Category Archives: Blog

Your blog category

PBKS vs RCB IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Punjab Kings vs Royal Challengers Bengaluru IPL 2026 Live Cricket Score PBKS vs RCB Match on 17th May latest news in Kannada

ಐಪಿಎಲ್ 2026 ರ 61 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಕಳೆದ ಐಪಿಎಲ್ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ಈ ಎರಡೂ ತಂಡಗಳು ಆ ಪಂದ್ಯದ ನಂತರ ಇದೇ ಮೊದಲ ಬಾರಿಗೆ ಎದುರು ಬದುರಾಗಿವೆ. ಒಂದೆಡೆ ಆರ್​ಸಿಬಿ ಫೈನಲ್​ನಲ್ಲಿ ಸೋಲಿಸಿದಂತೆ ಈ ಪಂದ್ಯದಲ್ಲೂ ಸೋಲಿಸಿ ಪ್ಲೇಆಫ್‌ಗೆ ಟಿಕೆಟ್ ಖಚಿತಪಡಿಸುವ ಇರಾದೆಯಲ್ಲಿದ್ದರೆ, ಇತ್ತ ಪಂಜಾಬ್ ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಯತ್ನಿಸಲಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

Source link

ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ! – Kannada News | Foreign Illegal Immigrants Escape In Bengaluru

ಬೆಂಗಳೂರು, ಮೇ 17: ಬೆಂಗಳೂರಿನ ಕೊತ್ತನೂರಿನಲ್ಲಿರುವ ನಿರಾಶ್ರಿತರ ಕೇಂದ್ರವೊಂದರಿಂದ ನಾಲ್ವರು ವಿದೇಶಿ ಅಕ್ರಮ ವಲಸಿಗ ಮಹಿಳೆಯರು ಪರಾರಿಯಾಗಿದ್ದಾರೆ. ಮೇ 11ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೈಜೀರಿಯಾ ಮತ್ತು ಉಗಾಂಡ ಮೂಲದ ಈ ಮಹಿಳೆಯರು ಕಟ್ಟಡದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ತಪ್ಪಿಸಿಕೊಂಡಿದ್ದಾರೆ.

ತೋಪಿಷ್ಟ ನಗವ, ಸಫೀನ ಮತ್ತು ಪಿತಿನಾ ಎಂಬ ಮೂವರು ಸೇರಿದಂತೆ ಈ ನಾಲ್ವರು ಮಹಿಳೆಯರು ‘ಹೋಂ ಫಾರ್ ಹೋಪ್’ ನಿರಾಶ್ರಿತರ ಕೇಂದ್ರದಲ್ಲಿದ್ದರು. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಇವರು ಮಾದಕವಸ್ತು ಮಾರಾಟ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈಗಾಗಲೇ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಿಗಿ ಭದ್ರತೆಯ ನಡುವೆಯೂ ಇವರು ಪರಾರಿಯಾಗಿದ್ದು, ಬೆಂಗಳೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳು ಇಟ್ಟ ಹೆಸರೇ ಅಂತಿಮವಾಯ್ತೆ ಎನ್​​ಟಿಆರ್-ನೀಲ್ ಸಿನಿಮಾಕ್ಕೆ? – Kannada News | Jr NTR and Prashanth Neel movie officially named as Dragon

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಕೆಲಸಗಳು ಬಲು ನಿಧಾನಗತಿಯಲ್ಲಿ ಸಾಗುತ್ತಿವೆ. ಭಾರಿ ಬಜೆಟ್​ನ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ ಈಗಾಗಲೇ ಒಂದು ವರ್ಷವಾಗಿದ್ದು, ಸಿನಿಮಾದ ಚಿತ್ರೀಕರಣಕ್ಕೆ ಇನ್ನೂ ಒಂದು ವರ್ಷ ಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದ ಹೆಸರನ್ನು ಸಹ ಚಿತ್ರತಂಡ ಘೋಷಣೆ ಮಾಡಿಲ್ಲ, ಆದರೆ ಅಭಿಮಾನಿಗಳು ಈ ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಅಭಿಮಾನಿಗಳು ಇಟ್ಟ ಈ ಹೆಸರನ್ನೇ ಸಿನಿಮಾಕ್ಕೆ ಅಂತಿಮಗೊಳಿಸಲು ಚಿತ್ರತಂಡ ಯೋಜಿಸಿದಂತಿದೆ. ಇದರ ಸುಳಿವು ಸಹ ಅಭಿಮಾನಿಗಳಿಗೆ ಸಿಕ್ಕಿದೆ.

ಜೂ ಎನ್​​ಟಿಆರ್-ನೀಲ್ ಸಿನಿಮಾದ ಅಪ್​​ಡೇಟ್ ಒಂದು ನಟನ ಹುಟ್ಟುಹಬ್ಬದ ದಿನ ಬಿಡುಗಡೆ ಆಗಲಿದೆ. ಮೇ 20ರಂದು ಜೂ ಎನ್​​​ಟಿಆರ್ ಹುಟ್ಟುಹಬ್ಬವಿದ್ದು ಆ ದಿನದಂದು ಸಿನಿಮಾದ ಗ್ಲಿಂಪ್ಸ್ ಒಂದನ್ನು ಬಿಡುಗಡೆ ಮಾಡಲಿದೆ ಚಿತ್ರತಂಡ. ಇದಕ್ಕಾಗಿ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಅರ್ಜಿಯಲ್ಲಿ ಸಿನಿಮಾದ ಹೆಸರು ‘ಡ್ರ್ಯಾಗನ್’ ಎಂದು ನಮೂದಿಸಲಾಗಿದೆ.

ಇದನ್ನೂ ಓದಿ:ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್​ಟಿಆರ್-ಹೃತಿಕ್ ರೋಷನ್ ಜುಗಲ್​ಬಂಧಿ

ಸಿನಿಮಾದ ಟೀಸರ್ ಒಂದನ್ನು ಮೇ 20ರಂದು ಚಿತ್ರತಂಡ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಸಿನಿಮಾದ ಹೆಸರನ್ನು ‘ಡ್ರ್ಯಾಗನ್’ ಎಂದೇ ನಮೂದಿಸಿದ್ದು, ಇದು ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ಮೂಡಿಸಿದೆ. ಏಕೆಂದರೆ ಅಭಿಮಾನಿಗಳು ಇಟ್ಟ ಹೆಸರನ್ನೇ ಚಿತ್ರತಂಡ ತಮ್ಮ ಸಿನಿಮಾಕ್ಕೆ ಇರಿಸಿ, ಅಭಿಮಾನಿಗಳ ಮಾತಿಗೆ ಗೌರವ ನೀಡಿದೆ. ಇದರ ಜೊತೆಗೆ ಟೀಸರ್​​ನ ಅವಧಿ ಸಹ ಗಮನ ಸೆಳೆದಿದ್ದು, 4:35 ನಿಮಿಷದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲು ಮುಂದಾಗಿದೆ.

ಜೂ ಎನ್​​ಟಿಆರ್ ಮತ್ತು ನೀಲ್ ಅವರ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣ ಆಗುತ್ತಿದ್ದು, ಎರಡೂ ಭಾಗಗಳ ಚಿತ್ರೀಕರಣವನ್ನು ಏಕಕಾಲದಲ್ಲಿ ಮುಗಿಸುತ್ತಿದ್ದಾರೆ ನೀಲ್. ಅಂದಹಾಗೆ ಸಿನಿಮಾನಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೇ 20 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಎಸ್​ಎಸ್ ಸಿನಿಮಾ: ವಿವಾದದ ನಡುವೆಯೂ ರಾಷ್ಟ್ರಪತಿ ಭವನದಲ್ಲಿ ‘ಆಖ್ರಿ ಸವಾಲ್’ ಪ್ರದರ್ಶನ? – Kannada News | Sanjay Dutt starrer Aakhri Sawal Special Screening at Rashtrapati Bhavan amid controversy

ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್ ಅಭಿನಯದ ‘ಆಖ್ರಿ ಸವಾಲ್’ (Aakhri Sawal) ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದರ ನಡುವೆ ಈ ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಬೆಳವಣಿಗೆಯೊಂದು ಮುನ್ನಲೆಗೆ ಬಂದಿದೆ. ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿರುವ ಈ ಚಿತ್ರಕ್ಕೆ ಇಂದು (ಮೇ 17) ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಕಳೆದ ಕೆಲವು ದಿನಗಳಿಂದ ‘ಆಖ್ರಿ ಸವಾಲ್’ ಸಿನಿಮಾ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಷೇಧ ಹೇರಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ, ಭಾರತದಲ್ಲೂ ಚಿತ್ರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಹೀಗೆ ಚಿತ್ರದ ಸುತ್ತ ಸಾಲು ಸಾಲು ಕಾನೂನು ಸಂಕಷ್ಟ ಮತ್ತು ಸೆನ್ಸಾರ್‌ಶಿಪ್ ವಿವಾದಗಳು ಎದ್ದಿದ್ದರೂ, ಚಿತ್ರತಂಡ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.

ಮೂಲಗಳ ಪ್ರಕಾರ, ರಾಷ್ಟ್ರಪತಿ ಭವನದಲ್ಲಿ ಈ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲು ಕಳೆದ ಕೆಲವು ದಿನಗಳಿಂದ ರಹಸ್ಯವಾಗಿ ಸಿದ್ಧತೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಈ ಪ್ರದರ್ಶನದಲ್ಲಿ ಭಾಗವಹಿಸಲಿರುವ ಗಣ್ಯರ ಪಟ್ಟಿ ಮತ್ತು ಅತಿಥಿಗಳ ವಿವರಗಳನ್ನು ಸದ್ಯಕ್ಕೆ ಅತ್ಯಂತ ಗೌಪ್ಯವಾಗಿ ಇಡಲಾಗಿದೆ. ಆದಾಗ್ಯೂ, ರಾಷ್ಟ್ರಪತಿ ಭವನದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಒಂದು ಗಂಭೀರ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಸಂಜಯ್ ದತ್ ಜೊತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಸಿನಿಮಾದ ವಿವಾದಾತ್ಮಕ ಕಥಾವಸ್ತು ಹಾಗೂ ರಾಜಕೀಯ ಪ್ರೇರಿತ ಸಂಭಾಷಣೆಗಳೇ ಚಿತ್ರದ ಮೇಲಿನ ಕುತೂಹಲಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಚಿತ್ರರಂಗದ ವಿಶ್ಲೇಷಕರ ಪ್ರಕಾರ, ರಾಷ್ಟ್ರಪತಿ ಭವನದ ಪ್ರದರ್ಶನವು ಚಿತ್ರದ ಭವಿಷ್ಯಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಸಿನಿಮಾ ಟೀಸರ್; ಈ ಚಿತ್ರದಲ್ಲಿದೆ ವಿವಾದಿತ ಕಥೆ

ಒಂದೆಡೆ ಚಿತ್ರಕ್ಕೆ ವಿದೇಶದಲ್ಲಿ ನಿಷೇಧ ಹಾಗೂ ಸ್ವದೇಶದಲ್ಲಿ ಕಾನೂನು ಸಂಕಷ್ಟ ಎದುರಾಗಿದ್ದರೆ, ಮತ್ತೊಂದೆಡೆ ದೇಶದ ಪ್ರಮುಖ ವೇದಿಕೆಯಲ್ಲಿ ಹೈ-ಪ್ರೊಫೈಲ್ ಪ್ರದರ್ಶನ ಕಾಣುತ್ತಿರುವುದು ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸದ್ಯಕ್ಕೆ ಚಿತ್ರದ ನಿರ್ಮಾಪಕರು ಯುಎಇ ಬ್ಯಾನ್ ಮತ್ತು ಪಿಐಎಲ್ ವಿವಾದಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ‘ಆಖ್ರಿ ಸವಾಲ್’ ಕುರಿತ ಚರ್ಚೆಗಳು ಜೋರಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ – Kannada News | India’s big export markets, Singapore replaces UAE for second position

ನವದೆಹಲಿ, ಮೇ 17: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ (west asia conflict) ಭಾರತದ ವಿದೇಶಿ ವ್ಯಾಪಾರ ವಲಯದಲ್ಲಿ ಮಹತ್ವದ ಬದಲಾವಣೆಯಾಗಿದೆ. ಮಾಧ್ಯಮ ವರದಿಯ ಪ್ರಕಾರ, ಯುಎಇ (UAE) ದೇಶವನ್ನು ಹಿಂದಿಕ್ಕಿ ಸಿಂಗಾಪುರವು ಈಗ ಭಾರತದ ಎರಡನೇ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಯುದ್ಧದ ಪರಿಸ್ಥಿತಿ ಮತ್ತು ಮಾರ್ಚ್ ತಿಂಗಳಿನಿಂದ ಹಾರ್ಮುಜ್ ಜಲಸಂಧಿ (Strait of Hormuz) ಬಹುತೇಕ ಮುಚ್ಚಿರುವುದು ಜಾಗತಿಕ ಇಂಧನ ಮತ್ತು ಸರಕು ಸಾಗಣೆಗೆ ಭಾರಿ ಹೊಡೆತ ನೀಡಿದೆ. ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಕಿರಿದಾದ ಸಮುದ್ರ ಮಾರ್ಗವು ಜಾಗತಿಕ ತೈಲ ಸಾಗಣೆಯ ಐದನೇ ಒಂದು ಭಾಗವನ್ನು ನಿಯಂತ್ರಿಸುತ್ತದೆ. ಆದರೆ ಯುದ್ಧದ ಕಾರಣದಿಂದಾಗಿ ಈ ಮಾರ್ಗದ ಮೂಲಕ ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಬಿಕ್ಕಟ್ಟಿನಿಂದಾಗಿ ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ನಡೆಸಲು ತೊಂದರೆಯಾಗುತ್ತಿರುವುದರಿಂದ, ಭಾರತೀಯ ರಫ್ತುದಾರರು ಪರ್ಯಾಯ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ಇದರ ನೇರ ಪರಿಣಾಮವಾಗಿ ಭಾರತವು ಮುಕ್ತ ವ್ಯಾಪಾರ ಒಪ್ಪಂದ (FTA) ಹೊಂದಿರುವ ಎರಡು ಪ್ರಮುಖ ಸಾರಿಗೆ ಹಬ್‌ಗಳಾದ ಯುಎಇ ಮತ್ತು ಸಿಂಗಾಪುರ ನಡುವಿನ ವ್ಯಾಪಾರದ ಹರಿವಿನಲ್ಲಿ ಭಾರಿ ಪಲ್ಲಟವಾಗಿದೆ.

ಸಿಂಗಾಪುರಕ್ಕೆ ರಫ್ತು ಭಾರಿ ಏರಿಕೆ; ಯುಎಇಗೆ ರಫ್ತು ಕುಸಿತ

ಏಪ್ರಿಲ್ ತಿಂಗಳಿನಲ್ಲಿ ಭಾರತದಿಂದ ಸಿಂಗಾಪುರಕ್ಕೆ ನಡೆದ ರಫ್ತು ಪ್ರಮಾಣವು ಶೇಕಡಾ 180 ರಷ್ಟು ಭಾರಿ ಜಿಗಿತ ಕಂಡಿದ್ದು, 3.20 ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಕೇವಲ 1.14 ಬಿಲಿಯನ್ ಡಾಲರ್ ಆಗಿತ್ತು. ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಸಿಂಗಾಪುರದ ರಫ್ತು ಮಾರುಕಟ್ಟೆಯಲ್ಲಿ ಬರೋಬ್ಬರಿ ಐದು ಪಟ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?

ಮತ್ತೊಂದೆಡೆ, ಯುಎಇ ದೇಶಕ್ಕೆ ಆಗುತ್ತಿದ್ದ ಭಾರತದ ರಫ್ತು ಪ್ರಮಾಣವು ಶೇಕಡಾ 36 ರಷ್ಟು ಕುಸಿದಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 3.43 ಬಿಲಿಯನ್ ಡಾಲರ್ ಇದ್ದ ರಫ್ತು, ಈ ಬಾರಿ 2.18 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ.

ಇದೇ ವೇಳೆ, ಭಾರತದ ಅತಿ ದೊಡ್ಡ ರಫ್ತು ದೇಶವಾಗಿ ಅಮೆರಿಕ (USA) ಎಂದಿನಂತೆ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

ಆಮದು ಕ್ಷೇತ್ರದಲ್ಲೂ ಬದಲಾವಣೆ

ಸಾಂಪ್ರದಾಯಿಕ ಇಂಧನ ಪೂರೈಕೆ ಮಾರ್ಗಗಳು ಮುಚ್ಚಿ ಹೋಗಿರುವುದರಿಂದ ಭಾರತವು ಆಮದಿಗಾಗಿ ಬೇರೆ ಬೇರೆ ಮಾರುಕಟ್ಟೆಗಳನ್ನು ಶೋಧಿಸುತ್ತಿದೆ.

ಇಂಧನ ರಫ್ತು ಮಾಡುವ ದೇಶಗಳಾದ ಒಮಾನ್, ಪೆರು ಮತ್ತು ನೈಜೀರಿಯಾ ದೇಶಗಳು ಭಾರತದ ಟಾಪ್ 20 ಆಮದು ಮೂಲಗಳ ಪಟ್ಟಿಗೆ ಲಗ್ಗೆ ಇಟ್ಟಿವೆ. ಒಮಾನ್‌ನಿಂದ ಭಾರತಕ್ಕೆ ಆಗುವ ಆಮದು ಏಪ್ರಿಲ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, 1.48 ಬಿಲಿಯನ್ ಡಾಲರ್‌ಗೆ ತಲುಪಿದೆ.

ಕತಾರ್‌ನಿಂದ ಆಗುತ್ತಿದ್ದ ಆಮದು ಶೇಕಡಾ 47 ರಷ್ಟು ಕುಸಿದಿದ್ದರೆ, ಸೌದಿ ಅರೇಬಿಯಾದಿಂದ ಆಗುವ ಆಮದು ಏಪ್ರಿಲ್‌ನಲ್ಲಿ ಚೇತರಿಕೆ ಕಂಡು 3.85 ಬಿಲಿಯನ್ ಡಾಲರ್‌ಗೆ ತಲುಪಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು

ಭಾರತದ ಆರ್ಥಿಕತೆಯ ಮೇಲಿನ ಪ್ರಭಾವ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿವೆ. ಇದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿದೆ ಮತ್ತು ರಫ್ತು ವಲಯದಲ್ಲಿ ಅನಿಶ್ಚಿತತೆ ಮೂಡಿಸಿದೆ. ಇದರ ನೇರ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಫೆಬ್ರವರಿ ಕೊನೆಯಿಂದ ರೂಪಾಯಿ ಮೌಲ್ಯವು ಶೇಕಡಾ 5.2 ರಷ್ಟು ಕುಸಿದಿದೆ.

ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಇಂಧನ ಬಳಕೆಯನ್ನು ನಿಯಂತ್ರಿಸಲು ಭಾರತ ಸರ್ಕಾರವು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಚಿನ್ನ ಸೇರಿದಂತೆ ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ ಮತ್ತು ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ‘ಕುತ್ತು’ – Kannada News | Suryakumar Yadav’s T20I Captaincy Under Threat

ಭಾರತ ತಂಡಕ್ಕೆ ಟಿ20 ವಿಶ್ವಕಪ್ 2026ರ ಟ್ರೋಫಿ ತಂದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರ ಟಿ20 ಭವಿಷ್ಯ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ಅವರ ಇತ್ತೀಚಿನ ಕಳಪೆ ಬ್ಯಾಟಿಂಗ್ ಫಾರ್ಮ್, ಹೆಚ್ಚುತ್ತಿರುವ ವಯಸ್ಸು ಮತ್ತು ಪದೇ ಪದೇ ಕಾಡುತ್ತಿರುವ ಫಿಟ್‌ನೆಸ್ ಸಮಸ್ಯೆಗಳು ಬಿಸಿಸಿಐ ಆಯ್ಕೆ ಸಮಿತಿಯನ್ನು ತೀವ್ರ ಚಿಂತೆಗೆ ದೂಡಿವೆ. ಮುಂದಿನ 2028ರ ವಿಶ್ವಕಪ್ ದೃಷ್ಟಿಯಿಂದ ಟಿ20 ತಂಡಕ್ಕೆ ಹೊಸ ನಾಯಕನನ್ನು ಹುಡುಕಲು ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಮೇ 19ರ ಗುವಾಹಟಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಿದ್ದು, ಸೂರ್ಯಕುಮಾರ್ ಅವರ ಸ್ಥಾನಕ್ಕೆ ಕತ್ತರಿ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಅಂದರೆ ಮೇ 19 ರಂದು ನಡೆಯಲಿರುವ ಸಭೆಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್​ ಹಾಗೂ ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕನ ಕುರಿತಾದ ಚರ್ಚೆಗಳು ನಡೆಯಲಿದೆ. ಹೀಗಾಗಿ ಮುಂಬರುವ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಅಲ್ಲದೆ ಮುಂಬರುವ ಟಿ20 ಸರಣಿಯೊಂದಿಗೆ ಬಿಸಿಸಿಐ ಹೊಸ ನಾಯಕನನ್ನು ಪರಿಚಯಿಸಲಿದ್ದಾರೆ ಎಂದು ವರದಿಯಾಗಿದೆ.

ಸೂರ್ಯಕುಮಾರ್ ಬದಲಾವಣೆ ಯಾಕೆ?

  • ಕಳಪೆ ಬ್ಯಾಟಿಂಗ್ ಫಾರ್ಮ್: 2025 ರ 19 ಟಿ20 ಪಂದ್ಯಗಳಲ್ಲಿ ಕೇವಲ 13.62 ಸರಾಸರಿಯಲ್ಲಿ ರನ್ ಗಳಿಸಿದ್ದ ಸೂರ್ಯಕುಮಾರ್, ಪ್ರಸ್ತುತ ಐಪಿಎಲ್ 2026 ರಲ್ಲೂ ಮುಂಬೈ ಇಂಡಿಯನ್ಸ್ ಪರ 11 ಪಂದ್ಯಗಳಿಂದ ಕೇವಲ 195 ರನ್ (ಸರಾಸರಿ 17.00) ಗಳಿಸಿ ತೀವ್ರ ನಿರಾಶೆ ಮೂಡಿಸಿದ್ದಾರೆ.
  • ವಿಶ್ವಕಪ್‌ನಲ್ಲಿ ಸಾಧಾರಣ ಪ್ರದರ್ಶನ: ಭಾರತ ಅವರ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದರೂ, ಬ್ಯಾಟರ್ ಆಗಿ ಸೂರ್ಯಕುಮಾರ್ ವೈಫಲ್ಯ ಕಂಡಿದ್ದರು. 9 ಇನಿಂಗ್ಸ್‌ಗಳಿಂದ 136.72 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 242 ರನ್ ಗಳಿಸಿದ್ದರು. (ಇದರಲ್ಲಿ ಅಮೆರಿಕ ವಿರುದ್ಧದ ಒಂದೇ ಪಂದ್ಯದಲ್ಲಿ 84 ರನ್ ಸೇರಿತ್ತು).
  • ವಯಸ್ಸು ಮತ್ತು ಫಿಟ್‌ನೆಸ್ ಸಮಸ್ಯೆ: ಸೆಪ್ಟೆಂಬರ್ 2026 ಕ್ಕೆ ಅವರಿಗೆ 36 ವರ್ಷ ತುಂಬಲಿದ್ದು, 2028ರ ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಯುವ ಆಟಗಾರರಿಗೆ ಮಣೆ ಹಾಕಲು ಬಯಸಿದೆ. ಜೊತೆಗೆ, ಅವರ ಬಲಗೈ ಮಣಿಕಟ್ಟಿನ ಗಾಯದ ಸಮಸ್ಯೆ ಪದೇ ಪದೇ ಮರುಕಳಿಸುತ್ತಿದೆ.

ಇದನ್ನೂ ಓದಿ: RCB ಪಂದ್ಯಕ್ಕೆ 80,000 ರೂ: ಐಪಿಎಲ್ ಟಿಕೆಟ್ ದಂಧೆ ಬಯಲು!

ಯಾರಾಗಲಿದ್ದಾರೆ ಹೊಸ ನಾಯಕ?

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಈ ಕೆಳಗಿನ ಆಟಗಾರರನ್ನು ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿಟ್ಟಿದೆ. ಅವರೆಂದರೆ…

  •  ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ ಹೆಸರು ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದೆ.
  • ಸಂಜು ಸ್ಯಾಮ್ಸನ್: ಟಿ20 ವಿಶ್ವಕಪ್ 2026 ರಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದು ಭರ್ಜರಿ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಹೆಸರು ಕೂಡ ನಾಯಕತ್ವದ ರೇಸ್​ನಲ್ಲಿದೆ.
  • ಹಾರ್ದಿಕ್ ಪಾಂಡ್ಯ: ಹಿರಿಯ ಆಟಗಾರನಾಗಿ ನಾಯಕತ್ವ ವಹಿಸಿಕೊಳ್ಳಲು ಸದಾ ಸಿದ್ಧವಿರುವ ಅನುಭವಿ ಆಯ್ಕೆಯಾಗಿ ಹಾರ್ದಿಕ್ ಪಾಂಡ್ಯ ಹೆಸರು ಕೂಡ ಕೇಳಿ ಬರುತ್ತಿದೆ.
  • ಶುಭ್​ಮನ್ ಗಿಲ್: ಮೂರು ಸ್ವರೂಪಕ್ಕೂ ಏಕೈಕ ನಾಯಕನನ್ನು ಆಯ್ಕೆ ಮಾಡಲು ಮುಂದಾದರೆ ಕ್ಯಾಪ್ಟನ್ ಪಟ್ಟ ಶುಭ್​ಮನ್ ಗಿಲ್​ಗೆ ಒಲಿಯಲಿದೆ. ಏಕೆಂದರೆ ಅವರು ಈಗಾಗಲೇ ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Source link

Kashi Yatra: ಕಾಶಿಯಲ್ಲಿ 9 ರಾತ್ರಿಗಳು ಕಳೆದರೆ ಮೋಕ್ಷ ಸಿಗುತ್ತಾ? ಇದರ ಹಿಂದಿರುವ ಆಚರಣೆಗಳೇನು? – Kannada News | Kashi Yatra for Moksha: Spiritual Significance of 9 Nights in Varanasi

ಕಾಶಿಯಲ್ಲಿ 9 ರಾತ್ರಿಗಳು ಕಳೆದರೆ ಮೋಕ್ಷ ಸಿಗುತ್ತಾ? Image Credit source: Pinterest

ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ಭಕ್ತನ ಜೀವಿತಾವಧಿಯ ಅಂತಿಮ ಆಧ್ಯಾತ್ಮಿಕ ಗುರಿ ಎಂದರೆ ಅದು ‘ಕಾಶಿ ವಿಶ್ವನಾಥನ’ ದರ್ಶನ ಪಡೆಯುವುದು. ಪವಿತ್ರ ನಗರಿ ಕಾಶಿಗೆ ಭೇಟಿ ನೀಡಿ ಭಗವಂತನ ಪಾದಕ್ಕೆ ಶರಣಾದರೆ ಜನ್ಮ ಜನ್ಮಾಂತರಗಳ ಪಾಪಗಳು ಕರಗಿ, ಮೋಕ್ಷ ಸಿಗುತ್ತದೆ ಎಂಬುದು ಶತಶತಮಾನಗಳ ನಂಬಿಕೆ. ಅದಕ್ಕಾಗಿಯೇ ಕಾಶಿಯಲ್ಲಿ ಕಳೆಯುವ ಪ್ರತಿ ಕ್ಷಣವೂ ಅತ್ಯಂತ ಪವಿತ್ರ. ಅದರಲ್ಲೂ ವಿಶೇಷವಾಗಿ, ಶಾಸ್ತ್ರ ಸಂಪ್ರದಾಯಗಳ ಪ್ರಕಾರ “ಕಾಶಿಯಲ್ಲಿ 9 ರಾತ್ರಿಗಳ ಕಾಲ ತಂಗುವುದು” ಮನುಷ್ಯನನ್ನು ನೇರವಾಗಿ ಮೋಕ್ಷಕ್ಕೆ ಹತ್ತಿರ ಮಾಡುತ್ತದೆ ಎಂದು ಹೇಳಲಾಗುತ್ತದೆ. ಏನಿದು 9 ರಾತ್ರಿಗಳ ನಂಬಿಕೆ? ಇದರ ಹಿಂದಿರುವ ಆಚರಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾಶಿಯಲ್ಲಿ 9 ರಾತ್ರಿಗಳ ನಂಬಿಕೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯ:

ಮನುಷ್ಯನು ಈ ಭೂಮಿಯ ಮೇಲೆ ಜನ್ಮ ತಳೆಯುವ ಮುನ್ನ ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳುಗಳ ಕಾಲ ಕಳೆಯುತ್ತಾನೆ. ಅದೇ ರೀತಿ, ಕಾಶಿಯು ಜನ್ಮ-ಮರಣಗಳ ಚಕ್ರದಿಂದ ಮುಕ್ತಿ ನೀಡಿ, ಆತ್ಮವನ್ನು ಪರಮಾತ್ಮನಲ್ಲಿ ಲೀನವಾಗಿಸುವ ಜನ್ಮರಹಿತ ಸ್ಥಿತಿಯ ಪವಿತ್ರ ಮಾರ್ಗವಾಗಿದೆ. ಪುರಾಣಗಳ ಪ್ರಕಾರ, ವ್ಯಾಸ ಮಹರ್ಷಿಗಳು ಹಿಂದೆ ಕಾಶಿಯಲ್ಲಿ ಒಂಬತ್ತು ತಿಂಗಳುಗಳ ಕಾಲ ಕಠಿಣ ಸಾಧನೆ ಮಾಡಲು ಸೂಚಿಸಿದ್ದರು. ಆದರೆ, ಕಲಿಯುಗದ ಮಾನವನಿಗೆ ಅಷ್ಟು ದೀರ್ಘಾವಧಿ ಸಾಧ್ಯವಾಗದ ಕಾರಣ, ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳು ಅದನ್ನು ‘ಒಂಬತ್ತು ರಾತ್ರಿಗಳಿಗೆ’ ಸೀಮಿತಗೊಳಿಸಿದವು. ಈ 9 ರಾತ್ರಿಗಳ ಸಾಧನೆಯು ತಾಯಿಯ ಒಂಬತ್ತು ತಿಂಗಳ ಗರ್ಭವಾಸದಷ್ಟೇ ಪವಿತ್ರವಾದದ್ದು ಎಂದು ನಂಬಲಾಗಿದೆ.

ಕಾಶಿ ವಾಸದ ಪ್ರಮುಖ ನಿಯಮಗಳು:

ಕಾಶಿಯಲ್ಲಿ ತಂಗುವ 9 ದಿನಗಳ ಅವಧಿಯಲ್ಲಿ ಭಕ್ತರು ಕಟ್ಟುನಿಟ್ಟಾದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ:

  • ನಿರಂತರ ಶಿವಸ್ಮರಣೆ: ಸದಾ ಕಾಲ ಕಾಶಿ ವಿಶ್ವನಾಥನ ಧ್ಯಾನದಲ್ಲಿ ತೊಡಗಿರಬೇಕು.
  • ದಿನಕ್ಕೆ ಒಂದೇ ಊಟ: ಇಂದ್ರಿಯ ನಿಗ್ರಹಕ್ಕಾಗಿ ದಿನದಲ್ಲಿ ಕೇವಲ ಒಂದು ಬಾರಿ ಮಾತ್ರ ಸಾತ್ವಿಕ ಆಹಾರ ಸೇವಿಸಬೇಕು.
  • ತ್ರಿಕಾಲ ಸ್ನಾನ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಬೇಕು.
  • ದಾನ ಧರ್ಮ: ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದು ಮತ್ತು ಬಡವರಿಗೆ, ಸಾಧುಗಳಿಗೆ ದಾನ ಮಾಡುವುದು ಕಡ್ಡಾಯ.
  • ದುರ್ಗುಣಗಳ ತ್ಯಾಗ: ಕೋಪ, ಅಹಂಕಾರ ಮತ್ತು ಸುಳ್ಳು ಹೇಳುವಂತಹ ನಕಾರಾತ್ಮಕ ಗುಣಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.

9 ದಿನಗಳ ಕಾಶಿ ಮಹಾಯಾತ್ರೆಯ ದೈನಂದಿನ ವಿಧಿವಿಧಾನಗಳು:

ಮೊದಲ ದಿನ: ಸಂಕಲ್ಪ ಮತ್ತು ಶುದ್ಧೀಕರಣ

ಯಾತ್ರೆಯು ಪವಿತ್ರ ‘ಮಣಿಕರ್ಣಿಕಾ ಘಾಟ್‌’ನಲ್ಲಿ ಗಂಗಾ ಸ್ನಾನದೊಂದಿಗೆ ಆರಂಭವಾಗುತ್ತದೆ. ಇಲ್ಲಿ ಪೂರ್ವಜರಿಗೆ ತರ್ಪಣ ಮತ್ತು ನೈವೇದ್ಯಗಳನ್ನು ಅರ್ಪಿಸಿ ಆತ್ಮಶುದ್ಧಿ ಮಾಡಿಕೊಳ್ಳಲಾಗುತ್ತದೆ. ಬಳಿಕ ದುಂಡಿ ವಿನಾಯಕ, ವಿಶಾಲಾಕ್ಷಿ ದೇವಿ ಮತ್ತು ಸಾಕ್ಷಿ ಗಣಪತಿಯ ದರ್ಶನ ಪಡೆದು, ರಾತ್ರಿ ಉಪವಾಸದೊಂದಿಗೆ ಶಿವನಾಮ ಸ್ಮರಣೆ ಮಾಡಲಾಗುತ್ತದೆ.

ಎರಡನೇ ದಿನ: ಅನ್ನಪೂರ್ಣೇಶ್ವರಿ ದರ್ಶನ

ಗಂಗಾ ಸ್ನಾನದ ನಂತರ ವಿಶ್ವನಾಥ ಹಾಗೂ ಕಾಶಿಯ ಅನ್ನದಾತೆಯಾದ ಅನ್ನಪೂರ್ಣ ದೇವಿಯ ದರ್ಶನ ಪಡೆಯಲಾಗುತ್ತದೆ. ಈ ದಿನ ಗಾಯತ್ರಿ ಮಂತ್ರ ಹಾಗೂ ಶಿವ ಪಂಚಾಕ್ಷರಿ ಮಂತ್ರಗಳ ಜಪಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

ಮೂರನೇ ದಿನ: ಘಾಟ್‌ಗಳ ಪ್ರದಕ್ಷಿಣೆ

ಕಾಶಿಯ ಪ್ರಸಿದ್ಧ ಘಾಟ್‌ಗಳಾದ ಅಸಿ ಘಾಟ್, ದಶಾಶ್ವಮೇಧ ಘಾಟ್ ಮತ್ತು ವರುಣಾ ನದಿಯ ದಂಡೆಯ ದೇವಾಲಯಗಳಿಗೆ ಭೇಟಿ ನೀಡಿ ಶಿವಲಿಂಗಗಳ ಪೂಜೆ ಮಾಡಲಾಗುತ್ತದೆ. ಇದು ಕಾಶಿಯ ಪವಿತ್ರ ಕ್ಷೇತ್ರವನ್ನು ಪ್ರದಕ್ಷಿಣೆ ಮಾಡಿದ ಪುಣ್ಯವನ್ನು ನೀಡುತ್ತದೆ.

ನಾಲ್ಕನೇ ದಿನ: ಕಾಲಭೈರವನ ರಕ್ಷಣೆ

ವಿಶ್ವನಾಥ ಮತ್ತು ದುಂಡಿ ವಿನಾಯಕನ ಜೊತೆಗೆ ಕಾಶಿಯ ಕೋತ್ವಾಲ (ರಕ್ಷಕ) ಎಂದೇ ಕರೆಯಲ್ಪಡುವ ಕಾಲಭೈರವನ ದರ್ಶನ ಪಡೆಯುವುದು ಈ ದಿನದ ವಿಶೇಷ. ಕಾಲಭೈರವನ ದರ್ಶನದಿಂದ ತೀರ್ಥಯಾತ್ರೆಗೆ ಯಾವುದೇ ವಿಘ್ನ ಬರದಂತೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ.

ಐದನೇ ದಿನ: ಕಠಿಣ ‘ಪಂಚಕ್ರೋಶ ಯಾತ್ರೆ’ಯ ಆರಂಭ

ಇಂದಿನಿಂದ ಕಾಶಿಯ ಅತ್ಯಂತ ಪವಿತ್ರವಾದ ಸುಮಾರು 80 ಕಿಲೋಮೀಟರ್‌ಗಳ ‘ಪಂಚಕ್ರೋಶ ಯಾತ್ರೆ’ ಆರಂಭವಾಗುತ್ತದೆ. ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು, ದಾರಿಯುದ್ದಕ್ಕೂ ಸಿಗುವ ಶಿವಲಿಂಗಗಳನ್ನು ದರ್ಶಿಸುತ್ತಾ, ನಿಗದಿಪಡಿಸಿದ ಗ್ರಾಮಗಳಲ್ಲಿ ರಾತ್ರಿ ತಂಗುತ್ತಾರೆ.

ಆರನೇ ದಿನ: ಮೌನ ವ್ರತ

ಪಂಚಕ್ರೋಶ ಯಾತ್ರೆ ಮುಂದುವರಿಯಲಿದ್ದು, ಭಕ್ತರು ದಾರಿಯ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಮನಸ್ಸನ್ನು ಭಗವಂತನ ಕಡೆಗೆ ಕೇಂದ್ರೀಕರಿಸಲು ಈ ದಿನದ ಪ್ರಯಾಣವನ್ನು ಸಂಪೂರ್ಣ ‘ಮೌನ’ವಾಗಿ ಕಳೆಯಲಾಗುತ್ತದೆ.

ಏಳನೇ ದಿನ: ತಪಸ್ಸು ಮತ್ತು ಧ್ಯಾನ

ಧ್ಯಾನ ಮತ್ತು ಭಕ್ತಿಗೆ ಈ ದಿನ ಮೀಸಲು. ಪವಿತ್ರ ವೃಕ್ಷಗಳ ನೆರಳಿನಲ್ಲಿ ಕುಳಿತು ಶಿವನನ್ನು ಧ್ಯಾನಿಸುವುದು ಮತ್ತು ದಾರಿಯಲ್ಲಿ ಸಿಗುವ ಜನರಿಗೆ ದಾನ ಧರ್ಮಗಳನ್ನು ಮಾಡುವುದು ವಿಶೇಷ ಫಲ ನೀಡುತ್ತದೆ.

ಎಂಟನೇ ದಿನ: ಮಹಾಯಾತ್ರೆಯ ಮುಕ್ತಾಯ

ಪಂಚಕ್ರೋಶ ಯಾತ್ರೆಯನ್ನು ಮುಗಿಸಿ ಭಕ್ತರು ಪುನಃ ಮಣಿಕರ್ಣಿಕಾ ಘಾಟ್‌ಗೆ ಹಿಂತಿರುಗುತ್ತಾರೆ. ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿ ಅಂತಿಮ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಒಂಬತ್ತನೇ ದಿನ: ವಿದಾಯ ಮತ್ತು ಆಶೀರ್ವಾದ

ಇದು ಯಾತ್ರೆಯ ಕೊನೆಯ ದಿನ. ವಿಶ್ವನಾಥನಿಗೆ ಮಹಾ ಅಭಿಷೇಕ, ಬಿಲ್ವಾರ್ಚನೆ ನೆರವೇರಿಸಿ, ಅನ್ನಪೂರ್ಣ ದೇವಿಯ ಸನ್ನಿಧಿಯಲ್ಲಿ ದಾನವನ್ನು ಸ್ವೀಕರಿಸಿ ಹಾಗೂ ಅರ್ಪಿಸಿ ಕೃತಾರ್ಥರಾಗುತ್ತಾರೆ. ಕೊನೆಯದಾಗಿ ಕಾಲಭೈರವನ ಬಳಿ ಕಾಶಿಯಿಂದ ಹೊರಡಲು ಅನುಮತಿ (ಆಜ್ಞೆ) ಪಡೆದು ಯಾತ್ರೆಯನ್ನು ಮುಕ್ತಾಯಗೊಳಿಸುತ್ತಾರೆ.

ಜೀವಂತವಾಗಿರುವಾಗಲೇ ಮುಕ್ತಿ!

“ಕಾಶ್ಯಾಂ ಮರಣಾತ್ ಮುಕ್ತಿಃ” ಅಂದರೆ ಕಾಶಿಯಲ್ಲಿ ಪ್ರಾಣ ಬಿಟ್ಟರೆ ಮುಕ್ತಿ ಸಿಗುತ್ತದೆ ಎಂಬುದು ಶಾಸ್ತ್ರೋಕ್ತ ಮಾತು. ಆದರೆ, ಬದುಕಿರುವಾಗಲೇ ಮೋಕ್ಷದ ಆನಂದವನ್ನು ಅನುಭವಿಸಬೇಕಾದರೆ ಈ 9 ದಿನಗಳ ಕಠಿಣ ನಿಯಮಬದ್ಧ ಕಾಶೀವಾಸವನ್ನು ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಇದು ಮನುಷ್ಯನ ಅಹಂಕಾರವನ್ನು ಅಳಿಸಿ ಆಧ್ಯಾತ್ಮಿಕ ಜಾಗೃತಿ ಉಂಟುಮಾಡುತ್ತದೆ.

ಮನೆಗೆ ಮರಳಿದ ನಂತರ ಮಾಡಬೇಕಾದ ಅಂತಿಮ ಪೂಜೆ:

ಕಾಶಿ ಯಾತ್ರೆ ಮುಗಿಸಿ ಮನೆಗೆ ಮರಳಿದ ನಂತರ, ಒಂದು ಶುಭ ಮುಹೂರ್ತದಲ್ಲಿ ಕಾಶಿಯಿಂದ ತಂದ ಪವಿತ್ರ ಗಂಗಾಜಲ, ವಿಭೂತಿ ಮತ್ತು ಪ್ರಸಾದದ ಅಕ್ಕಿಯನ್ನು (ಅಕ್ಷತೆ) ಇಟ್ಟು ವಿಶೇಷ ಪೂಜೆ ನೆರವೇರಿಸಬೇಕು. ಹೀಗೆ ಮಾಡಿದಾಗ ಮಾತ್ರ ಕಾಶಿ ಮಹಾಯಾತ್ರೆಯು ಸಂಪೂರ್ಣ ಫಲವನ್ನು ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:36 pm, Sun, 17 May 26

Source link

RCB ವಿರುದ್ಧದ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಖಡಕ್ ಸಂದೇಶ! – Kannada News | Shreyas Iyer Sends Strong Message to RCB Ahead of Clash!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಪ್ಲೇಆಫ್ ರೇಸ್ ರೋಚಕ ಹಂತ ತಲುಪಿದೆ. ಇಂದು ನಡೆಯಲಿರುವ ಐಪಿಎಲ್​ನ 61ನೇ ಪಂದ್ಯದಲ್ಲಿ ಎರಡು ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ. ಅಂದರೆ ಇಂದಿನ ಮ್ಯಾಚ್​ನಲ್ಲಿ ಆರ್​ಸಿಬಿ ಗೆದ್ದರೆ 18 ಅಂಕಗಳೊಂದಿಗೆ ಪ್ಲೇಆಫ್​ಗೇರುವುದು ಖಚಿತ. ಮತ್ತೊಂದೆಡೆ ಪ್ಲೇಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಪಂಜಾಬ್ ಕಿಂಗ್ಸ್ (PBKS) ಆರ್​ಸಿಬಿ ವಿರುದ್ಧ ಗೆಲ್ಲಲೇಬೇಕು. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶ್ರೇಯಸ್ ಅಯ್ಯರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ನೇರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಸತತ ಐದು ಪಂದ್ಯಗಳ ಸೋಲಿನ ಆಘಾತದಲ್ಲಿದ್ದರೂ, ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯಕ್ಕೆ ತಮ್ಮ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

“ನಾವು ಆರ್‌ಸಿಬಿ ವಿರುದ್ಧ ಆಡಲು ಇನ್ನು ಕಾಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಿದ್ಧವಾಗಿಯೇ ಕಣಕ್ಕಿಳಿಯಲಿದ್ದೇವೆ. ಈ ಮ್ಯಾಚ್​ನಲ್ಲಿ ಗೆಲ್ಲಲೇಬೇಕು, ಗೆಲ್ಲುತ್ತೇವೆ” ಎಂದು ಹೇಳುವ ಮೂಲಕ ಶ್ರೇಯಸ್ ಅಯ್ಯರ್ ಪ್ಲೇಆಫ್ ಪ್ರವೇಶಿಸುವ ಅದಮ್ಯ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಅಝ್ಮತುಲ್ಲಾ ಒಮರ್ಜಾಯ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 200 ಪ್ಲಸ್ ರನ್ ಗಳಿಸಿದರೂ, ಬೌಲಿಂಗ್ ವೈಫಲ್ಯದಿಂದಾಗಿ ಮುಂಬೈ ಇಂಡಿಯನ್ಸ್​ ಎದುರು ಸೋಲೊಪ್ಪಿಕೊಂಡಿತು. ಈ ಸೋಲನ್ನು ಅರಗಿಸಿಕೊಳ್ಳುವುದು “ತುಂಬಾ ಕಷ್ಟ” ಎಂದು ಒಪ್ಪಿಕೊಂಡ ಶ್ರೇಯಸ್ ಅಯ್ಯರ್, ತಂಡದ ಮೇಲೆ ಒತ್ತಡ ಇರುವುದು ನಿಜ ಆದರೆ ಒತ್ತಡದ ಸಂದರ್ಭದಲ್ಲೇ ಶ್ರೇಷ್ಠ ಪ್ರದರ್ಶನ ಹೊರಬರಲಿದೆ ಎಂದಿದ್ದಾರೆ.

ಸದ್ಯ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 12 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿ 4ನೇ ಸ್ಥಾನದಲ್ಲಿದೆ. ಆದರೆ ಸತತ 5 ಸೋಲುಗಳು ತಂಡದ ಆತ್ಮವಿಶ್ವಾಸಕ್ಕೆ ಧಕ್ಕೆ ತಂದಿವೆ.  ಪ್ರಸ್ತುತ ಸನ್ನಿವೇಶದಲ್ಲಿ ಪಂಜಾಬ್ ಕಿಂಗ್ಸ್​ ತಂಡ ನೇರವಾಗಿ ಪ್ಲೇಆಫ್ ತಲುಪಬೇಕಾದರೆ, ಮುಂದಿನ ಎರಡು ಪಂದ್ಯಗಳಲ್ಲಿ (RCB ಮತ್ತು LSG ವಿರುದ್ಧ) ಕಡ್ಡಾಯವಾಗಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ!

ಮತ್ತೊಂದೆಡೆ, ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಪಂದ್ಯಗಳಿಂದ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ಅರ್ಹತೆ ಪಡೆಯಲು ಆರ್‌ಸಿಬಿಗೆ ಕೇವಲ ಒಂದು ಜಯದ ಅಗತ್ಯವಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.


ಸದ್ಯ ಶ್ರೇಯಸ್ ಅಯ್ಯರ್ ಅವರ ಈ ಆಕ್ರಮಣಕಾರಿ ಸಂದೇಶವು ಪಂಜಾಬ್ ತಂಡದಲ್ಲಿ ಇನ್ನೂ ಹೋರಾಟದ ಕಿಚ್ಚು ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಫಾರ್ಮ್‌ನಲ್ಲಿರುವ ಆರ್‌ಸಿಬಿಯನ್ನು ಧರ್ಮಶಾಲಾದಲ್ಲಿ ಮಣಿಸುವುದು ಪಂಜಾಬ್‌ ಕಿಂಗ್ಸ್ ತಂಡಕ್ಕೆ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಈ ಇಂದಿನ ಮ್ಯಾಚ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.

Published On – 1:38 pm, Sun, 17 May 26

Source link

ಜೆಜೆನಗರ ಪಿಎಸ್​ಐ ಪದ್ಮನಾಭ್ ಮೇಲೆ ಹಲ್ಲೆ ಆರೋಪ! – Kannada News | JJ Nagar PSI Accused of Assault in Domestic Dispute Case

ಬೆಂಗಳೂರು, ಮೇ 17: ಜೆಜೆನಗರ ಪೊಲೀಸ್ ಠಾಣೆಯ ಪಿಎಸ್‌ಐ ಪದ್ಮನಾಭ್ ವಿರುದ್ಧ ಕೌಟುಂಬಿಕ ವಿವಾದದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಬರ್ಕತ್ ಪಾಷಾ ಎಂಬುವವರನ್ನು ಪಿಎಸ್‌ಐ ಪದ್ಮನಾಭ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಸುಕುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಜೆಜೆನಗರ ಠಾಣಾ ವ್ಯಾಪ್ತಿಯ ಪಾದರಾಯನಪುರದಲ್ಲಿ ನಡೆದಿದೆ. ಪತಿ-ಪತ್ನಿ ನಡುವೆ ಕೆಲಸಕ್ಕೆ ಹೋಗುವ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. ಸೀಮಂತದ ನಂತರ ಪತ್ನಿ ತವರಿಗೆ ಹೋದಾಗ, ಆಕೆಯನ್ನು ಕರೆತರಲು ಹೋದಾಗ ಗಲಾಟೆ ನಡೆದಿದೆ. ಈ ಘಟನೆಯು ಪೊಲೀಸ್ ಅಧಿಕಾರಿಯೊಬ್ಬರ ದುರ್ನಡತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರನ ದರ್ಶನಕ್ಕೆ ಜನವೋ ಜನ! – Kannada News | Devotee Surge at Male Mahadeshwara Hill for Shani Amavasya and Weekend

ಚಾಮರಾಜನಗರ, ಮೇ 17: ಶನಿ ಅಮಾವಾಸ್ಯೆ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಹರಿದುಬಂದಿದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಮಾದಪ್ಪನ ದರ್ಶನ ಪಡೆದು ವಿಶೇಷ ಸೇವೆಗಳನ್ನು ಸಲ್ಲಿಸಿದ್ದಾರೆ. ನಿನ್ನೆಯಿಂದಲೂ ಮಾದಪ್ಪನ ಭಕ್ತ ಸಮೂಹವು ಬೆಟ್ಟದ ಕಡೆಗೆ ಬರುತ್ತಿದ್ದು, ದೇವಾಲಯದ ಆವರಣ ಭಕ್ತರಿಂದ ತುಂಬಿಹೋಗಿದೆ. ಭಕ್ತರು ತಮ್ಮ ಭಕ್ತಿ ಸಮರ್ಪಿಸಲು ಚಿನ್ನದ ರಥ, ಬೆಳ್ಳಿ ರಥ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಬಸವ ರಥ ಸೇರಿದಂತೆ ಹಲವು ವಿಭಿನ್ನ ಸೇವೆಗಳನ್ನು ಮಾದಪ್ಪನಿಗೆ ಅರ್ಪಿಸಿದ್ದಾರೆ. ಈ ವಿಶೇಷ ಸೇವೆಗಳ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link