Category Archives: Blog

Your blog category

ದಿಲ್ಲಿ ಜಿಮ್ಖಾನಾ ಕ್ಲಬ್​ಗೆ ಬೀಗ? ಹೃದಯಭಾಗದಲ್ಲಿ 27 ಎಕರೆಯಲ್ಲಿರವ ಈ ಕ್ಲಬ್ ಸುತ್ತಮುತ್ತಲ ವಿವಾದಗಳೇನು? – Kannada News | Delhi Gymkhana Club controveries and why govt want to close this historic club

ನವದೆಹಲಿ, ಮೇ 25: ರಾಷ್ಟ್ರರಾಜಧಾನಿಯ ಪ್ರತಿಷ್ಠಿತ ಲೂಟ್ಯನ್ಸ್ ಪ್ರದೇಶದಲ್ಲಿರುವ ಭಾರತದ ಅತ್ಯಂತ ಹಳೆಯ ಮತ್ತು ಗಣ್ಯ (Elite) ಕ್ಲಬ್‌ಗಳಲ್ಲಿ ಒಂದಾದ ‘ದೆಹಲಿ ಜಿಮ್ಖಾನಾ ಕ್ಲಬ್’ (Delhi Gymkhana Club) ಇತಿಹಾಸದ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಧಾನಿ ನಿವಾಸದ (Lok Kalyan Marg) ಪಕ್ಕದಲ್ಲೇ ಇರುವ, 27.3 ಎಕರೆ ವಿಸ್ತೀರ್ಣದ ಈ ಅತ್ಯಮೂಲ್ಯ ಸರ್ಕಾರಿ ಭೂಮಿಯನ್ನು ತಕ್ಷಣವೇ ವಾಪಸ್ ಪಡೆಯಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿ (L&DO) ಆದೇಶಿಸಿದೆ. ಕೇಂದ್ರ ಸರ್ಕಾರದ ಈ ಹಠಾತ್ ಆದೇಶವು ದೆಹಲಿಯ ರಾಜತಾಂತ್ರಿಕರು, ನಿವೃತ್ತ ಸೇನಾ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಜಿಮ್ಖಾನಾ ಕ್ಲಬ್ ಇರುವ ಜಾಗವು ಅತ್ಯಂತ ಸೂಕ್ಷ್ಮ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವಾದ ಪ್ರದೇಶದಲ್ಲಿದೆ (Highly Sensitive and Strategic Area).

ಈ ಪ್ರೀಮಿಯಂ ಭೂಮಿಯನ್ನು ದೇಶದ ರಕ್ಷಣಾ ಮೂಲಸೌಕರ್ಯಗಳನ್ನು (Defence Infrastructure) ಬಲಪಡಿಸಲು ಮತ್ತು ಇತರ ಪ್ರಮುಖ ಸಾರ್ವಜನಿಕ ಭದ್ರತಾ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

ಲೀಸ್ ರದ್ದು ಮಾಡಿದ ಸರ್ಕಾರ

1928 ರ ಮೂಲ ಲೀಸ್ ಒಪ್ಪಂದದ (Lease Deed) ‘ಸಾರ್ವಜನಿಕ ಉದ್ದೇಶ’ದ ನಿಯಮವನ್ನು (Clause 4) ಉಲ್ಲೇಖಿಸಿ, ಕೇಂದ್ರ ಸರ್ಕಾರವು ಕ್ಲಬ್‌ನ ಲೀಸ್ ಅನ್ನು ತಕ್ಷಣವೇ ರದ್ದುಗೊಳಿಸಿದೆ. ಜೂನ್ 5 ರೊಳಗೆ ಕ್ಲಬ್‌ನ ಎಲ್ಲಾ ಕಟ್ಟಡಗಳು, ಆಟದ ಮೈದಾನಗಳು ಮತ್ತು ಲಾನ್‌ಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್​ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ

47 ಕೋಟಿ ರೂಪಾಯಿ ಬಾಕಿ ಮತ್ತು ಹಳೆಯ ವಿವಾದಗಳು

ಕೇಂದ್ರದ ಈ ಕಠಿಣ ಕ್ರಮಕ್ಕೆ ಕೇವಲ ಭದ್ರತೆ ಮಾತ್ರ ಕಾರಣವಲ್ಲ, ಕಳೆದ ಕೆಲವು ವರ್ಷಗಳಿಂದ ಕ್ಲಬ್ ಸುತ್ತ ಹತ್ತಾರು ವಿವಾದಗಳು ಸುತ್ತಿಕೊಂಡಿವೆ:

  • ಬಾಡಿಗೆ ದರ ಏರಿಕೆ: ಕ್ಲಬ್‌ನ ವಾರ್ಷಿಕ ಬಾಡಿಗೆ ಕೇವಲ ₹409 ಇತ್ತು. ಆದರೆ ಸರ್ಕಾರ ಇದನ್ನು ಇತ್ತೀಚೆಗೆ ಪರಿಷ್ಕರಿಸಿದ್ದು, ಏಪ್ರಿಲ್ 2026 ರಲ್ಲಿ ಬರೋಬ್ಬರಿ ₹47.59 ಕೋಟಿ ಬಾಕಿ ಪಾವತಿಸುವಂತೆ ಕ್ಲಬ್‌ಗೆ ನೋಟಿಸ್ ನೀಡಿತ್ತು.
  • ಅತಿ ಗಣ್ಯರ ಅಪಾರ್ಟ್‌ಹೈಡ್ (ಘೆಟ್ಟೋಯಿಸಂ): ಕ್ಲಬ್ ಕೇವಲ ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಸೀಮಿತವಾಗಿದ್ದು, ಸಾಮಾನ್ಯ ಜನರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಮತ್ತು ಸದಸ್ಯತ್ವಕ್ಕಾಗಿ ಜನರು 30-40 ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಈ ಹಿಂದೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ (NCLAT) ತರಾಟೆಗೆ ತೆಗೆದುಕೊಂಡಿತ್ತು.
  • ಹಣಕಾಸು ಅಕ್ರಮಗಳು: ಕ್ರೀಡೆಯ ಹೆಸರಲ್ಲಿ ಜಾಗ ಪಡೆದು ಕೇವಲ ಶೇ. 2.7 ರಷ್ಟು ಹಣವನ್ನು ಮಾತ್ರ ಕ್ರೀಡೆಗೆ ಬಳಸಿ, ಉಳಿದ ಹಣವನ್ನು ಮದ್ಯ ಮತ್ತು ಮನರಂಜನೆಗೆ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ 2022 ರಿಂದ ಕ್ಲಬ್‌ನ ಆಡಳಿತವನ್ನು ಸರ್ಕಾರಿ ನೇಮಿತ ಸಮಿತಿಯೇ ನೋಡಿಕೊಳ್ಳುತ್ತಿದೆ.

ಕೋರ್ಟ್ ಮೆಟ್ಟಿಲೇರಿದ ಜಿಮ್ಖಾನಾ ಸದಸ್ಯರು; ನೌಕರರ ಆತಂಕ

ಸರ್ಕಾರದ ಈ ಹಠಾತ್ ಒಕ್ಕಲೆಬ್ಬಿಸುವಿಕೆ ಆದೇಶದ ವಿರುದ್ಧ ಕ್ಲಬ್‌ನ ಖಾಯಂ ಸದಸ್ಯರು ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

“ಯಾವುದೇ ಮುನ್ಸೂಚನೆ ಇಲ್ಲದೆ, ಕೇವಲ 15 ದಿನಗಳ ಕಾಲಾವಕಾಶ ನೀಡಿ ಶತಮಾನದ ಇತಿಹಾಸವಿರುವ ಸಂಸ್ಥೆಯನ್ನು ಖಾಲಿ ಮಾಡಲು ಹೇಳುತ್ತಿರುವುದು ಕಾನೂನುಬಾಹಿರ ಮತ್ತು ಬಲವಂತದ ಒಕ್ಕಲೆಬ್ಬಿಸುವಿಕೆ” ಎಂದು ಕ್ಲಬ್ ಸದಸ್ಯರು ವಾದಿಸಿದ್ದಾರೆ. ಅಲ್ಲದೆ, ಕ್ಲಬ್‌ನಲ್ಲಿ ಕೆಲಸ ಮಾಡುವ ಸುಮಾರು 600 ಕ್ಕೂ ಹೆಚ್ಚು ಬಡ ನೌಕರರ ಜೀವನೋಪಾಯ ಏನಾಗಬೇಕು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಕಿರಣ್ ಬೇಡಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಸರ್ಕಾರದ ಈ ನಿರ್ಧಾರವನ್ನು ‘ದುರದೃಷ್ಟಕರ’ ಎಂದು ಕರೆದಿದ್ದಾರೆ. ಸದ್ಯ ಹೈಕೋರ್ಟ್ ಈ ಅರ್ಜಿಯ ತುರ್ತು ವಿಚಾರಣೆಗೆ ಒಪ್ಪಿಕೊಂಡಿದ್ದು, ಜಿಮ್ಖಾನಾ ಕ್ಲಬ್ ಉಳಿವು ಈಗ ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕಿಲಕಿಲನೆ ನಕ್ಕ ಪೊಲೀಸ್ ಅಧಿಕಾರಿ; ವಿಡಿಯೋಗೆ ಭಾರೀ ಆಕ್ರೋಶ

ಚೆನ್ನೈ, ಮೇ 25: ತಮಿಳುನಾಡಿನ ಕೊಯಮತ್ತೂರು (Coimbatore) ಜಿಲ್ಲೆಯಲ್ಲಿ ನಡೆದ 10 ವರ್ಷದ ಬಾಲಕಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ನಗುತ್ತಾ ಬೇಜವಾಬ್ದಾರಿಯಿಂದ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಜಾಲತಾಣಗಳಲ್ಲಿ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಪೊಲೀಸರ ವರ್ತನೆಯನ್ನು ಖಂಡಿಸುತ್ತಿದ್ದಾರೆ. ಸಂತ್ರಸ್ತ ಕುಟುಂಬದ ದುಃಖಕ್ಕೆ ಕಿಂಚಿತ್ತೂ ಗೌರವ ನೀಡದ ಆ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರರು ಮತ್ತು ಮಹಿಳಾ ಸಂಘಟನೆಗಳು ತಮಿಳುನಾಡು ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈರಾಯ್ಡ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ; ಆಹಾರದಲ್ಲಿ ಈ ಬದಲಾವಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ – Kannada News | Early Signs Of Thyroid Problems + Diet Plan For Healthy Thyroid On World Thyroid Day 2026

ಭಾರತದಲ್ಲಿ ಥೈರಾಯ್ಡ್ (Thyroid) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ವರದಿಗಳ ಪ್ರಕಾರ ಸುಮಾರು 4.2 ಕೋಟಿ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಇದು ಹೆಚ್ಚು ಕಂಡುಬರುತ್ತಿದೆಯಾದರೂ, ಇತ್ತೀಚೆಗೆ ಮಕ್ಕಳು ಮತ್ತು ಪುರುಷರಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ತಜ್ಞರ ಪ್ರಕಾರ, ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗಂಭೀರವಾಗಬಹುದು. ಸೀನಿಯರ್ ಡೈಟಿಷಿಯನ್ ಗೀತಿಕಾ ಚೋಪ್ರಾ ಅವರು ಹೇಳುವ ಪ್ರಕಾರ, ಥೈರಾಯ್ಡ್‌ನಲ್ಲಿ ಮುಖ್ಯವಾಗಿ ಎರಡು ವಿಧಗಳಿರುತ್ತವೆ. ಒಂದು ಹೈಪೋಥೈರಾಯ್ಡಿಸಮ್ ಮತ್ತು ಹೈಪರ್‌ಥೈರಾಯ್ಡಿಸಮ್. ಇವುಗಳ ಲಕ್ಷಣಗಳು ಕೂಡ ಬೇರೆಯಾಗಿರುತ್ತವೆ. ಹಾಗಾಗಿ ಈ ಬಗ್ಗೆ ತಿಳಿದುಕೊಂಡು ಸಮಸ್ಯೆ ತಡೆಗಟ್ಟಬೇಕಾಗುತ್ತದೆ. ಹಾಗಾದರೆ ಥೈರಾಯ್ಡ್ ಸಮಸ್ಯೆ ಇರುವವರು ತಮ್ಮ ಆಹಾರಕ್ರಮದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಥೈರಾಯ್ಡ್ ಇದ್ದಾಗ ಆಹಾರಕ್ರಮ ಹೇಗಿರಬೇಕು?

ಪ್ರೋಟೀನ್ ಸಮೃದ್ಧ ಆಹಾರ: ತಜ್ಞರ ಪ್ರಕಾರ, ಪ್ರೋಟೀನ್ ಸಮೃದ್ಧ ಆಹಾರ ಸೇವಿಸುವುದು ಬಹಳ ಮುಖ್ಯ. ದಾಲ್, ಪನೀರ್, ಮೊಟ್ಟೆ, ಮೊಸರು, ಮೀನು ಮತ್ತು ಚಿಕನ್ ಆಹಾರದಲ್ಲಿ ಸೇರಿಸಬೇಕು. ಇದು ಮೆಟಾಬಾಲಿಸಂ ಸುಧಾರಿಸಿ ಆಯಾಸ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೆಲೆನಿಯಂ ಮತ್ತು ಜಿಂಕ್ ಅಗತ್ಯ: ಪಂಪ್ಕಿನ್ ಸೀಡ್ಸ್, ನಟ್ಸ್, ಸಮುದ್ರ ಆಹಾರ ಮತ್ತು ಸಂಪೂರ್ಣ ಧಾನ್ಯಗಳಲ್ಲಿ ಇರುವ ಸೆಲೆನಿಯಂ ಹಾಗೂ ಜಿಂಕ್ ಥೈರಾಯ್ಡ್ ಹಾರ್ಮೋನ್ ಸಮತೋಲನಕ್ಕೆ ಸಹಕಾರಿ.

ಐಯೋಡಿನ್ ಸಮತೋಲನ ಮುಖ್ಯ: ಐಯೋಡಿನ್ ಅಗತ್ಯವಾದರೂ ಅದರ ಅತಿಯಾದ ಸೇವನೆ ಹಾನಿಕಾರಕವಾಗಬಹುದು. ಆದ್ದರಿಂದ ಐಯೋಡೈಸ್ ಉಪ್ಪನ್ನು ನಿಯಮಿತ ಪ್ರಮಾಣದಲ್ಲಿ ಬಳಸಬೇಕು.

ಪ್ರೊಸೆಸ್ಡ್ ಮತ್ತು ಸಕ್ಕರೆ ಆಹಾರ ಕಡಿಮೆ ಮಾಡಿ: ಸಾಫ್ಟ್ ಡ್ರಿಂಕ್ಸ್, ಪ್ಯಾಕೆಟ್ ಸ್ನ್ಯಾಕ್ಸ್, ಫ್ರೈಡ್ ಮತ್ತು ಹೆಚ್ಚು ಸಕ್ಕರೆ ಇರುವ ಆಹಾರಗಳು ದೇಹದಲ್ಲಿ ಉರಿಯನ್ನು ಹೆಚ್ಚಿಸಬಹುದು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.

ಗಟ್ ಆರೋಗ್ಯಕ್ಕೂ ಗಮನ ಕೊಡಿ: ಮೊಸರು, ಮಜ್ಜಿಗೆ, ಫರ್ಮೆಂಟೆಡ್ ಫುಡ್ಸ್ ಮತ್ತು ಫೈಬರ್ ಸಮೃದ್ಧ ಆಹಾರಗಳು ಗಟ್ ಆರೋಗ್ಯ ಸುಧಾರಿಸಿ ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.

ತಜ್ಞರ ಪ್ರಕಾರ, ಔಷಧಿಯ ಜೊತೆಗೆ ಸರಿಯಾದ ಆಹಾರ, ಉತ್ತಮ ನಿದ್ರೆ, ವ್ಯಾಯಾಮ ಮತ್ತು ನಿಯಮಿತ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಶಕಗಳ ಕನಸು ನನಸಾಗುವ ಕಾಲ: ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಡಿಪಿಆರ್ ಸಲ್ಲಿಕೆ; ಎಲ್ಲೆಲ್ಲಿ ಸ್ಟಾಪ್? – Kannada News | Bengaluru Tumakuru Namma Metro DPR Submitted to Government; Project Moves Closer to Reality

ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಡಿಪಿಆರ್ ಸಲ್ಲಿಕೆImage Credit source: x.com/DrParameshwara

ಬೆಂಗಳೂರು, ಮೇ 25: ನಮ್ಮ ಮೆಟ್ರೋ ಪ್ರಯಾಣಿಕರಿಗೆ, ಅದರಲ್ಲೂ ಪ್ರಮುಖವಾಗಿ ತುಮಕೂರು ಭಾಗದ ಜನತೆಗೆ ಬಂಪರ್ ಗುಡ್ ನ್ಯೂಸ್ ಸಿಕ್ಕಿದೆ. ಹಲವು ದಶಕಗಳ ಕನಸಾಗಿದ್ದ ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗ ನಿರ್ಮಾಣದ ಪ್ರಕ್ರಿಯೆಗೆ ಬಿಎಂಆರ್​​ಸಿಎಲ್​​ (BMRCL) ಈ ಯೋಜನೆಯ ವಿವರವಾದ ಯೋಜನಾ ವರದಿ ಅಂದರೆ ಡಿಪಿಆರ್ (DPR) ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಬೆಂಗಳೂರು ಟು ತುಮಕೂರು ಮೆಟ್ರೋ ಮಾರ್ಗದ ಡಿಪಿಆರ್ ಸಲ್ಲಿಕೆ
  • ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಜಾರಿಯಾಗಲಿರುವ ಯೋಜನೆ
  • ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂತಸ

ಕನಸು ನನಸಾಗುವ ಕಾಲ ಸನ್ನಿಹಿತ

ಬೆಂಗಳೂರು ಹಾಗೂ ತುಮಕೂರು ನಡುವೆ ನಮ್ಮ ಮೆಟ್ರೋ ರೈಲು ಓಡಾಡಬೇಕು ಎಂಬ ಸಾರ್ವಜನಿಕರ ದಶಕಗಳ ಕನಸು ನನಸಾಗುವ ದಿನಗಳು ಹತ್ತಿರ ಬಂದಿವೆ. ಮಾದವರ ನಿಲ್ದಾಣದಿಂದ ತುಮಕೂರಿನವರೆಗೆ ಹಸಿರು ಮಾರ್ಗದ ಬರೋಬ್ಬರಿ 59.60 ಕಿ.ಮೀ ವಿಸ್ತರಣೆಗಾಗಿ ಬಿಎಂಆರ್​ಸಿಎಲ್ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಹಸ್ತಾಂತರಿಸಿದೆ. ಹೊಸ ಕಾರಿಡಾರ್ ಪ್ರಮುಖವಾಗಿ ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದ್ದು, ಈ ಭಾಗದ ನಿತ್ಯ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ದೊಡ್ಡ ಮಟ್ಟದ ಮುಕ್ತಿ ಸಿಗಲಿದೆ.

ಮೆಟ್ರೋ ಪ್ರಯಾಣಿಕರು ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರಾದ ನಾಗರಾಜ್​, ಈ ಮಾರ್ಗದಿಂದ ತುಂಬಾ ಸಹಾಯ ಆಗಲಿದೆ. ಈ ಮಾರ್ಗದಲ್ಲಿ ತುಂಬಾ ಟ್ರಾಫಿಕ್ ಇರುತ್ತದೆ. ನೆಲಮಂಗಲ ದಾಟಿ ಬರಲು ಆಗುವುದಿಲ್ಲ. ತುಮಕೂರಿಗೆ ಮೆಟ್ರೋ ಸಂಚಾರ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದ್ದಾರೆ.

ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗದ ಸಂಭಾವ್ಯ ನಿಲ್ದಾಣಗಳು ಹೀಗಿವೆ

ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ಸ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಮತ್ತು ಶಿರಾ ಗೇಟ್‌.

ಬರೋಬ್ಬರಿ 20,649 ಕೋಟಿ ರೂ ವೆಚ್ಚ

ಇನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತಕ್ಕೆ ಬರೋಬ್ಬರಿ 20,649 ಕೋಟಿ ರೂ ವೆಚ್ಚವಾಗುವ ನಿರೀಕ್ಷೆಯಿದೆ. 2024-25ರ ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಯೋಜನೆ ಪೂರ್ಣಗೊಂಡರೆ ಈ ಮಾರ್ಗದಲ್ಲಿ ಪ್ರತಿ ಗಂಟೆಗೆ, ಒಂದು ದಿಕ್ಕಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯೋಜನೆ ಜಾರಿಯಾಗುತ್ತಿರುವುದಕ್ಕೆ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?

ಒಟ್ಟಾರೆಯಾಗಿ ಬೆಂಗಳೂರು ಟು ತುಮಕೂರು ಮೆಟ್ರೋ ಮಾರ್ಗಕ್ಕೆ ಚಾಲನೆ ಸಿಕ್ಕರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುತ್ತಿದ್ದ ತೀವ್ರ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್‌ಗೆ ಶಾಶ್ವತ ಪರಿಹಾರ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:09 pm, Mon, 25 May 26

Source link

ನಾಯಕತ್ವ ಬದಲಾವಣೆಯ ಬಹುಚರ್ಚಿತ ಸಂಗತಿ ಮಧ್ಯೆ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ – Kannada News | Karnataka Power Tussle: CM Siddaramaiah And K Venkatest gets Extra portfolio Amide cabinet reshuffle

ಬೆಂಗಳೂರು, ಮೇ 25): ರಾಜ್ಯದಿಂದ ಹಿಡಿದು ಹೈಕಮಾಂಡ್​ವರೆಗೂ ಕ್ಷಿಪ್ರ ಬೆಳವಣಿಗೆಗಳು ಆಗುತ್ತಿದೆ. ಇಷ್ಟು ದಿನ ನಡೆದ ಅಧಿಕಾರ ಹಂಚಿಕೆ ಪಗಡೆಯಾಟಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಸಿಎಂ ಕುರ್ಚಿ ಫೈಟ್ ಕಂಪ್ಲೀಟ್ ಹೈಕಮಾಂಡ್​ ಅಂಗಳಕ್ಕೆ ಶಿಫ್ಟ್ ಆಗಿದ್ದು, ಸಿಎಂ ಸಿದ್ದರಾಮಯ್ಯ,  (Siddaramaiah) ಡಿಕೆ ಶಿವಕುಮಾರ್  (DK Shivakumar)ಸೇರಿದಂತೆ ಸಚಿವರ ಹಾಗೂ ಕಾಂಗ್ರೆಸ್ (Congress) ಶಾಸಕರು ದೆಹಲಿಯತ್ತ ಮುಖ ಮಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಬ್ರೇಕ್ ಹಾಕುತ್ತಾ ಅಥವಾ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡುತ್ತಾ ಎನ್ನುವ ಕುತೂಹಲ ಇದ್ದೇ ಇದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೌದು…ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ಹಾಗೂ ಸಿಎಂ ಸಿದ್ದರಾಮಯ್ಯ ಹೆಚ್ಚುವರಿ ಖಾತೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬಗ್ಗೆ ರಾಜಭವನದಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕ ಕಾಂಗ್ರೆಸ್​​​ನಲ್ಲಿ ಗರಿಗೆದರಿ ರಾಜಕೀಯ ಬೆಳವಣಿಗೆಗಳು
  • ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಯತ್ತ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್
  • ಈ ಮಧ್ಯೆ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ
  • ಹೆಚ್ಚುವರಿ ಖಾತೆ ಉಳಿಸಿಕೊಂಡ ಸಿಎಂ ಸಿದ್ದರಾಮಯ್ಯ
  • ದಿವಂಗತ ಸುಧಾರಕ್ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವೆಂಕಟೇಶ್ ಹೆಗಲಿಗೆ

ಸುಧಾಕರ್ ಖಾತೆ ವೆಂಕಟೇಶ್ ಹೆಗಲಿಗೆ

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಅವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಹೀಗಾಗಿ ಈ ಇಲಾಖೆಯ ಹೊಣೆಯನ್ನು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ (K Venkatesh) ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಇದನ್ನೂ ನೋಡಿ: ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿಂದಿದೆ ರೋಚಕ ಸ್ಟೋರಿ

ಇನ್ನು ಕೆ.ಎನ್‌.ರಾಜಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಹಕಾರ ಇಲಾಖೆ ಮತ್ತು ಬಿ.ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಯುವ ಜನ ಕ್ರೀಡೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಖಾತೆಯನ್ನು ಸಿಎಂ ಸಿದ್ದರಾಮಯ್ಯ ಅವರು ಯಾರಿಗೂ ಹಂಚಿಕೆ ಮಾಡದೆ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಸಿಎಂ ಬಳಿ ಇರುವ ಖಾತೆಗಳು ಯಾವುವು?

ಸಿಎಂ ಸಿದ್ದರಾಮಯ್ಯ ಅವರು ಪ್ರಸ್ತುತ ಹಣಕಾಸು, ಸಂಸದೀಯ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಗುಪ್ತಚರ ಇಲಾಖೆ, ವಾರ್ತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಸಹಕಾರ ಖಾತೆ (ಕೃಷಿ ಮಾರುಕಟ್ಟೆ ಹೊರತುಪಡಿಸಿ) ಅನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಇಲಾಖೆ ಹಂಚಿಕೆಯಾಗದ ಉಳಿದೆಲ್ಲಾ ಖಾತೆಗಳ ಜವಾಬ್ದಾರಿಯೂ ಸಿಎಂ ಅವರ ಬಳಿಯೇ ಮುಂದುವರಿಯಲಿದೆ.

ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂಬ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ದೆಹಲಿಗೆ ಪ್ರವಾಸ ಮಾಡಲಿದ್ದಾರೆ. ಸಂಪುಟ ಪುನಾರಚನೆ ಆದಲ್ಲಿ ಕೆಲವು ಸಚಿವರನ್ನು ಕೈ ಬಿಡಲಾಗುವುದು ಎಂಬ ಚರ್ಚೆಗಳು ನಡೆಯುತ್ತಿದ್ದವು. ಈ ಸಂಭಾವ್ಯ ಪಟ್ಟಿಯಲ್ಲಿ ಕೆ ವೆಂಕಟೇಶ್ ಅವರ ಹೆಸರೂ ಇತ್ತು. ಆದರೆ ಇದೀಗ ವೆಂಕಟೇಶ್ ಅವರಿಗೆ ಹೆಚ್ಚುವರಿ ಖಾತೆ ನೀಡಲಾಗಿದೆ. ಈ ಮೂಲಕ ಸಚಿವ ಸಂಪುಟ ಪುನಾರಚನೆ ಆಗುತ್ತೋ ಇಲ್ವಾ ಎನ್ನುವ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಸಂಪುಟ ಪುನಾರಚನೆ ಆಗಬೇಕೆಂದು ಶಾಸಕರು ಒತ್ತಾಯಿಸಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಾತ್ರವಲ್ಲದೇ ಹಲವು ಶಾಸಕರು ದೆಹಲಿಯತ್ತ ಹೊರಟ್ಟಿದ್ದಾರೆ. ಒಂದು ವೇಳೆ ಸಂಪುಟ ಪುನಾರಚನೆ ಆಗದಿದ್ದರೇ ಸಚಿವಾಕಾಂಕ್ಷಿಗಳ ಮುಂದಿನ ನಡೆ ಏನು ಎಂಬುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:14 pm, Mon, 25 May 26

Source link

ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ – Kannada News | Dharmendra awarded Padma Vibhushan posthumously Wife Hema Malini receives award on behalf oh him

‘ಪದ್ಮ ಪ್ರಶಸ್ತಿ 2026’ ಪ್ರದಾನ ಸಮಾರಂಭವು ಇಂದು (ಮೇ 25) ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಚಿತ್ರರಂಗ, ಸಂಗೀತ, ರಂಗಭೂಮಿ ಮುಂತಾದ ಕ್ಷೇತ್ರದ ಅನೇಕ ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ವರ್ಷ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಇದರಲ್ಲಿ 5 ಪದ್ಮ ವಿಭೂಷಣ (Padma Vibhushan) , 13 ಪದ್ಮ ಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಮನರಂಜನಾ ಕ್ಷೇತ್ರದಿಂದ ದಿವಂಗತ ನಟ ಧರ್ಮೇಂದ್ರ (Dharmendra) ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಧರ್ಮೇಂದ್ರ ಪರವಾಗಿ ಅವರ ಪತ್ನಿ ಹೇಮಾ ಮಾಲಿನಿ (Hema Malini) ಅವರು ಇಂದು (ಮೇ 25) ಪ್ರಶಸ್ತಿ ಸ್ವೀಕರಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್​ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ – Kannada News | Beyond Fuel: Crude Oil Demand to Soar Despite EVs & Green Shift – Petrochemicals Drive It

ಜಗತ್ತಿನಲ್ಲಿ ಯುದ್ಧ ಆಗೋದು ಒಂದು ಹೆಣ್ಣಿಗಾಗಿ, ಮತ್ತೊಂದು ಮಣ್ಣಿಗಾಗಿ. ಇಲ್ಲಿ ಮಣ್ಣು ಎಂದರೆ ಸಂಪನ್ಮೂಲ. ಕಳೆದ ಕೆಲ ಶತಮಾನಗಳಿಂದ ಜಗತ್ತಿನ ಹೆಚ್ಚಿನ ಯುದ್ಧಗಳು ಸಂಪನ್ಮೂಲಗಳಿಗಾಗಿ ನಡೆದಿವೆ. ಎಂಜಿನ್​ಗಳ ಕಾಲ ಬಂದ ಬಳಿಕ ಕಚ್ಚಾ ತೈಲ ಬಹಳ ಪ್ರಮುಖ ಸಂಪನ್ಮೂಲವೆನಿಸಿದೆ. ತೈಲಕ್ಕಾಗಿ (Oil) ಸಾಲು ಸಾಲು ಯುದ್ಧಗಳೇ ಸಂಭವಿಸಿವೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಆಕ್ರಮಣಕಾರಿ ವರ್ತನೆ, 40ರ ದಶಕದಲ್ಲಿ ಬೊಲಿವಿಯಾ, ಪರಗ್ವೆ ನಡುವಿನ ಯುದ್ಧ, 90ರ ದಶಕದ ಇರಾಕ್ ಕುವೇತ್ ಯುದ್ಧ; ನಂತರ ಇರಾಕ್ ಮೇಲೆ ಅಮೆರಿಕದ ಆಕ್ರಮಣ, ನೈಜೀರಿಯಾ ಹಿಂಸಾಚಾರ, ಇರಾನ್ ಇರಾಕ್ ಯುದ್ಧ, ಇರಾನ್ ಅಮೆರಿಕ ಯುದ್ಧ, ರಷ್ಯಾ ಉಕ್ರೇನ್ ಯುದ್ಧ ಇವೆಲ್ಲವೂ ತೈಲದ ಮೇಲೆ ನಿಯಂತ್ರಣ ಸಾಧಿಸಲು ಆಗಿರುವಂಥವು.

ಇದೇ ವೇಳೆ, ಜಗತ್ತು ಸದ್ಯ ಹಸಿರು ಇಂಧನ (Green Energy), ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ವೇಗವಾಗಿ ಹೆಜ್ಜೆ ಇಡುತ್ತಿದೆ. ಜಾಗತಿಕ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಇಂಧನಕ್ಕಾಗಿ ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡುವ ಪಣವನ್ನು ಹಲವು ದೇಶಗಳು ತೊಟ್ಟಿವೆ. ಅನೇಕ ಜಾಗತಿಕ ಸಂಘರ್ಷಗಳು ಮತ್ತು ರಾಜಕೀಯ ತಂತ್ರಗಳು ತೈಲದ (Oil) ಮೇಲಿನ ಹಿಡಿತಕ್ಕಾಗಿಯೇ ನಡೆದಿದ್ದವು ಎಂಬುದು ಜಗತ್ತಿಗೆ ತಿಳಿದಿರುವ ಸತ್ಯ. ಆದರೆ, ವಾಹನಗಳು ಬ್ಯಾಟರಿ ಚಾಲಿತವಾದರೆ, ತೈಲದ ಬೇಡಿಕೆ ಸಂಪೂರ್ಣವಾಗಿ ಶೂನ್ಯವಾಗುತ್ತದೆಯೇ? ಎಂಬುದು ದೊಡ್ಡ ಪ್ರಶ್ನೆ. ಜಾಗತಿಕ ಇಂಧನ ತಜ್ಞರ ವರದಿಯ ಪ್ರಕಾರ, ಉತ್ತರ ಖಂಡಿತ ಇಲ್ಲ.

ಕಚ್ಚಾ ತೈಲ ಎನ್ನುವುದು ಕೇವಲ ವಾಹನ ಓಡಿಸುವ ಇಂಧನವಲ್ಲ; ಅದು ಆಧುನಿಕ ಜಗತ್ತಿನ ಭೌತಿಕ ಅಗತ್ಯಗಳನ್ನು ಪೂರೈಸುವ ಕಣ್ಣಿಗೆ ಕಾಣದ ಶಕ್ತಿ. ಜಗತ್ತು ಸೌರಶಕ್ತಿ (Solar) ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ಮುಖ ಮಾಡುತ್ತಿದ್ದರೂ ಕಚ್ಚಾ ತೈಲದ (Crude Oil) ಬೇಡಿಕೆ ಕಡಿಮೆಯಾಗುತ್ತಿಲ್ಲ. ಏಕೆಂದರೆ ನಮ್ಮ ಬೆಳಗಿನ ಟೂತ್‌ಬ್ರಷ್‌ನಿಂದ ಹಿಡಿದು ರಾತ್ರಿಯ ಹೊದಿಕೆಯವರೆಗೆ ಎಲ್ಲದರಲ್ಲೂ ತೈಲದ ಅಂಶ ಅಡಗಿದೆ.

ಪೆಟ್ರೋಕೆಮಿಕಲ್ಸ್: ತೈಲ ಉದ್ಯಮದ ಹೊಸ ಅಸ್ತ್ರ

ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜಾಗತಿಕವಾಗಿ ಕಚ್ಚಾ ತೈಲದ ಒಟ್ಟು ಬೇಡಿಕೆಯಲ್ಲಿ ಶೇ. 12 ಕ್ಕಿಂತ ಹೆಚ್ಚು ಭಾಗ ಪೆಟ್ರೋಕೆಮಿಕಲ್ಸ್ (Petrochemicals) ಉದ್ಯಮಕ್ಕೆ ಬಳಕೆಯಾಗುತ್ತಿದೆ. ವಾಹನಗಳಿಗೆ ಇಂಧನದ ಬೇಡಿಕೆ ಕಡಿಮೆಯಾದರೂ, ಪ್ಲಾಸ್ಟಿಕ್, ರಬ್ಬರ್ ಮತ್ತು ರಾಸಾಯನಿಕಗಳ ತಯಾರಿಕೆಯಲ್ಲಿ ತೈಲದ ಬೇಡಿಕೆ ಮುಂದಿನ ದಶಕಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

ಕಚ್ಚಾ ತೈಲವನ್ನು ಇಂಧನ ಹೊರತುಪಡಿಸಿ ಇನ್ಯಾವುದಕ್ಕೆ ಬಳಸುತ್ತಾರೆ?

ಕಚ್ಚಾ ತೈಲವನ್ನು ಶುದ್ಧೀಕರಿಸಿದಾಗ (Refining) ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ, ಎಲ್​ಪಿಜಿ ಇತ್ಯಾದಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳು ಸಿಗುತ್ತವೆ. ಹಾಗೆಯೇ, ಕಚ್ಚಾ ತೈಲದ ರೀಫೈನಿಂಗ್​ನಿಂದ ಹಲವು ಉಪ ಉತ್ಪನ್ನಗಳನ್ನು (Petrochemicals) ಸಿಗುತ್ತವೆ. ಇವುಗಳನ್ನು ಸಾವಿರಾರು ದೈನಂದಿನ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

  • ಪ್ಲಾಸ್ಟಿಕ್ ಮತ್ತು ಪಾಲಿಮರ್‌ಗಳು (Plastics): ಇಂದು ಜಗತ್ತಿನಲ್ಲಿ ಬಳಕೆಯಾಗುವ ಶೇ. 99 ರಷ್ಟು ಪ್ಲಾಸ್ಟಿಕ್ ಕಚ್ಚಾ ತೈಲದಿಂದಲೇ ಬರುತ್ತದೆ. ಮೊಬೈಲ್ ಫೋನ್, ಕಂಪ್ಯೂಟರ್ ಕೇಸಿಂಗ್, ಬಾಟಲಿಗಳು, ಪೈಪ್‌ಗಳು ಎಲ್ಲವೂ ಇದರ ಕೊಡುಗೆ.
  • ಕೃತಕ ಬಟ್ಟೆಗಳು (Synthetic Fibers): ನಾವು ಧರಿಸುವ ಪಾಲಿಯೆಸ್ಟರ್ (Polyester), ನೈಲಾನ್ (Nylon), ಮತ್ತು ಆಕ್ರಿಲಿಕ್ ಬಟ್ಟೆಗಳು ಪೆಟ್ರೋಲಿಯಂನಿಂದ ತಯಾರಾಗುತ್ತವೆ.
  • ರಸ್ತೆ ಡಾಂಬರು (Asphalt/Bitumen): ರಸ್ತೆಗಳನ್ನು ನಿರ್ಮಿಸಲು ಬಳಸುವ ಕಪ್ಪು ಡಾಂಬರು ತೈಲ ಶುದ್ಧೀಕರಣದ ಕೊನೆಯ ಹಂತದಲ್ಲಿ ಸಿಗುವ ಒಂದು ಗಟ್ಟಿ ಉಪ ಉತ್ಪನ್ನವಾಗಿದೆ.
  • ಔಷಧಗಳು (Pharmaceuticals): ಆಸ್ಪಿರಿನ್‌ನಂತಹ ನೋವು ನಿವಾರಕಗಳು, ಜೀವಸತ್ವಗಳು (Vitamins), ಮತ್ತು ಅನೇಕ ವೈದ್ಯಕೀಯ ಕ್ಯಾಪ್ಸುಲ್‌ಗಳ ಕವಚಗಳನ್ನು ತಯಾರಿಸಲು ಪೆಟ್ರೋಕೆಮಿಕಲ್ಸ್ ಬಳಸಲಾಗುತ್ತದೆ.
  • ಕೃಷಿ ಗೊಬ್ಬರ ಮತ್ತು ಕೀಟನಾಶಕಗಳು (Fertilizers & Pesticides): ಜಗತ್ತಿನಾದ್ಯಂತ ಆಹಾರ ಉತ್ಪಾದನೆಗೆ ಬಳಸುವ ರಾಸಾಯನಿಕ ಗೊಬ್ಬರಗಳು (ಮುಖ್ಯವಾಗಿ ಅಮೋನಿಯಾ ಮೂಲದ ಸಾರಜನಕ ಗೊಬ್ಬರಗಳು) ಮತ್ತು ಕೀಟನಾಶಕಗಳಿಗೆ ತೈಲವೇ ಮೂಲ.
  • ಸೌಂದರ್ಯವರ್ಧಕಗಳು (Cosmetics): ವ್ಯಾಸಲಿನ್ (Petroleum Jelly), ಲಿಪ್‌ಸ್ಟಿಕ್, ಪರ್ಫ್ಯೂಮ್, ಶಾಂಪೂ, ಮತ್ತು ಮುಖಕ್ಕೆ ಹಚ್ಚುವ ಕ್ರೀಮ್‌ಗಳಲ್ಲಿ ತೈಲದ ಅಂಶ ಇರುತ್ತದೆ.
  • ರಬ್ಬರ್ (Synthetic Rubber): ವಾಹನಗಳ ಟೈರ್‌ಗಳು, ಶೂಗಳ ಸೋಲ್ (Sole), ಮತ್ತು ಸೀಲಿಂಗ್ ಗ್ಯಾಸ್ಕೆಟ್‌ಗಳನ್ನು ಮಾಡಲು ಬಳಸುವ ಕೃತಕ ರಬ್ಬರ್ ತೈಲದಿಂದ ಬರುತ್ತದೆ.
  • ಗೃಹಬಳಕೆ ವಸ್ತುಗಳು: ಪೇಂಟ್‌ಗಳು (Paints), ಡಿಟರ್ಜೆಂಟ್ ಸೋಪುಗಳು, ಮೇಣದಬತ್ತಿಗಳು (Paraffin Wax), ಮತ್ತು ನಯಗೊಳಿಸುವ ಎಣ್ಣೆಗಳು (Lubricants).

ಇದನ್ನೂ ಓದಿ: ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್

ಇವಿ ಕಾರಿನ ಮುಂಭಾಗದ ಡ್ಯಾಶ್‌ಬೋರ್ಡ್, ಒಳಗಿನ ಸೀಟ್‌ಗಳ ಮೇಲಿರುವ ಕೃತಕ ಚರ್ಮ (Synthetic Leather), ಕಾರಿನ ಸ್ಟೀರಿಂಗ್, ಸೋಲಾರ್ ಪ್ಯಾನಲ್‌ಗಳನ್ನು ಜೋಡಿಸಲು ಬಳಸುವ ಪ್ಲಾಸ್ಟಿಕ್ ಕೋಟಿಂಗ್ ಇತ್ಯಾದಿ ಅಸಂಖ್ಯೆಯಷ್ಟು ಕೆಲಸಗಳಿಗೆ ಮತ್ತು ವಸ್ತುಗಳ ತಯರಿಕೆಗೆ ಪೆಟ್ರೋಕೆಮಿಕಲ್ಸ್ ಅನ್ನು ಬಳಸಲಾಗುತ್ತದೆ.

ಹೀಗಾಗಿ, ಕಾರುಗಳು ಬ್ಯಾಟರಿಯಿಂದ ಓಡಿದರೂ, ವಿಮಾನಗಳು ಮತ್ತು ಕೈಗಾರಿಕೆಗಳು ಹಾಗೂ ದೈನಂದಿನ ವಸ್ತುಗಳ ಉತ್ಪಾದನೆಗೆ ತೈಲವು ಇನ್ನೂ ದಶಕಗಳ ಕಾಲ ಅನಿವಾರ್ಯವಾಗಿ ಉಳಿಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಅಭ್ಯಾಸಗಳು ವ್ಯಕ್ತಿಯ ಗೌರವವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says that these qualities completely destroy a person’s respect

ಶ್ರೀಮಂತಿಕೆ ಮಾತ್ರವಲ್ಲ ಸಮಾಜದಲ್ಲಿ ಗೌರವವೂ (reputation) ಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಈ ಗೌರವವನ್ನು ಗಳಿಸುವಲ್ಲಿ ವ್ಯಕ್ತಿಯ ನಡವಳಿಕೆ ಮತ್ತು ಅಭ್ಯಾಸಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೌದು ಒಳ್ಳೆಯ ನಡವಳಿಕೆ, ಅಭ್ಯಾಸಗಳು ಸಮಾಜದಲ್ಲಿ ವ್ಯಕ್ತಿಯ ಗೌರವವನ್ನು ಹೆಚ್ಚಿಸುವಂತೆ ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು, ಕೆಲವೊಂದು ದೈನಂದಿನ ಕೆಟ್ಟ ಅಭ್ಯಾಸಗಳು ಕುಟುಂಬ, ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ವ್ಯಕ್ತಿಯ ಗೌರವನ್ನು ಹಾಳು ಮಾಡುತ್ತದೆ ಮತ್ತು ಆ ವ್ಯಕ್ತಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ನಿಮಗೂ ಈ ಅಭ್ಯಾಸಗಳಿದ್ದರೆ ತಕ್ಷಣ ಅದನ್ನು ಬದಲಿಸಿ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ದೈನಂದಿನ ಜೀವನದ ಯಾವ ಅಭ್ಯಾಸಗಳು ನಮ್ಮ ಗೌರವಕ್ಕೆ ಧಕ್ಕೆಯನ್ನು ಉಂಟು ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.

ಈ ದೈನಂದಿನ ಅಭ್ಯಾಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು:

ಅತಿಯಾಗಿ ಮಾತನಾಡುವುದು: ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಂದು ವಿಷಯದ ಬಗ್ಗೆಯೂ  ಅನಗತ್ಯ ಮಾತನಾಡಲು ಪ್ರಯತ್ನಿಸುವ ವ್ಯಕ್ತಿಯು ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾನೆ. ಅನಗತ್ಯ ಮಾತು ತಪ್ಪು ತಿಳುವಳಿಕೆಯನ್ನು ಸೃಷ್ಟಿಸುವುದಲ್ಲದೆ, ವ್ಯಕ್ತಿಯ ಇಮೇಜ್‌ಗೆ ಹಾನಿ ಮಾಡುತ್ತದೆ. ಹಾಗಾಗಿ ಹಿತಮಿತವಾಗಿ ಮಾತನಾಡಬೇಕು. ಮುಖ್ಯವಾಗಿ ಎಲ್ಲಿ ಹೇಗೆ ಮಾತನಾಡಬೇಕು ಎಂಬುದು ತಿಳಿದಿರಬೇಕು.

ಕೋಪ ನಿಯಂತ್ರಣದ ಕೊರತೆ: ಅತಿಯಾದ ಕೋಪವು ವಿನಾಶಕ್ಕೆ ಕಾರಣವಾಗುತ್ತದೆ, ಅಲ್ಲದೆ ಅತಿಯಾದ ಕೋಪ ಮನುಷ್ಯನ ದೊಡ್ಡ ಶತ್ರು ಎಂದು ಆಚಾರ್ಯ ಚಾಣಕ್ಯರು ಬಣ್ಣಿಸಿದ್ದಾರೆ. ಪದೇ ಪದೇ ಕೋಪಗೊಳ್ಳುವ ವ್ಯಕ್ತಿಯು ತನ್ನ ಮಾತು ಮತ್ತು ನಡವಳಿಕೆಯ ಮೂಲಕ ಗೌರವವನ್ನು ಕಳೆದುಕೊಳ್ಳುತ್ತಾನೆ. ಕಚೇರಿಯಲ್ಲಿರಲಿ ಅಥವಾ ಮನೆಯಲ್ಲಿರಲಿ, ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ವಿಷಾದಕ್ಕೆ ಕಾರಣವಾಗುತ್ತವೆ. ಅಲ್ಲದೆ ಸಣ್ಣಪುಟ್ಟ ವಿಷಯಕ್ಕೆ ಕೋಪ ಮಾಡಿಕೊಳ್ಳುವುದರಿಂದ ವ್ಯಕ್ತಿಯ ಗೌರವವೂ ಹಾಳಾಗುತ್ತದೆ.

ದುರಾಸೆ ಮತ್ತು ಸ್ವಾರ್ಥ: ಅತಿಯಾದ ದುರಾಸೆಯು ವ್ಯಕ್ತಿಯನ್ನು ನೈತಿಕತೆಯಿಂದ ದೂರ ಮಾಡುತ್ತದೆ. ಪ್ರತಿಯೊಂದು ಕೆಲಸವನ್ನು ಸ್ವಾರ್ಥ ಉದ್ದೇಶವನ್ನು ಇಟ್ಟುಕೊಂಡು ಮಾಡಿದಾಗ, ಜನ ನಿಮ್ಮ ಮೇಲೆ ನಂಬಿಕೆಯನ್ನು ಇಡುವುದಿಲ್ಲ ಮುಖ್ಯವಾಗಿ ನಿಮಗಮ ಮೇಲಿನ ಗೌರವವನ್ನೂ ಕಳೆದುಕೊಳ್ಳುತ್ತಾರೆ.

ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳದಿರುವುದು: ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯನ್ನು ಇತರರು ಬೇಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಚಾಣಕ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ಗೌರವ ಸಿಗುತ್ತದೆ, ಅದೇ ಕೆಲಸದಲ್ಲಿ ವಿಳಂಬ ಮಾಡುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಭಾವನಾತ್ಮಕವಾಗಿ ಗಟ್ಟಿಗೊಳ್ಳಲು ಚಾಣಕ್ಯರು ಹೇಳಿರುವ ಗುಣಗಳನ್ನು ಬೆಳೆಸಿಕೊಳ್ಳಿ

ದುರಹಂಕಾರ: ದುರಹಂಕಾರವನ್ನು ಅವನತಿಗೆ ಕಾರಣವೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅತಿಯಾದ ಹೆಮ್ಮೆ ಮತ್ತು ದುರಹಂಕಾರ ಕಾಲ ಕ್ರಮೇಣ ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ, ಅಂತಹ ವ್ಯಕ್ತಿಗೆ ಯಾವ ಕಿಮ್ಮತ್ತು ಸಹ ಇರೋದಿಲ್ಲ.

ನಕಾರಾತ್ಮಕ ಚಿಂತನೆ ಮತ್ತು ದೂರು ನೀಡುವ ಅಭ್ಯಾಸಗಳು: ಎಲ್ಲದರ ಬಗ್ಗೆಯೂ ದೂರು ನೀಡುವುದು ಮತ್ತು ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು ಸಹ ಒಬ್ಬ ವ್ಯಕ್ತಿಯ ಖ್ಯಾತಿಗೆ ಹಾನಿ ಮಾಡುತ್ತದೆ. ನಕಾರಾತ್ಮಕ ಯೋಚನೆಗಳನ್ನು ಇಟ್ಟುಕೊಂಡಿರುವ ಜನರಿಗೆ ಯಾವ ಗೌರವವೂ ಸಹ ಇರೋದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈರಾಯ್ಡ್ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ನಂಬಬೇಡಿ! ಹಾಗಿದ್ರೆ ಯಾವುದು ನಿಜ? ತಜ್ಞರಿಂದ ತಿಳಿದುಕೊಳ್ಳಿ – Kannada News | Don’t Fall For These Thyroid Myths: World Thyroid Day 2026 Awareness Guide

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ (Thyroid) ಸಮಸ್ಯೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗುತ್ತಿದೆ. ಆದರೆ ಈ ಕಾಯಿಲೆಯ ಬಗ್ಗೆ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳು ಇನ್ನೂ ಹರಿದಾಡುತ್ತಿವೆ. ಕೆಲವರು ಥೈರಾಯ್ಡ್ ಬಂದರೆ ಜೀವಪೂರ್ತಿ ಔಷಧಿ ತಿನ್ನಲೇಬೇಕು ಎಂದು ಹೇಳುತ್ತಾರೆ ಮತ್ತೊಂದಿಷ್ಟು ಜನ ಇದು ಮಹಿಳೆಯರಿಗೆ ಮಾತ್ರ ಬರುವ ಕಾಯಿಲೆ ಎಂದು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಯಾವುದು ಸತ್ಯ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅನಿವಾರ್ಯ. ಅದಕ್ಕಾಗಿಯೇ ಜನರಿಗೆ ಈ ಬಗ್ಗೆ ಸರಿಯಾಗಿ ಅರ್ಥಮಾಡಿಸಲು ಪ್ರತಿ ವರ್ಷ ಮೇ 25 ರಂದು ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಜನರಲ್ಲಿ ಥೈರಾಯ್ಡ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇದರ ಲಕ್ಷಣಗಳನ್ನು ಸಮಯಕ್ಕೆ ಗುರುತಿಸುವ ಮಹತ್ವವನ್ನು ತಿಳಿಸುವುದಾಗಿದೆ.

ಥೈರಾಯ್ಡ್ ಎಂದರೇನು?

ನಮ್ಮ ಗಂಟಲಿನಲ್ಲಿ ಚಿಟ್ಟೆಯಾಕಾರದ ಥೈರಾಯ್ಡ್ ಗ್ರಂಥಿ ಇರುತ್ತದೆ. ಇದು ದೇಹದ ಮೆಟಾಬಾಲಿಸಂ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಾವು ತಿನ್ನುವ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸವನ್ನು ಈ ಗ್ರಂಥಿ ಮಾಡುತ್ತದೆ. ಈ ಗ್ರಂಥಿಯಿಂದ ಹಾರ್ಮೋನ್‌ಗಳು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಥೈರಾಯ್ಡ್ ಸಮಸ್ಯೆ ಉಂಟಾಗಬಹುದು.

ಥೈರಾಯ್ಡ್ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆಗಳು:

ಥೈರಾಯ್ಡ್ ಬಂದರೆ ಜೀವಪೂರ್ತಿ ಔಷಧಿ ತಿನ್ನಬೇಕು: ವೈದ್ಯರ ಪ್ರಕಾರ, ಎಲ್ಲಾ ರೋಗಿಗಳಿಗೂ ಜೀವಪೂರ್ತಿ ಔಷಧಿ ಅಗತ್ಯವಿಲ್ಲ. ಕೆಲವರಿಗೆ ಮಾತ್ರ ದೀರ್ಘಕಾಲ ಚಿಕಿತ್ಸೆ ಬೇಕಾಗಬಹುದು. ಸರಿಯಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ವೈದ್ಯಕೀಯ ಚಿಕಿತ್ಸೆಯಿಂದ ಔಷಧಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಥೈರಾಯ್ಡ್ ಮಹಿಳೆಯರಿಗೆ ಮಾತ್ರ ಬರುತ್ತದೆ: ಮಹಿಳೆಯರಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವುದಾದರೂ, ಪುರುಷರು ಮತ್ತು ಮಕ್ಕಳಿಗೂ ಥೈರಾಯ್ಡ್ ಸಮಸ್ಯೆ ಕಾಣಿಸಬಹುದು. ಪುರುಷರಲ್ಲಿ ಲಕ್ಷಣಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸಮಸ್ಯೆ ತಡವಾಗಿ ಪತ್ತೆಯಾಗುತ್ತದೆ.

ಇದು ಕೇವಲ ಗಂಟಲಿನ ಸಮಸ್ಯೆ: ಥೈರಾಯ್ಡ್ ಗ್ರಂಥಿ ಗಂಟಲಿನಲ್ಲಿ ಇದ್ದರೂ ಇದರ ಪರಿಣಾಮ ಸಂಪೂರ್ಣ ದೇಹದ ಮೇಲೆ ಬೀರುತ್ತದೆ. ಹೃದಯದ ಬಡಿತ, ನಿದ್ರೆ, ಶಕ್ತಿ ಮಟ್ಟ, ತೂಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಕಾಣಿಸಬಹುದು.

ಇದನ್ನೂ ಓದಿ: ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬೇಡಿ

ಥೈರಾಯ್ಡ್ ಸಮಸ್ಯೆಗೆ ಕಾರಣಗಳೇನು?

  • ಜನ್ಯ ಕಾರಣಗಳು (Genetic)
  • ಹೆಚ್ಚು ಐಯೋಡಿನ್ ಇರುವ ಔಷಧಿಗಳು
  • ಐಯೋಡಿನ್ ಕೊರತೆಯ ಉಪ್ಪು ಬಳಕೆ
  • ಸ್ವಪ್ರತಿರೋಧಕ ಕಾಯಿಲೆಗಳು (Autoimmune diseases)
  • ರಕ್ತಹೀನತೆ
  • ಟೈಪ್-1 ಸಿಲಿಯಾಕ್ ರೋಗ
  • ಲ್ಯುಪಸ್
  • ಸಂಧಿವಾತ
  • ಸ್ಜೋಗ್ರೆನ್ ಸಿಂಡ್ರೋಮ್

ಥೈರಾಯ್ಡ್‌ನ ಪ್ರಮುಖ ಪ್ರಕಾರಗಳು:

ಹೈಪೋಥೈರಾಯ್ಡಿಸಮ್ (Hypothyroidism): ಈ ಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿ ಕಡಿಮೆ ಪ್ರಮಾಣದಲ್ಲಿ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ.
ಲಕ್ಷಣಗಳು: ತೂಕ ಹೆಚ್ಚಾಗುವುದು, ಜೀರ್ಣಕ್ರಿಯೆ ಸಮಸ್ಯೆ, ನಿಧಾನ ಹೃದಯ ಬಡಿತ, ಚರ್ಮ ಒಣಗುವುದು, ಮಲಬದ್ಧತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುವುದು

ಹೈಪರ್‌ಥೈರಾಯ್ಡಿಸಮ್ (Hyperthyroidism): ಈ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪತ್ತಿಯಾಗುತ್ತದೆ.
ಲಕ್ಷಣಗಳು: ತೂಕ ವೇಗವಾಗಿ ಇಳಿಯುವುದು, ಹೃದಯ ಬಡಿತ ಅಸ್ಥಿರವಾಗುವುದು, ಹೆಚ್ಚು ಆಯಾಸ, ಚಿಂತೆ ಮತ್ತು ಅಶಾಂತಿ, ಸ್ನಾಯು ದುರ್ಬಲತೆ, ನಿದ್ರೆ ಸಮಸ್ಯೆ, ಸಂಧಿ ನೋವು

ತಜ್ಞರ ಪ್ರಕಾರ, ಥೈರಾಯ್ಡ್ ಲಕ್ಷಣಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಸರಿಯಾದ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಕೋಲಾರ ನಗರಸಭೆ ಕಚೇರಿ ಮೇಲೆ ಲೋಕಾ ದಾಳಿ – Kannada News | Lokayukta Raids Kolar City Municipal Council Over Dual Birth Certificate registration

ಕೋಲಾರ, ಮೇ 25: ನಗರಸಭೆ ಆರೋಗ್ಯ ವಿಭಾಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜನನ, ಮರಣ ಪ್ರಮಾಣಪತ್ರ ವಿತರಣೆ ಆರೋಪ ಬೆನ್ನಲ್ಲೇ ಕೋಲಾರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ. ಜೀವಂತವಾಗಿರುವ ವ್ಯಕ್ತಿಗಳಿಗೆ ಮರಣ ಪ್ರಮಾಣಪತ್ರ ನೀಡಿರುವುದು ಮತ್ತು ಒಂದೇ ನೋಂದಣಿಯಲ್ಲಿ ಇಬ್ಬರು ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಿಸಿರುವುದು ಹಾಗೂ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜನನ ಪ್ರಮಾಣಪತ್ರ ನೀಡಿರುವುದು ಸೇರಿದಂತೆ ಹಲವು ದೂರುಗಳು ಸಾರ್ವಜನಿಕರಿಂದ ಲೋಕಾಯುಕ್ತ ಕಚೇರಿಗೆ ನಿರಂತರವಾಗಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕೋಲಾರ ಲೋಕಾಯುಕ್ತ ಎಸ್‌ಪಿ ಆಂಥೋನಿ ಜಾನ್ ಅವರ ಮಾರ್ಗದರ್ಶನದಲ್ಲಿ, ಪಿಐ ಆಂಜಿನಪ್ಪ ನೇತೃತ್ವದ ತಂಡ ನಗರಸಭೆ ಆರೋಗ್ಯ ಶಾಖೆಯ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link