ಕರ್ನಾಟಕ ಹವಾಮಾನ ವರದಿ: ಚಿಕ್ಕಮಗಳೂರು ಜನರೇ ಎಚ್ಚರ, ಬೆಳಿಗ್ಗೆ ದಟ್ಟ ಮಂಜು ಇರುವ ಕಾರಣ ವಾಹನ ಚಲಿಸುವಾಗ ಎಚ್ಚರ – Kannada News | Karnataka weather today dry cold wave continues bengaluru pleasant fog warning
ಬೆಂಗಳೂರು, ಜ.22: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದಿನ (ಜನವರಿ 22, 2026) ಹವಾಮಾನ ಶುಷ್ಕ ಮತ್ತು ಶೀತ ವಾತಾವರಣದಿಂದ ಕೂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಪ್ರಸ್ತುತ ಚಳಿಯ ತೀವ್ರತೆ ಮುಂದುವರಿದಿದ್ದು, ಒಣ ಹವಾಮಾನ (Dry Weather) ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಇಂದು ಆಹ್ಲಾದಕರ ಹವಾಮಾನವಿರಲಿದ್ದು, ಬೆಳಗಿನ ಜಾವ ಸಾಧಾರಣ ಮಂಜು ಇರಲಿದೆ. ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 16°C ಇರಲಿದೆ. ಗಾಳಿಯ ಗುಣಮಟ್ಟ (AQI) ಸಾಧಾರಣ ಮಟ್ಟದಲ್ಲಿದೆ. ಬೆಳಗಾವಿ, ವಿಜಯಪುರ…