೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿಯ ಫೋಟೋ ಶೂಟ್​​ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ – Kannada News | Tragedy During Maternity Photoshoot: Three Year Old Child Drowns After Falling into Water

ನೀರಿಗೆ ಬಿದ್ದು 3 ವರ್ಷದ ಕಂದಮ್ಮ ಸಾವುImage Credit source: Tv9 Kannada

ನೆಲಮಂಗಲ/ಚಿಕ್ಕಮಗಳೂರು, ಫೆಬ್ರವರಿ 15: ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ಮೊದಲನೇ ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀರ್ (3) ಮೃತ ಮಗುವಾಗಿದ್ದು, ತಾಯಿ ಗರ್ಭಿಣಿ ಫೋಟೊ ಶೂಟ್ ಮಾಡಿಸುತ್ತಿದ್ದ ವೇಳೆ, ಆಟವಾಡಿಕೊಂಡಿದ್ದ ಮಗು ಸ್ಥಳದಲ್ಲಿದ್ದ ಸಣ್ಣ ನೀರಿನ ಪೂಲ್​​ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ.

ಲಕ್ಷ್ಮೀರ್ ಜೆ.ಪಿ. ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್ ರಾಜ್ ದಂಪತಿಯ ಮಗುವಾಗಿದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಪೋಟೋ ಶೂಟ್ ಮಾಡಿಸುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ಸ್ನೇಹಿತೆಯೊಂದಿಗೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ. ಇನ್ನು ವಿದೇಶದಲ್ಲಿರುವ ಚರಣ್ ರಾಜ್ ನಾಳೆ ಬೆಂಗಳೂರಿಗೆ ಬರಲಿದ್ದು, ಈ ಹಿನ್ನೆಲೆ ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:  ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ; ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ

ಇಬ್ಬರ ಶವ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿದ್ದ ಪ್ರಕರಣ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಕೊಡಗು ಮೂಲದ ಯೋಗೇಶ್(17), ಅಭಿಷೇಕ್(23) ಮೃತರಾಗಿದ್ದು, ಇವರ ಕುಟುಂಬ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ವೇಳೆ ನದಿಯಲ್ಲಿ ಈಜಲು ಇವರಿಬ್ಬರು ತೆರಳಿದ್ದರು. ಈ ವೇಳೆ ಕುಟುಂಬದವರ ಮುಂದೆಯೇ ನದಿಯಲ್ಲಿ ಮುಳುಗಿ ಪ್ರಾಣಬಿಟ್ಟಿದ್ದರು. ಮೃತ ದೇಹಗಳಿಗಾಗಿ ಹುಡುಕಾಡಿದ್ದ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜು ತಜ್ಞರು ಅಂತಿಮವಾಗಿ ಅವನ್ನು ಹೊರ ತೆಗೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Solar Eclipse 2026: ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Solar Eclipse 2026: Astrological Impact on Capricorn by Dr. Basavaraj Guruji

2026ರ ರಾಹುಗ್ರಸ್ತ ಸೂರ್ಯಗ್ರಹಣವು ಮಕರ ರಾಶಿಯವರ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಈ ಗ್ರಹಣವು ಮಕರ ರಾಶಿಯವರ ದ್ವಿತೀಯ ಸ್ಥಾನ, ಅಂದರೆ ವಾಕ್, ಧನ ಮತ್ತು ಕುಟುಂಬ ಸ್ಥಾನದಲ್ಲಿ ಸಂಭವಿಸಲಿದೆ. ಇದು ಶುಭ ಮತ್ತು ಅಶುಭ ಮಿಶ್ರಿತ ಫಲಗಳನ್ನು ನೀಡಲಿದ್ದು, 70% ಎಚ್ಚರಿಕೆ ಮತ್ತು 30% ಶುಭ ಫಲಗಳ ಸಾಧ್ಯತೆ ಇದೆ.

ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅವಸರದ ಹೂಡಿಕೆಗಳಿಂದ ನಷ್ಟವಾಗಬಹುದು. ಮಾತಿನಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರಿಗೆ ಉನ್ನತ ಅಧಿಕಾರಿಗಳೊಂದಿಗೆ ಸಂಬಂಧದಲ್ಲಿ ವ್ಯತ್ಯಾಸವಾಗಬಹುದು. ಆದಾಗ್ಯೂ, ಅಗೋಚರ ವ್ಯಕ್ತಿಗಳ ಬೆಂಬಲ, ವಿವಾಹ ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು, ಮತ್ತು ಒಡಹುಟ್ಟಿದವರಿಂದ ಉತ್ತಮ ಬೆಂಬಲ ನಿರೀಕ್ಷಿಸಬಹುದು. ಮಕ್ಕಳಿಂದ ಶುಭವಾಗಲಿದೆ. ರೈತರಿಗೆ ಅನುಕೂಲವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸಮಯ.

ಗ್ರಹಣದ ದುಷ್ಪರಿಣಾಮಗಳನ್ನು ತಗ್ಗಿಸಲು ಸುಬ್ರಹ್ಮಣ್ಯ ಸ್ವಾಮಿ ದರ್ಶನ, ಹಳದಿ ವಸ್ತ್ರ ದಾನ, “ಓಂ ಭುಜಂಗೇಶಾಯ ನಮಃ” ಮಂತ್ರ ಪಠಣ ಮತ್ತು ನವನಾಗ ಸ್ತೋತ್ರ ಹೇಳಿಕೊಳ್ಳುವುದು ಸೂಕ್ತವಾಗಿದೆ. ಹುತ್ತಕ್ಕೆ ಪೂಜೆ ಸಲ್ಲಿಸುವುದು ಸಹ ಶುಭಕರ. ಒಟ್ಟಾರೆ, ಮಕರ ರಾಶಿಯವರು ಎಚ್ಚರಿಕೆಯಿಂದ ನಡೆದುಕೊಂಡರೆ ಸಫಲತೆ ಸಾಧಿಸಬಹುದು.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ – Kannada News | AI Impact Summit 2026 at Delhi’s Bharat Mandapam from Feb 16 20, key details of the event

ನವದೆಹಲಿ, ಫೆಬ್ರುವರಿ 15: ರಾಷ್ಟ್ರ ರಾಜಧಾನಿಯಲ್ಲಿ ನಾಳೆಯಿಂದ (ಫೆ. 16) ಐದು ದಿನಗಳ ಕಾಲ ಎಐ ಇಂಪ್ಯಾಕ್ಟ್ ಸಮಿಟ್ (AI Impact Summit 2026) ನಡೆಯಲಿದೆ. ಎಐ ಕುರಿತು ಅರಿವು ಮೂಡಿಸಲು ಮತ್ತು ಎಐ ಕ್ಷೇತ್ರದಲ್ಲಿ ಭಾರತದ ಯೋಜನೆಗಳನ್ನು ಜಗಜ್ಜಾಹೀರುಗೊಳಿಸಲು ಈ ಎಐ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ವಿಶ್ವದ ಅನೇಕ ದೇಶಗಳಿಂದ ಟೆಕ್ ಮುಖಂಡರು ಮತ್ತು ಕಂಪನಿಗಳು ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಸುಮಾರು 50 ದಕ್ಷಿಣ ದೇಶಗಳ ಉಪಸ್ಥಿತಿ ಇದರಲ್ಲಿರಲಿದೆ.

ದೆಹಲಿಯ ಭಾರತ್ ಮಂಡಪಂನಲ್ಲಿ ಎಐ ಇಂಪ್ಯಾಕ್ಟ್ ಸಮಿಟ್ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಎಐ ಎಕ್ಸಿಬಿಶನ್, ಉನ್ನತ ಮಟ್ಟದ ಸಿಇಒ ಫೋರಂ, ಚರ್ಚೆಗಳು, ಉಪನ್ಯಾಸಗಳು ಇತ್ಯಾದಿ ನಾನಾ ರೀತಿಯ ಕಾರ್ಯಕ್ರಮಗಳು ಈ ಐದು ದಿನಗಳಾದ್ಯಂತ ನಡೆಯಲಿವೆ.

ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಂಟೆಂಟ್​ಗೆ ಲೇಬಲಿಂಗ್ ಕಡ್ಡಾಯ; ಫೇಸ್​ಬುಕ್, ಇನ್ಸ್​ಟಾಗಳಿಗೆ ಕಠಿಣ ನಿಯಮ

ಎಐನಿಂದ ಮಾನವನ ಬದುಕಿಗೆ ಯಾವ್ಯಾವ ರೀತಿಯ ಪರಿಣಾಮ ಬೀರುತ್ತದೆ, ಎಷ್ಟು ಒಳಿತು, ಎಷ್ಟು ಮಾರಕ ಎಂಬುದನ್ನು ಅರಿಯುವ ಮತ್ತು ನಿವೇದಿಸುವ ಪ್ರಯತ್ನವಾಗಲಿದೆ. ಸಮಗ್ರ ಅಭಿವೃದ್ಧಿಗೆ ಎಐ ಅನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಲಾಗುತ್ತದೆ.

ವಿಶ್ವದ ಅತ್ಯಂತ ಪ್ರಬಲ ಎಐ ಚಿಪ್​ಗಳನ್ನು ತಯಾರಿಸುವ ಎನ್​ವಿಡಿಯಾ ಕಂಪನಿಯ ಸಿಇಒ ಹುವಾಂಗ್ ಜೆನ್ಸೆನ್ ಅವರು ಈ ಸಭೆಯಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಆದರೆ, ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಜಯ್ ಪುರಿ ನೇತೃತ್ವದ ನಿಯೋಗವೊಂದು ಸಮಿಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಇಸ್ರೇಲ್ ದೇಶವು ಈ ಸಮಿಟ್​ನಲ್ಲಿ ಉಪಸ್ಥಿತಿ ಹೊಂದಿರುತ್ತದೆ.

ಎಐ ಇಂಪ್ಯಾಕ್ಟ್ ಸಮಿಟ್​ಗೆ ನೊಂದಾಯಿಸುವುದು ಹೇಗೆ?

  • ಶೃಂಗಸಭೆ ನಡೆಯುವ ಸ್ಥಳ: ದೆಹಲಿಯ ಭಾರತ್ ಮಂಡಪಂ
  • ದಿನಾಂಕ: ಫೆಬ್ರುವರಿ 16ರಿಂದ 20ರವರೆಗೆ
  • ಅಧಿಕೃತ ವೆಬ್​ಸೈಟ್: impact.indiaai.gov.in/
  • ನೊಂದಣಿಗೆ ಲಿಂಕ್: impact.indiaai.gov.in/registration

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ರಿಜಿಸ್ಟರ್ ಮಾಡಿಕೊಂಡರೆ ಅವರಿಗೆ ಪಾಸ್ ಕೊಡಲಾಗುತ್ತದೆ. ಅಂಥವರಿಗೆ ಮಾತ್ರವೇ ಪ್ರವೇಶಾವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಾರ್ಟಿ ವೇಳೆ ಜಗಳ: ಅಕ್ಷಯ್ ಕುಮಾರ್ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಗೆ ಏನಾಯ್ತು? – Kannada News | When Akshay Kumar slapped a man during high profile party

ನಟ ಅಕ್ಷಯ್ ಕುಮಾರ್ (Akshay Kumar) ಅವರು ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಿನ ಒಂದು ಕಾರ್ಯಕ್ರಮದಲ್ಲಿ ಅವರು ಕೆಲವು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಸ್ವಲ್ಪ ಹೆಚ್ಚು-ಕಡಿಮೆ ಆಗಿದ್ದರೂ ಅಕ್ಷಯ್ ಕುಮಾರ್ ಅವರ ಜೀವನದಲ್ಲಿ ದೊಡ್ಡ ದುರಂತ ನಡೆದುಹೋಗುತ್ತಿತ್ತು. ಪಾರ್ಟಿಯಲ್ಲಿ ನಡೆದ ಒಂದು ಜಗಳದಿಂದ ವ್ಯಕ್ತಿಯೊಬ್ಬನ ಪ್ರಾಣವೇ ಹೋಗುವ ಸಾಧ್ಯತೆ ಇತ್ತು. ಆ ದಿನವನ್ನು ಅಕ್ಷಯ್ ಕುಮಾರ್ ಅವರು ಈಗ ನೆನಪಿಸಿಕೊಂಡಿದ್ದಾರೆ.

ಇದು ಹಲವು ವರ್ಷಗಳ ಹಿಂದೆ ನಡೆದ ಘಟನೆ. ಹೈಪ್ರೊಫೈಲ್ ಪಾರ್ಟಿಯೊಂದರಲ್ಲಿ ಅಕ್ಷಯ್ ಕುಮಾರ್ ಅವರು ಸ್ನೇಹಿತರ ಜೊತೆ ಭಾಗಿ ಆಗಿದ್ದರು. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬನು ಕಿರಿಕ್ ಶುರು ಮಾಡಿದ್ದ. ಅಕ್ಷಯ್ ಕುಮಾರ್ ಸ್ನೇಹಿತರ ಮೇಲೆ ಆ ವ್ಯಕ್ತಿ ಕೈ ಮಾಡಲು ಆರಂಭಿಸಿದ್ದ. ಅದರಿಂದ ಅಕ್ಷಯ್ ಕುಮಾರ್ ಅವರಿಗೆ ಕೋಪ ಬಂದಿತ್ತು.

ಕುಡಿದು ಜಗಳ ಮಾಡುತ್ತಿದ್ದ ಆ ವ್ಯಕ್ತಿಗೆ ಅಕ್ಷಯ್ ಕುಮಾರ್ ಅವರು ಹಲವು ಬಾರಿ ಎಚ್ಚರಿಕೆ ನೀಡಿದರು. ಎಷ್ಟು ಸಲ ವಾರ್ನಿಂಗ್ ಕೊಟ್ಟರೂ ಕೂಡ ಆತ ತನ್ನ ವರ್ತನೆ ನಿಲ್ಲಿಸಲೇ ಇಲ್ಲ. ಆಗ ಅಕ್ಷಯ್ ಕುಮಾರ್ ಅವರಿಗೆ ಪಿತ್ತ ನೆತ್ತಿಗೇರಿತು. ಜೋರಾಗಿ ಆತನ ಕೆನ್ನೆಗೆ ಬಾರಿಸಿದರು. ಕೂಡಲೇ ಅವನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ! ಆತ ಬದುಕುತ್ತಾನೋ ಇಲ್ಲವೋ ಎಂದು ಅಕ್ಷಯ್ ಕುಮಾರ್ ಅವರಿಗೆ ಚಿಂತೆ ಶುರು ಆಯಿತು.

ಆ ಕ್ಷಣದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಹತ್ತಾರು ಆಲೋಚನೆ ಬಂದಿತ್ತು. ಆ ಘಟನೆಯಿಂದ ತನ್ನ ಕರಿಯರ್ ಮುಗಿದೇ ಹೋಯಿತು ಎಂದು ಅವರು ಭಾವಿಸಿದ್ದರು. ಅದೃಷ್ಟವಶಾತ್, ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿಗೆ ಪ್ರಜ್ಞೆ ಬಂತು. ಹಾಗಾಗಿ ಅಕ್ಷಯ್ ಕುಮಾರ್ ಬಚಾವ್ ಆದರು. ಒಂದು ವೇಳೆ ಇಂದು ಅದೇ ರೀತಿ ಜಗಳ ನಡೆದರೆ ತಾವು ಆ ರೀತಿ ಪ್ರತಿಕ್ರಿಯಿಸಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು

ಸಿನಿಮಾ ವಿಚಾರಕ್ಕೆ ಬರೋದಾದರೆ, ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್​​ಗಳಲ್ಲಿ ಅಕ್ಷಯ್ ಕುಮಾರ್ ಅವರು ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ‘ಭೂತ್ ಬಂಗ್ಲ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದಲ್ಲದೇ, ‘ವೆಲ್​ಕಮ್ ಟು ದಿ ಜಂಗಲ್’ ಮತ್ತು ‘ಹೈವಾನ್’ ಸಿನಿಮಾಗಳಲ್ಲೂ ಅಕ್ಷಯ್ ಕುಮಾರ್ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮ್ಯೂನಿಕ್ ಏರ್​​ಪೋರ್ಟ್​​ನಲ್ಲಿ ಪಾಕ್ ಆರ್ಮಿ ಮುಖ್ಯಸ್ಥ ಆಸಿಮ್ ಬಳಿ ಐಡಿ ಕೇಳಿದ ಭದ್ರತಾ ಸಿಬ್ಬಂದಿ – Kannada News | Asim Munir Briefly Halted at Munich Venue After Security Sought Identification

ಮ್ಯೂನಿಕ್, ಫೆಬ್ರವರಿ 15: ಜರ್ಮನಿಯ ಮ್ಯೂನಿಕಕ್ ಏರ್​ಪೋರ್ಟ್​​ನಲ್ಲಿ ಪಾಕ್ ಆರ್ಮಿ ಮುಖ್ಯಸ್ಥ ಆಸಿಮ್ ಮುನೀರ್ ಬಳಿ ಭದ್ರತಾ ಸಿಬ್ಬಂದಿ ಗುರುತಿಸನ ಚೀಟಿ ಕೇಳಿರುವ ವಿಡಿಯೋ ವೈರಲ್ ಆಗಿದೆ. ಫೀಲ್ಡ್ ಮಾರ್ಷಲ್ ಮುನೀರ್ ಮತ್ತು ಅವರ ತಂಡವು ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಜರ್ಮನ್ ನಗರಕ್ಕೆ ಬಂದಿತ್ತು. ಪಾಕಿಸ್ತಾನ ಸೇನಾ ಮುಖ್ಯಸ್ಥರು ತಮ್ಮ ಗುರುತಿನ ಚೀಟಿಯನ್ನು ಮುಂಭಾಗದಲ್ಲಿ ಕಾಣುವಂತೆ ಇಡುವಂತೆ ಭದ್ರತಾ ಅಧಿಕಾರಿ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಜರ್ಮನಿ ಮೂಲದ ಸಿಂಧಿ ರಾಜಕೀಯ ಸಂಘಟನೆಯಾದ ಜೀ ಸಿಂಧ್ ಮುತ್ತಹಿದಾ ಮಹಾಜ್ ಮುನೀರ್ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದೆ. ಜೆಎಸ್‌ಎಂಎಂ ಸದಸ್ಯರು ಅಲ್ಲೇ ಪ್ರತಿಭಟನೆಯನ್ನು ಕೂಡ ನಡೆಸಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊನೆಗೂ ಯುರೋಪಿಯನ್ ತಂಡದ ವಿರುದ್ಧ ಗೆದ್ದ ಇಂಗ್ಲೆಂಡ್ – Kannada News | England vs European teams at T20 World Cup 2026

T20 World Cup 2026: ಟಿ20 ವಿಶ್ವಕಪ್​​ನಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಯುರೋಪಿಯನ್ ತಂಡದ ವಿರುದ್ಧ ಗೆಲುವು ದಾಖಲಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡವು 19.4 ಓವರ್​​ಗಳಲ್ಲಿ 152 ರನ್​​​ಗಳಿಸಿ ಆಲೌಟ್ ಆಗಿತ್ತು.

153 ರನ್​​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 18.2 ಓವರ್​​​ಗಳಲ್ಲಿ 155 ರನ್ ಬಾರಿಸಿ 5 ವಿಕೆಟ್​​​ಗಳ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡವು ಯುರೋಪಿಯನ್ ತಂಡಗಳ ವಿರುದ್ಧದ ತನ್ನ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.

ಟಿ20 ವಿಶ್ವಕಪ್​​​ನಲ್ಲಿ ಇಂಗ್ಲೆಂಡ್ ತಂಡವು ಒಮ್ಮೆಯೂ ಯುರೋಪಿಯನ್ ತಂಡಗಳ ವಿರುದ್ಧ ಗೆಲುವು ದಾಖಲಿಸಿರಲಿಲ್ಲ. ಈ ಹಿಂದಿನ ಪಂದ್ಯಗಳ ಫಲಿತಾಂಶ ಹೀಗಿತ್ತು…

  • 2009ರ ಟಿ20 ವಿಶ್ವಕಪ್​: ನೆದರ್​​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಂಡವು 4 ವಿಕೆಟ್​​ಗಳ ಸೋಲನುಭವಿಸಿತ್ತು.
  • 2010ರ ಟಿ20 ವಿಶ್ವಕಪ್​​​: ಐರ್ಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.
  • 2014ರ ಟಿ20 ವಿಶ್ವಕಪ್: ನೆದರ್​​ಲೆಂಡ್ಸ್ ವಿರುದ್ಧ ಇಂಗ್ಲೆಂಡ್ 45 ರನ್​​ಗಳಿಂದ ಪರಾಜಯಗೊಂಡಿತ್ತು.
  • 2022ರ ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ 5 ರನ್​​ಗಳಿಂದ ಸೋಲನುಭವಿಸಿತ್ತು.
  • 2024ರ ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಇದೀಗ ಸ್ಕಾಟ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಇಂಗ್ಲೆಂಡ್ ತಂಡವು ಇದೇ ಮೊದಲ ಬಾರಿಗೆ ಯುರೋಪಿಯನ್ ತಂಡದ ವಿರುದ್ಧ ಟಿ20 ವಿಶ್ವಕಪ್​​​ನಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಯುರೋಪಿಯನ್ ತಂಡಗಳ ವಿರುದ್ಧದ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.

 

 

Source link

ಸೆಪ್ಟಿಕ್ ಟ್ಯಾಂಕ್​​ನಲ್ಲಿದ್ದಿದ್ದು ಸಿಯಾಳ ಶವ, ಕೊಲೆ ಮಾಡಿದ್ದು ಆಕೆಯ ಪ್ರೇಮಿ, ಅಂತೂ ಪ್ರಕರಣ ಇತ್ಯರ್ಥ – Kannada News | Bhopal Septic Tank Murder: Married Lover Kills Girlfriend Siya Over Blackmail, Body Found

ಭೋಪಾಲ್, ಫೆಬ್ರವರಿ 15:  ವಿವಾಹಿತ ಪ್ರೇಮಿಯೊಬ್ಬ ಪ್ರೇಯಸಿಯನ್ನು ಹತ್ಯೆ(Murder) ಮಾಡಿ ಸೆಪ್ಟಿಕ್ ಟ್ಯಾಂಕ್​​ಗೆ ಎಸೆದಿದ್ದ ಘಟನೆ ಭೋಪಾಲ್​​ನಲ್ಲಿ ನಡೆದಿದೆ. ಘಟನೆ ನಡೆದು 24 ಗಂಟೆಯೊಳಗೆ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್​ನಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಪ್ರೀತಿ, ದ್ರೋಹ, ಬ್ಲ್ಯಾಕ್​ಮೇಲ್ ಹಾಗೂ ಕೊಲೆ ಪ್ರಕರಣ ಬಹಿರಂಗಗೊಂಡಿದೆ.

ಮೃತ ಯುವತಿಯನ್ನು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಸೋಮವಾರ ಸಿಯಾಳನ್ನು ಆಕೆಯ ವಿವಾಹಿತ ಪ್ರಿಯಕರ ಸಮೀರ್ ತನ್ನ ಕುಟುಂಬ ಸದಸ್ಯರ ಸಹಾಯದಿಂದ ಕತ್ತು ಹಿಸುಕಿ ಕೊಂದಿದ್ದಾನೆ. ಆಕೆಯ ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ, ಅಪರಾಧದ ಎಲ್ಲಾ ಕುರುಹುಗಳನ್ನು ಅಳಿಸಲು ಕಮಲಾ ನಗರದ ಅವರ ಮನೆಯ ಬಳಿಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾನೆ.

ಸುಮಾರು ಒಂದು ವರ್ಷದ ಹಿಂದೆ, ಸಿಯಾ ಮತ್ತು ಸಮೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಚಾಟ್​ನಿಂದ ಪ್ರಾರಂಭವಾಗಿದದ ಸ್ನೇಹ ಪ್ರೀತಿಗೆ ಪ್ರೀತಿಗೆ ತಿರುಗಿತ್ತು. ಬಳಿಕ ಅವರಿಬ್ಬರ ನಡುವೆ ಸಂಬಂಧವೂ ಕೂಡ ಇತ್ತು.
ಸಿಯಾ ಮಹಾರಾಷ್ಟ್ರದಲ್ಲಿರುವ ತನ್ನ ಮನೆಯನ್ನು ತೊರೆದು ಸಮೀರ್ ಜೊತೆ ವಾಸಿಸಲು ಸುಮಾರು ಮೂರು ತಿಂಗಳ ಹಿಂದೆ ಭೋಪಾಲ್‌ಗೆ ತೆರಳಿದರು. ತಾನು ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಅವಳು ನಂಬಿದ್ದಳು.ಆದರೆ ಸಮೀರ್ ಈಗಾಗಲೇ ವಿವಾಹಿತನಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದ. ಸಿಯಾ ಕಮಲಾ ನಗರದ ತನ್ನ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಿದ್ದಂತೆ ನಿತ್ಯ ಜಗಳಗಳು ಶುರುವಾಗಿದ್ದವು.

ಮತ್ತಷ್ಟು ಓದಿ: ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್​ನಲ್ಲಿ ಮಹಿಳೆಯ ಶವ ಪತ್ತೆ

ಸಿಯಾ ಮತ್ತು ಸಮೀರ್ ಅವರ ಪತ್ನಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.ಅದು ಅಕ್ಕಪಕ್ಕದ ಮನೆಯವರೆಗೂ ಹೋಗಿತ್ತು. ಸಮೀರ್ ಸಿಯಾ ಅವರಿಂದ ಹಲವಾರು ಸಂಗತಿಗಳನ್ನು ಮರೆಮಾಡಿದ್ದ ಮತ್ತು ಕೌಟುಂಬಿಕ ಅಶಾಂತಿ ಹೆಚ್ಚಾಗತೊಡಗಿತ್ತು.

ತನಿಖಾಧಿಕಾರಿಗಳು ಹೇಳುವಂತೆ ಸಿಯಾ ಸಮೀರ್ ಮೇಲೆ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಅವನು ನಿರಾಕರಿಸಿದರೆ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಳು .ಕಾನೂನು ಕ್ರಮ ಜರುಗಿಸುವಂತೆ ಬೆದರಿಕೆ ಹಾಕಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೋಮವಾರ ಸಂಜೆ, ಸಿಯಾ ಮತ್ತು ಸಮೀರ್ ನಡುವೆ ಮತ್ತೊಂದು ಬಿಸಿ ವಾಗ್ವಾದ ನಡೆಯಿತು. ಪೊಲೀಸರ ಪ್ರಕಾರ, ಕೋಪದ ಭರದಲ್ಲಿ ಸಮೀರ್ ಸಿಯಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಸಾಕ್ಷ್ಯಗಳನ್ನು ನಾಶಮಾಡಲು ಸಮೀರ್ ತನ್ನ ಸಹೋದರ, ತಾಯಿ ಮತ್ತು ಸಹೋದರಿಯಿಂದ ಸಹಾಯ ಪಡೆದಿದ್ದ ಎನ್ನಲಾಗಿದೆ. ಮೃತದೇಹವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಮುಚ್ಚಿ ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿಯ ನೆಪದಲ್ಲಿ ಅವರ ಮನೆಯ ಸಮೀಪವಿರುವ ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದ.

ಗುರುವಾರ ಸಂಜೆ, ಹತ್ತಿರದಲ್ಲಿ ಆಟವಾಡುತ್ತಿದ್ದ ಮಕ್ಕಳು ಟ್ಯಾಂಕ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದರು. ಒಳಗೆ ಕಬ್ಬಿಣದ ಪೆಟ್ಟಿಗೆ ತೇಲುತ್ತಿರುವುದನ್ನು ನಿವಾಸಿಗಳು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ತಲುಪಿ ಟ್ಯಾಂಕ್ ಅನ್ನು ಹುಡುಕಿದಾಗ, ಪೆಟ್ಟಿಗೆಯೊಳಗೆ ಸಿಯಾಳ ಕೊಳೆತ ದೇಹವು ಪತ್ತೆಯಾಗಿತ್ತು.

ಸಮೀರ್ ತಲೆಮರೆಸಿಕೊಂಡಿದ್ದರೂ, ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು ಆತನ ಸಹೋದರ, ತಾಯಿ ಮತ್ತು ಸಹೋದರಿಯನ್ನು ಬಂಧಿಸಿದ್ದಾರೆ. ಸಮೀರ್ ಅವರ ಪತ್ನಿ ಕೂಡ ನಿಗಾದಲ್ಲಿದ್ದಾರೆ. ಅಪರಾಧದ ಬಗ್ಗೆ ಹೆಚ್ಚಿನ ಕುಟುಂಬ ಸದಸ್ಯರಿಗೆ ಮಾಹಿತಿ ಇದ್ದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಸಿಯಾ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಮೂರು ಬಾರಿ ಮದುವೆಯಾಗಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಂಹಿತಾ ವಿನ್ಯಾ ನಟನೆಯ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಫೆ.20ಕ್ಕೆ ರಿಲೀಸ್ – Kannada News | Samhita Vinya Sinto Jacob starrer Mixing Preethi movie releasing on 20 February

ನಟಿ, ಮಾಡೆಲ್ ಸಂಹಿತಾ ವಿನ್ಯಾ (Samhita Vinya) ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಅಭಿನಯಿಸಿರುವ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಪೊಲ್ಲಾಚಿ ಮಹಾಲಿಂಗಂ ಅವರು ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ, ಹಾರರ್ (Horror), ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಈ ಸಿನಿಮಾ ಫೆಬ್ರವರಿ 20ರಂದು ಬಿಡುಗಡೆ ಆಗಲಿದೆ. ‘ಮಿಕ್ಸಿಂಗ್ ಪ್ರೀತಿ’ (Mixing Preethi) ಬಿಡುಗಡೆ ಹೊಸ್ತಿಲಿನಲ್ಲಿ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ. ತಮಿಳಿನಲ್ಲೂ ಈ ಸಿನಿಮಾ ಸಿದ್ಧವಾಗಿದೆ.

ಒಂದು ರೆಸಾರ್ಟ್​​ನಲ್ಲಿ ನಡೆಯುವ ಹಾರರ್ ಕಥೆ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾದಲ್ಲಿ ಇದೆ. ಮೂವರು ಸ್ನೇಹಿತರು ರೆಸಾರ್ಟ್​​ಗೆ ಹೋದಾಗ ಅವರಿಗೆ ದೆವ್ವದ ಕಾಟ ಶುರು ಆಗುತ್ತದೆ. ಅಲ್ಲಿಂದ ಅವರೆಲ್ಲ ಹೇಗೆ ಹೊರಬಂದರು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಹಾರರ್ ಜೊತೆಗೆ ಒಂದು ಲವ್ ಸ್ಟೋರಿ ಕೂಡ ಸಾಗುತ್ತದೆ. ಕೇರಳ, ಚೆನ್ನೈ ಮತ್ತು ಬೆಂಗಳೂರಲ್ಲಿ ಚಿತ್ರೀಕರಣ‌ ನಡೆಸಲಾಗಿದೆ. ರಾತ್ರಿ ವೇಳೆ ಚಿತ್ರೀಕರಣ ಮಾಡುವಾಗ ರೆಸಾರ್ಟ್​​ನಲ್ಲಿ ನಿಜವಾದ ಹಾರರ್ ಫೀಲ್ ಆಯ್ತು ಎಂದು ನಾಯಕಿ ಸಂಹಿತಾ ಹೇಳಿದ್ದಾರೆ.

ಸಂಹಿತಾ ವಿನ್ಯಾ ಅವರು 75ಕ್ಕೂ ಅಧಿಕ ಫ್ಯಾಷನ್ ಶೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ. ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದಾರೆ. ಇದೇ ಮೊದಲ ಬಾರಿಗೆ ಸಂಹಿತಾ ವಿನ್ಯಾ ಅವರು ಹಾರರ್, ಥ್ರಿಲ್ಲರ್ ಸಿನಿಮಾಗೆ ನಾಯಕಿ ಆಗಿದ್ದಾರೆ.

‘ಮೆಜೆಸ್ಟಿಕ್ 2′, ‘ಆಯುಧ’, ‘ಸ್ವಾಭಿಮಾನಿ’, ‘ಯಾಕೋ ಬೇಜಾರು’, ‘ವಿದೂಷಕ’, ‘ಅಮೃತಘಳಿಗೆ’, ‘ಜಿಎಸ್​ಟಿ’, ‘ಲಂಗೋಟಿ ಮ್ಯಾನ್’, ‘ಯೂ ಆರ್ ಮೈ ಹೀರೋ’ ಮುಂತಾದ ಸಿನಿಮಾಗಳಲ್ಲಿ ಕೂಡ ಸಂಹಿತಾ ವಿನ್ಯಾ ಅವರು ಅಭಿನಯಿಸಿದ್ದಾರೆ. ಈವರೆಗೂ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು

ಈಗ ಬಿಡುಗಡೆಗೆ ಸಿದ್ಧವಾಗಿರುವ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾದಲ್ಲಿ ಸಿಂಟೊ ಜೇಕಬ್ ಅವರು ಹೀರೋ ಆಗಿ ನಟಿಸಿದ್ದಾರೆ. ಪ್ರಿಯಾ ಪವನ್, ದಿವ್ಯ ಜಸ್ಮಿತಾ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಅವರು ಸಂಗೀತ ನೀಡಿದ್ದಾರೆ. ಸಾಧಿಕ್ ಕಬೀರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ತಮಿಳಿನಲ್ಲಿ ‘ಮಿಕ್ಸಿಂಗ್ ಕಾದಲ್’ ಎಂಬ ಶೀರ್ಷಿಕೆಯಲ್ಲಿ ಈ ಸಿನಿಮಾ ತಯಾರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link