Category Archives: Blog

Your blog category

Daily Devotional: ಹೊರಗಡೆ ಹೋಗುವಾಗ ಅಪಶಕುನಗಳು ಎದುರಾದರೆ ಏನು ಮಾಡಬೇಕು? ಜ್ಯೋತಿಷ್ಯ ಸಲಹೆ ಇಲ್ಲಿದೆ

ಸಾಮಾನ್ಯವಾಗಿ ಪ್ರಯಾಣಕ್ಕೆ ಹೊರಡುವ ಸಂದರ್ಭದಲ್ಲಿ, ಅದು ಯಾವುದೇ ವಾಹನದಲ್ಲಿರಲಿ ಅಥವಾ ಕಾಲ್ನಡಿಗೆಯಲ್ಲಿರಲಿ, ಕೆಲವು ಘಟನೆಗಳು ಸಂಭವಿಸಿದಾಗ ಜಾಗರೂಕರಾಗಿರುವುದು ಬಹಳ ಮುಖ್ಯ. ಇಂತಹ ಘಟನೆಗಳನ್ನು ನಾವು ಅಪಶಕುನಗಳೆಂದು ಗುರುತಿಸುತ್ತೇವೆ. ಉದಾಹರಣೆಗೆ, ವಾಹನದ ಬೀಗದಕೈ ಕೆಳಗೆ ಬೀಳುವುದು, ಕಾಲು ಎಡವುವುದು, ಅಥವಾ ಪ್ರಯಾಣದ ಕುರಿತು ಯಾರಾದರೂ ಕೇಳುವುದು, ದೃಷ್ಟಿ ಕಾಣಿಸುವುದು, ಅಥವಾ ಅನಾರೋಗ್ಯದ ಲಕ್ಷಣಗಳಾದ ಮೈ ನೋವು, ತಲೆ ನೋವು, ಒಂಟಿ ಸೀನು ಮುಂತಾದವುಗಳು ಎದುರಾಗಬಹುದು. ಹಿಂದೂ ಸಂಪ್ರದಾಯದಲ್ಲಿ ಇಂತಹ ಘಟನೆಗಳನ್ನು ಕೇವಲ ಭಯವೆಂದು ನೋಡದೆ, ಇವುಗಳನ್ನು ಒಂದು ರೀತಿಯ ಜಾಗೃತಿ ಮೂಡಿಸುವ ಸಂಕೇತಗಳಾಗಿ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಬೀಗದಕೈ ಕೆಳಗೆ ಬಿದ್ದರೆ ಅದು ಪೆಟ್ರೋಲ್ ಇದೆಯೇ ಅಥವಾ ವಾಹನ ಪಂಚರ್ ಆಗಿದೆಯೇ ಎಂದು ಪರಿಶೀಲಿಸುವಂತೆ ಎಚ್ಚರಿಸುವ ಒಂದು ಸೂಚನೆಯಾಗಿರಬಹುದು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಇಂತಹ ಪರಿಸ್ಥಿತಿ ಎದುರಾದಾಗ ಆತಂಕ ಪಡಬೇಕಾಗಿಲ್ಲ. ಇದಕ್ಕೆ ಸರಳ ಪರಿಹಾರಗಳನ್ನು ಅನುಸರಿಸಬಹುದು. ಈ ಪರಿಹಾರಗಳು ಕೇವಲ ಬೆಳಿಗ್ಗೆ ಮನೆಯಿಂದ ಮೊದಲ ಬಾರಿಗೆ ಹೊರಡುವಾಗ ಮಾತ್ರ ಅನ್ವಯಿಸುತ್ತವೆ, ಕಚೇರಿಯಿಂದ ಹೊರಡುವಂತಹ ಸಂದರ್ಭಗಳಿಗೆ ಅಲ್ಲ. ಮೊದಲನೆಯದಾಗಿ, ಸ್ವಲ್ಪ ಸಮಯದವರೆಗೆ ಅಲ್ಲೇ ಕುಳಿತು ವಿಶ್ರಾಂತಿ ಪಡೆಯುವುದು. ಕೆಲವರು ಅರ್ಧ ಗ್ಲಾಸ್ ನೀರು ಕುಡಿದು ಸ್ವಲ್ಪ ಹೊತ್ತು ಕುಳಿತು ನಂತರ ಹೊರಡುತ್ತಾರೆ. ಮತ್ತೆ ಕೆಲವರು, ಸ್ವಲ್ಪ ದೂರ ಹೋಗಿ ಇಂತಹ ಘಟನೆ ಸಂಭವಿಸಿದರೆ, ಮತ್ತೆ ಮನೆಗೆ ಬಂದು ಸ್ವಲ್ಪ ಹೊತ್ತು ಕುಳಿತು ನಂತರ ಹೊರಡುತ್ತಾರೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಆಧ್ಯಾತ್ಮಿಕ ಪರಿಹಾರಗಳೆಂದರೆ ಓಂ ಗಂ ಗಣಪತಯೇ ನಮಃ ಮಂತ್ರವನ್ನು ಜಪಿಸುವುದು ಅಥವಾ ಹನುಮ ಮಂತ್ರವನ್ನು ಪಠಿಸುವುದು. ಹನುಮನು ವಾಹನಗಳ ರಕ್ಷಣೆಗೆ ಸಹಕಾರಿ ಎಂದು ನಂಬಲಾಗಿದೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಮೇಲೆ ಹನುಮನ ಬಾವುಟ ಇದ್ದುದನ್ನು ಇಲ್ಲಿ ಉದಾಹರಣೆಯಾಗಿ ನೀಡಲಾಗುತ್ತದೆ. ಜೊತೆಗೆ, ಮನೆಯಿಂದ ಹೊರಡುವಾಗ ಬಲಗಾಲನ್ನು ಮೊದಲು ಹೊರಗಿಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇನ್ನೂ ಕೆಲವು ಕಡೆ ಬೆಲ್ಲ ಮತ್ತು ನೀರನ್ನು ಸೇವಿಸಿ ಹೊರಡುವ ಪದ್ಧತಿಯಿದೆ. ಈ ರೀತಿ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ನಂಬಿಕೆಯೊಂದಿಗೆ ಹೊರಟರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭಾವನೆ ಬಲಗೊಳ್ಳುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IHD 2026 Exclusive: ಆರೋಗ್ಯ ಕ್ಷೇತ್ರದಲ್ಲಿ AI ಪಾತ್ರ; ಡಾ. ಸಂಗೀತಾ ರೆಡ್ಡಿ ಅವರೊಂದಿಗಿನ ವಿಶೇಷ ಸಂದರ್ಶನ – Kannada News | IHD 2026 Exclusive: Dr Sangita Reddys Vision for AI, Patient Centred Care, and Indias Global Healthcare Leadership

ಡಾ. ಸಂಗೀತಾ ರೆಡ್ಡಿ

2026 ರ ಅಂತರರಾಷ್ಟ್ರೀಯ ಆರೋಗ್ಯ ಸಂವಾದ(IHD) ಬಗ್ಗೆ ನ್ಯೂಸ್‌9 ಜೊತೆ ನಡೆದ ವಿಶೇಷ ಸಂದರ್ಶನದಲ್ಲಿ ಅಪೋಲೋ ಆಸ್ಪತ್ರೆಗಳ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಅವರು ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ತಾಂತ್ರಿಕ ಕ್ರಾಂತಿ, ರೋಗಿಗಳ ಸುರಕ್ಷತೆ ಮತ್ತು ಭಾರತದ ಜಾಗತಿಕ ನಾಯಕತ್ವದ ಬಗ್ಗೆ ವಿಶ್ಲೇಷಣಾತ್ಮಕವಾಗಿ ವಿವರಿಸಿದರು. ವೇಗವಾಗಿ ಬದಲಾಗುತ್ತಿರುವ ವೈದ್ಯಕೀಯ ಪರಿಸರದಲ್ಲಿ ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಆರೋಗ್ಯ ವ್ಯವಸ್ಥೆಗಳು ಮತ್ತು ಪರಿಣಾಮಕಾರಿ ನಾಯಕತ್ವವು ಭವಿಷ್ಯದ ಆರೋಗ್ಯ ಸೇವೆಯ ದಿಕ್ಕನ್ನು ನಿರ್ಧರಿಸುತ್ತಿವೆ ಎಂದು ತಿಳಿಸಿದರು.

ರೋಗಿಗಳ ಸುರಕ್ಷತೆಯ ವಿಷಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮಹತ್ವದ ಪರಿವರ್ತನೆ ನಡೆದಿದೆ. ಹಿಂದೆ ತಪ್ಪುಗಳನ್ನು ಗುರುತಿಸಿ, ಅವುಗಳ ಮೂಲ ಕಾರಣಗಳನ್ನು ವಿಶ್ಲೇಷಿಸಿ, ಮರುಕಳಿಸದಂತೆ ತರಬೇತಿ ನೀಡುವುದು ಸುರಕ್ಷತಾ ಕ್ರಮಗಳಾಗಿದ್ದವು. ಆದರೆ ಈಗ ಸುರಕ್ಷತೆ ವ್ಯವಸ್ಥೆಯೊಳಗೇ ಅಳವಡಿಸಲಾಗುತ್ತಿದೆ. AI ಮತ್ತು ಡೇಟಾ ವಿಶ್ಲೇಷಣೆಯ ನೆರವಿನಿಂದ ಸಂಭವಿಸಬಹುದಾದ ಅಪಾಯಗಳನ್ನು ಮುಂಚಿತವಾಗಿಯೇ ಊಹಿಸಿ ತಡೆಯುವುದು ಸಾಧ್ಯವಾಗಿದೆ. ಉದಾಹರಣೆಗೆ, ಅಪೋಲೋ ಆಸ್ಪತ್ರೆಗಳಲ್ಲಿ ವೈದ್ಯರು ನೀಡುವ ಔಷಧಿ ಪ್ರಿಸ್ಕ್ರಿಪ್ಷನ್‌ಗಳನ್ನು AI ಪರಿಶೀಲಿಸಿ, ಅಗತ್ಯವಿದ್ದರೆ ತಕ್ಷಣವೇ ತಿದ್ದುಪಡಿ ಸೂಚಿಸುತ್ತದೆ. ಇದರಿಂದ “ಪ್ರಯೋಗ–ದೋಷ” ವಿಧಾನ ಬದಲಾಗಿ “ಮುಂಚಿತ ನಿರ್ಧಾರ ಮತ್ತು ಖಚಿತ ಆರೈಕೆ” ಮಾದರಿ ರೂಪುಗೊಂಡಿದೆ ಎಂದು ಡಾ. ರೆಡ್ಡಿ ತಿಳಿಸಿದ್ದಾರೆ.

ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳು ವೈದ್ಯಕೀಯ ಪ್ರತಿಕ್ರಿಯೆಯ ವೇಗವನ್ನು ಹೆಚ್ಚಿಸುತ್ತವೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ರೋಗಿಯ ರಕ್ತದ ಸಕ್ಕರೆ ಅಥವಾ ಇತರೆ ಪರೀಕ್ಷಾ ಫಲಿತಾಂಶಗಳಲ್ಲಿ ತುರ್ತು ಬದಲಾವಣೆ ಕಂಡುಬಂದರೆ, ಪ್ರಯೋಗಾಲಯದಿಂದಲೇ ತಕ್ಷಣ ವಾರ್ಡ್‌ಗೆ ಮಾಹಿತಿ ಸಾಗುತ್ತದೆ. ಮೆದುಳಿನ ರಕ್ತಸ್ರಾವದಂತಹ ಗಂಭೀರ ಪ್ರಕರಣಗಳಲ್ಲಿ AI ಸ್ಕ್ಯಾನ್‌ಗಳನ್ನು ಕ್ಷಿಪ್ರವಾಗಿ ವಿಶ್ಲೇಷಿಸಿ ವೈದ್ಯರಿಗೆ ತಕ್ಷಣದ ವರದಿ ನೀಡುತ್ತದೆ. ಇದರಿಂದ ನಿರ್ಣಾಯಕ 10–15 ನಿಮಿಷಗಳನ್ನು ಉಳಿಸಬಹುದು, ಇದು ರೋಗಿಯ ಜೀವ ಉಳಿಸುವಲ್ಲಿ ಅಥವಾ ಮೆದುಳಿನ ಹಾನಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತಿಮ ತೀರ್ಮಾನ ಮಾನವ ವೈದ್ಯರದ್ದೇ ಆದರೂ, AI ಅವರ ನಿರ್ಧಾರಗಳನ್ನು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ತೆಗೆದುಕೊಳ್ಳಲು ನೆರವಾಗುತ್ತದೆ.

ನಾಯಕತ್ವದ ಬಗ್ಗೆ ಮಾತನಾಡಿದ ಅವರು, ತಂತ್ರಜ್ಞಾನ ಅಳವಡಿಕೆಯಲ್ಲಿ ವೇಗ ಮತ್ತು ನೈತಿಕ ಹೊಣೆಗಾರಿಕೆ ಎರಡರಲ್ಲೂ ಸಮತೋಲನ ಅಗತ್ಯವಿದೆ ಎಂದು ಹೇಳಿದರು. AI ಬಳಕೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಆರೈಕೆಯನ್ನು ನೀಡಬೇಕು, ಆದರೆ ರೋಗಿಯ ಗೌಪ್ಯತೆ, ಡೇಟಾ ಭದ್ರತೆ ಮತ್ತು ಸಮಾನತೆ ಕೂಡ ಖಾತ್ರಿಯಾಗಬೇಕು. “ಉದ್ದೇಶಕ್ಕೆ ಬದ್ಧತೆ” ಎಂಬುದು ಅವರ ನಾಯಕತ್ವದ ಮೂಲ ತತ್ವವಾಗಿದ್ದು, ಸ್ಪಷ್ಟ ಗುರಿ ಮತ್ತು ಮಾನವೀಯ ಮನೋಭಾವ ಇದ್ದರೆ ಯಾವುದೇ ಸವಾಲನ್ನು ಎದುರಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಕ್ಕಿ ಜ್ವರ ಹೇಗೆ ಹರಡುತ್ತೆ? ಯಾವ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು

ಭಾರತದ ಜಾಗತಿಕ ಆರೋಗ್ಯ ಸಾಮರ್ಥ್ಯದ ಬಗ್ಗೆ ಅವರು ಮೂರು ಪ್ರಮುಖ ಪರಿಕಲ್ಪನೆಗಳನ್ನು ಪ್ರಸ್ತಾಪಿಸಿದರು – “Heal in India”, “Healed by India” ಮತ್ತು “Heal from India”. ‘Heal in India’ ಅಡಿಯಲ್ಲಿ ವಿಶ್ವದ 120 ಕ್ಕೂ ಹೆಚ್ಚು ದೇಶಗಳಿಂದ ರೋಗಿಗಳು ಉತ್ತಮ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದ ಚಿಕಿತ್ಸೆಗೆ ಭಾರತವನ್ನು ಆರಿಸುತ್ತಿದ್ದಾರೆ. ‘Healed by India’ ಮೂಲಕ ಭಾರತದ ಯುವಜನತೆಗೆ ವೈದ್ಯಕೀಯ ಮತ್ತು ನರ್ಸಿಂಗ್ ತರಬೇತಿ ನೀಡಿ ಜಾಗತಿಕ ಆರೋಗ್ಯ ಕಾರ್ಯಪಡೆಯನ್ನು ಬಲಪಡಿಸಲಾಗುತ್ತಿದೆ. ‘Heal from India’ ತಂತ್ರಜ್ಞಾನ ಮತ್ತು ಟೆಲಿಮೆಡಿಸಿನ್ ಮೂಲಕ ದೂರಸ್ಥ ಪ್ರದೇಶಗಳಿಗೂ ಆರೋಗ್ಯ ಸೇವೆ ತಲುಪಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಡಾ. ಸಂಗೀತಾ ರೆಡ್ಡಿ ಅವರ ದೃಷ್ಟಿಯಲ್ಲಿ ಆರೋಗ್ಯ ರಕ್ಷಣೆಯ ಭವಿಷ್ಯ ಕೇವಲ ರೋಗಗಳನ್ನು ಚಿಕಿತ್ಸೆ ಮಾಡುವುದಲ್ಲ, ಜನರ ಜೀವನಮಟ್ಟವನ್ನು ಸುಧಾರಿಸುವ ಸಮಗ್ರ ವ್ಯವಸ್ಥೆಯಾಗಿರಬೇಕು. “ಅನಾರೋಗ್ಯದ ಆರೈಕೆ” ಯಿಂದ “ಆರೋಗ್ಯ ಮತ್ತು ಸಂತೋಷದ ಬದುಕು” ಕಡೆಗೆ ಸಾಗುವುದು ನಮ್ಮ ಗುರಿಯಾಗಬೇಕು ಎಂಬ ಸಂದೇಶವನ್ನು ಅವರು ನೀಡಿದರು. ತಂತ್ರಜ್ಞಾನ, ಮಾನವೀಯತೆ ಮತ್ತು ದೃಢ ನಾಯಕತ್ವ ಒಟ್ಟುಗೂಡಿದಾಗ ಮಾತ್ರ ಆರೋಗ್ಯ ಕ್ಷೇತ್ರದಲ್ಲಿ ನಿಜವಾದ ಬದಲಾವಣೆ ಸಾಧ್ಯವೆಂದು ಅವರ ಮಾತುಗಳು ಸ್ಪಷ್ಟಪಡಿಸುತ್ತವೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:43 pm, Sun, 8 February 26

Source link

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ಭಾರತೀಯ ಕೃಷಿಕರ ಆದಾಯ ಏರುತ್ತದೆ ಎಂದ ಪೀಯೂಶ್ ಗೋಯಲ್ – Kannada News | India US trade deal, Indian farmers set to gain from lower tariffs says Piyush Goyal

ನವದೆಹಲಿ, ಫೆಬ್ರುವರಿ 8: ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ (US India trade deal) ರೈತರ ಹಿತಾಸಕ್ತಿಯನ್ನು ಬಲಿ ಕೊಡಲಾಗಿದೆ ಎನ್ನುವ ಆರೋಪವನ್ನು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯೂಶ್ ಗೋಯಲ್ (Piyush Goyal) ತಳ್ಳಿಹಾಕಿದ್ದಾರೆ. ಅಮೆರಿಕದೊಂದಿಗಿನ ಒಪ್ಪಂದದಿಂದ ಭಾರತದ ಕೃಷಿ ಕ್ಷೇತ್ರಕ್ಕೆ ಹಾನಿಯಾಗುವುದಿಲ್ಲ. ಬದಲಾಗಿ, ಕೃಷಿಕರ ಆದಾಯ ಹೆಚ್ಚಲು ಸಹಾಯವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ಫೆಬ್ರುವರಿ 7ರಂದು ಮಧ್ಯಂತರ ವ್ಯಾಪಾರ ಒಪ್ಪಂದದ ಅಂಶಗಳನ್ನು ಪ್ರಕಟಿಸಲಾಯಿತು. ಅದರ ಪ್ರಕಾರ, ಅಮೆರಿಕದ ಸರಕುಗಳ ಮೇಲೆ ಭಾರತವು ಟ್ಯಾರಿಫ್ ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ. 18ರಷ್ಟು ಟ್ಯಾರಿಫ್ ಹಾಕುತ್ತದೆ.

ಇದನ್ನೂ ಓದಿ: ನರೇಂದ್ರ ಮೋದಿ ಮಲೇಷ್ಯಾ ಭೇಟಿ; ಯುಪಿಐನಿಂದ ಹಿಡಿದು ಸೆಮಿಕಂಡಕ್ಟರ್​ವರೆಗೆ ಹಲವು ಜಂಟಿ ಉಪಕ್ರಮಗಳ ಅನಾವರಣ

ಅಮೆರಿಕದ ಸರಕುಗಳಿಗೆ ಶೂನ್ಯ ಟ್ಯಾರಿಫ್, ನಮ್ಮ ಸರಕುಗಳಿಗೆ ಅಧಿಕ ಟ್ಯಾರಿಫ್, ಈ ಕ್ರಮವು ಭಾರತೀಯ ಕೃಷಿ ಕ್ಷೇತ್ರವನ್ನು ಬಲಿಕೊಡುವುದಾಗಿದೆ ಎಂದು ರೈತ ಸಂಘಟನೆಗಳು ಧ್ವನಿ ಎತ್ತಿವೆ. ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯ ಕೃಷಿ ಕ್ಷೇತ್ರವನ್ನು ಅರ್ಪಿಸಲಾಗಿದೆ ಎಂದು ಈ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸಂಯುಕ್ತ ಕಿಸಾನ್ ಮೋರ್ಚಾ ಮೊದಲಾದ ಅನೇಕ ರೈತ ಸಂಘಟನೆಗಳು ಒಟ್ಟಾಗಿ ಸರ್ಕಾರದ ವಿರುದ್ಧ ಫೆಬ್ರುವರಿ 12ರಂದು ಪ್ರತಿಭಟನೆಗಳನ್ನು ನಡೆಸಲು ಯೋಜಿಸಿವೆ.

ಕೃಷಿ ಕ್ಷೇತ್ರ ಬಲಿಕೊಟ್ಟಿಲ್ಲ, ರೈತರ ಆದಾಯ ಹೆಚ್ಚುತ್ತೆ: ಸಚಿವ ಗೋಯಲ್

ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅಮೆರಿಕದ ಟ್ಯಾರಿಫ್ ಕಡಿಮೆ ಇದೆ. ಅಮೆರಿಕಕ್ಕೆ ಭಾರತದಿಂದ ವರ್ಷದಲ್ಲಿ 55 ಬಿಲಿಯನ್ ಡಾಲರ್ ಮೌಲ್ಯದ ಕೃಷಿ ಮತ್ತು ಮೀನು ಉತ್ಪನ್ನಗಳು ರಫ್ತಾಗುತ್ತಿವೆ. ಈಗ ಟ್ಯಾರಿಫ್ ಕಡಿಮೆ ಇರುವುದರಿಂದ ಈ ರಫ್ತು ಮತ್ತಷ್ಟು ಹೆಚ್ಚಾಗುತ್ತದೆ. ಪರಿಣಾಮವಾಗಿ, ರೈತರ ಆದಾಯ ಹೆಚ್ಚಲೂ ಸಹಾಯವಾಗುತ್ತದೆ ಎಂದು ಪಿಯೂಶ್ ಗೋಯಲ್ ವಿವರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದಿಂದ ಭಾರತದ ರೈತರು, ಎಂಎಸ್‌ಎಂಇಗಳಿಗೆ ತೊಂದರೆಯಾಗುವುದಿಲ್ಲ; ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ

ಅಮೆರಿಕದೊಂದಿಗಿನ ಈ ಟ್ರೇಡ್ ಡೀಲ್​ನಲ್ಲಿ ತನ್ನ ಕೃಷಿ ಮತ್ತು ಡೈರಿ ಸೆಕ್ಟರ್ ಅನ್ನು ಬಹುತೇಕ ಹೊರಗಿಡಲಾಗಿದೆ ಭಾರತ ಸರ್ಕಾರ ಹೇಳಿಕೊಂಡಿದೆ. ಭಾರತದಲ್ಲಿ ಹೆಚ್ಚು ಬೆಳೆಯದ ಮತ್ತು ಹೆಚ್ಚು ಮಾರಾಟವಾಗದ ಸರಕುಗಳಿಗೆ ಟ್ಯಾರಿಫ್ ಇಳಿಸಲಾಗಿದೆ. ಹೆಚ್ಚಿನ ಕೃಷಿ ಉತ್ಪನ್ನಗಳಿಗೆ ಟ್ಯಾರಿಫ್ ವಿನಾಯಿತಿ ಕೊಟ್ಟಿಲ್ಲ ಎಂಬುದು ಸರ್ಕಾರದ ಸ್ಪಷ್ಟನೆ. ಆದರೆ, ಸೋಯಾಬೀನ್ ಎಣ್ಣೆ, ಪಶುಗಳಿಗೆ ನೀಡುವ ರೆಡ್ ಸೋರ್ಗಮ್ ಆಹಾರ, ಒಣಗಿದ ಡಿಸ್ಟಿಲರ್ಸ್ ಗ್ರೈನ್ ಇತ್ಯಾದಿ ವಸ್ತುಗಳಿಗೆ ಸರ್ಕಾರ ಮುಕ್ತ ಪ್ರವೇಶ ಕೊಟ್ಟಿರುವುದು ಭಾರತೀಯ ಕೃಷಿಕರ ಬದುಕಿಗೆ ಎರವಾಗುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಮುಖಂಡ ಕೃಷ್ಣ ಪ್ರಸಾದ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ – Kannada News | Lakkundi Gold treasure: Snake Skin found In Kodi Basavanna Temple

ಗದಗ (ಫೆಬ್ರವರಿ. 08): ಕಲ್ಯಾಣಿ ಚಾಲುಕ್ಯರ ಬಂಗಾರದ ನಾಣ್ಯಗಳ ಟಂಕಸಾಲೆ, ಶಿಲ್ಪಕಲೆಗಳ ತೊಟ್ಟಿಲು, ಕಲೆಗಳ ಬೀಡು ಎಂದು ಪ್ರಸಿದ್ಧಿಯಾದ ಲಕ್ಕುಂಡಿ (Lakkundi) ಕೇವಲ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಮಣ್ಣಿನ ಅಡಿಯಲ್ಲಿ ಅಡಗಿರುವ ಅಗಾಧ ಸಂಪತ್ತು ಮತ್ತು ಆ ಸಂಪತ್ತನ್ನು ಕಾಯುತ್ತಿರುವ ನಾಗರಹಾವುಗಳ ರಹಸ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಐತಿಹಾಸಿ ಕೋಡಿ ಬಸವಣ್ಣ ದೇವಸ್ಥಾನಕ್ಕೆ ಸರ್ಪ ಕಾವಲು ಇದೆಯಂತೆ. ಈ ದೇವಸ್ಥಾನದಲ್ಲಿ ಅಪಾರ ಸಂಪತ್ತು ಇದ್ದು, ಸುತ್ತಲೂ ನಾಗಸರ್ಪ ಕಾವಲಿದೆ. ಇದಕ್ಕೆ ಪೂರಕವೆಂಬಂತೆ ದೇವಸ್ಥಾನ ಗರ್ಭಗುಡಿಯಲ್ಲಿ ನಾಗರ ಹಾವಿನ‌ ಪೊರೆ ಪತ್ತೆಯಾಗಿದ್ದು, ಗರ್ಭಗುಡಿಯ ಬಲಭಾಗದಲ್ಲಿ ಹಂಡೆ ಆಕಾರದ ಕಲ್ಲು ಪೊದೆಯಲ್ಲಿ ಹಾವಿನ ಪೊರೆ ಪತ್ತೆಯಾಗಿದೆ. ಹೀಗಾಗಿ ಇದೇ ಜಾಗದಲ್ಲಿ ಅಪಾರ ನಿಧಿ‌ ಇದೆ ಎನ್ನಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್​​ಎಸ್​​ಎಸ್ ಕಾರ್ಯಕ್ರಮದಲ್ಲಿ ಸಲ್ಮಾನ್, ರಣ್​​ಬೀರ್, ಕರಣ್ ಹಾಗೂ ಹಲವರು – Kannada News | Many Bollywood celebrities participated in RSS century program in Mumbai

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆಯ 100 ವರ್ಷಗಳನ್ನು 2025ರ ವಿಜಯದಶಮಿ ಸಂದರ್ಭದಲ್ಲಿ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಂಘವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ‘ಸಂಘ ಯಾತ್ರೆ: ಹೊಸ ದಿಗಂತ’ ಎಂಬ ಎರಡು ದಿನಗಳ ವಿಶೇಷ ಕಾರ್ಯಕ್ರಮವು ಮುಂಬೈನಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವು ದಿಗ್ಗಜರು ಭಾಗವಹಿಸಿರುವುದು ಗಮನ ಸೆಳೆಯುತ್ತಿದೆ.

ಮುಂಬೈನ ಭವ್ಯ ಆಡಿಯಿಟೋರಿಯಂನಲ್ಲಿ ನಡೆಯುತ್ತಿರುವ ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಧಾನ ಭಾಷಣಕಾರರಾಗಿದ್ದು, ಮೋಹನ್ ಭಾಗವತ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿತವಾಗಿದೆ. ಕಾರ್ಯಕ್ರಮದ ಮೊದಲ ದಿನವಾದ ಫೆಬ್ರವರಿ 7ರಂದು ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಕಾರ್ಯಕ್ರಮಕ್ಕೆ ಹಾಜರಾಗಿದ್ದು ಸಾಕಷ್ಟು ಗಮನ ಸೆಳೆದಿತ್ತು. ಕಾರ್ಯಕ್ರಮದಲ್ಲಿ ಆಸೀನರಾಗಿ ಭಾಷಣಗಳನ್ನು ಇಬ್ಬರು ಸೂಪರ್ ಸ್ಟಾರ್​​ಗಳು ಕೇಳಿದರು. ಅವರ ಜೊತೆಗೆ ನಿರ್ದೇಶಕ ಮೋಹಿತ್ ಸೂರಿ, ಸುಭಾಷ್ ಘೈ, ಮಹಾವೀರ್ ಜೈನ್, ಓಂ ರಾವತ್, ವಿಕ್ರಮ್ ಮಲ್ಹೋತ್ರಾ ಹಾಗೂ ಗೀತಕಾರ ಪ್ರಸೂನ್ ಜೋಶಿ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ:ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’

ಕಾರ್ಯಕ್ರಮದ ಎರಡನೇ ದಿನವಾದ ಇಂದು (ಫೆಬ್ರವರಿ 08) ಸಹ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ದಿಗ್ಗಜ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್, ನಟ ವಿಕ್ಕಿ ಕೌಶಲ್, ಬಾಲಿವುಡ್ ಸ್ಟಾರ್ ನಟಿ ನಟಿ ಅನನ್ಯಾ ಪಾಂಡೆ. ಹಿರಿಯ ನಟ ಜಾಕಿ ಶ್ರಾಫ್, ಪಾಕಿಸ್ತಾನಿ ಮೂಲದ ಗಾಯಕ ಅದ್ನಾನ್ ಸಮಿ, ಜನಪ್ರಿಯ ಟಿವಿ ನಟಿ ರೂಪಾಲಿ ಗಂಗೂಲಿ ಸೇರಿದಂತೆ ಹಲವರು ಭಾಗವಹಿಸಿದ್ದರು. 90ರ ದಶಕದ ಜನಪ್ರಿಯ ನಟಿಯರಾದ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಕೂಡ ಈ ಸಂದರ್ಭದಲ್ಲಿ ಕಾಣಿಸಿಕೊಂಡರು. ಜೊತೆಗೆ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ, ವಿನೀತ್ ಕುಮಾರ್ ಸಿಂಗ್, ನಿರ್ದೇಶಕರು ನಿತೇಶ್ ತಿವಾರಿ, ಅಮರ್ ಕೌಶಿಕ್, ಅಮಿತ್ ಶರ್ಮಾ, ನಿರ್ಮಾಪಕ ರಮೇಶ್ ತೌರಾಣಿ, ಆನಂದ್ ಪಂಡಿತ್, ನಿರ್ದೇಶಕ ಮಧುರ್ ಭಂಡಾರ್ಕರ್, ನಟ ಮಹೇಶ್ ಮಾಂಜ್ರೆಕರ್, ನಿರ್ದೇಶಕ ಆನಂದ್ ಎಲ್ ರೈ ಮೊದಲಾದ ಚಿತ್ರರಂಗದ ಹಲವು ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಮತ್ತು ಅನನ್ಯಾ ಪಾಂಡೆ ಇಬ್ಬರೂ ಒಟ್ಟಿಗೆ ಕುಳಿತಿದ್ದರು. ಈ ಇಬ್ಬರು ‘ಚಾಂದ್ ಮೇರಾ ದಿಲ್’ ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿವೇಕ್ ಸೋನಿ ನಿರ್ದೇಶಿಸುತ್ತಿದ್ದು, ಅನನ್ಯಾಗೆ ಜೋಡಿಯಾಗಿ ‘ಕಿಲ್’ ಸಿನಿಮಾ ಹಾಗೂ ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸೀರೀಸ್ ಮೂಲಕ ಗುರುತಿಸಿಕೊಂಡಿರುವ ನಟ ಲಕ್ಷ್ಯ ಲಾಲ್ವಾನಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕರಣ್ ಜೋಹರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಗಲಿಬಿಲಿಗೊಂಡ ಅಧಿಕಾರಿಗಳು, ಆಗಿದ್ದೇನು? – Kannada News | Raichur: Chaos during landing of CM Siddaramaiah helicopter; what exactly happened

ರಾಯಚೂರು, ಫೆಬ್ರವರಿ 08: ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​​ ನಿಗದಿಯಾಗಿದ್ದ ಹೆಲಿಪ್ಯಾಡ್ ಬಿಟ್ಟು ಬೇರೆ ಹೆಲಿಪ್ಯಾಡ್​ನಲ್ಲಿ ಲ್ಯಾಂಡಿಂಗ್​​ ಆಗುವ ಮೂಲಕ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಜಿಲ್ಲೆಯ ಲಿಂಗಸುಗೂರು ಪಟ್ಟಣದ ರಾಯಚೂರು ರಸ್ತೆಯಲ್ಲಿ ಸಿಬ್ಬಂದಿ ಪ್ರತ್ಯೇಕ ಹೆಲಿಪ್ಯಾಡ್ ಸಿದ್ಧಪಡಿಸಿದ್ದರು. ಆದರೆ ಕಲಬುರಗಿ ರಸ್ತೆ ಹೆಲಿಪ್ಯಾಡ್​ನಲ್ಲಿ ಸಿಎಂ ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ. ಸದ್ಯ ಭದ್ರತಾ ವೈಫಲ್ಯದ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನೆಗೆ ತಾಂತ್ರಿಕ ಕಾರಣನಾ, ಬೇರೆ ಕಾರಣನಾ ಅಂತಾ ವಿಚಾರಣೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup: ಟೀಂ ಇಂಡಿಯಾದ ಮುಂದಿನ ಪಂದ್ಯ ಯಾವಾಗ? ಎದುರಾಳಿ ಯಾರು? – Kannada News | India vs Namibia T20 World Cup 2026: Match Preview, Date, Time, Venue, Live Stream Details

2026 ರ ಟಿ20 ವಿಶ್ವಕಪ್ (T20 World Cup 2026)​ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ ಪ್ರಸ್ತುತ ವಿಶ್ರಾಂತಿ ಮೂಡ್​ನಲ್ಲಿದೆ. ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಮಣಿಸಿರುವ ಭಾರತ ತಂಡಕ್ಕೆ ಮುಂದಿನ 4 ದಿನಗಳವರೆಗೆ ಯಾವುದೇ ಪಂದ್ಯಗಳಿಲ್ಲ. ಇದು ಕೂಡ ಭಾರತ ತಂಡಕ್ಕೆ ಉಪಯುಕ್ತವಾಗಿದೆ. ಏಕಂದರೆ ತಂಡದ ಕೆಲವು ಆಟಗಾರರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಚೇತರಿಸಿಕೊಳ್ಳಲು ಸಮಯಾವಕಾಶ ಸಿಕ್ಕಂತ್ತಾಗಿದೆ. ಹಾಗೆಯೇ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಕೆಲಸವನ್ನು ತಂಡ ಮಾಡಬೇಕಿದೆ. ಇನ್ನು ಸೂರ್ಯಕುಮಾರ್ ಪಡೆ ತನ್ನ ಎರಡನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸುತ್ತಿದ್ದು, ಈ ತಂಡವನ್ನು ಅಷ್ಟು ಸುಲಭವಾಗಿ ಪರಿಗಣಿಸುವ ತಪ್ಪನ್ನು ಮಾಡುವಂತಿಲ್ಲ.

ಉಭಯ ತಂಡಗಳಿಗೆ ಈ ಪಂದ್ಯಾವಳಿಯಲ್ಲಿ ಇದು ಎರಡನೇ ಪಂದ್ಯವಾಗಿರಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿದ್ದರೆ, ಇತ್ತ ನಮೀಬಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತಿರುವ ನೆದರ್ಲ್ಯಾಂಡ್ಸ್ ತಂಡವನ್ನು ಫೆಬ್ರವರಿ 10 ರಂದು ಎದುರಿಸಲಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಫೆಬ್ರವರಿ 12 ರಂದು ನಡೆಯಲಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಟಿ20 ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ಲಭ್ಯವಿರುತ್ತವೆ. ನೀವು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್/ಲ್ಯಾಪ್‌ಟಾಪ್ ಮತ್ತು ಟಿವಿಯಲ್ಲಿ ಲೈವ್ ಪಂದ್ಯಗಳನ್ನು ವೀಕ್ಷಿಸಬಹುದು.

T20 World Cup: 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ; ಟಿ20 ವಿಶ್ವಕಪ್ ವೇಳಾಪಟ್ಟಿ ಹೀಗಿದೆ

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ನಮೀಬಿಯಾ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ರೂಬೆನ್ ಟ್ರಂಪೆಲ್ಮನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಲೌರೆನ್ ಸ್ಟೀನ್‌ಕ್ಯಾಂಪ್, ಮಲನ್ ಕ್ರುಗರ್, ನಿಕೋಲ್ ಲಾಫ್ಟಿ-ಈಟನ್, ಜ್ಯಾಕ್ ಬ್ರಾಸ್ಸೆಲ್, ಬೆನ್ ಶಿಕೊಂಗೊ, ಜೆಸಿ ಬಾಲ್ಟ್, ಡೈಲನ್ ಲೀಚರ್, WP ಮೈಬರ್ಗ್, ಮ್ಯಾಕ್ಸ್ ಹೀಂಗೊ.

ಮೀಸಲು ಆಟಗಾರ: ಅಲೆಕ್ಸಾಂಡರ್ ವೋಲ್ಶೆಂಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋ ಟಿಕೆಟ್ ದರ ಸಮರ: ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ; ಸಿಎಂ ವಿರುದ್ಧ ಸೂರ್ಯ ಕಿಡಿ – Kannada News | Namma Metro Fare Hike: Tejasvi Surya Questions CM Siddaramaiah Old Stance

ಸಂಸದ ತೇಜಸ್ವಿ ಸೂರ್ಯ, ಸಿಎಂ ಸಿದ್ದರಾಮಯ್ಯ Image Credit source: google

ಬೆಂಗಳೂರು, ಫೆಬ್ರವರಿ 08: ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವೆ ಮೆಟ್ರೋ (Metro) ಟಿಕೆಟ್ ದರ ಏರಿಕೆ ಜಟಾಪಟಿ ಮುಂದುವರೆದಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಿಎಂ ಸಿದ್ದರಾಮಯ್ಯ (Siddaramaiah) ಹಳೇ ಟ್ವೀಟ್​ ಟ್ಯಾಗ್​ ಮಾಡಿದ್ದು, ಹಾಗಾದರೆ ಕಳೆದ ಬಾರಿ ದರ ಕಡಿಮೆ ಮಾಡಲು ಏಕೆ ಸೂಚಿಸಿದ್ದೀರಿ. ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ಈಗ ಆ ಅಧಿಕಾರ ಇಲ್ವಾ?

ಕಳೆದ ಬಾರಿ ಮೆಟ್ರೋ ಪ್ರಯಾಣ ಟಿಕೆಟ್​​ ದರ ಏರಿಕೆ ಮಾಡಿದಾಗ ಟಿಕೆಟ್ ದರ ಕಡಿಮೆ ಮಾಡಿ ಎಂದು ಬಿಎಂಆರ್​​ಸಿಎಲ್​​ಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಈ ಕುರಿತು ಸಿಎಂ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಇದೀಗ ಅದೇ ಟ್ವೀಟ್ ಟ್ಯಾಗ್ ಮಾಡಿರುವ ತೇಜಸ್ವಿ ಸೂರ್ಯ, ಈಗ ಆ ಅಧಿಕಾರ ಇಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್​

ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಜನರಿಗೆ ಹೊರೆಯಾಗುತ್ತಿದೆ. ಈಗ ಬೆಲೆ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ ಅಂತೀರಿ. ಹಾಗಾದರೆ ಕಳೆದ ಬಾರಿ ದರ ಕಡಿಮೆ ಮಾಡಲು ಏಕೆ ಸೂಚಿಸಿದ್ದೀರಿ. ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಬಿಗ್​​ ಶಾಕ್​​: ವಿವಾದದ ನಡುವೆಯೂ ನಿರ್ಧಾರದಂತೆ ನಾಳೆಯಿಂದ ದರ ಏರಿಕೆ ಫಿಕ್ಸ್​

ಮೆಟ್ರೋ ಪ್ರಯಾಣ ಟಿಕೆಟ್ ದರ ಏರಿಕೆ ವಿಚಾರವಾಗಿ ಬೆಂಗಳೂರಿನ ಆರ್.ವಿ.ರೋಡ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಜೊತೆ ಸಂಸದ ತೇಜಸ್ವಿ ಸೂರ್ಯ ಇಂದು ಸಂವಾದ ಮಾಡಿದ್ದಾರೆ. ಈ ವೇಳೆ ಅನೇಕ ಪ್ರಯಾಣಿಕರು ಮೆಟ್ರೋ ಪ್ರಯಾಣ ಟಿಕೆಟ್ ದರ ಏರಿಕೆ ಬಗ್ಗೆ ತಮ್ಮ ತಮ್ಮ ಅನಿಸಿಕೆ ಹೇಳಿದ್ದಾರೆ.

ಅವರಿಗೋಸ್ಕರ ದರ ಕಡಿಮೆ ಮಾಡಿ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಪದೇ ಪದೇ ದರ ಏರಿಕೆ ಮಾಡಿರುವುದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಮೆಟ್ರೋದಲ್ಲಿ  ಓಡಾಡುವವರು ಶ್ರೀಮಂತರಲ್ಲ. ಗಾರ್ಮೆಂಟ್ ಕೆಲಸ ಮಾಡುವವರು, ವಿದ್ಯಾರ್ಥಿಗಳು. ಪ್ರತಿನಿತ್ಯ 10 ರಿಂದ 12 ಲಕ್ಷ ಜನ ಓಡಾಡುತ್ತಾರೆ. ಅವರಿಗೋಸ್ಕರ ದರ ಕಡಿಮೆ ಮಾಡಿ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್ಯಾದ್ಯಂತ 100 ಕಡೆ ಕಾಂಗ್ರೆಸ್ ಭವನ: ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ ನೀಡಲು ಪತ್ರ – Kannada News | Government Decided To Give High Value Site At Low Price To Construct Congress Bhavana In Karnataka

ಬೆಂಗಳೂರು, (ಫೆಬ್ರವರಿ 08): ಕರ್ನಾಟಕದಾದ್ಯಂತ 100 ಕಡೆಗಳಲ್ಲಿ ಕಾಂಗ್ರೆಸ್ ಭವನ (Congress Bhavana) ನಿರ್ಮಾಣಕ್ಕೆ ಪಕ್ಷ ಮುಂದಾಗಿದೆ. ತಾಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್ ಭವನ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕೋಟಿ ಕೋಟಿ ಬೆಲೆ ಬಾಳುವ ಸಿಎ ಸೈಟ್​​ಗಳನ್ನು ಕಾಂಗ್ರೆಸ್ ಟ್ರಸ್ಟ್​​ಗೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಹೌದು. ಪ್ರತಿ ತಾಲೂಕಿನಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಿರೋ ಕೆಪಿಸಿಸಿಗೆ ಈ ಜಾಗವನ್ನ ಪೌರಾಡಳಿತ ಇಲಾಖೆ ಕೊಟ್ಟಿದೆ. ಇನ್ನೂ 13 ಜಿಲ್ಲೆಗಳಲ್ಲಿ ಪುರಸಭೆ, ನಗರ ಸಭೆಗಳ ಜಾಗವನ್ನ ಕಾಂಗ್ರೆಸ್ ಭವನ ಕಟ್ಟಲು ಕೊಟ್ಟಿರೋ ಪೌರಾಡಳಿತ ಇಲಾಖೆ ಕೊಟ್ಟಿದೆ. ಕಾನೂನು ಇಲಾಖೆ ವಿರೋಧದ ನಡುವೆಯೂ ಕಾಂಗ್ರೆಸ್ ಭವನಕ್ಕೆ ಜಾಗ ಕೊಟ್ಟಿರೋ ಬಗ್ಗೆಯೂ ಆರೋಪ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.

Source link

ಭಾರತೀಯ ಸಿನಿಮಾಗಳ ಕಲೆಕ್ಷನ್ ಹೆಚ್ಚಳಕ್ಕೆ ಆಮಿರ್ ಖಾನ್ ಐಡಿಯಾ, ವರ್ಕೌಟ್ ಆಗುತ್ತ? – Kannada News | Aamir Khan says India has very less number of theaters

ಭಾರತೀಯ ಚಿತ್ರರಂಗದಲ್ಲಿ (Indian Cinema) ಸಿನಿಮಾವನ್ನೇ ಉಸಿರಾಡುವ ಕೆಲವೇ ಕೆಲವು ಸಿನಿಮಾ ಕರ್ಮಿಗಳಲ್ಲಿ ಆಮೀರ್ ಖಾನ್ ಸಹ ಒಬ್ಬರು. ಒಳ್ಳೆಯ ಸಿನಿಮಾಗಳನ್ನು ಮಾಡುವುದರ ಜೊತೆಗೆ ಸಿನಿಮಾಗಳನ್ನು ಜನರಿಗೆ ತಲುಪಿಸುವ ಕುರಿತಾಗಿ, ಸಿನಿಮಾ ಮಂದಿ ಹೆಚ್ಚು ಲಾಭ ಮಾಡುವುದರ ಕುರಿತಾಗಿ ಒಂದಿಲ್ಲೊಂದು ಯೋಜನೆ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಅವರು ತಾವೇ ನಟಿಸಿ, ನಿರ್ಮಾಣ ಮಾಡಿದ್ದ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಟಿಟಿಯ ಬದಲಿಗೆ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಿ ಹೊಸ ಪ್ರಯೋಗ ಮಾಡಿದರು. ಒಟಿಟಿಗಳ ಬಗ್ಗೆ ಮೊದಲಿನಿಂದಲೂ ವಿರೋಧ ಅಭಿಪ್ರಾಯವನ್ನೇ ಹೊಂದಿರುವ ಆಮಿರ್ ಖಾನ್, ಇದೀಗ ಭಾರತೀಯ ಸಿನಿಮಾಗಳು ಹೆಚ್ಚು ಲಾಭ ಗಳಿಸದಿರಲು ಕಾರಣ ಏನು ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಈ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪಿಲ್ಲ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಆಮೀರ್, ‘ಭಾರತದಲ್ಲಿ ಸುಮಾರು 9,000 ರಿಂದ 10,000 ಚಿತ್ರಮಂದಿರಗಳು ಮಾತ್ರವೇ ಇವೆ. ಭಾರತದಂಥಹಾ ಭಾರಿ ಜನಸಂಖ್ಯೆಯ ದೇಶಕ್ಕೆ ಇದು ಬಹಳ ಕಡಿಮೆ. ಚೀನಾದಲ್ಲಿ ಸುಮಾರು ಒಂದು ಲಕ್ಷದಷ್ಟು ಚಿತ್ರಮಂದಿರಗಳು ಇವೆ. ಅಮೆರಿಕದಲ್ಲೂ ಸಹ ಚಿತ್ರಮಂದಿರಗಳ ಸಂಖ್ಯೆ ಬಹಳ ಹೆಚ್ಚಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಚಿತ್ರಮಂದಿರಗಳಿಲ್ಲ. ಚೀನಾದಲ್ಲಿ ಒಂದು ಸಿನಿಮಾ ಬಿಡುಗಡೆಯಾದಾಗ ಅಲ್ಲಿನ ಮೂಲಸೌಕರ್ಯದ ಕಾರಣದಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ’ ಎಂದು ಆಮೀರ್ ಖಾನ್ ಹೇಳಿದ್ದಾರೆ.

‘ಧುರಂಧರ್’ ಸಿನಿಮಾದ ಉದಾಹರಣೆ ನೀಡಿರುವ ಆಮಿರ್ ಖಾನ್, ‘ಧುರಂಧರ್’ ಸಿನಿಮಾ 5,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿ 1,000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಒಂದು ವೇಳೆ ನಮ್ಮಲ್ಲಿ 15,000 ಸ್ಕ್ರೀನ್‌ಗಳು ಲಭ್ಯವಿದ್ದಿದ್ದರೆ, ಈ ಸಿನಿಮಾದ ಗಳಿಕೆ ಇನ್ನೂ ಎಷ್ಟು ಪಟ್ಟು ಹೆಚ್ಚಾಗುತ್ತಿತ್ತು ಎಂದು ಊಹಿಸಿ. ಹಳ್ಳಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇಂದಿಗೂ ಒಂದೂ ಚಿತ್ರಮಂದಿರ ಇಲ್ಲದ ಪ್ರದೇಶಗಳಿವೆ’ ಎಂದಿದ್ದಾರೆ ಆಮಿರ್ ಖಾನ್.

ಇದನ್ನೂ ಓದಿ:‘ನಾವು ಮದುವೆ ಆಗಿದ್ದೇವೆ, ಆದರೆ..’; ದೊಡ್ಡ ಹೇಳಿಕೆ ನೀಡಿದ ಆಮಿರ್ ಖಾನ್

ಮುಂದುವರೆದು ಮಾತನಾಡಿರುವ ಆಮಿರ್ ಖಾನ್, ‘ಕೇವಲ 2 ಪರ್ಸೆಂಟ್ ರಷ್ಟು ಭಾರತೀಯರು ಮಾತ್ರ ದೊಡ್ಡ ಹಿಟ್ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡುತ್ತಾರೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದ ಅವರು, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾದರೆ ಮಾತ್ರ ಸಿನಿಮಾ ಉದ್ಯಮವು ತಳಮಟ್ಟದಲ್ಲಿ ಬೆಳೆಯಲು ಸಾಧ್ಯ ಮತ್ತು ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ. ಚಿತ್ರಮಂದಿರಗಳ ನಿರ್ಮಾಣವನ್ನು ಮೂಲಸೌಕರ್ಯದಂತೆ ಪರಿಗಣಿಸಬೇಕು ಎಂದು ಆಮಿರ್ ಖಾನ್ ಹೇಳಿದ್ದಾರೆ.

ಆಮಿರ್ ಖಾನ್ ಅಭಿಪ್ರಾಯಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಆಮಿರ್ ಖಾನ್ ಯೋಜನೆ ಅದ್ಭುತ ಎಂದರೆ ಇನ್ನು ಕೆಲವರು ಇದು ಅಸಾಧ್ಯ ಎಂದಿದ್ದಾರೆ. 15 ಸಾವಿರ ಚಿತ್ರಮಂದಿರಗಳಿಗೆ ಸಾಕಾಗುವಷ್ಟು ಒಳ್ಳೆಯ ಸಿನಿಮಾಗಳು ಭಾರತದಲ್ಲಿ ನಿರ್ಮಾಣ ಆಗುತ್ತಿಲ್ಲ ಎಂದು ಕೆಲವರು ಹೇಳಿದರು. 15000 ಚಿತ್ರಮಂದಿರ ನಿರ್ಮಾಣ ಮಾಡಲು ಭಾರಿ ಮೊತ್ತದ ಹಣ, ಸ್ಥಳ ಬೇಕಾಗುತ್ತದೆ. ಅಷ್ಟು ಹೂಡಿಕೆ ಮಾಡಿ ಲಾಭಕ್ಕಾಗಿ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link