Category Archives: Blog

Your blog category

ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ – Kannada News | Fire accident in Prayagraj Magh Mela 15 Tents Gutted

ಪ್ರಯಾಗರಾಜ್, ಜನವರಿ 13: ಉತ್ತರ ಪ್ರದೇಶದ ಪ್ರಯಾಗರಾಜ್ ಮಾಘ ಮೇಳದ ನಾರಾಯಣ ಧಾಮ ಶಿಬಿರದಲ್ಲಿ ಭಾರಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, 15 ಡೇರೆಗಳು ಮತ್ತು ಸುಮಾರು 20 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಇದು ಯಾತ್ರಿಕರಲ್ಲಿ ಆತಂಕ ಮೂಡಿಸಿದೆ. 3 ಕಿಲೋಮೀಟರ್ ದೂರದಲ್ಲಿ ಜ್ವಾಲೆಗಳು ಗೋಚರಿಸುತ್ತಿದ್ದವು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದರು. ಎಲ್ಲಾ ಭಕ್ತರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ವಿರುದ್ಧದ ಲಾಕಪ್ ಡೆತ್ ಕೇಸಿಗೆ ಟ್ವಿಸ್ಟ್: ದರ್ಶನ್ ಕೊಲೆ ರಹಸ್ಯ ಬಯಲು – Kannada News | Bengaluru Custodial Death Case: CID Find out Darshan Death reasons

ಬೆಂಗಳೂರು, (ಜನವರಿ 13): ಕಳೆದ ನವೆಂಬರ್ ನಲ್ಲಿ ಬೆಂಗಳೂರು ಪೊಲೀಸರಿಗೆ (Bengaluru Police) ದೊಡ್ಡ ಅಘಾತ ಎದುರಾಗಿತ್ತು.. ಮೂರು ದಿನ ಅಕ್ರಮವಾಗಿ ಪೊಲೀಸರ ಕಸ್ಟಡಿಯಲ್ಲಿದ್ದ ದರ್ಶನ್ ಎಂಬ 22 ವರ್ಷದ ಯುವಕ ನಂತರ ರಿಹ್ಯಾಬ್ ಸೆಂಟರ್ ಸೇರಿದ ಮೂರೇ ದಿನಕ್ಕೆ ಪ್ರಾಣ ಬಿಟ್ಟಿದ್ದ. ಮಗನ ಈ ಸಾವಿಗೆ ಪೊಲೀಸರ ಹೊಡೆತಗಳೇ ಕಾರಣ ಎಂದು ಪೋಷಕರು ಆರೋಪಿಸಿದ್ದರು. ಇದರಿಂದ ವಿವೇಕ ನಗರ ಪೊಲೀಸರ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಲಾಕ್ ಅಪ್ ಡೆತ್ ಸ್ವರೂಪದ ಈ ಕೇಸ್ ನಂತರ ಸಿಐಡಿಗೆ ವರ್ಗಾವಣೆ ಆಗಿತ್ತು. ಸದ್ಯ ಸಿಐಡಿ ತನಿಖೆಯಲ್ಲಿ ಇಡೀ ಪ್ರರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದರ್ಶನ್ ಕೊಲೆಗೆ ಪೊಲೀಸರು ಕಾರಣರಲ್ಲ ಎಂದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.

ದರ್ಶನ್ ಸಾವಿಗೆ ಪೊಲೀಸ್ರು ಕಾರಣರಲ್ಲ

ಹೌದು… ವಿವೇಕನಗರ ಪೊಲೀಸರಿಂದ ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಲಾಕಪ್ ಡೆತ್ ಆರೋಪ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ಇದೀಗ ಸಿಐಡಿ ತನಿಖೆ ಮಾಡಿ ದರ್ಶನ್ ಸಾವಿಗೆ ಕಾರಣ ಯಾರು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಸಿಐಡಿ ತನಿಖೆಯಲ್ಲಿ ದರ್ಶನ್ ಸಾವಿಗೆ ಕಾರಣ ಪೊಲೀಸರಲ್ಲ. ಬದಲಾಗಿ ಆತ ದಾಖಲಾಗಿದ್ದ ರಿಹ್ಯಾಬ್ ಸೆಂಟರ್ ಕೆಲಸಗಾರರು ಎನ್ನುವುದು ಬಯಲಿಗೆ ಬಂದಿದ್ದು, ಈ ಸಂಬಂಧ ಸಿಐಡಿ ಅಧಿಕಾರಿಗಳು 8 ಜನರನ್ನು ಬಂಧಿಸಿದ್ದಾರೆ. ನವೀನ್, ಅಖಿಲ್, ನಾರಾಯಣ @ನಾಣಿ, ಹಿತೇಶ್ ಕುಮಾರ್, ಮಂಜು, ಸಾಹಿಲ್ ಅಹಮದ್, ನವೀನ್ ಕುಮಾರ್, ರವಿ ಎನ್ನುವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದರ್ಶನ್ ಸಾವು: ಪೊಲೀಸರಿಂದಲೇ ಕೊಲೆ ಆರೋಪ, ಪ್ರಕರಣ ಸಿಐಡಿ ಹೆಗಲಿಗೆ

ರಿಹ್ಯಾಬ್ ಹುಡುಗರಿಂದ ದರ್ಶನ್ ಕೊಲೆ

ಮೊದಲೇ ಕುಡಿತದ ದಾಸನಾಗಿದ್ದ ದರ್ಶನ್ ನನ್ನು ವಿವೇಕನಗರ ಪೊಲೀಸರು ಯಾವುದೇ ಕೇಸ್ ದಾಖಲಿಸಿದೆ ಮೂರು ದಿನ ಅಕ್ರಮವಾಗಿ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಬಳಿಕ ಅಡಕಮಾರನಹಳ್ಳಿಯ ಯುನಿಟಿ ಫೌಂಡೇಶನ್ ಎಂಬ ರಿಹ್ಯಾಬ್ ಸೆಂಟರ್ ಗೆ ಸೇರಿಸಲಾಗಿತ್ತು.ಆದರೆ ದರ್ಶನ್ ಕಂಟ್ರೋಲ್ ಮಾಡೋದಕ್ಕೆ ರಿಹ್ಯಾಬ್ ಹುಡುಗರು ಆತನ ಮೇಲೆ ಎರಡ್ಮೂರು ದಿನ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ರಿಹ್ಯಾಬ್ ಸೆಂಟರ್ ನಲ್ಲಿ ಲೋ ಬಿಪಿಯಾಗಿ ದರ್ಶನ್ ಸಾವನ್ನಪ್ಪಿದ್ದ. ಸದ್ಯ ಸಿಐಡಿ ತನಿಖೆಯಲ್ಲಿ ರಿಹ್ಯಾಬ್ ಸೆಂಟರ್ ನ ಇನ್ಚಾರ್ಜ್ ಅಖಿಲ್ ಸೇರಿದಂತೆ 8 ಜನರನ್ನ ಬಂಧಿಸಿ ಜೈಲಿಗಟ್ಟಲಾಗಿದೆ.

ಪೊಲೀಸರ ವಿರುದ್ಧ ಕೊಲೆ ಕೇಸ್

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದರ್ಶನ್ ಎಂಬ ಯುವಕನನ್ನು ಪೊಲೀಸರು 2025ರ ನವೆಂಬರ್ 15ರಂದು ಸ್ಟೇಷನ್‌ಗೆ ಕರೆತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಇದಾದ ಬಳಿಕ ಆತನನ್ನು ಬಿಟ್ಟು ಕಳಿಸಿದ್ದು, ಮಾದನಾಯಕನಹಳ್ಳಿ ಬಳಿ ಯುನಿಟಿ ರಿಹ್ಯಾಬಿಲೇಷನ್ ಸೆಂಟರ್‌ನಲ್ಲಿ (ಪುನರ್ವಸತಿ ಕೇಂದ್ರದಲ್ಲಿ) ಸೇರಿಸಲಾಗಿತ್ತು. ಆ ವೇಳೆ ದರ್ಶನ್ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ದರ್ಶನ್ ಪೋಷಕರು ಪೊಲೀಸರ ವಿರುದ್ಧವೇ ಲಾಕಪ್ ಡೆತ್ ಆರೋಪ ಮಾಡಿದ್ದರು. ಸಂಬಂಧ ವಿವೇಕನಗರ ಇನ್​​ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR ದಾಖಲಾಗಿತ್ತು. ಇದೀಗ ಸಿಐಡಿ ತನಿಖೆಯಿಂದ ಅಸಲಿ ಸತ್ಯ ಬಯಲಿಗೆ ಬಂದಿದ್ದು, ವಿವೇಕನಗರ ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ; ಹಾಡು, ನೃತ್ಯದ ವಿಡಿಯೋ ಇಲ್ಲಿದೆ – Kannada News | Pongal Festival celebrated in Puducherry Colleges watch video

ಪುದುಚೆರಿ, ಜನವರಿ 13: ಪುದುಚೇರಿಯ ವಿವಿಧ ಕಾಲೇಜುಗಳಲ್ಲಿ ಇಂದೇ ಪೊಂಗಲ್ (Pongal) ಹಬ್ಬವನ್ನು ಆಚರಿಸಲಾಯಿತು. ಮದರ್ ತೆರೇಸಾ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಹಿಂದೂ ಹಬ್ಬದಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು. ರಂಗೋಲಿ ಬಿಡಿಸಿ, ಡ್ಯಾನ್ಸ್ ಮಾಡಿ, ಕಬ್ಬು ತಿಂದು ಕುಣಿದು ಕುಪ್ಪಳಿಸಿದರು. ಸಚಿವ ಪಿ.ಆರ್.ಎನ್. ತಿರುಮುರುಗನ್ ಈ ಉತ್ಸವದಲ್ಲಿ ಭಾಗವಹಿಸಿದ್ದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾರ್ಟಿನ್’ ವಿಮರ್ಶೆ ವಿವಾದ: ಮತ್ತೆ ಕ್ಷಮೆ ಕೇಳಿದ ‘ಅಮೃತಾಂಜನ್’ ಸುಧಾಕರ್ – Kannada News | Amrutanjan Kannada movie actor Sudhakar Gowda talks about Martin Review controversy

ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಫೇಮಸ್ ಆದ ಸುಧಾಕರ್ ಗೌಡ (Sudhakar Gowda) ಅಲಿಯಾಸ್ ಸ್ಟ್ರಾಂಗ್ ಸುಧಾಕರ ಅವರು ‘ಅಮೃತ ಅಂಜನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜನವರಿ 30ರಂದು ಬಿಡುಗಡೆ ಆಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಧಾಕರ್ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ. ಈ ಮೊದಲು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆದಾಗ ಸುಧಾಕರ್ ಅವರು ವಿಮರ್ಶೆ (Martin Review) ಮಾಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ತಾವು ನಟಿಸಿರುವ ‘ಅಮೃತ ಅಂಜನ್’ (Amrutanjan) ಸಿನಿಮಾಗೆ ಧ್ರುವ ಸರ್ಜಾ ಅವರಿಂದಲೇ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

‘ನಾನು ಈಗ ಚಿತ್ರರಂಗಕ್ಕೆ ಬಂದವನಲ್ಲ. 2016ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮನಸು ಮಲ್ಲಿಗೆ ಸಿನಿಮಾದಲ್ಲಿ ಸ್ನೇಹಿತನ ಪಾತ್ರ ಮಾಡಿದ್ದೆ. ಇಡೀ ಸಿನಿಮಾದಲ್ಲಿ ಆ ಪಾತ್ರ ಇತ್ತು. 10 ವರ್ಷಗಳಿಂದಲೂ ಚಿತ್ರರಂಗದಲ್ಲಿ ಇದ್ದೇನೆ. ಆದರೆ ಜನರಿಗೆ ಗೊತ್ತಾಗಿದ್ದು ನಮ್ಮ ಶಾರ್ಟ್ ಫಿಲ್ಮ್ ಮತ್ತು ರೀಲ್ಸ್ ಮೂಲಕ. ಅಂದು ನಾನು ಅನಿಸಿದ್ದನ್ನು ಹೇಳಿದ್ದೆ. ನಾನು ಹೇಳಿದ ರೀತಿ ತಪ್ಪು ಇರಬಹುದು ಅಥವಾ ನಾನು ಹೇಳಿದ್ದೇ ತಪ್ಪು ಇರಬಹುದು. ನನಗೆ ಗೊತ್ತಿಲ್ಲ. ಅಂದು ಕ್ಷಮೆ ಕೇಳಿದ್ದೆ, ಇಂದು ಕೂಡ ಕ್ಷಮೆ ಕೇಳುತ್ತೇನೆ’ ಎಂದು ಸುಧಾಕರ್ ಅವರು ಹೇಳಿದ್ದಾರೆ.

‘ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ಅದನ್ನು ಯಾರೂ ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಅದೇ ಕೊನೇ ಸಿನಿಮಾ. ಆ ಬಳಿಕ ನಾನು ಯಾವುದೇ ಸಿನಿಮಾಗೆ ವಿಮರ್ಶೆಯನ್ನೇ ಮಾಡಿಲ್ಲ’ ಎಂದು ಸುಧಾಕರ್ ಹೇಳಿದ್ದಾರೆ. ‘ನಮ್ಮ ಸಿನಿಮಾದ ನಿರ್ದೇಶಕರು ಧ್ರುವ ಸರ್ಜಾ ಅವರಿಗೆ ಆಪ್ತರಾಗಿದ್ದಾರೆ. ಅವರ ಕೆಲಸವನ್ನು ಧ್ರುವ ಸರ್ಜಾ ಅವರು ಹೊಗಳಿದ್ದರು. ನಮ್ಮ ಸಿನಿಮಾದ ಶೂಟಿಂಗ್ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಈಗ ಚರ್ಚೆ ನಡೆಯುತ್ತಿದೆ. ಈಗ ಧ್ರುವ ಸರ್ಜಾ ಅವರು ಬಂದರೆ ನಮಗೆ ಸಹಾಯ ಆಗುತ್ತದೆ. ಅವರು ಈ ವಿಡಿಯೋ ನೋಡುತ್ತಿದ್ದರೆ ನಾನು ಕೂಡ ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ಸುಧಾಕರ್.

‘ನಮ್ಮದು ಕಾಮಿಡಿ ಸಿನಿಮಾ. ಅದರ ಜೊತೆಗೆ ಅಮ್ಮ-ಅಪ್ಪನ ಸೆಂಟಿಮೆಂಟ್ ಹಾಗೂ ಒಂದು ಚಿಕ್ಕ ಲವ್ ಸ್ಟೋರಿ ಕೂಡ ಇದೆ. ಏನೋ ಹೊಸದಾಗಿ ಮಾಡಿದ್ದೇವೆ ಅನ್ನೋ ಥರ ಏನಿಲ್ಲ. ಸಿನಿಮಾ ನೋಡುವವರು ಒಂದು ಗಂಟೆ ಬಿದ್ದು ಬಿದ್ದು ನಗುವ ರೀತಿ ಸಿನಿಮಾ ಇರುತ್ತದೆ. ಜನರಿಗೆ ಬೇಕಿರುವುದೇ ಮನರಂಜನೆ. ನಾವು ಕಾಮಿಡಿ ಆಯ್ಕೆ ಮಾಡಿಕೊಂಡು ಜನರನ್ನು ನಗಿಸುತ್ತೇನೆ’ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು

‘ನಮ್ಮ ಟ್ರೇಲರ್ ಬಿಡುಗಡೆ ಆದ್ಮೇಲೆ ಸಿನಿಮಾಗೆ ಹೈಪ್ ಸಿಗುತ್ತದೆ. ಟ್ರೇಲರ್ ನೋಡಿದರೆ ಈ ಹುಡುಗರು ಏನೋ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಯುತ್ತದೆ. ಟ್ರೇಲರ್ ರೀಚ್ ಆದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡುತ್ತಾರೆ. ಪ್ರೇಕ್ಷಕರಿಗೆ ನಾವು ನಿರಾಸೆ ಮಾಡಲ್ಲ’ ಎಂದು ಸುಧಾಕರ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ – Kannada News | 25 Year Old dies by Suicide after fear of Dreams in Madhya Pradesh

ನವದೆಹಲಿ, ಜನವರಿ 13: ವಿಜ್ಞಾನವು ಎಷ್ಟೇ ಪ್ರಗತಿ ಸಾಧಿಸುತ್ತಿದ್ದರೂ ಮುಗ್ಧ ಜನರು ಮಾಟ- ಮಂತ್ರಗಳೆಂಬ ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ದೀರ್ಘಕಾಲ ನಿದ್ರಿಸಲು ಸಾಧ್ಯವಾಗದ ಮತ್ತು ಕನಸಿನಲ್ಲಿ ಬರುವ ದುಃಸ್ವಪ್ನಗಳ ಭಯವನ್ನು ಸಹಿಸಲಾಗದ ಯುವಕ ತನ್ನ ಜೀವನವನ್ನು ಮಾನಸಿಕ ಯಾತನೆಯಿಂದ (Depression) ಕೊನೆಗೊಳಿಸಿದ್ದಾರೆ. ಮೂವರು ಮಹಿಳೆಯರ ರೂಪದಲ್ಲಿ ಅವರನ್ನು ಕಾಡುತ್ತಿದ್ದ ಆ ದುಃಸ್ವಪ್ನಗಳು ಅವರನ್ನು ಸಾವಿನ ಮಡಿಲಿಗೆ ತಳ್ಳಿದ್ದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಆಧುನಿಕ ಯುಗದಲ್ಲೂ ಮೂಢನಂಬಿಕೆಗಳು ಅಮಾಯಕರ ಜೀವಗಳನ್ನು ಬಲಿ ಪಡೆಯುತ್ತಿವೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 25 ವರ್ಷದ ಯುವಕನಿಗೆ ದುಃಸ್ವಪ್ನಗಳು ಬೀಳುತ್ತಿತ್ತು. ಭಯದಿಂದ ಸರಿಯಾದ ಚಿಕಿತ್ಸೆ ಸಿಗದೆ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಮೂಡಿಸಿದೆ. ಮೃತರನ್ನು ರಾಮದಾಸ್ ಎಂದು ಗುರುತಿಸಲಾಗಿದೆ. ರಾಮದಾಸ್ ಕೆಲವು ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು.

ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ; ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಲೈಂಗಿಕ ದೌರ್ಜನ್ಯ

ಅವರು ತಮ್ಮ ಕನಸಿನಲ್ಲಿ ನಿರಂತರವಾಗಿ ಮೂವರು ಮಹಿಳೆಯರನ್ನು ನೋಡುತ್ತಿದ್ದರು. ಆ ಮೂವರು ಕನಸಿನಲ್ಲಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಭ್ರಮೆಯನ್ನು ಹೊಂದಿದ್ದರು. ಆ ದುಃಸ್ವಪ್ನಗಳಿಂದಾಗಿ ಅವರು ತೀವ್ರ ಪ್ಯಾನಿಕ್ ಅಟ್ಯಾಕ್‌ಗಳಿಗೆ ಒಳಗಾಗಿದ್ದರು ಮತ್ತು ಮಾನಸಿಕವಾಗಿ ಖಿನ್ನತೆಗೆ ಒಳಗಾದರು.

ರಾಮದಾಸ್ ಅವರ ಸ್ಥಿತಿಯನ್ನು ನೋಡಿದ ಕುಟುಂಬದ ಸದಸ್ಯರಿಗೆ ಇದು ಮಾನಸಿಕ ಸಮಸ್ಯೆ ಎಂದು ಗುರುತಿಸಲು ಸಾಧ್ಯವಾಗಲಿಲ್ಲ. ತಮ್ಮ ಮಗನ ಮೇಲೆ ಯಾರೋ ಮಾಟ-ಮಂತ್ರ ಮಾಡಿದ್ದಾರೆ ಎಂದು ಅವರು ಅನುಮಾನಿಸಿದರು. ರಾಮದಾಸ್ ಅವರ ಸಹೋದರಿ ವಾಸಿಸುತ್ತಿದ್ದ ಅಂಬಾಪತ್ ಹಳ್ಳಿಯಲ್ಲಿರುವ ಮಾಂತ್ರಿಕನ ಬಳಿಗೆ ಅವರನ್ನು ಕರೆದೊಯ್ದರು. ಆ ಮಾಂತ್ರಿಕ ರಾಮದಾಸ್ ಅವರಿಗೆ ಮಾಟಮಂತ್ರ ಮಾಡಿದರು. ಆರಂಭದಲ್ಲಿ, ರಾಮದಾಸ್ 3 ತಿಂಗಳ ಕಾಲ ಚೆನ್ನಾಗಿದ್ದಂತೆ ತೋರುತ್ತಿತ್ತು. ಆದರೆ, ದುಃಸ್ವಪ್ನಗಳು ಮತ್ತೆ ಪ್ರಾರಂಭವಾದವು.

ಇದನ್ನೂ ಓದಿ: Crime News: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ!

ಮತ್ತೆ 3 ಮಹಿಳೆಯರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಭಯದಿಂದ ರಾಮದಾಸ್ ತೀವ್ರವಾಗಿ ವಿಚಲಿತರಾಗಿದ್ದರು. ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಭಾವಿಸಿ, ಕಳೆದ ಗುರುವಾರ ರಾತ್ರಿ ಮನೆಯ ಬಳಿಯ ಕಾಡಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಇರುತ್ತಿತ್ತು. ಆದರೆ, ಮಾನಸಿಕ ಆರೋಗ್ಯವನ್ನು ಬಹಳ ನಿರ್ಲಕ್ಷ್ಯ ಮಾಡುತ್ತಿರುವ ಈಗಿನ ಕಾಲದಲ್ಲಿ ಈ ರೀತಿಯ ಆತ್ಮಹತ್ಯೆಯ ಘಟನೆಗಳು ಹೆಚ್ಚುತ್ತಲೇ ಇವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರಿನಲ್ಲಿ ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗಿ ರಾಹುಲ್ ರಹಸ್ಯ ಮಾತು! – Kannada News | Karnataka CM Row: Rahul gandhi Talks separate with Siddaramaiah And DK Shivakumar at Mysuru Airport

ಮೈಸೂರು, (ಜನವರಿ 13): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಸಿಎಂ ಕುರ್ಚಿ ಕಿತ್ತಾಟ ಮುಂದುವರೆದಿದೆ. ಸಂಕ್ರಾಂತಿ ಬಳಿಕ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ಲ್ಯಾನ್ ಮಾಡಿದ್ದಾರೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ಮನವೊಲಿಸಿ ಸಿಎಂ ಹುದ್ದೆ ಪಡೆಯಬೇಕೆಂಬ ತಂತ್ರ ರೂಪಿಸಿದ್ದಾರೆ. ಆದ್ರೆ, ಈ ಎಲ್ಲಾ ಬೆಳವಂಣಿಗೆಗಳ ನಡುವೆ ಮೈಸೂರಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹೌದು.. ತಮಿಳುನಾಡಿಗೆ ತೆರಳಲು ದೆಹಲಿಯಿಂದ ವಿಮಾನದ ಮೂಲಕ ಮೈಸೂರಿಗೆ ಬಂದ ರಾಹುಲ್ ಗಾಂಧಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಆದ್ರೆ, ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ರಾಹುಲ್ ಗಾಂಧಿಯನ್ನು ಸೈಡಿಗೆ ಕರೆದುಕೊಂಡು ಹೋಗಿ ಮಾತನಾಡಿದ್ದಾರೆ. ಬಳಿಕ ರಾಹುಲ್ ಗಾಂಧಿ ಡಿಕೆಶಿಯನ್ನು ಬಿಟ್ಟು ಸಿದ್ದರಾಮಯ್ಯನವರನ್ನು ಪಕ್ಕಕ್ಕೆ ಕರೆದುಕೊಂಡು ಚರ್ಚಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ನೋಡಿ: ಏಯ್ ನೋಡ್ರಪ್ಪ ಅದೇ ಫೈನಲ್: ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?

Source link

ಕುಟುಂಬಕ್ಕೆ ಸಂಕಷ್ಟ ತಂದಿಟ್ಟ ವೈರಲ್ ವಿಡಿಯೋ: ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಅವಳಲ್ಲ ಅವನಾದ ಕಥೆ – Kannada News | Officers rescued Boy Who Acting In Girl Dress at Koppal Gavimath Fair

ಕೊಪ್ಪಳ, (ಜನವರಿ 13): ಜೀವ ಪಣಕ್ಕಿಟ್ಟು ಸಾಹಸ ಪ್ರದರ್ಶನಗಳನ್ನ ಮಾಡುವ ಮಗುವಿನ ವಿಡಿಯೋ ವೈರಲ್ ಆಗಿದ್ದು, ಇದೀಗ ಅದೇ ವೈರಲ್ ವಿಡಿಯೋ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ಮದ್ಯಪ್ರದೇಶದಿಂದ ಬಂದ ಅಲೆಮಾರಿ ಕುಟುಂಬವೊಂದು ಹೊಟ್ಟೆ ಪಾಡಿಗಾಗಿ ಕೊಪ್ಪಳದ ಗವಿ ಮಠದ ಜಾತ್ರೆಯಲ್ಲಿ (Koppal GaviMath Fair) ಸಾಹಸ ದೃಶ್ಯಗಳನ್ನ ಪ್ರದರ್ಶನ ಮಾಡತಿತ್ತು,ಸಾಹಸ ಪ್ರದರ್ಶನಕ್ಕೆ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಂಡಿದ್ದರು. ಆ ಬಾಲಕಿ ಮಾಡೋ ಸಾಹಸ ಪ್ರದರ್ಶನ ವೈರಲ್ ಆಗಿತ್ತು.ಬಾಲ ಕಾರ್ಮಿಕ ಕಾಯ್ದೆಯಡಿ 14 ವರ್ಷದ ಮಕ್ಕಳನ್ನು ಯಾವ ಕೆಲಸಕ್ಕೆ ಬಳಕೆ ಮಾಡುವಂತಿಲ್ಲ. ಆದ್ರೆ, ವಿಡಿಯೋ ವೈರಲ್ ಆಗುತ್ತಲೇ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆ ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ.ಆದ್ರೆ ಇಡೀ ಕಥೆಗೆ ಟ್ವಿಸ್ಟ್ ಸಿಕ್ಕಿದ್ದು ಇಲ್ಲೆ.ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿದ ಬಾಲಕಿ ಬಾಲಕಿ ಅಲ್ಲ,ಬದಲಾಗಿ ಆಕೆ ಬಾಲಕ.

ಅವಳಲ್ಲ ಅವನು: ಅಧಿಕಾರಿಗಳು ಶಾಕ್

ಪೋಷಕರು ಜನರನ್ನು ಸೆಳೆಯೋ ದೃಷ್ಟಿಯಿಂದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿದ್ರಂತೆ. ಖುದ್ದು ಪೋಷಕರೇ ಆ ಮಾತನ್ನ ಅಧಿಕಾರಿಗಳ ಮುಂದೆ ಹೇಳಿದ್ದಾರ. ಅಧಿಕಾರಿಗಳು ಸಹ ಮೊದಲು ಆ ಮಗುವನ್ನ ಬಾಲಕಿಯರ ಬಾಲ ಮಂದಿರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಫಾರಂ ನಂಬರ್ 17 ತುಂಬುವಾಗ ಪೋಷಕರು ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.ಒಂದು ಕ್ಷಣ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳೇ ಗಾಬರಿಯಾಗಿದ್ದಾರೆ.ಬಳಿಕ ಬಾಲಕಿಯರ ಬಾಲ ಮಂದಿರದಿಂದ ಬಾಲಕರ ಬಾಲ ಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.

ಇದನ್ನೂ ನೋಡಿ: ಕೊಪ್ಪಳ: ಬಸ್ಸಿಗಾಗಿ ನೂಕುನುಗ್ಗಲು, ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು

ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ

ಜನರನ್ನು ತಮ್ಮತ್ತ ಸೆಳೆದ ನಾಲ್ಕು ರೂಪಾಯಿ ಹಣ ಮಾಡಬೇಕು ಎನ್ನುವುದು ಅಲೆಮಾರಿ ಕುಟುಂಬದ ಕಾಯಕ. ಅದೇ ರೀತಿ ಕೊಪ್ಪಳದ ಗವಿ ಮಠದ ಜಾತ್ರೆಯಲ್ಲೂ ಹತ್ತು ವರ್ಷದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ ಮಾಡತಿದ್ರು,ಆದ್ರೆ ಯಾವಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ,ಆಗ ಆ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಯ್ತು.

ಬಾಲಕನ ರಕ್ಷಣೆ

ಸದ್ಯ ಮಕ್ಕಳ ರಕ್ಷಣಾ ಘಟಕದ ಆಧಿಕಾರಿಗಳು ಹತ್ತು ವರ್ಷದ ಮಗುವನ್ನ ರಕ್ಷಣೆ ಮಾಡಿದ್ದಾರೆ.ಮಕ್ಕಳ ಭವಿಷ್ಯ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಯಾರೂ ಕೂಡಾ ಮಕ್ಕಳನ್ನ ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲು ಅವಕಾಶ ವಿಲ್ಲ. ಅಲ್ಲದೇ ಸಂವಿಧಾನದ ಕಲಂ 1 ಎ ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿರೋದು ಸರ್ಕಾರದ ಕೆಲಸ. ಹೀಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮಗುವನ್ನ ರಕ್ಷಣೆ ಮಾಡಿದ್ದು, ಇದೀಗ ಆ ಮಗುವನ್ನ ಮೂಲ ಸ್ಥಳಕ್ಕೆ ಕಳಿಸುವುದಾಗಿ ಹೇಳುತ್ತಿದ್ದಾರೆ.

ಒಟ್ಟಾರೆ ಹೊಟ್ಟೆಪಾಡಿಗಾಗಿ ಕೊಪ್ಪಳಕ್ಕೆ ಬಂದ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.ಸಾಮಾಜಿಕ ಜಾಲತಾಣದಿಂದ ಆ ಕುಟುಂಬ ಇದೀಗ ಮಗುವನ್ನ ಬಿಟ್ಟಿರಬೇಕಾಯ್ತು,ಅಧಿಕಾರಿಗಳು ಕೂಡಾ ತಮ್ಮ ಕೆಲಸ ಮಾಡಿದ್ದಾರೆ.ಆದ್ರೆ ಒಂದು ವಿಡಿಯೋ ಏನೆಲ್ಲಾ ಸಮಸ್ಯೆ ಉಂಟು ಮಾಡತ್ತೆ ಎನ್ನುವುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗರ್ಭಿಣಿಯರಲ್ಲಿ ನೀರಿನ ಅಂಶ ಕಡಿಮೆಯಾದರೆ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ? – Kannada News | Pregnancy Hydration Tips for Winters

ಚಳಿಗಾಲದಲ್ಲಿ (Winters) ಸಾಮಾನ್ಯವಾಗಿ ಬಾಯಾರಿಕೆ ಕಡಿಮೆ ಇರುತ್ತದೆ, ಆದರೆ ಇದರರ್ಥ ಕಡಿಮೆ ನೀರು (Water) ಕುಡಿಯಬೇಕು ಎಂದಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಗರ್ಭಿಣಿಯರಿಗೆ (Pregnant Women) ಮುಖ್ಯವಾಗಿದೆ. ಏಕೆಂದರೆ ದೇಹದಲ್ಲಿ ನೀರಿನ ಕೊರತೆಯಿದ್ದರೆ, ಅದು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಅನೇಕ ಸಂದರ್ಭಗಳಲ್ಲಿ, ಇದು ಹೆರಿಗೆಯ ಸಮಯದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು ಅಥವಾ ಅಕಾಲಿಕ ಜನನಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಗರ್ಭಿಣಿಯರು ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು, ನೀರಿನ ಅಂಶ ಕಡಿಮೆಯಾದರೆ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ ತಿಳಿದುಕೊಳ್ಳಿ.

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಪ್ರಸೂತಿ ವಿಭಾಗದ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಗರ್ಭಿಣಿಯರು ಚಳಿಗಾಲದಲ್ಲಿಯೂ ಸಹ ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದಕ್ಕಿಂತ ಕಡಿಮೆ ಕುಡಿಯುವುದರಿಂದ ಮೂತ್ರನಾಳದ ಸೋಂಕು, ದೇಹದಲ್ಲಿ ಊತ ಮತ್ತು ಆಮ್ನಿಯೋಟಿಕ್ ದ್ರವದ ಪ್ರಮಾಣದಲ್ಲಿ ಇಳಿಕೆಯಾಗುವ ಅಪಾಯ ಹೆಚ್ಚಾಗುತ್ತದೆ. ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾದರೆ, ಅದು ಸಿಸೇರಿಯನ್ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.

ನೀರು ಕಡಿಮೆ ಕುಡಿಯುವುದರಿಂದ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ?

ಸಾಮಾನ್ಯವಾಗಿ ನೀರು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾಗುತ್ತದೆ. ಅದರ ಮಟ್ಟವು ಆರಂಭಿಕ ಹಂತದಲ್ಲಿ ಕಡಿಮೆಯಾದರೆ, ಅದು ಮಗುವಿನ ಕೈಗಳು, ಪಾದಗಳು ಅಥವಾ ಮುಖದ ಮೇಲೆ ಒತ್ತಡವನ್ನು ಉಂಟುಮಾಡಬಹುದು, ಇದು ಆಮ್ನಿಯೋಟಿಕ್ ಬ್ಯಾಂಡ್ ಸಿಂಡ್ರೋಮ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದಲ್ಲೂ ಮಹಿಳೆಯರು ನೀರು ಕುಡಿಯುವುದನ್ನು ಕಡಿಮೆ ಮಾಡಬಾರದು. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರನ್ನು ಕುಡಿಯುವುದು ಒಳ್ಳೆಯದು. ಜೊತೆಗೆ ನೀರಿನ ಕೊರತೆ ನೀಗಿಸಲು ಎಳನೀರು, ಸೂಪ್‌ ಗಳನ್ನು ಸೇವಿಸಬಹುದು ಆದರೆ ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ, ಏಕೆಂದರೆ ಇವುಗಳಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುತ್ತೀರಾ? ಹಾಗಿದ್ರೆ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ

ಚಳಿಗಾಲದಲ್ಲಿ ನೀರು ಕುಡಿಯಲು ಸಿಂಪಲ್ ಸಲಹೆಗಳು:

  • ಎದ್ದ ತಕ್ಷಣ 1 ಲೋಟ ನೀರು ಕುಡಿಯುವುದನ್ನು ಮರೆಯಬೇಡಿ.
  • ಸಾಮಾನ್ಯ ತಾಪಮಾನದಲ್ಲಿ ನೀರು ಕುಡಿಯಿರಿ.
  • ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬೇಡಿ.

ದೇಹ ನಿರ್ಜಲೀಕರಣಗೊಂಡಿರುವುದನ್ನು ಗುರುತಿಸುವುದು ಹೇಗೆ?

  • ಮೂತ್ರದ ಬಣ್ಣ ಹಳದಿ.
  • ತುಟಿಗಳು ಒಣಗಿರುತ್ತವೆ.
  • ದಣಿದ ಭಾವನೆ.
  • ನಿರಂತರ ತಲೆನೋವು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಕ್ಸಿಕ್: ದಕ್ಷಿಣದ ಹೀರೋಗಳ ಆರಾಧನೆ ಅಂತ್ಯ ಆಗಬಹುದು; ಆರ್​ಜಿವಿ ಭವಿಷ್ಯ – Kannada News | Ram Gopal Varma says Dhurandhar 2 and Toxic clash will answer many questions

2026ರ ಅತಿ ದೊಡ್ಡ ಕ್ಲ್ಯಾಶ್ ಎಂದರೆ ‘ಧುರಂಧರ್ 2’ (Dhurandhar 2) ವರ್ಸಸ್ ‘ಟಾಕ್ಸಿಕ್’ ಸಿನಿಮಾಗಳದ್ದು. ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಯಶ್ ನಟಿಸಿದ್ದರೆ, ‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಬೇರೆ ಬೇರೆ ಕಾರಣಗಳಿಂದ ಸಖತ್ ನಿರೀಕ್ಷೆ ಹುಟ್ಟುಹಾಕಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

‘ಧುರಂದರ್ 2’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ನಡುವೆ ಇರಬಹುದಾದ ವ್ಯತ್ಯಾಸವನ್ನು ರಾಮ್ ಗೋಪಾಲ್ ವರ್ಮಾ ಅವರು ಊಹಿಸಿದ್ದಾರೆ. ‘ಧುರಂದರ್ 2’ ನೈಜತೆಗೆ ಹತ್ತಿರವಾದ ಸಿನಿಮಾ. ಆದರೆ ‘ಟಾಕ್ಸಿಕ್’ ನೈಜತೆ ಇಲ್ಲದ ಸಿನಿಮಾ ಎಂದು ಅವರು ಹೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಹೇಗಿರಬಹುದು ಎಂಬ ಯಾವ ಅಂದಾಜು ಇಲ್ಲದೇ ರಾಮ್ ಗೋಪಾಲ್ ವರ್ಮಾ ಅವರು ಈಗಲೇ ಜಡ್ಜ್​ಮೆಂಟ್ ನೀಡಲು ಆರಂಭಿಸಿದ್ದಾರೆ.

‘ಟಾಕ್ಸಿಕ್ ಸಿನಿಮಾದ ಕಥಾನಾಯಕ ಹುಟ್ಟುತ್ತಲೇ ಬುಲೆಟ್​ಫ್ರೂಫ್. ಟಾಕ್ಸಿಕ್ ಜಗತ್ತು ಇರುವುದೇ ಹೀರೋನ ಆರಾಧಿಸಲು. ಆ ಸಿನಿಮಾ ಕಿರುಚಾಡುತ್ತದೆ. ಆದರೆ ಧುರಂಧರ್ 2 ಸಿನಿಮಾ ಮೌನದಲ್ಲೇ ಮಾತನಾಡುತ್ತದೆ. ಧುರಂಧರ್ ಕಥಾನಾಯಕ ಒಬ್ಬ ಮನುಷ್ಯ. ಅವರಿಗೆ ಇತಿಮಿತಿಗಳು ಇವೆ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದಾರೆ.

‘ಮಾರ್ಚ್ 19ರಂದು ಈ ಎರಡು ಸಿನಿಮಾಗಳ ನಡುವೆ ನಡೆಯುವ ಪೈಪೋಟಿಯು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಇದು ಬರೀ ಕ್ಲ್ಯಾಶ್ ಅಲ್ಲ. ಸತ್ಯ ಮತ್ತು ಸ್ಟೈಲಿಂಗ್ ನಡುವಿನ ಘರ್ಷಣೆ ಆಗಲಿದೆ. ಅದಕ್ಕಿಂತಲೂ ದೊಡ್ಡದು ಸಂಭವಿಸಬಹುದು. ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸ್ಟಾರ್​​ಗಳು ಶುರು ಮಾಡಿದ ಹೀರೋ ಆರಾಧನೆಗೆ ಅಂತ್ಯ ಹಾಡಲು ಇದು ನಾಂದಿ ಆಗಬಹುದು’ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ

‘ಧುರಂಧರ್’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಾಗಿ ಅದರ ಸೀಕ್ವೆಲ್ ಬಗ್ಗೆ ಪ್ರೇಕ್ಷಕರಿಗೆ ಸಖತ್ ನಿರೀಕ್ಷೆ ಇದೆ. ಅದೇ ರೀತಿ, ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಬಳಿಕ ನಟಿಸಿದ ಸಿನಿಮಾ ಆದ್ದರಿಂದ ‘ಟಾಕ್ಸಿಕ್’ ಕೂಡ ಬಹಳ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗೆ ಬಿಡುಗಡೆ ಆದ ಟೀಸರ್ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು – Kannada News | Case against Toxic movie actor Yash for Birthday banner in Bengaluru

ರಾಕಿಂಗ್ ಸ್ಟಾರ್ ಯಶ್ (Yash) ಅವರು ಜನವರಿ 8ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಗಾಲ್ಫ್​​ ಕ್ಲಬ್​ ರಸ್ತೆ ಬಳಿಯಿರುವ ​ಮನೆ ಎದುರು ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ಜಿಬಿಎ ಸಹಾಯಕ ಇಂಜಿನಿಯರ್​ ಪೂಜಾರಪ್ಪ ಅವರು ದೂರು ನೀಡಿದ್ದರು. ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿ ಕೇಸ್​ ಹಾಕಲಾಗಿದೆ. ಅದರ ಅನ್ವಯ ಕಾಯ್ದೆ 1951 ಮತ್ತು 1981ರಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಯಶ್​ ಹೆಸರು ಉಲ್ಲೇಖಿಸಿ ಜಿಎಸ್​ ಕ್ರಿಯೇಷನ್ಸ್​ ಮತ್ತು ವೇಣು ಗ್ರೂಪ್ಸ್​ ವಿರುದ್ಧ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯಶ್ ಅವರು ಈಗ ‘ಟಾಕ್ಸಿಕ್’ (Toxic) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮಾರ್ಚ್ 19ರಂದು ಆ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link