Category Archives: Blog

Your blog category

‘ರಕ್ಷಿತಾ ಶೆಟ್ಟಿ ವಿನ್ನರ್’; ವೀಕ್ಷಕರಿಗೆ ಶಾಕ್ ಕೊಟ್ಟ ವಿಕಿಪೀಡಿಯಾ

Source link

ಕನ್ನಡದ ಸೂಪರ್ ಹಿಟ್ ಹಾಡು ಬಳಸಿಕೊಂಡ ತೆಲುಗಿನ ಸ್ಟಾರ್ ನಿರ್ದೇಶಕ – Kannada News | Telugu Director Sandeep Vanga Praises Iconic Kannada Song Naguva Nayana

ಕನ್ನಡ ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಹಲವು ಸೂಪರ್ ಹಿಟ್ ಗೀತೆಗಳು ಬಂದಿವೆ. ಅವುಗಳನ್ನು ಜನರು ಈಗಲೂ ಇಷ್ಟಪಡುತ್ತಾರೆ. ಈ ಹಾಡುಗಳು ಕಿವಿಗೆ ಕೇಳಲು ಇಂಪು. ಈ ಸಾಲಿನಲ್ಲಿ ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಚಿತ್ರದ ‘ನಗುವ ನಯನ..’ ಹಾಡು ಕೂಡ ಒಂದು. ಈ ಹಾಡು ಎಲ್ಲರ ಮೆಚ್ಚುಗೆ ಪಡೆಯಿತು. ಇದು ತೆಲುಗು ನಿರ್ದೇಶಕನಿಗೂ ಇಷ್ಟ ಆಗಿದೆ. ಅವರು ಹಾಡನ್ನು ಬಳಸಿಕೊಂಡಿದ್ದಾರೆ.

ಈ ರೀತಿ ಹಾಡು ಬಳಕೆ ಮಾಡಿದ್ದು ಬೇರೆ ಯಾರೂ ಅಲ್ಲ ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ. ‘ಅರ್ಜುನ್ ರೆಡ್ಡಿ’, ‘ಅನಿಮಲ್’ ರೀತಿಯ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ಸಖತ್ ರಾ ಆದಂತಹ ಚಿತ್ರಗಳನ್ನು ನೀಡುತ್ತಾರೆ. ಅವರು ಕನ್ನಡದ ‘ನಗುವ ನಯನ’ ಹಾಡನ್ನು ಇಷ್ಟಪಟ್ಟಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ ಸಂದೀಪ್ ರೆಡ್ಡಿ ವಂಗ. ಸಮುದ್ರ ತೀರದಲ್ಲಿ ಹಕ್ಕಿಯೊಂದು ನಡೆದಾಡುವ ವಿಡಿಯೋ ಇದು. ಈ ವಿಡಿಯೋಗೆ ಅವರು ಕನ್ನಡದ ‘ನಗುವ ನಯನ’ ಹಾಡನ್ನು ಹಾಕಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡಿಗರು ಈ ವಿಷಯಕ್ಕೆ ಸಂತಸಪಟ್ಟಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ

‘ಪಲ್ಲವಿ ಅನು ಪಲ್ಲವಿ’ ಸಿನಿಮಾ 1983ರಲ್ಲಿ ತೆರೆಗೆ ಬಂತು. ಅನಿಲ್ ಕಪೂರ್, ಲಕ್ಷ್ಮೀ ಮೊದಲಾದವರು ನಟಿಸಿದ್ದರು. ಮಣಿ ರತ್ನಂ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಇಳಯರಾಜ ಅವರು ಸಂಗೀತ ಸಂಯೋಜನೆ ಚಿತ್ರಕ್ಕೆ ಇತ್ತು.
ಸಂದೀಪ್ ರೆಡ್ಡಿ ಅವರು ಸದ್ಯ ತೆಲುಗಿನಲ್ಲಿ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಈ ಚಿತ್ರಕ್ಕೆ ಹೀರೋ. 2027ರಲ್ಲಿ ಸಿನಿಮಾ ತೆರೆಗೆ ಬರಲಿದೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಹಾಗೂ ‘ಸ್ಪಿರಿಟ್’ ಚಿತ್ರ ಒಟ್ಟಿಗೇ ತೆರೆಗೆ ಬರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NZ: ಟೀಂ ಇಂಡಿಯಾ ವಿರುದ್ಧ ಚೊಚ್ಚಲ ಶತಕ ಬಾರಿಸಿದ ಗ್ಲೆನ್ ಫಿಲಿಪ್ಸ್ – Kannada News | NZ Batting Masterclass: Daryl Mitchell and Glenn Phillips Smash Hundreds vs India

ಭಾರತ ಪ್ರವಾಸದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದು, ಮೂರನೇ ಪಂದ್ಯದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂದೋರ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ, ಡ್ಯಾರಿಲ್ ಮಿಚೆಲ್ ಸತತ ಎರಡನೇ ಶತಕ ಬಾರಿಸಿದರೆ, ಗ್ಲೆನ್ ಫಿಲಿಪ್ಸ್ ಕೂಡ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ.

Source link

ಈ ಆಹಾರ ಪದಾರ್ಥಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ – Kannada News | Foods that should not be cooked in a pressure cooker

ಈಗಂತೂ ಎಲ್ಲರ ಮನೆಗಳಲ್ಲೂ ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್‌ ಮಾಡುವವರೆಗೆ ಬಹುತೇಕ ಎಲ್ಲಾ ಅಡುಗೆ ಮಾಡಲು ಪ್ರತಿನಿತ್ಯ ಪ್ರೆಶರ್‌ ಕುಕ್ಕರ್‌ (pressure cooker) ಬಳಸಲಾಗುತ್ತದೆ. ಇದು ಆಹಾರವನ್ನು ತ್ವರಿತವಾಗಿ ಬೇಯಿಸುವ ಮೂಲಕ ಸಮಯ ಉಳಿತಾಯ ಮತ್ತು ಗ್ಯಾಸ್‌ ಉಳಿತಾಯ ಮಾಡಲು ಸಹಕಾರಿ ನಿಜ, ಆದರೆ ಅಡುಗೆ ಬೇಗನೇ ಆಗಿ ಹೋಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಬಗೆಯ ಆಹಾರಗಳನ್ನು ಕುಕ್ಕರ್‌ನಲ್ಲಿಯೇ ಬೇಯಿಸುವುದು ಸರಿಯಲ್ಲ. ಹೌದು ಕೆಲವೊಂದು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶ ನಾಶವಾಗುವುದಲ್ಲದೆ  ಅಂತಹ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ಈ ಕೆಲವು ಬಗೆಯ ಆಹಾರಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸಲೇಬಾರದು. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಲೇಬಾರದ ಆಹಾರ ಪದಾರ್ಥಗಳಿವು:

ಅನ್ನ: ಸಾಮಾನ್ಯವಾಗಿ ಹೆಚ್ಚಿನವರು ಅನ್ನವನ್ನು ಕುಕ್ಕರ್‌ನಲ್ಲಿಯೇ ಬೇಯಿಸುತ್ತಾರೆ. ಆದರೆ ಅನ್ನವನ್ನು ಎಂದಿಗೂ ಕುಕ್ಕರ್‌ನಲ್ಲಿ ಬೇಯಿಸಬಾರದು. ಏಕೆಂದರೆ, ಈ ರೀತಿ ಕುಕ್ಕರ್‌ನಲ್ಲಿ ಅನ್ನ ಬೇಯಿಸುವುದರಿಂದ ಆರ್ಸೆನಿಕ್ ಎಂಬ ವಿಷಕಾರಿ ವಸ್ತು ಬಿಡುಗಡೆಯಾಗುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ತೆರೆದ ಪಾತ್ರೆಯಲ್ಲಿ ಅನ್ನವನ್ನು ಬೇಯಿಸುವುದು ಉತ್ತಮ.

ಹಸಿರು ಎಲೆ ತರಕಾರಿಗಳು: ಪಾಲಕ್, ಮೆಂತ್ಯ ಸೊಪ್ಪು, ಹರಿವೆ ಸೊಪ್ಪಿನಂತಹ ಹಸಿರು ಎಲೆ ತರಕಾರಿಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶಗಳು ನಾಶವಾಗುತ್ತವೆ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಅವುಗಳನ್ನು ನಾರ್ಮಲ್‌  ಪ್ಯಾನ್‌ನಲ್ಲಿ ಕಡಿಮೆ ಉರಿಯಲ್ಲಿ ಬೇಯಿಸುವುದು ಉತ್ತಮ.

ಬೀನ್ಸ್: ಬೀನ್ಸ್‌ನಲ್ಲಿ ನೈಸರ್ಗಿಕವಾಗಿ ಕಂಡುಬರುವ ಲೆಕ್ಟಿನ್ ಎಂಬ ವಿಷವಿದ್ದು, ಸರಿಯಾಗಿ ಬೇಯಿಸದಿದ್ದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಆಹಾರ ವಿಷವನ್ನು ಸಹ ಉಂಟುಮಾಡಬಹುದು. ಅಲ್ಲದೆ ಒತ್ತಡದಲ್ಲಿ ಬೇಯಿಸುವುದರಿಂದ ಬೀನ್ಸ್‌ನಲ್ಲಿರುವ ಲೆಕ್ಟಿನ್ ವೇಗವಾಗಿ ಒಡೆಯುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ತರಕಾರಿಯನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವುದು ಸರಿಯಲ್ಲ.

ಹಾಲು ಮತ್ತು ಹಾಲಿನ ಉತ್ಪನ್ನಗಳು: ಪ್ರೆಶರ್ ಕುಕ್ಕರ್‌ನಲ್ಲಿ ಹಾಲನ್ನು ಕುದಿಸುವುದರಿಂದ ಅದರ ನೈಸರ್ಗಿಕ ರಚನೆಯಲ್ಲಿ ಬದಲಾವಣೆ ಉಂಟಾಗಬಹುದು ಮತ್ತು ಅದು ಉರಿಯಲು ಅಥವಾ ಹೆಪ್ಪುಗಟ್ಟಲು ಕಾರಣವಾಗಬಹುದು, ಇದರಿಂದಾಗಿ ಅದರ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಹಾಲನ್ನು ಕುದಿಸಲು ಸ್ಟೀಲ್ ಅಥವಾ ನಾನ್-ಸ್ಟಿಕ್ ಪ್ಯಾನ್ ಉತ್ತಮ.

ಟೊಮ್ಯಾಟೊ: ಟೊಮೆಟೊ, ಹುಣಸೆಹಣ್ಣು ಅಥವಾ ಹುಳಿ ಆಹಾರವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವು ಹೆಚ್ಚು ಆಮ್ಲೀಯವಾಗಬಹುದು, ಇದು ದೇಹಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ, ಅವುಗಳನ್ನು ಉಕ್ಕಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ಬೇಯಿಸುವುದು ಉತ್ತಮ.

ಇದನ್ನೂ ಓದಿ: ಶುಂಠಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ?

ದ್ವಿದಳ ಧಾನ್ಯಗಳು ಮತ್ತು ಕಿಡ್ನಿ ಬೀನ್ಸ್: ಬೀನ್ಸ್ ಮತ್ತು ಕೆಲವು ಧಾನ್ಯಗಳು ನೈಸರ್ಗಿಕ ವಿಷಕಾರಿ ಅಂಶಗಳನ್ನು ಒಳಗೊಂಡಿರುತ್ತವೆ, ಇವುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಸಂಪೂರ್ಣವಾಗಿ ಹೊರಹಾಕಲಾಗುವುದಿಲ್ಲ. ಆದ್ದರಿಂದ, ಅವುಗಳನ್ನು ರಾತ್ರಿಯಿಡೀ ನೆನೆಸಿ ನಂತರ ಕಡಿಮೆ ಉರಿಯಲ್ಲಿ ತೆರೆದ ಪಾತ್ರೆಯಲ್ಲಿ ಬೇಯಿಸುವುದು ಆರೋಗ್ಯಕರವಾಗಿರುತ್ತದೆ.

ಆಲೂಗಡ್ಡೆ ಮತ್ತು ಇತರೆ ಪಿಷ್ಟ ತರಕಾರಿಗಳು: ಆಲೂಗಡ್ಡೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪಿಷ್ಟವು ಬೇಗನೆ ಒಡೆಯುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು . ಆದ್ದರಿಂದ, ಇದನ್ನು ಪ್ಯಾನ್‌ನಲ್ಲಿಯೇ ಬೇಯಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Inspiring: ಬ್ಯಾಂಕ್ ಸಾಲ ಕೊಡದಾಗ ಮನೆ ಖರ್ಚಿನಲ್ಲಿ ಹಣ ಉಳಿಸಿ ಬ್ಯುಸಿನೆಸ್ ಕಟ್ಟಿ ಯಶಸ್ವಿಯಾದ ಪ್ರತಿಭಾ ಶರ್ಮಾ – Kannada News | Pratibha Sharma’s successful entrepreneurship journey from small savings to women fitness centre

ಮುಂಬೈನ ಪ್ರತಿಭಾ ಶರ್ಮಾ (Pratibha Sharma) ಅವರ ಕಥೆಯು ಮನೆಯ ಜವಾಬ್ದಾರಿಗಳ ನಡುವೆ ತಮ್ಮ ಕನಸುಗಳನ್ನು ಬಚ್ಚಿಡುವ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ವಿಜ್ಞಾನ ಪದವೀಧರೆ ಮತ್ತು ತಾಯಿಯಾಗಿ ಅವರು ಫಿಟ್ನೆಸ್ ಉದ್ಯಮದಲ್ಲಿ ಗಮನಾರ್ಹ ಕೊರತೆ ಇರುವುದನ್ನು ಗುರುತಿಸಿದರು. ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಮಾಲೀಕರು ಗೃಹಿಣಿಯರನ್ನು ಮತ್ತು ಹೊಸ ತಾಯಂದಿರನ್ನು ನಿರ್ಲಕ್ಷಿಸುತ್ತಿರುವುದು ಅವರ ಅರಿವಿಗೆ ಬಂತು. ಈ ಆಲೋಚನೆಯು ಪ್ರತಿಭಾಗೆ ತನ್ನದೇ ಆದ ಮಾರ್ಗವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡಿತು. ಸೀಮಿತ ಸಂಪನ್ಮೂಲಗಳ ನಡುವೆಯೂ, ಅವರು ತಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಆ ಹಾದಿಯಲ್ಲಿ ಮುಂದುವರಿಯಲು ನಿರ್ಧರಿಸಿದರು.

ಫಿಟ್‌ನೆಸ್ ಉದ್ಯಮದಲ್ಲಿ ಅವಶ್ಯಕತೆ ಬಗ್ಗೆ ತಲೆಕೆಡಿಸಿಕೊಂಡವರಿಲ್ಲ

ಹೆಚ್ಚಿನ ಜಿಮ್‌ಗಳು ಕಾರ್ಯನಿರತ ಮಹಿಳೆಯರ ಸಮಯ ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಪ್ರತಿಭಾ ಶರ್ಮಾ ಗಮನಿಸಿದರು. ಗೃಹಿಣಿಯರು ಮತ್ತು ಹೊಸ ತಾಯಂದಿರು ಸರಿಯಾದ ಸಮಯದಲ್ಲಿ ಜಿಮ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಅವರ ಫಿಟ್‌ನೆಸ್ ಅಗತ್ಯಗಳು ವಿಭಿನ್ನವಾಗಿರುತ್ತವೆ. ಪ್ರತಿಭಾ ಶರ್ಮಾ ಅವರು ಈ ಕೊರತೆಯನ್ನು ಒಂದು ಅವಕಾಶವಾಗಿ ನೋಡಿದರು. ಮಹಿಳೆಯರ ದೈನಂದಿನ ದಿನಚರಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಫಿಟ್‌ನೆಸ್ ಕೇಂದ್ರವನ್ನು ರಚಿಸಲು ಅವರು ನಿರ್ಧರಿಸಿದರು. ಈ ಕಲ್ಪನೆಯು ಅವರ ಬ್ಯುಸಿನೆಸ್​ನ ಅಡಿಪಾಯವಾಯಿತು.

ಬ್ಯಾಂಕ್​ನಿಂದ ಬೆಂಬಲ ಸಿಗದಿದ್ದಾಗ ಸ್ವಂತವಾಗಿ ದಾರಿ ಕಂಡುಕೊಂಡ ಮಿಸಸ್ ಶರ್ಮಾ

ಪ್ರತಿಭಾ ಶರ್ಮಾ ತನ್ನ ಬ್ಯುಸಿನೆಸ್ ಪ್ರಾರಂಭಿಸಲು ಬ್ಯಾಂಕಿನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ಅನುಭವ ಮತ್ತು ಗ್ಯಾರಂಟಿ ಇಲ್ಲವೆಂದು ಸಾಲ ನಿರಾಕರಿಸಲಾಯಿತು. ಆದರೆ ಅವರು ಹತಾಶಗೊಂಡು ಪ್ರಯತ್ನ ನಿಲ್ಲಿಸಲಿಲ್ಲ. ಅಮ್ಮನಿಂದ ಕಲಿತ ಉಳಿತಾಯದ ಪಾಠ ಇವರಿಗೆ ನೆರವಿಗೆ ಬಂತು. ತಮಗೆ ಬೇಕಿದ್ದ ಬಂಡವಾಳವನ್ನು ಸೇವಿಂಗ್ಸ್ ಮೂಲಕ ಕಲೆಹಾಕಲು ನಿರ್ಧರಿಸಿದರು. ತಮ್ಮ ಮನೆಯ ಖರ್ಚಿನ ಹಣದಲ್ಲಿ ತಿಂಗಳಿಗೆ ₹15,000 ಉಳಿಸುತ್ತಾ ಹೋದರು. ಸುಮಾರು 18 ತಿಂಗಳುಗಳಲ್ಲಿ ಅವರಿಗೆ ಆರಂಭಿಕ ಬಂಡವಾಳ ಸಿಕ್ಕಿತ್ತು. ಈ ಪ್ರಯಾಣವು ಇದೇ ರೀತಿ ಶಿಸ್ತಿನಲ್ಲಿ ಮುಂದುವರಿಯುತ್ತಾ ಹೋಯಿತು.

11:11 ಸ್ಲಿಮ್ಮಿಂಗ್ ಅಂಡ್ ಫಿಟ್ನೆಸ್ ಸೆಂಟರ್ ಉದ್ಘಾಟನೆ

ಜನವರಿ 9, 2017 ರಂದು, ಪ್ರತಿಭಾ ಶರ್ಮಾ 11:11 ಸ್ಲಿಮ್ಮಿಂಗ್ ಅಂಡ್ ಫಿಟ್ನೆಸ್ ಸೆಂಟರ್ ಅನ್ನು ಪ್ರಾರಂಭಿಸಿದರು. ಇದರ ಆರಂಭ ಸಣ್ಣದಾಗಿದ್ದರೂ ದೃಷ್ಟಿಕೋನ ದೊಡ್ಡದಾಗಿತ್ತು. ಏಳು ವರ್ಷಗಳ ನಂತರ ಇಂದು ಈ ಸೆಂಟರ್ 1,000 ಕ್ಕೂ ಹೆಚ್ಚು ಮಹಿಳೆಯರಿಗೆ ಸೇವೆ ಸಲ್ಲಿಸುತ್ತದೆ. ಇವರಲ್ಲಿ ಶೇ. 80ರಷ್ಟು ಮಹಿಳೆಯರು ಈ ಹಿಂದೆ ಫಿಟ್ನೆಸ್ ಸೆಂಟರ್​ಗಳಿಂದ ನಿರ್ಲಕ್ಷಿಸಲ್ಪಟ್ಟವರೇ. ಶರ್ಮಾ ಅವರ ಹೊಸ ಮಾದರಿ ಫಿಟ್ನೆಸ್ ಸೆಂಟರ್ ಕೇವ ವ್ಯಾಯಾಮದ ಸ್ಥಳವಾಗಿರಲಿ, ಬದಲಾಗಿ ಮಹಿಳೆಯರ ಆತ್ಮವಿಶ್ವಾಸದ ಕೇಂದ್ರವೆನಿಸಿತು.

ಮಹಿಳೆಯರ ಸ್ವಾವಲಂಬನೆಗೆ ನಿದರ್ಶನ

ಆಲೋಚನೆ ಮತ್ತು ಪ್ಲಾನಿಂಗ್​ನೊಂದಿಗೆ ಆರ್ಥಿಕ ಸ್ವಾತಂತ್ರ್ಯ ಆರಂಭವಾಗುತ್ತದೆ ಎಂಬುದನ್ನು ನಾವು ಪ್ರತಿಭಾ ಶರ್ಮಾ ಅವರನ್ನು ಕಂಡು ಕಲಿಯಬಹುದು. ಎಲ್ಲಾ ಬಾರಿಯೂ ಹೊರಗಿನಿಂದ ಸಹಾಯ ಬೇಕಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ನಿಯಮಿತ ಉಳಿತಾಯ ಕೂಡ ದೊಡ್ಡ ವ್ಯತ್ಯಾಸ ಉಂಟುಮಾಡುತ್ತದೆ. ಮಹಿಳೆಯರು ತಮ್ಮ ಮೇಲೆಯೇ ಹೂಡಿಕೆ ಮಾಡಿದಾಗ, ಅಂದರೆ ಅವರ ನಂಬಿಕೆ, ವಿಶ್ವಾಸ, ಪ್ರತಿಭೆಯೊಂದಿಗೆ ಮುಂದುವರಿದಾಗ ಅವರ ಜೀವನ ಮಾತ್ರವಲ್ಲ, ಸಮಾಜವನ್ನೂ ಹೇಗೆ ಸಕಾರಾತ್ಮಕವಾಗಿ ಬದಲಾಯಿಸಬಲ್ಲರು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಪ್ರತಿಭಾ ಶರ್ಮಾ ಇದ್ದಾರೆ.

ಪ್ರತಿಭಾ ಶರ್ಮಾ

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿಪ್ಸ್ ಪ್ಯಾಕೆಟ್​​ನಲ್ಲಿ ಗಾಳಿ ತುಂಬಿಸಿರುವುದು ಯಾಕೆ ಗೊತ್ತಾ? – Kannada News | This is the reason behind the air filled chips packets

ಚಿಪ್ಸ್, ಲೇಸ್ ಅಂದರೆ ಸಾಕು ಪುಟಾಣಿ ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿ ಚಪ್ಪರಿಸಿ ಸವಿಯುವ ಈ ಟಿಪ್ಸ್ ಪ್ಯಾಕೆಟ್​​ನಲ್ಲಿ (chips packet) ಈ ತಿನಿಸಿನ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಈ ಪ್ಯಾಕೆಟ್‌ಗೆ ಗಾಳಿ ತುಂಬಿಸಿರುತ್ತಾರೆ. ಮಕ್ಕಳನ್ನು ಮರುಳು ಮಾಡಲು ಗಾಳಿ ತುಂಬಿಸಿಡುತ್ತಾರೆ ಎಂದು ದೂರುವ ಮುನ್ನ ನೀವು ಇದರ ಹಿಂದಿನ ಈ ಕಾರಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಪ್ಯಾಕೆಟ್‌ನಲ್ಲಿ ಗಾಳಿ ತುಂಬಿರಲು ಕಾರಣವಿದು

ಚಿಪ್ಸ್​ ಅಥವಾ ಲೇಸ್ ಪ್ಯಾಕೆಟ್​​ನಲ್ಲಿ ಸಾರಜನಕವನ್ನು ತುಂಬಿರುತ್ತಾರೆ. ಆಮ್ಲಜನಕವನ್ನು ತುಂಬಿದರೆ ಇದು ಚಿಪ್ಸ್​ಗಳನ್ನು ಹಾಳುಮಾಡುತ್ತದೆ, ಈ ಚಿಪ್ಸ್ ಬೇಗನೆ ಹಾಳಾಗುತ್ತದೆ. ಈ ಗಾಳಿ ಪ್ಯಾಕೆಟ್​​ನಲ್ಲಿರುವ ಚಿಪ್ಸ್ ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ. ಹೀಗಾಗಿ ಸಾರಜನಕದ ಗಾಳಿಯನ್ನು ಚಿಪ್ಸ್ ಪ್ಯಾಕೆಟ್ ಗಳಲ್ಲಿ ತುಂಬಲಾಗುತ್ತದೆ.

ಇದನ್ನೂ ಓದಿ: ಬಸ್ಸಿನ ಸೀಟುಗಳು ಗಾಢ ಬಣ್ಣದಲ್ಲಿರಲು ಕಾರಣ ಇದೇ ನೋಡಿ

ಅದಲ್ಲದೇ, ಈ ಚಿಪ್ಸ್ ಪ್ಯಾಕೆಟ್ ಗಳನ್ನು ಬೇರೆ ಬೇರೆ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಈ ಸಂದರ್ಭ ಪ್ಯಾಕೆಟ್ ಒಳಗಿರುವ ಚಿಪ್ಸ್  ಪುಡಿ ಪುಡಿಯಾಗಬಹುದು. ಆದರೆ ಈ ಪ್ಯಾಕೆಟ್‌ನಲ್ಲಿ ಗಾಳಿ ತುಂಬಿರುವ ಕಾರಣ ಚಿಪ್ಸ್ ಪುಡಿ ಪುಡಿಯಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಚಿಪ್ಸ್‌ ಪ್ಯಾಕೆಟ್‌ಗೆ ಗಾಳಿ ತುಂಬಿಸಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Sun, 18 January 26

Source link

‘ಲ್ಯಾಂಡ್​ಲಾರ್ಡ್’ ಟ್ರೈಲರ್: ಇದು ದಮಮಿತರ ಸಿಟ್ಟಿನ ಕತೆ – Kannada News | Duniya Vijay starrer Landlord Kannada Movie trailer released

ದುನಿಯಾ ವಿಜಯ್ (Duniya Vijay) ನಟನೆಯ ‘ಲ್ಯಾಂಡ್​​ಲಾರ್ಡ್’ ಸಿನಿಮಾದ ಟ್ರೈಲರ್ ಇಂದು (ಜನವರಿ 18) ಬಿಡುಗಡೆ ಆಗಿದೆ. ಕನ್ನಡ ಚಿತ್ರರಂಗದ ಯಶಸ್ವಿ ಕತೆಗಾರ ಜಡೇಶ್ ಹಂಪಿ ನಿರ್ದೇಶನ ಮಾಡಿರುವ ಈ ಸಿನಿಮಾ ಭೂಮಾಲೀಕರ ತುಳಿತಕ್ಕೆ ಒಳಗಾದವರ ಕತೆಯನ್ನು ಒಳಗೊಂಡಿರುವುದು ಟ್ರೈಲರ್​​ನಿಂದ ಗೊತ್ತಾಗುತ್ತಿದೆ. ಜಡೇಶ್ ಅವರ ನೆಚ್ಚಿನ ಜಾನರ್​​ ಇದಾಗಿದ್ದು, ಈ ಹಿಂದೆ ಜಡೇಶ್ ಅವರೇ ಕತೆ ಬರೆದಿದ್ದ ‘ಕಾಟೇರ’ ಸಿನಿಮಾದ ಕತೆಯೂ ಇದೇ ಮಾದರಿಯದ್ದಾಗಿತ್ತು. ‘ಲ್ಯಾಂಡ್​​ಲಾರ್ಡ್’ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ತಮಿಳಿನ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಅಸುರನ್’ ಅನ್ನು ನೆನಪಿಸುತ್ತಿದೆ ಈ ಸಿನಿಮಾ.

‘ಲ್ಯಾಂಡ್​ಲಾರ್ಡ್’ ಸಿನಿಮಾ ಹೆಸರೇ ಸೂಚಿಸುತ್ತಿರುವಂತೆ ಭೂಮಾಲಿಕರ ದರ್ಪದ ಕತೆ. ಜೀತದಾಳುಗಳ ನೋವಿನ ಕತೆ. ದುನಿಯಾ ವಿಜಯ್ ಅವರು ತಮ್ಮ ಇತರೆ ಕೆಲ ಸಿನಿಮಾಗಳಿಗಿಂತಲೂ ಭಿನ್ನವಾದ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ಇಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ ಆದರೆ ಸಿನಿಮಾಕ್ಕೆ ಅವರೇ ನಾಯಕ. ಅಮಾನವೀಯ, ಅಹಂಕಾರಿ ಭೂಮಾಲೀಕನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದು, ರಾಜ್ ವಿಲನ್ ಆಗಿಯೂ ಸಖತ್ ಗಮನ ಸೆಳೆದಿರುವುದು ಟ್ರೈಲರ್​​ನಲ್ಲಿಯೇ ತಿಳಿದು ಬರುತ್ತಿದೆ.

ಟ್ರೈಲರ್ ಹೆಚ್ಚು ವಿಷಯಗಳನ್ನು ಬಿಟ್ಟುಕೊಟ್ಟಿಲ್ಲವಾದರೂ ಭೂಮಾಲೀಕರ ದೌರ್ಜನ್ಯಕ್ಕೆ ಒಳಗಾಗುವ ಕುಟುಂಬವೊಂದು ಅದನ್ನು ಮೆಟ್ಟಿ ನಿಲ್ಲುವ ಜೊತೆಗೆ ತಮ್ಮಂತೆ ಸಂತ್ರಸ್ತರಾದವರಲ್ಲಿ ಶಕ್ತಿ, ಮಾಹಿತಿ ತುಂಬುವ ಕತೆಯಿಂಬೆದು ತಿಳಿಯುತ್ತುಇದೆ. ಸಿನಿಮಾನಲ್ಲಿ ವಿಜಯ್ ಪುತ್ರಿ ರಿತನ್ಯ ಅವರು ನಟಿಸಿದ್ದು, ಪೊಲೀಸ್ ಕಾನ್​​ಸ್ಟೇಬಲ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಯುವ ನಟ ಶಿಶಿರ್ ಬೈಕಾಡಿ ಪಾತ್ರವೂ ಗಮನ ಸೆಳೆಯುತ್ತಿದೆ. ರಾಕೇಶ್ ಅಡಿಗ ಸಹ ಸಖತ್ ವಿಲನಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ರಚಿತಾ ರಾಮ್ ಪಾತ್ರವೂ ಖಡಕ್ ಆಗಿದೆ.

ಟ್ರೈಲರ್​​ನಲ್ಲಿ ಕೆಲವು ಅದ್ಧೂರಿ ಆಕ್ಷನ್ ದೃಶ್ಯಗಳು, ಕೆಲವು ಹಾಸ್ಯ ದೃಶ್ಯಗಳ ಝಲಕ್, ಹಾಡುಗಳು, ವಿಲನ್​​ನ ಅಬ್ಬರವನ್ನು ತೋರಿಸಲಾಗಿದೆ. ಒಟ್ಟಾರೆಯಾಗಿ ಜಡೇಶ ಅವರು ದಮನಿತರ ಸಿಟ್ಟಿನ ಕತೆಯನ್ನು ಆಕ್ಷನ್ ಲೇಪದೊಂದಿಗೆ ತೆರೆಗೆ ತಂದಿರುವುದು ಟ್ರೈಲರ್​​ನಿಂದ ತಿಳಿದು ಬರುತ್ತಿದೆ. ಸಿನಿಮಾಕ್ಕೆ ಹೇಮಂತ್ ಗೌಡ ಮತ್ತು ಕೆವಿ ಸಂಪತ್ ಅವರು ಬಂಡವಾಳ ಹೂಡಿದ್ದಾರೆ. ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್. ಸಂಭಾಷಣೆ ಬರೆದಿರುವುದು ಮಾಸ್ತಿ ಉಪ್ಪಾರಹಳ್ಳಿ. ಸಿನಿಮಾ ಜನವರಿ 23ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ಜನವರಿ ತಿಂಗಳ ಮೂರನೇ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ – Kannada News | January 3rd Week Horoscope 2026: 4 Planets Shift to Capricorn Your Zodiac Prediction

ಜನವರಿ ತಿಂಗಳ ಮೂರನೇ ವಾರ ನಾಲ್ಕು ಗ್ರಹಗಳೂ ಧನುವಿನಿಂದ ಮಕರಕ್ಕೆ ಹೋಗುವರು. ಕುಜನ ಉಚ್ಚ ಸ್ಥಾನ ಇದಾಗಿದ್ದು ಎಲ್ಲರ ಬೆಂಬಲವೂ ಇದೆ. ಧೈರ್ಯದಿಂದ ಮುನ್ನಡೆದರೆ ಅಸಾಧ್ಯವೂ ತಾನಾಗಿಯೇ ಸಾಧ್ಯವಾಗಲಿದೆ. ಶುಭಮಸ್ತು ಸರ್ವದಾ

ಮೇಷ ರಾಶಿ:

ಮೂರನೇ ವಾರದಲ್ಲಿ ಆರ್ಥಿಕ ಸ್ಥಿರತೆ, ವ್ಯವಹಾರದಲ್ಲಿ ನಿಧಾನ ಪ್ರಗತಿ. ಬಂಧು ಸಹಕಾರ. ಮಾತುಕತೆಯಲ್ಲಿ ಸಂಯಮ ಅಗತ್ಯ. ಆರೋಗ್ಯದಲ್ಲಿ ವಿಶ್ರಾಂತಿ ಮುಖ್ಯ. ಹಿರಿಯರ ಮಾರ್ಗದರ್ಶನ ಲಾಭ ನೀಡುತ್ತದೆ.

ವೃಷಭ ರಾಶಿ:

ಈ ವಾರ ಹಣಕಾಸು ನಿರ್ಧಾರಗಳಲ್ಲಿ ಎಚ್ಚರ. ಕುಟುಂಬ ಬೆಂಬಲ ದೊರೆಯುತ್ತದೆ. ವ್ಯವಹಾರದಲ್ಲಿ ಲೆಕ್ಕಾಚಾರ ಅಗತ್ಯ. ಮಾತಿನ ಸ್ಪಷ್ಟತೆ ಗೌರವ ತರುತ್ತದೆ. ಆರೋಗ್ಯ ಗಮನಿಸಬೇಕು.

ಮಿಥುನ ರಾಶಿ:

ಮೂರನೇ ವಾರದಲ್ಲಿ ಆದಾಯ ಸುಧಾರಣೆಯ ಸೂಚನೆ ಸಿಗಲಿದೆ. ಬಂಧುಗಳೊಂದಿಗೆ ಸಂವಾದ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಹೊಸ ಆಲೋಚನೆಗಳು ಫಲ ಕೊಡುತ್ತವೆ. ಮಾತಿನ ಜಾಣ್ಮೆ ಯಶಸ್ಸು ತರುತ್ತದೆ.

ಕರ್ಕಾಟಕ ರಾಶಿ:

ನಾಲ್ಕನೇ ರಾಶಿಯವರಿಗೆ ಖರ್ಚು ನಿಯಂತ್ರಣ ಅಗತ್ಯ. ಕುಟುಂಬ ಜವಾಬ್ದಾರಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ತಾಳ್ಮೆ ಅವಶ್ಯ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಹಿರಿಯರ ಸಲಹೆಯಿಂದ ನಿಮಗೆ ಸಹಾಯ.

ಸಿಂಹ ರಾಶಿ:

ಜನವರಿಯ ಈ ವಾರದಲ್ಲಿ ಆರ್ಥಿಕವಾಗಿ ಧೈರ್ಯ ತೋರಬಹುದು. ಬಂಧುಗಳಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ನಾಯಕತ್ವ ಲಾಭ. ಮಾತಿನ ಪ್ರಭಾವ ಹೆಚ್ಚಾಗುತ್ತದೆ. ಆರೋಗ್ಯ ಸ್ಥಿರತೆ.

ಕನ್ಯಾ ರಾಶಿ:

ಆರನೇ ರಾಶಿಯವರಿಗೆ ಹಣಕಾಸಿನಲ್ಲಿ ಲೆಕ್ಕಪತ್ರ ಮುಖ್ಯ. ಕುಟುಂಬದಲ್ಲಿ ಸಣ್ಣ ಅಸಮಾಧಾನ. ವ್ಯವಹಾರದಲ್ಲಿ ಕ್ರಮಬದ್ಧತೆ ಲಾಭ. ಮಾತಿನಲ್ಲಿ ಸಂಯಮ ಕಾಯ್ದುಕೊಳ್ಳಿ. ಆರೋಗ್ಯ ಸರಾಸರಿ.

ತುಲಾ ರಾಶಿ:

ಆರ್ಥಿಕ ಸಮತೋಲನ ಸಾಧ್ಯ ಈ ವಾರ ಸಾಧ್ಯವಾಗಬಹುದು. ಬಂಧು ಸಂಬಂಧ ಬಲವಾಗುತ್ತದೆ. ವ್ಯವಹಾರ ಒಪ್ಪಂದಗಳಲ್ಲಿ ಜಾಗ್ರತೆ. ಮಾತುಕತೆ ಯಶಸ್ಸಿಗೆ ದಾರಿ. ಆರೋಗ್ಯದ ಕಡೆಗೆ ಗಮನಹರಿಸಿ.

ವೃಶ್ಚಿಕ ರಾಶಿ:

ನಿಮ್ಮದೇ ಆದ ಹಠ ತಪ್ಪಿಸಿ ಈ ವಾರ ಹಣಕಾಸಿನ ರಕ್ಷಣೆಯ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಾವನಾತ್ಮಕ ಕ್ಷಣಗಳು. ವ್ಯವಹಾರದಲ್ಲಿ ರಹಸ್ಯ ಯೋಜನೆ ಲಾಭ. ಮಾತಿನಲ್ಲಿ ತೀಕ್ಷ್ಣತೆ ಕಡಿಮೆ ಮಾಡಿಕೊಳ್ಳುವಿರಿ.

ಧನು ರಾಶಿ:

ಒಂಭತ್ತನೇ ರಾಶಿಯವರಿಗೆ ಈ ವಾರ ಆದಾಯ ಅವಕಾಶಗಳು ಕಾಣಿಸುತ್ತವೆ. ಬಂಧುಗಳಿಂದ ಸಹಾಯ. ವ್ಯವಹಾರದ ವಿಸ್ತರಣೆಯ ಯೋಚನೆ ಬರಲಿದೆ. ಮಾತಿನ ಉತ್ಸಾಹ ಫಲ ನೀಡುತ್ತದೆ. ಆರೋಗ್ಯದಲ್ಲಿ ಚುರುಕು.

ಮಕರ ರಾಶಿ:

ಈ ವಾರ ನಿಮಗೆ ಆರ್ಥಿಕ ಸ್ಥಿರತೆಯನ್ನು ಕಂಡುಕೊಳ್ಳುವ ಮನಸ್ಸು ಹೆಚ್ಚಾಗುತ್ತದೆ. ಕುಟುಂಬ ಜವಾಬ್ದಾರಿ ನಿರ್ವಹಣೆ ಅಗತ್ಯ. ವ್ಯವಹಾರದಲ್ಲಿ ಶ್ರಮ ಫಲಿಸುತ್ತದೆ. ಮಾತಿನಲ್ಲಿ ಗಂಭೀರತೆಯಿಂದ ಗೌರವ ಬರುತ್ತದೆ.

ಕುಂಭ ರಾಶಿ:

ನಿಮಗೆ ಹಣಕಾಸಿನ ವಿಚಾರಗಳಲ್ಲಿ ಹೊಸ ದಾರಿ ಸಿಗಬಹುದು. ಬಂಧುಗಳಲ್ಲಿ ಸ್ನೇಹ ಬೆಳವಣಿಗೆಯಾಗಲಿದೆ. ವ್ಯವಹಾರದಲ್ಲಿ ತಂತ್ರಬದ್ಧ ಚಿಂತನೆ ಲಾಭ. ಮಾತಿನಲ್ಲಿ ಹೊಸತನ ಗಮನ ಸೆಳೆಯುತ್ತದೆ.

ಮೀನ ರಾಶಿ:

ಈ ವಾರ ನಿಮಗೆ ಆರ್ಥಿಕವಾಗಿ ತಾಳ್ಮೆ ಅಗತ್ಯ. ಕುಟುಂಬ ಬೆಂಬಲ ಮನಶ್ಶಾಂತಿ ಕೊಡುತ್ತದೆ. ವ್ಯವಹಾರದಲ್ಲಿ ಗೊಂದಲ ತಪ್ಪಿಸಿ. ಮಾತಿನಲ್ಲಿ ಸೌಮ್ಯತೆ ಜಯ ತರುತ್ತದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಜಾನ್ವಿ ಎಡವಟ್ಟು; ಇದೆಲ್ಲಾ ಬೇಕಿತ್ತಾ? – Kannada News | Janhavi’s Bigg Boss Kannada Finale Controversy: Social Media Posts Spark Debate

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಜಾನ್ವಿ ಅವರು ಎಲಿಮಿನೇಟ್ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಅವರು ವಿವಿಧ ಫೋಟೋಶೂಟ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಫಿನಾಲೆ ಸಂದರ್ಭದಲ್ಲಿ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಅವರು ಮಾಡಿರುವ ಪೋಸ್ಟ್ ಬಗ್ಗೆ ಚರ್ಚೆ ಶುರುವಾಗಿದೆ. ಜಾನ್ವಿ ಹೊಟ್ಟೆ ಉರಿದುಕೊಂಡು ಈ ರೀತಿ ಪೋಸ್ಟ್ ಹಾಕಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಗ್ ಬಾಸ್ ಅಲ್ಲಿ ಇದ್ದಷ್ಟು ದಿನ ಜಾನ್ವಿ ಚರ್ಚೆಯಲ್ಲಿ ಇದ್ದರು. ಕಲರ್ಸ್ ಕನ್ನಡದವರು ಸ್ಪಂದನಾ ಅವರನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. ಈ ಬಗ್ಗೆ ಚರ್ಚೆ ನಡೆದಿತ್ತು. ಸುದೀಪ್ ಕೂಡ ಇದನ್ನು ಪ್ರಶ್ನೆ ಮಾಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಜಾನ್ವಿ ಚರ್ಚೆಯಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ

ಬಿಗ್ ಬಾಸ್ ಫಿನಾಲೆ ನಡೆಯುತ್ತಿದೆ. ಗಿಲ್ಲಿ ನಟನಿಗೆ ಸಾಕಷ್ಟು ಹೈಪ್ ಸಿಗುತ್ತಿದೆ. ಈ ಹೈಪ್ ನೋಡಿದ ಅನೇಕರಿಗೆ ಈರ್ಷೆ ಬಂದಿದೆ ಎಂಬ ಅಭಿಪ್ರಾಯ ಅಭಿಮಾನಿಗಳದ್ದು. ‘ಗಿಲ್ಲಿಗೆ ಹೈಪ್ ನೀಡೋದು ಸರಿ ಎನಿಸುತ್ತಿಲ್ಲ’ ಎಂಬರ್ಥದ ಸ್ಟೇಟಸ್​​ನ ಅವರು ಹಾಕಿದ್ದರು. ನಂತರ, ‘ಅಶ್ವಿನಿ ದುಡ್ಡು ಕೊಟ್ಟು ವೋಟ್ ಖರೀದಿ ಮಾಡಿದ್ದಾರೆ ಎಂದು ಆರೋಪಿಸುವವರು ಚುನಾವಣೆ ಸಂದರ್ಭದಲ್ಲೂ ಈ ಬಗ್ಗೆ ಪ್ರಶ್ನೆ ಮಾಡಿ’ ಎಂಬ ಸ್ಟೇಟಸ್​​ನ ಹಂಚಿಕೊಂಡಿದ್ದಾರೆ.

ಯಾವುದೇ ಸ್ಪರ್ಧಿಗೆ ಹೈಪ್ ಕೊಡೋದು ತಪ್ಪೇ ಎಂಬುದು ಅನೇಕರ ಪ್ರಶ್ನೆ. ‘ಇಷ್ಟೆಲ್ಲಾ ಬುದ್ಧಿವಂತಿಕೆ ಮಾತಾಡೋರು ಮತ್ತೆ ಬಿಗ್ ಬಾಸ್ ಮನೆಗೆ ಯಾಕೆ ಹೋಗಿದ್ದು ಜಾನವಿ ಮೇಡಂ’ ಎಂದು ಜಾನ್ವಿಯನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:21 pm, Sun, 18 January 26

Source link

ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ ಪ್ರಸಾದ – Kannada News | Koppalas Gavimath Fair: 18 Day Dasoha end with 85 Quintals of Godi Huggi

ಕೊಪ್ಪಳ, ಜನವರಿ 18: ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಮಠದ ಮಹಾದಾಸೋಹಕ್ಕೆ ಇಂದು ಕೊನೆಯ ದಿನ. 18 ದಿನಗಳ ಕಾಲ ನಡೆದ ಮಹಾರಥೋತ್ಸವ ಹಿನ್ನೆಲೆ ದಾಸೋಹವನ್ನು ಏರ್ಪಡಿಸಲಾಗಿತ್ತು. ಜಾತ್ರೆಯ ಕೊನೆಯ ದಿನದಂದು ಭಕ್ತರಿಗೆ ವಿಶೇಷವಾಗಿ ಗೋಧಿ ಹುಗ್ಗಿಯನ್ನು ಪ್ರಸಾದವಾಗಿ ನೀಡಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಸುಮಾರು 85 ಕ್ವಿಂಟಾಲ್ ಗೋಧಿ ಹುಗ್ಗಿ ಸಿದ್ಧಪಡಿಸಲಾಗಿತ್ತು. 25 ಕ್ವಿಂಟಾಲ್ ಗೋಧಿ, 50 ಕ್ವಿಂಟಾಲ್ ಬೆಲ್ಲ, ಕಡ್ಲೆಬೇಳೆ ಮತ್ತು ಕೊಬ್ಬರಿಯನ್ನು ಬಳಸಿ ಈ ಬೃಹತ್ ಪ್ರಮಾಣದ ಗೋಧಿ ಹುಗ್ಗಿಯನ್ನು ಎಂಟು ಕೊಪ್ಪರಿಗೆಗಳಲ್ಲಿ ತಯಾರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link