Category Archives: Blog

Your blog category

ನನ್ನ ಪ್ರಕಾರ.. ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ – Kannada News | Dhoni Backs Kohli, Rohit for 2027 ODI World Cup: Experience Key for Team India

ಪ್ರಸ್ತುತ 2026 ರ ಟಿ20 ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಇರಾದೆಯಲ್ಲಿದೆ. ಈ ವರ್ಷ ಟಿ20 ವಿಶ್ವಕಪ್ ನಡೆದರೆ, ಮುಂದಿನ ವರ್ಷ ಅಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. 2023 ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ಎಡವಿತ್ತು. ಆದರೆ 2027 ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಗುರಿಯಲ್ಲಿ ಟೀಂ ಇಂಡಿಯಾವಿದೆ. ಆದರೆ ಈ ಟೂರ್ನಿಗೆ ಭಾರತ ತಂಡ ಹೇಗಿರಲಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಅದರಲ್ಲೂ ಅನುಭವಿಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡದಲ್ಲಿರುತ್ತಾರಾ ಎಂಬುದು ಪ್ರಸ್ತುತ ಟೀಂ ಇಂಡಿಯಾ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಈ ಪ್ರಶ್ನೆಗೆ ಈಗಾಗಲೇ ಸಾಕಷ್ಟು ಅನುಭವಿಗಳು ಉತ್ತರ ನೀಡಿದ್ದು, ರೋಹಿತ್, ಕೊಹ್ಲಿ ಆಡುವುದು ಖಚಿತ ಎಂದಿದ್ದಾರೆ. ಆದರೆ ಬಿಸಿಸಿಐ ಮಾತ್ರ ಈ ಪ್ರಶ್ನೆಗೆ ಇದುವರೆಗೆ ಖಚಿತ ಉತ್ತರ ನೀಡಿಲ್ಲ. ಆದಾಗ್ಯೂ ಬಿಸಿಸಿಐ ಪ್ರತಿಯೊಂದು ಏಕದಿನ ಸರಣಿಯಲ್ಲಿ ಇವರಿಬ್ಬರಿಗೆ ಅವಕಾಶ ನೀಡುತ್ತಿರುವುದರನ್ನು ಗಮನಿಸಿದರೆ, ಇವರಿಬ್ಬರು ಆಡುವುದು ಪಕ್ಕಾ ಎನ್ನಬಹುದು. ಇದೀಗ ಈ ಪ್ರಶ್ನೆಗೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೂಡ ತಮ್ಮ ಉತ್ತರವನ್ನು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಧೋನಿ ಬಳಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027 ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಧೋನಿ, ‘ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027 ರ ಏಕದಿನ ವಿಶ್ವಕಪ್‌ನಲ್ಲಿ ಏಕೆ ಆಡಬಾರದು?’. ನನ್ನ ಅಭಿಪ್ರಾಯದಲ್ಲಿ, ಆಟಕ್ಕೆ ವಯಸ್ಸು ಮಾನದಂಡವಲ್ಲ. ಆದರೆ ಪ್ರದರ್ಶನ ಮತ್ತು ಫಿಟ್‌ನೆಸ್ ಮುಖ್ಯವಾಗುತ್ತದೆ. ಅವರು 30 ವರ್ಷಕ್ಕಿಂತ ಮೇಲ್ಪಟ್ಟವರು ಎಂದ ಮಾತ್ರಕ್ಕೆ ಅವರು ಆಡಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ದೊಡ್ಡ ಪಂದ್ಯಗಳಲ್ಲಿ ಅನುಭವ ಯಾವಾಗಲೂ ಮುಖ್ಯ. ಆದ್ದರಿಂದ ವಿರಾಟ್ ಮತ್ತು ರೋಹಿತ್ 2027 ರ ವಿಶ್ವಕಪ್ ಆಡುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಟವಾಡುತ್ತಾ ಆಟಿಕೆ ನುಂಗಿದ ಮಗು; ಎಂಡೋಸ್ಕೋಪಿ ಮೂಲಕ ಹೊರತೆಗೆದ ವೈದ್ಯರು – Kannada News | Baby boy swallows Hulk toy doctors remove it via endoscopy

ಅಹಮದಾಬಾದ್, ಫೆಬ್ರವರಿ 4: ಮಕ್ಕಳು ಸಾಮಾನ್ಯವಾಗಿ ಆಗಾಗ ತಮ್ಮ ಬಾಯಿಯಲ್ಲಿ ವಸ್ತುಗಳನ್ನು ಹಾಕುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಪೋಷಕರು ನಿರ್ಲಕ್ಷ್ಯ ಮಾಡಬಾರದು. ಇತ್ತೀಚಿನ ಒಂದು ಪ್ರಕರಣದಲ್ಲಿ ಗುಜರಾತ್‌ನ (Gujarat)  ಅಹಮದಾಬಾದ್‌ನ ಒಂದೂವರೆ ವರ್ಷದ ಬಾಲಕ ಆಕಸ್ಮಿಕವಾಗಿ ತನ್ನ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿದ್ದ. ವೈದ್ಯಕೀಯ ಚಿಕಿತ್ಸೆಗಾಗಿ ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಟಿಕೆ ಮಗುವಿನ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದು, ಅವನ ಒಳ ಅಂಗಗಳಿಗೆ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದರು. ವೈದ್ಯರು ಮೊದಲು ಎಕ್ಸ್-ರೇ ನಡೆಸಿದರು. ಇದಾದ ನಂತರ ಸವಾಲಿನ ಎಂಡೋಸ್ಕೋಪಿಕ್ ಮಾಡಲಾಯಿತು. ಇದು ಆಟಿಕೆಯನ್ನು ಯಶಸ್ವಿಯಾಗಿ ತೆಗೆದುಹಾಕಿತು ಮತ್ತು ಮಗುವನ್ನು ಅಪಾಯದಿಂದ ಹೊರತಂದಿತು. ಒಂದುವೇಳೆ ಸ್ವಲ್ಪ ತಡವಾಗಿದ್ದರೂ ಆಟಿಕೆ ಹೊಟ್ಟೆಯಿಂದ ಮತ್ತಷ್ಟು ದೂರ ಸರಿದು ಕರುಳಿನಲ್ಲಿ ಸಿಲುಕಿಕೊಳ್ಳಬಹುದಿತ್ತು. ಆ ಸಂದರ್ಭದಲ್ಲಿ ಕರುಳಿಗೆ ತೊಂದರೆಯಾಗುವ ಅಪಾಯವಿತ್ತು.

ಇದನ್ನೂ ಓದಿ: ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದ ಅಪ್ಪ!

ಮಗುವಿನ ತಾಯಿ ತನ್ನ ಮಗ ವಾಂತಿ ಮಾಡುತ್ತಿರುವುದನ್ನು ಕಂಡು ಮತ್ತು ಅವನ ಆಟಿಕೆಗಳಲ್ಲಿ ಒಂದು ಕಾಣೆಯಾಗಿರುವುದನ್ನು ನೋಡಿ ಆತಂಕಕ್ಕೊಳಗಾದರು. ಆಗ ಈ ಘಟನೆ ಬೆಳಕಿಗೆ ಬಂದಿತು. ಮಗು ತನ್ನ “ಹಸಿರು ಹಲ್ಕ್” ಆಟಿಕೆಯನ್ನು ನುಂಗಿದೆ ಎಂದು ಭಯಪಟ್ಟ ಕುಟುಂಬವು ಅವನನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿತು. ಆ ಆಟಿಕೆ ಒಂದು ಸಣ್ಣ ತುಂಡಾಗಿರಲಿಲ್ಲ. ಅದು ತೋಳುಗಳು, ಕಾಲುಗಳು ಮತ್ತು ತಲೆಯನ್ನು ಹೊಂದಿರುವ ಪೂರ್ಣ ಗಾತ್ರದ ಒಂದು ಸಣ್ಣ ಗೊಂಬೆಯಾಗಿತ್ತು.

ಇದನ್ನೂ ಓದಿ: ಮಹಿಳೆಯ ಕಾಲು ಕತ್ತರಿಸಿ 6.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ ಕಳ್ಳರು

ಬಹಳಷ್ಟು ಪ್ರಯತ್ನದ ನಂತರ, ವೈದ್ಯರು ಆಟಿಕೆಯ ತಲೆಯನ್ನು ಹಿಡಿದು ಹೊರತೆಗೆಯುವಲ್ಲಿ ಯಶಸ್ವಿಯಾದರು. ಆಟಿಕೆ ಕೆಳಗೆ ಜಾರಿದರೆ ಕರುಳು ಛಿದ್ರವಾಗುವ ಅಪಾಯವಿತ್ತು. ಆಗ ಇನ್ನೊಂದು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಮಗು ಈಗ ಸಂಪೂರ್ಣವಾಗಿ ಆರೋಗ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ? – Kannada News | Adavi Shesh avoid clash with Toxic and Dhurandhar 2

ಮಾರ್ಚ್ ತಿಂಗಳಲ್ಲಿ ಕೆಲವು ಬಲು ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲೂ ಯಶ್ ನಟನೆಯ ‘ಟಾಕ್ಸಿಕ್’ (Toxic) ಮತ್ತು ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಎರಡೂ ಮಾರ್ಚ್ 19ರಂದು ಒಂದೇ ದಿನ ಬಿಡುಗಡೆ ಆಗಲಿದ್ದು ಬೇರೆ ಸಿನಿಮಾಗಳೆಲ್ಲ ದೊಡ್ಡ ಸಿನಿಮಾಗಳಿಗೆ ದಾರಿ ಮಾಡಿ ಕೊಡುತ್ತಿವೆ. ಆದರೆ ಅದೇ ದಿನ ಅಂದರೆ ಮಾರ್ಚ್ 19ರಂದೇ ತೆಲುಗಿನ ನಟ ಅಡವಿ ಶೇಷ್ ನಟನೆಯ ‘ಡಕಾಯಿತ್’ ಸಿನಿಮಾ ಬಿಡುಗಡೆಗೆ ಅಣಿಯಾಗಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆಯನ್ನು ಅಚಾನಕ್ಕಾಗಿ ಮುಂದೂಡಲಾಗಿದೆ.

ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಘೋಷಿಸಿದಾಗ ನಾಯಕ ಅಡವಿ ಶೇಷ್ ಅವರನ್ನು ಅವರ ನಿರ್ಣಯದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ‘ಟಾಕ್ಸಿಕ್’ ಅಂಥಹಾ ದೊಡ್ಡ ಸಿನಿಮಾ ಬಿಡುಗಡೆ ಆಗುವ ದಿನದಂದೇ ಏಕೆ ನೀವು ಬಿಡುಗಡೆ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅಡವಿ ಶೇಷ್, ‘ನಮಗೆ ‘ಟಾಕ್ಸಿಕ್’ ಬಗ್ಗೆ ಭಯ ಇಲ್ಲ. ನಾನು ಅಂಡರ್​ಡಾಗ್ ಆಗಿಯೇ ಗೆದ್ದುಕೊಂಡು ಬಂದವನು. ಜನರಿಗೆ ಸರ್ಪ್ರೈಸ್ ನೀಡುತ್ತಲೇ ಬಂದಿದ್ದೇನೆ. ಅಲ್ಲದೆ, 2018ರ ನೆನಪು ನನಗೆ ಚೆನ್ನಾಗಿ ಇದೆ, ‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಶಾರುಖ್ ಖಾನ್ ನಟನೆಯ ‘ಜೀರೊ’ ಸಿನಿಮಾದ ಎದುರು ಬಿಡುಗಡೆ ಆಗಿತ್ತು, ಸಿನಿಮಾ ವ್ಯಾಕರಣವನ್ನೇ ಬದಲಾಯಿಸಿತು’ ಎಂದಿದ್ದಾರೆ. ಆ ಮೂಲಕ ತಾವು ‘ಟಾಕ್ಸಿಕ್’ ಎದುರು ಬಿಡುಗಡೆ ಮಾಡಿ ಸಿನಿಮಾ ಗೆಲ್ಲಿಸುತ್ತೇವೆ ಎಂದಿದ್ದರು.

ಇದನ್ನೂ ಓದಿ:‘ಧುರಂಧರ್ 2’ ಚಿತ್ರವನ್ನು‘ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ

ಆದರೆ ಈಗ ನಿಜ ಪರಿಸ್ಥಿತಿಯ ಅರಿವಾದಂತಿದ್ದು, ಸಿನಿಮಾದ ಬಿಡುಗಡೆಯನ್ನು ಮುಂದೂಡಿದ್ದಾರೆ. ಅಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್, ಪ್ರಕಾಶ್ ರೈ ನಟಿಸಿರುವ ‘ಡಕೈತ್’ ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆ ಆಗಲಿದೆ. ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿವೆ. ಅದರ ಐದು ದಿನಗಳ ಬಳಿಕ ಅಂದರೆ ಮಾರ್ಚ್ 26 ರಂದು ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗಲಿದೆ.

‘ಡಕೈತ್’ ಸಿನಿಮಾ ಭಿನ್ನ ಪ್ರೇಮಕತೆಯುಳ್ಳ ಆಕ್ಷನ್ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್ ಸಖತ್ ಗಮನ ಸೆಳೆದಿದೆ. ಸಿನಿಮಾವನ್ನು ಶನೀಲ್ ದಿಯೊ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ನಟ ಅಡವಿ ಶೇಷ್ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾದ ವಿರುದ್ಧ ಹೋಗದಂತೆ ಅಭಿಮಾನಿಗಳು ಎಚ್ಚರಿಕೆ ನೀಡಿದ್ದರು. ಕೊನೆಗೂ ಈಗ ಅಡವಿ ಶೇಷ್ ಸೂಕ್ತ ನಿರ್ಣಯವನ್ನೇ ತೆಗೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:52 pm, Wed, 4 February 26

Source link

IND vs SA: ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ; ಅಭಿಷೇಕ್- ಕಿಶನ್​ಗೆ ಓಪನಿಂಗ್ ಜವಾಬ್ದಾರಿ – Kannada News | India vs South Africa T20 WC 2026 Warm up: Ishan Kishan Opens, Sanju Samson’s Fate Hangs

2026 ರ ಟಿ20 ವಿಶ್ವಕಪ್‌ಗೆ ( T20 World Cup 2026) ಮುಂಚಿತವಾಗಿ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಅದರಂತೆ ಆತಿಥೇಯ ಟೀಂ ಇಂಡಿಯಾ ಕೂಡ ತನ್ನ ಮೊದಲ ಮತ್ತು ಏಕೈಕ ಅಭ್ಯಾಸ ಪಂದ್ಯವನ್ನು ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಆಡುತ್ತಿದೆ. ಈ ಪಂದ್ಯವು ನವಿ ಮುಂಬೈನ ಡಿವೈ ಸ್ಟೇಡಿಯಂ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಸಂಜು- ಕಿಶನ್ ಆರಂಭಿಕರು

ವಾಸ್ತವವಾಗಿ ಈ ಅಭ್ಯಾಸ ಪಂದ್ಯಕ್ಕೂ ಮುನ್ನ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಎಲ್ಲಾ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಅವರ ಫಾರ್ಮ್ ಅಷ್ಟೇನೂ ಉತ್ತಮವಾಗಿರಲಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಈ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆಗೆ ಇಶಾನ್ ಕಿಶನ್​ಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಈ ಜೋಡಿ ಈ ಪಂದ್ಯದಲ್ಲಿ ಅಬ್ಬರಿಸಿದರೆ, ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್​ನಲ್ಲಿ ಬೆಂಚ್ ಕಾಯುವುದು ಖಚಿತ.

ಟಿ20 ವಿಶ್ವಕಪ್‌ನಲ್ಲಿ ಅಧಿಕ ಬಾರಿ ಸೊನ್ನೆ ಸುತ್ತಿದ ಬ್ಯಾಟರ್​ ಯಾರು ಗೊತ್ತಾ?

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ.

ದಕ್ಷಿಣ ಆಫ್ರಿಕಾ ತಂಡ: ಐಡೆಮ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಯಾನ್ ರಿಕಲ್ಟನ್, ಡೇವಿಡ್ ಮಿಲ್ಲರ್, ಡೆವಾಲ್ಡ್ ಬ್ರೆವಿಸ್, ಜಾರ್ಜ್ ಲಿಂಡೆ, ಜೇಸನ್ ಸ್ಮಿತ್, ಮಾರ್ಕೊ ಯಾನ್ಸೆನ್, ಟ್ರಿಸ್ಟಾನ್ ಸ್ಟಬ್ಸ್, ಕಾರ್ಬಿನ್ ಬಾಷ್, ಅನ್ರಿಚ್ ನೋಕಿಯಾ, ಕಗಿಸೊ ರಬಾಡ, ಕೇಶವ್ ಮಹಾರಾಜ್, ಕ್ವೆನಾ ಮಾಫಕ ಮತ್ತು ಲುಂಗಿ ಎನ್‌ಗಿಡಿ.

Published On – 7:06 pm, Wed, 4 February 26

Source link

‘ಧುರಂಧರ್’ ಸಿನಿಮಾದ 4 ಕೋಟಿ ಟಿಕೆಟ್ ಮಾರಾಟ; ಶಾರುಖ್, ಆಮಿರ್ ದಾಖಲೆ ಉಡೀಸ್ – Kannada News | Ranveer Singh starrer Dhurandhar movie sells total 4 Cr Tickets in India

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಹಲವು ದಾಖಲೆಗಳನ್ನು ಮುರಿದಿದೆ. ಬಾಕ್ಸ್ ಆಫೀಸ್​​ನಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಚಿತ್ರದ ಒಟ್ಟು 4 ಕೋಟಿ ಟಿಕೆಟ್​​ಗಳು ಮಾರಾಟ ಆಗಿವೆ! ಈ ಮೂಲಕ ಆಮಿರ್ ಖಾನ್, ಶಾರುಖ್ ಖಾನ್ ಮುಂತಾದ ಸ್ಟಾರ್ ನಟರ ಸಿನಿಮಾಗಳು ಈ ಮೊದಲು ಮಾಡಿದ್ದ ದಾಖಲೆಯನ್ನು ‘ಧುರಂಧರ್’ ಮುರಿದು ಹಾಕಿದೆ. ಪ್ರೇಕ್ಷಕರಿಂದ ಈ ಸಿನಿಮಾಗೆ ಫುಲ್ ಮಾರ್ಕ್ಸ್ ಸಿಕ್ಕಿದೆ.

ಕಳೆದ ವರ್ಷ ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಗಿತ್ತು. ಆದಿತ್ಯ ಧಾರ್ ನಿರ್ದೇಶನ ಮಾಡಿದ ಈ ಸಿನಿಮಾ ಮೊದಲ ದಿನ ಗಳಿಸಿದ್ದು 30 ಕೋಟಿ ರೂಪಾಯಿ. ನಂತರ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿತು. ಆದ್ದರಿಂದ ಜನರು ಮುಗಿಬಿದ್ದು ಸಿನಿಮಾ ನೋಡಿದರು. ಬರೋಬ್ಬರಿ 4 ಕೋಟಿ ಟಿಕೆಟ್​​ಗ್ಳು ಮಾರಾಟ ಆಗಿವೆ ಎಂಬ ಮಾಹಿತಿ ಸಿಕ್ಕಿದೆ.

ಈ ಮೊದಲು ಶಾರುಖ್ ಖಾನ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ 3.5 ಕೋಟಿ ಟಿಕೆಟ್​ಗಳು ಮಾರಾಟ ಆಗಿದ್ದವು. ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾದ 3.7 ಕೋಟಿ ಟಿಕೆಟ್​​​ಳು ಮಾರಾಟ ಆಗಿದ್ದವು. ‘ಪಿಕೆ’ ಸಿನಿಮಾದ 3.5 ಕೋಟಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಆ ಎಲ್ಲ ಸಿನಿಮಾಗಳನ್ನು ‘ಧುರಂಧರ್’ ಹಿಂದಿಕ್ಕಿದೆ.

ಅಂದಹಾಗೆ, ಈವರೆಗೂ ಭಾರತೀಯ ಚಿತ್ರರಂಗದಲ್ಲಿ 4 ಕೋಟಿಗೂ ಅಧಿಕ ಟಿಕೆಟ್​​ಗಳನ್ನು ಮಾರಾಟ ಮಾಡಿರುವುದು 19 ಸಿನಿಮಾಗಳು ಮಾತ್ರ. ‘ಬಾಹುಬಲಿ 2’, ‘ಶೋಲೆ’, ‘ಮೊಘಲ್ ಎ ಆಜಂ’, ‘ಮದರ್ ಇಂಡಿಯಾ’ ಸಿನಿಮಾಗಳು ಅಂದಾಜು ತಲಾ 10 ಕೋಟಿ ಟಿಕೆಟ್ ಮಾರಾಟ ಮಾಡಿದ್ದವು! ಆ ದಾಖಲೆಯನ್ನು ಮುರಿಯಲು ‘ಧುರಂದರ್’ ಸಿನಿಮಾಗೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ವೈರಲ್ ಆಗಿದೆ ಫೋಟೋ

‘ಧುರಂಧರ್’ ಸಿನಿಮಾದ ಭಾರಿ ಯಶಸ್ಸಿನಿಂದಾಗಿ ಇದರ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮಾರ್ಚ್ 19ರಂದು ‘ಧುರಂದರ್ 2’ ರಿಲೀಸ್ ಆಗಲಿದೆ. ‘ಧುರಂಧರ್’ ಮಾಡಿದ ದಾಖಲೆಯಲ್ಲಿ ‘ಧುರಂಧರ್ 2’ ಸಿನಿಮಾ ಮುರಿಯುತ್ತಾ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್, ವಿಡಿಯೋ ನೋಡಿ – Kannada News | Full traffic jam In Bengaluru Hosur Road For national highway collapsed near Attibele

ಆನೇಕಲ್ (ಬೆಂಗಳೂರು) (ಫೆಬ್ರವರಿ.04): ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾದ ಬೆಂಗಳೂರು-ಹೊಸೂರು (Bengaluru Hosur Road) ರಾಷ್ಟ್ರೀಯ ಹೆದ್ದಾರಿ ದಿಢೀರ್ ಕುಸಿದುಬಿದ್ದಿದ್ದು, ಫುಲ್ ಟ್ರಾಫಿಕ್ ಜಾಮ್  (traffic jam) ಉಂಟಾಗಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಹಳೇ ಚಂದಾಪುರದ ಬಳಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದ್ದು, ಚಂದಾಪುರದಿಂದ ಕರ್ನಾಟಕದ ಗಡಿ ಅತ್ತಿಬೆಲೆವರೆಗೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ರೋಗಿಗಳು, ಶಾಲಾ ಮಕ್ಕಳು ಸಕಾಲಕ್ಕೆ ತಲುಪಲು ಪರದಾಡಿದರು.

ಹಳೇ ಚಂದಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ಇದೇ ವೇಳೆ ಸಮೀಪದ ಲೇಔಟ್‌ಗಳಿಂದ ಹರಿದು ಬರುತ್ತಿರುವ ಸ್ಯಾನಿಟರಿ ನೀರು ರಸ್ತೆಯ ಅಡಿಭಾಗಕ್ಕೆ ನುಗ್ಗಿದ್ದು, ಮಣ್ಣು ಸಡಿಲಗೊಂಡು ಬೃಹತ್ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup: ಸೆಮಿಫೈನಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ – Kannada News | U19 World Cup Semifinal: Vaibhav Suryavanshi’s Blazing Fifty Powers India’s 311 Run Chase

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ (India U19 vs Afghanistan U19) ನಡುವೆ 2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ (U19 World Cup Semifinal) ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಭಾರತಕ್ಕೆ 311 ರನ್‌ಗಳ ಬೃಹತ್ ಗುರಿ ನೀಡಿದೆ. ಇದೀಗ ಈ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಜೋಡಿ ಅಬ್ಬರದ ಪ್ರಾರಂಭ ನೀಡಿದೆ. ಆರಂಭಿಕರಾದ ಆರನ್ ಜಾರ್ಜ್​ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನೀಡಿದರು. ವೈಭವ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆದಾಗ್ಯೂ ಔಟಾಗುವುದಕ್ಕೂ ಮುನ್ನ ವೈಭವ್ ತಂಡಕ್ಕೆ ತನ್ನಿಂದ ಬೇಕಾಗಿದ್ದುದ್ದನ್ನು ನೀಡಿ ಪೆವಿಲಿಯನ್​ಗೆ ಮರಳಿದರು.

24 ಎಸೆತಗಳಲ್ಲಿ ಅರ್ಧಶತಕ

ಬ್ಯಾಟಿಂಗ್‌ ಆರಂಭಿಸಿದ ಜಾರ್ಜ್​ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆ ಬಳಿಕ ಸ್ಟ್ರೈಕ್​ಗೆ ಬಂದ ವೈಭವ್ ಕೂಡ ಎಂದಿನಂತೆ ಎದುರಿಸಿದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಅಫ್ಘಾನಿಸ್ತಾನದ ಬೌಲರ್‌ಗಳನ್ನು ಹೈರಾಣಾಗಿಸಿದರು. ಇದರ ಪರಿಣಾಮವಾಗಿ ವೈಭವ್ ಕೇವಲ 24 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಅರ್ಧಶತದ ಗಡಿ ಮುಟ್ಟಿದರು. 216.66 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವೈಭವ್ ತಂಡಕ್ಕೆ ಬೇಕಾದ ಆರಂಭ ಒದಗಿಸಿಕೊಟ್ಟರು. ಆದಾಗ್ಯೂ, ಇನ್ನಿಂಗ್ಸ್‌ನ ಆರಂಭದಲ್ಲಿಯೇ ವೈಭವ್​ಗೆ ಜೀವದಾನ ಸಿಕ್ಕಿತು. ಆಫ್ಘನ್ ತಂಡ ನೀಡಿದ ಜೀವದಾನವನ್ನು ವೈಭವ್ ಸೂರ್ಯವಂಶಿ ಸಂಪೂರ್ಣವಾಗಿ ಬಳಸಿಕೊಂಡರು.

33 ಎಸೆತಗಳಲ್ಲಿ 68 ರನ್

ಆದರೆ ಅರ್ಧಶತಕ ಬಾರಿಸಿದ ನಂತರ ವೈಭವ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 33 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 68 ರನ್ ಕಲೆಹಾಕಿ ವೈಭವ್ ಔಟಾದರು. ಔಟಾಗುವುದಕ್ಕೂ ಮುನ್ನ ಸೂರ್ಯವಂಶಿ, ಆರನ್ ಜಾರ್ಜ್ ಅವರೊಂದಿಗೆ 90 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ಗಮನಾರ್ಹ ವಿಷಯವೆಂದರೆ ಈ ಇಬ್ಬರು ಆಟಗಾರರು ಕೇವಲ 9.3 ಓವರ್‌ಗಳಲ್ಲಿ ತಂಡವನ್ನು 90 ರನ್‌ಗಳಿಗೆ ಕೊಂಡೊಯ್ದರು.

ಸತತ 2 ಜೀವದಾನ ಸಿಕ್ಕರೂ ಪಾಕ್ ವಿರುದ್ಧ ಮುಗ್ಗರಿಸಿದ ವೈಭವ್ ಸೂರ್ಯವಂಶಿ

ಭಾರತಕ್ಕೆ 311 ರನ್​ಗಳ ಗುರಿ

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ಅಫ್ಘಾನಿಸ್ತಾನದ ಪರ ಉಜೈರುಲ್ಲಾ ನಿಯಾಜೈ ಮತ್ತು ಫೈಸಲ್ ಶಿನೋಜಾಡಾ ಶತಕದ ಇನ್ನಿಂಗ್ಸ್ ಆಡಿದರು. ನಿಯಾಜೈ 86 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ 101 ರನ್ ಬಾರಿಸಿದರೆ, ಫೈಸಲ್ 93 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 110 ರನ್ ಕಲೆಹಾಕಿದರು. ಭಾರತದ ಪರ ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:21 pm, Wed, 4 February 26

Source link

ಚಿಕ್ಕಪ್ಪನಿಗಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದೂಡಿದರೇ ರಾಮ್ ಚರಣ್? – Kannada News | Ram Charan starrer Peddi movie release date announce

ರಾಮ್ ಚರಣ್ (Ram Charan) ಇತ್ತೀಚೆಗಷ್ಟೆ ಮತ್ತೆ ತಂದೆ ಆಗಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಂದೆ ಆಗಿದ್ದ ರಾಮ್ ಚರಣ್ ಈಗ ಮತ್ತೊಮ್ಮೆ ಅವಳಿ ಮಕ್ಕಳಿಗೆ ತಂದೆ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರಾಮ್ ಚರಣ್​ ಪತ್ನಿ ಉಪಾಸನಾಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದೆ. ಅದೇ ಖುಷಿಯಲ್ಲಿ ಇದೀಗ ರಾಮ್ ಚರಣ್ ಹೊಸ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ.

‘ಆರ್​​ಆರ್​​ಆರ್’ ಸಿನಿಮಾದ ಬಳಿಕ ಸತತ ಎರಡು ದೊಡ್ಡ ಸೋಲು ಕಂಡ ರಾಮ್ ಚರಣ್ ಅವರ ಎಲ್ಲ ನಿರೀಕ್ಷೆಗಳು ಅವರ ಹೊಸ ಸಿನಿಮಾ ‘ಪೆದ್ದಿ’ಯ ಮೇಲಿದೆ. ಇದೀಗ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ‘ಪೆದ್ದಿ’ ಸಿನಿಮಾವು ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಮಾರ್ಚ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಮಾರ್ಚ್ 10ರಂದು ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಪವನ್ ಕಲ್ಯಾಣ್ ಇಂದಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 10ಕ್ಕೆ ಬಿಡುಗಡೆ ಆಗಲಿಕ್ಕಿತ್ತು. ಆದರೆ ಈಗ ದಿನಾಂಕ ಬದಲಿಸಿ, ಮಾರ್ಚ್ 26ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಮಾರ್ಚ್ 19 ರಂದು ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ತುಸು ತಡ ಮಾಡಲಾಗಿದೆ. ಇದರ ಪರಿಣಾಮವಾಗಿ ‘ಪೆದ್ದಿ’ ಸಿನಿಮಾದ ಬಿಡುಗಡೆಯನ್ನು ಇನ್ನಷ್ಟು ತಡ ಮಾಡಲಾಗಿದ್ದು, ಏಪ್ರಿಲ್ 30ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:ಅಭಿಮಾನಿಗಳು ಗದ್ದಲ ಮಾಡಿದರೂ ಸಿಹಿ ಕೊಟ್ಟು ಕಳುಹಿಸಿದ ರಾಮ್ ಚರಣ್

‘ಪೆದ್ದಿ’ ಸಿನಿಮಾವು ಹಳ್ಳಿಯ ಕ್ರಿಕೆಟ್ ಆಟಗಾರನೊಬ್ಬನ ಕತೆಯನ್ನು ಒಳಗೊಂಡಿದೆ. ಈ ರೂರಲ್ ಆಕ್ಷನ್ ಡ್ರಾಮಾ ಸಿನಿಮಾಕ್ಕೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿ. ಸಿನಿಮಾದ ವಿಶೇಷ ಮತ್ತು ಪವರ್​​ಫುಲ್ ಪಾತ್ರದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ‘ಪೆದ್ದಿ’ ಸಿನಿಮಾವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು ಸೂಪರ್ ಹಿಟ್ ಸಿನಿಮಾ ‘ಉಪ್ಪೆನ’ ನಿರ್ದೇಶಿಸಿದ್ದರು. ‘ಪುಷ್ಪ’ ಖ್ಯಾತಿಯ ಸುಕುಮಾರ್ ಅವರ ಅಪ್ಪಟ ಶಿಷ್ಯನಾಗಿರುವ ಬುಚ್ಚಿ ಬಾಬು ಸನಾ, ‘ಪೆದ್ದಿ’ ಸಿನಿಮಾವನ್ನು ಅದ್ಧೂರಿಯಾಗಿ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ.

‘ಪೆದ್ದಿ’ ಸಿನಿಮಾವನ್ನು ವೃದ್ಧಿ ಸಿನಿಮಾಸ್ ಮತ್ತು ಐವಿವೈ ಎಂಟರ್ಟೈನ್​​ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆ ಆಗಿರುವ ‘ಚಿಕಿರಿ-ಚಿಕಿರಿ’ ಹಾಡು ಸಖತ್ ಹಿಟ್ ಆಗಿದೆ. ಸಿನಿಮಾನಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ, ತೆಲುಗಿನ ಖ್ಯಾತ ನಟ ಜಗಪತಿ ಬಾಬು ಸಹ ನಟಿಸಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ಅವರುಗಳು ವಿತರಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Bengaluru Metro: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು ಹೆಚ್ಚಳ? – Kannada News | Karnataka Governmnet Green Signal to bengaluru Namma Metro ticket Price Hike, here Is How Much Jump

ಬೆಂಗಳೂರು, (ಫೆಬ್ರವರಿ 04): ಸಿಲಿಕಾನ್ ಸಿಟಿ ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೊನ್ನೆ ಅಷ್ಟೇ ಬೋರ್ಡ್​​ ಮೀಟಿಂಗ್​ನಲ್ಲಿ ಶೇಕಡಾ 5ರಷ್ಟು ಮೆಟ್ರೋ ದರ ಏರಿಕೆ ಒಪ್ಪಿಗೆ ಬಳಿಕ ಬಿಎಂಆರ್​ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಗೆ ಇಂದು (ಫೆಬ್ರವರಿ 04) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.  ಹೀಗಾಗಿ ಇದೇ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ನಮ್ಮ ಮೆಟ್ರೋ ಟಿಕೆಟ್​ ದರ ಹೆಚ್ಚಳವಾಗಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಎಂಆರ್​​​ಸಿಎಲ್ ಅಧಿಕೃತ ಆದೇಶ ಹೊರಡಿಸಲಿದೆ.

ಕಳೆದ ವರ್ಷ ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಏರ್ಪಟ್ಟಿತ್ತು, ರಾಜ್ಯ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದು ಎಂದು ಬಿಜೆಪಿ ನಾಯಕರು ಹೇಳಿದ್ರೆ, ಇತ್ತ ಕಾಂಗ್ರೆಸ್​​ನವರು ಕೇಂದ್ರವೇ ಹೆಚ್ಚಳ ಮಾಡಿದೆ ಎಂದು ಆರೋಪ ಪ್ರತ್ಯಾರೋಪ ಮಾಡಿದ್ದರು. ಆದ್ರೆ, ಈ ಬಾರಿ ಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: Namma Metro: ವಿರೋಧದ ನಡುವೆಯು BMRCL ಬೋರ್ಡ್​ನಿಂದ ಮೆಟ್ರೋ ದರ ಏರಿಕೆಗೆ ಅಸ್ತು; ಹೆಚ್ಚಳ ಎಷ್ಟು?

ಎಲ್ಲಿಗೆ ಎಷ್ಟು ಟಿಕೆಟ್ ದರ ಹೆಚ್ಚಳ?

ಮೆಟ್ರೋದಲ್ಲಿ ಮೆಜೆಸ್ಟಿಕ್​ನಿಂದ ವೈಟ್​ಫೀಲ್ಡ್​ಗೆ ಪ್ರಸ್ತುತ 80 ರೂ. ಇದ್ದು, ಶೇ. 5% ಹೆಚ್ಚಳ ಬಳಿಕ 80 ರೂ.ನಿಂದ 84ರೂ. ಆಗುತ್ತೆ. 10 ರೂ. ಇರುವ ಟಿಕೆಟ್ ದರ ಶೇ 5ರಷ್ಟು ಹೆಚ್ಚಳವಾದರೆ 11 ರೂ. ಆಗಲಿದೆ. 90 ರೂ. ಇರುವ ಟಿಕೆಟ್ ದರ 95 ರೂ. ಆಗಲಿದೆ. ಮೆಜೆಸ್ಟಿಕ್​ನಿಂದ ಬೊಮ್ಮಸಂದ್ರಕ್ಕೆ 80 ರೂ.ನಿಂದ 84 ರೂ.ಗೆ ಹೆಚ್ಚಳ. ಮೆಜೆಸ್ಟಿಕ್​ನಿಂದ ಚಲ್ಲಘಟ್ಟಕ್ಕೆ 60 ರೂ. ಟು 63 ರೂ.

ಕಳೆದ ವರ್ಷ ಫೆಬ್ರವರಿ 9ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಎಂಆರ್​ಸಿಎಲ್​​, ಶೇಕಡಾ 71.5ಕ್ಕೆ ದರ ಇಳಿಕೆ ಮಾಡಿತ್ತು. ಆದರೂ ಸಹ ನಮ್ಮ ಮೆಟ್ರೋ ಈಗ ಭಾರತದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಎನ್ನುವ ಬಿರುದುಕೊಂಡಿದ್ದು, ಇದೀಗ ಮತ್ತೆ ಶೇ.5ರಷ್ಟು ಟಿಕೆಟ್ ದರ ಹೆಚ್ಚಳವಾಗಿದ್ದರಿಂದ ಪ್ರಯಾಣಿಕರ ಮತ್ತಷ್ಟು ಹೊರೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುಂಭ ರಾಶಿಯಲ್ಲಿ ಶುಕ್ರ–ರಾಹು ಸಂಯೋಗ.. ಯಾರಿಗೆಲ್ಲ ಏನೆಲ್ಲ ಲಾಭ? – Kannada News | Venus rahu conjunction in aquarius feb 6 mar 2 zodiac impact and predictions

ಕುಂಭ ರಾಶಿಯಲ್ಲಿ ಶುಕ್ರ ಮತ್ತು ರಾಹುಗಳ ಸಂಯೋಗವು ಜ್ಯೋತಿಷ್ಯದಲ್ಲಿ ಬಹಳ ವಿಶಿಷ್ಟವಾದ ಯೋಗ. ಈ ಯೋಗ ಫೆಬ್ರವರಿ 6ರಿಂದ ಮಾರ್ಚ್ 02 ವರೆಗೆ ಇರಲಿದೆ. ಕುಂಭವು ಶನಿಯ ರಾಶಿಯಾಗಿ ವಾಯು ತತ್ತ್ವದ ಸೂಚಿಸುತ್ತಿದ್ದು ಸಮಾಜ, ಸಮೂಹ ಚಿಂತನೆ, ವಿಜ್ಞಾನ, ಹೊಸ ಆಲೋಚನೆಗಳು ಹಾಗೂ ಭವಿಷ್ಯದ ದಿಕ್ಕನ್ನು ತೋರಿಸುತ್ತದೆ.

ಶುಕ್ರನು ಭೋಗ, ಪ್ರೀತಿ, ಸೌಂದರ್ಯ, ಹಣಕಾಸು ಮತ್ತು ಸಂಬಂಧಗಳ ಕಾರಕ. ರಾಹು ಆಸೆ, ಮೋಹ, ಮಿತಿಲಂಘನೆ, ವಿದೇಶಿ ಸಂಸ್ಕೃತಿ ಮತ್ತು ಅಸಾಧಾರಣತೆಯನ್ನು ಪ್ರತಿನಿಧಿಸುತ್ತಾನೆ. ಈ ಇಬ್ಬರೂ ಕುಂಭದಲ್ಲಿ ಸೇರಿದಾಗ ಮಾನವನ ಆಸೆ ಮತ್ತು ಬುದ್ಧಿ ಹೊಸ ದಿಕ್ಕಿನಲ್ಲಿ ಸಾಗುವ ಪ್ರವೃತ್ತಿ ಹೆಚ್ಚುತ್ತದೆ.

ಈ ಯೋಗದ ಪ್ರಮುಖ ಲಕ್ಷಣವೆಂದರೆ ಸಾಂಪ್ರದಾಯಿಕ ಮೌಲ್ಯಗಳನ್ನು ಮೀರಿ ಆಧುನಿಕ, ವಿಭಿನ್ನ ಹಾಗೂ ಪ್ರಯೋಗಾತ್ಮಕ ಬದುಕಿನತ್ತ ಒಲವು. ಪ್ರೀತಿ ಮತ್ತು ಹಣ ಎರಡೂ ಕ್ಷೇತ್ರಗಳಲ್ಲಿ ಅತಿಯಾದ ಆಕರ್ಷಣೆ, ನಿರೀಕ್ಷೆ ಹಾಗೂ ಅಸಮಾಧಾನ ಒಟ್ಟಿಗೆ ಕಾಣಿಸಿಕೊಳ್ಳಬಹುದು.

ಕುಂಭ ರಾಶಿ:

ಈ ಸಂಯೋಗವು ಸ್ವರಾಶಿಯಲ್ಲಿ ನಡೆಯುವುದರಿಂದ ಪರಿಣಾಮ ಅತ್ಯಂತ ತೀವ್ರ. ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳುವ ಅವಕಾಶ, ಹೊಸ ಸ್ನೇಹ ವಲಯ, ವಿಭಿನ್ನ ಪ್ರೇಮ ಅನುಭವಗಳು ಸಾಧ್ಯ. ಆದರೆ ರಾಹುವಿನ ಪ್ರಭಾವದಿಂದ ಸಂಬಂಧಗಳಲ್ಲಿ ನೈತಿಕ ಮಿತಿ ತಪ್ಪಿದರೆ ಅಪವಾದ, ಗೊಂದಲ ಹಾಗೂ ಮನಸ್ಸಿನ ಅಶಾಂತಿ ಎದುರಾಗಬಹುದು. ಹಣದ ಹರಿವು ಹೆಚ್ಚಿದರೂ ಅತಿಯಾದ ಭೋಗಾಸಕ್ತಿ ತೊಂದರೆ ಕೊಡಬಹುದು.

ಮಿಥುನ ಮತ್ತು ತುಲಾ ರಾಶಿ

ಶುಕ್ರನಿಗೆ ಸ್ವಾಭಾವಿಕವಾಗಿ ಅನುಕೂಲವಾದ ರಾಶಿಗಳಾದ್ದರಿಂದ ಈ ಯೋಗವು ಕ್ರಿಯೇಟಿವಿಟಿ, ಕಲೆ, ಮೀಡಿಯಾ, ಬರವಣಿಗೆ, ವ್ಯಾಪಾರ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿ ಲಾಭ ನೀಡುತ್ತದೆ. ಪ್ರೇಮ ಜೀವನದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಆದರೆ ಸಂಬಂಧಗಳು ದೀರ್ಘಕಾಲ ಉಳಿದುಕೊಳ್ಳಲು ಪರಸ್ಪರ ನಂಬಿಕೆ ಅಗತ್ಯ. ವಿದೇಶಿ ಸಂಪರ್ಕಗಳು, ಹೊಸ ಯೋಜನೆಗಳು ಫಲಕೊಡಬಹುದು.

ಮೇಷ ಮತ್ತು ಸಿಂಹ ರಾಶಿ

ಸ್ನೇಹ ವಲಯ ವಿಸ್ತಾರವಾಗುತ್ತದೆ. ಹೊಸ ಜನರ ಪರಿಚಯದಿಂದ ಅವಕಾಶಗಳು ಬರುತ್ತವೆ. ಆದರೆ ದಾಂಪತ್ಯ ಅಥವಾ ಪ್ರೇಮದಲ್ಲಿ ಅನುಮಾನ, ಅಹಂಕಾರ ಹಾಗೂ ಅತಿಯಾದ ನಿರೀಕ್ಷೆ ಸಮಸ್ಯೆ ತರಬಹುದು. ಮಾತು ಮತ್ತು ವರ್ತನೆಯಲ್ಲಿ ಸಂಯಮ ಇರಬೇಕು.

ವೃಷಭ ಮತ್ತು ಮಕರ ರಾಶಿ

ಹಣಕಾಸು ಮತ್ತು ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಏರುಪೇರು. ಹೊಸ ಆದಾಯದ ಮೂಲಗಳು ಕಾಣಿಸಿಕೊಳ್ಳುವುದು. ಆದರೆ ಅತಿಯಾದ ಖರ್ಚು, ಲಕ್ಸುರಿ ಜೀವನದತ್ತ ಒಲವು ಸಾಲ ಅಥವಾ ಒತ್ತಡಕ್ಕೆ ಕಾರಣವಾಗಬಹುದು. ಹಿರಿಯರೊಂದಿಗೆ ಅಥವಾ ಅಧಿಕಾರಿಗಳೊಂದಿಗೆ ವಿವಾದ ಸಂಭವಿಸುವ ಸಾಧ್ಯತೆ ಇದೆ.

ಕರ್ಕಾಟಕ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿ

ಈ ರಾಶಿಗಳಿಗೆ ಈ ಯೋಗ ಸ್ವಲ್ಪ ಎಚ್ಚರಿಕೆ ಸೂಚಿಸುವುದು. ಮನಸ್ಸಿನ ಅಸ್ಥಿರತೆ, ಗುಪ್ತ ಚಿಂತೆ, ಸಂಬಂಧಗಳಲ್ಲಿ ಗೊಂದಲ, ತಪ್ಪು ನಿರ್ಧಾರಗಳು ಸಂಭವಿಸಬಹುದು. ಕೆಲವರಿಗೆ ಮೋಸ, ತಪ್ಪು ಆಕರ್ಷಣೆ ಅಥವಾ ಗುಪ್ತ ಶತ್ರುಗಳಿಂದ ತೊಂದರೆ ಎದುರಾಗಬಹುದು. ಆರೋಗ್ಯದ ಕಡೆಗೂ ಗಮನ ಅಗತ್ಯ.

ಧನು ರಾಶಿ

ಹೊಸ ಕಲಿಕೆ, ತಂತ್ರಜ್ಞಾನ, ದೂರ ಪ್ರಯಾಣ, ವಿದೇಶಿ ಅವಕಾಶಗಳಿಂದ ಲಾಭ ಸಾಧ್ಯ. ಆದರೆ ಗುರುತತ್ವ ದುರ್ಬಲವಾದರೆ ದಾರಿತಪ್ಪುವ ನಿರ್ಧಾರಗಳ ಸಾಧ್ಯತೆಯೂ ಇದೆ. ಮಾರ್ಗದರ್ಶನ ಮತ್ತು ಶಿಸ್ತು ಇದ್ದರೆ ಈ ಯೋಗ ಶುಭಕಾರಕವಾಗುತ್ತದೆ.

ಕುಂಭದಲ್ಲಿನ ಶುಕ್ರ–ರಾಹು ಸಂಯೋಗವು ಸಂಪೂರ್ಣವಾಗಿ ಶುಭ ಅಥವಾ ಸಂಪೂರ್ಣ ಅಶುಭ ಎಂದು ನಿರ್ಧರಿಸಲಾಗದು. ಇದು ಆಸೆಗಳನ್ನು ಹೆಚ್ಚಿಸುವ ಯೋಗ. ವಿವೇಕ, ನೈತಿಕತೆ ಮತ್ತು ಶಿಸ್ತಿನೊಂದಿಗೆ ಬಳಸಿಕೊಂಡರೆ ಈ ಯೋಗ ಸಮಾಜದಲ್ಲಿ ಹೆಸರು, ಹಣ ಮತ್ತು ಆಕರ್ಷಣೆ ನೀಡುತ್ತದೆ. ಅತಿರೇಕಕ್ಕೆ ಹೋಗಿದರೆ ಅದೇ ಯೋಗ ಗೊಂದಲ, ಅಪವಾದ ಮತ್ತು ಮನಶ್ಶಾಂತಿಯ ಕೊರತೆಗೆ ಕಾರಣವಾಗುತ್ತದೆ.

– ಲೋಹಿತ ಹೆಬ್ಬಾರ್

Source link