Category Archives: Blog

Your blog category

JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​​: 2 ಗ್ರಾಮಗಳ ಮಧ್ಯೆ ಮೂಡಿದ ವೈಮನಸ್ಸು – Kannada News | Rishala DSouza Suicide by JDS leader Son Case: Villages Clash Over Rishal Death

ಕಾರವಾರ, ಜನವರಿ 16: ಜೆಡಿಎಸ್‌ (JDS) ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ (suicide) ಪ್ರಕರಣ ಇದೀಗ ಎರಡು ಗ್ರಾಮಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಚಿರಾಗ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದು, ಗ್ರಾಮಸ್ಥರು ಪರಸ್ಪರ ಸುದ್ದಿಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡದಂತೆ  ಎಚ್ಚರಿಕೆ ಸಂದೇಶ ನೀಡಿದ್ದಾರೆ.

ದಿನಕ್ಕೊಂದು ತಿರುವು

ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜ್ ಆತ್ಮಹತ್ಯೆ ಪ್ರಕರಣ ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಎರಡು ಕುಟುಂಬಗಳ ನಡೆವೆ ಹೋರಾಟ ನಡೆದಿತ್ತು. ಆದರೆ ಇದೀಗ ಎರಡು ಗ್ರಾಮಗಳ ಮಧ್ಯೆ ವೈಮನಸ್ಸು ಮೂಡುವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ: ಪ್ರೀತಿಸುವಂತೆ ಕಾಟ: ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

ಜೆಡಿಎಸ್ ಮುಖಂಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಕೋಠಾರಕರ ಕಿರುಕುಳದಿಂದ ರಿಶೇಲ್ ಡಿಸೋಜ್ ಸಾವನಪ್ಪಿದ್ದಾಳೆ ಎಂದು ಸಾಕ್ಷಿ ಸಮೇತ ಸುದ್ದಿಗೊಷ್ಠಿ ಮಾಡಿದ್ದ ಕದ್ರಾ ಗ್ರಾಮಸ್ಥರು ಹಾಗೂ ಕ್ರಿಶ್ಚಿಯನ್ ಮುಖಂಡರು, ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಚಿರಾಗ್ ಕೊಠಾರಕರ ಅತ್ಯಾಚಾರ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆತನನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಸುಳ್ಳು ಆರೋಪ ಮಾಡುವವರೇ ನೇರ ಹೊಣೆ

ಇನ್ನು ಕದ್ರಾ ಗ್ರಾಮಸ್ಥರ ಎಚ್ಚರಿಕೆಗೆ ಕಿನ್ನರ ಗ್ರಾಮಸ್ಥರು ತಿರುಗೇಟು ನೀಡಿದ್ದಾರೆ. ಚಿರಾಗ್ ಮತ್ತು ರಿಶೇಲ್ ನಡುವೆ ಪವಿತ್ರ ಪ್ರೀತಿ ಇತ್ತು. ರಿಶೇಲ್ ಆಗಾಗ ಚಿರಾಗ ಮನೆಗೆ ಬಂದು ಹೋಗುತ್ತಿದ್ದಳು ಎಂಬುವುದಕ್ಕೆ ಫೋಟೋ, ವಿಡಿಯೋ ಸಾಕ್ಷಿ ಇದೆ ಆದರೆ, ಇದೀಗ ರಾಜಕೀಯ ದುರಿದ್ದೇಶದಿಂದ ಚಿರಾಗ ಮೇಲೆ ಇಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾನಸಿಕ ಒತ್ತಡದಲ್ಲಿರುವ ಚಿರಾಗ್ ಏನಾದರೂ ಮಾಡಿಕೊಂಡರೆ ಸುಳ್ಳು ಆರೋಪ ಮಾಡುತ್ತಿರುವವರೇ ನೇರ ಹೊಣೆ ಆಗುತ್ತಾರೆ. ಅಲ್ಲದೆ ಅವರ ಮೇಲೆ ಕಾನೂನು ಹೋರಾಟ ಮಾಡಲಾಗುವುದು ಎಂದು ಕಿನ್ನರ ಗ್ರಾಮಸ್ಥೆ ಸಿಮಾ ಕೋಠಾರಕರ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾರವಾರ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​

ಒಟ್ಟಾರೆಯಾಗಿ ಇಬ್ಬರ ನಡುವಿನ ಪ್ರೀತಿಯಲ್ಲಿನ ಚಿಕ್ಕ ವೈಮನಸ್ಸು, ಒಂದು ಜೀವ ಕಸಿದುಕೊಂಡರೆ, ಎರಡು ಗ್ರಾಮಗಳ ಜನರಲ್ಲಿ ವೈಮನಸ್ಸು ಮೂಡಲು ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

CUET PG 2026: CUET PG ಆನ್‌ಲೈನ್ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ; ಜ. 20ರ ವರೆಗೆ ಅವಕಾಶ – Kannada News | CUET PG 2026 27 Application Deadline Extended by NTA: Apply by Jan 20!

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇತ್ತೀಚೆಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಪಿಜಿ 2026-27 ಶೈಕ್ಷಣಿಕ ವರ್ಷದ ವಿವಿಧ ಪಿಜಿ ಕೋರ್ಸ್‌ಗಳಿಗೆ ಪ್ರವೇಶದ ಕುರಿತು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 14 ರಿಂದ ಆನ್‌ಲೈನ್ ಅರ್ಜಿಗಳು ಪ್ರಾರಂಭವಾಗಿದ್ದು, ಆದಾಗ್ಯೂ, ಅಧಿಸೂಚನೆಯ ಪ್ರಕಾರ, ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜನವರಿ 14 ರಂದು ರಾತ್ರಿ 11.50 ಕ್ಕೆ ಕೊನೆಗೊಂಡಿತ್ತು. ಈ ಆದೇಶದಲ್ಲಿ, NTA ಆನ್‌ಲೈನ್ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಇತ್ತೀಚಿನ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಜನವರಿ 20, ರವರೆಗೆ ಅವಕಾಶ ನೀಡಲಾಗಿದೆ.

ಮಾರ್ಚ್‌ನಲ್ಲಿ ನಡೆಯಲಿರುವ ಆನ್‌ಲೈನ್ ಲಿಖಿತ ಪರೀಕ್ಷೆಗಳು ದೇಶಾದ್ಯಂತ 276 ನಗರಗಳಲ್ಲಿ ಮತ್ತು ವಿದೇಶಗಳಲ್ಲಿ 16 ನಗರಗಳಲ್ಲಿ ನಡೆಯಲಿವೆ. ಈ ಪರೀಕ್ಷೆಗಳನ್ನು ಒಟ್ಟು 157 ವಿಷಯಗಳಲ್ಲಿ ನಡೆಸಲಾಗುವುದು. ದೇಶಾದ್ಯಂತ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶವು CUET ಪಿಜಿ ಪರೀಕ್ಷೆಯಲ್ಲಿ ಪಡೆದ ಶ್ರೇಣಿಯನ್ನು ಆಧರಿಸಿರುತ್ತದೆ. ಇದರಲ್ಲಿ ಕೇಂದ್ರದ ಆಶ್ರಯದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳು, ರಾಜ್ಯ ಮಟ್ಟದ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿವೆ. ಈ ಪ್ರವೇಶ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುತ್ತದೆ. ಪದವಿ ಪಡೆದ ಯಾವುದೇ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಯಾವುದೇ ವಯಸ್ಸಿನ ಮಿತಿಯಿಲ್ಲ. ಆದಾಗ್ಯೂ, ಅರ್ಜಿ ಶುಲ್ಕದ ಅಡಿಯಲ್ಲಿ, ಸಾಮಾನ್ಯ ಅಭ್ಯರ್ಥಿಗಳು 1400 ರೂ., ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳು 1200 ರೂ., ಎಸ್‌ಸಿ/ಎಸ್‌ಟಿ/ತೃತೀಯ ಲಿಂಗ ಅಭ್ಯರ್ಥಿಗಳು 1100 ರೂ. ಮತ್ತು ದಿವ್ಯಾಂಗ ಅಭ್ಯರ್ಥಿಗಳು 1000 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಲಿಖಿತ ಪರೀಕ್ಷಾ ವಿಧಾನ:

ಲಿಖಿತ ಪರೀಕ್ಷೆಯು ಒಟ್ಟು 74 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶ್ನೆಗೆ 4 ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಅವಧಿ 90 ನಿಮಿಷಗಳು. ಪ್ರತೀ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳು ಇರುತ್ತವೆ.

CUET PG ಪ್ರವೇಶ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ: ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ – Kannada News | Property Dispute Turns Fatal as Brother Kills Groom to Be Days Before Wedding

ಮಂಡ್ಯ, ಜನವರಿ 16: ಇನ್ನೇನು 5 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಆಸ್ತಿ ವಿಚಾರಕ್ಕೆ ಆತನ ಸಹೋದರನೇ ತನ್ನ ಮಕ್ಕಳ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್​​ ಮೃತ ದುರ್ದೈವಿಯಾಗಿದ್ದು, ಮನೆಯ ಕೊಟ್ಟಿಗೆಯಲ್ಲಿದ್ದ ಈತನನ್ನು ಚಾಕುವಿನಿಂದ 2Oಕ್ಕೂ ಹೆಚ್ಚು ಬಾರಿ ಚುಚ್ಚಿ ಸಾಯಿಸಲಾಗಿದೆ. ಲಿಂಗರಾಜು ಮತ್ತು ಅವನ ಮಕ್ಕಳಾದ ಭರತ್​​ ಹಾಗೂ ದರ್ಶನ್​​ ಕೊಲೆ ಆರೋಪಿಗಳಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ.

ತಂದೆ ಚಿನ್ನಮರಿಗೌಡ ನಿಧನದ ಬಳಿಕ ಎಲ್ಲ ವ್ಯವಹಾರಗಳನ್ನ ಹಿರಿಯಣ್ಣನಾದ ಲಿಂಗರಾಜು ನೋಡಿಕೊಳ್ಳುತ್ತಿದ್ದ. ಪಿತ್ರಾರ್ಜಿತವಾಗಿ ಬಂದಿದ್ದ 12 ಎಕರೆ ಕೃಷಿ ಭೂಮಿಯನ್ನು ತನ್ನ ತಾಯಿ ಹೆಸರಿಗೆ ಪೌತಿ ಖಾತೆ ಮಾಡಿಸುವ ಬದಲು ತನ್ನ ಹೆಸರಿಗೇ ಲಿಂಗರಾಜು ವರ್ಗಾವಣೆ ಮಾಡಿಸಿಕೊಂಡಿದ್ದ. ಅಲ್ಲದೆ ತಾಯಿ ಹೆಸರಿನಲ್ಲಿ ಖರೀದಿಸಿದ್ದ 6 ಎಕರೆ ಜಮೀನು, ಮೈಸೂರು ಮತ್ತು ಮಂಡ್ಯದಲ್ಲಿದ್ದ 4 ನಿವೇಶನಗಳನ್ನೂ ತನ್ನ ಹೆಸರಿಗೆ ಖಾತೆ‌ ಮಾಡಿಕೊಂಡಿದ್ದ. ಮುಂದೆ ನಮ್ಮ ಪಾಲಿನ ಆಸ್ತಿಯನ್ನ ನಮ್ಮಣ್ಣ ನೀಡುತ್ತಾನೆ ಎಂದು ಯೋಗೇಶ್ ಸೇರಿದಂತೆ ಇಬ್ಬರು ಸಹೋದರರು ಹಾಗೂ ಸಹೋದರಿಯರು ನಂಬಿಕೊಂಡಿದ್ದರು. ಆದರೆ, ಅವರಿಗೆಲ್ಲ ಮೋಸ ಮಾಡಿ ಲಿಂಗರಾಜು ತನ್ನ ಪತ್ನಿ ಹೆಸರಿಗೆ ದಾನಪತ್ರ ಮಾಡುವ ಮೂಲಕ ಸಂಪೂರ್ಣ ಆಸ್ತಿಯನ್ನು ವರ್ಗಾವಣೆ ಮಾಡಿಸಿದ್ದ. ಈ ವಿಚಾರ ತಿಳಿದು ಸಹೋದರಾದ ಕೆಂಪರಾಜು, ಯೋಗೇಶ್ ಪ್ರಶ್ನೆ ಮಾಡಿದಾಗ ಲಿಂಗರಾಜು ಜಗಳ‌ ತೆಗೆದು ಹಲ್ಲೆ ಮಾಡಿದ್ದ. ಬಳಿಕ ಆಸ್ತಿ‌ ವಿಚಾರವಾಗಿ ಯೋಗೇಶ್ ನ್ಯಾಯಾಲಯದ ಮೊರೆಯೋಗಿದ್ದ. ಯೋಗೇಶ್ ಹತ್ಯೆ ಮಾಡಿದ್ರೆ ಉಳಿದವರು ಸೈಲೆಂಟ್ ಆಗುತ್ತಾರೆ ಎಂದು ಕೊಲೆ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ; ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ ಗಂಡ

ಕೊಲೆಯಾದ ಯೋಗೇಶ್​​ಗೆ ಮದುವೆ ಕೂಡ ನಿಶ್ಚಯವಾಗಿದ್ದು, ನೆಂಟರಿಸ್ಟರಿಗೆಲ್ಲ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ತಿಂಗಳು 21ರಂದು ಹಸೆಮಣೆ ಏರಬೇಕಿತ್ತು. ಆದರೆ ಅಣ್ಣನ ಅಟ್ಟಹಾಸಕ್ಕೆ ಮದುವೆಗೂ ಮೊದಲೇ ತಮ್ಮ ಬಲಿಯಾಗಿದ್ದಾನೆ. ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಅಣ್ಣ ಲಿಂಗರಾಜು ಹೆಸರನ್ನೂ ಯೋಗೇಶ್​​ ಹಾಕಿಸಿದ್ದು, ಮುಂದೆ ನಿಂತು ಮದುವೆ ಮಾಡಬೇಕಿದ್ದ ಅಣ್ಣನೇ ತನ್ನ ಮಕ್ಕಳ ಜೊತೆ ಸೇರಿ ಯೋಗೇಶ್​​ನ ಪರಲೋಕಕ್ಕೆ ಕಳುಹಿಸಿದ್ದಾನೆ. ಇನ್ನು ಘಟನೆಯಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾಗೂ ಸಂಬಂಧಿಕರು ಆರೋಪಿ ಲಿಂಗರಾಜು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿರುವ ಪ್ರಸಂಗವೂ ನಡೆದಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ಶೋಧ ಶುರುಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:42 pm, Fri, 16 January 26

Source link

ಪತ್ನಿ ಜೊತೆ ಸೇರಿ 5 ಎಕರೆ ಭೂಮಿ ಖರೀದಿಸಿದ ವಿರಾಟ್ ಕೊಹ್ಲಿ; ಬೆಲೆ ಎಷ್ಟು ಗೊತ್ತಾ? – Kannada News | Virat Kohli and Anushka Sharma Buy 5 Acre Alibaug Land for 37.86 Cr: Luxury Investment

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದಾರೆ. ಈ ನಡುವೆ ತಮ್ಮ ಮಡದಿ ಅನುಷ್ಕಾ ಶರ್ಮಾ ಜೊತೆಗೂಡಿ ಭೂಮಿ ಖರೀದಿಯ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಮಡದಿ ಅನುಷ್ಕಾ ಶರ್ಮಾ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 5 ಎಕರೆ ಭೂಮಿಯನ್ನು ಖರೀದಿಸಿದ್ದಾರೆ.

ಈ ಒಪ್ಪಂದವನ್ನು ರಿಯಲ್ ಎಸ್ಟೇಟ್ ಮಾಹಿತಿ ಕಂಪನಿ CRE ಮ್ಯಾಟ್ರಿಕ್ಸ್ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ದಂಪತಿಗಳು ಜಂಟಿಯಾಗಿ 5 ಎಕರೆ ಭೂಮಿ ಖರೀದಿಸಿದ್ದಾರೆ. ಇದರ ಮೌಲ್ಯ ಸುಮಾರು 37.86 ಕೋಟಿ ರೂ ಎನ್ನಲಾಗುತ್ತಿದೆ. ಮುಂಬೈ ಬಳಿ ಇರುವ ಈ ಪ್ರದೇಶ ರಜಾ ದಿನಗಳನ್ನು ಕಳೆಯಲೂ ಸೂಕ್ತ ಸ್ಥಳವಾಗಿದ್ದು, ವಿರೂಷ್ಕ ದಂಪತಿಗಳು ಈ ಸ್ಥಳದಲ್ಲಿ ತಮ್ಮ ಎರಡನೇ ಮನೆಯನ್ನು ನಿರ್ಮಿಸಿಲು ಚಿಂತಿಸಿದ್ದಾರೆ.

ಅಲಿಬಾಗ್‌ನಲ್ಲಿ ಕೊಹ್ಲಿ ದಂಪತಿಗಳು ಎರಡನೇ ಬಾರಿಗೆ ಭೂಮಿ ಖರೀದಿಸಿದ್ದಾರೆ. ಇದಕ್ಕೂ ಮೊದಲು ಸುಮಾರು 1.474 ಹೆಕ್ಟೇರ್ ಮತ್ತು ಸುಮಾರು 0.627 ಹೆಕ್ಟೇರ್ ಭೂಮಿಯನ್ನು ಖರೀದಿ ಮಾಡಿದ್ದರು. ದಾಖಲೆಗಳ ಪ್ರಕಾರ, ಈ ಭೂಮಿ ರಾಯಗಡ ಜಿಲ್ಲೆಯ ಅಲಿಬಾಗ್ ಪ್ರದೇಶದ ಆವಾಸ್ ಬೀಚ್ ಬಳಿಯ ಜಿರಾದ್ ಗ್ರಾಮದಲ್ಲಿದೆ. ಆಸ್ತಿಯನ್ನು ಜನವರಿ 2026 ರಲ್ಲಿ ನೋಂದಣಿ ಮಾಡಿಸಲಾಗಿದ್ದು, ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಸಹ ಪಾವತಿಸಲಾಗಿದೆ.

ಮೇಲೆ ಹೇಳಿದಂತೆ ಅಲಿಬಾಗ್ ರಜಾ ದಿನಗಳನ್ನು ಕಳೆಯಲು ಸೂಕ್ತ ಸ್ಥಳವಾಗಿದ್ದು, ಈ ಭಾಗದಲ್ಲಿ ಕ್ರಿಕೆಟಿಗರು, ಚಲನಚಿತ್ರ ತಾರೆಯರು ಮತ್ತು ದೊಡ್ಡ ಉದ್ಯಮಿಗಳು ಐಷಾರಾಮಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಶಾಂತ ವಾತಾವರಣ, ಶುದ್ಧ ಗಾಳಿ ಮತ್ತು ಸಮುದ್ರ ಸಮೀಪವಿರುವ ಕಾರಣ ಈ ಪ್ರದೇಶದ ಮೇಲೆ ಹಣವಂತರ ಕಣ್ಣು ಬಿದ್ದಿದೆ.

ಅಲಿಬಾಗ್ ಮುಂಬೈ, ನವಿ ಮುಂಬೈ ಮತ್ತು ಪುಣೆಯಂತಹ ಪ್ರಮುಖ ನಗರಗಳಿಗೆ ಹತ್ತಿರದಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಲಿಬಾಗ್ ಅನ್ನು ಸಾಮಾನ್ಯವಾಗಿ ‘ಮಿನಿ ಗೋವಾ’ ಎಂದು ಕರೆಯಲಾಗುತ್ತದೆ. ಇದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಸುಂದರ ಪಟ್ಟಣವಾಗಿದೆ. ವಾರಾಂತ್ಯದ ಪ್ರವಾಸಗಳಿಗಾಗಿ ಜನರು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಇದು ಮುಂಬೈನಿಂದ ಸುಮಾರು 110 ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮತ್ತು ಕಡಲತೀರಗಳಿಂದ ಸುತ್ತುವರೆದಿರುವ ಈ ಸ್ಥಳವು ಸಮುದ್ರ ಪ್ರಿಯರಿಗೆ ವಿಶೇಷ ಸ್ಥಳವೆಂದು ಪರಿಗಣಿಸಲಾಗಿದೆ.

ಗಮನಾರ್ಹವಾಗಿ, ಕಳೆದ ಕೆಲವು ವರ್ಷಗಳಲ್ಲಿ ಆಸ್ತಿ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಇಂದು, ಅಲಿಬಾಗ್‌ನಲ್ಲಿ ಅಪಾರ್ಟ್‌ಮೆಂಟ್‌ಗಳ ಬೆಲೆ ಪ್ರತಿ ಚದರ ಅಡಿಗೆ ಸುಮಾರು 15,000 ರಿಂದ 17,000 ರೂವರೆಗೆ ಇದೆ. ಕೃಷಿ ಭೂಮಿಯ ಬೆಲೆ ಎಕರೆಗೆ 3 ಕೋಟಿಯಿಂದ 5 ಕೋಟಿಗೆ ಏರಿದೆ. ವಸತಿ ಪ್ಲಾಟ್‌ಗಳ ಬೆಲೆ ಎಕರೆಗೆ 8 ಕೋಟಿಯಿಂದ 10 ಕೋಟಿಗೆ ತಲುಪಿದೆ. ಇದು ಈ ಪ್ರದೇಶವನ್ನು ಕೇವಲ ಪ್ರವಾಸಿ ತಾಣವನ್ನಾಗಿ ಮಾತ್ರವಲ್ಲದೆ ಐಷಾರಾಮಿ ರಿಯಲ್ ಎಸ್ಟೇಟ್ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ಮಾಡಿದೆ.

ಈ ಕಾರಣಗಳಿಂದಾಗಿ, ವಿರಾಟ್ ಮತ್ತು ಅನುಷ್ಕಾ ಅವರಂತಹ ಸೆಲೆಬ್ರಿಟಿಗಳು, ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಇಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ. ಪರಿಣಾಮವಾಗಿ, ಈ ಪ್ರದೇಶದಲ್ಲಿ ಆಸ್ತಿ ಬೆಲೆಗಳು ಗಗನಕ್ಕೇರುತ್ತಿವೆ. ಗೌಪ್ಯತೆ, ಭದ್ರತೆ ಮತ್ತು ಐಷಾರಾಮಿ ಜೀವನಶೈಲಿ ಅಲಿಬಾಗ್ ಅನ್ನು ಜನಪ್ರಿಯ ತಾಣವನ್ನಾಗಿ ಮಾಡಿದೆ. ಇಂದು, ಭಾರತದ ಕೋಟ್ಯಾಧಿಪತಿಗಳು ಮತ್ತು ಚಲನಚಿತ್ರ ತಾರೆಯರು ಇಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ.

Published On – 3:35 pm, Fri, 16 January 26

Source link

ನನ್ನ ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ – Kannada News | If Anything Happen to My Marriage Gilli Will be the reason says Kavya Shaiva

ಕಾವ್ಯಾ ಶೈವ ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಮೂಡಿದೆ. ಸದಾ ‘ಕಾವು.. ಕಾವು..’ ಎಂದು ಗಿಲ್ಲಿ ಓಡಾಡುತ್ತಾ ಇರುತ್ತಾರೆ. ಈಗ ಬಿಗ್ ಬಾಸ್ ಫಿನಾಲೆ ಹಂತ ತಲುಪಿದೆ. ಈ ವೇಳೆ ಕಾವ್ಯಾ ಒಂದು ಮಾತನ್ನು ಹೇಳಿದ್ದರು. ‘ತಮ್ಮ ಮದುವೆಗೆ ಏನಾದರೂ ತೊಂದರೆ ಆದರೆ ಅದಕ್ಕೆ ಗಿಲ್ಲಿ ಕಾರಣ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಈ ಫನ್ ವಿಡಿಯೋ ವೈರಲ್ ಆಗಿದೆ. ‘ಗಿಲ್ಲಿನೇ ಮದುವೆ ಆಗಿ’ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಮಾಡೋದು ಹಿಂದಿ ಸಿನಿಮಾ, ಆದ್ರೆ ಮರಾಠಿ ಮೇಲೆ ಪ್ರೀತಿ: ಆಮಿರ್ ಖಾನ್ ವಿರುದ್ಧ ಟೀಕೆ – Kannada News | Aamir Khan statement sparks Marathi Vs Hindi debate

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರ ಹೆಸರು ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ. ದೇಶದ ಹಲವು ಕಡೆಗಳಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ನಡುವೆ ಘರ್ಷಣೆ ನಡೆಯುತ್ತಿದೆ. ಮಹಾರಾಷ್ಟ್ರ ಕೂಡ ಇದಕ್ಕೆ ಹೊರತಾಗಿಲ್ಲ. ಮರಾಠಿ (Marathi) ಮಾತನಾಡಿಲ್ಲ ಎಂದು ಕೆಲವರು ಗಲಾಟೆ ಮಾಡಿದ ಪ್ರಕರಣಗಳು ಹಲವು ಬಾರಿ ದಾಖಲಾಗಿವೆ. ಈಗ ಆಮಿರ್ ಖಾನ್ ಅವರ ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. ಅದರಿಂದಾಗಿ ಮತ್ತೆ ಮರಾಠಿ ವರ್ಸಸ್ ಹಿಂದಿ (Hindi)  ಚರ್ಚೆಗೆ ಕಿಡಿ ಹೊತ್ತಿಸಿದಂತಾಗಿದೆ.

ಮುಂಬೈ ಕಾರ್ಪೋರೇಷನ್ ಚುನಾವಣೆಯಲ್ಲಿ ಆಮಿರ್ ಖಾನ್ ಅವರು ಮತ ಚಲಾಯಿಸಿದರು. ಮತ ಹಾಕಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮೊದಲು ಮರಾಠಿಯಲ್ಲಿ ಮಾತನಾಡಿದರು. ಬಳಿಕ ಹಿಂದಿಯಲ್ಲೂ ಹೇಳಿಕೆ ನೀಡುವಂತೆ ಮಾಧ್ಯಮದವರು ಮನವಿ ಮಾಡಿದರು. ಆದರೆ ಆಮಿರ್ ಖಾನ್ ಅವರು ‘ಹಿಂದಿಯಲ್ಲಿ ಹೇಳಬೇಕಾ? ಇದು ಮಹಾರಾಷ್ಟ್ರ’ ಎಂದು ಹೇಳಿದರು.

‘ನಿಮ್ಮ ಹೇಳಿಕೆ ದೆಹಲಿಯಲ್ಲಿ ಕೂಡ ಪ್ರಸಾರ ಆಗುತ್ತದೆ’ ಎಂದು ಮಾಧ್ಯಮದವರು ಹೇಳಿದ ಬಳಿಕ ಆಮಿರ್ ಖಾನ್ ಅವರು ಹಿಂದಿಯಲ್ಲಿ ಮಾತನಾಡಿದರು. ‘ಓಹ್ ದೆಹಲಿಯಲ್ಲೂ ಪ್ರಚಾರ ಆಗುತ್ತಾ? ಮತದಾನಕ್ಕೆ ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಎಲ್ಲರೂ ಬಂದು ಮತದಾನ ಮಾಡಿ’ ಎಂದು ಆಮಿರ್ ಖಾನ್ ಹೇಳಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಆಮಿರ್ ಖಾನ್ ಅವರು ವಾಸಿಸುತ್ತಿರುವುದು ಮಹಾರಾಷ್ಟ್ರದಲ್ಲಿ. ಆದರೆ ಈವರೆಗೂ ಅವರು ಮರಾಠಿ ಸಿನಿಮಾ ಮಾಡಿಲ್ಲ. ಅವರು ಫೇಮಸ್ ಆಗಿರುವುದು, ಹಣ ಗಳಿಸಿರುವುದು ಹಿಂದಿ ಸಿನಿಮಾದಿಂದ. ಒಂದು ವೇಳೆ ಅವರಿಗೆ ಮರಾಠಿ ಮೇಲೆ ಅಷ್ಟೊಂದು ಪ್ರೀತಿ ಇರುವುದೇ ಹೌದಾದರೆ ಮರಾಠಿಯಲ್ಲೇ ಸಿನಿಮಾ ಮಾಡಲಿ. ಬರೀ ಹಿಂದಿ ಸಿನಿಮಾ ಯಾಕೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪೈರಸಿಯಿಂದಲೇ ಚೀನಾದಲ್ಲಿ ಸೂಪರ್​ಸ್ಟಾರ್ ಆದ ಆಮಿರ್ ಖಾನ್

ಇನ್ನು ಕೆಲವರು ಆಮಿರ್ ಖಾನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ಆಮಿರ್ ಖಾನ್ ಅವರು ವ್ಯಂಗ್ಯವಾಗಿ ಆ ಹೇಳಿಕೆ ನೀಡಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳುವ ಬುದ್ಧಿ ಈ ಜನರಿಗೆ ಇಲ್ಲ’ ಎಂಬ ಕಮೆಂಟ್ ಬಂದಿದೆ. ಒಟ್ಟಿನಲ್ಲಿ ಆಮಿರ್ ಖಾನ್ ಅವರ ಹೇಳಿಕೆಯಿಂದ ಹಿಂದಿ ವರ್ಸಸ್ ಮರಾಠಿ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Kalaburagi: ಓಪನ್​​ ಮೀಟಿಂಗ್​​ನಲ್ಲೇ ಹಣಕ್ಕೆ ತಹಶೀಲ್ದಾರ್​​ ಡಿಮ್ಯಾಂಡ್​​; ಆಡಿಯೋ ವೈರಲ್​​ – Kannada News | Jewargi Tehsildar Accused of Demanding Money from Staff; Audio Viral

ಕಲಬುರಗಿ, ಜನವರಿ 16: ಸಿಬ್ಬಂದಿ ಬಳಿ ತಹಶೀಲ್ದಾರ್​​ ಅವರೇ ಹಣಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದ್ದು, ಜೇವರ್ಗಿ ತಹಶೀಲ್ದಾರ್​​​ ಮತ್ತು ಸಿಬ್ಬಂದಿ ನಡುವಿನ ಆಡಿಯೋ ವೈರಲ್​ ಆಗಿದೆ. ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಓಪನ್ ಮೀಟಿಂಗ್​ನಲ್ಲೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗಿದ್ದು, ಕಿರುಕುಳದಿಂದ ಬೇಸತ್ತ ಸಿಬ್ಬಂದಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರನ್ನೂ ನೀಡಿರುವ ಪ್ರಸಂಗ ನಡೆದಿದೆ.

ಸಿಬ್ಬಂದಿಗೆ ತಹಶೀಲ್ದಾರ್​​ ಆವಾಜ್


ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ, ಹಾಗಾಗಿ ನನಗೂ ಹಣ ನೀಡಿ ಎಂದು ತಹಶೀಲ್ದಾರ್​​ ಮಲ್ಲಣ್ಣ ಸಿಬ್ಬಂದಿಗೆ ಆವಾಜ್​​ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು RI ಜವಾಬ್ದಾರಿಯೇ ಬೇಡ, ನನ್ನನು ಕಚೇರಿ ಕೆಲಸಕ್ಕೆ ಹಾಕಿ, ನನಗೆ ಹಣ ನೀಡಲು ಆಗಲ್ಲ ಎಂದ ಸಿಬ್ಬಂದಿ ಅಲವತ್ತುಕೊಂಡಿದ್ದಾರೆ. ಸರ್ಕಾರಿ ಜಯಂತಿಗಳು, ಶಾಸಕರು ಹೇಳುವ ಕೆಲಸಗಳಿಗೆಲ್ಲ ನಾವು ಹಣ ಕೊಡಬೇಕು. ನಾವು ದುಡ್ಡನ್ನು ಎಲ್ಲಿಂದ ಕೊಡೋದು? ಎಂದು ತಹಶೀಲ್ದಾರ್​ ಮಲ್ಲಣ್ಣಗೆ ಸಿಬ್ಬಂದಿ ಪ್ರಶ್ನೆ ಹಾಕಿದ್ದರೂ ಎಲ್ಲಾ ಇಲಾಖೆಯವರು ಹಣ ಕೊಡ್ತಾರೆ ನೀವು ಕೊಡಿ ಎಂದು ಮಲ್ಲಣ್ಣ ಹೇಳಿದ್ದಾರೆ. ಇಲ್ಲವಾದರೆ ನಿಮ್ಮ ವಿರುದ್ಧ ತನಿಖೆಗೆ ಆದೇಶಿಸುವೆ ಎಂದು ಬೆದರಿಕೆಯನ್ನೂ ಹಾಕಿರೋದಾಗಿ ಸಿಬ್ಬಂದಿ ದೂರಿದ್ದಾರೆ.

ಇದನ್ನೂ ಓದಿ: ಶೂಟ್​ ಮಾಡಿಕೊಂಡು ಪತಿ ಆತ್ಮಹತ್ಯೆ; ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು?

ತಹಶೀಲ್ದಾರ್​​ ಸ್ಪಷ್ಟನೆ

ಇನ್ನು ತಮ್ಮ ಮೇಲೆ ಕೇಲಿಬಂದಿರುವ ಆರೋಪಗಳ ಕುರಿತು ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲಗೋಡ್ ಪ್ರತಿಕ್ರಿಯಿಸಿದ್ದಾರೆ. 6 ತಿಂಗಳ ಹಿಂದೆ ಕನ್ನಡಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಈ ಬಗ್ಗೆ ನಾನು ಸಿಬ್ಬಂದಿ ಜೊತೆ ಸಭೆಯಲ್ಲಿ ಚರ್ಚಿಸಿದ್ದೇನೆಯೇ ಹೊರತು, ಯಾವ ಸಿಬ್ಬಂದಿ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಶರಣು ಎಂಬ ವಿಎಯನ್ನು 6 ತಿಂಗಳ ಹಿಂದೆ ಅಮಾನತು ಮಾಡಿದ್ದು, ಆತನೇ ಇದನ್ನೆಲ್ಲ ಮಾಡಿ ಎಲ್ಲ ಕಡೆ ದೂರು ಕೊಟ್ಟಿದ್ದಾನೆ. ನಾನು ಹಣ ಕೇಳಿದ್ರೆ ಎಲ್ಲ ಸಿಬ್ಬಂದಿ ಸೇರಿ ದೂರು ಕೊಡಬಹುದಾಗಿತ್ತು. ಈ ಹಿಂದಿನ ತಹಶೀಲ್ದಾರ್​​ ಅವರಿಗೂ ಆತ ಬ್ಲ್ಯಾಕ್​​ಮೇಲ್​​ ಮಾಡಿದ್ದಾನೆ‌. ಅದೇ ರೀತಿ ನನಗೂ ಸಹ ಬ್ಲ್ಯಾಕ್‌ಮೇಲ್ ಮಾಡಲು ಬಂದಿದ್ದಾನೆ‌. ಆದರೆ ಆತನ ಬೆದರಿಕೆಗೆ ನಾನು ಹೆದರಿಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:11 pm, Fri, 16 January 26

Source link

ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ – Kannada News | Karnataka Power Tussle: DK SHivakumar Talks In Delhi about Rahul gandhi Met at Mysuru Airport

ನವದೆಹಲಿ, (ಜನವರಿ 16): ಸಂಕ್ರಮಣದ ದಿನ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಆದ್ರೆ ಸಂಕ್ರಾಂತಿಗೆ (Sankranthi) ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಪಥಬದಲಾಗಿ ಕ್ರಾಂತಿಯಾಗುತ್ತೆ ಎನ್ನುವ ಗೊಂದಲಕ್ಕೆ ತೆರೆಬಿದ್ದಿಲ್ಲ. ಅಧಿಕಾರ ಹಂಚಿಕೆಗೆ . ಮೊನ್ನೆ ಮೈಸೂರಿಗೆ (Mysuru) ಬಂದಿದ್ದ ರಾಹುಲ್ ಗಾಂಧಿಯನ್ನು (Rahul Gandhi) ವಿಮಾನ ನಿಲ್ದಾಣದಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ್ರು. ಅದರಲ್ಲೂ ಡಿಕೆಶಿ ಪ್ರತ್ಯೇಕವಾಗಿ ನಿಂತು ಅಧಿಕಾರ ಹಂಚಿಕೆ ಗೊಂದಲವನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು. ಏರ್‌ಪೋರ್ಟ್‌ ರನ್‌ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದರಂತೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು,  ಈ ವೇಳೆ ಮೈಸೂರಿನಲ್ಲಿ ರಾಹುಲ್ ರಹಸ್ಯ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Trigrahi Yoga 2026: 200 ವರ್ಷಗಳ ನಂತರ ಅಪರೂಪದ ತ್ರಿಗ್ರಹಿ ಯೋಗ; ಈ ರಾಶಿಗೆ ಸುವರ್ಣಯುಗ ಪ್ರಾರಂಭ – Kannada News | Rare Trigrahi Yoga Jan 16: Sun, Venus, Mars in Capricorn – Golden Age for 4 Zodiac Signs!

ಜನವರಿ 16 ರಂದು ಸೂರ್ಯ, ಶುಕ್ರ ಮತ್ತು ಮಂಗಳ ಗ್ರಹಗಳು ಮಕರ ರಾಶಿಗೆ ಪ್ರವೇಶಿಸುವುದರೊಂದಿಗೆ ಅಪರೂಪದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. 200 ವರ್ಷಗಳ ನಂತರ ಈ ಯೋಗವು ರೂಪುಗೊಳ್ಳಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದರೊಂದಿಗೆ, ಮಕರ ಸಂಕ್ರಾಂತಿಯ ನಂತರ ಕೆಲ ರಾಶಿಗಳಿಗೆ ಸುವರ್ಣಯುಗ ಪ್ರಾರಂಭವಾಗುತ್ತದೆ. ಆ ರಾಶಿಗಳಿಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.

ಮಕರ ಸಂಕ್ರಾಂತಿಯ ನಂತರ ಚಲನೆಯಲ್ಲಿರುವ ಗ್ರಹಗಳ ಸಂಚಾರವು ವಿವಿಧ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ. ಸಂಕ್ರಾಂತಿಯ ನಂತರ, ಶುಕ್ರ, ಮಂಗಳ ಮತ್ತು ಶನಿಯ ಸಂಯೋಗದಿಂದಾಗಿ ಅಪರೂಪದ ಯೋಗವು ರೂಪುಗೊಳ್ಳುತ್ತಿದೆ. ಜನವರಿ 13 ರಂದು ಶುಕ್ರ ಮಕರ ರಾಶಿಯನ್ನು ಪ್ರವೇಶಿಸಿದೆ. ನಂತರ ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದೆ. ಈಗ ಜನವರಿ 16 ರಂದು ಮಂಗಳ ಮಕರ ರಾಶಿಯನ್ನು ಪ್ರವೇಶಿಸಲಿದೆ.

ಈ ಮೂರು ಗ್ರಹಗಳು ಮಕರ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಅಪರೂಪದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. 200 ವರ್ಷಗಳ ನಂತರ ಈ ಯೋಗವು ರೂಪುಗೊಳ್ಳಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದರೊಂದಿಗೆ, ಮಕರ ರಾಶಿಯ ನಂತರ ಅನೇಕ ರಾಶಿಗಳಿಗೆ ಸುವರ್ಣಯುಗ ಪ್ರಾರಂಭವಾಗಲಿದೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ತ್ರಿಗ್ರಹಿ ಯೋಗವು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಸೂರ್ಯನ ನೇರ ಅಂಶವು ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ನೀವು ನಿಮ್ಮ ವೃತ್ತಿಜೀವನದಲ್ಲಿ ಶ್ರೇಷ್ಠರಾಗುವಿರಿ. ದೊಡ್ಡ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ನಿಮ್ಮ ವೃತ್ತಿಪರ ಜೀವನದಲ್ಲಿನ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ನೀವು ಹಳೆಯ ಸಾಲಗಳನ್ನು ತೀರಿಸುವಿರಿ. ನೀವು ಈಗಾಗಲೇ ಮಾಡುತ್ತಿರುವ ಕೆಲಸದಿಂದ ಆದಾಯ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಸಂಕ್ರಾಂತಿಯ ನಂತರ, ಎಲ್ಲವೂ ನಿಮ್ಮ ಪರವಾಗಿ ಬದಲಾಗುತ್ತದೆ. ನಿಮ್ಮ ಕುಟುಂಬವು ಸಮಸ್ಯೆಗಳಿಂದ ಮುಕ್ತವಾಗುತ್ತದೆ. ಸಂಪತ್ತು ಮತ್ತು ಅದೃಷ್ಟ ಒಟ್ಟಿಗೆ ಬರುತ್ತದೆ.

ವೃಶ್ಚಿಕ ರಾಶಿ:

ತ್ರಿಗ್ರಹಿ ಯೋಗವು ವೃಶ್ಚಿಕ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತರುತ್ತದೆ. ನೀವು ನಿಮ್ಮ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನಿಮಗೆ ಹೊಸ ಆದಾಯ ಮತ್ತು ಲಾಭಗಳು ಸಿಗುತ್ತವೆ. ನಿಮ್ಮ ವೃತ್ತಿಪರ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಜಂಟಿ ವ್ಯವಹಾರಗಳ ಮೂಲಕ ನೀವು ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ನಿಮ್ಮ ಸಹೋದ್ಯೋಗಿಗಳ ಬೆಂಬಲ ನಿಮಗೆ ಇರುತ್ತದೆ. ವಿದೇಶಕ್ಕೆ ಹೋಗಲು ನಿಮಗೆ ಹೆಚ್ಚಿನ ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಮದುವೆಯಲ್ಲಿನ ಅಡೆತಡೆಗಳು ದೂರವಾಗುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಧನು ರಾಶಿ:

ತ್ರಿಗ್ರಹಿ ಯೋಗವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಶುಭ ಸಮಯದಲ್ಲಿ, ನೀವು ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ನೀವು ವೃತ್ತಿಪರವಾಗಿ ಪ್ರಗತಿ ಸಾಧಿಸುವಿರಿ. ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಜೀವನವು ಸಂತೋಷವಾಗಿರುತ್ತದೆ.

ಮಕರ ರಾಶಿ:

ಮಕರ ರಾಶಿಯವರಿಗೆ ತ್ರಿಗ್ರಹಿ ಯೋಗವು ಅನೇಕ ಪ್ರಯೋಜನಗಳನ್ನು ತರುತ್ತದೆ. ಈ ಅವಧಿಯಲ್ಲಿ ಅವಿವಾಹಿತರು ಉತ್ತಮ ಸಂಬಂಧಗಳನ್ನು ಕಂಡುಕೊಳ್ಳುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಹೊಸದಾಗಿ ಮದುವೆಯಾದವರು ಮಕ್ಕಳ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:47 pm, Fri, 16 January 26

Source link

ವಿಚಾರಣೆ ನೆಪದಲ್ಲಿ ಕ್ಯಾನ್ಸರ್​​ ರೋಗಿ ಮೇಲೆ ಕ್ರೌರ್ಯ?: ಖಾಕಿ ಏಟಿಗೆ ಮುರೀತಾ ವ್ಯಕ್ತಿ ಮೂಳೆ? – Kannada News | Torture Allegations Against Yadgir Police: Cancer Patient Suffers Broken Leg After Interrogation Assault

ಕ್ಯಾನ್ಸರ್​​ ರೋಗಿ ಮೇಲೆ ನಡೆದಿರುವ ಹಲ್ಲೆ

ಯಾದಗಿರಿ, ಜನವರಿ 16: ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಿ ಕ್ಯಾನ್ಸರ್​​ ರೋಗಿಗೆ ಬಾಸುಂಡೆ ಬರುವ ರೀತಿ ಪೊಲೀಸರು ಹೊಡೆದ ಪರಿಣಾಮ ಆತನ ಕಾಲು ಮುರಿದಿರುವ ಆರೋಪ ಯಾದಗಿರಿಯಲ್ಲಿ ಕೇಳಿಬಂದಿದೆ. ಕೆಂಭಾವಿ ನಿವಾಸಿ ಮೆಹಬೂಬ್ ಎಂಬರಿಗೆ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ಘಟನೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರ ಏಟಿನಿಂದ ಗಾಯಗೊಂಡಿರುವ ಮಹೆಬೂಬ್​​ನ ಕಲಬುರಗಿಯ ಜಿಮ್ಸ್​​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

5 ತಿಂಗಳು ಹಿಂದಿನ ಪ್ರಕರಣದ ವಿಚಾರಣೆ

ಮೆಹಬೂಬ್​​ ಮತ್ತು ಉತ್ತರ ಪ್ರದೇಶ ಮೂಲದ ಸಾಹಿಲ್ ಎಂಬಾತ ಸೇರಿ ಜಾತ್ರೆಗಳಲ್ಲಿ ಆಟಿಕೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ಆಗಸ್ಟ್​​ ವೇಳೆಗೆ ಆಟೋದಿಂದ ಬಿದ್ದು ಸಾಹಿಲ್ ಮೃತಪಟ್ಟಿದ್ದ. ಕಳೆದ ಐದು ತಿಂಗಳ ಹಿಂದೆ ನಡೆದಿರೋ ಅಪಘಾತದ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ಮೆಹಬೂಬ್​​ನ ವಿಚಾರಣೆಗೆಂದು ಪೊಲೀಸರು ಕರೆದಿದ್ದರು. ಆದರೆ ಪೊಲೀಸರ ಕೈಗೆ ಸಿಗದೆ ಮೆಹಬೂಬ್​​ ಓಡಾಡಿಕೊಂಡಿದ್ದ ಎನ್ನಲಾಗಿದೆ. ಕೊನೆಗೂ ಕೈಗೆ ಸಿಕ್ಕ ಆತನನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು, ವಿಚಾರಣೆ ನೆಪದಲ್ಲಿ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:  ಬಾಲಕಿ ಕಣ್ಣೆದುರೇ ತಂದೆಯ ಕೊಲೆ ಪ್ರಕರಣ; ನಿಗೂಢ ಕೊಲೆಯ ಸುಳಿವು ನೀಡಿದ್ದ ಕಾರು! ಕೊನೆಗೂ ಬಲೆಗೆ ಬಿದ್ದ ಹಂತಕರು

ಮೆಹಬೂಬ್ ಬ್ಲಡ್​​ ಕ್ಯಾನ್ಸರ್ ರೋಗಿ

ಇನ್ನು ಪೊಲೀಸರು ನೀಡಿದ ಹೊಡೆತದ ಏಟಿಗೆ ಮೆಹಬೂಬ್​​ ಕಾಲುಗಳು ಮತ್ತು ಹಿಮಭಾಗದಲ್ಲಿ ಬಾಸುಂಡೆಗಳು ಮೂಡಿವೆ. ಈಗಾಗಲೇ ಮೆಹಬೂಬ್​​ ಬ್ಲಡ್​​ ಕ್ಯಾನ್ಸರ್​​ನಿಂದ ಬಳಲುತ್ತಿರುವ ರೋಗಿಯಾಗಿದ್ದು, ಪೊಲೀಸರು ನಡೆಸುವ ಕ್ರೌರ್ಯಕ್ಕೆ ಆತನ ಕಾಲು ಮೂಳೆ ಮುರಿದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ನಡೆಸಿರುವ ಹಲ್ಲೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link