Category Archives: Blog

Your blog category

ಅದ್ಭುತ, ಅನದ್ಭುತ ಕ್ಯಾಚ್; ಶುಭ್​​ಮನ್ ಡೈವ್​​​ಗೆ ಚೆನ್ನೈ ಫ್ಯಾನ್ಸ್ ಸೈಲೆಂಟ್

ಟಾಟಾ ಐಪಿಎಲ್ 2026ರ ಜಿಟಿ ಮತ್ತು ಸಿಎಸ್‌ಕೆ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭ್‌ಮನ್ ಗಿಲ್ ಫೀಲ್ಡಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ರಶೀದ್ ಖಾನ್ ಎಸೆದ 11ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಎಸ್‌ಕೆಯ ಶಿವಂ ದುಬೆ ಲಾಂಗ್-ಆನ್ ಕಡೆಗೆ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ, ಅಲ್ಲಿ ಅತ್ಯಂತ ಚಾಣಾಕ್ಷತನದಿಂದ ಓಡಿ ಬಂದು ಗಾಳಿಯಲ್ಲಿ ಜಿಗಿದು ಗಿಲ್ ಹಿಡಿದ ಅದ್ಭುತ ಕ್ಯಾಚ್ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅವರಿಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

International Day for Biological Diversity 2026: ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ – Kannada News | International Day for Biological Diversity 2026: What is the purpose of celebrating International Day for Biological Diversity?

ಅಂತಾರಾಷ್ಟ್ರೀಯ ಜೀವ ವೈವಿಧ್ಯತೆಯ ದಿನImage Credit source: Pinterest

ಸೂಕ್ಷ್ಮ ಜೀವಿಗಳು, ಪ್ರಾಣಿ ಪಕ್ಷಿಗಳು, ಸಸ್ಯರಾಶಿಗಳು ಸೇರಿದಂತೆ ಈ ಭೂಮಿಯ ಮೇಲೆ ಸಹಸ್ರಾರು ಸಂಖ್ಯೆಯ ಜೀವವೈವಿಧ್ಯಗಳಿವೆ.  ಈ ಜೀವ ವೈವಿಧ್ಯತೆ (Biological Diversity) ಪರಿಸರ ವ್ಯವಸ್ಥೆಯನ್ನು ಸಮತೋಲದಲ್ಲಿಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಇಂದು ಜೀವವೈವಿಧ್ಯತೆ ಅಪಾಯದಲ್ಲಿದೆ. ಹೌದು ಅರಣ್ಯನಾಶ, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ವನ್ಯಜೀವಿಗಳಿಗೆ, ಪಕ್ಷಿಗಳಿಗೆ, ಮರಗಿಡಗಳಿಗೆ  ಹಾನಿ ಮಾಡುತ್ತಿವೆ. ಅದೆಷ್ಟೋ ಪ್ರಭೇದಗಳು ಅಳಿವಿನಂಚಿಗೆ ತಲುಪಿವೆ. ನಮ್ಮ ಭವಿಷ್ಯಕ್ಕೆ ಜೀವವೈವಿಧ್ಯತೆಯನ್ನು ರಕ್ಷಿಸುವುದು ಅವಶ್ಯಕ.  ಹಾಗಾಗಿ ಈ ಜೀವವೈವಿಧ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 22 ರಂದು ಅಂತಾರಾಷ್ಟ್ರೀಯ ಜೀವವೈವಿಧ್ಯತೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನದ ಇತಿಹಾಸವೇನು?

1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಭೂ ಶೃಂಗಸಭೆಯಲ್ಲಿ ಜೀವವೈವಿಧ್ಯತೆಯ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ತರಲಾಯಿತು. 1993 ಮೊದಲ ಬಾರಿಗೆ ಈ ದಿನವನ್ನು ಡಿಸೆಂಬರ್‌ 29 ರಂದು ಆಚರಿಸಲಾಯಿತು. ನಂತರ 2000 ನೇ ಇಸವಿಯಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಮೇ 22 ರಂದು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಜೀವವೈವಿಧ್ಯ ದಿನವನ್ನು ಮೇ 22 ರಂದು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಚಹಾದ ಹಿತಮಿತ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನೋಡಿ

ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನದ ಮಹತ್ವವೇನು?

  • ವಿಶ್ವ ಜೀವವೈವಿಧ್ಯತೆಯ ದಿನವು ಈ ಭೂಮಿಯಲ್ಲಿರುವ ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ನೀಡುವ ಮಹತ್ವದ ಜ್ಞಾಪನೆಯಾಗಿದೆ.
  • ಹವಾಮಾನವನ್ನು ನಿಯಂತ್ರಿಸುವಲ್ಲಿ, ನೀರಿನ ಮೂಲಗಳನ್ನು ಸ್ವಚ್ಛವಾಗಿಡುವಲ್ಲಿ ಸೇರಿದಂತೆ ಒಟ್ಟಾರೆ ಪರಿಸರವನ್ನು ಸಮತೋಲನದಲ್ಲಿಡುವಲ್ಲಿ ಜೀವವೈವಿದ್ಯತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೀವ ವೈವಿಧ್ಯತೆಯ ಈ ಪ್ರಾಮುಖ್ಯತೆಯ ಬಗ್ಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಜೀವವೈವಿಧ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ರಕ್ಷಿಸಲು ಕ್ರಮ ಕೈಗೊಳ್ಳಲು ಒಂದು ಅವಕಾಶವಾಗಿದೆ ಅಂತಾನೇ ಹೇಳಬಹುದು.
  • ಈ ದಿನದಂದು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ಅವುಗಳ ಮೂಲಕ ಜನರಿಗೆ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
  • ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
  • ಜೀವವೈವಿಧ್ಯತೆಯನ್ನು ರಕ್ಷಿಸುವ ತುರ್ತು ಅಗತ್ಯದ ಬಗ್ಗೆ ನಮ್ಮ ಗಮನವನ್ನು ಕೇಂದ್ರೀಕರಿಸಲು ಈ ದಿನ ಅವಕಾಶವನ್ನು ಒದಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Update: ರಾಜ್ಯದ ಹಲವೆಡೆ ವರುಣಾರ್ಭಟ! ಬೆಂಗಳೂರಲ್ಲಿ ಮರ ಬಿದ್ದು ವಾಹನಗಳು ಚೂರು, ಕೋಲಾರದಲ್ಲಿ 90 ಲಕ್ಷದ ಬೆಳೆ ನಾಶ – Kannada News | Karnataka Rain Update: Heavy Damages in Bengaluru, Kolar, and Davanagere Due to Storm

ಬೆಂಗಳೂರು, ಮೇ 22: ಗುರುವಾರ ಸಂಜೆ ಸುರಿದ ಭಾರೀ ಮಳೆಗೆ (Weather) ರಾಜ್ಯದ ಅನೇಕ ಕಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರು ಸೇರಿದಂತೆ ದಾವಣಗೆರೆ , ಕೋಲಾರ, ಚಿತ್ರದುರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೋರು ಮಳೆಗೆ ಕೆಲವೆಡೆ ಮನೆಗಳಿಗೆ ನೀರು ನಿಗ್ಗಿದರೆ, ಇನ್ನೂ ಕೆಲ ಕಡೆ ಮರಗಳು ಧರೆಗುರುಳಿವೆ. ವರುಣಾರ್ಭಟಕ್ಕೆ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಹೀಗೆ ಮಳೆಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮರ ಬಿದ್ದು ನಾಲ್ಕು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.
  • ಕೋಲಾರದಲ್ಲಿ ಬಿರುಗಾಳಿಗೆ ಪಾಲಿಹೌಸ್ ನಾಶವಾಗಿ 90 ಲಕ್ಷದ ಬೆಳೆ ನಷ್ಟವಾಗಿದೆ.
  • ದಾವಣಗೆರೆಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಶಂಕರ ಲೇಔಟ್‌ನ ಮನೆಗಳಿಗೆ ನೀರು ನುಗ್ಗಿದೆ.

ಬೆಂಗಳೂರಲ್ಲಿ ಧರೆಗುರುಳಿದ ಮರಗಳು

ಬೆಂಗಳೂರಿನ ವೈಯ್ಯಾಲಿಕಾವಲ್ ಹಾಗೂ ಮಹಾಲಕ್ಷ್ಮಿ ಲೇಔಟ್‌ನಲ್ಲಿ ತಡರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಬೃಹತ್ ಮರಗಳು ಬುಡಮೇಲಾಗಿವೆ. ವೈಯ್ಯಾಲಿಕಾವಲ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ. ಇತ್ತ ಮಹಾಲಕ್ಷ್ಮಿ ಲೇಔಟ್‌ನ ಪೈಪ್ ಲೈನ್ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದು, ಅದರ ಅಡಿಯಲ್ಲಿ ಸಿಲುಕಿ ಮೂರು ಕಾರುಗಳು ಸಂಪೂರ್ಣ ಜಖಂಗೊಂಡಿವೆ.

ದಾವಣಗೆರೆಯಲ್ಲಿ ಮನೆಗಳಿಗೆ ನುಗ್ಗಿದ ನೀರು

ಬೆಣ್ಣೆನಗರಿ ದಾವಣಗೆರೆಯ ಹಳೇ ಪಿಬಿ ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಹಿಂಭಾಗದಲ್ಲಿರುವ ಶಂಕರ ಲೇಔಟ್‌ನ ರಸ್ತೆಗಳು ಜಲಾವೃತಗೊಂಡು ಹಳ್ಳದಂತಾಗಿವೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನೇರವಾಗಿ ಹಲವು ಮನೆಗಳಿಗೆ ನುಗ್ಗಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಕೋಲಾರದಲ್ಲಿ ಪಾಲಿಹೌಸ್ ನಾಶ: ಲಕ್ಷಾಂತರ ರೂಪಾಯಿ ನಷ್ಟ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡ ದಾನವಹಳ್ಳಿಯಲ್ಲಿ ಬಿರುಗಾಳಿ ಮಳೆಯ ಆರ್ಭಟಕ್ಕೆ ಚನ್ನರಾಯಪ್ಪ ಎಂಬುವವರಿಗೆ ಸೇರಿದ 2 ಎಕರೆ ಪ್ರದೇಶದ ಪಾಲಿಹೌಸ್ ಸಂಪೂರ್ಣ ನೆಲಕಚ್ಚಿದೆ. ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದ ಕಲರ್ ಕ್ಯಾಪ್ಸಿಕಂ ಬೆಳೆ ಸಂಪೂರ್ಣ ನಾಶವಾಗಿದೆ. ಬಿರುಗಾಳಿಯ ರಭಸಕ್ಕೆ ಪಾಲಿಹೌಸ್‌ನ ಪ್ಲಾಸ್ಟಿಕ್ ಶೀಟ್ ಹಾಗೂ ನೆಟ್‌ಗಳು ಹರಿದು ಹೋಗಿದ್ದು, ಮಾಸ್ತಿ ಸುತ್ತಮುತ್ತಲಿನ ಹಲವೆಡೆ ವಿದ್ಯುತ್ ಕಂಬ ಹಾಗೂ ಮರಗಳು ನೆಲಕ್ಕುರುಳಿವೆ.

ಚಿತ್ರದುರ್ಗದಲ್ಲಿ ಜಿನುಗು ಮಳೆ

ಚಿತ್ರದುರ್ಗ ನಗರ ಹಾಗೂ ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರವಾಗಿ ಸೋನೆ ಮಳೆ (ತುಂತುರು ಮಳೆ) ಸುರಿಯುತ್ತಿದೆ. ಸತತವಾಗಿ ಸುರಿಯುತ್ತಿರುವ ಜಿನುಗು ಮಳೆಯಿಂದಾಗಿ ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು ನಿರ್ಮಾಣವಾಗಿದ್ದರೂ, ಸಾರ್ವಜನಿಕ ಜನಜೀವನ ಮಾತ್ರ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ ಬೆಂಗಳೂರಿಗರೇ ಎಚ್ಚರ! ಮುಂದಿನ 3 ದಿನಗಳ ಕಾಲ ನಗರದಲ್ಲಿ ವರುಣಾರ್ಭಟ

ಯಾದಗಿರಿಯಲ್ಲಿ ಗಾಳಿ ಮಳೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ತುಮಕೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಭೀಕರ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿಯ ರಭಸಕ್ಕೆ ಗ್ರಾಮವೊಂದರಲ್ಲೇ 30ಕ್ಕೂ ಅಧಿಕ ಮರಗಳು ಧರಾಶಾಹಿಯಾಗಿವೆ. ಗಾಳಿಯ ವೇಗಕ್ಕೆ ಮನೆಯೊಂದರ ಮೇಲ್ಚಾವಣಿಯ ಶೀಟ್‌ಗಳು ಹಾರಿಹೋಗಿದ್ದು, ಕುಟುಂಬಸ್ಥರು ಬೀದಿಗೆ ಬಿದ್ದಂತಾಗಿದ್ದಾರೆ. ಅಷ್ಟೇ ಅಲ್ಲದೆ, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯೊಂದು ಜಖಂಗೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ, ನಡೆದಿದ್ದೇನು? – Kannada News | Late Night Hostel Incident in Prayagraj Sparks Outrage

ಪ್ರಯಾಗ್​ರಾಜ್, ಮೇ 22: ಹಾಸ್ಟೆಲ್ ಮಾಲೀಕನ ಮಗ ಮದ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.  ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರ ಕೋಣೆಗೆ ಹಾಸ್ಟೆಲ್ ಮಾಲೀಕನ ಮಗ ಶುಭಂ ದ್ವಿವೇದಿ ಎಂಬಾತ ನುಗ್ಗಿದ್ದಾನೆ.

18 ರಂದು ಮಧ್ಯರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಆರೋಪಿ, ವಿದ್ಯಾರ್ಥಿನಿಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಅವರ ಕೂದಲನ್ನು ಹಿಡಿದು ಎಳೆದಾಡಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ. ಈ ಭೀಕರ ದೃಶ್ಯದ 30 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕಳೆದ 10 ದಿನಗಳಿಂದ ಆರೋಪಿ ತಮಗೆ ಫೋನ್ ಹಾಗೂ ಸಂದೇಶಗಳ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಘಟನೆ ನಡೆದ ತಕ್ಷಣ ವಿದ್ಯಾರ್ಥಿನಿಯರು ಪೊಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿದ್ದರು. ಆದರೆ, ಪೊಲೀಸರ ಸಮ್ಮುಖದಲ್ಲೇ ಆರೋಪಿ ಒಡೆದ ಗಾಜಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ಸದ್ಯ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರಾದರೂ, ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು ಮಾಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Love Horoscope: ನಿಮ್ಮ ರಾಶಿಗನುಗುಣವಾಗಿ ಮೇ 24- 30ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ – Kannada News | Love Horoscope May 24 30: Weekly Predictions for All Zodiac Signs

ಮೇ 24ರಿಂದ ಮೇ 30ರವರೆಗೆ ಮೇ ತಿಂಗಳ ಕೊನೆಯ ವಾರವಾಗಿದ್ದು ಶುಕ್ರನು ಬುಧನ ರಾಶಿಯಲ್ಲಿ ಬುಧ ಹಾಗೂ ಗುರುವಿನ ಸಂಯೋಗದಲ್ಲಿ ಇರುವ ಪ್ರೇಮದಲ್ಲಿ ಗೊಂದಲ, ಅತಂಕ, ವಿವಾದ ಕಲಹಗಳು ತಮಾಷೆಯಾಗಿ ಆರಂಭಗೊಂಡು ಗಂಭೀರ ಸ್ಥಿತಿಯನ್ನು ತಲುಪುವುದು. ಎಚ್ಚರಿಕೆಯಿಂದ ಇರಬೇಕಾದುದು ಇಬ್ಬರ ಕರ್ತವ್ಯ ಆಗಿರಲಿದೆ.

​ಮೇಷ ರಾಶಿ :

ನಿಮ್ಮ ರಾಶ್ಯಾಧಿಪತಿ ಮಂಗಳನು ಸ್ವಕ್ಷೇತ್ರದಲ್ಲಿದ್ದಾನೆ. ಇದರಿಂದ ಪ್ರೇಮ ಜೀವನದಲ್ಲಿ ಆಕರ್ಷಣೆ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಆದರೆ, ಅತಿಯಾದ ಹಠ ಮತ್ತು ಆವೇಶದ ಮಾತುಗಳಿಂದ ಸಂಗಾತಿಯೊಂದಿಗೆ ವೈಮನಸ್ಸು ಬರುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿ, ಸಂಗಾತಿಯ ಅಭಿಪ್ರಾಯಗಳಿಗೆ ಗೌರವ ನೀಡುವುದು ಇಂದಿನ ಅಗತ್ಯವಾಗಿದೆ.

​ವೃಷಭ ರಾಶಿ :

ರಾಶ್ಯಾಧಿಪತಿ ಶುಕ್ರನು ಮಿಥುನದಲ್ಲಿ ಶುಭ ಗ್ರಹಗಳೊಂದಿಗೆ ಇರುವುದರಿಂದ ನಿಮ್ಮ ಪ್ರೇಮ ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗಲಿದೆ. ಒಂಟಿಯಾಗಿರುವವರಿಗೆ ಮನಸ್ಸಿಗೆ ಒಪ್ಪುವ ಹೊಸ ಪ್ರೇಮದ ಪ್ರಸ್ತಾಪಗಳು ಬರುವ ಸುವರ್ಣ ಅವಕಾಶವಿದೆ. ಸಂಗಾತಿಯೊಂದಿಗೆ ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು ಹೊಸ ಆರಂಭ ಮಾಡಲು ಇದು ಅತ್ಯಂತ ಸೂಕ್ತ ಸಮಯವಾಗಿದೆ.

​ಮಿಥುನ ರಾಶಿ :

ನಿಮ್ಮ ರಾಶಿಯಲ್ಲಿಯೇ ಬುಧ, ಶುಕ್ರ ಮತ್ತು ಗುರುಗಳ ಅಪೂರ್ವ ಸಂಗಮವಿದೆ. ಇದು ನಿಮ್ಮ ಪ್ರೇಮ ಜೀವನಕ್ಕೆ ಅದ್ಭುತ ಒಡನಾಟವನ್ನು ನೀಡುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಂವಹನ, ಪ್ರೀತಿ ಮತ್ತು ಪರಸ್ಪರ ಗೌರವ ವೃದ್ಧಿಯಾಗಲಿದೆ. ಒಟ್ಟಾಗಿ ದೂರದ ಪ್ರಯಾಣ ಬೆಳೆಸುವ ಅಥವಾ ಮದುವೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಯೋಗ ಕಂಡುಬರುತ್ತಿದೆ.

​ಕರ್ಕಾಟಕ ರಾಶಿ :

ಚಂದ್ರನ ನೀಚ ಸ್ಥಿತಿಯಿಂದಾಗಿ ಪ್ರೇಮ ಜೀವನದಲ್ಲಿ ಭಾವನಾತ್ಮಕ ಏರಿಳಿತಗಳು ತೀವ್ರವಾಗಿರಲಿವೆ. ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಕಾಡಬಹುದು. ಅನಗತ್ಯ ಸಂಶಯ ಮತ್ತು ವಾದಗಳಿಂದ ದೂರವಿರಿ. ಸಂಗಾತಿಯ ಮನಸ್ಸನ್ನು ಮುಕ್ತವಾಗಿ ಮಾತನಾಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಸಂಬಂಧವು ಹಳಸದಂತೆ ಕಾಪಾಡಿಕೊಳ್ಳಬಹುದು.

​ಸಿಂಹ ರಾಶಿ :

ಪ್ರೇಮ ಜೀವನದಲ್ಲಿ ಯಶಸ್ಸು ಮತ್ತು ಸೌಹಾರ್ದತೆ ತುಂಬಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಿನೆಮಾ, ಔತಣಕೂಟ ಅಥವಾ ಸುಂದರ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಸಂಗಾತಿಗೆ ನೀಡುವ ಸಣ್ಣ ಉಡುಗೊರೆಗಳು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಪರಸ್ಪರರ ಕನಸುಗಳಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಪ್ರೀತಿಯು ಹೊಸ ಎತ್ತರಕ್ಕೆ ಬೆಳೆಯುತ್ತದೆ.

​ಕನ್ಯಾ ರಾಶಿ :

ರಾಶ್ಯಾಧಿಪತಿ ಬುಧನು ಶುಕ್ರನೊಂದಿಗೆ ಇರುವುದರಿಂದ ಸಂಬಂಧಗಳಲ್ಲಿ ಪರಸ್ಪರ ನಂಬಿಕೆ ಮತ್ತು ಬುದ್ಧಿವಂತಿಕೆಯ ಒಡನಾಟ ಹೆಚ್ಚಾಗಲಿದೆ. ನಿಮ್ಮ ಕಷ್ಟದ ಸಮಯದಲ್ಲಿ ಸಂಗಾತಿಯಿಂದ ನಿರೀಕ್ಷಿತ ಆರ್ಥಿಕ ಅಥವಾ ಮಾನಸಿಕ ಬೆಂಬಲ ಸಿಗಲಿದೆ. ಪ್ರೀತಿಯಲ್ಲಿ ಜವಾಬ್ದಾರಿಯುತ ನಡೆ ನಿಮ್ಮದಾಗಿದ್ದು, ಕೌಟುಂಬಿಕವಾಗಿ ನಿಮ್ಮ ಪ್ರೇಮಕ್ಕೆ ಸಮ್ಮತಿ ಸಿಗುವ ಲಕ್ಷಣಗಳಿವೆ.

​ತುಲಾ ರಾಶಿ :

ಪ್ರೇಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಂಗಾತಿಯು ನಿಮ್ಮ ಆಲೋಚನೆಗಳಿಗೆ ಮತ್ತು ನಿರ್ಧಾರಗಳಿಗೆ ಸಂಪೂರ್ಣವಾಗಿ ಸ್ಪಂದಿಸುತ್ತಾರೆ. ಪ್ರೀತಿಯಲ್ಲಿ ಯಾವುದೇ ಗೊಂದಲಗಳಿದ್ದರೂ ಅವು ಪರಸ್ಪರ ಮಾತುಕತೆಯ ಮೂಲಕ ಸುಲಭವಾಗಿ ಬಗೆಹರಿಯಲಿವೆ. ರೋಮ್ಯಾಂಟಿಕ್ ದಿನಗಳನ್ನು ಕಳೆಯಲು ಗ್ರಹಗಳ ಬಲವು ಅತ್ಯಂತ ಪೂರಕವಾಗಿದೆ.

​ವೃಶ್ಚಿಕ ರಾಶಿ :

ನಿಮ್ಮ ರಾಶಿಯಲ್ಲಿ ಚಂದ್ರನಿರುವುದರಿಂದ ಈ ವಾರ ಕೊನೆಗೆ ಪ್ರೀತಿಯಲ್ಲಿ ಅತ್ಯಂತ ಆಳವಾದ ಭಾವನೆಗಳು ಮೂಡಲಿವೆ. ಸಂಗಾತಿಯ ಮೇಲಿನ ಅತಿಯಾದ ಒಡೆತನದ ಗುಣ ಅಥವಾ ಸಣ್ಣ ವಿಷಯಗಳಿಗೆ ಬೇಗನೆ ಬೇಸರ ಮಾಡಿಕೊಳ್ಳುವುದು ಸಂಬಂಧಕ್ಕೆ ಮುಳ್ಳಾಗಬಹುದು. ಭಾವುಕತೆಯನ್ನು ಬದಿಗಿಟ್ಟು ಪ್ರೇಮದ ದೃಷ್ಟಿಯಿಂದ ಯೋಚಿಸುವುದು ಒಳ್ಳೆಯದು.

​ಧನು ರಾಶಿ :

ಸಂಗಾತಿಯೊಂದಿಗೆ ಸೌಹಾರ್ದ ಹಾಗೂ ಆನಂದದ ವಾತಾವರಣವಿರುತ್ತದೆ. ನಿಮ್ಮ ನಡುವೆ ಇದ್ದ ಹಳೆಯ ತಪ್ಪು ತಿಳುವಳಿಕೆಗಳು ಮತ್ತು ದೂರಗಳು ಈ ಸಮಯದಲ್ಲಿ ಇಲ್ಲವಾಗಲಿವೆ. ಸಂಗಾತಿಯು ನಿಮ್ಮ ಪ್ರಾಮಾಣಿಕತೆಯನ್ನು ಗುರುತಿಸಿ ಪ್ರಶಂಸಿಸಲಿದ್ದಾರೆ. ಒಟ್ಟಾಗಿ ಭವಿಷ್ಯದ ಯೋಜನೆಗಳನ್ನು ರೂಪಿಸಲು ಇದು ಅತ್ಯಂತ ಸಕಾರಾತ್ಮಕವಾದ ಕಾಲವಾಗಿದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

​ಮಕರ ರಾಶಿ :

ರಾಶ್ಯಾಧಿಪತಿ ಶನಿಯ ತೃತೀಯ ಸ್ಥಾನದ ಪ್ರಭಾವದಿಂದ ಪ್ರೇಮದಲ್ಲಿ ಆತುರತೆಗೆ ಆಸ್ಪದವಿರುವುದಿಲ್ಲ. ಪ್ರೀತಿಯಲ್ಲಿ ಗಾಂಭೀರ್ಯ, ನಿಷ್ಠೆ ಮತ್ತು ಜವಾಬ್ದಾರಿ ಎದ್ದು ಕಾಣುತ್ತದೆ. ಸಂಗಾತಿಯು ನಿಮ್ಮ ಕಠಿಣ ಪರಿಶ್ರಮ ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಪ್ರೇಮ ಸಂಬಂಧವು ದೀರ್ಘಕಾಲ ಬಾಳಿಕೆ ಬರುವ ದೃಢವಾದ ತಳಹದಿಯನ್ನು ಪಡೆಯಲಿದೆ.

​ಕುಂಭ ರಾಶಿ :

ಪ್ರೇಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ರೋಮಾಂಚನ ಕಂಡುಬರಲಿದೆ. ಸಂಗಾತಿಯೊಂದಿಗೆ ಸಂತೋಷದ ಒಡನಾಟ, ಪರಸ್ಪರ ಆಕರ್ಷಣೆ ಮತ್ತು ಪ್ರೇಮದ ತೀವ್ರತೆ ಹೆಚ್ಚಾಗಲಿದೆ. ಒಂಟಿಯಾಗಿದ್ದವರಿಗೆ ಸ್ನೇಹಿತರ ವಲಯದ ಮೂಲಕ ಹೊಸ ಪ್ರೀತಿಯ ಪರಿಚಯವಾಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಇಷ್ಟಾರ್ಥಗಳು ಪ್ರೇಮದ ವಿಷಯದಲ್ಲಿ ಈಡೇರಲಿವೆ.

​ಮೀನ ರಾಶಿ :

ಸೂರ್ಯನ ಪ್ರಭಾವದಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಜಟಾಪಟಿಗಳು ಅಥವಾ ಅಹಂಕಾರದ ಸಂಘರ್ಷಗಳು ಸಂಭವಿಸಬಹುದು. ಮೂರನೇ ವ್ಯಕ್ತಿಯ ಮಾತನ್ನು ಕೇಳಿ ನಿಮ್ಮ ಪ್ರೀತಿಪಾತ್ರರನ್ನು ಸಂಶಯಿಸಬೇಡಿ. ತಾಳ್ಮೆಯಿಂದ ವರ್ತಿಸಿ ಮತ್ತು ಪರಸ್ಪರ ಗೌರವ ನೀಡಿದರೆ, ದಿನದ ಅಂತ್ಯದ ವೇಳೆಗೆ ಎಲ್ಲಾ ಗೊಂದಲಗಳು ಬಗೆಹರಿದು ಪ್ರೀತಿ ಮತ್ತಷ್ಟು ಗಾಢವಾಗುತ್ತದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್? – Kannada News | Rashmika Kriti ‘Cocktail 2’ Catfight: Smart Promo or Real Drama?

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಪ್ರಚಾರದ ವೇಳೆ ಕೃತಿ ಸನೋನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ನಡುವೆ ಕಿರಿಕ್ ನಡೆದಿದೆ ಎನ್ನಲಾಗಿದೆ. ಈ ಜಗಳದ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬೈನಲ್ಲಿ ನಡೆದ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ, ನಂತರ ಇನ್‌ಸ್ಟಾಗ್ರಾಮ್ ಪೋಸ್ಟ್​​ಗಳಲ್ಲೂ ಮುಂದುವರಿದಿದೆ.

ವೇದಿಕೆಯಲ್ಲೇ ಶುರುವಾದ ಪೈಪೋಟಿ:

ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಮ್ಯಾಡಾಕ್ ಫಿಲ್ಮ್ಸ್’ಗೆ ಯಾರು ಹೆಚ್ಚು ಆಪ್ತರು ಎಂಬ ವಿಷಯವಾಗಿ ವೇದಿಕೆ ಮೇಲೆಯೇ ಕೃತಿ ಹಾಗೂ ರಶ್ಮಿಕಾ ನಡುವೆ ಲಘು ಪೈಪೋಟಿ ಆರಂಭವಾಯಿತು. ಕೃತಿ ಸನೋನ್ ಮಾತನಾಡುತ್ತಾ, ‘ನಾನು ಈಗಾಗಲೇ ಮ್ಯಾಡಾಕ್ ಸಂಸ್ಥೆಯೊಂದಿಗೆ 7 ಸಿನಿಮಾಗಳನ್ನು ಮಾಡಿದ್ದೇನೆ, ಹಾಗಾಗಿ ಇದು ನನ್ನದೇ ಸಾಂಗ್ ಲಾಂಚ್’ ಎಂದು ಹೆಮ್ಮೆಯಿಂದ ಹೇಳಿದರು. ಇದಕ್ಕೆ ಕೌಂಟರ್ ನೀಡಿದ ರಶ್ಮಿಕಾ, ‘ನನ್ನ ಹಾಡು ಅಧಿಕೃತವಾಗಿ ಲಾಂಚ್ ಆಗುತ್ತಿದೆ, ಆದರೆ ನಿಮ್ಮ (ಕೃತಿ) ಹಾಡು ಕೇವಲ ನಿಮ್ಮ ಮನರಂಜನೆಗಾಗಿ ಅಷ್ಟೇ’ ಎಂದು ತಮಾಷೆ ಮಾಡಿದರು.

ಫ್ಯಾನ್ಸ್ ವೋಟಿಂಗ್ ಮತ್ತು ರಶ್ಮಿಕಾ ಆಕ್ರೋಶ:

ಕೃತಿ ಅವರ ‘ಮಾಶೂಕಾ’ ಮತ್ತು ರಶ್ಮಿಕಾ ಅವರ ‘ತುಜ್ಕೋ’ ಹಾಡುಗಳಲ್ಲಿ ಯಾವುದು ಮೊದಲು ಪ್ರಸಾರವಾಗಬೇಕು ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳ ಬಳಿ ವೋಟ್ ಮಾಡಲು ಕೇಳಿದಾಗ, ಪ್ರೇಕ್ಷಕರು ಕೃತಿ ಅವರ ಹಾಡಿಗೆ ಜೋರಾಗಿ ಜೈಕಾರ ಹಾಕಿದರು. ಇದರಿಂದ ತಮಾಷೆಯಾಗಿಯೇ ಅಸಮಾಧಾನಗೊಂಡ ರಶ್ಮಿಕಾ, ‘ಈ ವೋಟಿಂಗ್ ಪ್ರಕ್ರಿಯೆಯೇ ಫೇಕ್ ಎಂದು ವೇದಿಕೆಯಲ್ಲೇ ಕೂಗಾಡಿದರು. ಇದು ಅಲ್ಲಿ ನೆರೆದಿದ್ದವರಲ್ಲಿ ದೊಡ್ಡ ನಗುವಿನ ಅಲೆ ಎಬ್ಬಿಸಿತು.

ಮೈಕ್‌ನಲ್ಲಿ ರಶ್ಮಿಕಾ ಬಾಯಿಂದ ಬಂದ ಬೈಗುಳ:

ಕಾರ್ಯಕ್ರಮದ ಮಧ್ಯೆ ರಶ್ಮಿಕಾ ಮಂದಣ್ಣ ಅವರು ಕೃತಿ ಸನೋನ್ ಅವರ ಸೌಂದರ್ಯವನ್ನು ಹೊಗಳುವ ಉತ್ಸಾಹದಲ್ಲಿ, ಮೈಕ್ ಆನ್ ಇರುವುದನ್ನು ಮರೆತು ಅಚಾತುರ್ಯದಿಂದ ಇಂಗ್ಲಿಷ್‌ನ ಕೆಟ್ಟ ಪದವೊಂದನ್ನು ಬಳಸಿಬಿಟ್ಟರು. ಇದನ್ನು ಕೇಳಿ ಒಂದು ಕ್ಷಣ ಇಡೀ ಸಭಾಂಗಣವೇ ಸ್ತಬ್ಧವಾಯಿತು. ಆದರೆ, ತಕ್ಷಣವೇ ಪರಿಸ್ಥಿತಿಯನ್ನು ನಿಭಾಯಿಸಿದ ಕೃತಿ ಮತ್ತು ರಶ್ಮಿಕಾ ಜೋರಾಗಿ ನಗಲು ಆರಂಭಿಸಿದರು. ಇಬ್ಬರ ನಡುವೆ ಯಾವುದೇ ದ್ವೇಷವಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು.

ಇನ್‌ಸ್ಟಾಗ್ರಾಮ್‌ನಲ್ಲಿ ಕೃತಿ ನೀಡಿದ ಟಾಂಗ್:

ಆದರೆ ಈ ಮುನಿಸು ಅಷ್ಟಕ್ಕೇ ನಿಲ್ಲಲಿಲ್ಲ. ರಶ್ಮಿಕಾ ಅವರು ಕೃತಿಗೆ ಟಾಂಗ್ ಕೊಡೋ ರೀತಿ ಸ್ಟೇಟಸ್ ಹಾಕಿದರು. ಕೃತಿ ಸನೋನ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ‘ಮಾಶೂಕಾಗೆ ಹಣ್ಣಾದ ಮಾವಿನಹಣ್ಣು ಇಷ್ಟ, ಹುಳಿ ದ್ರಾಕ್ಷಿ ಅಲ್ಲ’ ಎಂದು ಬರೆಯುವ ಮೂಲಕ ರಶ್ಮಿಕಾ ಅವರ ‘ಫೇಕ್ ವೋಟಿಂಗ್’ ಕಾಮೆಂಟ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿತು.

ಇದನ್ನೂ ಓದಿ: ಫ್ರಾನ್ಸ್​​ನಲ್ಲಿ ಕನ್ನಡದ ಸಂಸ್ಕೃತಿ ಮೆರೆದ ದಿಶಾ ಮದನ್

ನಿಜವಾದ ಜಗಳನಾ ಅಥವಾ ಸ್ಮಾರ್ಟ್ ಪ್ರಮೋಷನಾ?

ಮಾಧ್ಯಮಗಳಲ್ಲಿ ಇದನ್ನು ‘ಕ್ಯಾಟ್ ಫೈಟ್’ ಎಂದು ಬಿಂಬಿಸಲಾಗುತ್ತಿದ್ದರೂ, ಸಿನಿಮಾ ತಜ್ಞರ ಪ್ರಕಾರ ಇಬ್ಬರ ನಡುವೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಬದಲಿಗೆ, ಇದು ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಹೂಡಿರುವ ಅತ್ಯಂತ ಚಾಣಾಕ್ಷ ತಂತ್ರವಾಗಿದೆ. ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ ಚಿತ್ರದ ಇಬ್ಬರೂ ನಾಯಕಿಯರ ನಡುವೆ ಒಳ್ಳೆಯ ಬಾಂಧವ್ಯ ಇದೆ ಎನ್ನಲಾಗಿದೆ. ಜೂನ್ 19ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ: ದೇಶದಲ್ಲೇ ಮೊದಲು – Kannada News | Karnataka To Launch ‘Aadhaar Like’ Muzzle Biometric Digital Identity For Cattle

ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೂ ಬಂತು ಆಧಾರ್​​ ಮಾದರಿ ವ್ಯವಸ್ಥೆImage Credit source: Tv9 Kannada

ಬೆಂಗಳೂರು, ಮೇ 22: ಜಾನುವಾರುಗಳ ಲಸಿಕೆ ದಾಖಲೆ, ಆರೋಗ್ಯ ಸ್ಥಿತಿ, ವಿಮೆ ಹಾಗೂ ಸಾವಿನ ಪರಿಹಾರ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಬಾರ್ಕೋಡ್ ಆಧಾರಿತ ಈ ವ್ಯವಸ್ಥೆ ಜಾನುವಾರುಗಳ ಆಧಾರ್ ಕಾರ್ಡ್‌ನಂತೆ ಕಾರ್ಯನಿರ್ವಹಿಸಲಿದೆ.

ಮುಖ್ಯಾಂಶಗಳು

  • ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಹೊಸ ವ್ಯವಸ್ಥೆ
  • ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿಗೆ ಕ್ರಮ
  • ಜಾನುವಾರುಗಳ ಆಧಾರ್ ಕಾರ್ಡ್‌ನಂತೆ ಇದು ಕಾರ್ಯನಿರ್ವಹಣೆ

ಭಾರತದಲ್ಲೇ ಮೊದಲ ಪ್ರಯೋಗ

ಈ ಯೋಜನೆ ಭಾರತದಲ್ಲೇ ಮೊದಲ ಬಾರಿಗೆ ಜಾರಿಗೆ ಬರುತ್ತಿದ್ದು, ಕಿವಿಗೆ ಟ್ಯಾಗ್ ಹಾಕುವ ಹಳೆಯ ಪದ್ಧತಿಗೆ ಪರ್ಯಾಯವಾಗಲಿದೆ. ಮುಂದಿನ ದಿನಗಳಲ್ಲಿ ರೈತರು ತಮ್ಮ ಜಾನುವಾರುಗಳ ಫೋಟೋಗಳನ್ನು ಇದೇ ವ್ಯವಸ್ಥೆಯ ಮೂಲಕ ಅಪ್‌ಲೋಡ್ ಮಾಡುವ ಅವಕಾಶವೂ ಇರಲಿದೆ. ಇದರಿಂದ ಡಿಜಿಟಲ್ ಆರೋಗ್ಯ ಪರಿಶೀಲನೆ ಹಾಗೂ ಸರ್ಕಾರದ ಸೇವೆಗಳನ್ನು ವೇಗವಾಗಿ ಪಡೆಯಲು ನೆರವಾಗಲಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಾಕಿ; ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ

ಈ ಕುರಿತು ಮಾಹಿತಿ ನೀಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಮಾನವರ ಬೆರಳಚ್ಚಿನಂತೆಯೇ ಜಾನುವಾರುಗಳ ಮೂಗಿನ ರೇಖೆಗಳು ವಿಶಿಷ್ಟವಾಗಿರುತ್ತವೆ. ಅವುಗಳ ಆಧಾರದ ಮೇಲೆ ನಿಖರ ಗುರುತಿನ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಪಶುಸಂಗೋಪನೆ ಸಂಬಂಧಿತ ಯೋಜನೆಗಳಲ್ಲಿ ನಡೆಯುವ ವಂಚನೆ ತಡೆಯಲು ಹಾಗೂ ಪಾರದರ್ಶಕತೆ ಹೆಚ್ಚಿಸಲು ಸಹಾಯವಾಗಲಿದೆ ಎಂದೂ ಅವರು ಹೇಳಿದ್ದಾರೆ.

ಈ ಯೋಜನೆಯಿಂದ ರೈತರಿಗೆ ಲಸಿಕೆ ದಿನಾಂಕಗಳ ಕುರಿತು SMS ಅಲರ್ಟ್‌ಗಳು ಬರಲಿವೆ. ಹೊಸದಾಗಿ ಜನಿಸಿದ ಕರುಗಳಿಗೂ ಡಿಜಿಟಲ್ ದಾಖಲೆ ಮಾಡಬಹುದಾಗಿದೆ. ಮುಂದೆ ಮೂಗಿನ ಫೋಟೋ ಸ್ಕ್ಯಾನ್ ಮಾಡುವ ಮೂಲಕ ಆರೋಗ್ಯ ತಪಾಸಣೆಯನ್ನೂ ನಡೆಸಬಹುದಾಗಿದೆ. AI ಆಧಾರಿತ ಈ ವ್ಯವಸ್ಥೆ ಪಶುಸಂಗೋಪನೆ ಕ್ಷೇತ್ರದಲ್ಲಿ ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಜಾನುವಾರುಗಳ ಟ್ರ್ಯಾಕಿಂಗ್ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:54 am, Fri, 22 May 26

Source link

ನ್ಯೂಯಾರ್ಕ್​ನಲ್ಲಿ ಭಾರಿ ಮಳೆ, ಪ್ರವಾಹ ಸ್ಥಿತಿ, ಕೆರೆಯಂತಾದ ರಸ್ತೆಗಳು

ನ್ಯೂಯಾರ್ಕ್​, ಮೇ 22: ನ್ಯೂಯಾರ್ಕ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವು ಗಂಟೆಗಳ ಕಾಲ ಸುರಿದ ಮಳೆಯಿಂದ ನ್ಯೂಯಾರ್ಕ್ ನಗರ ಜಲಾವೃತಗೊಂಡಿದೆ. ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ, ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ. ಎಲ್ಲೆಡೆ ನೀರು ನಿಂತಿದೆ. ರಸ್ತೆಗಳು ಕೆರೆಯಂತಾಗಿವೆ. ಮ್ಯಾನ್‌ಹ್ಯಾಟನ್‌ನಿಂದ ಕ್ವೀನ್ಸ್ ಮತ್ತು ಬ್ರೂಕ್ಲಿನ್‌ವರೆಗಿನ ಡಜನ್ಗಟ್ಟಲೆ ವೀಡಿಯೊಗಳು ನ್ಯೂಯಾರ್ಕ್ ನಗರದ ಬೀದಿಗಳು ಮತ್ತು ಸುರಂಗಮಾರ್ಗಗಳಿಗೆ ಹಾನಿಯನ್ನು ತೋರಿಸಿವೆ. ಶನಿವಾರ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಪಶ್ಚಿಮ ನ್ಯೂಯಾರ್ಕ್‌ನಲ್ಲಿ ದಿನವಿಡೀ ನಿರಂತರವಾಗಿ ಮಳೆಯಾಗುವ ಸಾಧ್ಯತೆಯಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು – Kannada News | Three Minors Leave Home After Mobile Phone Dispute in Gujarat

ಸೂರತ್, ಮೇ 22: ಮೊಬೈಲ್​(Mobile)ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮೂವರು ಅಪ್ರಾಪ್ತ ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಫ್ರೀ ಫೈರ್ ಗೇಮ್ ದಿನವಿಡೀ ಆಡುತ್ತಿದ್ದರು, ಇದಕ್ಕೆ ಕೋಪಗೊಂಡ ತಂದೆ ಗೇಮ್ ಆಡಬೇಡಿ ಎಂದು ಮೊಬೈಲ್ ಕಿತ್ತಿಟ್ಟುಕೊಂಡಿದ್ದರು. ಮೂವರು ಮನೆಯಿಂದ 15,000 ರೂ. ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ.

ಅವರು ಮುಂಬೈ ರೈಲು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರ ಪ್ರಕಾರ ಕಾಣೆಯಾದ ಮಕ್ಕಳ ವಯಸ್ಸು 14, 11 ಮತ್ತು 9 ವರ್ಷ, ಅವರಲ್ಲಿ ಒಬ್ಬ ಬಾಲಕಿ ಕೂಡ ಇದ್ದಾಳೆ. ಮೇ 19ರ ಬೆಳಗಿನ ಜಾವ ಕುಟುಂಬದವರೆಲ್ಲಾ ಮಲಗಿರುವಾಗ ಅವರು ಮನೆಯಿಂದ ಓಡಿ ಹೋಗಿದ್ದಾರೆ.

ಮಕ್ಕಳು ತಮ್ಮ ತಂದೆಯ ಮೊಬೈಲ್ ಫೋನ್‌ನಲ್ಲಿ ಜನಪ್ರಿಯ ಆನ್‌ಲೈನ್ ಬ್ಯಾಟಲ್ ಗೇಮ್ ಗರೆನಾ ಫ್ರೀ ಫೈರ್ ಆಡುತ್ತಿದ್ದರು, ಅದರ ದಾಸರಾಗಿದ್ದರು ಎಂದರೂ ತಪ್ಪಾಗಲಾರದು. ತಂದೆ ಕಳೆದ ತಿಂಗಳ ಕೊನೆಯಲ್ಲಿ ತನ್ನ ಹಳ್ಳಿಗೆ ಹೋಗುವಾಗ ಆಕಸ್ಮಿಕವಾಗಿ ತನ್ನ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಅವರು ಇರಲಿಲ್ಲವೆಂದು, ಮಕ್ಕಳು ಮೊಬೈಲ್​ನಲ್ಲಿ ಆಟಗಳನ್ನು ಆಡುತ್ತಾ ಕಾಲ ಕಳೆದಿದ್ದರು ಎಂದು ಆರೋಪಿಸಲಾಗಿದೆ.

ತಂದೆ ಮನೆಗೆ ಹಿಂದಿರುಗಿದಾಗ ತಮ್ಮ ಮಕ್ಕಳು ಮೊಬೈಲ್ ಗೇಮ್ ಹುಚ್ಚು ಹಿಡಿಸಿಕೊಂಡಿದ್ದಾರೆ ಎಂದು ತಾಯಿ ದೂರು ಕೊಟ್ಟಿದ್ದರು.ಈ ಅಭ್ಯಾಸವನ್ನು ನಿಲ್ಲಿಸುವ ಪ್ರಯತ್ನದಲ್ಲಿ, ಘಟನೆಗೆ ಮೂರು ದಿನಗಳ ಮೊದಲು ತಂದೆ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದು ಮೊಬೈಲ್ ಅನ್ನು ಲಾಕ್ ಮಾಡಿದ್ದರು ಎಂದು ವರದಿಯಾಗಿದೆ. ಈ ನಿರ್ಬಂಧದಿಂದ ಮಕ್ಕಳು ಕೋಪಗೊಂಡರು, ನಂತರ ಅವರು ಮನೆ ಬಿಡಲು ನಿರ್ಧರಿಸಿರಬಹುದು ಎಂದಿದ್ದಾರೆ.

ಮತ್ತಷ್ಟು ಓದಿ: ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂತು ಹೈಟೆಕ್ ‘ಮೂವಿಂಗ್ ಆಫೀಸ್’: ನೆಟ್‌ವರ್ಕ್ ಇಲ್ಲದಿದ್ದರೂ ಕೆಲಸ ಮಾಡುತ್ತೆ ಈ ಸ್ಯಾಟಲೈಟ್ ವಾಹನ!

ಸೂರತ್‌ನ ಜವಳಿ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕ ಕುಟುಂಬಕ್ಕೆ ಸೇರಿದ ಈ ಮಕ್ಕಳು ಮನೆಯಿಂದ ಹೊರಡುವ ಮೊದಲು 15 ಸಾವಿರ ರೂ. ತೆಗೆದುಕೊಂಡು ಹೋಗಿದ್ದರು. ಮಕ್ಕಳು ಕಾಣೆಯಾಗಿರುವುದನ್ನು ಕಂಡುಕೊಂಡ ನಂತರ, ಕುಟುಂಬವು ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿತು. ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್ ಆಟಗಳನ್ನು ಆಡುವುದರಲ್ಲಿ ಮತ್ತು ಅಂತಹುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಕಳೆಯುತ್ತಿದ್ದರು.ಇದರಿಂದ ಅಸಮಾಧಾನಗೊಂಡ ತಂದೆ ಅವರನ್ನು ಗದರಿಸಿ ಸಲಹೆ ನೀಡಿದ್ದರು.

ಮಕ್ಕಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೆಲವು ವಸ್ತುಗಳು ಮತ್ತು ನಗದು ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದಾರೆ. ಇಲ್ಲಿಯವರೆಗೆ ಪರಿಶೀಲಿಸಲಾದ ಸಿಸಿಟಿವಿ ದೃಶ್ಯಾವಳಿಗಳು ಮಕ್ಕಳು ಸುರಕ್ಷಿತವಾಗಿರುವಂತೆ ಕಾಣುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Guru Sanchara 2026: ಗುರು ಸಂಚಾರ ಕಟಕ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Cancer Horoscope 2026: Dr. Basavaraj Gurujis Predictions for Jupiters Transit

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಕರ್ಕಾಟಕ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರ ಗುರು ಸಂಚಾರವು ಕರ್ಕಾಟಕ ರಾಶಿಯವರಿಗೆ ಮಹತ್ವದ ಫಲಗಳನ್ನು ತರಲಿದೆ. ಗುರುವು ಉಚ್ಚ ಸ್ಥಾನದಲ್ಲಿ ಸಂಚರಿಸುವುದರಿಂದ ಇದು ಶುಭಕಾಲವಾಗಿದೆ. ಮಾನಸಿಕ ಶಾಂತಿ, ಗೌರವ, ಕೀರ್ತಿ ಮತ್ತು ಅಧಿಕಾರ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ ಹಾಗೂ ಪ್ರೀತಿ ಪ್ರೇಮ ವ್ಯವಹಾರಗಳಲ್ಲಿ ಉತ್ತಮ ಫಲ ದೊರೆಯಲಿದೆ. ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ.

ವ್ಯಾಪಾರಸ್ಥರಿಗೆ ಈ ಅವಧಿ ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಯೋಗ ಹಾಗೂ ವಿದೇಶ ಪ್ರಯಾಣದ ಅವಕಾಶಗಳಿವೆ. ಮಹಿಳೆಯರಿಗೆ ಶುಭ ಫಲಗಳಿದ್ದು, ಸಂಸ್ಥೆಗಳನ್ನು ಸ್ಥಾಪಿಸಲು ಇದು ಸಕಾಲ. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆದರೆ, ಮೇಲಾಧಿಕಾರಿಗಳೊಂದಿಗೆ ಹುಷಾರಾಗಿರಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಅರ್ಧಕ್ಕೆ ನಿಂತ ಮನೆ ಕಟ್ಟುವ ಕೆಲಸದಲ್ಲಿ ಕೆಲವು ದುಷ್ಟ ಶಕ್ತಿಗಳ ಪ್ರಭಾವದ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link