Category Archives: Blog

Your blog category

ಭಾರತ- ಐರ್ಲೆಂಡ್ ಟಿ20 ಪಂದ್ಯಗಳು ಒಂದು ಗಂಟೆ ಮುಂಚಿತವಾಗಿ ಆರಂಭ – Kannada News | India vs Ireland T20: Shreyas Iyer to Lead, 6 PM Start Time Revealed!

ಪ್ರಸ್ತುತ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯನ್ನಾಡುತ್ತಿರುವ ಟೀಂ ಇಂಡಿಯಾ ಈ ತಿಂಗಳ ಕೊನೆಯಲ್ಲಿ ಐರ್ಲೆಂಡ್ ಪ್ರವಾಸ (Team India Ireland T20 Tour) ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಉಭಯ ದೇಶಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಪ್ರವಾಸಕ್ಕಾಗಿ ಬಿಸಿಸಿಐ (BCCI) ಈಗಾಗಲೇ ಭಾರತೀಯ ತಂಡವನ್ನು ಘೋಷಿಸಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ, ಯುವ ಆಟಗಾರರನ್ನು ಒಳಗೊಂಡ ಈ ತಂಡವು ಐರ್ಲೆಂಡ್‌ನ ಸವಾಲನ್ನು ಎದುರಿಸಲಿದೆ. ಏತನ್ಮಧ್ಯೆ, ಸರಣಿಯ ಪಂದ್ಯಗಳ ಆರಂಭದ ಸಮಯದ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದೆ.

6 ಗಂಟೆಗೆ ಆರಂಭವಾಗಲಿವೆ ಪಂದ್ಯಗಳು

ಸಾಮಾನ್ಯವಾಗಿ ಭಾರತ ಮತ್ತು ವಿದೇಶಗಳಲ್ಲಿ ಟಿ20 ಪಂದ್ಯಗಳು ಸಂಜೆ 7:00 ಅಥವಾ 7:30 ಕ್ಕೆ ಪ್ರಾರಂಭವಾಗುತ್ತವೆ. ಪ್ರಸಾರಕರು ಮತ್ತು ಕ್ರಿಕೆಟ್ ಮಂಡಳಿಗಳು ಯಾವಾಗಲೂ ಪಂದ್ಯಗಳ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತವೆ, ಇದರಿಂದಾಗಿ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳು ಪ್ರೈಮ್ ಟೈಮ್‌ನಲ್ಲಿ ಟಿವಿ ಅಥವಾ ಮೊಬೈಲ್ ಫೋನ್‌ಗಳಲ್ಲಿ ಪಂದ್ಯಗಳನ್ನು ಸುಲಭವಾಗಿ ಆನಂದಿಸಬಹುದು. ಆದರೆ ಐರ್ಲೆಂಡ್ ಪ್ರವಾಸದಲ್ಲಿ ಪಂದ್ಯಗಳು ಇನ್ನು ಬೇಗನೇ ಆರಂಭವಾಗಲಿವೆ. ಅಂದರೆ ಭಾರತ ಮತ್ತು ಐರ್ಲೆಂಡ್ ನಡುವಿನ ಎರಡೂ ಟಿ20 ಪಂದ್ಯಗಳು ಸಂಜೆ 6 ಗಂಟೆಗೆ ಆರಂಭವಾಗಲಿವೆ.

ಭಾರತ ಮತ್ತು ಐರ್ಲೆಂಡ್ ತಂಡಗಳು ಜೂನ್ 26 ಮತ್ತು 28 ರಂದು ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ಇವೆರಡೂ ಪಂದ್ಯಗಳು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿವೆ. ಈ ಎರಡು ಪಂದ್ಯಗಳು ಸಂಜೆ 6 ಗಂಟೆಗೆ ಆರಂಭವಾಗುವುದು ಭಾರತದ ಅಭಿಮಾನಿಗಳಿಗೆ ಹೊಸ ಅನುಭವವಾಗಿದ್ದರೂ, ಇದು ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಬಹುದು. ಏಕೆಂದರೆ ಪಂದ್ಯವು ಬೇಗನೆ ಆರಂಭವಾಗುವುದರಿಂದ, ರಾತ್ರಿ 9:30 ರಿಂದ 10 ಗಂಟೆಯೊಳಗೆ ಕೊನೆಗೊಳ್ಳುತ್ತದೆ. ಇದರಿಂದ ಅಭಿಮಾನಿಗಳು ಬೇಗನೇ ನಿದ್ರೆಗೆ ಜಾರಬಹುದು.

IND W vs NED W: ಟಿ20 ವಿಶ್ವಕಪ್‌ನಲ್ಲಿ ದಾಖಲೆಯ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

ಐರ್ಲೆಂಡ್ ಪ್ರವಾಸಕ್ಕೆ ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ವೈಭವ್ ಸೂರ್ಯವಂಶಿ, ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:10 pm, Thu, 18 June 26

Source link

ನಿರ್ದೇಶಕ ಓಂ ಪ್ರಕಾಶ್ ಹೇಳಿದ ಉಪ್ಪಿಟ್ಟು ಮತ್ತು ದರ್ಶನ್ ಕತೆ: ವಿಡಿಯೋ – Kannada News | Director Om Praksh remembered old days about Darshan

ಖ್ಯಾತ ನಿರ್ದೇಶಕ ಓಂ ಪ್ರಕಾಶ್, ಶಿವರಾಜ್ ಕುಮಾರ್, ದರ್ಶನ್ (Darshan) ಸೇರಿದಂತೆ ಹಲವು ಸ್ಟಾರ್ ನಟ-ನಟಿಯರ ಜೊತೆಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಓಂ ಪ್ರಕಾಶ್ ಅವರು ಟಿವಿ ಲೋಕಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗಿ ಆಗುತ್ತಿದ್ದಾರೆ. ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿರುವ ಓಂ ಪ್ರಕಾಶ್ ಅವರು ಟಿವಿ9 ಜೊತೆಗೆ ಮಾತನಾಡುತ್ತಾ ಹಳೆಯ ನೆನಪುಗಳನ್ನು ಮಾಡಿಕೊಂಡಿದ್ದಾರೆ. ನಟ ದರ್ಶನ್​ಗೆ ತಾವು ಉಪ್ಪಿಟ್ಟು ಮಾಡಿಕೊಟ್ಟಿದ್ದನ್ನು ಈ ವೇಳೆ ಓಂ ಪ್ರಕಾಶ್ ಅವರು ನೆನಪು ಮಾಡಿಕೊಂಡಿದ್ದು, ಹಳೆಯ ಘಟನೆಯನ್ನು ಬಲು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗದಲ್ಲಿ ಆಂಧ್ರ ಮೂಲದ ಕಂಪನಿಯಿಂದ ವಂಚನೆ: ಉದ್ಯೋಗ ನೀಡುವ ನೆಪದಲ್ಲಿ ಕೋಟ್ಯಂತರ ರೂ ವಂಚನೆ – Kannada News | Andhra Based Company Accused of Employment Scam, Defrauding Victims of Crores of Rupees

ಚಿತ್ರದುರ್ಗ, ಜೂನ್​​ 18: ಇತ್ತೀಚೆಗೆ ಬೆಳಗಾವಿಯ ಶಿವಾನಂದ ನೀಲಣ್ಣವರ ಶಿವಂ ಅಸೋಸಿಯೇಟ್ ಕಂಪನಿಯಿಂದ ಸಾವಿರಾರು ಕೋಟಿ ರೂ ವಂಚನೆ (Fraud) ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಬಳಿಕ ಹಾವೇರಿ, ರಾಯಚೂರು ಮತ್ತು ತುಮಕೂರಿನಲ್ಲೂ ದುಷ್ಕರ್ಮಿಗಳು ಜನರಿಗೆ ಲಕ್ಷಾಂತರ ರೂ ವಂಚಿಸಿದ್ದರು. ಇದೀಗ ಚಿತ್ರದುರ್ಗದಲ್ಲಿ (chitradurga) ಆಂಧ್ರ ಮೂಲದ ಕಂಪನಿಯಿಂದ ಸುಮಾರು 470 ಜನರಿಂದ 60 ರಿಂದ 70 ಕೋಟಿ ರೂ ಹಣ ಸಂಗ್ರಹಿಸಿ ವಂಚಿಸಲಾಗಿದೆ. ಸದ್ಯ ವಂಚನೆಗೊಳಗಾದ ಜನರು ಜಿಲ್ಲಾ ಪೊಲೀಸ್​ ಕಛೇರಿಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿ ಮಹಾವಂಚನೆ ಬೆಳಕಿಗೆ
  • ಉದ್ಯೋಗ, ವಿಶೇಷ‌ ಪ್ಯಾಕೇಜ್ ನೆಪದಲ್ಲಿ ವಂಚನೆ
  • ನ್ಯಾಯ ಕೊಡಿಸುವಂತೆ ಅಳಲು ತೋಡಿಕೊಂಡ ಸಂತ್ರಸ್ತ ಜನರು

ನಡೆದಿದ್ದೇನು?

ಆಂಧ್ರ ಮೂಲದ ಎಸ್‌ಎಲ್‌ವಿ ಕಂಪನಿ ಉದ್ಯೋಗ ಹಾಗೂ ವಿಶೇಷ ಪ್ಯಾಕೇಜ್ ಆಮಿಷ ತೋರಿಸಿ ಚಿತ್ರದುರ್ಗದ ಸುಮಾರು 470 ಜನರಿಗೆ 60 ರಿಂದ 70 ಕೋಟಿ ರೂ ವಂಚಿಸಿದೆ. ರಾಜೇಶ್ ಬೊಮ್ಮಾಲ ಎಂಬುವವನು ಅಮಾಯಕ ಜನರಿಗೆ ವಂಚಿಸಿದ್ದಾನೆ.

ಇದನ್ನೂ ಓದಿ: ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ

ಈ ರಾಜೇಶ್ ಬೊಮ್ಮಾಲ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಕಂಪನಿ ಬಗ್ಗೆ ಆಕರ್ಷಕ ಪ್ರಚಾರ ಮಾಡಿದ್ದಾನೆ. ಇದನ್ನು ನಂಬಿ ನೂರಾರು ಕೂಲಿಕಾರ್ಮಿಕರು, ಗೃಹಿಣಿಯರು, ನಿರುದ್ಯೋಗಿ ಯುವಕರು ಫೈನಾನ್ಸ್​ನಲ್ಲಿ ಸಾಲ ಮಾಡಿ ಕಂಪನಿಗೆ ಹಣ ಕಟ್ಟಿದ್ದಾರೆ.

ಚಿನ್ನಾಭರಣ, ಆಸ್ತಿಪತ್ರ ಒತ್ತೆಯಿಟ್ಟು ಹಣ ತುಂಬಿದ ಜನ

ಅಷ್ಟೇ ಅಲ್ಲದೆ ಇನ್ನು ಕೆಲವರು ಚಿನ್ನಾಭರಣ, ಆಸ್ತಿಪತ್ರವನ್ನೂ ಒತ್ತೆಯಿಟ್ಟು ಕಂಪನಿಗೆ ಹಣ ತುಂಬಿದ್ದರು. ಆದರೆ ಇದೀಗ ವಂಚಕರು ಹಣದೊಂದಿಗೆ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದು, ಜನರಿಗೆ ದಿಕ್ಕು ತೋಚದಂತಾಗಿದೆ. ಹಾವೇರಿ, ರಾಯಚೂರು, ತುಮಕೂರು ಮಾದರಿಯಲ್ಲೇ ಚಿತ್ರದುರ್ಗದಲ್ಲೂ ವಂಚನೆ ನಡೆದಿದೆ. ಸದ್ಯ ನ್ಯಾಯ ಕೊಡಿಸುವಂತೆ ಸಂತ್ರಸ್ತ ಜನರು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಇಲ್ಲಿನ ಜನ್ರು ತುಂಬಾ ಒಳ್ಳೆಯವ್ರು: ಭಾರತೀಯರ ಗುಣವನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆಯ – Kannada News | Australian woman praises Indians for helping her

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹಿಂದೆ ಮುಂದೆ ಯೋಚಿಸುವವರೇ ಹೆಚ್ಚು. ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವ ಗುಣವಿರುವ ಜನರನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇಂತಹ ಗುಣವನ್ನು ಭಾರತೀಯರಲ್ಲಿ ಕಂಡು ವಿದೇಶಿ ಮಹಿಳೆ ಫುಲ್ ಖುಷ್ ಆಗಿದ್ದಾಳೆ. ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ವೇಳೆ ಆಸ್ಟ್ರೇಲಿಯನ್ ಮಹಿಳೆ (Australian woman)  ತನಗೆ ಭಾರತೀಯರು ತನಗೆ ಸಹಾಯ ಮಾಡಿದ್ದನ್ನು ನೆನಪಿಸಿಕೊಂಡಿದ್ದಾಳೆ. ಅವರ ಒಳ್ಳೆಯ ಗುಣ ಹಾಗೂ ಒಳ್ಳೆತನವನ್ನು ಮೆಚ್ಚಿಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಭಾರತದಲ್ಲಿ ಒಂಟಿಯಾಗಿ ಸುತ್ತಾಟ ಮಾಡುತ್ತಿರುವ ಪೈಜ್ (Paige) ಎಂಬ ವಿದೇಶಿ ಮಹಿಳೆ ಇಲ್ಲಿನ ಸುಂದರ ಕ್ಷಣಗಳ ಜತೆಗೆ ಭಾರತೀಯ ಒಳ್ಳೆತನದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾಳೆ. ಈ ಕ್ಲಿಪಿಂಗ್ ನಲ್ಲಿ ನನಗೆ ಪರಿಚಯವೇ ಇಲ್ಲದ ವ್ಯಕ್ತಿ ಆದರೂ ನಾನು ಸುರಕ್ಷಿತವಾಗಿ ನನ್ನ ಹೋಟೆಲ್‌ಗೆ​ ತಲುಪಿಸಿದರು. ಅಷ್ಟೇ ಅಲ್ಲದೇ, ಮತ್ತೊಂದು ಊಹಿಸಲಾಗದ ಘಟನೆ ಮೆಡಿಕಲ್​ ಸ್ಟೋರ್​ನಲ್ಲಿ ನಡೆಯಿತು. ಬಿಲ್ ಪಾವತಿಸುವಾಗ ಕ್ಯಾಷಿಯರ್ ಬಳಿ ಮರಳಿ ಕೊಡಲು ಚಿಲ್ಲರೆ ಹಣ ಇರಲಿಲ್ಲ. ಹೀಗಾಗಿ ನನಗೆ ಉಚಿತ ಹ್ಯಾಂಡ್ ಸ್ಯಾನಿಟೈಸರ್​ ನೀಡಿದ್ದರು ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ನಾನು ದೆಹಲಿಯಲ್ಲಿ ದಾರಿ ತಪ್ಪಿ ಬಂದಾಗ ನನ್ನನ್ನು ಬಸ್​ ನಿಲ್ದಾಣಕ್ಕೆ ಮಹಿಳೆಯೂ ಕರೆದುಕೊಂಡು ಬಂದರು. ಮಳೆಯಲ್ಲಿ ಸಿಲುಕಿಕೊಂಡಾಗ ತನ್ನ ಸ್ಕೂಟರ್‌ನಲ್ಲಿ ಹೋಗಲು ಸ್ಥಳೀಯ ರೆಸ್ಟೋರೆಂಟ್‌ನ ವ್ಯಕ್ತಿಯೊಬ್ಬರು ಆಫರ್ ನೀಡಿದ್ದರು. ಇನ್ನು ವೃದ್ಧ ಮಹಿಳೆಯೊಬ್ಬರು ನೀವು ಟ್ರೈ ಮಾಡ್ಲೇ ಬೇಕು ಅಂತ ನನಗೆ ಒಂದು ಪ್ಲೇಟ್​ ಪಕೋಡಾ ಕೂಡಾ ನೀಡಿದ್ದರು. ಈ ಎಲ್ಲವೂ ಸ್ವಾರ್ಥವಿಲ್ಲದೆ, ಕೇವಲ ತಮ್ಮ ದೇಶಕ್ಕೆ ಬಂದ ವಿದೇಶಿಗರು ಹಸಿದಿರಬಾರದು. ಯಾವಾಗಲೂ ಸುರಕ್ಷಿತವಾಗಿರಬೇಕು ಎಂದು ಬಯಸುವ ಈ ಮನಸ್ಸುಗಳೇ ಭಾರತವನ್ನು ಅತ್ಯಂತ ಆತಿಥ್ಯಕಾರಿ ದೇಶವನ್ನಾಗಿ ಮಾಡಿವೆ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಭಾರತಕ್ಕೆ ಸ್ವಾಗತಿಸುವುದು ಯಾವಾಗಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ದೇಶವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತೀಯರು ವಿಶಾಲ ಹೃದಯದವರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ 5 ಸ್ವಾರಸ್ಯಕರ ಘಟನೆಗಳಿವು – Kannada News | Karnataka MLC Elections: Five Eye Catching Incidents You Shouldn’t Miss

ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ ಸ್ವಾರಸ್ಯಕರ ಘಟನೆಗಳಿವುImage Credit source: Tv9 Kannada

ಬೆಂಗಳೂರು, ಜೂನ್​​ 18: ಭಾರಿ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ಮುಕ್ತಾಯಗೊಂಡಿದ್ದು, ಎಲ್ಲ 222 ಶಾಸಕರಿಂದ ಮತದಾನ ನಡೆದಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮೊದಲನೇ ಮತ ಚಲಾಯಿಸಿದ್ದರೆ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕೊನೆಯದಾಗಿ ಮತ ಹಾಕಿದ್ದಾರೆ. ರಾಜ್ಯದ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಚುನಾವಣೆ ಕೆಲವು ಸ್ವಾರಸ್ಯಕರರ ಘಟನೆಗಳಿಗೂ ಸಾಕ್ಷಿಯಾಗಿದೆ.

‘ಕೈ’ ನಾಯಕರ ಜೊತೆ ಬಿಜೆಪಿ ಉಚ್ಛಾಟಿತ ಶಾಸಕರು

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕರಾದ ಎಸ್​​.ಟಿ. ಸೋಮಶೇಖರ್​​ ಮತ್ತು ಶಿವರಾಮ ಹೆಬ್ಬಾರ್​​ ಚುನಾವಣೆ ವೇಳೆ ಕಾಂಗ್ರೆಸ್​​ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದು ಕಂಡುಬಂತು. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ನಾಯಕರಿದ್ದ ಕೊಠಡಿಯಲ್ಲಿ ಹೆಬ್ಬಾರ್, ಸೋಮಶೇಖರ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ‘ಆತ್ಮಸಾಕ್ಷಿ’ ಮತ ಹಾಕಿದ ಎಸ್.ಟಿ.ಸೋಮಶೇಖರ್; ಜಿಟಿಡಿ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಹತ್ವದ ಹೇಳಿಕೆ

ಡಿಸಿಎಂಗಾಗಿ ಕಾದು ಕಾದು ಮತ ಚಲಾಯಿಸಿದ ಸಿಎಂ

ಡಿಸಿಎಂ ಪರಮೇಶ್ವರ್​​ ಜೊತೆ ಮತಚಲಾಯಿಸಲೆಂದು ಕಾದು ಕಾದು ಕೊನೆಗೆ ಸಿಎಂ ಡಿ.ಕೆ. ಶಿವಕುಮಾರ್​ ಒಬ್ಬರೇ ತೆರಳಿ ಮತ ಚಲಾಯಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಡಾ.ಪರಮೇಶ್ವರ್ ಬರ್ತಾರೆ ಎನ್ನಲಾಗಿತ್ತಾದರೂ 1.30 ಕಳೆದರೂ ಬಂದಿರಲಿಲ್ಲ. ಅನಾರೋಗ್ಯದ ಹಿನ್ನೆಲೆ ತಡವಾಗಿ ಪರಮೇಶ್ವರ್​​ ಆಗಮಿಸಿದ್ದು, ಮಾಸ್ಕ್‌ ಹಾಕಿಕೊಂಡು ಬಂದೇ ವೋಟ್​​ ಮಾಡಿದ್ದಾರೆ.

ಯತ್ನಾಳ್​​ ಮತ ಚಲಾವಣೆ ವೇಳೆ ಹೈಡ್ರಾಮಾ

ಇನ್ನು ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್​​ ಮತ ಹಾಕಲು ಬಂದ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಯತ್ನಾಳ್‌ ಮತ ಹಾಕಲು ಬಂದಾಗ ಮತಕೇಂದ್ರದಲ್ಲಿದ್ದ ಕಾಂಗ್ರೆಸ್​​ನ ಉಗ್ರಪ್ಪ ಆಕ್ಷೇಪ ತೆಗೆದಿದ್ದು, ಮತ ಹಾಕುವ ಬಗ್ಗೆ ಅವರು ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಹೀಗಾಗಿ ಅವರ ಮತವನ್ನು ಮತಪೆಟ್ಟಿಗೆಗೆ ಹಾಕಬೇಡಿ ಎಂದು ಚುನಾವಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಆದರೆ ಇದನ್ನು ಬಿಜೆಪಿ ಮತಗಟ್ಟೆ ಏಜೆಂಟ್ ಗಳಾದ ಎನ್. ರವಿಕುಮಾರ್ ಮತ್ತು ಕೆ.ಎಸ್. ನವೀನ್ ವಿರೋಧಿಸಿದ್ದು, ಅಂತಿಮವಾಗಿ ಉಗ್ರಪ್ಪ ಆಕ್ಷೇಪವನ್ನು ತಿರಸ್ಕರಿಸಿ ಯತ್ನಾಳ್​​ಗೆ ಮತ ಹಾಕಲು ಚುನಾವಣಾಧಿಕಾರಿ ಅವಕಾಶ ನೀಡಿದ್ದಾರೆ.

ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿದ ಜಿಟಿಡಿ

ಚುನಾವಣಾ ಅಖಾಡಕ್ಕಿಳಿಸಿರುವ ಏಕೈಕ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್​​ ನಾನಾ ಕಸರತ್ತು ನಡುವೆ, ಜಿ.ಟಿ.ದೇವೇಗೌಡ ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿರೋದು ಭಾರಿ ಕುತೂಹಲ ಮೂಡಿಸಿದೆ. ಜಿ.ಟಿ.ದೇವೇಗೌಡ ಮತ ಜೆಡಿಎಸ್​ಗೆ ತಪ್ಪಿರುವ ಸಾಧ್ಯತೆ ಬಗ್ಗೆಯೂ ಲೆಕ್ಕಾಚಾರ ಶುರುವಾಗಿದೆ.

ವ್ಹೀಲ್​​ ಚೇರ್​​ನಲ್ಲಿ ಬಂದ ಕಾಗವಾಡ ಶಾಸಕ

ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಆರೋಗ್ಯ ಸಮಸ್ಯೆಯ ನಡುವೆಯೂ ವ್ಹೀಲ್​​ ಚೇರ್​​ನಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ್ತೋರ್ವ ಶಾಸಕ ಇಕ್ಬಾಲ್​​ ಹುಸೇನ್​​ ಕೂಡ ಅನಾರೋಗ್ಯದ ನಡುವೆಯೂ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿರೋದು ಗಮನ ಸೆಳೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:32 pm, Thu, 18 June 26

Source link

ಈ ವರ್ಷದಲ್ಲಿ ಸಖತ್ ಏರಿಕೆಯಾಗುತ್ತಾ ಚಿನ್ನದ ಬೆಲೆ; ಜೆಪಿ ಮೋರ್ಗನ್ ವರದಿಯಲ್ಲಿ ಗೋಲ್ಡ್ ಪ್ರೆಡಿಕ್ಷನ್ – Kannada News | Gold Rate to increase by 40pc in next few months, as per JP Morgan forecast report

ನವದೆಹಲಿ, ಜೂನ್ 18: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ (Gold Rates) ಬಹುತೇಕ ಇಳಿಕೆ ಕಾಣುತ್ತಾ ಬಂದಿದೆ. ಬೆಲೆ ಇನ್ನಷ್ಟು ಇಳಿಯಬಹುದು ಎಂದು ಕೆಲವರು ಗ್ರಹಿಸಿದ್ದಾರೆ. ಆದರೆ, ಜೆ.ಪಿ. ಮೋರ್ಗನ್ ಗ್ಲೋಬಲ್ ರಿಸರ್ಚ್ ಸಂಸ್ಥೆಯು ಚಿನ್ನದ ಬೆಲೆ ಏರಿಕೆ ಸಾಧ್ಯತೆ ಬಗ್ಗೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಈ ರಿಸರ್ಚ್ ಸಂಸ್ಥೆಯ ವರದಿ ಪ್ರಕಾರ ಚಿನ್ನದ ಬೆಲೆ ಈ ವರ್ಷ ಹಾಗೂ ಮುಂದಿನ ವರ್ಷ ಸತತವಾಗಿ ಏರಿಕೆಯಾಗಬಹುದು ಎನ್ನಲಾಗಿದೆ.

ಜೆ.ಪಿ. ಮೋರ್ಗನ್ ತನ್ನ ವರದಿಯಲ್ಲಿ, 2026ರ ನಾಲ್ಕನೇ ತ್ರೈಮಾಸಿಕದ ಅಂತ್ಯದ ವೇಳೆಗೆ (2026ರ ಡಿಸೆಂಬರ್) ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ (ounce) ಸರಾಸರಿ $6,000 ತಲುಪಬಹುದು ಎಂದು ಅಂದಾಜಿಸಿದೆ. ಪ್ರಸ್ತುತ $4,300ರ ಮಟ್ಟದಲ್ಲಿರುವ ಚಿನ್ನದ ದರವು ವರ್ಷಾಂತ್ಯದ ವೇಳೆಗೆ ಸುಮಾರು 40% ರಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ಸಂಸ್ಥೆ ವಿಶ್ಲೇಷಿಸಿದೆ. ಅಷ್ಟೇ ಅಲ್ಲ, 2027ರ ಅಂತ್ಯದ ವೇಳೆಗೆ ಇದು $6,300 ಕ್ಕೆ ಏರಬಹುದು ಎಂದೂ ನಿರೀಕ್ಷಿಸಲಾಗಿದೆ.

ಈ ವರ್ಷ ಚಿನ್ನದ ಬೆಲೆ ಏರಿಕೆ ಕಾಣದಿರಲು ಕಾರಣಗಳೇನು?

2025ರಲ್ಲಿ ಚಿನ್ನವು ಭಾರಿ ಜಿಗಿತ (65%) ಕಂಡಿದ್ದರೂ, 2026ರ ಮೊದಲಾರ್ಧದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಏರಿಕೆಯಾಗಿದ್ದು, ಇದು ಹಣದುಬ್ಬರದ ಆತಂಕವನ್ನು ಹೆಚ್ಚಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇತ್ತ, ಚಿನ್ನವು ಬಡ್ಡಿ ನೀಡದ ಆಸ್ತಿಯಾದ್ದರಿಂದ ಈ ಹಳದಿ ಲೋಹದ ಮೇಲಿನ ಆಕರ್ಷಣೆ ಕಡಿಮೆಯಾಗಬಹುದು.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 80 ಡಾಲರ್​ಗಿಂತ ಕಡಿಮೆ; ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಗೊಳ್ಳುತ್ತಾ?

ಇರಾನ್ ಶಾಂತಿ ಒಪ್ಪಂದದ ಪ್ರಭಾವ

ಜೂನ್ 19ರಂದು ನಡೆಯಲಿರುವ ಅಮೆರಿಕ-ಇರಾನ್ ಶಾಂತಿ ಒಪ್ಪಂದವು ಚಿನ್ನದ ಬೆಲೆಗೆ ಒಂದು “ಗೇಮ್ ಚೇಂಜರ್” ಆಗಬಹುದು ಎಂದು ಭಾವಿಸಲಾಗಿದೆ. ಈ ಒಪ್ಪಂದದಿಂದ ತೈಲ ಬೆಲೆಗಳು ಇಳಿಕೆಯಾಗಿ, ಡಾಲರ್ ಮೌಲ್ಯ ಕಡಿಮೆಯಾದರೆ, ಅದು ಚಿನ್ನದ ದರ ಏರಿಕೆಗೆ ಪೂರಕವಾಗಲಿದೆ.

ದೀರ್ಘಕಾಲೀನ ಲಾಭದ ಅಂಶಗಳು

ಜೆ.ಪಿ. ಮೋರ್ಗನ್ ಸಂಶೋಧಕರು ಚಿನ್ನವು ದೀರ್ಘಾವಧಿಯಲ್ಲಿ ಏರಿಕೆ ಕಾಣಲು ಕೆಲವು ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ:

  • ನಿರಂತರ ಹಣದುಬ್ಬರ ಮತ್ತು ಕೊಳ್ಳುವ ಶಕ್ತಿಯ ಇಳಿಕೆ
  • ಅಮೆರಿಕದ ವಿತ್ತೀಯ ನೀತಿಯ ಅನಿಶ್ಚಿತತೆ.
  • ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು.
  • ವಿಶ್ವದ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು.

ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

ಭಾರತದಲ್ಲಿ ಬೆಲೆ ಇನ್ನೂ ತೀವ್ರ ಏರಿಕೆ?

ಜೆ.ಪಿ. ಮೋರ್ಗನ್ ಸಂಸ್ಥೆಯು ಜಾಗತಿಕ ಚಿನಿವಾರ ಮಾರುಕಟ್ಟೆಯ ದಿಕ್ಕನ್ನು ಗ್ರಹಿಸಿದೆ. ಆದರೆ, ಭಾರತದಲ್ಲಿ ಚಿನ್ನದ ಬೆಲೆ ಮೋರ್ಗನ್ ವರದಿಯ ಅಂದಾಜಿಗಿಂತಲೂ ಹೆಚ್ಚು ಏರಿಕೆ ಆಗಲಿದೆ. ಫಾರೆಕ್ಸ್ ನಿಧಿಯನ್ನು ಉಳಿಸುವ ಸಲುವಾಗಿ ಸರ್ಕಾರವು ಚಿನ್ನದ ಖರೀದಿಯನ್ನು ಕಡಿಮೆ ಮಾಡಿದೆ. ಒಂದು ವೇಳೆ, ಜನಸಾಮಾನ್ಯರು ಚಿನ್ನದ ಖರೀದಿ ಕಡಿಮೆ ಮಾಡದೇ ಹೋದರೆ ಅವಶ್ಯಕ ಚಿನ್ನದ ಕೊರತೆಯಿಂದ ಅದರ ಬೆಲೆ ಭರ್ಜರಿ ಏರಿಕೆ ಆದರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ದಿನ ಒಂದೇ ರೀತಿಯ ಅಪರೂಪದ ದಾಖಲೆ ಬರೆದ ಭಾರತ, ಪಾಕ್ ಆಟಗಾರ್ತಿಯರು – Kannada News | Shafali Verma and Fatima Sana Make T20 World Cup History with Rare All Round Record

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಭಾರತ ಹಾಗೂ ಪಾಕಿಸ್ತಾನ (India Pakistan) ತಂಡಗಳು ಒಂದೇ ದಿನ ಕಣಕ್ಕಿಳಿದಿದ್ದವು. ಆದರೆ ಈ ಎರಡೂ ತಂಡಗಳು ಬೇರೆ ಬೇರೆ ತಂಡಗಳ ವಿರುದ್ಧ ಪಂದ್ಯಗಳನ್ನಾಡಿದವು. ಮೊದಲಿಗೆ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್ ತಂಡವನ್ನು 95 ರನ್​ಗಳಿಂದ ಸೋಲಿಸಿ ದಾಖಲೆಯ ಗೆಲುವು ದಾಖಲಿಸಿದರೆ, ಇತ್ತ ಪಾಕಿಸ್ತಾನ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತು. ಒಂದೆಡೆ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಇನ್ನೊಂದೆಡೆ ಪಾಕಿಸ್ತಾನ ಸತತ ಎರಡು ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಆದಾಗ್ಯೂ ಭಾರತ ಹಾಗೂ ಪಾಕಿಸ್ತಾನ ತಂಡದ ಇಬ್ಬರು ಆಟಗಾರ್ತಿಯರು ಒಂದೇ ದಿನ ಒಂದೇ ರೀತಿಯ ಪ್ರದರ್ಶನವನ್ನು ನೀಡುವ ಮೂಲಕ ಟಿ20 ವಿಶ್ವಕಪ್​ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಸ್ಟಾರ್ ಓಪನರ್ ಶಫಾಲಿ ವರ್ಮಾ ಮತ್ತು ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ತಮ್ಮ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ವಿಶ್ವ ಕ್ರಿಕೆಟ್ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಇದುವರೆಗೆ ವಿಶ್ವದ ಕೇವಲ ನಾಲ್ಕು ಮಹಿಳಾ ಆಟಗಾರ್ತಿಯರಿಗೆ ಮಾತ್ರ ಸಾಧ್ಯವಾದ ಅಪರೂಪದ ದಾಖಲೆಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

50+ ರನ್ ಜೊತೆಗೆ 3ವಿಕೆಟ್

ಜೂನ್ 17 ರಂದು ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 38 ಎಸೆತಗಳಲ್ಲಿ 55 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ನೆರವಾದರು. ನಂತರ ಬೌಲಿಂಗ್‌ನಲ್ಲೂ ಮ್ಯಾಜಿಕ್ ಮಾಡಿದ ಶಫಾಲಿ ಎದುರಾಳಿ ತಂಡದ 3 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಈ ಅದ್ಭುತ ಪ್ರದರ್ಶನದೊಂದಿಗೆ, ಶಫಾಲಿ ವರ್ಮಾ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ (50+) ಗಳಿಸಿದ ಮತ್ತು ಕನಿಷ್ಠ 3 ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೆ ಭಾರತದ ಪರ ಈ ಅಪರೂಪದ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ದಾಖಲೆಯೂ ಶಫಾಲಿ ಪಾಲಾಯಿತು.

ಪಾಕ್ ನಾಯಕಿಯಿಂದಲೂ ಅಮೋಘ ಪ್ರದರ್ಶನ

ಭಾರತದ ಪಂದ್ಯ ಮುಗಿದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನವು ಅದೇ ದಿನದಂದು ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿತು. ಈ ಪಂದ್ಯದಲ್ಲಿ, ಪಾಕಿಸ್ತಾನದ ಮಹಿಳಾ ನಾಯಕಿ ಫಾತಿಮಾ ಸನಾ ಕೂಡ ಬ್ಯಾಟಿಂಗ್‌ನಲ್ಲಿ 55 ರನ್‌ಗಳ ಇನ್ನಿಂಗ್ಸ್ ಆಡಿ ನಂತರ ಬೌಲಿಂಗ್​ನಲ್ಲಿ 3 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಫಾತಿಮಾ ಸನಾ ಕೂಡ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ (50+) ಗಳಿಸಿದ ಮತ್ತು ಕನಿಷ್ಠ 3 ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ದಾಖಲೆ ಬರೆದರು. ಇದರ ಜೊತೆಗೆ ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Womens T20 World Cup 2026: ಟಿ20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಸ್ಮೃತಿ- ಶಫಾಲಿ ಜೋಡಿ

ಪಟ್ಟಿಯಲ್ಲಿ ಕೇವಲ ನಾಲ್ಕು ಆಟಗಾರ್ತಿಯರು

ಮಹಿಳಾ ಟಿ20 ವಿಶ್ವಕಪ್‌ನ ಸುದೀರ್ಘ ಇತಿಹಾಸದಲ್ಲಿ, ಒಂದೇ ಪಂದ್ಯದಲ್ಲಿ 50 ಕ್ಕೂ ಹೆಚ್ಚು ರನ್ ಗಳಿಸಿ, 3 ವಿಕೆಟ್‌ಗಳನ್ನು ಪಡೆಯುವುದು ಅತ್ಯಂತ ಕಷ್ಟಕರವಾದ ಕೆಲಸ. ಶಫಾಲಿ ವರ್ಮಾ ಮತ್ತು ಫಾತಿಮಾ ಸನಾ ಅವರಿಗೂ ಮೊದಲು, ವಿಶ್ವ ಕ್ರಿಕೆಟ್‌ನಲ್ಲಿ ಇಬ್ಬರು ಮಹಿಳಾ ಆಟಗಾರ್ತಿಯರು ಮಾತ್ರ ಈ ಸಾಧನೆ ಮಾಡಿದ್ದರು. ಅವರಲ್ಲಿ, ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಹೇಲಿ ಮ್ಯಾಥ್ಯೂಸ್ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ್ತಿ ಸನ್ ಲೂಯಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಈಗ, ಭಾರತದ ಶಫಾಲಿ ಮತ್ತು ಪಾಕಿಸ್ತಾನದ ಫಾತಿಮಾ ಸೇರ್ಪಡೆಯೊಂದಿಗೆ, ಈ ವಿಶೇಷ ಕ್ಲಬ್‌ನ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಏರಿದೆ. ಏಷ್ಯಾ ಖಂಡದ ಇಬ್ಬರು ಆಟಗಾರ್ತಿಯರೇ ಒಂದೇ ದಿನ ಈ ದಾಖಲೆ ನಿರ್ಮಿಸಿದ್ದಾರೆ ಎಂಬುದು ಗಮನಾರ್ಹ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:26 pm, Thu, 18 June 26

Source link

CSIR-NAL Recruitment: ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಸ್‌ನಲ್ಲಿ ಉದ್ಯೋಗವಕಾಶ; ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ! – Kannada News | CSIR NAL Bangalore Recruitment: Project Staff Walk in Interview for Research Jobs 2026

ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗ

ಬೆಂಗಳೂರಿನಲ್ಲಿ ತಾಂತ್ರಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಪ್ರತಿಭಾವಂತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕೇಂದ್ರ ಸರ್ಕಾರದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರೀಯಲ್ ರಿಸರ್ಚ್ (CSIR) ಅಧೀನಕ್ಕೆ ಒಳಪಡುವ ಪ್ರತಿಷ್ಠಿತ ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳು (NAL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಈ ಪ್ರಕಟಣೆಯ ಪ್ರಕಾರ, ಬೆಂಗಳೂರಿನ ಹೆಚ್.ಎ.ಎಲ್ ಏರ್‌ಪೋರ್ಟ್ ರಸ್ತೆಯ ಕೊಡಿಹಳ್ಳಿಯಲ್ಲಿರುವ ಸಂಸ್ಥೆಯ ಕ್ಯಾಂಪಸ್‌ನಲ್ಲಿ ನೇರ ಸಂದರ್ಶನವನ್ನು (Walk-in-interview) ಆಯೋಜಿಸಲಾಗಿದೆ.

ವಿವಿಧ ಪ್ರಾಜೆಕ್ಟ್ ಸ್ಟಾಫ್ ಹುದ್ದೆಗಳ ಭರ್ತಿ:

ಸಿಎಸ್ಐಆರ್-ಎನ್ಎಎಲ್ ಸಂಸ್ಥೆಯು ತನ್ನ ವಿವಿಧ ನಡೆಡುತ್ತಿರುವ ಸಂಶೋಧನೆ ಹಾಗೂ ಅಭಿವೃದ್ಧಿ ಯೋಜನೆಗಳಿಗಾಗಿ (Projects) ಈ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಪ್ರಕಟಣೆ ಸಂಖ್ಯೆ 12/2026/PS ಅಡಿಯಲ್ಲಿ ‘ಪ್ರಾಜೆಕ್ಟ್ ಸ್ಟಾಫ್’ (Project Staff) ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಕೌಶಲ್ಯ ಹೊಂದಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ನೇರ ಸಂದರ್ಶನ ನಡೆಯುವ ಪ್ರಮುಖ ದಿನಾಂಕಗಳು:

ಈ ಉದ್ಯೋಗ ನೇಮಕಾತಿಯ ಸಂದರ್ಶನಗಳನ್ನು ವಿವಿಧ ಹಂತಗಳಲ್ಲಿ ನಡೆಸಲು ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಜೂನ್ 19, ಜೂನ್ 22,ಜೂನ್ 24 ಮತ್ತು ಜೂನ್ 29 ರಂದು ನಡೆಯುವ ವಾಕ್-ಇನ್ ಇಂಟರ್ವ್ಯೂಗೆ ಹಾಜರಾಗಲು ಸೂಚಿಸಲಾಗಿದೆ. ಪ್ರತಿಯೊಂದು ಹುದ್ದೆಯ ಅವಶ್ಯಕತೆಗೆ ತಕ್ಕಂತೆ ನಿಗದಿತ ದಿನಗಳಂದು ಸಂದರ್ಶನ ಪ್ರಕ್ರಿಯೆಗಳು ಜರುಗಲಿವೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಹೆಚ್ಕಿನ ಮಾಹಿತಿ ಮತ್ತು ಅಧಿಕೃತ ವೆಬ್‌ಸೈಟ್ ವಿವರ:

ಈ ಹುದ್ದೆಗಳಿಗೆ ಇರಬೇಕಾದ ನಿಖರವಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಮಾಸಿಕ ವೇತನ ಮತ್ತು ಸಂದರ್ಶನ ನಡೆಯುವ ನಿಖರ ಸಮಯದ ಸಂಪೂರ್ಣ ವಿವರಗಳನ್ನು ತಿಳಿಯಲು ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಅಭ್ಯರ್ಥಿಗಳು www.nal.res.in ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸಿಎಸ್ಐಆರ್-ಎನ್ಎಎಲ್ ನ ಆಡಳಿತದ ಹಿರಿಯ ನಿಯಂತ್ರಕರು (Sr. Controller of Administration) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಛತ್ತೀಸ್‌ಗಢದಲ್ಲಿ ಮರಳು ಮಾಫಿಯಾ ಅಟ್ಟಹಾಸ: ಬಿಜೆಪಿ ನಾಯಕನ ಕಾರಿಗೆ ಬೆಂಕಿ ಹಚ್ಚಿ ಕೊಲೆ – Kannada News | Koriya District Sand Mafia Rivalry: BJP Leader Bharat Singh Burnt Alive in Brutal Attack

ಛತ್ತೀಸ್​ಗಢ, ಜೂನ್ 18: ಛತ್ತೀಸ್​ಗಢದಲ್ಲಿ ಮರಳು ಮಾಫಿಯಾ ಅಟ್ಟಹಾಸ  ತಾರಕಕ್ಕೇರಿದ್ದು, ಬಿಜೆಪಿ(BJP) ನಾಯಕನ ಕಾರನ್ನು ಎರಡು ಟ್ರಕ್​ಗಳ ನಡುವೆ ಸಿಲುಕಿಸಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ ಭರತ್ ಸಿಂಗ್ (ಲಲ್ಲಾ ಸಿಂಗ್) ಅವರ ಫಾರ್ಚೂನರ್ ಕಾರನ್ನು ಟ್ರಕ್‌ಗಳ ಮಧ್ಯೆ ಸಿಲುಕಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಭೀಕರ ದುರಂತದಲ್ಲಿ ಭರತ್ ಸಿಂಗ್ ಸೇರಿದಂತೆ ಒಟ್ಟು ಮೂವರು ಸಜೀವ ದಹನವಾಗಿದ್ದಾರೆ.

ಸೋನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ ಗ್ರಾಮದಲ್ಲಿ ಮರಳು ಗಣಿಗಾರಿಕೆ ವಿವಾದ ಇತ್ಯರ್ಥಪಡಿಸಲು ಭರತ್ ಸಿಂಗ್ ತೆರಳಿದ್ದರು. ಈ ವೇಳೆ ಹೊಂಚು ಹಾಕಿದ್ದ ಎದುರಾಳಿ ಬಣ, ಅವರ ಫಾರ್ಚೂನರ್ ಕಾರಿನ ಮುಂದೆ ಮತ್ತು ಹಿಂದೆ ಟ್ರಕ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ ತಪ್ಪಿಸಿಕೊಳ್ಳದಂತೆ ಲಾಕ್ ಮಾಡಿದೆ.

ಕಾರನ್ನು ಸುತ್ತುವರಿದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ, ಭರತ್ ಸಿಂಗ್ ಸ್ಥಳದಲ್ಲೇ ಕಾರಿನೊಳಗೆ ಸಾವನ್ನಪ್ಪಿದ್ದಾರೆ. ಅವರೊಂದಿಗೆ ಇದ್ದ ಸೋದರಸಂಬಂಧಿ ನಾಗೇಂದ್ರ ಸಿಂಗ್ ಹಾಗೂ ಚಿಕಿತ್ಸೆ ವೇಳೆ ವೀರೇಂದ್ರ ಸಿಂಗ್ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಮಯಾಂಕ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿವಾದಕ್ಕೆ ಅಸಲಿ ಕಾರಣವೇನು?
ಭರತ್ ಸಿಂಗ್ (ಠಾಕೂರ್) ಬಣ ಮತ್ತು ಮತ್ತೊಬ್ಬ ಬಿಜೆಪಿ ನಾಯಕ ಮನೋಜ್ ತ್ರಿಪಾಠಿ ಕುಟುಂಬದ ನಡುವೆ ಈ ಭಾಗದ ಮರಳು ಗಣಿಗಾರಿಕೆ ಮತ್ತು ಸಾಗಣೆಯ ನಿಯಂತ್ರಣಕ್ಕಾಗಿ ತಿಂಗಳುಗಳಿಂದ ಜಗಳ ನಡೆಯುತ್ತಿತ್ತು. ಮೊದಲು ಕೇವಲ ವ್ಯಾಪಾರದ ವಿವಾದವಾಗಿದ್ದ ಇದು, ನಂತರ ಸ್ಥಳೀಯ ಪ್ರಾಬಲ್ಯದ ರಕ್ತಸಿಕ್ತ ಯುದ್ಧವಾಗಿ ಮಾರ್ಪಟ್ಟಿದೆ.

ಮತ್ತಷ್ಟು ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ

ಪೊಲೀಸರು ಇದುವರೆಗೆ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಎಂಬ ನಾಲ್ಕು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ 5 ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದು ಆಕಸ್ಮಿಕ ಘಟನೆಯಲ್ಲ, ಪಕ್ಕಾ ಪ್ಲಾನ್ ಮಾಡಿ ನಡೆಸಿರುವ ಕೊಲೆ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು, ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಿಯಾ ಜಿಲ್ಲೆಯ ಘಟನೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ತೀವ್ರವಾಗಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿಎಂ ವಿಷ್ಣು ಕಠಿಣ ಕಾನೂನು ಕ್ರಮದ ಭರವಸೆ ನೀಡಿದ್ದಾರೆ.

ಕೊರಿಯಾ ಜಿಲ್ಲೆಯ ಇತಿಹಾಸದಲ್ಲೇ ಇಂತಹ ಕ್ರೂರ ಘಟನೆ ಎಂದೂ ನಡೆದಿರಲಿಲ್ಲ ಎಂದು ಸ್ಥಳೀಯ ಶಾಸಕ ಭಯ್ಯಾಲಾಲ್ ರಾಜ್‌ವಾಡೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸದ್ಯ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದ್ದು, ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ನಾಯಿ ಕಡಿತದ ಪ್ರಕರಣಗಳಲ್ಲಿ ಕಳೆದ ವರ್ಷಕ್ಕಿಂತ ಶೇ 55 ರಷ್ಟು ಏರಿಕೆ! – Kannada News | Dog Bites in Bengaluru Surge by 55 Percent Year on Year

ಬೆಂಗಳೂರು, ಜೂನ್ 18: ಬೆಂಗಳೂರಿನಲ್ಲಿ ಬೀದಿನಾಯಿಗಳ (Stray Dogs) ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ ಶೇಕಡಾ 55 ರಷ್ಟು ಭಾರಿ ಏರಿಕೆ ಕಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಕಳೆದ ವರ್ಷಕ್ಕಿಂತ ನಾಯಿ ಕಡಿತದ ಪ್ರಕರಣಗಳು ಶೇಕಡಾ 55 ಹೆಚ್ಚಾಗಿದೆ.
  • ಪ್ರಸಕ್ತ ವರ್ಷದ ಮೊದಲ ಐದು ತಿಂಗಳಲ್ಲೇ 18,140 ಪ್ರಕರಣಗಳು ದಾಖಲಾಗಿವೆ.
  • ನಿಖರವಾದ ವರದಿ ಸಲ್ಲಿಕೆ ಮತ್ತು ಹೆಚ್ಚಿದ ಸಾರ್ವಜನಿಕ ಜಾಗೃತಿಯೂ ಕಾರಣವಾಗಿದೆ.

ಬೆಂಗಳೂರು ಮಹಾನಗರ ಪ್ರದೇಶದಲ್ಲಿ (ಈಗಿನ ಗ್ರೇಟರ್ ಬೆಂಗಳೂರು ಅಥಾರಿಟಿ – GBA ವ್ಯಾಪ್ತಿ) 2026ರ ಮೊದಲ ಐದು ತಿಂಗಳಲ್ಲೇ ಬರೋಬ್ಬರಿ 18,140 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅಂದರೆ 2025ರ ಇದೇ ಅವಧಿಯಲ್ಲಿ (ಹಳೆಯ ಬಿಬಿಎಂಪಿ ವ್ಯಾಪ್ತಿ) ಈ ಸಂಖ್ಯೆ 11,647 ಆಗಿತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ ದಾಖಲಾದ ಈ ಬೃಹತ್ ಜಿಗಿತವು ನಗರದ ನಿವಾಸಿಗಳು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಸುರಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.

ಹೆಚ್ಚುತ್ತಿರುವ ಪ್ರಕರಣಗಳು

ಕೇವಲ ಐದು ತಿಂಗಳಲ್ಲಿ 18 ಸಾವಿರಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ದಿನನಿತ್ಯ ಸರಾಸರಿ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ನಾಯಿಗಳ ದಾಳಿ ತೀವ್ರಗೊಂಡಿದೆ. ರಾಜಧಾನಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ರೇಬೀಸ್ ಮುಕ್ತ ಯೋಜನೆ ಹಾಗೂ ಸಂತಾನಹರಣ ಚಿಕಿತ್ಸೆಗಳು (ABC) ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗುತ್ತಿಲ್ಲ ಎಂಬುದನ್ನು ಈ ದತ್ತಾಂಶಗಳು ಸಾಬೀತುಪಡಿಸುತ್ತಿವೆ.

ಈ ಭಾರಿ ಏರಿಕೆಗೆ ಕೇವಲ ನಾಯಿಗಳ ದಾಳಿ ಹೆಚ್ಚಿರುವುದು ಮಾತ್ರ ಕಾರಣವಲ್ಲ, ಬದಲಿಗೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿದೆ. ಹೀಗಾಗಿ ನಾಯಿಗಳಿಂದ ಸಣ್ಣ ಗೀರು ಅಥವಾ ಕಡಿತಕ್ಕೊಳಗಾದರೂ ಆಸ್ಪತ್ರೆಗೆ ಬಂದು ದೂರು ದಾಖಲಿಸುತ್ತಿರುವುದು ಮತ್ತು ಆಸ್ಪತ್ರೆಗಳಲ್ಲಿ ನಿಖರವಾದ ವರದಿ ಸಿದ್ಧವಾಗುತ್ತಿರುವುದು ಕೂಡ ಒಂದು ಪ್ರಮುಖ ಕಾರಣ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರಲ್ಲಿ ಮಿತಿ ಮೀರಿದ ಶ್ವಾನಗಳ ದಾಳಿ ಪ್ರಕರಣ: 5 ತಿಂಗಳಲ್ಲಿ 9.7 ಸಾವಿರ ಕೇಸ್​​

ಪ್ರಸ್ತುತ ಕರ್ನಾಟಕದಲ್ಲಿ ರೇಬೀಸ್ ರೋಗವನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಡ್ಡಾಯವಾಗಿ ವರದಿ ಮಾಡಬೇಕಾದ ಕಾಯಿಲೆ ಎಂದು ಘೋಷಿಸಲಾಗಿದೆ. ಆದಾಗ್ಯೂ, ತಳಮಟ್ಟದಲ್ಲಿ ಬೀದಿನಾಯಿಗಳ ಸಂಖ್ಯೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ಸೂಕ್ತ ಸುರಕ್ಷತೆ ಒದಗಿಸಲು ಸ್ಥಳೀಯ ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:31 pm, Thu, 18 June 26

Source link