Category Archives: Blog

Your blog category

ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್: ವಿಡಿಯೋ – Kannada News | AP Arjun talks about Rift between him and Kanakpura Srinivas

ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakpura Srinivas) ಕೆಲ ದಿನಗಳ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಕೆಲ ನಿರ್ದೇಶಕರುಗಳು, ನಟರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಅದರಲ್ಲೂ ನಿರ್ದೇಶಕ ಎಪಿ ಅರ್ಜುನ್, ಪ್ರೇಮ್ ಇನ್ನೂ ಕೆಲವರ ಬಗ್ಗೆ ಬಹಳ ನೀಚವಾಗಿ ಮಾತನಾಡಿದ್ದರು. ಈಗಾಗಲೇ ನಿರ್ದೇಶಕ ಪ್ರೇಮ್, ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ. ಇದೀಗ ನಿರ್ದೇಶಕ ಎಪಿ ಅರ್ಜುನ್ ಸಹ ತಮಗೂ ಶ್ರೀನಿವಾಸ್​​ಗೂ ಮನಸ್ತಾಪಕ್ಕೆ ಕಾರಣವೇನು? ಇಬ್ಬರ ನಡುವೆ ನಡೆದಿದ್ದ ಹಣದ ವ್ಯವಹಾರ, ಐರಾವತ ಸಿನಿಮಾದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಗೃಹಲಕ್ಷ್ಮಿ’ ಯೋಜನೆಗೆ ಜೀವಿತ ಪ್ರಮಾಣಪತ್ರ ಕಡ್ಡಾಯ: ಮೃತಪಟ್ಟ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ ಕೋಟ್ಯಂತರ ರೂ. – Kannada News | New Gruha Lakshmi Rule: Life Certificate Compulsory to Stop Payments to Deceased

ಬೆಂಗಳೂರು, ಫೆ.7: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ (Gruha Lakshmi Scheme) ಹಣ ದುರುಪಯೋಗವಾಗುವುದನ್ನು ತಡೆಯಲು ಈಗ ಹೊಸ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮರಣ ಹೊಂದಿರುವ ಫಲಾನುಭವಿಗಳ ಖಾತೆಗೂ ಹಣ ಜಮಾ ಆಗುತ್ತಿರುವುದನ್ನು ತಪ್ಪಿಸಲು ‘ಜೀವಿತ ಪ್ರಮಾಣಪತ್ರ’ (Life Certificate) ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಎಂಎಲ್‌ಸಿ ಆಗಿರುವ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರು.

ದಿನೇಶ್ ಗೂಳಿಗೌಡ ಅವರ ಮನವಿಯನ್ನು ಪುರಸ್ಕರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಅವರಿಗೆ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕ್‌ಗಳಿಗೆ ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದು ಹೇಗೆ ಕಡ್ಡಾಯವೋ, ಅದೇ ಮಾದರಿಯನ್ನು ಗೃಹಲಕ್ಷ್ಮಿ ಯೋಜನೆಗೂ ತರಲು ಉದ್ದೇಶಿಸಲಾಗಿದೆ.

ಯೋಜನೆಯಡಿ ಸುಮಾರು 1.24 ಕೋಟಿ ಫಲಾನುಭವಿಗಳಿದ್ದು, ಇದಕ್ಕಾಗಿ ಸರ್ಕಾರ ₹57,300 ಕೋಟಿಗೂ ಅಧಿಕ ಹಣ ವ್ಯಯಿಸಿದೆ. ಮರಣ ಹೊಂದಿದವರ ಹೆಸರಿನಲ್ಲಿ ಹಣ ಪಾವತಿಯಾಗುತ್ತಿರುವುದನ್ನು ತಡೆದು, ಸರ್ಕಾರದ ಹಣ ಸೋರಿಕೆಯನ್ನು ನಿಲ್ಲಿಸುವುದು ಇದರ ಮೂಲ ಉದ್ದೇಶವಾಗಿದೆ.

ದಿನೇಶ್ ಗೂಳಿಗೌಡ ಮನವಿಯಲ್ಲಿ ಏನಿತ್ತು?

ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಯೋಜನೆಯ ಫಲಾನುಭವಿ ಮಹಿಳೆಯಾಗಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯಡಿ 1,24,12,543 ಅರ್ಹ ಫಲಾನುಭವಿಗಳಿಗೆ ಈವರೆಗೂ ಸುಮಾರು 57,300 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಪಾವತಿ ಮಾಡಲಾಗಿದೆ. ಈ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಮರಣ ಹೊಂದಿರುವವರ ಮಾಹಿತಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ಮರಣ ಹೊಂದಿರುವ ಫಲಾನುಭವಿಗಳಗೆ ಧನಸಹಾಯ ಪಾವತಿಯಾಗುವದನ್ನು ತಪ್ಪಿಸಬೇಕಿದೆ. ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕ್‌‌ಗಳಿಗೆ ತಮ್ಮ ಜೀವಿತ ಪ್ರಮಾಣ ಸಲ್ಲಿಸುವುದು ಹೇಗೆ ಕಡ್ಡಾಯ ಮಾಡಿದ್ದಾರೆ. ಅದೇ ಮಾದರಿಯಲ್ಲಿ, ಗೃಹಲಕ್ಷ್ಮಿ ಯೋಜನೆಯಡಿಯ ಅರ್ಹ ಫಲಾನುಭವಿಗಳಿಗೆ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಬಸ್ ಫ್ರೀ ನೀಡಿ ದೊಡ್ಡ ಸಮಸ್ಯೆಯಾಗಿದೆ: ಬಿಜೆಪಿ ನಾಯಕರ ಮುಂದೆಯೇ ಗ್ಯಾರಂಟಿ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್​​​​ ಶಾಸಕ ದೇಶಪಾಂಡೆ

ಗೃಹಲಕ್ಷ್ಮೀ ಫಲಾನುಭವಿಗಳಿಗೆ ಮರಣದ ನಂತರವೂ ಹಣ ಹೋಗುತ್ತಿದೆ: ಹೆಚ್.ಎಂ. ರೇವಣ್ಣ

ರಾಯಚೂರು ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಗ್ಯಾರಂಟಿ ಮೇಳದಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಹೇಳಿದ್ದಾರೆ. ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಮೃತಪಟ್ಟ ಫಲಾನುಭವಿಗಳ ಖಾತೆಗೆ ಸಂದಾಯವಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಟ್ಟು 1,44,056 ಮಹಿಳಾ ಫಲಾನುಭವಿಗಳು ಈಗಾಗಲೇ ನಿಧನರಾಗಿದ್ದಾರೆ. ಮೃತಪಟ್ಟವರ ಪೈಕಿ 68,776 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಅವರು ಮರಣ ಹೊಂದಿದ ನಂತರವೂ ಹಣ ಜಮೆಯಾಗಿದೆ.ಮೃತಪಟ್ಟವರ ಖಾತೆಗೆ ಒಟ್ಟು ₹79,75,66,000 (ಸುಮಾರು 80 ಕೋಟಿ ರೂ.) ಜಮೆಯಾಗಿದೆ. ವರ ಹೆಸರಿನಲ್ಲಿ ಒಟ್ಟು 3,98,783 ಬಾರಿ ಕಂತಿನ ಹಣ (ತಲಾ ₹2,000) ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸ್ ಫ್ರೀ ನೀಡಿ ದೊಡ್ಡ ಸಮಸ್ಯೆಯಾಗಿದೆ: ಬಿಜೆಪಿ ನಾಯಕರ ಮುಂದೆಯೇ ಗ್ಯಾರಂಟಿ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್​​​​ ಶಾಸಕ ದೇಶಪಾಂಡೆ – Kannada News | Dandeli Speech: RV Deshpande Hails BJP Minister, Critiques Congress ‘Shakti’ Guarantee

ಆರ್.ವಿ. ದೇಶಪಾಂಡೆ

ಕಾರವಾರ, ಫೆ.7: ಉತ್ತರ ಕನ್ನಡದ ದಾಂಡೇಲಿಯಲ್ಲಿ ನಡೆದ ರೈಲ್ವೆ ಇಲಾಖೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ ಮತ್ತು ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಬಿಜೆಪಿ ನಾಯಕರನ್ನ ಹೊಗಳಿ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಇದೀಗ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸ್ವಪಕ್ಷದ ‘ಶಕ್ತಿ’ ಯೋಜನೆ ಬಗ್ಗೆ ಅವರು ಮಾಡಿರುವ ವ್ಯಂಗ್ಯ ಮತ್ತು ಬಿಜೆಪಿ ಸಚಿವರ ಬಗ್ಗೆ ತೋರಿದ ಪ್ರೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಯನ್ನು ದೇಶಪಾಂಡೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಸೋಮಣ್ಣ ಅವರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮದಿಂದಲೇ ಇಂದು ದಾಂಡೇಲಿ-ಅಳ್ನಾವರ ರೈಲು ಸಂಚಾರ ಮತ್ತೆ ಶುರುವಾಗಿದೆ,” ಎಂದಿದ್ದಾರೆ.

ಪಕ್ಷ ಬೇರೆಯಾಗಿದ್ದರೂ ಸತ್ಯ ಹೇಳಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಪಕ್ಷ ತಂದಿರುವ ಗ್ಯಾರಂಟಿಗಳನ್ನು ಟೀಕಿಸಿದ್ದಾರೆ. ಸಿದ್ದರಾಮಯ್ಯ ಮಹಿಳೆಯರಿಗೆ ಬಸ್ ಫ್ರೀ ಮಾಡಿದ್ದಾರೆ, ಈಗ ಯಾವುದೇ ಬಸ್ ನೋಡಿದರೂ ಫುಲ್ ಇರುತ್ತವೆ. ಗಂಡಸರು ಮತ್ತು ಮಕ್ಕಳಿಗೆ ಬಸ್ ಹತ್ತಲು ಜಾಗವೇ ಇಲ್ಲದಂತಾಗಿದೆ. ಎಂದು ಹೇಳಿದ್ದಾರೆ. ಬಸ್‌ನಲ್ಲಿ ಅಪ್ಪಿತಪ್ಪಿ ಮಹಿಳೆಯರಿಗೆ ಕೈ ತಗುಲಿದರೆ ಸಾಕು, ಅಲ್ಲಿಗೆ ಹೆಣವೇ ಬಿದ್ದಂತೆ! ಗಂಡಸರು ಆ ಕಡೆ ಈ ಕಡೆ ನೋಡಿಕೊಂಡು ಬಹಳ ಎಚ್ಚರಿಕೆಯಿಂದ ಓಡಾಡಬೇಕಾದ ಪರಿಸ್ಥಿತಿ ಇದೆ ಎಂದು ತಮಾಷೆಯಾಗಿ ಹೇಳಿದರು.

ಇದನ್ನೂ ಓದಿ: ಅಬಕಾರಿ ಹಗರಣದ ಆರೋಪದ ನಡುವೆಯು ಆರ್.ಬಿ. ತಿಮ್ಮಾಪುರಗೆ ಸಿಎಂ ಭಾಗ್ಯ?: ‘ಕೊರವಂಜಿ’ ಭವಿಷ್ಯಕ್ಕೆ ಸಚಿವ ಫುಲ್​​​ ಖುಷ್

ಬಸ್ಸುಗಳ ಮೇಲಿನ ಒತ್ತಡ ಕಡಿಮೆ ಮಾಡಲು ಅಳ್ನಾವರದಿಂದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕು. ರೈಲು ಕನೆಕ್ಟಿವಿಟಿ ಹೆಚ್ಚಾದರೆ ಬಸ್ಸುಗಳಲ್ಲಿನ ಈ ‘ರಶ್’ ಕಡಿಮೆಯಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. ಆರ್.ವಿ. ದೇಶಪಾಂಡೆ ಅವರು ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಕೆಲವು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ವಿಶೇಷವಾಗಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಆತಂಕವನ್ನು ಅವರು ಈ ಹಿಂದೆಯೂ ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಈಗ ನೇರವಾಗಿ ಹಾಸ್ಯದ ರೂಪದಲ್ಲಿ ಶಕ್ತಿ ಯೋಜನೆಯ ಅಡ್ಡಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದಿಂದ ಭಾರತದ ರೈತರು, ಎಂಎಸ್‌ಎಂಇಗಳಿಗೆ ತೊಂದರೆಯಾಗುವುದಿಲ್ಲ; ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ – Kannada News | India US Trade Deal will not Hurt Farmers and MSMEs Piyush Goyal clarifies

ನವದೆಹಲಿ, ಫೆಬ್ರವರಿ 7: ಭಾರತ ಮತ್ತು ಅಮೆರಿಕದ ನಡುವೆ ನಡೆದ ವ್ಯಾಪಾರ ಒಪ್ಪಂದದ (Trade Deal) ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ, ವಿಪಕ್ಷಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿದ್ದಾರೆ. ಈ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಿದ ಪಿಯೂಷ್ ಗೋಯಲ್, “ಅಮೆರಿಕ ಈಗ ರಫ್ತಿಗೆ ಹೆಚ್ಚು ಆದ್ಯತೆಯ ದೇಶವಾಗಿದೆ. ಭಾರತೀಯ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವಿಶ್ವದ ಅತಿದೊಡ್ಡ ಮಾರುಕಟ್ಟೆ ಸಿಕ್ಕಂತಾಗಿದೆ” ಎಂದು ಹೇಳಿದ್ದಾರೆ.

“ಭಾರತೀಯ ಕೈಗಾರಿಕೆಗಳಿಗೆ ರಫ್ತು ಅವಕಾಶಗಳನ್ನು ವಿಸ್ತರಿಸುವ ಮೂಲಕ, ಎಂಎಸ್‌ಎಂಇಗಳಿಗೆ ವ್ಯಾಪಾರ ಅವಕಾಶಗಳನ್ನು ವೇಗಗೊಳಿಸುವ ಮೂಲಕ ಮತ್ತು ಆಮದು ಒತ್ತಡಗಳಿಂದ ಕೃಷಿ ವಲಯವನ್ನು ಸಂಪೂರ್ಣವಾಗಿ ರಕ್ಷಿಸುವ ಮೂಲಕ ಒಪ್ಪಂದವು ಸಮತೋಲನವನ್ನು ಸಾಧಿಸುತ್ತದೆ. ಈ ಒಪ್ಪಂದವು ಬಹು ವಲಯಗಳಿಗೆ ರಫ್ತು ಪ್ರಯೋಜನಗಳನ್ನು ಒದಗಿಸುತ್ತದೆ, ನಮ್ಮ ಕೃಷಿ ವಲಯವನ್ನು ರಕ್ಷಿಸುತ್ತದೆ” ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

“2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಮಾಡಲು ಇದು ಬಹಳ ಮುಖ್ಯವಾದ ಸಮಯವಾಗಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎರಡೂ ದೇಶಗಳ ಸಂಬಂಧಗಳು, ರಾಜತಾಂತ್ರಿಕ ಸಂಬಂಧಗಳು ಮತ್ತು ಎರಡೂ ದೇಶಗಳ ನಾಯಕರ ನಡುವಿನ ಸ್ನೇಹವನ್ನು ಪರಿಗಣಿಸಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗಳು ಫೆಬ್ರವರಿ 2025ರಲ್ಲಿ ಪ್ರಾರಂಭವಾದವು. ಭಾರತ ಮತ್ತು ಅಮೆರಿಕದ ನಡುವೆ ವಾರ್ಷಿಕವಾಗಿ 500 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸುವುದು ಇದರ ಉದ್ದೇಶವಾಗಿತ್ತು. ಈ ಒಪ್ಪಂದದಿಂದ ಭವಿಷ್ಯದ ಬಗ್ಗೆ ದೇಶದ ಪ್ರತಿಯೊಂದು ವಲಯದಲ್ಲೂ ಹೆಚ್ಚಿನ ಉತ್ಸಾಹ ನಿರ್ಮಾಣವಾಗಿದೆ” ಎಂದು ಅವರು ಹೇಳಿದ್ದಾರೆ.

ಭಾರತದ ಮೇಲಿನ ಅಮೆರಿಕದ ಸುಂಕಗಳನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸಲಾಗಿದೆ. ಇದು ಎಲ್ಲಾ ನೆರೆಯ ರಾಷ್ಟ್ರಗಳಲ್ಲಿಯೇ ಅತ್ಯಂತ ಕಡಿಮೆ ಸುಂಕವಾಗಿದೆ. ವ್ಯಾಪಾರ ಒಪ್ಪಂದದ ಅಡಿಯಲ್ಲಿ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ. ಅಮೆರಿಕದಲ್ಲಿ ಹಲವಾರು ಭಾರತೀಯ ಉತ್ಪನ್ನಗಳು ಈಗ ಶೂನ್ಯ ಸುಂಕಗಳನ್ನು ಹೊಂದಿವೆ. ಈ ಉತ್ಪನ್ನಗಳಲ್ಲಿ ರತ್ನಗಳು, ವಜ್ರಗಳು, ಔಷಧೀಯ ಉತ್ಪನ್ನಗಳು ಸೇರಿವೆ. ಮಸಾಲೆಗಳು, ಚಹಾ, ಕಾಫಿ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳು ಸಹ ಶೂನ್ಯ ಸುಂಕಗಳನ್ನು ಹೊಂದಿರುತ್ತವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ

ಭಾರತವು ಸ್ವಾವಲಂಬಿಯಾಗಿರುವ ಉತ್ಪನ್ನಗಳನ್ನು ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಇವುಗಳಲ್ಲಿ ಮಾಂಸ, ಡೈರಿ ಉತ್ಪನ್ನಗಳು, ಮೆಕ್ಕೆಜೋಳ, ಅಕ್ಕಿ, ಗೋಧಿ, ಸಕ್ಕರೆ, ಧಾನ್ಯಗಳು, ರಾಗಿ, ಎಣ್ಣೆ ಬೀಜಗಳು ಮತ್ತು ಸೋಯಾಬೀನ್ ಸೇರಿವೆ ಎಂದು ವಾಣಿಜ್ಯ ಸಚಿವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆರಳಿ ಕೆಂಡವಾದ ಪ್ರೇಮ್, ನಿರ್ಮಾಪಕ ಕನಕಪುರ ಶ್ರೀನಿವಾಸ್​ಗೆ ವಾರ್ನಿಂಗ್ – Kannada News | Jogi prem vs Kanakapura Srinivas controversy

ಇತ್ತೀಚೆಗೆ ನಡೆದ ಸಿನಿಮಾ (Cinema) ಸಂಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಬಹಳ ವೀರಾವೇಶದಿಂದ ಚಿತ್ರರಂಗದ ಹಲವು ದೊಡ್ಡ ನಟ-ನಿರ್ದೇಶಕರುಗಳ ವಿರುದ್ಧ ಬಹಳ ಲಘುವಾಗಿ ಮಾತನಾಡಿದ್ದರು. ಅದರಲ್ಲೂ ನಿರ್ದೇಶಕ ಪ್ರೇಮ್ ಬಗ್ಗೆ, ಅರ್ಜುನ್ ಜನ್ಯ ಇನ್ನೂ ಹಲವರ ಹೆಸರುಗಳನ್ನು ಹೇಳಿ ಟೀಕೆ, ವೈಯಕ್ತಿಕ ನಿಂದನೆಗಳನ್ನು ಮಾಡಿದ್ದರು. ಇಂದು ನಿರ್ದೇಶಕ ಪ್ರೇಮ್ ಫಿಲಂ ಚೇಂಬರ್​​ಗೆ ಕನಕಪುರ ಶ್ರೀನಿವಾಸ್ ಬಗ್ಗೆ ದೂರು ನೀಡಿದ್ದಲ್ಲದೆ. ತಮ್ಮ ಬಗ್ಗೆ ಶ್ರೀನಿವಾಸ್ ಮಾಡಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ ಜೊತೆಗೆ ಖಡಕ್ ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ.

ಸುಮಾರು ಹತ್ತು ವರ್ಷದ ಹಿಂದೆ ಸಿನಿಮಾ ಮಾಡಿಕೊಡಿರೆಂದು ಒಂಬತ್ತು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ನಾನು ಆಫೀಸ್ ಮಾಡಿಕೊಂಡು, ಸಹಾಯಕರಿಗೆ ಸಂಬಳ ಕೊಟ್ಟುಕೊಂಡು ಸಿನಿಮಾ ಕೆಲಸಕ್ಕೆ ತೊಡಗಿಕೊಂಡೆ. ಆದರೆ ಮೂರು ವರ್ಷ ಆತ ಸಿನಿಮಾ ಮಾಡಲು ಬರಲೇ ಇಲ್ಲ. ಆ ಬಳಿಕ ಬಂದು ಹಣ ವಾಪಸ್ ಕೊಡುವಂತೆ ಕೇಳಿದ. ಅಷ್ಟರಲ್ಲಾಗಲೇ ನಾನು ಕತೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೆ. ಇವರ ಸಿನಿಮಾ ಮಾಡಲು ನಾನು ಮೂರು ವರ್ಷ ಖಾಲಿ ಕೂತಿದ್ದೆ, ಬೇರೆ ಸಿನಿಮಾಗಳನ್ನು ಕೈಬಿಟ್ಟಿದ್ದೆ. ಆದರೂ ಸಾರಾ ಗೋವಿಂದು ಹೇಳಿದರೆಂದು ಐದು ಲಕ್ಷ ರೂಪಾಯಿ ವಾಪಸ್ ಕೊಟ್ಟೆ’ ಎಂದಿದ್ದಾರೆ.

ಆದರೆ ಅದೆಲ್ಲ ಆದ ಮೇಲೆ ವರ್ಷಗಳ ಬಳಿಕ ಮತ್ತೆ ನನ್ನ ಕಚೇರಿ ಬಳಿ ಬಂದು ಹಣ ಕೊಟ್ಟಿಲ್ಲ ಎಂದು ಹೇಳಲು ಶುರು ಮಾಡಿದ. ನನಗೆ ನಾಲ್ಕು ಲಕ್ಷ ದೊಡ್ಡದಲ್ಲ ಆದರೆ ಆತ ಆಡಿರುವ ಮಾತುಗಳು, ಹೇಳಿರುವ ರೀತಿ ಇವೆಲ್ಲ ಸರಿಯಿಲ್ಲ. ಅದಕ್ಕೆ ಈಗ ನಾನು ಫಿಲಂ ಚೇಂಬರ್​​ಗೆ ಬಂದು ದೂರು ನೀಡಿದ್ದೇನೆ. ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಸಹ ಹಾಕಿದ್ದೇನೆ. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೊ ಕೈಗೊಳ್ಳಲಿ, ಫಿಲಂ ಚೇಂಬರ್​​ಗೆ ಮಾಹಿತಿ ನೀಡದೆ ನೇರವಾಗಿ ಕೋರ್ಟ್​​ಗೆ ಹೋಗುವುದು ಸರಿಯಲ್ಲ ಎಂದು ಇಲ್ಲಿ ಬಂದೆ’ ಎಂದಿದ್ದಾರೆ.

ಇದನ್ನೂ ಓದಿ:ನಾಲಗೆ ಹರಿಬಿಟ್ಟ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ ಪ್ರೇಮ್

‘ಶ್ರೀನಿವಾಸ್ ಬಹಳ ನೀಚವಾಗಿ ಮಾತನಾಡಿದ್ದಾರೆ. ನಾನು ಮಂಡ್ಯದವನು ಅವರಿಗಿಂತಲೂ ಕೆಟ್ಟದಾಗಿ ಮಾತನಾಡಬಲ್ಲೆ. ಆದರೆ ನಾನು ಮಾತನಾಡುವುದಿಲ್ಲ, ನನ್ನ ಸಂಸ್ಕಾರ ಬೇರೆ ಇದೆ. ನಾನು ಅವರನ್ನು ಸಂಕಷ್ಟಕ್ಕೆ ಸಿಲುಕಿಸಬೇಕು ಎಂದುಕೊಂಡರೆ ನನಗೆ ಹೆಚ್ಚು ಸಮಯ ಬೇಕಿಲ್ಲ, ಅಷ್ಟು ಶಕ್ತಿ ನನ್ನ ಬಳಿ ಇದೆ. ಆದರೆ ಅದೆಲ್ಲ ನನ್ನ ವ್ಯಕ್ತಿತ್ವ ಅಲ್ಲ. ಮೊದಲೆಲ್ಲ ಹೀಗೆ ಆಗುತ್ತಿರಲಿಲ್ಲ. ಅಂಬರೀಶಣ್ಣ ಇದ್ದಾಗ ಅಮ್ಮ (ಪಾರ್ವತಮ್ಮ ರಾಜ್​ಕುಮಾರ್) ಇದ್ದಾಗ ಯಾರಿಗೂ ಹೀಗೆಲ್ಲ ಮಾತನಾಡುವ ಧೈರ್ಯ ಇರಲಿಲ್ಲ’ ಎಂದಿದ್ದಾರೆ ಪ್ರೇಮ್.

ದಿವಂಗತ ಪುನೀತ್ ರಾಜ್‌ಕುಮಾರ್ ಮತ್ತು ಪ್ರಸ್ತುತ ಜೈಲಿನಲ್ಲಿರುವ ನಟ ದರ್ಶನ್ ಅವರ ಬಗ್ಗೆ ಕನಕಪುರ ಶ್ರೀನಿವಾಸ್ ಆಡಿದ ಹಗುರವಾದ ಮಾತುಗಳ ವಿರುದ್ಧವೂ ಪ್ರೇಮ್ ಕಿಡಿಕಾರಿದ್ದಾರೆ. “ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ ಅಥವಾ ಇಲ್ಲದಿದ್ದಾಗ ಈ ರೀತಿ ಮಾತನಾಡುವುದು ಸರಿಯಲ್ಲ. ನನ್ನ ಬಗ್ಗೆಯೂ ಸಹ ಸಾಕಷ್ಟು ಮಾತನಾಡಿದ್ದಾರೆ. ನಾನು ವೃತ್ತಿ ಆರಂಭಿಸಿದಾಗಿನಿಂದಲೂ ಹಣಕಾಸು ಶಿಸ್ತು ಕಾಪಾಡಿಕೊಂಡು ಬಂದಿದ್ದೀನಿ. ನಾನು ಎಷ್ಟು ವರ್ಷಕ್ಕೆ ಸಿನಿಮಾ ಮಾಡುತ್ತೀನಿ, ನನ್ನ ಸಿನಿಮಾಗಳಿಂದ ನಿರ್ಮಾಪಕರು ಎಷ್ಟು ಲಾಭ ಮಾಡಿಕೊಳ್ಳುತ್ತಾರೆ ಅದೆಲ್ಲ ಅವರಿಗೆ ಬಿಟ್ಟಿದ್ದು, ಇವನ್ಯಾರು ಮಾತನಾಡಲು’ ಎಂದು ಗುಡುಗಿದ್ದಾರೆ ಪ್ರೇಮ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:59 pm, Sat, 7 February 26

Source link

IND vs USA Playing XI: ಭಾರತ ಮೊದಲು ಬ್ಯಾಟಿಂಗ್; ಮೊದಲ ಪಂದ್ಯದಿಂದ ಸಂಜು, ಬುಮ್ರಾ ಔಟ್ – Kannada News | IND vs USA Playing XI India vs USA Today 3rd T20 World Cup 2026 match playing 11 details with name in Kannada

2026 ರ ಟಿ20 ವಿಶ್ವಕಪ್ ಪ್ರಾರಂಭವಾಗಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಆಡುತ್ತಿದೆ. ಈ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕರಾಗಿದ್ದಾರೆ. ಮೂಲತಃ ಗುಜರಾತ್‌ನವರಾದ ಮೋನಾಂಕ್ ಪಟೇಲ್ ಯುಎಸ್ಎ ತಂಡದ ನಾಯಕರಾಗಿದ್ದಾರೆ. ಟೀಂ ಇಂಡಿಯಾ ಕಳೆದ ವಿಶ್ವಕಪ್‌ನಲ್ಲಿ ಯುಎಸ್ಎಯನ್ನು ಸೋಲಿಸಿತ್ತು. ಅಲ್ಲದೆ, ಯುಎಸ್ಎ ಉತ್ತಮ ಹೋರಾಟ ನೀಡಿತ್ತು. ಇದೀಗ ಎರಡನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಯಾರದ್ದು ಮೇಲುಗೈಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಭಾರತ ತಂಡದಲ್ಲಿ 3 ಬದಲಾವಣೆ

ಈ ಪಂದ್ಯದಲ್ಲಿ ಟಾಸ್ ಗೆದ್ದ ಅಮೆರಿಕ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಬಳಿಕ ಮಾತನಾಡಿದ ಅಮೆರಿಕದ ನಾಯಕ ಮೋನಾಂಕ್ ಪಟೇಲ್ ತಮ್ಮ ಪ್ಲೇಯಿಂಗ್ ಹನ್ನೊಂದರಲ್ಲಿ ಆರು ಬ್ಯಾಟ್ಸ್‌ಮನ್‌ಗಳು, ಇಬ್ಬರು ಆಲ್‌ರೌಂಡರ್‌ಗಳು ಮತ್ತು ಮೂವರು ಬೌಲರ್‌ಗಳು ಸೇರಿದ್ದಾರೆ ಎಂದರು. ಇತ್ತ ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್ ಹಾಗೂ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ ಎಂದರು. ಬುಮ್ರಾ ಜ್ವರದಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹರ್ಷಿತ್ ರಾಣಾ ಬದಲಿಗೆ ಬಂದಿರುವ ಮೊಹಮ್ಮದ್ ಸಿರಾಜ್ ಪ್ಲೇಯಿಂಗ್​ 11 ನಲ್ಲಿ ಸ್ಥಾನ ಪಡೆದಿದ್ದಾರೆ.

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್.

ಯುಎಸ್​ಎ ತಂಡ: ಸೈತೇಜ ಮುಕ್ಕಮಲ್ಲ, ಆಂಡ್ರೀಸ್ ಗಾಸ್ (ವಿಕೆಟ್ ಕೀಪರ್), ಮೊನಾಂಕ್ ಪಟೇಲ್ (ನಾಯಕ), ಮಿಲಿಂದ್ ಕುಮಾರ್, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಶುಭಂ ರಂಜನೆ, ಮೊಹಮ್ಮದ್ ಮೊಹ್ಸಿನ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್.

Source link

ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ – Kannada News | Kolar: Parents Arrested for Selling 7 days Newborn Baby Due to Poverty

ಕೋಲಾರ, ಫೆಬ್ರವರಿ 07: ಮಗು ಆಗಿಲ್ಲ ಅಂತ ಈಗಲೂ ಅದೆಷ್ಟೋ ದಂಪತಿ ಪರದಾಡುತ್ತಾರೆ. ದೇವಸ್ಥಾನ, ಆಸ್ಪತ್ರೆ, ಹರಕೆ ಅಂತ ಪ್ರತಿದಿನ ಸುತ್ತಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಮಗು ಮಾರಾಟ (Sale) ಜಾಲದಲ್ಲಿ ತೊಡಗಿದ್ದು, ಇದೀಗ ಮಗುವನ್ನು (Newborn Baby) ಮಾರಾಟ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಅವರಿಬ್ಬರು ಗಂಡ-ಹೆಂಡತಿ ಅಲ್ಲ, ಆದರೆ ಲಿಂವಿಗ್ ಟುಗೆದರ್ ರೀತಿ ಸಂಸಾರ ಮಾಡಿಕೊಂಡಿದ್ದವರು. ಆಕೆಗೆ ಈಗಾಗಲೇ ಎರಡು ಮಕ್ಕಳಿದ್ದರು. ಮೊದಲ ಗಂಡನಿಗೆ ಒಂದು ಗಂಡು ಮಗುವಿತ್ತು. ಇನ್ನು ಎರಡನೇ ಗಂಡನಿಗೆ ಒಂದು ಮಗುವಿತ್ತು. ಈ ನಡುವೆ ಮೂರನೇ ಮಗುವನ್ನು ಹಣದ ಆಸೆಗಾಗಿ ಮಾರಾಟ ಮಾಡಲು ಯತ್ನಿಸಿದ ವೇಳೆ ಸಿಕ್ಕಬಿದ್ದಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ: ನವಜಾತ ಶಿಶು ರಸ್ತೆಯಲ್ಲಿ ಬಿಟ್ಟುಹೋಗಿದ್ದ ಮಹಿಳೆಗೆ ಜೈಲು ಶಿಕ್ಷೆ: 10 ಸಾವಿರ ರೂ ದಂಡ

ಶ್ರೀನಿವಾಸಪುರ ಪಟ್ಟಣದ ನಿವಾಸಿ ನೀತಾ ಎಂಬಾಕೆಗೆ ಮೊದಲು ಸಂತೋಷ್ ಎಂಬುವನ ಜೊತೆಗೆ ಮದುವೆಯಾಗಿತ್ತು. ಅವನಿಗೆ ಒಂದು ಗಂಡು ಮಗುವಾಗಿತ್ತು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆ ಸಂತೋಷ್​​ನನ್ನು ತೊರೆದಿದ್ದ ನೀತಾ, ರಾಘವೇಂದ್ರ ಜೊತೆಗೆ ಎರಡನೇ ಮದುವೆ ಆಗಿದ್ದಾರೆ. ಈ ವೇಳೆ ರಾಘವೇಂದ್ರನಿಗೆ ಈಗಾಗಲೇ ಒಂದು ಹೆಣ್ಣು ಮಗುವಿತ್ತು. ಈ ವೇಳೆ ನೀತಾ ಗರ್ಭಣಿಯಾಗಿದ್ದಳು. ಬಡತನ ಇದ್ದರೂ ಕೂಡ ಮತ್ತೊಮ್ಮೆ ಗರ್ಭಿಣಿಯಾಗಿದ್ದ ನೀತಾ ಮತ್ತು ರಾಘವೇಂದ್ರಗೆ ಈ ಮಗು ಬೇಡ ಎನ್ನಿಸಿತ್ತು.

ಐವರ ಬಂಧನ

ಈ ವೇಳೆ ನಾರಾಯಣಸ್ವಾಮಿ ಎಂಬಾತ ನನಗೆ ಪರಿಚಯಸ್ಥರೊಬ್ಬರಿಗೆ ಮಕ್ಕಳಿಲ್ಲ, ನಿಮ್ಮ ಮಗು ಕೊಟ್ಟರೆ ಐದು ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದ. ಅದಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಹಾಗೂ ಮಂಜುಳ ದಂಪತಿಗಳಿಗೆ ಕೊಡಿಸಲು ಮಧ್ಯಸ್ಥಿಕೆ ವಹಿಸಿಕೊಂಡಿದ್ದ. ಅದರಂತೆ ಕಳೆದ ಏಳು ದಿನದ ಹಿಂದೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವನ್ನು ಒಪ್ಪಂದದಂತೆ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ತಿಳಿದ ಹಿನ್ನೆಲೆ ಕಳೆದ ರಾತ್ರಿ ಪೊಲೀಸರು ಮಗುವಿನ ಸಹಿತ ಒಟ್ಟು ಐದು ಜನರನ್ನು ಬಂಧಿಸಿದ್ದಾರೆ.

ಇನ್ನು ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯ ನಿವಾಸಿಗಳಾದ ನೀತಾ ಅಲಿಯಾಸ್ ಅನಿತಾ ಮತ್ತು ರಾಘವೇಂದ್ರ ಕಳೆದ ಐದಾರು ವರ್ಷಗಳಿಂದ ಒಟ್ಟಿಗೆ ಸಂಸಾರ ಮಾಡಿಕೊಂಡಿದ್ದರು. ಮೊದಲ ಗಂಡನಿಗೆ ಒಂದು 8 ವರ್ಷದ ಗಂಡು ಮಗನಿದ್ದಾನೆ. ಇನ್ನು ರಾಘವೇಂದ್ರನಿಗೆ ಒಂದು ಐದು ವರ್ಷದ ಹೆಣ್ಣು ಮಗುವಿತ್ತು. ಸದ್ಯ ಅವರಿಗೆ ಬಡತನವಿತ್ತು. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ರಾಘವೆಂದ್ರನಿಗೆ ಮೂರನೇ ಮಗುವನ್ನು ಸಾಕುವಷ್ಟು ಶಕ್ತಿ ಇರಲಿಲ್ಲ, ಹಾಗಾಗಿ ಗಂಡ-ಹೆಂಡತಿ ಇಬ್ಬರು ಮಾತನಾಡಿಕೊಂಡು ಇಬ್ಬರ ಒಪ್ಪಿಗೆ ಮೇರೆಗೆ ಮಗು ಮಾರಾಟಕ್ಕೆ ಮುಂದಾಗಿದ್ದಾರೆ.

ತನ್ನ ಪರಿಚಯಸ್ಥ ಕೊಟ್ರಗೊಳಿ ಗ್ರಾಮದ ನಾರಾಯಣಸ್ವಾಮಿ ಎಂಬುವರ ಮೂಲಕ ಮಗುವನ್ನು ಐದು ಲಕ್ಷ ರೂಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಒಪ್ಪಂದದ ಪ್ರಕಾರವಾಗಿ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಮತ್ತು ಮಂಜುಳ ದಂಪತಿಗೆ ಮಗುವನ್ನು ಹಸ್ತಾಂತರಕ್ಕೆ ಮುಂದಾಗಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರ ಪೊಲೀಸರಿಗೆ ಸಿಕ್ಕ ಮಾಹಿತಿ ಮೇಲೆ ದಾಳಿ ಮಾಡಿದಾಗ ರಾತ್ರಿ 1.30 ರಲ್ಲಿ ಮಾರಾಟ ಮಾಡುತ್ತಿದ್ದ ದಂಪತಿ ಮತ್ತು ಖರೀದಿ ಮಾಡುತ್ತಿದ್ದ ದಂಪತಿ ಹಾಗೂ ಮಧ್ಯವರ್ತಿ ಸೇರಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಆನೇಕಲ್ ಗೊಲ್ಲಹಳ್ಳಿಯಲ್ಲಿ ದಾರುಣ ಘಟನೆ: ಪೋಷಕರ ನಿರ್ಲಕ್ಷ್ಯದಿಂದ ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು

ಸದ್ಯ ಪೊಲೀಸರು ಐವರನ್ನು ಬಂಧಿಸುವ ಮೂಲಕ ಮಗುವನ್ನು ರಕ್ಷಣೆ ಮಾಡಿದ್ದು, ಜೊತೆಗೆ 80 ಸಾವಿರ ರೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲಾಗಿದ್ದು, ಮಗುವನ್ನು ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ವರ್ಷದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನ ಹೇಳಿದ್ದಾರೆ.

ಒಟ್ಟಿನಲ್ಲಿ ಬಡತನದ ಹೆಸರಲ್ಲಿ ಹೀಗೆ ಹೆತ್ತವರೇ ಮಕ್ಕಳನ್ನ ಮಾರಾಟ ಮಾಡಲು ಮುಂದಾಗಿರುವುದು ಮಾತ್ರ ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs USA T20 WC Live Score: ಉದ್ಘಾಟನಾ ಸಮಾರಂಭ ಆರಂಭ – Kannada News | India vs USA T20 World Cup 2026 Live Cricket Score IND vs USA Group a Today Match, highlights latest news in Kannada

LIVE NEWS & UPDATES

  • 07 Feb 2026 06:28 PM (IST)

    IND vs USA Live Score: ಸ್ವಲ್ಪ ಹೊತ್ತಿನಲ್ಲಿ ಟಾಸ್

    ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ, ಮತ್ತು ಇಬ್ಬರೂ ನಾಯಕರು ಶೀಘ್ರದಲ್ಲೇ ಟಾಸ್ ಮಾಡಲು ಮೈದಾನಕ್ಕೆ ಇಳಿಯಲಿದ್ದಾರೆ. ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕವಾಗಿರುತ್ತದೆ.

2026 ರ ಟಿ20 ವಿಶ್ವಕಪ್ ಆರಂಭವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡವು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಟೂರ್ನಮೆಂಟ್‌ನ ಮೊದಲ ಪಂದ್ಯವನ್ನು ಆಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಭಾರತದ ಎರಡನೇ ಪಂದ್ಯವಾಗಿದೆ.

Published On – Feb 07,2026 6:26 PM

Source link

6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ – Kannada News | Love Fraud: Ex Girlfriend Marries Other, Ravi Fights for Justice in Family Court

ಬೆಂಗಳೂರು, ಫೆ.7: ರಾಜ್ಯದಲ್ಲಿ ಹುಡುಗರು ಹುಡುಗಿಯರಿಂದ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದೀಗ 2009ರಿಂದ ಪ್ರೀತಿಸಿ, ಆರು ವರ್ಷಗಳ ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದ ಯುವತಿಯೊಬ್ಬಳು ಈಗ ಬೇರೊಬ್ಬರನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಳೆ ಎಂದು ಆರೋಪಿಸಿ ಸಿವಿಲ್ ಇಂಜಿನಿಯರ್ ರವಿ (relationship betrayal case) ಎಂಬುವವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಯುವತಿ ಮದುವೆಗೆ ಸಿದ್ಧತೆ ನಡೆಸಿದ್ದಾಳೆ, ನನಗೆ ಅನ್ಯಾಯವಾಗಿದೆ ಎಂದು ರವಿ ದೂರಿದ್ದಾರೆ. ರವಿ ಅವರು ಈ ಯುವತಿಯನ್ನು 2009 ರಿಂದ ಪ್ರೀತಿಸುತ್ತಿದ್ದರು. ಇಬ್ಬರೂ 2014ರವರೆಗೆ ಒಂದೇ ಕಾಲೇಜಿನಲ್ಲಿ ಓದಿ, ಎಂ.ಟೆಕ್ ಕೂಡಾ ಒಂದೇ ಕಾಲೇಜಿನಲ್ಲಿ ಪೂರ್ಣಗೊಳಿಸಿ, ನಂತರ ಒಟ್ಟಿಗೆ ಕೆಲಸ ಮಾಡಿದ್ದಾರೆ. 2022ರವರೆಗೂ ಬೆಂಗಳೂರಿನ ದೇವಿ ನಗರದಲ್ಲಿ ಆರು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದರು. 2022ರಲ್ಲಿ ಯುವತಿ ತಮ್ಮ ಮನೆಯಲ್ಲಿ ಮದುವೆಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾಳೆ. ರವಿ ಅವರ ಕುಟುಂಬದವರು ಕೂಡ ಮದುವೆ ಮಾತುಕತೆ ನಡೆಸಿದ್ದಾರೆ. ಆದರೆ, ಯುವತಿಯ ತಾಯಿ ಅನಾರೋಗ್ಯದ ಕಾರಣವನ್ನು ನೀಡಿ, ಮದುವೆಯನ್ನು ಮುಂದೂಡಿದ್ದರು. ಆಕೆಗಾಗಿ ಒಂದು ವರ್ಷಗಳಿಂದ ಕಾಯುತ್ತಿದ್ದೇನೆ ಎಂದು ರವಿ ಅವರು ಹೇಳಿದ್ದಾರೆ.

ಯುವತಿಗೆ ಸೆಪ್ಟೆಂಬರ್ 25ರಂದು ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆದಿದೆ. ಕನಕರಾಜು ಎಂಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆದಿದ್ದು, ರವಿ ಅವರು ಯುವತಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಮತ್ತು ಆತನ ತಂದೆಯ ಬಳಿ ನಮ್ಮ ಸಂಬಂಧದ ಬಗ್ಗೆ ತಿಳಿಸಿದ್ದೇನೆ. ಆದರೆ, ಅವರು ರಿಜಿಸ್ಟರ್ ಮ್ಯಾರೇಜ್ ಆಗುವುದಾಗಿ ತಿಳಿಸಿದ್ದಾರೆ ಎಂದು ರವಿ ಹೇಳಿದ್ದಾರೆ. ರವಿ ಅವರು ತಮ್ಮ ಪ್ರೇಯಸಿಯ ವಿರುದ್ಧ ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಸೆಪ್ಟೆಂಬರ್ 28ರಂದು ಅದರ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್​ ಹೇಳಿದೆ. ಇನ್ನು ಯುವತಿ ಹಾಗೂ ಹೊಸ ಹುಡುಗನಿಗೂ ಸಮನ್ಸ್ ಜಾರಿಯಾಗಿದೆ. ಆದರೆ, ಕೋರ್ಟ್ ತೀರ್ಪು ಹೊರಬೀಳುವ ಮುನ್ನವೇ ಯುವತಿ ಸೆಪ್ಟೆಂಬರ್ 20ರಂದು ತಿರುಮಲ ಚೌಟ್ರಿಯಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಕೋರ್ಟ್​ ವಿಚಾರಣೆಗೂ ಮುನ್ನ ಮದುವೆಯಾದರೆ ನಾನು ಸಾಯಬೇಕಾಗುತ್ತದೆ ಎಂದು ರವಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಿಲ್ಲರ್ ಬಿಎಂಟಿಸಿಗೆ ಇನ್ನೆಷ್ಟು ಬಲಿ ಬೇಕು?: ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್

ವಿಡಿಯೋ ಇಲ್ಲಿದೆ ನೋಡಿ:


ಯುವತಿಯ ತಾಯಿಗೆ 1.30 ಲಕ್ಷ ರೂಪಾಯಿ ನೀಡಿದ್ದಲ್ಲದೆ, ಸುದರ್ಶನ್ ಜ್ಯುವೆಲರ್ಸ್‌ನಲ್ಲಿ ಯುವತಿಗೆ ನೆಕ್ಲೇಸ್ ಕೂಡಾ ಕೊಡಿಸಿದ್ದೇನೆ ಎಂದು ರವಿ ಆರೋಪಿಸಿದ್ದಾರೆ. ಈ ಎಲ್ಲಾ ಖರ್ಚುಗಳ ಬಗ್ಗೆ ಸಾಕ್ಷಿಯನ್ನು ನೀಡುತ್ತೇನೆ. “ಒಂದು ಹುಡುಗಿಗೆ ಅನ್ಯಾಯವಾದರೆ ಮಹಿಳಾ ಸಂಘಟನೆಗಳು ಬೆಂಬಲಕ್ಕೆ ನಿಲ್ಲುತ್ತವೆ. ಆದರೆ, ನನಗೆ ಯಾಕಿಲ್ಲ?” ಎಂದು ರವಿ ಪ್ರಶ್ನಿಸಿದ್ದಾರೆ. ನ್ಯಾಯಕ್ಕಾಗಿ ಕರ್ನಾಟಕದ ಯುವಕರಲ್ಲಿ ಮತ್ತು ಸಂಘಟನೆಗಳಲ್ಲಿ ಮನವಿ ಮಾಡಿರುವ ರವಿ, “ನನಗಾದ ಅನ್ಯಾಯಕ್ಕೆ ದಯವಿಟ್ಟು ನ್ಯಾಯ ಕೊಡಿಸಿ” ಎಂದು ಕೇಳಿಕೊಂಡಿದ್ದಾರೆ. ಯುವತಿಯು ಹಿಂದೆ ತಮ್ಮ ಮನೆಯಲ್ಲಿ ನಡೆದ ನಿಶ್ಚಿತಾರ್ಥವನ್ನು ತಾವೇ ಇಷ್ಟಪಡುವುದಾಗಿ ಹೇಳಿ ರದ್ದುಪಡಿಸಿದ್ದರು. ಆದರೆ, ಈಗ ಯಾವುದೇ ಕಾರಣ ನೀಡದೆ ಸಂಬಂಧವನ್ನು ಮುರಿದಿರುವುದು ತುಂಬಾ ನೋವುಂಟು ಮಾಡಿದೆ ಎಂದು ರವಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:10 pm, Sat, 7 February 26

Source link

T20 World Cup 2026: ಬಾಬರ್ ಆಝಂ ಟೆಸ್ಟ್ ಬ್ಯಾಟಿಂಗ್​ಗೆ ಪಾಕ್ ನಾಯಕ ಗರಂ – Kannada News | T20 World Cup 2026: Pakistan Edges Netherlands; Babar Azam’s Slow Batting Under Fire

2026 ರ ಟಿ20 ವಿಶ್ವಕಪ್‌ನ (T20 World Cup 2026) ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ( Pakistan vs Netherlands) ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ತಂಡವನ್ನು ಕೊನೆಯ ಓವರ್​ನಲ್ಲಿ ಸೋಲಿಸಿತು. ವಾಸ್ತವವಾಗಿ, ಈ ಪಂದ್ಯದ ಮೇಲೆ 18ನೇ ಓವರ್​​ವರೆಗೂ ನೆದರ್ಲ್ಯಾಂಡ್ಸ್ ಹಿಡಿತ ಸಾಧಿಸಿತ್ತು. ಆದರೆ 19ನೇ ಓವರ್​ನಲ್ಲಿ ನೆದರ್ಲ್ಯಾಂಡ್ಸ್ ತಂಡ ಮಾಡಿದ ಎಡವಟ್ಟು, ಪಾಕಿಸ್ತಾನಕ್ಕೆ ವರದಾನವಾಯಿತು. 19 ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಾಹಿಮ್ ಒಂದೇ ಓವರ್​ನಲ್ಲಿ 24 ರನ್ ಕಲೆಹಾಕಿ ಪಾಕ್ ತಂಡಕ್ಕೆ ಗೆಲುವು ತಂದುಕೊಟ್ಟರು. ಆದಾಗ್ಯೂ ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಸಲ್ಮಾನ್ ಅಘಾ ಮಧ್ಯಮ ಓವರ್​ಗಳಲ್ಲಿ ಬ್ಯಾಟರ್​ಗಳ ನಿಧಾನಗತಿಯ ಬ್ಯಾಟಿಂಗ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು ಎಂದಿದ್ದಾರೆ.

ಪಾಕ್ ತಂಡಕ್ಕೆ ಉತ್ತಮ ಆರಂಭ

ವಾಸ್ತವವಾಗಿ, ಈ ಪಂದ್ಯವು ಆರಂಭದಿಂದಲೂ ಪಾಕಿಸ್ತಾನದ ಕೈಯಲ್ಲಿತ್ತು. ಆದ್ದರಿಂದ ಪಾಕಿಸ್ತಾನ ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ 10 ನೇ ಓವರ್ ನಂತರ ಎಲ್ಲವೂ ಬದಲಾಯಿತು. 12 ನೇ ಓವರ್‌ನ ಮೊದಲ ಎಸೆತದಲ್ಲಿ, ಪಾಕಿಸ್ತಾನ 98 ರನ್‌ಗಳಾಗಿದ್ದಾಗ ಮೂರನೇ ವಿಕೆಟ್ ಪತನವಾಯಿತು. ಈ ವಿಕೆಟ್ ನಂತರ, ಪಂದ್ಯದ ಚಿತ್ರಣ ಬದಲಾಯಿತು. ಏಕೆಂದರೆ ಆ ಓವರ್​ನ ಎರಡನೇ ಎಸೆತದಲ್ಲಿಯೇ ಉಸ್ಮಾನ್ ಖಾನ್ ವಿಕೆಟ್ ಒಪ್ಪಿಸಿದರು. ಹೀಗಾಗಿ ಪಾಕಿಸ್ತಾನ 98 ರನ್‌ಗಳಿಗೆ 4 ನೇ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ಗುರಿ ಕಡಿಮೆ ಇದ್ದುದ್ದರಿಂದ ಪಾಕ್ ತಂಡ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಬಾಬರ್ ಆಝಂ ಅವರ ಆಮೆಗತಿಯ ಬ್ಯಾಟಿಂಗ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.

ಬಾಬರ್ ಆಮೆಗತಿಯ ಬ್ಯಾಟಿಂಗ್

ಟಿ20 ಕ್ರಿಕೆಟ್​ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಹೆಸರುವಾಸಿಯಾಗಿರುವ ಬಾಬರ್ ಆಝಂ ಡಚ್ ಬೌಲರ್‌ಗಳ ವಿರುದ್ಧವೂ ರನ್​ಗಾಗಿ ಪರದಾಡಬೇಕಾಯಿತು. ತಮ್ಮ ಇನ್ನಿಂಗ್ಸ್​ನಲ್ಲಿ 18 ಎಸೆತಗಳಲ್ಲಿ ಆಡಿದ ಬಾಬರ್ ಕೇವಲ 15 ರನ್ ಮಾತ್ರ ಕಲೆಹಾಕಿದರು. ಅಂದರೆ ಮೂರು ಓವರ್‌ ಬ್ಯಾಟಿಂಗ್‌ ಮಾಡಿದ ಬಾಬರ್ ಕೇವಲ ಒಂದು ಬೌಂಡರಿ ಬಾರಿಸಿದರು. ಬಾಬರ್ ಅವರ ನಿಧಾನಗತಿಯ ಬ್ಯಾಟಿಂಗ್ ಪಾಕಿಸ್ತಾನವನ್ನು ಒತ್ತಡಕ್ಕೊಳಗಾಗುವಂತೆ ಮಾಡಿತು. ಏಕೆಂದರೆ ಬಾಬರ್ ಅವರ ಈ ಆಮೆಗತಿಯ ಬ್ಯಾಟಿಂಗ್​ನಿಂದ ರನ್‌ಗಳು ಮತ್ತು ಎಸೆತಗಳ ನಡುವಿನ ಅಂತರ ಹೆಚ್ಚಾಯಿತು. ಇದರ ನಡುವೆ ತಂಡದ ಸ್ಕೋರ್ 100 ರ ಗಡಿ ದಾಟಿದ ಕೂಡಲೇ ಬಾಬರ್ ಔಟಾದರು. ಇದರಿಂದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಯಿತು. ಅಂತಿಮವಾಗಿ ಪಾಕ್ ತಂಡ ಗೆದ್ದಿತ್ತಾದರೂ ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಕೂಡ ಬಾಬರ್ ಆಝಂ ಅವರ ಇನ್ನಿಂಗ್ಸ್‌ ಬಗ್ಗೆ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

ಬಲಿಷ್ಠ ತಂಡಗಳನ್ನು ಮಣಿಸಿ ಟಿ20 ವಿಶ್ವಕಪ್​ನಿಂದ ಹೊರಹಾಕಿದ ದುರ್ಬಲ ತಂಡಗಳಿವು

ಪಾಕ್ ನಾಯಕ ಹೇಳಿದ್ದೇನು?

ಈ ಬಗ್ಗೆ ಪಂದ್ಯ ಪ್ರಸ್ತುತಿಯಲ್ಲಿ ಮಾತನಾಡಿದ ಅಘಾ, ‘ನಾವು ಮೊದಲ 10 ಓವರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೇವು. ಆದರೆ ಮಧ್ಯಮ ಓವರ್​ಗಳಲ್ಲಿ ಓವರ್​ಗೆ ಐದು, ಆರು, ಎರಡು, ಮೂರು ರನ್ ಕಲೆಹಾಕಿದರೆ ಇತರರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದರೆ ಕ್ರೆಡಿಟ್ ಫಹೀಮ್‌ಗೆ ಸಲ್ಲುತ್ತದೆ. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು’ ಎಂದಿದ್ದಾರೆ. ಮಧ್ಯಮ ಓವರ್​ಗಳಲ್ಲಿ ಬಾಬರ್ ಆಝಂ ನಿದಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕೆ ಪಾಕ್ ನಾಯಕ ಪರೋಕ್ಷವಾಗಿ ಅಸಮಾಧಾನಗೊಂಡಿದ್ದಾರೆ ಎಂಬುದು ಸ್ಪಷ್ಟವಾದಂತ್ತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:28 pm, Sat, 7 February 26

Source link