Category Archives: Blog

Your blog category

ಸಿನಿಮಾಗಳಲ್ಲಿ ವಿಲನ್, ನಿಜ ಜೀವನದಲ್ಲಿ ‘ಹೀರೋ’ ಈ ನಟ – Kannada News

ಸಿನಿಮಾನಲ್ಲಿ (Cinema) ದೊಡ್ಡ ಹೆಸರು ಮಾಡಿದ ಸ್ಟಾರ್ ನಟರುಗಳು ತಮ್ಮ ಅಭಿಮಾನಿ ಸಂಘಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಸಾಮಾನ್ಯವಾಗಿ ವರ್ಷದ ಒಂದು ದಿನ ರಕ್ತದಾನ, ಅನ್ನದಾನ ಇಂಥಹಾ ಕೆಲಸಗಳನ್ನು ಮಾಡಿಸುತ್ತಾರೆ ಅದರ ಚಿತ್ರಗಳನ್ನು ಹಂಚಿಕೊಂಡು ಭರ್ಜರಿ ಪ್ರಚಾರ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ನಟ ಆ ಸ್ಟಾರ್ ಹೀರೋಗಳಿಗಿಂತಲೂ ಬಹಳ ವಿಭಿನ್ನ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ನಟ ಮಾಡಿರುವ ಕೆಲಸದಿಂದ ನಿಜ ಬದುಕಿನಲ್ಲಿ ಹೀರೋ ಎನಿಸಿಕೊಂಡಿದ್ದಾರೆ. ಅವರೇ ಖ್ಯಾತ ನಟ ಸಯ್ಯಾಜಿ ಶಿಂಧೆ.

ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಸುಮಾರು 15 ವರ್ಷಗಳಿಗೂ ಹೆಚ್ಚು ಸಮಯದಿಂದ ನಟಿಸುತ್ತಾ ಬಂದಿರುವ ಸಯ್ಯಾಜಿ ಶಿಂಧೆ. ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿಯೇ ಹೆಚ್ಚು ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಇವರು ಅಪ್ಪಟ ಹೀರೋ. ಇತರೆ ನಟರು, ರಕ್ತದಾನ, ಅನ್ನದಾನ ಮಾಡುತ್ತಾ ಪ್ರಚಾರ ಪಡೆಯುತ್ತಿದ್ದರೆ, ಸಯ್ಯಾಜಿ ಶಿಂಧೆ, 6.50 ಲಕ್ಷ ಸಸಿಗಳನ್ನು ನೆಟ್ಟು ದೊಡ್ಡ ಕಾಡನ್ನೇ ಸೃಷ್ಟಿ ಮಾಡಿದ್ದಾರೆ. ಅದೂ ತಮ್ಮ ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು.

ಸಯ್ಯಾಜಿ ಶಿಂಧೆ ಅವರ ತಾಯಿ ನಿಧನ ಹೊಂದುವಾಗ ಅವರ ಹೆಸರಲ್ಲಿ ಅರಣ್ಯ ಬೆಳೆಸುವುದಾಗಿ ಅವರಿಗೆ ಮಾತು ಕೊಟ್ಟಿದ್ದರಂತೆ. ‘ನಿಮ್ಮ ಹೆಸರಲ್ಲಿ 5000 ದೇಸೀಯ ಗಿಡಗಳನ್ನು ನೆಡುತ್ತೇನೆ’ ಎಂದಿದ್ದರಂತೆ. ಆದರೆ ಸಯ್ಯಾಜಿ ಅವರು 5000 ಗಿಡಗಳಿಗೆ ತಮ್ಮ ಪರಿಸರ ಪ್ರೇಮವನ್ನು ಸೀಮಿತಗೊಳಿಸಲಿಲ್ಲ ಬದಲಿಗೆ ಮಹಾರಾಷ್ಟ್ರದ 29 ಸ್ಥಳಗಳಲ್ಲಿ 6.50 ಲಕ್ಷ ಗಿಡಗಳನ್ನು ಈ ವರೆಗೆ ನೆಡಿಸಿದ್ದಾರೆ. ತಮ್ಮ ಸ್ವಂತ ಖರ್ಚಿನ ಮೂಲಕ. ಸಯ್ಯಾಜಿ ಶಿಂಧೆ ಅವರ ಈ ಸಾಹಸದಿಂದಾಗಿ ಅವರ ಕಾಡು ಇದೀಗ ಮಹಾರಾಷ್ಟ್ರದ ದೊಡ್ಡ ಮಾನವ ನಿರ್ಮಿತ ಅರಣ್ಯ ಎನಿಸಿಕೊಂಡಿದೆ. ಇದಕ್ಕೆ ‘ಸಹ್ಯಾದ್ರಿ ದೇವರಾಯ್’ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್ ‘ರಾಕಾ’ ಸಿನಿಮಾ ಸೇರಿದ ಮತ್ತೊಬ್ಬ ನಟಿ: ಯಾರೀಕೆ ಫೆಮಿನಾ ಜಾರ್ಜ್?

ಸಹ್ಯಾದ್ರಿ ದೇವರಾಯ್ ಎಂಬುದು ಕೇವಲ ಸಯ್ಯಾಜಿ ಶಿಂಧೆ ಅವರ ‘ಹವ್ಯಾಸ’ವಾಗಿ ಉಳಿದಿಲ್ಲ ಈಗ ಅದು ಇಡೀ ಮಹಾರಾಷ್ಟ್ರದಲ್ಲಿ ಪರಿಸರ ಚಳವಳಿಯಾಗಿ ಮಾರ್ಪಟ್ಟಿದೆ. ‘ಸಹ್ಯಾದ್ರಿ ದೇವರಾಯ್’ ಹೆಸರಿನಡಿ ಸಾವಿರಾರು ಪರಿಸರ ಪ್ರೇಮಿಗಳನ್ನು ನಟ ಸಯ್ಯಾಜಿ ಶಿಂಧೆ ಒಗ್ಗೂಡಿಸಿದ್ದು, ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಿಗೆ ಹೋಗಿ ಇವರು ದೇಶೀಯ ತಳಿಯ ಗಿಡಗಳನ್ನು ನೆಡುವುದು ಮಾತ್ರವೇ ಅಲ್ಲದೆ, ಅವುಗಳ ಉಳಿವಿಗೆ ಅವಿರತ ಶ್ರಮಿಸುತ್ತಿದ್ದಾರೆ. ಸ್ಥಳೀಯ ಗ್ರಾಮವಾಸಿಗಳ ನೆರವು ಪಡೆದುಕೊಂಡು ಗಿಡಗಳಿಗೆ ನೀರು ನೀಡುವುದು, ಅವುಗಳನ್ನು ಇತರೆ ಪ್ರಾಣಿಗಳಿಂದ ಕಾಪಾಡುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಈ ವರೆಗೆ ಸುಮಾರು 6.50 ಲಕ್ಷ ಗಿಡಗಳನ್ನು ‘ಸಹ್ಯಾದ್ರಿ ದೇವರಾಯ್’ ಚಳವಳಿ ಅಡಿಯಲ್ಲಿ ನಟ ಸಯ್ಯಾಜಿ ಶಿಂಧೆ ಹಾಗೂ ತಂಡ ನೆಟ್ಟಿದೆ.

ಸಯ್ಯಾಜಿ ಶಿಂಧೆ, ಮೂಲತಃ ಮಹಾರಾಷ್ಟ್ರದವರಾದರೂ ದಕ್ಷಿಣದ ಸಿನಿಮಾಗಳಲ್ಲಿ ಅತಿ ಹೆಚ್ಚು ನಟಿಸಿದ್ದಾರೆ. ಕನ್ನಡದ ‘ವೀರ ಕನ್ನಡಿಗ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಯ್ಯಾಜಿ, ತೆಲುಗಿನಲ್ಲಿ ಬಹುತೇಕ ಎಲ್ಲ ಸ್ಟಾರ್ ನಟ, ನಿರ್ದೇಶಕರುಗಳ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಹಿಂದಿ, ಮರಾಠಿ, ಭೋಜ್​ಪುರಿ, ಬೆಂಗಾಲಿ, ಮಲಯಾಳಂ, ತಮಿಳು, ಇಂಗ್ಲೀಷ್ ಇನ್ನೂ ಕೆಲ ಭಾಷೆಗಳ ಸಿನಿಮಾಗಳಲ್ಲಿ ಸಯ್ಯಾಜಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕ ವಿಶ್ವನಾಥ್​​ ಬಿಟ್ಟು ಸುದ್ದಿಗೋಷ್ಠಿ ನಡೆಸಲು ಬಂದ ಸಂಸದ ಸುಧಾಕರ್​​ಗೆ ಸ್ವಪಕ್ಷಿಗರಿಂದಲೇ ತರಾಟೆ – Kannada News

ವಿಶ್ವನಾಥ್​​ vs ಸುಧಾಕರ್​​Image Credit source: wikipedia

ದೇವನಹಳ್ಳಿ, ಜೂನ್​​ 02: ಕಳೆದ ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್​​ಗಾಗಿ ಬಿಜೆಪಿ (BJP) ಶಾಸಕ ಎಸ್​​.ಆರ್​​. ವಿಶ್ವನಾಥ್​​ ಮತ್ತು ಸಂಸದ ಡಾ.ಸುಧಾಕರ್​​ ನಡುವೆ ಶುರುವಾದ ಸಮರಕ್ಕೆ ಇನ್ನೂ ಬ್ರೇಕ್​​ ಬಿದ್ಧಂತೆ ಕಾಣುತ್ತಿಲ್ಲ. ಸ್ವಪಕ್ಷದ ಶಾಸಕರನ್ನು ಬಿಟ್ಟು ಒಬ್ಬರೇ ಸುದ್ದಿಗೋಷ್ಠಿ ನಡೆಸಲು ಬಂದಿದ್ದ ಸಂಸದರನ್ನು ಸ್ವಪಕ್ಷದ ಕಾರ್ಯಕರ್ತರೇ ತರಾಟೆಗೆ ತೆಗೆದುಕೊಂಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ. ಕಾರ್ಯಕರ್ತರ ನಡುವಿನ ವಾಗ್ವಾದದ ಕಾರಣ ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮುಖ್ಯಾಂಶಗಳು

  • ಶಾಸಕರ ಬಿಟ್ಟು ಸುದ್ದಿಗೋಷ್ಠಿ ನಡೆಸಲು ಬಂದ ಸಂದರ ಮೇಲೆ ಗರಂ
  • ಸಂಸದ ಡಾ.ಕೆ.ಸುಧಾಕರ್​​ಗೆ ಸ್ವಪಕ್ಷ ಕಾರ್ಯಕರ್ತರಿಂದಲೇ ತರಾಟೆ
  • ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ

ಯಲಹಂಕ ಬಿಜೆಪಿ ಶಾಸಕರಾಗಿರುವ ಎಸ್​​.ಆರ್​​. ವಿಶ್ವನಾಥ್​​ ಅವರನ್ನು ಆಹ್ವಾನಿಸದೆ ಸಂಸದ ಸುಧಾಕರ್​​ ಸುದ್ದಿಗೋಷ್ಠಿ ನಡೆಸಲು ಬಂದಿರೋದು ಎಂಎಲ್​​ಎ ಬೆಂಬಲಿಗರನ್ನು ಕೆರಳಿಸಿದೆ. ಹೀಗಾಗಿ ಯಲಹಂಕದ ಮಾಧ್ಯಮ ಕೇಂದ್ರಕ್ಕೆ ಬಂದ ವಿಶ್ವನಾಥ್​​ ಬೆಂಬಲಿಗರು ಸಂಸದರ ನಡೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಶಾಸಕರು ಮತ್ತು ಸಂಸದರ ಬೆಂಬಲಿಗರ ನಡುವೆ ವಾಗ್ವಾದ ತಾರಕಕ್ಕೇರಿದ್ದುಕೂಡಲೇ ಸ್ಥಳಕ್ಕೆ ಆಗಮಿಸಿದ ಯಲಹಂಕ ಪೋಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದರೂ ಸಂಸದರು ಮಾತ್ರ ಮೌನವಾಗಿದ್ದರು ಎನ್ನಲಾಗಿದ್ದು, ಬಿಜೆಪಿ ಶಾಸಕ ಮತ್ತು ಸಂಸದರ ನಡುವಿನ ಶೀತನ ಸಮರ ಈಗ ಮತ್ತೊಮ್ಮೆ ಸ್ಫೋಟಗೊಂಡಿದೆ.

ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್; ರಾಜ್ಯಪಾಲರ ಮೊರೆ ಹೋದ ಬಿಜೆಪಿ ನಿಯೋಗ

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್​​ಗೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಂದಿನ ಮಾಜಿ ಶಾಸಕರಾಗಿದ್ದ ಡಾ.ಕೆ. ಸುಧಾಕರ್​​ ಮತ್ತು ಶಾಸಕ ಎಸ್​​.ಆರ್​​. ವಿಶ್ವನಾಥ್​​ ಪುತ್ರನ ನಡುವೆ ತೀವ್ರ ಸ್ಪರ್ಧೆ ನಡೆದು ಅಂತಿಮವಾಗಿ ಸುಧಾಕರ್​​ ಅವರೇ ಟಿಕೆಟ್​​ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಯನ್ನೂ ಗೆದ್ದು ಸಂಸದರಾಗಿದ್ದರು. ಅಂದಿನಿಂದ ಸುಧಾಕರ್​​ ಮತ್ತು ವಿಶ್ವನಾಥ್​​ ನಡುವೆ ಮುನಿಸು ಆರಂಭವಾಗಿದ್ದು, ಯಲಹಂಕದಲ್ಲಿ ವಿಶ್ವನಾಥ್ ವಿರುದ್ಧ ಬಮುಲ್ ನಿರ್ದೇಶಕ ಕಡತನಮಲೆ ಸತೀಶ್​​ರನ್ನ ಪರ್ಯಾಯ ನಾಯಕನಾಗಿ ಬೆಳೆಸಲು ಹೊರಟಿರುವ ಆರೋಪವೂ ಸುಧಾಕರ್​​ ವಿರುದ್ಧ ಕೇಳಿಬಂದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್​ರಸಾದ್ ಷಣ್ಮುಗಂ – Kannada News

ನವದೆಹಲಿ, ಜೂನ್ 2: ಒಂದು ಕಾಲದಲ್ಲಿ ಭಾರತವನ್ನು ಕೇವಲ ಜಾಗತಿಕ ಕಂಪನಿಗಳಿಗೆ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಬೆಂಬಲ ನೀಡುವ (Support Centre) ದೇಶ ಎಂದು ನೋಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಭಾರತೀಯ ಕಂಪನಿಗಳು ಜಾಗತಿಕ ಮಟ್ಟದ ವಿಶ್ವದರ್ಜೆಯ ಸಾಫ್ಟ್‌ವೇರ್ ಉತ್ಪನ್ನಗಳನ್ನು (World-Class Products) ಸ್ವತಃ ಭಾರತದಲ್ಲೇ ನಿರ್ಮಿಸುತ್ತಿವೆ ಎಂದು ಕೆಜಿಐಎಸ್ಎಲ್ ಸಿಇಒ ಪ್ರಸಾದ್ ಷಣ್ಮುಖಂ (Prassadh Shanmugam) ತಿಳಿಸಿದ್ದಾರೆ. ಬಿಸಿನೆಸ್ ಟುಡೇ (Business Today) ಪತ್ರಿಕೆಯ ‘ಹಿಡನ್ ಜೆಮ್ಸ್ ಆಫ್ ಇಂಡಿಯನ್ ಬಿಸಿನೆಸ್’ (Hidden Gems of Indian Business) ವಿಶೇಷ ಸಂವಾದದಲ್ಲಿ ಭಾಗವಹಿಸಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಭಾರತೀಯ ಐಟಿ ರಂಗವು ಕೇವಲ ವಿದೇಶಿ ಕಂಪನಿಗಳ ಆದೇಶದಂತೆ ಕೆಲಸ ಮಾಡುವ ಮತ್ತು ಗ್ರಾಹಕ ಸೇವೆ (Customer Support) ನೀಡುವ ಕೇಂದ್ರವಾಗಿತ್ತು. ಆದರೆ ಈಗ ಭಾರತೀಯ ಉದ್ಯಮಗಳು ಕೇವಲ ಸೇವೆ ನೀಡುವುದಕ್ಕೆ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಬೌದ್ಧಿಕ ಆಸ್ತಿ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳನ್ನು ಸೃಷ್ಟಿಸುತ್ತಿವೆ ಎಂದು ಷಣ್ಮುಗಂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪ್ಲಂಬರ್, ಎಲೆಕ್ಟ್ರಿಶಿಯನ್​ಗೂ ತಪ್ಪೋದಿಲ್ಲವಂತೆ ಎಐ ಕಂಟಕ; ಕೃತಕ ಬುದ್ಧಿಮತ್ತೆ ಪ್ಲಂಬಿಂಗ್ ಕೆಲಸ ಹೇಗೆ ಮಾಡುತ್ತೆ?

ಷೇರು ಮಾರುಕಟ್ಟೆಯಲ್ಲಿ ‘ಡಾಲ್ಫಿನ್’ ಸಂಚಲನ

KGiSL ಕಂಪನಿಯು ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ (BFSI) ವಲಯದ ಮೇಲೆ ಹೆಚ್ಚು ಗಮನ ಹರಿಸಿದೆ. ಕಂಪನಿಯ ಪ್ರಮುಖ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಆದ ‘ಡಾಲ್ಫಿನ್’ (Dolphin), ಭಾರತದ ಇಡೀ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ದೊಡ್ಡ ಕ್ರಾಂತಿ ಮಾಡಿದೆ. ಪ್ರಸ್ತುತ ಭಾರತದ ಮುಂಚೂಣಿ ಷೇರು ಮಾರುಕಟ್ಟೆಗಳಾದ ಎನ್‌ಎಸ್‌ಇ (NSE) ಮತ್ತು ಬಿಎಸ್‌ಇ (BSE) ನಲ್ಲಿ ನಡೆಯುವ ಒಟ್ಟು ವ್ಯವಹಾರದ ಬರೋಬ್ಬರಿ ಶೇ. 35 ರಷ್ಟು ಪ್ರಮಾಣವನ್ನು (ವಲ್ಯೂಮ್) ಅನ್ನು ಈ ಒಂದೇ ಪ್ಲಾಟ್‌ಫಾರ್ಮ್ ನಿರ್ವಹಿಸುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

ಕಂಪನಿಗಳ ತಾಂತ್ರಿಕ ಆವಿಷ್ಕಾರಗಳು ಯಾವಾಗಲೂ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಇರಬೇಕು. ಕೇವಲ ತಂತ್ರಜ್ಞಾನದ ಪ್ರದರ್ಶನಕ್ಕಾಗಿ ಆವಿಷ್ಕಾರ ಮಾಡುವುದಕ್ಕಿಂತ, ಅದು ಗ್ರಾಹಕರ ಬಿಜಿನೆಸ್ ಸಮಸ್ಯೆಗಳನ್ನು ಪರಿಹರಿಸುವಂತಿರಬೇಕು ಎಂದು ಪ್ರಸಾದ್ ಒತ್ತು ನೀಡಿದ್ದಾರೆ.

ಇದನ್ನೂ ಓದಿ: ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ

ಮಧ್ಯಮ ಕ್ರಮಾಂಕದ ಕಂಪನಿಗಳತ್ತ ಹೂಡಿಕೆದಾರರ ಒಲವು

ಇದೇ ಸಂವಾದದಲ್ಲಿ ಭಾಗವಹಿಸಿದ್ದ ಇವೈ ಇಂಡಿಯಾ (EY India) ಸಂಸ್ಥೆಯ ಕಾರ್ತಿಕ್ ಹೆಚ್ ಅವರು ಮಾತನಾಡುತ್ತಾ, ಜಾಗತಿಕ ಹೂಡಿಕೆದಾರರು ಈಗ ಮಧ್ಯಮ ಗಾತ್ರದ (Mid-market) ತಂತ್ರಜ್ಞಾನ ಕಂಪನಿಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಕಂಪನಿಗಳಲ್ಲಿ ಹೂಡಿಕೆಯ ರಿಸ್ಕ್ ಕಡಿಮೆ ಇರುತ್ತದೆ ಮತ್ತು ಇವು ವೇಗವಾಗಿ ದೊಡ್ಡ ಮಟ್ಟಕ್ಕೆ ಬೆಳೆಯುವ (Scalable) ಸಾಮರ್ಥ್ಯ ಹೊಂದಿರುತ್ತವೆ ಎಂದು ಹೇಳಿದ್ದಾರೆ.

ಒಟ್ಟಾರೆ, ಭಾರತೀಯ ಐಟಿ ರಂಗವು ‘ಸರ್ವಿಸ್’ ಮಾತ್ರವೇ ಇದ್ದ ಮಾಡಲ್​ನಿಂದ ‘ಉತ್ಪನ್ನ’ (Product-based) ಮಾಡಲ್ ಕಡೆಗೆ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದೆ ಎಂಬುದಕ್ಕೆ KGiSL ನಂತಹ ಕಂಪನಿಗಳ ಬೆಳವಣಿಗೆಯೇ ಸಾಕ್ಷಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಿಂದ ಮಂತ್ರಾಲಯಕ್ಕೆ ನೇರ ಸಂಪರ್ಕ; ಜೂನ್ ಪೂರ್ತಿ ಓಡಲಿದೆ 24 ಬೋಗಿಗಳ ಬೃಹತ್ ವಿಶೇಷ ರೈಲು! – Kannada News

ಮಂಗಳೂರು, ಜೂ.2: ಜೂನ್ ತಿಂಗಳ ಪ್ರವಾಸ ಮತ್ತು ಉದ್ಯೋಗದ ನಿಮಿತ್ತ ರೈಲುಗಳಲ್ಲಿ ಉಂಟಾಗಿರುವ ಭಾರಿ ಜರ್ನಿ ರಶ್ ಅನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹೆಚ್ಚುವರಿ ಸೀಟುಗಳ ಬೇಡಿಕೆಯನ್ನು ಪೂರೈಸಲು 4 ರೌಂಡ್ ಟ್ರಿಪ್‌ಗಳ (ನಾಲ್ಕು ವಾರಗಳ ಕಾಲ) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಪ್ರಕಟಿಸಲಾಗಿದೆ. ಈ ರೈಲು ತೆಲಂಗಾಣ, ಕರ್ನಾಟಕ ಹಾಗೂ ಕೇರಳ ಮೂರೂ ರಾಜ್ಯಗಳ ಪ್ರಯಾಣಿಕರಿಗೆ ನೆರವಾಗಲಿದೆ. ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 07097 ಹೈದರಾಬಾದ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ಜೂನ್ 3 ರಿಂದ ಜೂನ್ 24 ರವರೆಗೆ ಪ್ರತಿ ಬುಧವಾರದಂದು ಸಂಚಾರಿಸಲಿದೆ. ಈ ರೈಲು ಹೈದರಾಬಾದ್‌ನಿಂದ ಮುಂಜಾನೆ 4:20 ಕ್ಕೆ ಹೊರಟು, ಮರುದಿನ ಬೆಳಗ್ಗೆ 9:30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಮತ್ತೆ ಪ್ರಯಾಣಕ್ಕಾಗಿ, ರೈಲು ಸಂಖ್ಯೆ 07098 ಮಂಗಳೂರು ಸೆಂಟ್ರಲ್-ಹೈದರಾಬಾದ್ ವಿಶೇಷ ಎಕ್ಸ್‌ಪ್ರೆಸ್ ಜೂನ್ 4 ರಿಂದ ಜೂನ್ 25 ರವರೆಗೆ ಪ್ರತಿ ಗುರುವಾರ ಸಂಜೆ 8:00 ಗಂಟೆಗೆ ಮಂಗಳೂರಿನಿಂದ ಹೊರಟು, ಶನಿವಾರ ಮುಂಜಾನೆ 4:00 ಗಂಟೆಗೆ ಹೈದರಾಬಾದ್ ತಲುಪಲಿದೆ.

ಪ್ರಯಾಣಿಕರ ಬಜೆಟ್ ಮತ್ತು ಆದ್ಯತೆಗಳಿಗೆ ತಕ್ಕಂತೆ ಈ ವಿಶೇಷ ರೈಲಿನಲ್ಲಿ ಒಟ್ಟು 24 ಬೋಗಿಗಳನ್ನು (Coaches) ಅಳವಡಿಸಲಾಗಿದೆ. ಈ ಬಗ್ಗೆ ಇಲ್ಲಿದೆ ನೋಡಿ.

3 ಎಸಿ 2-ಟೈರ್ ಕೋಚ್‌ಗಳು (AC 2-tier)

5 ಎಸಿ 3-ಟೈರ್ ಕೋಚ್‌ಗಳು (AC 3-tier)

10 ಸ್ಲೀಪರ್ ಕ್ಲಾಸ್ ಕೋಚ್‌ಗಳು (Sleeper Class)

4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು (General Second-class)

2 ಲಗೇಜ್ ಹಾಗೂ ಬ್ರೇಕ್ ವ್ಯಾನ್‌ಗಳು ಇರಲಿವೆ.

ಇದನ್ನೂ ಓದಿ: ಕರಾವಳಿ ಜನರ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ!: ಜೂನ್ 3ರ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್ ರನ್ ದಿಢೀರ್ ಕ್ಯಾನ್ಸಲ್!

ಪ್ರಮುಖ ನಿಲ್ದಾಣಗಳು :

ಈ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಸೇರಿದಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಯೆಲಹಂಕ ಮತ್ತು ಕೃಷ್ಣರಾಜಪುರಂ (ಕೆಆರ್ ಪುರಂ), ಬಂಗಾರಪೇಟೆ ಹಾಗೂ ತಮಿಳುನಾಡು-ಕೇರಳದ ಸೇಲಂ, ಈರೋಡ್, ಪಾಲ್ಘಾಟ್, ಕೋಜಿಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲ್ಲಲಿದೆ.

ನಿಯಮಿತ ರೈಲುಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರವಾಸೋದ್ಯಮ ಹಾಗೂ ಮನೆಯವರನ್ನು ನೋಡಲು ಬರುವ ಜನರಿಗೆ ಜೂನ್ ತಿಂಗಳಲ್ಲಿ ಪ್ರಯಾಣಿಸುವ ಜನರಿಗೆ ಈ ವಿಶೇಷ ಸೇವೆ ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ? – Kannada News

ನವದೆಹಲಿ, ಜೂನ್ 2: ಮೊಬೈಲ್ ಫೋನ್ ಅನ್ನು ತಲೆಯ ಕೆಳಗೆ ಅಥವಾ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿದೆ. ಆದರೆ, ಇದು ನಿಮ್ಮ ಆರೋಗ್ಯ, ಸುರಕ್ಷತೆ ಮತ್ತು ನಿದ್ರೆಯ (Sleep) ಗುಣಮಟ್ಟದ ಮೇಲೆ ಗಂಭೀರವಾದ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರ ದೈನಂದಿನ ಜೀವನವು ಸ್ಮಾರ್ಟ್‌ಫೋನ್‌ಗಳ ಸುತ್ತ ಸುತ್ತುತ್ತಿದೆ. ಮೊಬೈಲ್ ಫೋನ್‌ಗಳು ರಾತ್ರಿ ಮಲಗುವ ಮುನ್ನ ನಾವು ಮುಟ್ಟುವ ಕೊನೆಯ ವಸ್ತು ಮತ್ತು ಬೆಳಿಗ್ಗೆ ಎದ್ದಾಗ ನಾವು ನೋಡುವ ಮೊದಲ ವಸ್ತುವಾಗಿ ಬಿಟ್ಟಿದೆ.

ಮೊಬೈಲ್ ಫೋನ್‌ಗಳನ್ನು ದಿಂಬಿನ ಕೆಳಗೆ ಅಥವಾ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದು ಅನೇಕರಿಗೆ ಅಭ್ಯಾಸವಾಗಿ ಹೋಗಿದೆ. ಈ ಬಗ್ಗೆ ಮನಶ್ಶಾಸ್ತ್ರಜ್ಞರು ಮತ್ತು ನಿದ್ರೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಜನರು ತಮ್ಮ ಹಾಸಿಗೆಗಳ ಪಕ್ಕದಲ್ಲಿ ಅಲಾರಾಂ ಗಡಿಯಾರಗಳು, ಪುಸ್ತಕಗಳು, ರೇಡಿಯೋಗಳು ಮತ್ತು ಕ್ಯಾಲೆಂಡರ್‌ಗಳಂತಹ ವಸ್ತುಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ, ಈಗ ಆ ಎಲ್ಲಾ ವಸ್ತುಗಳ ಅಗತ್ಯವನ್ನು ಸ್ಮಾರ್ಟ್‌ಫೋನ್‌ ಒಂದೇ ಪೂರೈಸುತ್ತಿದೆ. ಮನರಂಜನೆ, ಸಂಗೀತ, ಹವಾಮಾನ ಮತ್ತು ಪ್ರಮುಖ ರಿಮೈಂಡರ್​​ ಎಲ್ಲವೂ ಒಂದೇ ಪರದೆಯಲ್ಲಿ ಲಭ್ಯವಿರುವುದರಿಂದ ಬೆಡ್ ರೂಂನಲ್ಲಿ ಮೊಬೈಲ್ ಅತ್ಯಂತ ಅವಶ್ಯಕವಾದ ವಸ್ತುವಾಗಿಬಿಟ್ಟಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಮಾಡುವ ಈ ತಪ್ಪುಗಳು ನಿಮ್ಮ ನಿದ್ರೆಗೆ ಭಂಗ ತರಬಹುದು ಎಚ್ಚರ!

ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ ಮಾಡುವುದು, ಮೆಸೇಜುಗಳಿಗೆ ಉತ್ತರಿಸುವುದು ಮತ್ತು ರಾತ್ರಿ ಹಾಸಿಗೆಯಲ್ಲಿ ಮಲಗಿರುವಾಗ ಶಾರ್ಟ್ ವೀಡಿಯೊಗಳನ್ನು ನೋಡುವುದು ಮುಂತಾದ ಚಟುವಟಿಕೆಗಳು ಅನೇಕರಿಗೆ ದಿನಚರಿಯಾಗಿ ಮಾರ್ಪಟ್ಟಿವೆ. ನಿಮ್ಮ ಮೊಬೈಲ್ ಅಡಿಕ್ಷನ್ ನಿಮ್ಮ ನಿದ್ರೆಯ ಸಮಯವನ್ನು ರಹಸ್ಯವಾಗಿ ಕದಿಯುತ್ತಿದೆ ಎಂಬ ವಿಷಯವೇ ನಿಮಗೆ ತಿಳಿಯುತ್ತಿಲ್ಲ.

ಮಲಗಿದಾಗ ಮೊಬೈಲ್ ಫೋನ್ ಬಳಸುವುದರಿಂದ ಆಗುವ ಪರಿಣಾಮಗಳೇನು?

ನೀಲಿ ಬೆಳಕಿನ ಎಫೆಕ್ಟ್:

ಸ್ಮಾರ್ಟ್‌ಫೋನ್ ಸ್ಕ್ರೀನ್​ನಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹದ ನಿದ್ರೆಯ ಸೈಕಲ್ ಅನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಉತ್ತಮ.

ಮೊಬೈಲ್ ಬ್ಲಾಸ್ಟ್ ಆದೀತು:

ಸ್ಮಾರ್ಟ್‌ಫೋನ್‌ಗಳು ಕೆಲಸ ಮಾಡುವಾಗ ಅಥವಾ ಬ್ಯಾಕ್‌ಗ್ರೌಂಡ್‌ನಲ್ಲಿ ಆ್ಯಪ್‌ಗಳು ಅಪ್‌ಡೇಟ್ ಆಗುವಾಗ ಬಿಸಿಯಾಗುತ್ತವೆ. ದಿಂಬು ಮತ್ತು ಹಾಸಿಗೆಗಳು ಶಾಖವನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿವೆ. ದಿಂಬಿನ ಕೆಳಗೆ ಫೋನ್ ಇಟ್ಟಾಗ ಅದರಿಂದ ಹೊರಬರುವ ಶಾಖಕ್ಕೆ ಗಾಳಿಯಾಡದೆ, ಫೋನ್ ವಿಪರೀತ ಬಿಸಿಯಾಗುತ್ತದೆ. ಅದರಲ್ಲೂ ಫೋನ್‌ಗೆ ಚಾರ್ಜರ್ ಹಾಕಿ ದಿಂಬಿನ ಕೆಳಗೆ ಇಟ್ಟರೆ, ಬ್ಯಾಟರಿ ಸ್ಫೋಟಗೊಳ್ಳುವ ಅಥವಾ ದಿಂಬಿಗೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಶೇ. 90ರಷ್ಟು ಹೆಚ್ಚಿರುತ್ತದೆ. ಹೀಗಾಗಿ, ಮೊಬೈಲನ್ನು ರಾತ್ರಿ ನಮ್ಮಿಂದ ದೂರ ಇಡುವುದು ಉತ್ತಮ.

ಇದನ್ನೂ ಓದಿ: ಒಳ್ಳೆಯ ನಿದ್ರೆ ಬೇಕಂದ್ರೆ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ

ಮೆಲಟೋನಿನ್ ಕೊರತೆ:

ರಾತ್ರಿ ಫೋನ್‌ನಲ್ಲಿ ಬರುವ ನೋಟಿಫಿಕೇಶನ್ ಲೈಟ್ ಕಣ್ಣಿನ ಮೇಲೆ ಬಿದ್ದಾಗ, ದೇಹದಲ್ಲಿ ನಿದ್ರೆ ತರಿಸುವ ‘ಮೆಲಟೋನಿನ್’ ಎಂಬ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುತ್ತದೆ. ಇದರಿಂದ ನಿದ್ರೆ ಕೆಡುತ್ತದೆ. ರಾತ್ರಿ ಮಧ್ಯೆ ಎಚ್ಚರವಾದಾಗಲೆಲ್ಲಾ ಸುಲಭವಾಗಿ ಕೈಗೆ ಸಿಗುವ ಫೋನ್ ತೆಗೆದು ಸೋಶಿಯಲ್ ಮೀಡಿಯಾ ಸ್ಕ್ರಾಲ್ ಮಾಡುವ ಚಟ ಹೆಚ್ಚಾಗುತ್ತದೆ. ಇದರಿಂದ ಬೆಳಗ್ಗೆ ಎದ್ದಾಗ ತಲೆನೋವು, ಆಲಸ್ಯ ಮತ್ತು ದಣಿವು ಉಂಟಾಗುತ್ತದೆ.

ವಿಕಿರಣಗಳ ಪ್ರಭಾವ:

ಮೊಬೈಲ್ ಫೋನ್‌ಗಳು ಸಿಗ್ನಲ್ ಪಡೆಯಲು ನಿರಂತರವಾಗಿ ರೇಡಿಯೋ ತರಂಗಗಳನ್ನು ಹೊರಸೂಸುತ್ತಿರುತ್ತವೆ. ನೀವು ಫೋನ್ ಅನ್ನು ದಿಂಬಿನ ಕೆಳಗೆ ಇಟ್ಟುಕೊಂಡು 6ರಿಂದ 8 ಗಂಟೆಗಳ ಕಾಲ ಮಲಗಿದಾಗ ಈ ವಿಕಿರಣಗಳು ನೇರವಾಗಿ ನಿಮ್ಮ ಮೆದುಳಿನ ಮೇಲೆ ಪ್ರಭಾವ ಬೀರುತ್ತವೆ. ಇದು ದೀರ್ಘಕಾಲದ ತಲೆನೋವು, ನೆನಪಿನ ಶಕ್ತಿ ಕುಂದುವಿಕೆ ಮತ್ತು ಕಿರಿಕಿರಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹಲವು ಸಂಶೋಧನೆಗಳು ಎಚ್ಚರಿಸಿವೆ.

ಮೊಬೈಲ್ ಬಳಸುವುದೇ ಆದರೆ ಏನು ಮಾಡಬೇಕು?:

  • ಮಲಗುವಾಗ ಮೊಬೈಲ್ ಫೋನ್ ಅನ್ನು ನಿಮ್ಮ ಹಾಸಿಗೆಯಿಂದ ಕನಿಷ್ಠ 3ರಿಂದ 4 ಅಡಿ ದೂರದಲ್ಲಿರುವ ಟೇಬಲ್ ಅಥವಾ ನೈಟ್‌ಸ್ಟ್ಯಾಂಡ್ ಮೇಲೆ ಇಡಿ.
  • ಒಂದು ವೇಳೆ ಫೋನ್ ಅನ್ನು ಪಕ್ಕದಲ್ಲೇ ಇಡಬೇಕಾದ ಅನಿವಾರ್ಯತೆ ಇದ್ದರೆ, ‘Flight Mode’ ಆನ್ ಮಾಡಿ. ಇದರಿಂದ ರೇಡಿಯೇಶನ್ ಮತ್ತು ಫೋನ್ ಬಿಸಿಯಾಗುವುದು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
  • ಮೊಬೈಲ್ ಅನ್ನು ಎಂದಿಗೂ ಹಾಸಿಗೆ ಅಥವಾ ಸೋಫಾ ಮೇಲೆ ಚಾರ್ಜ್ ಮಾಡಬೇಡಿ. ಮರದ ಟೇಬಲ್ ಅಥವಾ ನೆಲದ ಮೇಲೆ ಇಟ್ಟು ಚಾರ್ಜ್ ಮಾಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual Journey: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ? – Kannada News

ಪ್ರೇಮಾನಂದ್ ಗುರೂಜಿ ಬಳಿ ವಿರಾಟ್-ಅನುಷ್ಕಾImage Credit source: Pinterest

ಭಾರತೀಯ ಕ್ರಿಕೆಟ್‌ನ ರನ್‌ ಮಷೀನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದಾ ಸುದ್ದಿಯಲ್ಲಿರುವ ಜೋಡಿ. ಮೈದಾನದಲ್ಲಿ ವಿರಾಟ್ ಅಬ್ಬರಿಸಿದರೆ, ಬೆಳ್ಳಿ ಪರದೆಯ ಮೇಲೆ ಅನುಷ್ಕಾ ಮಿಂಚುತ್ತಾರೆ. ಆದರೆ, ಇವರಿಬ್ಬರ ಗ್ಲಾಮರಸ್ ಬದುಕಿನ ಆಚೆಗೊಂದು ಶಾಂತ, ಆಧ್ಯಾತ್ಮಿಕ ಪ್ರಪಂಚವಿದೆ. ಈ ಜೋಡಿ ಆಗಾಗ ತಮ್ಮ ಬಿಡುವಿನ ವೇಳೆಯಲ್ಲಿ ಮಥುರಾ ಮತ್ತು ಬೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಇದೀಗಾ ಐಪಿಎಲ್​​ನಲ್ಲಿ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಗೆಲುವಿನ ಸಂಭ್ರಮದಲ್ಲಿರುವಾಗಲೇ ಮತ್ತೊಮ್ಮೆ ಈ ಜೋಡಿ ಪ್ರೇಮಾನಂದ್ ಗುರೂಜಿಯ ದರ್ಶನ ಪಡೆದಿದ್ದಾರೆ. ಅಷ್ಟಕ್ಕೂ ಈ ಹೈ-ಪ್ರೊಫೈಲ್ ಜೋಡಿ ಪ್ರೇಮಾನಂದ್ ಗುರೂಜಿಯವರ ಸನ್ನಿಧಿಗೆ ಅಷ್ಟೊಂದು ಆಕರ್ಷಿತರಾಗಲು ಕಾರಣವೇನು ಎಂಬುದಕ್ಕೆ ಆಸಕ್ತಿದಾಯಕ ಸಂಗತಿ ಇಲ್ಲಿದೆ.

ವಿರಾಟ್ ಕೊಹ್ಲಿ ಕೆರಿಯರ್‌ನ ಕಠಿಣ ಹಂತ ಮತ್ತು ಗುರೂಜಿ ಆಶೀರ್ವಾದ:

ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ತಮ್ಮ ಕೆರಿಯರ್‌ನ ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದ್ದರು. ಸತತವಾಗಿ ಶತಕಗಳು ಬಾರದೆ, ಫಾರ್ಮ್ ಕಳೆದುಕೊಂಡು ವಿಮರ್ಶೆಗಳಿಗೆ ಗುರಿಯಾಗಿದ್ದಾಗ ಕೊಹ್ಲಿ ಮಾನಸಿಕವಾಗಿ ಕುಗ್ಗಿದ್ದರು. ಆ ಸಮಯದಲ್ಲಿ ಅನುಷ್ಕಾ ಅವರೊಂದಿಗೆ ಬೃಂದಾವನಕ್ಕೆ ಭೇಟಿ ನೀಡಿ ಪ್ರೇಮಾನಂದ್ ಗುರೂಜಿಯವರ ಆಶೀರ್ವಾದ ಪಡೆದಿದ್ದರು. ಅದಾದ ಕೆಲವೇ ದಿನಗಳಲ್ಲಿ ವಿರಾಟ್ ಭರ್ಜರಿಯಾಗಿ ಫಾರ್ಮ್‌ಗೆ ಮರಳಿ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಸಿಡಿಸಿದ್ದರು. ಅಂದಿನಿಂದ ಗುರೂಜಿಯವರ ಮೇಲಿನ ಇವರ ನಂಬಿಕೆ ಮತ್ತು ಭಕ್ತಿ ಮತ್ತಷ್ಟು ಗಾಢವಾಗಿದೆ.

ಗುರೂಜಿಯವರ ಸರಳತೆ ಮತ್ತು ‘ಕರ್ಮ ಸಿದ್ಧಾಂತ’ದ ಬೋಧನೆ:

ಪ್ರೇಮಾನಂದ್ ಗುರೂಜಿಯವರು ಎರಡು ಕಿಡ್ನಿಗಳು ವೈಫಲ್ಯಗೊಂಡಿದ್ದರೂ ದಿನದ 24 ಗಂಟೆಯೂ ರಾಧಾ-ಕೃಷ್ಣರ ಭಕ್ತಿಯಲ್ಲಿ ಲೀನವಾಗಿರುತ್ತಾರೆ. ಅವರು ತಮ್ಮ ಬಳಿ ಬರುವ ಭಕ್ತರಿಗೆ ಅಹಂಕಾರವನ್ನು ಬಿಡುವುದು, ತಪ್ಪು ದಾರಿಗೆ ಹೋಗದಿರುವುದು ಮತ್ತು ಪ್ರಾಮಾಣಿಕವಾಗಿ ತಮ್ಮ ಕರ್ಮವನ್ನು (ಕೆಲಸವನ್ನು) ಮಾಡುವುದರ ಬಗ್ಗೆ ಅತ್ಯಂತ ಸರಳ ಹಿಂದಿ ಭಾಷೆಯಲ್ಲಿ ಬೋಧಿಸುತ್ತಾರೆ. ವಿರಾಟ್ ಕೊಹ್ಲಿ ತಮ್ಮ ಸಂದರ್ಶನಗಳಲ್ಲಿ ಹೇಳಿರುವಂತೆ, ಅನುಷ್ಕಾ ಅವರ ಜೀವನಕ್ಕೆ ಬಂದ ನಂತರ ಅವರಲ್ಲಿ ಅಹಂಕಾರ ಕಡಿಮೆಯಾಗಿ, ಆಧ್ಯಾತ್ಮಿಕ ಚಿಂತನೆ ಹೆಚ್ಚಾಯಿತು. ಗುರೂಜಿಯವರ ಈ ಸರಳ ಜೀವನಶೈಲಿ ಕೊಹ್ಲಿ ದಂಪತಿಯನ್ನು ಅಪಾರವಾಗಿ ಸೆಳೆದಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಮಕ್ಕಳಿಗೆ ಬಾಲ್ಯದಲ್ಲೇ ಭಾರತೀಯ ಸಂಸ್ಕಾರ ನೀಡುವ ಹಂಬಲ:

ಕೋಟಿ ಕೋಟಿ ಆಸ್ತಿ, ಐಷಾರಾಮಿ ಜೀವನವಿದ್ದರೂ ವಿರಾಟ್ ಮತ್ತು ಅನುಷ್ಕಾ ತಮ್ಮ ಮಕ್ಕಳಿಗೆ (ಮಗಳು ವಾಮಿಕಾ ಮತ್ತು ಮಗ ಅಕಾಯ್) ಬಾಲ್ಯದಿಂದಲೇ ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮದ ಸಂಸ್ಕಾರವನ್ನು ನೀಡಲು ಬಯಸುತ್ತಾರೆ. ಇದೇ ಕಾರಣಕ್ಕೆ ಅವರು ತಮ್ಮ ಮಕ್ಕಳನ್ನೂ ಗುರೂಜಿಯವರ ಸನ್ನಿಧಿಗೆ ಕರೆತಂದು, ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಕೊಡಿಸುತ್ತಾರೆ. ಆಶ್ರಮದಲ್ಲಿ ಇವರು ಸ್ಟಾರ್‌ಗಿರಿ ಮರೆತು ಸಾಮಾನ್ಯ ಭಕ್ತರಂತೆ ನಡೆದುಕೊಳ್ಳುವ ರೀತಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಕ್ತಿ, ಮಾನಸಿಕ ಸ್ಥಿರತೆ ಮತ್ತು ಪ್ರೇಮಾನಂದ್ ಗುರೂಜಿಯವರ ಸರಳ ಮಾತುಗಳೇ ಈ ಮಾದರಿ ಜೋಡಿಯನ್ನು ಪದೇ ಪದೇ ಬೃಂದಾವನದ ಆಶ್ರಮದತ್ತ ಸೆಳೆಯುತ್ತಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್: ರಾಜ್ಯಪಾಲರ ಮೊರೆ ಹೋದ ಬಿಜೆಪಿ ನಿಯೋಗ – Kannada News

ಬೆಂಗಳೂರು, (ಜೂನ್ 02):  ಕಲಬುರಗಿ (Kalaburagi) ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ (Ladle Mashak Dargah) ಹೊಸ ತಿರುವು ಪಡೆದುಕೊಂಡಿದೆ. ಆಳಂದದ (Aland) ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣ ವಾಪಸ್ ಪಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಲು ಸೂಚಿಸಬೇಕು ಎಂದು ಬಿಜೆಪಿ (BJP) ನಿಯೋಗ ರಾಜ್ಯಪಾಲರಿಗೆ (Governer) ದೂರು ನೀಡಿದೆ. ಇಂದು (ಜೂ.2) ಮಧ್ಯಾಹ್ನ 1 ಗಂಟೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿ ಮಾಡಿ, ದೂರು ಸಲ್ಲಿಸಿದೆ.

ಮುಖ್ಯಾಂಶಗಳು

  • ಆಳಂದದ ಲಾಡ್ಲೆ ಮಶಾಕ್ ದರ್ಗಾ ಘರ್ಷಣೆ ಕೇಸ್ ಹಿಂಪಡೆಯುವ ನಿರ್ಧಾರ ವಿಚಾರ
  • ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​​ ಭೇಟಿಯಾದ ಬಿಜೆಪಿ ನಿಯೋಗ
  • ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ
  • ಸಚಿವ ಸಂಪುಟ ನಿರ್ಧಾರವನ್ನು ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ
  • 2022ರಲ್ಲಿ ಲಾಡ್ಲೆ ಮಶಾಕ್ ದರ್ಗಾದಲ್ಲಿ ಘರ್ಷಣೆ ನಡೆದಿತ್ತು

ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆದಿದೆ. ಈ ನಿರ್ಧಾರವನ್ನು ರದ್ದುಗೊಳಿಸಲು ಸರ್ಕಾರಕ್ಕೆ ಸೂಚಿಸುವಂತೆ ಬಿಜೆಪಿ ಆಯೋಗ ತನ್ನ ದೂರಿನ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದೆ. ಜೊತೆಗೆ ಕೇಸ್ ವಾಪಸ್ ಪಡೆದ ನಿರ್ಣಯ ರದ್ದುಪಡಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ವಿವಾದದ ಕೇಸ್​​ಗಳು ಸೇರಿ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ: ಬಿಜೆಪಿ ವಿರೋಧ

ಇತ್ತೀಚೆಗೆ ಈ ಹಿಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಲಾಡ್ಲೆ ಮಶಕ್ ದರ್ಗಾದಲ್ಲಿ 2022 ರಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಕೈಗೊಂಡಿದೆ. ಇದರಿಂದ ಹಿಂದೂಪರ ಸಂಘಟನೆಗಳು, ಬಿಜೆಪಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು, ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿವೆ.

ಘಟನೆ ಹಿನ್ನೆಲೆ

2022ರ ಮಹಾಶಿವರಾತ್ರಿಯ ದಿನದಂದು ಆಳಂದದಲ್ಲಿ ನಡೆದ ಘಟನೆ ರಾಜ್ಯದ ಗಮನ ಸೆಳೆದಿತ್ತು. ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಭಕ್ತರು ಸಿದ್ಧತೆ ನಡೆಸಿದ್ದರು. ಆದರೆ, ಅದೇ ಸಂದರ್ಭದಲ್ಲಿ ಶಿವಲಿಂಗಕ್ಕೆ ಅವಮಾನ ಎಸಗಲಾಗಿದೆ. ಮತ್ತು ಮಲಮೂತ್ರ ವಿಸರ್ಜನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಯು ಸ್ಥಳೀಯವಾಗಿ ಉದ್ವಿಗ್ನತೆಯನ್ನು ಸೃಷ್ಟಿಸಿತು. ಪರಿಸ್ಥಿತಿ ತಿಳಿಗೊಳಿಸಲು ಹಾಗೂ ಸ್ಥಳವನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲು ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸಿದ್ದರು. ಈ ವೇಳೆ, ಗುಂಪೊಂದು ಅಧಿಕಾರಿಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿತ್ತು. ಈ ಗಲಭೆಗೆ ಸಂಬಂಧಿಸಿದಂತೆ ಸುಮಾರು 400ಕ್ಕೂ ಹೆಚ್ಚು ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Monsoon 2026: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ; ಕರ್ನಾಟಕದಲ್ಲಿ ಮಳೆಗಾಲ ಯಾವಾಗ ಶುರು? – Kannada News

ನವದೆಹಲಿ, ಜೂನ್ 2: ಕೇರಳಕ್ಕೆ ಈ ಬಾರಿ ಜೂನ್ 26ರಂದೇ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಆ ದಿನಾಂಕದಲ್ಲಿ ಬದಲಾವಣೆಯಾಗಿದ್ದು, ಭಾರತೀಯ ಹವಾಮಾನ ಇಲಾಖೆ ಹೊಸ ದಿನಾಂಕವನ್ನು ಪ್ರಕಟಿಸಿದೆ. ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಭಾರತದ ಕೃಷಿ ವಲಯದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು (Southwest Monsoon) ಜೂನ್ 4ರಂದು ಅಧಿಕೃತವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸ್ಪಷ್ಟಪಡಿಸಿದೆ.

ಮುಂಗಾರು ಆರಂಭವಾದ ಬೆನ್ನಲ್ಲೇ ಕೇರಳದಾದ್ಯಂತ ತೀವ್ರ ಬಿರುಗಾಳಿ ಸಹಿತವಾದ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಕೇರಳ ರಾಜ್ಯದ ಹಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಮುಂಗಾರು ಮಾರುತಗಳು ತೀವ್ರ ವೇಗವನ್ನು ಪಡೆದುಕೊಂಡಿದ್ದು, ಜೂನ್ 4ರಂದು ಕೇರಳದ ಭೂಭಾಗವನ್ನು ಮುಟ್ಟಲಿವೆ. ಇದರ ಪ್ರಭಾವದಿಂದಾಗಿ ಈಗಾಗಲೇ ಕೇರಳದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ.

ಇದನ್ನೂ ಓದಿ: Karnataka Weather forecast: ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ, 1 ವಾರ ಗುಡುಗು ಸಹಿತ ಭಾರೀ ಮಳೆ

ಕೇರಳದಲ್ಲಿ ಮುಂಗಾರು ಪ್ರವೇಶಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದ್ದು, ಕೇರಳದ ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ತ್ರಿಶೂರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವರ್ಷ ‘ಎಲ್ ನಿನೋ’ ಪ್ರಭಾವ ಇರುವುದರಿಂದ ದೇಶಾದ್ಯಂತ ಒಟ್ಟಾರೆ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಕೇರಳಕ್ಕೆ ಪ್ರವೇಶಿಸಿದ ಕೆಲವು ದಿನಗಳಲ್ಲಿ ಮುಂಗಾರು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಪ್ರವೇಶಿಸಲಿದೆ.

ಕೇರಳದಲ್ಲಿ ರೆಡ್ ಹಾಗೂ ಆರೆಂಜ್ ಅಲರ್ಟ್:

ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ. ಸಮುದ್ರದಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಅಲೆಗಳ ಅಬ್ಬರ ಜೋರಾಗಲಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಕರ್ನಾಟಕಕ್ಕೆ ಯಾವಾಗ ಮುಂಗಾರು ಪ್ರವೇಶ?:

ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 3ರಿಂದ 5 ದಿನಗಳ ಒಳಗಾಗಿ ಮಳೆ ಕರ್ನಾಟಕವನ್ನು ತಲುಪುತ್ತದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿದರೆ, ಜೂನ್ 7 ಅಥವಾ 8ರ ವೇಳೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗಗಳಿಗೆ ಮುಂಗಾರು ಮಾರುತಗಳು ತಲುಪಲಿವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: Karnataka Weather Forecast: ಇಡೀ ರಾಜ್ಯದಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಈ ಬಾರಿ ಜಾಗತಿಕ ಹವಾಮಾನ ಬದಲಾವಣೆಗಳು ಮತ್ತು ‘ಎಲ್ ನಿನೋ’ ವಿದ್ಯಮಾನದ ಪ್ರಭಾವ ಇರುವುದರಿಂದ ದೇಶದಲ್ಲಿ ಒಟ್ಟಾರೆ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಕೊಂಚ ಏರುಪೇರಾಗುವ ಸಾಧ್ಯತೆಯಿದೆ. ಆದರೆ ಜೂನ್ ತಿಂಗಳ ಆರಂಭದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಇದು ಪೂರಕವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆಯಿಂದಾಗಿ ಉಂಟಾಗಬಹುದಾದ ಪ್ರವಾಹ ಅಥವಾ ಭೂಕುಸಿತದಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕೇರಳ ಸರ್ಕಾರ ಈಗಾಗಲೇ NDRF ಹಾಗೂ ಸ್ಥಳೀಯ ಆಡಳಿತವನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಎಂಎಲ್ಸಿಯನ್ನೇ ಅಪಹರಿಸಿ 2 ಕೋಟಿ ಹಣಕ್ಕೆ ಡಿಮ್ಯಾಂಡ್​​: ದುಷ್ಟರಿಂದ ದಯಾನಂದರೆಡ್ಡಿ ಬಚಾವ್​​ ಆಗಿದ್ದೇ ರೋಚಕ! – Kannada News

ಮಾಜಿ ಎಂಎಲ್‌ಸಿ ದಯಾನಂದರೆಡ್ಡಿImage Credit source: Tv9 Kannada

ಆನೇಕಲ್​​, ಜೂನ್​​ 02: ವಿಧಾನ ಪರಿಷತ್​​ ಮಾಜಿ ಸದಸ್ಯನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ. ನಿನ್ನೆ ಮಧ್ಯರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು, ಮಾಜಿ MLC ದಯಾನಂದರೆಡ್ಡಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಮುಖ್ಯಾಂಶಗಳು

  • ಹಣಕ್ಕಾಗಿ ಮಾಜಿ ಎಂಎಲ್ಸಿಯ ಅಪಹರಿಸಿದ ದುಷ್ಕರ್ಮಿಗಳು
  • ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿರುವ ಘಟನೆ
  • 2 ಕೋಟಿ ಹಣ ನೀಡುವಂತೆ ಆರೋಪಿಗಳಿಂದ ಡಿಮ್ಯಾಂಡ್​​

ಘಟನೆ ಏನು?

ತಡರಾತ್ರಿ ಗೋಲ್ಡ್ ಕಾಯಿನ್ ಕ್ಲಬ್​ನಿಂದ ದಯಾನಂದರೆಡ್ಡಿ ಹೊರಟಿದ್ದರು. ಈ ವೇಳೆ ಬೈಕ್​ನಲ್ಲಿ ಬಂದು ದಯಾನಂದರೆಡ್ಡಿ ಕಾರು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ನಿಮಗೆ ಗಿಫ್ಟ್ ಬಂದಿದೆ ಎಂದು ಕಾಟನ್ ಬಾಕ್ಸ್ ತೋರಿಸಿದ್ದರು. ಡೋರ್​ ಲಾಕ್ ಓಪನ್ ಮಾಡುತ್ತಿದ್ದಂತೆ ಕಾರಿಗೆ ನುಗ್ಗಿರುವ ಓರ್ವ ಗನ್ ತೋರಿಸಿ ತಾನು ಹೇಳಿದ ಕಡೆ ಕಾರು ಚಲಾಯಿಸಲು ಸೂಚನೆ ನೀಡಿದ್ದಾನೆ. ಬಳಿಕ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಇವರನ್ನು ಹಿಂಬಾಲಿಸಿದ್ದಾರೆ. ಅತ್ತಿಬೆಲೆ ಕೆಹೆಚ್​ಬಿ ಬಡಾವಣೆ ಬಳಿ ಕರೆದೊಯ್ದು ಕೊಲೆ ಬೆದರಿಕೆ ಹಾಕಲಾಗಿದ್ದು, ನಿನ್ನ ಹತ್ಯೆಗೆ 10 ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂದು ಮಾಜಿ ಎಂಎಲ್​ಸಿ ದಯಾನಂದರೆಡ್ಡಿ ಕುತ್ತಿಗೆಗೆ ಗನ್ ಇಟ್ಟು ದುಷ್ಕರ್ಮಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಸಿನಿಮೀಯ ಮಾದರಿ ದರೋಡೆ; ಬಂಗಾರದ ಅಂಗಡಿಗೆ ನುಗ್ಗಿ ಆಭರಣ ದೋಚಿ ಎಸ್ಕೇಪ್​​ ಆದ ಮೂವರು

ಇನ್ನು ಈ ವೇಳೆ ಆ ಹಣವನ್ನು ತಾನೇ ಕೊಡ್ತೇನೆ, ಕೊಲ್ಲಬೇಡಿ ಎಂದು ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ಮೊದಲು 3 ಕೋಟಿ ಹಣ ಬೇಡಿಕೆಯಿಟ್ಟಿದ್ದ ಅಪಹರಣಕಾರರ ಗ್ಯಾಂಗ್, ಅಂತಿಮವಾಗಿ 2 ಕೋಟಿಗೆ ಒಪ್ಪಿಕೊಂಡಿದ್ದಾರೆ. ಈಗ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ಓಪನ್ ಟೈಮ್​ಗೆ ನೀಡೋದಾಗಿ ದಯಾನಂದರೆಡ್ಡಿ ಕೇಳಿಕೊಂಡಿದ್ದು, ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ತಿಳಿಸಿ ಅಪಹರಣಕಾರರು ದಯಾನಂದರೆಡ್ಡಿ ಅವರನ್ನು ಬಿಟ್ಟುಕಳುಹಿಸಿದ್ದಾರೆ. ಆ ಬೆನ್ನಲ್ಲೇ ಪೊಲೀಸ್​​ ಠಾಣೆಗೆ ತೆರಳಿ ಘಟನೆ ಸಂಬಂಧ ಮಾಜಿ ಎಂಎಲ್​​ಸಿ ದೂರು ದಾಖಲಿಸಿದ್ದಾರೆ. ಅಪಹರಣ ಗ್ಯಾಂಗ್​​ಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ಲಂಬರ್, ಎಲೆಕ್ಟ್ರಿಶಿಯನ್​ಗೂ ತಪ್ಪೋದಿಲ್ಲವಂತೆ ಎಐ ಕಂಟಕ; ಕೃತಕ ಬುದ್ಧಿಮತ್ತೆ ಪ್ಲಂಬಿಂಗ್ ಕೆಲಸ ಹೇಗೆ ಮಾಡುತ್ತೆ? – Kannada News

ನವದೆಹಲಿ, ಜೂನ್ 2: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ನಾವು ಅಂದುಕೊಂಡಿದ್ದಕ್ಕಿಂತ ಅತ್ಯಂತ ವೇಗವಾಗಿ ಉದ್ಯೋಗ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದೆ. 2023ರಲ್ಲಿ ಬಂದಿದ್ದ ವರದಿಯೊಂದು 2032ರ ವೇಳೆಗೆ ಎಐ ತಂತ್ರಜ್ಞಾನವು ಶೇ. 90ರಷ್ಟು ಉದ್ಯೋಗಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಿತ್ತು. ಕೇವಲ 3 ವರ್ಷಗಳಲ್ಲೇ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಎಐ ಅಂದುಕೊಂಡಿದ್ದಕ್ಕಿಂತ ಮೂರು ಪಟ್ಟು ವೇಗವಾಗಿ ಉದ್ಯೋಗಗಳನ್ನು ಆವರಿಸಿಕೊಳ್ಳುತ್ತಿದೆ. ಇದೇ ವೇಳೆ ಐಟಿ ರಂಗದ ಪ್ರಮುಖ ಸಂಸ್ಥೆಯಾದ ‘ಕಾಗ್ನಿಜೆಂಟ್’ (Cognizant) ಬಿಡುಗಡೆ ಮಾಡಿರುವ ಹೊಸ ಅಧ್ಯಯನದ ವಿವರಗಳು ಆಘಾತಕಾರಿ ಎನಿಸುವಂತಿವೆ.

ಕಾಗ್ನಿಜೆಂಟ್ ವರದಿಯ ಪ್ರಕಾರ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಶೇ. 93ರಷ್ಟು ಉದ್ಯೋಗಗಳು ಈಗ ಎಐ ಬಳಸುವ ಸಾಮರ್ಥ್ಯ ಹೊಂದಿವೆ (AI-capable). ಇದರಲ್ಲಿ ಶೇ. 30ರಷ್ಟು ಉದ್ಯೋಗಗಳು ಅಸ್ತಿತ್ವದ ಬಿಕ್ಕಟ್ಟನ್ನು (existential change) ಎದುರಿಸುತ್ತಿವೆ. ಅಂದರೆ, ಮುಂದಿನ 9 ವರ್ಷಗಳಲ್ಲಿ ಆಗಬಹುದು ಎಂದುಕೊಂಡಿದ್ದ ಬದಲಾವಣೆ ಕೇವಲ 3 ವರ್ಷಗಳಲ್ಲೇ ಸಂಭವಿಸಿದೆ.

ಪ್ಲಂಬರ್, ಎಲೆಕ್ಟ್ರಿಷಿಯನ್‌ಗಳಿಗೂ ತಪ್ಪದ ಪ್ರಭಾವ

ಸಾಮಾನ್ಯವಾಗಿ ಎಐ ತಂತ್ರಜ್ಞಾನವು ಕೇವಲ ಸಾಫ್ಟ್‌ವೇರ್ ಕೋಡಿಂಗ್ ಅಥವಾ ಆಫೀಸ್ ಕೆಲಸಗಳನ್ನು ಮಾತ್ರ ಕಸಿದುಕೊಳ್ಳುತ್ತದೆ ಎಂಬ ನಂಬಿಕೆ ಇತ್ತು. ಆದರೆ ಕಾಗ್ನಿಜೆಂಟ್ ಸಂಶೋಧನಾ ವಿಭಾಗದ ಮುಖ್ಯಸ್ಥ ಓಲಿ ಓ’ಡೋನೊಘು (Ollie O’Donoghue) ಹೇಳುವ ಪ್ರಕಾರ, “ಇಲ್ಲಿ ಯಾರೂ ಸುರಕ್ಷಿತರಲ್ಲ”. ಪ್ಲಂಬರ್ ಅಥವಾ ಎಲೆಕ್ಟ್ರಿಷಿಯನ್ ಕೆಲಸ ಮಾಡುವವರೂ ಸಹ ಎಐ ಯುಗಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ.

ಇದನ್ನೂ ಓದಿ: ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ

ಪ್ಲಂಬಿಂಗ್ ಕೆಲಸದಲ್ಲಿ ಎಐ ಹೇಗೆ ಕೆಲಸ ಮಾಡುತ್ತದೆ?

ಪೈಪ್ ರಿಪೇರಿ ಮಾಡಲು ಮನುಷ್ಯನೇ ಬೇಕಾಗಬಹುದು, ಆದರೆ ಅದಕ್ಕೂ ಮುನ್ನ ಮಾಡುವ ತಪಾಸಣೆ ಮತ್ತು ರೋಗನಿರ್ಣಯವನ್ನು (Inspection & Diagnosis) ಎಐ ಮಾಡಬಲ್ಲದು. ಉದಾಹರಣೆಗೆ, ಇಂದಿನ ಮಲ್ಟಿಮೋಡಲ್ ಎಐ ಏಜೆಂಟ್‌ಗಳು ಗೋಡೆಯ ಮೇಲಿನ ತೇವಾಂಶವನ್ನು ಗುರುತಿಸಿ, ಪೈಪ್ ಎಲ್ಲಿ ಸೋರುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಅದಕ್ಕೆ ಬೇಕಾಗುವ ಬಿಡಿಭಾಗಗಳ ಪಟ್ಟಿ ಮತ್ತು ಬಿಲ್ (Invoice) ಅನ್ನು ತಾವಾಗಿಯೇ ಸಿದ್ಧಪಡಿಸಬಲ್ಲವು.

ಅಮೆರಿಕ ಒಂದರಲ್ಲೇ ಮಾನವ ಶ್ರಮದಿಂದ ಎಐ ಕಡೆಗೆ ಸುಮಾರು 4.5 ಟ್ರಿಲಿಯನ್ ಡಾಲರ್ (ಅಂದಾಜು 427 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಉದ್ಯೋಗಗಳು ವರ್ಗಾವಣೆಯಾಗಲಿವೆ ಎಂದು ವರದಿ ಎಚ್ಚರಿಸಿದೆ.

ಈ ವರದಿಯು ಜಾಗತಿಕವಾಗಿ ತಂತ್ರಜ್ಞಾನ ಕಂಪನಿಗಳಲ್ಲಿ ನಡೆಯುತ್ತಿರುವ ಭಾರಿ ಉದ್ಯೋಗ ಕಡಿತದ (Layoffs) ಮಧ್ಯೆ ಹೊರಬಿದ್ದಿದೆ. Meta, Amazon, Oracle ನಂತಹ ದೈತ್ಯ ಕಂಪನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ವರದಿಗಳ ಪ್ರಕಾರ, 2026ರ ಈ ಮೊದಲ ಐದು ತಿಂಗಳಲ್ಲೇ ಸುಮಾರು 1,15,907 ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಎಐ ಅಲೆಯಲ್ಲಿ ಹಿಂದುಳಿದ ಭಾರತ; ಷೇರುಬಜಾರಿನ ಬಲದಲ್ಲಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿತ

ಭರವಸೆಯ ಕಿರಣವೇನು?

ಈ ವರದಿ ಆತಂಕ ಮೂಡಿಸಿದರೂ, ಕಾಗ್ನಿಜೆಂಟ್‌ನ ಎಐ ವಿಭಾಗದ ಮುಖ್ಯಸ್ಥ ಸುಶಾಂತ್ ವಾರಿಕೂ ಅವರ ಪ್ರಕಾರ, ಎಐ ಹಳೆಯ ಉದ್ಯೋಗಗಳನ್ನು ಕಸಿದುಕೊಂಡರೂ ಮಾರುಕಟ್ಟೆಯಲ್ಲಿ ಹೊಸ ಆರ್ಥಿಕ ಅವಕಾಶಗಳು ಮತ್ತು ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ಆದರೆ ಇದಕ್ಕೆ ಕಂಪನಿಗಳು ಮತ್ತು ಉದ್ಯೋಗಿಗಳು ತಮ್ಮ ಕೆಲಸದ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ.

ಮತ್ತೊಂದೆಡೆ, ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರಂತಹ ಕೆಲವು ತಂತ್ರಜ್ಞಾನದ ಮುಖಂಡರು “ಎಐ ಉದ್ಯೋಗಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತದೆ ಎನ್ನುವುದು ಮೂರ್ಖತನದ ವಾದ” ಎಂದು ಹೇಳುವ ಮೂಲಕ ಉದ್ಯೋಗಿಗಳಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link