Category Archives: Blog

Your blog category

ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ – Kannada News | Arvind Panagariya on why India’s trade deals with US, EU could be bigger moment than 1991

ನವದೆಹಲಿ, ಫೆಬ್ರುವರಿ 5: ಭಾರತ ಮತ್ತು ಅಮೆರಿಕ ನಡುವೆ ಏರ್ಪಡುತ್ತಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು (Free Trade Agreement) ಆರ್ಥಿಕ ತಜ್ಞ ಅರವಿಂದ್ ಪಣಗರಿಯಾ (Arvind Panagariya) ಶ್ಲಾಘಿಸಿದ್ದಾರೆ. ಯೂರೋಪಿಯನ್ ಒಕ್ಕೂಟ ಮತ್ತು ಅಮೆರಿಕದ ಜೊತೆ ಭಾರತ ಮಾಡಿಕೊಂಡಿರುವ ಒಪ್ಪಂದಗಳು ಎಲ್ಲಾ ಒಪ್ಪಂದಗಳಿಗಿಂತ ಮಿಗಿಲಾಗಿರುವಂಥವು ಎಂದು 16ನೇ ಹಣಕಾಸು ಆಯೋಗದ ಛೇರ್ಮನ್ ಆದ ಡಾ. ಅರವಿಂದ್ ಪಣಗರಿಯಾ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಟುಡೇ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅರವಿಂದ್ ಪಣಗರಿಯಾ, ಇಯು ಮತ್ತು ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದವು 1991ರ ಉದಾರ ನೀತಿಗಿಂತಲೂ (Liberalization) ದೊಡ್ಡದು ಎಂದಿದ್ದಾರೆ. 2025ರಲ್ಲಿ ಸರ್ಕಾರ ಮಾಡಿರುವ ಸುಧಾರಣೆಗಳು ಹಾಗೂ ವ್ಯಾಪಾರ ಒಪ್ಪಂದಗಳನ್ನು ಸೇರಿಸಿದರೆ ಭಾರತಕ್ಕೆ ಇದು ಬಹಳ ದೊಡ್ಡ ತಿರುವು ಕೊಟ್ಟಿರುವ ಬೆಳವಣಿಗೆ ಎಂದಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ ಸಲೀಸಾಗಿ ಕುದುರಿದ್ದು ಹೇಗೆ? ಅಜಿತ್ ದೋವಲ್ ಅಮೆರಿಕ ಭೇಟಿಯಲ್ಲಿ ಆಗಿದ್ದೇನು?

ಅಮೆರಿಕದ ಉತ್ಪನ್ನಗಳಿಗೆ ಶೂನ್ಯ ಟ್ಯಾರಿಫ್ ತಡೆ ಇರುವುದು ಭಾರತಕ್ಕೆ ಹಿನ್ನಡೆಯಾಗುವುದಿಲ್ಲವಾ ಎನ್ನುವ ಪ್ರಶ್ನೆಯನ್ನು ನೀತಿ ಆಯೋಗ್​ನ ಮಾಜಿ ವೈಸ್ ಛೇರ್ಮನ್ ಆದ ಡಾ. ಅರವಿಂದ್ ಪಣಗರಿಯಾ ತಳ್ಳಿಹಾಕಿದ್ದಾರೆ. ಮುಕ್ತ ವ್ಯಾಪಾರ ವಾತಾವರಣದಿಂದ ಗ್ರಾಹಕರಿಗೆ ಬಹಳ ಲಾಭವಾಗುತ್ತದೆ. ಜಾಗತಿಕ ಮಟ್ಟದ ಅತ್ಯುತ್ತಮ ಉತ್ಪನ್ನಗಳು ಭಾರತೀಯರಿಗೆ ಸುಲಭವಾಗಿ ಸಿಗಬಹುದು. ಭಾರತೀಯ ಉದ್ಯಮಗಳೂ ಕೂಡ ತಮ್ಮ ಕ್ಷಮತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅರವಿಂದ್ ಪಣಗರಿಯಾ ಹೇಳಿದ್ದಾರೆ.

1991ರ ಹಿಂದೆ ಭಾರತದಲ್ಲಿ ಇದ್ದ ಉದ್ಯಮಗಳ ಸ್ಥಿತಿಗೂ, ಈಗ ಇರುವ ಉದ್ಯಮಗಳ ಸ್ಥಿತಿಗೂ ಎಷ್ಟು ಸುಧಾರಣೆ ಆಗಿದೆ ಎನ್ನುವ ಸಂಗತಿಯನ್ನೂ ಆರ್ಥಿಕ ತಜ್ಞರು ಎತ್ತಿ ತೋರಿಸಿದ್ದಾರೆ. ವಿಶ್ವದ ಎರಡು ಅತಿದೊಡ್ಡ ಆರ್ಥಿಕ ಶಕ್ತಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದು ಮತ್ತು ಭಾರತದಲ್ಲಿರುವ ಅಸಂಖ್ಯೆ ಕಾರ್ಮಿಕ ವರ್ಗ, ಇವೆರಡು ಅಂಶಗಳು 2047ರ ವಿಕಸಿತ ಭಾರತದ ಗುರಿಗೆ ದೇಶವನ್ನು ಕರೆದೊಯ್ಯಬಲ್ಲುವು ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ

ಇತ್ತೀಚೆಗಷ್ಟೇ ಭಾರತವು 27 ರಾಷ್ಟ್ರಗಳ ಗುಂಪಾದ ಯೂರೋಪಿಯನ್ ಯೂನಿಯನ್ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ಡೀಲ್​ನಲ್ಲಿ ಹೆಚ್ಚಿನ ಭಾರತೀಯ ಸರಕುಗಳಿಗೆ ಇಯು ಶೂನ್ಯ ಟ್ಯಾರಿಫ್ ಆಫರ್ ಮಾಡುತ್ತದೆ. ಇನ್ನು, ಅಮೆರಿಕದ ಜೊತೆ ಭಾರತದ ಒಪ್ಪಂದಕ್ಕೆ ಇನ್ನೂ ಸಹಿ ಬಿದ್ದಿಲ್ಲ. ಆದರೆ, ಟ್ರಂಪ್ ಮತ್ತು ಮೋದಿ ಈ ಒಪ್ಪಂದವನ್ನು ಘೋಷಿಸಿದ್ದಾರೆ. ಇದರಲ್ಲಿ ಅಮೆರಿಕವು ಭಾರತದ ಸರಕುಗಳಿಗೆ ಟ್ಯಾರಿಫ್ ಅನ್ನು ಶೇ. 50ರಿಂದ ಶೇ 18ಕ್ಕೆ ಇಳಿಸುತ್ತದೆ. ಅಮೆರಿಕದ ಹೆಚ್ಚಿನ ಸರಕುಗಳಿಗೆ ಭಾರತ ಶೂನ್ಯ ಟ್ಯಾರಿಫ್ ಹಾಕುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು – Kannada News | Shivamogga Astrologer Kamalakar Bhat And Uttara kannada suchitra audio Goes viral

ಶಿವಮೊಗ್ಗ, (ಫೆಬ್ರವರಿ 05): ನಿತ್ಯ ಬೆಳಗ್ಗೆ ಭವಿಷ್ಯ. ದಿನವೆಲ್ಲ ಆಂಟಿ ಜೊತೆ ಸರಸ ಸಲ್ಲಾಪ. ಇದು ಜನರ ಜ್ಯೋತಿಷ್ಯ ಹೇಳುತ್ತಿದ್ದ ಕಮಲಾಕರ್ ಭಟ್​ನ (Kamalakar bhat )ಕರ್ಮಕಾಂಡ. ರೀಲ್ಸ್ ಮಾಡುತ್ತಿದ್ದ ಸುಚಿತ್ರಾಳ (Suchitra) ಹಿಂದೆ ಕಮಲಾಕರ್ ಭಟ್ ನಾಯಿ ತರ ಸುತ್ತಾಡುತ್ತಿದ್ದಂನಂತೆ. ಈ ಮಾತನ್ನ ನಾವು ಹೇಳುತ್ತಿಲ್ಲ. ಸ್ವತಃ ಕಮಲಾಕರ್ ಭಟ್ ಮಾತನಾಡಿದ್ದಾನೆ ಎನ್ನಲಾದ ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ಇನ್ನೊಂದೆಡೆ  ‘ನೊಂದ ಹೃದಯದ ಪ್ರೀತಿ, ಇನ್ಮೇಲೆ ಓನ್ಲಿ ಮನಿ ಮನಿ’ ಎಂದು ಸುಚಿತ್ರಾ  ಬಯೋ ಹಾಕಿಕೊಂಡಿದ್ದು. ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಆಡಿಯೋನಲ್ಲೇನಿದೆ?


ಇಲ್ಲಿ ಕೇಳು ಇಲ್ಲಿ. ನೀನು ಇವಳನ್ನ, ಇನ್ನೊಂದು ವಿಚಾರ ನಿನಗೆ ಗೊತ್ತೋ ಗೊತ್ತಿಲ್ವೋ ಗೊತ್ತಿಲ್ಲ ನಂಗೆ. ಇವಳೇ ನನ್ನ ಸರ್ವಸ್ವ, ಇವಳನ್ನ ಪಡೆಯಬೇಕು ಎನ್ನುವ ದೃಷ್ಟಿಯಿಂದ ಅವಳು ಏನು ಮಾಡಿದ್ರು ಕೂಡ ನಾಯಿ ತರದಲ್ಲಿ ಅವಳ ಹಿಂದೆ ಓಡಾಡಿದವನು ನಾನು. ಅವಳು ನನ್ನ ಹಿಂದೆ ಬಂದೋಳಲ್ಲ. ಅವಳಿಗೆ ಬೇಕು ಅಂದ್ರೆ ಚಿಟಿಕೆ ಹೊಡೆದ್ರೆ ಸಾವಿರ ತಿಂಗಳು ಸಾವಿರ ನಾಯಿಗಳು ಎದುರಿಗೆ ಬೌಬೌಬೌ ಅಂತಾ ಬರುವಂತವು ಇದ್ದವು. ಆದ್ರೆ 4 ತಿಂಗಳ ಪರಿಶ್ರಮದ ಫಲವಾಗಿ ಭಗವಂತ ನನಗೆ ಕೊಟ್ಟ ಅಂದುಕೊಂಡಿದ್ದೀನಿ, ಗೊತ್ತಾಯ್ತಾ ಮೇಡಂ?

ಇದನ್ನೂ ಓದಿ: ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು

ಹೀಗೆ ಕಮಲಾಕರ್ ಭಟ್ ಆಡಿಯೋದಲ್ಲಿ ಹೇಳಿದಂತೆ ಸುಚಿತ್ರಾಳನ್ನ ಬಲೆ ಬೀಳಿಸಿಕೊಳ್ಳಲುನಾಲ್ಕು ತಿಂಗಳ ಪರಿಶ್ರಮ ಅಂತೆ. ದೇವರು ಕೊಟ್ಟ ಫಲ ಅಂತೆ. ನಾಯಿ ತರ ಸುಚಿತ್ರಾ ಹಿಂದೆ ಓಡಿದ್ನಂತೆ. ಇದು ಸುಚಿತ್ರಾ ಹಾಗೂ ಕಮಲಾಕರ್ ಭಟ್ ಮಾತನಾಡಿರೋ ಆಡಿಯೋ ಎನ್ನಲಾಗಿದೆ. ಇದನ್ನ ಇವರು ಅದ್ಯಾರಿಗೋ ಕಳಿಸಿದಂತಿದೆ. ಇದೇ ಆಡಿಯೋದಲ್ಲಿ ಈ ರೀಲ್ಸ್ ರಾಣಿ, ಕಮಲಾಕರ್ ಭಟ್ ಪ್ರೇಯಸಿ ಸುಚಿತ್ರಾ ಆಡಿರೋ ಮಾತು ಸಹ ವೈರಲ್ ಆಗಿದ್ದು, ಅವನಿಗೆ ಹೆಂಡ್ತಿನು ನಾನೇ, ಲವರೂ ನಾನೇ ಎಂದು ಸುಚಿತ್ರಾ ಹೇಳಿಕೊಂಡಿದ್ದಾಳೆ.

‘ನೊಂದ ಹೃದಯದ ಪ್ರೀತಿ, ಇನ್ಮೇಲೆ ಓನ್ಲಿ ಮನಿ ಮನಿ’


ಕೈಯಲ್ಲಿ ಕಾಸಿದ್ರೆ ಕೈಕಾಲಿಗೆ ನೆಂಟ್ರು ಎಲ್ಲ ಎಂದು ರೀಲ್ಸ್ ಮಾಡಿದ್ದ ಸುಚಿತ್ರಾಳದ್ದು ನೊಂದ ಹೃದಯವಂತೆ. ವಿಷಯ ಅಂದ್ರೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಎರಡು ಖಾತೆ ಹೊಂದಿದ್ದಾಳೆ. ಈ ಪೈಕಿ ಅಕೌಂಟ್​​ವೊಂದರಲ್ಲಿ ನೊಂದ ಹೃದಯ ಇಷ್ಟು ದಿನ ಪ್ರೀತಿ ಗೀತಿ, ಇನ್ಮೇಲೆ ಓನ್ಲಿ ಮನಿ ಎಂದು ಬಯೋ ಹಾಕಿಕೊಂಡಿದ್ದಾಳೆ. ಇದು ಪ್ರೀತಿ ಹೆಸರಲ್ಲಿ ದುಡ್ಡು ಮಾಡುತ್ತಿದ್ದಳಾ? ಅಥವಾ ದುಡ್ಡನ್ನೇ ನೋಡಿ ಕಮಲಾಕರ್ ಭಟ್​ನ ಪ್ರೀತಿಸಿದ್ಲಾ ಎನ್ನುವ ಪ್ರಶ್ನೆ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೀಲ್ಸ್ ಮಾಡಿ ಮತ್ತೆ ಇಕ್ಕಟ್ಟಿಕೆ ಸಿಲುಕಿದ ರಜತ್; ಮತ್ತೊಂದು ದೂರು ದಾಖಲು – Kannada News | Bigg Boss Rajath In Trouble Again Cigarette Reel at Mysuru Heritage Site Sparks Controversy

ಬಿಗ್ ಬಾಸ್ ಸ್ಪರ್ಧಿ ಹಾಗೂ ನಟ ರಜತ್ (Rajat) ಅವರು ಈಗ ಮತ್ತೆ ಇಕ್ಕಟ್ಟಿಕ್ಕೆ ಸಿಲುಕಿದ್ದಾರೆ. ಈ ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿ ಅವರು ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಈಗ ಅವರು ಮತ್ತೆ ರೀಲ್ಸ್ ಮಾಡಿದ ಕಾರಣಕ್ಕೆ ತೊಂದರೆ ಅನುಭವಿಸುವಂತಾಗಿದೆ. ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ವಿಡಿಯೋ ಮಾಡಿದ್ದಾರೆ. ಈ ವೇಳೆ ಅವರು ಸಿಗರೇಟ್ ಹಚ್ಚಿದ್ದಾರೆ. ಇದರಿಂದ ಅವರ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚೆಗೆ ರಜತ್ ಅವರು ವಿಡಿಯೋ ಒಂದನ್ನು ಮಾಡಿದರು. ಈ ವಿಡಿಯೋದಲ್ಲಿ ಅವರು ರೆಟ್ರೋ ಸ್ಟೈಲ್ ಕಾರಲ್ಲಿ ಬರುತ್ತಾರೆ. ಈ ವೇಳೆ ಅವರು ಸಿಗರೇಟ್ ಕೂಡ ಹಚ್ಚುತ್ತಾರೆ. ಈ ವಿಡಿಯೋ ಶೂಟ್ ಆಗಿದ್ದು ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರು. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?

ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಈ ದೂರನ್ನು ನೀಡಿದ್ದಾರೆ. ರಜತ್ ವಿರುದ್ದ ಎಫ್​ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ. ‘ರಜತ್ ಪಾರಂಪರಿಕ ಕಟ್ಟಡದ ಮುಂದೆ ಅನುಮತಿ ಪಡೆಯದೆ ವಿಡಿಯೋ ಮಾಡಿದ್ದಾರೆ. ಸಿಗರೇಟ್ ಹಿಡಿದು ಕಾರಿನಿಂದ ಇಳಿದಿದ್ದಾರೆ. ಇದು ಅವರ ಫಾಲೋರ್ಸ್‌ಗೆ ಕೆಟ್ಟ ಸಂದೇಶ ನೀಡುತ್ತದೆ. ಈ ಮೊದಲು ಕೂಡ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಎಫ್​ಐಅರ್ ದಾಖಲಾಗಿತ್ತು. ಇದೀಗ ಮತ್ತೆ ಅದೇ ರೀತಿ ಮಾಡಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಕೋರಲಾಗಿದೆ.

ಇದನ್ನೂ ಓದಿ: ನಿಮಗೆ ಬೇಕಾದವರಿಗೇ ಕಿಚ್ಚನ ಚಪ್ಪಾಳೆ ಕೊಡೋಕೆ ಆಗತ್ತಾ? ರಜತ್ ಕಿಶನ್ ಖಡಕ್ ಪ್ರಶ್ನೆ

ಹಿಂದಿನ ಪ್ರಕರಣ

ಕಲರ್ಸ್​​ ರಿಯಾಲಿಟಿ ಶೋ ಒಂದರಲ್ಲಿ ರಜತ್ ಹಾಗೂ ವಿನಯ್ ಗೌಡ ಭಾಗಿ ಆಗಿದ್ದರು. ಶೋ ಶೂಟಿಂಗ್ ಮುಗಿದ ಬಳಿಕ ಸ್ಟುಡಿಯೋ ಹೊರಗೆ ವಿನಯ್ ಹಾಗೂ ರಜತ್ ನಿಜವಾದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ಸಂಬಂಧ ಎಫ್​​ಐಆರ್ ದಾಖಲಿಸಿ, ಇಬ್ಬರನ್ನೂ ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಜಾಮೀನು ಪಡೆದು ಇಬ್ಬರೂ ಹೊರ ಬಂದಿದ್ದರು. ನಂತರ ಕೋರ್ಟ್​​ಗೆ ಸರಿಯಾಗಿ ಹಾಜರಾಗದ ಕಾರಣ ಅವರನ್ನು ಮತ್ತೆ ಬಂಧಿಸಲಾಯಿತು. ಈ ಪ್ರಕರಣದ ನೆನಪು ಮಾಸುವ ಮುನ್ನವೇ ಅವರಿಗೆ ಮತ್ತೊಂದು ತೊಂದರೆ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್ ಮುಖಂಡ ಬೇರೊಬ್ಬರ ಹೆಂಡ್ತಿ ಜತೆ ಸಿಕ್ಕಿಬಿದ್ದು ಏಟು ತಿಂದ ಪ್ರಕರಣ: ಸ್ಫೋಟಕ ವಿಚಾರ ಬಿಚ್ಚಿಟ್ಟ ಮಹಿಳೆಯ ಗಂಡ! – Kannada News | Congress Leader Caught With Married Woman in Chikkamagaluru: Husband Makes serious Allegations of Assault, Death Threat

ಮಹಿಳೆಯ ಪತಿ ಕೀರ್ತಿ ಹಾಗೂ ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್

ಚಿಕ್ಕಮಗಳೂರು, ಫೆಬ್ರವರಿ 5: ಕಾಂಗ್ರೆಸ್ (Congress) ಮುಖಂಡ ರಾಹುಲ್ ಷರೀಫ್ ರಾತ್ರಿ ವೇಳೆ ವಿವಾಹಿತ ‌ಮಹಿಳೆಯ ಜೊತೆ ಸಿಕ್ಕಿಬಿದ್ದು ಅಕ್ಕಪಕ್ಕದ ಮನೆಯವರಿಂದ ಏಟು ತಿಂದ ಘಟನೆ ಚಿಕ್ಕಮಗಳೂರು (Chikkamagaluru) ನಗರದ ಗಾಂಧಿನಗರದಲ್ಲಿ ಬುಧವಾರ ನಡೆದಿತ್ತು. ‘ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ’ ಎಂದು ಪ್ರಶ್ನಿಸಿ ಕೆಲ ಯುವಕರು ಕಾಂಗ್ರೆಸ್ ಮುಖಂಡನನ್ನು ಥಳಿಸಿದ್ದರು. ಆದರೆ, ರಾಹಿಲ್ ಸ್ನೇಹಿತ ಎಂದಿದ್ದ ಮಹಿಳೆ, ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಕೊಡಲು ಮನೆಗೆ ಬಂದಿದ್ದರು ಎಂದಿದ್ದಳು. ಆದರೀಗ ಆಕೆಯ ಪತಿ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದು, ಕಾಂಗ್ರೆಸ್ ಮುಖಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

‘ಇಬ್ಬರೂ ಬೆಡ್​ ರೂಂನಲ್ಲಿ ಇದ್ದರು’

‘ಕೈ’ ಮುಖಂಡನ ಜತೆಗಿದ್ದ ಮಹಿಳೆಯ ಗಂಡ ಕೀರ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲದಲ್ಲಿ ಸಂದೇಶ ಬಿಡುಗಡೆ ಮಾಡಿದ್ದು, ‘ಬುಧವಾರ ರಾತ್ರಿ 10.30ಕ್ಕೆ ಮನೆ ಓಪನ್ ಇತ್ತು. ನಾನು ಕತ್ತಲಲ್ಲಿ ನಿಂತು ನೋಡಿದೆ. ಬೈಕಿನಲ್ಲಿ ರಾಹಿಲ್ ಷರೀಫ್ ಬಂದು ಮನೆಯೊಳಗೆ ಹೋದ. ಬಳಿಕ ಬಾಗಿಲು ಹಾಕಿಕೊಂಡರು. ನಾನು ಆಕೆಯ ತಮ್ಮ, ತಾಯಿ, ಅಕ್ಕ ಸಂಬಂಧಿಕರಿಗೆ ಫೋನ್ ಮಾಡಿದೆ. ನಾನು ಹೇಳಿದರೆ ನೀವು ನಂಬಲ್ಲ, ಈಗ ಬನ್ನಿ ಎಂದು ಕರೆದೆ. ಒಳಗೆ ಹೋದಾಗ ಇಬ್ಬರೂ ಬೆಡ್​ರೂಂನಲ್ಲಿ ಇದ್ದರು’ ಎಂದು ತಿಳಿಸಿದ್ದಾರೆ.

ಕೀರ್ತಿ ಮಾತನಾಡಿರುವ ವಿಡಿಯೋ

ನಾವು ಒಳಗಡೆ ಹೋದಾಗ ಆತ ನನ್ನ ನೋಡಿ, ‘ಬಾಂಬೆಯಿಂದ ಈಗ ಬಂದೆ’ ಅಂದ. ಬಾಂಬೆಯಿಂದ ಬಂದರೆ ನಿಮ್ಮ ಮನೆಗೆ ಹೋಗು, ನಮ್ಮ ಮನೆಗೆ ಏಕೆ ಬಂದೆ ಎಂದು ಕೇಳಿದೆ. ಆಗ ನನ್ನ ಮೇಲೆ ಹಲ್ಲೆ ಮಾಡಿದ, ಮಚ್ಚು ತಂದು ನನ್ನ ಮೇಲೆ ಬೀಸಿದ್ದಾನೆ. ಆಮೇಲೆ ಕಾರು ಬಂತು ಹತ್ತಿಕೊಂಡು ಹೋದ. ನಾನು ಲವ್ ಮ್ಯಾರೇಜ್ ಆದೆ ಅಂತ ಹೆತ್ತವರೇ ದೂರ ಇಟ್ಟಿದ್ದಾರೆ, ನಾನು ರೂಂ ಮಾಡಿಕೊಂಡು ಇದ್ದೇನೆ. ರಾಹಿಲ್ ಷರೀಫ್ ಕೊಲೆ ಬೆದರಿಕೆ ಹಾಕಿದ್ದಾನೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನನ್ನು ನನ್ನ ಪಾಡಿಗೆ ಬಿಡಿ. ಅಪ್ಪ-ಅಮ್ಮನಿಗಾಗಿಯಾದರೂ ನಾನು ಬದುಕಬೇಕು’ ಎಂದು ಕೀರ್ತಿ ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು

ನಾವು ಗಂಡ-ಹೆಂಡ್ತಿ ದೂರವಾಗಿ 1 ವರ್ಷ ಆಯ್ತು, ಇಬ್ಬರು ಬೇರೆ ಇದ್ದೇವೆ. ಅದಕ್ಕೆ ಕಾರಣವೇ ರಾಹಿಲ್ ಷರೀಫ್. ಆತ ಹಾಗೂ ಆಕೆ ಇಬ್ಬರೂ ಸೇರಿ ನನಗೆ ಮೋಸ ಮಾಡಿದ್ದಾರೆ. ವರ್ಷದ ಹಿಂದೆಯೂ ಗಲಾಟೆಯಾಗಿತ್ತು, ನನ್ನ ಮೇಲೆ ಆಕೆ ಕಡೆಯಿಂದ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸಿದ್ದರು ಎಂದು ಕೀರ್ತಿ ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶರಣು ಸಲಗರ ಪತ್ನಿ ಬಗ್ಗೆ ಮಾತಾಡಿದ್ದಕ್ಕೆ ಶಿವಲಿಂಗೇಗೌಡ ವಿಷಾದ: ಇತ್ತ ಶಾಸಕರ ಅಮಾನತಿಗೆ JDS ಆಗ್ರಹ – Kannada News | Shivalingegowda Apologizes for Salagar Wife Remark; JDS Demands MLA Disqualification

ಬೆಂಗಳೂರು, ಫೆಬ್ರವರಿ 05: ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಮಂಡಿಸಿದ ನಿರ್ಣಯ ಪರ ವಿಧಾನ ಸಭೆಯಲ್ಲಿ ಮಾತನಾಡಲು ಮುಂದಾದಾಗ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಿಗ್ಗಾಮುಗ್ಗಾ ಬೈದಿದ್ದರು. ಈ ವಿಚಾರವಾಗಿ ಆಕ್ರೋಶ ಕೇಳಿಬಂದ ಹಿನ್ನೆಲೆ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ನಾನು ಸಲಗರ, ವೇದವ್ಯಾಸ​ ಕಾಮತ್ ಬಗ್ಗೆ ಮಾತ್ರ ಮಾತಾಡಿದ್ದು. ತಹಶೀಲ್ದಾರ್ ಆಗಿರುವ ಪತ್ನಿಯಿಂದಲೇ​ ಶಾಸಕ ಶರಣು ಸಲಗರ ಎಂಎಲ್ಎ ಆಗಿದ್ದಾರೆಂದು ನಮ್ಮ ಕಡೆಯವ್ರು ಹೇಳಿದ್ರು. ಹೆಣ್ಮಗು ವಿಚಾರವಾಗಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹೆಣ್ಣುಮಕ್ಕಳ ಬಗ್ಗೆ ಯಾವತ್ತೂ ನಾನು ಮಾತನಾಡಿಲ್ಲ ಎಂದಿದ್ದಾರೆ.

ನನ್ನನ್ನು ಟಾರ್ಗೆಟ್‌ ಮಾಡಿ‌ ಮಾತಾಡಿದ್ದು ಯಾಕೆ? ಅಧಿವೇಶನದಲ್ಲಿ ಬಿಜೆಪಿ ಶಾಸಕರು ಥೈ ತಕ ಅಂತಾ ಕುಣಿದಿದ್ದರು. ಅವರ ಆಡಿಯೋ ಹೋಗಲ್ಲ ಅಂತಾ ಬಾಯಿಗೆ ಬಂದಂತೆ ಕೂಗಿದ್ರು. ಕೊಬ್ಬರಿ ಕಳ್ಳ ಅಂದ್ರು, ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಕೊಟ್ಟೆ. ನಿಮ್ಮಪ್ಪನಿಗೆ ಕೊಟ್ಟಿದ್ದೀನಿ ತೆಗೆದುಕೊ ಅಂತಾ ಹೇಳಿದ್ದೆ. ಬಿಜೆಪಿಯವರಿಗೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾಕೇ ಬೇಕು? ಶಿವಲಿಂಗೇಗೌಡನನ್ನ ಕಳ್ಳ ಎಂದು ಪ್ರಚೋದಿಸಿದ್ದಕ್ಕೆ ಮಾತನಾಡಿದ್ದು. ನನ್ನನ್ನ ಕಳ್ಳ ಅಂದ್ರೆ ದೇವರೇ, ಬುದ್ಧಿ, ಗುರುಗಳೇ ಅಂತಾ ಹೇಳ್ಬೇಕಿತ್ತಾ? ಎಂದವರು ಪ್ರಶ್ನಿಸಿದ್ದಾರೆ. ನಾನು ಆರ್​ಎಸ್​ಎಸ್​ ಬಗ್ಗೆ ಮಾತಾಡಿಲ್ಲ, ಅದರ ಬಗ್ಗೆ ಗೌರವ ಇದೆ. RSSನವನಾಗಿ ಯಾಕೆ ಕುಣಿತಿದೆಯಾ ಅಂತಾ ಕಾಮತ್​ಗೆ ಕೇಳಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಶಾಸಕ ಶಿವಲಿಂಗೇಗೌಡ

ಜೆಡಿಎಸ್​​ ಆಕ್ರೋಶ

ಮತ್ತೊಂದೆಡೆ ಶಾಸಕ ಶಿವಲಿಂಗೇಗೌಡ ವಿರುದ್ಧ ಜೆಡಿಎಸ್​​ ಕಿಡಿ ಕಾರಿದ್ದು, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೇ ? ಪ್ರತಿಪಕ್ಷಗಳ ಶಾಸಕರನ್ನು ಅವಾಚ್ಯವಾಗಿ, ಕೆಟ್ಟ ಭಾಷೆಯಲ್ಲಿ ಬೈದು ಅಂಸವಿಧಾನಿಕವಾಗಿ ನಿಂದಿಸಿ, ಸಭಾಧ್ಯಕ್ಷರ ಎದುರೇ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದು ಅಕ್ಷಮ್ಯ ಅಪರಾಧ. ಓರ್ವ ಜನಪ್ರತಿನಿಧಿಯಾಗಿ ಸಂಸದೀಯ ಮೌಲ್ಯಗಳಿಗೆ ಅಪಚಾರ ಎಸಗಿರುವ ಹಾಗೂ ಸದನದ ಘನತೆಗೆ ಧಕ್ಕೆ ತಂದಿರುವ ಶಿವಲಿಂಗೇಗೌಡರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು. ಮುಂದಿನ ಎಲ್ಲಾ ಸದನದಿಂದ ಅಮಾನತುಗೊಳಿಸಿ, ಸದನದ ಕಾರ್ಯ ಕಲಾಪಗಳಿಂದ ದೂರವಿಡಬೇಕು ಎಂದು ಸ್ಪೀಕರ್​​ ಖಾದರ್​​ ಅವರನ್ನು ಜೆಡಿಎಸ್​​ ಆಗ್ರಹಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:39 pm, Thu, 5 February 26

Source link

ದತ್ತಪೀಠದಲ್ಲಿ ಹೊಸ ವಿವಾದ: ‘ಕಲಮೆ ತಯ್ಯಬಾ’ ಆಚರಣೆಗೆ ಹಿಂದೂ ಸಂಘಟನೆಗಳ ಆಕ್ರೋಶ – Kannada News | Chikmagaluru Datta Peeta: New Controversy Over Kalame Tayyaba Practice and Mujavar Rules

ಚಿಕ್ಕಮಗಳೂರು, ಫೆಬ್ರವರಿ 5: ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ದತ್ತಪೀಠವು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ದತ್ತಪೀಠದ ಗುಹೆಯೊಳಗೆ ಜನವರಿ 23ರಂದು ‘ಕಲಮೆ ತಯ್ಯಬಾ’ ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸುತ್ತದೆ ಎಂದು ಸಂಘಟನೆಗಳು ಹೇಳಿವೆ. ಹಿಂದೂಗಳಿಗೆ ಗುಹೆಯ ಮುಂಭಾಗ ಹೋಮ ಮಾಡಲು ಅವಕಾಶ ನೀಡದ ಜಿಲ್ಲಾಡಳಿತವು, ಹೊಸ ಆಚರಣೆಗೆ ಹೇಗೆ ಅವಕಾಶ ನೀಡಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ರಂಗನಾಥ್ ಪ್ರಶ್ನಿಸಿದ್ದಾರೆ. ದತ್ತಪೀಠದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿದ ನಂತರ ಇಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್​​ನಲ್ಲಿ ದತ್ತಪೀಠದ ಪ್ರಕರಣ ಇರುವ ಕಾರಣ, ಯಾವುದೇ ಹೊಸ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಆದರೆ, ಶಾಖಾದ್ರಿ ವಂಶಸ್ಥ ಸೈಯದ್ ಅಜ್ಮತ್ ಅವರು, ತಾವು ಯಾವುದೇ ಹೊಸ ಆಚರಣೆ ಮಾಡಿಲ್ಲ. ಜನವರಿ 25ರಂದು ಹಿಂದಿನ ಪದ್ಧತಿಯಂತೆ ದರ್ಶನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ, ‘ಕಲಮೆ ತಯ್ಯಬಾ’ ಆಚರಣೆ ಮೂಲಕ ಚಿಕ್ಕಮಗಳೂರಿನ ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ – Kannada News | An elderly woman makes a living selling bracelets on a Mumbai local train

ಮುಂಬೈ, ಫೆಬ್ರವರಿ 05: ಸ್ವಾಭಿಮಾನದ ಬದುಕೇ ಹಾಗೆ, ಯಾರ ಬಳಿ ಕೈಯೊಡ್ಡದೇ ಮೂರು ಹೊತ್ತಿನ ಊಟಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ಮಕ್ಕಳು ತಮ್ಮನ್ನು ನೋಡಬೇಕಾದ ಸಮಯದಲ್ಲಿ ತಾವೇ ದುಡಿದು ಜೀವನ ನಡೆಸುತ್ತಿರುವವರಲ್ಲಿ ಈ ವೃದ್ಧೆ (old woman) ಕೂಡ ಒಬ್ಬರು. ಹೌದು, 89 ವರ್ಷದ ಅಜ್ಜಿಯೊಬ್ಬರು ಮುಂಬೈನ (Mumbai) ಲೋಕಲ್ ರೈಲಿನಲ್ಲಿ ಬ್ರೇಸ್ಲೆಟ್‌ಗಳನ್ನು ಮಾರುತ್ತಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.

ಮೀತಾ ತುಷಿತ್ ಶಾ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ವೃದ್ಧೆಯೊಬ್ಬರು ಬ್ರೇಸ್ಲೆಟ್‌ಗಳನ್ನು ಮಾರುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಇದು ಪ್ರೋತ್ಸಾಹದಾಯಕ ಮತ್ತು ಸ್ಪೂರ್ತಿದಾಯಕವಲ್ಲವೇ?. ಇಂದು ಮಧ್ಯಾಹ್ನ ಮುಂಬೈ ಲೋಕಲ್ ರೈಲಿನಲ್ಲಿ ಹತ್ತುತ್ತಿದ್ದಾಗ, ನಾನು ಬಳೆಗಳನ್ನು ಮಾರುತ್ತಿದ್ದ 89 ವರ್ಷದ ವೃದ್ಧೆಯನ್ನು ಭೇಟಿಯಾದೆ.

ವೈರಲ್ ವಿಡಿಯೋ ಇಲ್ಲಿದೆ

ನಾನು ಎಲ್ಲವನ್ನೂ ಖರೀದಿಸಲು ಬಯಸಿದ್ದೆ, ಆದರೆ ಹಣದ ಕೊರತೆಯಿಂದಾಗಿ ಸಾಧ್ಯವಾಗಲಿಲ್ಲ. ತನ್ನ ಕುಟುಂಬದ ಜೀವನ ವೆಚ್ಚವನ್ನು ಭರಿಸಬೇಕು, ಅದಕ್ಕಾಗಿ ಈ ಕೆಲಸ ಎಂದು ಹೇಳಿದರು. ಇದು ನಿಜವಾಗಿಯೂ ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೀತಾ ತುಷಿತ್ ಶಾ ಈ ಅಜ್ಜಿಯನ್ನು ಮಾತನಾಡಿಸಿದ್ದು, ನನ್ನ ಹೆಸರು ಕಮಲಾಬೆನ್ ಮೆಹ್ತಾ. ನಾನು ನಲಸೋಪರಾದಲ್ಲಿ ನೆಲೆಸಿದ್ದೇನೆಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಈ ವಿಡಿಯೋ ಎರಡು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರರು, ಈ ವೃದ್ಧೆಯ ಸ್ವಾಭಿಮಾನದ ಬದುಕಿಗೆ ನನ್ನದೊಂದು ಸಲಾಂ ಎಂದರೆ, ಮತ್ತೊಬ್ಬರು, ಈ ವೃದ್ಧೆ ನಾನು ಜೂನಿಯರ್ ಕಾಲೇಜಿನಲ್ಲಿದ್ದಾಗ ರೈಲುಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ನನಗೆ 40 ವರ್ಷ. ಇವತ್ತಿಗೂ ಅವರಲ್ಲಿ ಉತ್ಸಾಹ ಹಾಗೆಯೇ ಇದೆ. ಅವರಿಗೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಎಲ್ಲಾ ಇದ್ದು ಕುಳಿತು ತಿನ್ನುವವರ ನಡುವೆ ಈ ವೃದ್ಧೆ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಇಬ್ಬರಿಲ್ಲದ ಮೊದಲ ಟಿ20 ವಿಶ್ವಕಪ್​ – Kannada News | First t20 world cup without two players

ಹೌದು, ಟಿ20 ವಿಶ್ವಕಪ್​ನ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಂಡ ಆಟಗಾರರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಒಬ್ಬರು. 2007ರ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಹಿಟ್​ಮ್ಯಾನ್, ಆ ಬಳಿಕ 2009, 2010, 2012, 2014, 2016, 2021, 2022 ಮತ್ತು 2024 ರ ಟಿ20 ವಿಶ್ವಕಪ್​ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದರು.

Source link

ಕಾರಿನ ಮಿರರ್​ ಮುರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್​​ ಸವಾರನ ದರ್ಪ: ವಿಡಿಯೋ ವೈರಲ್​​ – Kannada News | Bengaluru Road Rage: Biker Breaks Car Mirror and Abuses Driver

ನೆಲಮಂಗಲ, ಫೆಬ್ರವರಿ 05: ಬೆಂಗಳೂರಲ್ಲಿ ರೋಡ್​​ ರೇಜ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಸಣ್ಣಪುಟ್ಟ ಕಾರಣಗಳಿಗೂ ಸವಾರರು ರೌಡಿಸಂ ಪ್ರದರ್ಶಿಸುತ್ತಿದ್ದಾರೆ. ನೆಲಮಂಗಲದಿಂದ ಕೆಲಸಕ್ಕೆ ತೆರಳುತ್ತಿದ್ದ ಆದಿತ್ಯ ಎಂಬುವವರ ಕಾರಿಗೆ ಮಾದಾವರ ಜಂಕ್ಷನ್ ಬಳಿ ಬೈಕ್ ಸವಾರನೊಬ್ಬ ಅಡ್ಡ ಹಾಕಿ ಕಿರಿಕ್ ತೆಗೆದಿದ್ದಾನೆ. ಬೈಕ್ ಸವಾರನು ಕಾರಿನ ಮಿರರ್ ಅನ್ನು ಮುರಿದು, ಆದಿತ್ಯ ಅವರನ್ನು ನಿಂದಿಸಿ ಬೆದರಿಕೆಯನ್ನೂ ಹಾಕಿದ್ದಾನೆ. ಈ ಘಟನೆ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕನ ಮೊಬೈಲ್​​ನಲ್ಲಿ ಘಟನೆ ರೆಕಾರ್ಡ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Kalyana Sundareswarar Temple: ದಿನಕ್ಕೆ 5 ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ, ಈ ಅದ್ಭುತ ದೇವಸ್ಥಾನ ಎಲ್ಲಿದೆ ಗೊತ್ತಾ? – Kannada News | Color Changing Shiva Lingam: Nallur Kalyana Sundareswarar Temple’s Ancient Mystery in Tamil Nadu

ತಮಿಳುನಾಡು ರಾಜ್ಯವನ್ನು ಸಾಮಾನ್ಯವಾಗಿ “ದೇವಾಲಯಗಳ ನಾಡು” ಎಂದು ಕರೆಯಲಾಗುತ್ತದೆ. 33,000ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು, ಭವ್ಯವಾದ ಗೋಪುರಗಳು ಮತ್ತು ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಈ ರಾಜ್ಯವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಅಂತಹ ಅಪೂರ್ವ ಆಧ್ಯಾತ್ಮಿಕ ತಾಣಗಳಲ್ಲಿ ಒಂದು ತಂಜಾವೂರು ಜಿಲ್ಲೆಯ ನಲ್ಲೂರು ಗ್ರಾಮದಲ್ಲಿರುವ ಕಲ್ಯಾಣ ಸುಂದರೇಶ್ವರ ದೇವಾಲಯ. ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಈ ಪವಿತ್ರ ಕ್ಷೇತ್ರವು ತನ್ನ ಅದ್ಭುತ ಶಿವಲಿಂಗದ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ.

ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿ ಪೂಜಿಸಲ್ಪಡುವ ಶಿವಲಿಂಗ. ಭಕ್ತರ ನಂಬಿಕೆಯ ಪ್ರಕಾರ, ಈ ಶಿವಲಿಂಗವು ಒಂದೇ ದಿನದಲ್ಲಿ ಐದು ಬಾರಿ ಬಣ್ಣ ಬದಲಾಯಿಸುತ್ತದೆ. ಬೆಳಿಗ್ಗೆ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಲಿಂಗವು ಮಧ್ಯಾಹ್ನ ಬಿಳಿಯಾಗಿ, ಸಂಜೆ ಕೆಂಪಾಗಿ, ರಾತ್ರಿ ತಿಳಿ ನೀಲಿ ಬಣ್ಣಕ್ಕೆ, ಮಧ್ಯರಾತ್ರಿ ಹಸಿರಾಗಿ ರೂಪಾಂತರಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ದಿನದ ವಿವಿಧ ಸಮಯಗಳಲ್ಲಿ ವಿವಿಧ ಬಣ್ಣಗಳಲ್ಲಿ ಶಿವನ ದರ್ಶನ ಪಡೆಯಲು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಅಪರೂಪದ ದೃಶ್ಯವನ್ನು ನೋಡುವುದಕ್ಕಾಗಿ ತಮಿಳುನಾಡಿನಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಸಾವಿರಾರು ಜನರು ಇಲ್ಲಿ ಹರಿದು ಬರುತ್ತಾರೆ.

ಬಣ್ಣ ಬದಲಿಸುವ ಅದ್ಭುತ ಶಿವಲಿಂಗ

ಐತಿಹಾಸಿಕ ದಾಖಲೆಗಳ ಪ್ರಕಾರ, ಈ ದೇವಾಲಯವನ್ನು ಸುಮಾರು ಸಾವಿರ ವರ್ಷಗಳ ಹಿಂದೆ ಚೋಳ ಚಕ್ರವರ್ತಿ ರಾಜರಾಜ ಚೋಳನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಕಾಲಕ್ರಮೇಣ ಕೆಲವು ನವೀಕರಣಗಳು ನಡೆದಿದ್ದರೂ, ದೇವಾಲಯದ ಮೂಲ ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳು ಇಂದಿಗೂ ಹಾಗೆಯೇ ಉಳಿದಿವೆ. ಇಲ್ಲಿ ಶಿವನನ್ನು “ಕಲ್ಯಾಣ ಸುಂದರೇಶ್ವರ” ಎಂದು ಆರಾಧಿಸಲಾಗುತ್ತದೆ. ಶಿವನ ಜೊತೆಗೆ ಮುರುಗನ್ (ಕಾರ್ತಿಕೇಯ) ದೇವರಿಗೂ ವಿಶೇಷ ಮಹತ್ವವಿದೆ.

ದೇವಾಲಯದ ಇನ್ನೊಂದು ವಿಶೇಷವೆಂದರೆ ಎರಡು ಕಪ್ಪು ಕಲ್ಲಿನ ಶಿವಲಿಂಗಗಳು. ಮುಖ್ಯ ಗರ್ಭಗುಡಿಯಲ್ಲಿ ಇರುವ ಲಿಂಗವನ್ನು ಚಿನ್ನದ ಅಲಂಕಾರಗಳಿಂದ ಸಿಂಗರಿಸಲಾಗಿದೆ. ಮತ್ತೊಂದು ಶಿವಲಿಂಗವು ದೇವಾಲಯದ ಪ್ರವೇಶದ್ವಾರದ ಬಳಿ ಇದೆ. ಪ್ರತಿದಿನ ಬೆಳಿಗ್ಗೆ ಈ ಲಿಂಗಕ್ಕೆ ಶ್ರೀಗಂಧದ ಅಭಿಷೇಕ ಮಾಡಲಾಗುತ್ತದೆ. ಮಧ್ಯಾಹ್ನ ವೇಳೆಗೆ ಅದರ ಸುಗಂಧವೇ ಭಕ್ತರನ್ನು ಆಧ್ಯಾತ್ಮಿಕ ವಾತಾವರಣಕ್ಕೆ ಕರೆದೊಯ್ಯುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಪ್ರತಿದಿನ ಇಲ್ಲಿ ಐದು ಕಾಲ ಪೂಜೆಗಳು ನಡೆಯುತ್ತವೆ. ಪ್ರತಿ ಪೂಜೆಯಲ್ಲೂ ಶಿವನು ವಿಭಿನ್ನ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ಬೆಳಿಗ್ಗೆ ವೈದ್ಯನಾಥ ಸ್ವರೂಪದಲ್ಲಿ, ನಂದಿಯೊಂದಿಗೆ ಭಕ್ತರಿಗೆ ಕೃಪೆ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಶಿವಲಿಂಗದ ಬಣ್ಣ ಬದಲಾವಣೆಗೆ ಇನ್ನೂ ವೈಜ್ಞಾನಿಕ ಸ್ಪಷ್ಟನೆ ಸಿಕ್ಕಿಲ್ಲ. ಆದರೂ, ಈ ಘಟನೆ ಸ್ವಾಭಾವಿಕವಾಗಿ ನಡೆಯುತ್ತದೆ ಎಂಬ ಭಕ್ತರ ವಿಶ್ವಾಸವೇ ದೇವಾಲಯದ ಮಹಿಮೆ ಮತ್ತು ಆಧ್ಯಾತ್ಮಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಶಿವರಾತ್ರಿ, ಪ್ರದೋಷ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಈ ಕ್ಷೇತ್ರವು ಭಕ್ತರ ಸಂಚಾರದಿಂದ ಕಿಕ್ಕಿರಿದುಕೊಳ್ಳುತ್ತದೆ. ಪ್ರಾಚೀನ ಇತಿಹಾಸ, ಶಿಲ್ಪಕಲೆ, ಮತ್ತು ದೈವಿಕ ಅನುಭವ ಎಲ್ಲಾ ಸೇರಿ ಕಲ್ಯಾಣ ಸುಂದರೇಶ್ವರ ದೇವಾಲಯವನ್ನು ಒಂದು ವಿಶಿಷ್ಟ ತೀರ್ಥಕ್ಷೇತ್ರವನ್ನಾಗಿ ಮಾಡಿವೆ. ಭಕ್ತಿಭಾವದಿಂದ ಶಿವನ ದರ್ಶನ ಪಡೆಯಲು ಬಯಸುವವರಿಗೆ ಇದು ತಪ್ಪದೆ ಭೇಟಿ ನೀಡಬೇಕಾದ ಪವಿತ್ರ ಸ್ಥಳವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link