Category Archives: Blog

Your blog category

ಖತರ್ನಾಕ್​​ ಡ್ರಗ್​​ ಜಾಲ ಭೇದಿಸಿದ ಮಂಗಳೂರು ಸಿಸಿಬಿ: ಮಹಿಳೆ ಅರೆಸ್ಟ್​, 4 ಕೋಟಿ ಮೌಲ್ಯದ MDMA ಸೀಜ್​ – Kannada News | Mangaluru CCB Busts Drug Racket, Arrests Ugandan Woman in Bengaluru; Seizes 4 Crore Worth of MDMA

ಮಂಗಳೂರು, ಜನವರಿ 13: ಆರು​ ಪೆಡ್ಲರ್​ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಜಿಗಣಿ ಬಳಿ ಉಗಾಂಡದ ಮಹಿಳೆ ಜಲಿಯಾ ಝಲ್ವಾಂಗೋ ಅರೆಸ್ಟ್​​ ಮಾಡಲಾಗಿದ್ದು, ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMAಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಕುಂದಾಪುರದ ಮೊಹಮ್ಮದ್ ಶಿಯಾಬ್ ಅಲಿಯಾಸ್​​ ಶಿಯಾಬ್, ಉಳ್ಳಾಲ ಕಳ್ಳರ ಕೋಡಿ ನಿವಾಸಿ ಮೊಹಮ್ಮದ್ ನೌಷದ್ , ಬೆಂಗ್ರೆ ನಿವಾಸಿ ಇಮ್ರಾನ್ ಅಲಿಯಾಸ್​​ ಇಂಬ, ಬಂಟ್ವಾಳದ ನಿಸಾರ್ ಅಹಮ್ಮದ್, ಕಾಪು ನಿವಾಸಿ ಮೊಹಮ್ಮದ್ ಇಕ್ಬಾಲ್ ಮತ್ತು ಪಡುಬಿದ್ರೆ ನಿವಾಸಿ ಶೆಹರಾಜ್ ಶಾರೂಕ್ ಎಂಬ ಡ್ರಗ್ ಪೆಡ್ಲರ್​​ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಜಲಿಯಾಳಿಂದ ಡ್ರಗ್ಸ್ ಪಡೆದು ಮಂಗಳೂರಲ್ಲಿ ಮಾರುತ್ತಿದ್ದ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಲ್ಲಿ ಸಿಸಿಬಿ ರೇಡ್​ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಡ್ರಗ್ಸ್​​ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?; 55.88 ಕೋಟಿ ರೂ. ಮೌಲ್ಯದ MDMA ಸೀಜ್​​

ಉಗಾಂಡದ ಜಲಿಯಾ ಯಾರಿಗೂ ಅನುಮಾನ ಬಾರದಂತೆ ಎಂಡಿಎಂ ಸಾಗಾಟಕ್ಕೆ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಳು. ಮಾಲ್‌ಗಳು ಅಥವಾ ಟೆಕ್ಸ್‌ ಟೈಲ್​​ಗಳಿಂದ ಪುರುಷರ ಹೊಸ ಶರ್ಟ್​ಗಳನ್ನು ಖರೀದಿಸಿ ಅದನ್ನು ಮೆಲ್ಲಗೆ ಬಿಡಿಸಿ ಅದರೊಳಗೆ ಅಂದಾಜು 300 ಗ್ರಾಂ ಎಂಡಿಎಂಎ ಪ್ಯಾಕ್ ಇಟ್ಟು ಸೂಟ್ ಕೇಸ್​​ನಲ್ಲಿ ತುಂಬುತ್ತಿದ್ದಳು. ಮೇಲ್ನೋಟಕ್ಕೆ ಇದು ಅಂದವಾಗಿ ಶರ್ಟ್ ಜೋಡಿಸಿಟ್ಟ ಸೂಟ್ ಕೇಸ್​​ನಂತೆ ಕಾಣುತ್ತಿತ್ತು. ಶರ್ಟ್ ಬಿಡಿಸಿ ನೋಡಿದರೆ ಆದರೊಳಗೆ ಎಂಡಿಎಂ ಪ್ಯಾಕೇಟ್​​ಗಳು ಇರುತ್ತಿದ್ದವು. ಇನ್ನು ಜಲಿಯಾ ಉಗಾಂಡದಿಂದ ಬಂದು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದಳು ಎಂಬ ವಿಚಾರವೂ ಬಯಲಾಗಿದೆ. ಆ ಮೂಲಕ ಮಂಗಳೂರಿಗೆ ಸರಬರಾಜಾಗುತ್ತಿದ್ದ ಡ್ರಗ್ಸ್​​ ಜಾಲದ ಒಂದು ಪ್ರಮುಖ ಕೊಂಡಿ ಕಳಚಿದೆ. ಅದರೆ ಇಂತಹ ನುರಾರು ಮಂದಿ ಇರುವ ಅನುಮಾನವಿದ್ದು, ಅವರ ಪತ್ತೆಯನ್ನೂ ಶೀಘ್ರಮಾಡಿ ತಕ್ಕ ಶಾಸ್ತಿ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:34 pm, Tue, 13 January 26

Source link

ಗಿಲ್ಲಿ ನೆರಳಲ್ಲೇ ಕಾವ್ಯಾ ಇದ್ದಾರಾ? ಎಲಿಮಿನೇಟ್ ಆದ ರಾಶಿಕಾ ಶೆಟ್ಟಿ ಹೇಳಿದ್ದಿಷ್ಟು.. – Kannada News | Bigg Boss Kannada 12 Rashika Shetty talks about Kavya Shaiva and Gilli Nata after Elimination

‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಕೊನೇ ವಾರದ ತನಕ ಪೈಪೋಟಿ ನೀಡಿದರು. ಆದರೆ ಫಿನಾಲೆ ವಾರಕ್ಕೆ ಕಾಲಿಡಲು ಅವರಿಗೆ ಸಾಧ್ಯವಾಗಲೇ ಇಲ್ಲ. ಧನುಷ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ಕಾವ್ಯಾ ಶೈವ (Kavya Shaiva), ಧ್ರುವಂತ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಮೊದಲಿನಿಂದಲೂ ಜಂಟಿಯಾಗಿಯೇ ಇರುವ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರ ಆಟದ ಬಗ್ಗೆ ರಾಶಿಕಾ ಶೆಟ್ಟಿ (Rashika Shetty) ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ನಾವು ಜಂಟಿಯಾಗಿ ಇದ್ದಾಗ ಯಾವಾಗಲೂ ಜೊತೆಯಲ್ಲೇ ಇರಬೇಕಾಗುತ್ತದೆ. ನಾನು ಮಂಜು ಅಕ್ಕನ ಜೊತೆ ಇದ್ದಾಗ ಹಾಗೆಯೇ ಆಯಿತು. ಮಂಜು ಅಕ್ಕನ ನೆರಳಲ್ಲಿ ರಾಶಿಕಾ ಇದ್ದಾಳೆ ಅಂತ ಎಲ್ಲರೂ ಹೇಳುತ್ತಿದ್ದರು. ಏನೂ ಮಾಡೋಕೆ ಆಗಲ್ಲ. ಎರಡು, ಮೂರು ವಾರ ನಾವು ಜೊತೆಯಲ್ಲೇ ಇರಬೇಕಾಗುತ್ತದೆ. ಅದಾದ ನಂತರ ನನಗೂ ಹಲವು ಬಾರಿ ಎನಿಸಿದೆ. ಧನುಷ್ ಕ್ಯಾಪ್ಟನ್ ಆದಾಗ ನಾನು ಹೇಳಿದ್ದೆ. ಗಿಲ್ಲಿಯ ನೆರಳಲ್ಲೇ ಕಾವ್ಯಾ ಇರೋದ ಅಂತ ಹೇಳುತ್ತಿದ್ದೆ’ ಎಂದಿದ್ದಾರೆ ರಾಶಿಕಾ ಶೆಟ್ಟಿ.

‘ಅದೇ ಮಾತನ್ನು ಸುದೀಪ್ ಸರ್ ಕೂಡ ಹೇಳುತ್ತಾರೆ. ಅವರು ಹೇಳಿದಾಗಲೇ ಕಾವ್ಯಾ ಮತ್ತು ಗಿಲ್ಲಿ ಸರಿಪಡಿಸಿಕೊಂಡಿದ್ದರೆ ಅದು ಇಲ್ಲಿಯ ತನಕ ಬರುತ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ನಾವೇ ಒಂದು ಅಭಿಪ್ರಾಯ ಕೊಡುತ್ತಿರುತ್ತೇವೆ. ಅಭಿಪ್ರಾಯ ಕೊಡದೇ ಇದ್ದರೆ ಸರಿ ಇರುತ್ತದೆ ಎನಿಸುತ್ತದೆ’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ.

ರಾಶಿಕಾ ಶೆಟ್ಟಿ ಅವರು ಫಿನಾಲೆ ತಲುಪುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರ ಬದಲು ಕಾವ್ಯಾ ಶೈವ ಎಲಿಮಿನೇಟ್ ಆಗಬಹುದು ಎಂದು ವೀಕ್ಷಕರು ಊಹಿಸಿದ್ದರು. ಆ ಬಗ್ಗೆ ಕೂಡ ರಾಶಿಕಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಯಾಕೆ ಹೊರಗೆ ಬಂದೆ ಎಂಬುದಕ್ಕೆ ನನ್ನ ಬಳಿ ಕೂಡ ಉತ್ತರ ಇಲ್ಲ. ನಾನು ಎಲಿಮಿನೇಟ್ ಆಗಿದ್ದೇನೆ. ಜನರು ವೋಟ್ ಬಹಳ ಮುಖ್ಯ ಆಗುತ್ತದೆ. ಎಲ್ಲೋ ಸೈಲೆಂಟ್ ಆಗಿದ್ದೆ ಎನಿಸುತ್ತದೆ’ ಎಂದಿದ್ದಾರೆ ರಾಶಿಕಾ.

ಇದನ್ನೂ ಓದಿ: ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ

‘ಈಗ ಟಾಪ್ 7 ಸ್ಪರ್ಧಿಗಳು ಎಲ್ಲರೂ ಸಮರ್ಥರು. ಫಿನಾಲೆಯಲ್ಲಿ ರಕ್ಷಿತಾ ಇರಬಾರದು. ಧನುಷ್ ಗೆಲ್ಲಬೇಕು. ಆದರೆ ಗಿಲ್ಲಿ ಗೆಲ್ಲುತ್ತಾನೆ. ಹೊರಗಡೆ ಬಂದು ನೋಡಿದಾಗ ಗಿಲ್ಲಿಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದಾಗ ಗೆಲ್ಲಿ ಗೆಲ್ಲುತ್ತಾನೆ ಎನಿಸಿತು’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ. ಜನವರಿ 17 ಮತ್ತು 18ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ – Kannada News | Diabetes & Heart Disease: Gum Connection

ಸಾಮಾನ್ಯವಾಗಿ ಕೆಲವರಿಗೆ ಹಲ್ಲುಜ್ಜುವಾಗ ಅಥವಾ ಗಟ್ಟಿಯಾದ ಆಹಾರ ಸೇವನೆ ಮಾಡಿದಾಗ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದು ಕೆಲವರ ಅನುಭವಕ್ಕೆ ಬಂದಿರಬಹುದು. ಅಪರೂಪಕ್ಕೆ ಈ ರೀತಿಯಾಗುವುದು ಬಹಳ ಸಾಮಾನ್ಯ. ಆದರೆ ಪದೇ ಪದೇ ಈ ರೀತಿಯಾಗುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಕೆಲವರು ಒಸಡುಗಳಿಂದ ರಕ್ತಸ್ರಾವವಾಗುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಬಹುದು, ಆದರೆ ಈ ರೀತಿ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬಾರದು. ಏಕೆಂದರೆ ಇದು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹಾಗಾದರೆ ಒಸಡುಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣವೇನು, ಈ ರೀತಿಯಾಗುವುದಕ್ಕೂ ಡಯಾಬಿಟಿಸ್ (Diabetes) ಗೂ ಸಂಬಂಧವಿದೆಯೇ, ಇದು ಹೃದಯ ಸಂಬಂಧಿ ಕಾಯಿಲೆಯ ಸಂಕೆತವೇ ತಿಳಿದುಕೊಳ್ಳಿ.

ಒಸಡುಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣವೇನು?

ಹೆಚ್ಚಿನ ಸಂದರ್ಭಗಳಲ್ಲಿ, ಇದು ಒಸಡು ಕಾಯಿಲೆಯಿಂದ ಉಂಟಾಗುತ್ತದೆ (ಪೆರಿಯೊಡಾಂಟಲ್ ಸೋಂಕು). ಒಸಡಿನಲ್ಲಿ ಊತ ಅಥವಾ ಸೋಂಕು ಇದ್ದಾಗ ರಕ್ತಸ್ರಾವವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ರಕ್ತಸ್ರಾವವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಒಸಡುಗಳಲ್ಲಿ ರಕ್ತಸ್ರಾವವಾಗುವುದು ಮಧುಮೇಹದ ಲಕ್ಷಣವೇ?

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ, ಸೋಂಕುಗಳು ಬೇಗನೆ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಒಸಡಿಗೆ ಸಂಬಂಧಪಟ್ಟ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲಿಯೂ ಮಧುಮೇಹ ಇರುವವರಿಗೆ ಒಸಡಿಗೆ ಸಂಬಂಧಪಟ್ಟ ಕಾಯಿಲೆ ಕಂಡುಬರುವ ಅಪಾಯ 3- 4 ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ. ಆದ್ದರಿಂದ, ಒಸಡುಗಳಲ್ಲಿ ರಕ್ತಸ್ರಾವವಾಗಿದ್ದರೆ, ಸಕ್ಕರೆ ಪರೀಕ್ಷೆ ಅಂದರೆ ಡಯಾಬಿಟಿಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಒಸಡುಗಳಲ್ಲಿ ರಕ್ತಸ್ರಾವವಾಗುವುದು ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವೇ?

ಹಲವಾರು ಅಧ್ಯಯನಗಳ ಪ್ರಕಾರ, ಒಸಡಿನಲ್ಲಿ ರಕ್ತಸ್ರಾವವಾಗುವುದು ಅಥವಾ ಒಸಡಿಗೆ ಸಂಬಂಧಪಟ್ಟ ಕಾಯಿಲೆ ಇರುವವರಿಗೆ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ. ಆದರೆ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ.

ಇದನ್ನೂ ಓದಿ: ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು

ಯಾವಾಗ ವೈದ್ಯರನ್ನು ಸಂಪರ್ಕ ಮಾಡಬೇಕು?

ಒಸಡುಗಳಲ್ಲಿ ರಕ್ತಸ್ರಾವವಾದರೆ ಮಧುಮೇಹ ಅಥವಾ ಹೃದ್ರೋಗವಿದೆ ಎಂದು ಅರ್ಥವಲ್ಲ. ಆದರೆ ಈ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಇದು ಎಚ್ಚರಿಕೆಯ ಸಂಕೇತವಾಗಿರಬಹುದು. ಹಾಗಾಗಿ ಇದನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಸಡುಗಳಲ್ಲಿ ಆಗಾಗ ರಕ್ತಸ್ರಾವವಾಗಿದ್ದರೆ, ಅಥವಾ ಒಸಡುಗಳಲ್ಲಿ ಊತ, ನೋವು ಅಥವಾ ಬಾಯಿಯ ದುರ್ವಾಸನೆ ಇದ್ದರೆ, ನೀವು ಅದನ್ನು ನಿರ್ಲಕ್ಷಿಸಬಾರದು. ಮಧುಮೇಹ ಅಥವಾ ಹೃದ್ರೋಗದ ಕುಟುಂಬದ ಇತಿಹಾಸವಿದ್ದರೂ ಸಹ, ನೀವು ತಜ್ಞರ ಸಲಹೆ ಪಡೆದುಕೊಳ್ಳಿ. ಒಸಡುಗಳಲ್ಲಿ ರಕ್ತಸ್ರಾವವಾಗುವ ಲಕ್ಷಣಗಳು ಕಂಡುಬಂದರೆ, ದಿನಕ್ಕೆ ಎರಡು ಬಾರಿ ಮೃದುವಾದ ಬ್ರಷ್‌ನಿಂದ ಬ್ರಷ್ ಮಾಡುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ – Kannada News | India has to become product nation for economic growth, says industrialist Baba Kalyani

ಪುಣೆ, ಜನವರಿ 13: ಭಾರತದ ಆರ್ಥಿಕ ಬೆಳವಣಿಗೆಗೆ ಉತ್ಪಾದನಾ ಕ್ಷೇತ್ರದ (Manufacturing sector) ಕೊಡುಗೆ ಬಹಳ ಮುಖ್ಯ. ಭಾರತವು ಸೇವಾ ಕ್ಷೇತ್ರದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಉತ್ಪಾದನಾ ಕ್ಷೇತ್ರಕ್ಕೆ ಗಮನ ಕೊಡಬೇಕು. ಭಾರತವು ಸೇವಾ ಮನೋಭಾವ ಬಿಟ್ಟು ಉತ್ಪಾದಕ ಮನೋಭಾವ ತಳೆಯಬೇಕು ಎಂದು ಭಾರತ್ ಫೋರ್ಜ್ ಕಂಪನಿಯ ಛೇರ್ಮನ್ ಮತ್ತು ಎಂಡಿಯಾದ ಬಾಬಾ ಕಲ್ಯಾಣಿ (Baba Kalyani) ಕರೆ ನೀಡಿದ್ದಾರೆ.

ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದ ಪಬ್ಲಿಕ್ ಪಾಲಿಸಿ ಫೆಸ್ಟಿವಲ್ 2026 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬಾಬಾ ಕಲ್ಯಾಣಿ ಅವರು, ಜಿಡಿಪಿಗೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನ ಕೊಡುಗೆ ಎರಡು ಪಟ್ಟು ಹೆಚ್ಚಬೇಕು ಎನ್ನುವ ಸಲಹೆ ನೀಡಿದ್ದಾರೆ. ಜಿಡಿಪಿಗೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನ ಕೊಡುಗೆ ಶೇ. 15 ಇತ್ತು. ಇದು ಈಗ ಶೇ.. 13ಕ್ಕೆ ಇಳಿಕೆಯಾಗಿದೆ. ಇದು ಶೇ. 25ಕ್ಕೆ ಹೆಚ್ಚಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ?

‘ದೀರ್ಘಕಾಲ ನಾವು ಸರ್ವಿಸಸ್ ಮೇಲೆ ಗಮನ ಹರಿಸಿದ್ದೇವೆ. ಉತ್ಪನ್ನಗಳನ್ನು ಸೃಷ್ಟಿಸುವುದು ಹೇಗೆಂದು ನಾವು ಕಲಿಯಬೇಕು. ವಿದೇಶೀ ಕಂಪನಿಗಳಿಗೆ ಸೇವೆ ನೀಡುತ್ತಾ ಹೋದರೆ ಭಾರತವೇನೂ ಪ್ರಗತಿ ಹೊಂದುವುದಿಲ್ಲ. ಭಾರತೀಯ ಕಂಪನಿಗಳು ಐಟಿ ಸರ್ವಿಸ್​ನಲ್ಲಿ ಯಶಸ್ವಿಯಾದರೂ ಯಾರೂ ಕೂಡ ಒಂದೇ ಒಂದು ಉತ್ಪನ್ನ ಅಭಿವೃದ್ಧಿಪಡಿಸಿಲ್ಲ. ಈ ಕಂಪನಿಗಳು ಟ್ಯಾಕ್ಸ್ ಸೌಲಭ್ಯ ಪಡೆಯುವುದರಲ್ಲೇ ತೃಪ್ತವಾಗುತ್ತವೆ. ಇನ್ನೋವೇಶನ್​ಗೆ ಪ್ರಯತ್ನಿಸುತ್ತಿಲ್ಲ’ ಎಂದು ಭಾರತ್ ಫೋರ್ಜ್ ಕಂಪನಿಯ ಮುಖ್ಯಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಚಂದ್ರಬಾಬು ನಾಯ್ಡು ಸರ್ಕಾರದ ನೀತಿ ಶ್ಲಾಘಿಸಿದ ಕಲ್ಯಾಣಿ

ದೇಶಕ್ಕೆ ಈಗ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಸಾಕಾಗಲ್ಲ, ಸ್ಪೀಡ್ ಆಫ್ ಡೂಯಿಂಗ್ ಬ್ಯುಸಿನಸ್ ಬೇಕು ಎಂದು ಹೇಳುವ ಬಾಬಾ ಕಲ್ಯಾಣಿ, ಈ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಅವರ ಧೋರಣೆಯನ್ನು ಎತ್ತಿ ತೋರಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ತಮ್ಮ ಭಾರತ್ ಫೋರ್ಜ್ ಕಂಪನಿಗೆ ಬೃಹತ್ ಘಟಕ ನಿರ್ಮಿಸಲು 1,000 ಎಕರೆ ಜಾಗವನ್ನು ಕೇವಲ 15 ದಿನದಲ್ಲಿ ವ್ಯವಸ್ಥೆ ಮಾಡಿದ ಸಂಗತಿಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ

ಸಖತ್ತಾಗಿ ಬೆಳೆಯುತ್ತಿರುವ ಭಾರತ್ ಫೋರ್ಜ್

ಭಾರತ್ ಫೋರ್ಜ್ ಒಂದು ಕಾಲದಲ್ಲಿ ಫೋರ್ಜಿಂಗ್ ಸರ್ವಿಸ್​ಗೆ ಸೀಮಿತವಾಗಿತ್ತು. ನಂತರ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಕ್ರಮೇಣವಾಗಿ ವಿಸ್ತರಣೆ ಹೊಂದುತ್ತಾ ಬಂದಿದೆ. ಎಲೆಕ್ಟ್ರಾನಿಕ್ಸ್, ಡಿಫೆನ್ಸ್, ಡ್ರೋನ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಬೆಂಜ್, ಟೊಯೊಟಾ, ಹೊಂಡಾ, ವೋಲ್ವೋ, ಫೋರ್ಡ್, ಜನರಲ್ ಮೋಟಾರ್ಸ್ ಮೊದಲಾದ ಒಇಎಂಗಳಿಗೆ (ವಾಹನ ತಯಾರಕರು) ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುತ್ತದೆ. ರಾಲ್ಸ್ ರಾಯ್ಸ್ ಕಂಪನಿಗೆ ಟರ್ಬೈನ್ ಬ್ಲೇಡ್ ಮತ್ತು ಶಾಫ್ಟ್​ಗಳನ್ನು ತಯಾರಿಸುತ್ತದೆ. ಏರ್​ಬಸ್ ಕಂಪನಿಗೆ ಲ್ಯಾಂಡಿಂಗ್ ಗೇರ್ ತಯಾರಿಸಿಕೊಡುತ್ತದೆ. ಭಾರತದ ಸೇನೆಗೆ ಹಲವು ಮಿಲಿಟರಿ ಉತ್ಪನ್ನಗಳನ್ನೂ ತಯಾರಿಸುತ್ತದೆ. ಬಾಬಾ ಕಲ್ಯಾಣಿ ಅವರು ತಮ್ಮ ಕಂಪನಿ ಎಷ್ಟು ಗಣನೀಯವಾಗಿ ಬೆಳೆದಿದೆ ಎಂಬುದಕ್ಕೆ ಉದಾಹರಣೆಯಾಗಿ, ಹೇಗೆ ಜರ್ಮನ್ ಮತ್ತು ಜಪಾನೀ ಕಂಪನಿಗಳು ಭಾರತ್ ಫೋರ್ಜ್​ನ ಸ್ಪರ್ಧೆ ಎದುರಿಸಲು ಕಷ್ಟಪಡುತ್ತಿವೆ ಎಂಬುದನ್ನು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಧ್ರುವಂತ್​ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್ – Kannada News | Colors Kannada Deletes Dhruvanth Season Kicchana Chappale post after audience backlash

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ (Kicchana Chappale) ನೀಡುತ್ತಾರೆ. ಪ್ರತಿ ವಾರ ಚೆನ್ನಾಗಿ ಆಟ ಆಡಿದ ಸ್ಪರ್ಧಿಗೆ ಈ ಗೌರವ ಸಿಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಚಪ್ಪಾಳೆ ನೀಡಿದ್ದರು. ಆದರೆ ಅವರ ಈ ನಿರ್ಧಾರಕ್ಕೆ ವೀಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅದರ ಪರಿಣಾಮವಾಗಿ ಬಿಗ್ ಬಾಸ್ (BBK 12) ಆಯೋಜಕರು ನಿರ್ಧಾರ ಬದಲಾಯಿಸಿದ್ದಾರೆ. ಧ್ರುವಂತ್ (Dhruvanth) ಅವರಿಗೆ ಸೀಸನ್​​ನ ಚಪ್ಪಾಳೆ ಬದಲು ವಾರದ ಚಪ್ಪಾಳೆ ನೀಡಲಾಗಿದೆ.

‘ಮೊಟ್ಟ ಮೊದಲ ಕಿಚ್ಚನ ಸೀಸನ್ ಚಪ್ಪಾಳೆ’ ಎಂದು ಧ್ರುವಂತ್ ಅವರ ಫೋಟೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈಗ ‘ಈ ವಾರದ ಕಿಚ್ಚನ ಚಪ್ಪಾಳೆ’ ಎಂದು ಹೊಸ ಪೋಸ್ಟ್ ಹಾಕಲಾಗಿದೆ. ಈ ಮೊದಲ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಬಿಗ್ ಬಾಸ್ ಆಯೋಜಕರು ನಿರ್ಧಾರ ಬದಲಿಸಿದ್ದಕ್ಕೆ ವೀಕ್ಷಕರಿಗೆ ಖುಷಿ ಆಗಿದೆ. ಇಡೀ ಸೀಸನ್​​ನ ಚಪ್ಪಾಳೆ ಪಡೆಯುವಷ್ಟು ಉತ್ತಮ ಆಟವನ್ನು ಧ್ರುವಂತ್ ಆಡಿಲ್ಲ ಎಂಬುದು ವೀಕ್ಷಕರು ಅಭಿಪ್ರಾಯ. ಹಾಗಾಗಿ ಇಡೀ ಸೀಸನ್ ಚಪ್ಪಾಳೆ ಗಿಲ್ಲಿಗೆ ಸಲ್ಲಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡ ಅವರಿಗೂ ನೀಡಲಾಗಿದೆ.

ಧ್ರುವಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದ ಮಧ್ಯೆ ಸೋಲು ಒಪ್ಪಿಕೊಂಡಿದ್ದರು. ತಾವಾಗಿಯೇ ಆಟ ತೊರೆಯುವ ನಿರ್ಧಾರ ಮಾಡಿದ್ದರು. ಆದರೆ ಸುದೀಪ್ ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದ ಬಳಿಕ ಆಟ ಮುಂದುವರಿಸಿದ್ದರು. ಇಡೀ ಮನೆಯಲ್ಲಿ ಅವರು ಹೆಚ್ಚು ಬೆರೆತಿದ್ದು ಅಶ್ವಿನಿ ಗೌಡ ಮತ್ತು ಮಲ್ಲಮ್ಮ ಜೊತೆ ಮಾತ್ರ. ಅಲ್ಲದೇ ಅವರಿಂದ ವೀಕ್ಷಕರಿಗೆ ಹೆಚ್ಚು ಮನರಂಜನೆ ಸಿಕ್ಕಿಲ್ಲ. ಹಾಗಾಗಿ ಅವರಿಗೆ ಇಡೀ ಸೀಸನ್​ನ ಚಪ್ಪಾಳೆ ನೀಡುವುದು ಸೂಕ್ತವಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಇದನ್ನೂ ಓದಿ: ಕಿಚ್ಚನ ಚಪ್ಪಾಳೆ: ಸುದೀಪ್ ಇನ್​ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಅವರ ಹವಾ ಜೋರಾಗಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಅವರನ್ನು ಒಂದು ಮಿಲಿಯನ್​​ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಗಿಲ್ಲಿಯೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಲಕ್ಷಾಂತರ ಕಮೆಂಟ್​​ಗಳು ಬಂದಿವೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:28 pm, Tue, 13 January 26

Source link

‘ಟಾಕ್ಸಿಕ್’ ಟೀಸರ್​​ನಲ್ಲಿ ತಪ್ಪು: ವೀಕ್ಷಕರ ದಾರಿ ತಪ್ಪಿಸಲಾಗಿದೆಯೇ? – Kannada News | Toxic movie teaser scene is not scientifically possible what is the debate

ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಚರ್ಚೆಯಲ್ಲಿರುವ ವಿಷಯ. ಜನವರಿ 08 ರಂದು ಬಿಡುಗಡೆ ಆಗಿರುವ ಟೀಸರ್ ಈಗಾಗಲೆ 300 ಮಿಲಿಯನ್​​ಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಟೀಸರ್​​ನಲ್ಲಿರುವ ಆಕ್ಷನ್ ಜೊತೆಗೆ ಕಾರಿನ ಒಳಗೆ ನಡೆಯುತ್ತಿರುವ ದೃಶ್ಯದ ಬಗ್ಗೆಯೂ ಜೋರಾಗಿ ಚರ್ಚೆ ನಡೆದಿದೆ. ಕಾರಿನ ಒಳಗೆ ಯಶ್ ಪಾತ್ರ ಲೈಂಗಿಕ್ ಕ್ರಿಯೆಯಲ್ಲಿ ತೊಡಗಿರುತ್ತದೆ. ಆ ಕ್ರಿಯೆಯ ಉತ್ಪತ್ತಿಯಾಗುವ ಶಕ್ತಿಯಿಂದ ಡೆಟೊನೇಟರ್ ಆನ್ ಆಗಿ ವಿಲನ್​​ಗಳಿದ್ದ ಕಡೆ ಬಾಂಬ್ ಬ್ಲಾಸ್ಟ್ ಆಗುವಂತೆ ತೋರಿಸಲಾಗಿದೆ. ಆದರೆ ಪ್ರಾಕ್ಟಿಕಲ್ ಆಗಿ ಇದು ಅಸಾಧ್ಯ ಎಂಬ ವಾದ ಇದೀಗ ವ್ಯಕ್ತವಾಗಿದೆ. ಹಾಗಿದ್ದರೆ ಟೀಸರ್​​ನಲ್ಲಿ ಆಗಿರುವ ತಪ್ಪೇನು?

ರಾಘವೇಂದ್ರ ಎಂ ಸುಬ್ರಹ್ಮಣ್ಯ ಎಂಬುವರು ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಈ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ, ತಮ್ಮನ್ನು ವಿಜ್ಞಾನದ ವಿಧ್ಯಾರ್ಥಿ ಎಂದು ಹೇಳಿರುವ ರಾಘವೇಂದ್ರ ಅವರು, ‘ಟಾಕ್ಸಿಕ್’ ಟೀಸರ್​​ನಲ್ಲಿ ತೋರಿಸಲಾಗಿರುವ ದೃಶ್ಯ, ವೈಜ್ಞಾನಿಕವಾಗಿ ಅಸಾಧ್ಯ ಎಂದಿದ್ದು, ಅದಕ್ಕೆ ಕೆಲವು ಮೌಲಿಕ ಕಾರಣಗಳನ್ನು ಸಹ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ರಾಘವೇಂದ್ರ ಅವರು ನೀಡಿರುವ ಕಾರಣಗಳು ಇಂತಿವೆ…

ಟೀಸರ್​​ನಲ್ಲಿ ತೋರಿಸಿರುವಂತೆ ಕುಡುಕ ಡ್ರೈವರ್, ಕಾರಿನ ಹಿಂಬದಿಗೆ ಹುಕ್ ರೀತಿಯಲ್ಲಿ ಸೇರಿಸುವ ಯಂತ್ರದ ಹೆಸರು ಪ್ಲಂಜರ್ ಡೆಟೊನೇಟರ್. ಇದನ್ನು ಬ್ಲಾಸ್ಟಿಂಗ್ ಮಷಿನ್, ಶೋಟ್ ಎಕ್ಸ್​ಪ್ಲೋಡರ್ ಎಂದೂ ಸಹ ಕರೆಯಲಾಗುತ್ತದೆ. 1878 ರಲ್ಲಿ ಇದನ್ನು ವಿನ್ಯಾಸ ಮಾಡಲಾಯ್ತು. ಯಂತ್ರದ ಮೇಲಿನ ಟಿ ಆಕಾರದ ರಾಡ್ ಅನ್ನು ಒತ್ತುವ ಮೂಲಕ ಉತ್ಪಾದನೆಯಾಗುವ ವಿದ್ಯುತ್ ವೈಯರ್​​ಗಳ ಸಹಾಯದಿಂದ ಬಾಂಬ್ ಡೆಟೊನೇಟರ್​​ಗಳನ್ನು ಆನ್ ಮಾಡಿ ಸ್ಪೋಟಗೊಳಿಸುವುದು ಇದರ ಕಾರ್ಯ. ಟೀಸರ್​​ನಲ್ಲಿಯೂ ಇದನ್ನು ತೋರಿಸಲಾಗಿದೆ.

ಇದನ್ನೂ ಓದಿ:ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ

ಆದರೆ ಆ ಟಿ ಹ್ಯಾಂಡಲ್ ಅನ್ನು ಒತ್ತಲು ನಿಯಮತಿ ಶಕ್ತಿ ಅಥವಾ ಒತ್ತಡದ ಅಗತ್ಯ ಇರುತ್ತದೆ. ಟೀಸರ್​​ನಲ್ಲಿ ಗಮನಿಸಿದರೆ ಕಾರಿನಲ್ಲಿ ನಡೆಯುತ್ತಿರುವ ಕ್ರಿಯೆಯಿಂದ ಕಾರಿನ ಶಾಕ್ ಅಬ್ಸಾರ್ಬರ್​​ಗಳು ಮೇಲೆ ಕೆಳಕ್ಕೆ ಆಡುವ ಮೂಲಕ ಪ್ಲಂಜರ್ ಡೆಟೊನೇಟರ್ ನ ಟಿ ಆಕೃತಿ ಕೆಳಗೆ ಒತ್ತಿ ವಿದ್ಯುತ್ ಪ್ರವಹಿಸಿ ಬಾಂಬ್ ಬ್ಲಾಸ್ಟ್ ಆಗುತ್ತದೆ. ಆದರೆ ಎಲ್ಲ ಜಾಣ-ಜಾಣೆಯರಿಗೆ ಗೊತ್ತಿರುವಂತೆ ಕಾರಿನಲ್ಲಿ ನಡೆಯುತ್ತಿರುವ ಕ್ರಿಯೆಯಿಂದ ಕಾರಿನ ಮೇಲೆ ಮೇಲಿನಿಂದ ಕೆಳಗ್ಗೆ ಬೀಳುವುದಿಲ್ಲ ಬದಲಿಗೆ, ಮುಂದೆ-ಹಿಂದೆ ಬೀಳುತ್ತದೆ. ಟೀಸರ್​​ನಲ್ಲಿ ಸಹ ತೋರಿಸಿರುವಂತೆ ಕಾರಿನಲ್ಲಿ ಆ ಮಹಿಳೆ ಮಲಗಿರುವುದಿಲ್ಲ ಬದಲಿಗೆ ಸೀಟಿನ ಮೇಲೆ ಕುಳಿತಿರುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಯಶ್ ಕಡೆ ಬೆನ್ನು ಹಾಕಿರುತ್ತಾಳೆ. ಈ ಭಂಗಿಗಳಲ್ಲಿ ಒತ್ತಡ ಮೇಲಿನಿಂದ ಕೆಳಕ್ಕೆ ಬೀಳಲು ಸಾಧ್ಯವೇ ಇಲ್ಲ ಎನ್ನುವ ವಾದವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಪ್ಲಂಜರ್ ಡೆಟೊನೇಟರ್​​ಗಳು ಕಡಿಮೆ ದೂರದಲ್ಲಿ ಇರಿಸಲಾದ ಬಾಂಬುಗಳನ್ನು ಡೆಟೊನೇಟ್ ಮಾಡಲಷ್ಟೆ ಶಕ್ತವಾಗಿರುತ್ತವೆ. ಹೆಚ್ಚು ಶಕ್ತಿ ಅವುಗಳಿಂದ ಉತ್ಪಾದನೆ ಆಗಬೇಕು ಎಂದಾದರೆ ಟಿ ಆಕಾರವನ್ನು ಹೆಚ್ಚು ಉದ್ದ ಮಾಡಿ ಅದನ್ನು ಮೇಲಿನಿಂದ ಕೆಳಗೆ ಒತ್ತಬೇಕಿರುತ್ತದೆ. ಆದರೆ ಟೀಸರ್​​ನಲ್ಲಿ ಡೆಟೊನೇಟರ್ ಚಿಕ್ಕದಾಗಿದೆ, ಟಿ ಆಕಾರದ ನೆಕ್ ಸಹ ಬಹಳ ಚಿಕ್ಕದಾದ ಟ್ರಾವೆಲ್ ಅನ್ನು ಹೊಂದಿದೆ. ಹೀಗಿರುವಾಗ ಸ್ಮಶಾನದಲ್ಲಿ ಇರಿಸಲಾಗಿರುವ ಅಷ್ಟು ಬಾಂಬ್​​ಗಳಿಗೆ, ಅಷ್ಟು ಉದ್ದ ವೈಯರ್​​ಗಳ ಮೂಲಕ ಪ್ರಹವಿಸುವಷ್ಟು ವಿದ್ಯುತ್ ಉತ್ಪಾದನೆ ಆಗುವುದು ವೈಜ್ಞಾನಿಕವಾಗಿ ಅಸಾಧ್ಯ ಎನ್ನಲಾಗುತ್ತಿದೆ.

ಏನೇ ಆಗಲಿ ‘ಟಾಕ್ಸಿಕ್’ದ ಟೀಸರ್​ನ ಬಾಂಬ್ ಸೀನು ಬೇರೆ ಬೇರೆ ಕಾರಣಗಳಿಗೆ ಹಲವರಿಗೆ ಇಷ್ಟವಾಗಿದೆ. ಕೆಲವರು ಈ ಸೀನ್ ಸಿನಿಮಾನಲ್ಲಿ ಇರುವುದಿಲ್ಲ ಎಂದೂ ಸಹ ವಾದಿಸುತ್ತಿದ್ದಾರೆ. ಎಲ್ಲವೂ ಮಾರ್ಚ್ 19ಕ್ಕೆ ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು – Kannada News | Bigg Boss Kannada 12 Gilli Nata family background and Financial status

ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ (Gilli Nata) ಅವರು ಶ್ರಿಮಂತನಾ ಅಥವಾ ಬಡವನಾ ಎಂಬ ಅನುಮಾನ ಹಲವರಿಗೆ ಇದೆ. ಆ ಬಗ್ಗೆ ಅವರ ಕುಟುಂಬದ ಸದಸ್ಯರಾದ ಬಸವರಾಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ. ‘ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ ಎಂಬ ಬಗ್ಗೆ ಗೊಂದಲ ನಿರ್ಮಾಣ ಆಗಿದೆ. ಗಿಲ್ಲಿಯದ್ದು ಮಿಡಲ್ ಕ್ಲಾಸ್ ಕುಟುಂಬ. ಇಂದಿಗೂ ಅವರ ತಂದೆ-ತಾಯಿ ವ್ಯವಸಾಯ ಮಾಡಿಕೊಂಡಿದ್ದಾರೆ. ಮಧ್ಯಮವರ್ಗದ ಕುಟುಂಬ ಆದ್ದರಿಂದ ಹೊಟ್ಟೆಗೆ ಬಟ್ಟೆಗೆ ಶಿಕ್ಷಣಕ್ಕೆ ಕೊರತೆ ಇಲ್ಲ. ಪಿಆರ್ ನೇಮಿಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಾನೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ತಂದೆ-ತಾಯಿಗೆ ಪಿಆರ್ ಎಂದರೆ ಏನು ಎಂಬುದೇ ಗೊತ್ತಿಲ್ಲ. ನಿನ್ನೆ ಭತ್ತ ಕೊಯ್ದಿದ್ದಾರೆ. ಮಳೆ ಬಂದು ಎಲ್ಲವೂ ನೆನೆದು ಹೋಗಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಗಿಲ್ಲಿ ಏನೇ ಸಂಪಾದನೆ ಮಾಡಿದರೂ ಅವರ ತಂದೆ-ತಾಯಿ ತಮ್ಮ ಕಾಯಕ ಮುಂದುವರಿಸುತ್ತಿದ್ದಾರೆ. ಅವರು ಹಳ್ಳಿ ಜನ. ಪಿಆರ್, ಫೇಸ್ ಬುಕ್ ಇತ್ಯಾದಿ ಅವರಿಗೆ ಗೊತ್ತಿಲ್ಲ’ ಎಂದು ಬಸವರಾಜು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದ ರೌಡಿಶೀಟರ್​​ ತಂದಿದ್ದು ನಕಲಿ ಬಂದೂಕು!

ದೇವನಹಳ್ಳಿ, ಜನವರಿ 13: ಎಣ್ಣೆಗಾಗಿ ಬಂದೂಕು ತೋರಿಸಿ ಕ್ಯಾಷಿಯರ್​ಗೆ ಬೆದರಿಕೆ ಪ್ರಕರಣ ಸಂಬಂಧ ರೌಡಿಶೀಟರ್ ವಾಹಿದ್‌ ಖಾನ್ ತೋರಿಸಿರುವ ಗನ್​​ ಡಮ್ಮಿ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿಯ ಬಾರ್​ನಲ್ಲಿ ನಡೆದಿದ್ದ ಘಟನೆ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್​ನಲ್ಲಿ ಆರೋಪಿ ವಾಹಿದ್‌ ಜೊತೆ ಬಾರ್​ಗೆ ಬಂದಿದ್ದ ಅತೀಕ್​ ಖಾನ್​​ನ ಪೊಲೀಸರು ಬಂಧಿಸಿದ್ದು, ಆರೋಪಿಗಳು ಎರಡು ಪೈಪ್​ಗಳನ್ನು ಬಳಸಿ ನಕಲಿ ಗನ್ ತಯಾರಿಸಿದ್ದರು. ಟಿಂಕರಿಂಗ್ ಹಾಗೂ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಅತಿಕ್‌ ಖಾನ್ 2 ಮೆಟಲ್ ಪೈಪ್, ಮರದ ಸ್ಟಾಕ್, ಕಪ್ಪು ಬೆಲ್ಟ್ ಬಳಸಿ ಡಮ್ಮಿ ಗನ್ ತಯಾರಿ ಮಾಡಿದ್ದ. ನೋಡೋಕೆ ಅದು ಡಬಲ್ ಬ್ಯಾರಲ್ ಗನ್ ರೀತಿ ಇತ್ತು ಎಂಬುದು ಗೊತ್ತಾಗಿದೆ. ಪ್ರಮುಖ ಆರೋಪಿ ರೌಡಿಶೀಟರ್ ವಾಹಿದ್ ಖಾನ್​ಗಾಗಿ ಹುಡುಕಾಟ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Apply Now: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ಪಿಯುಸಿ ಪಾಸ್​ ಆಗಿದ್ರೆ ಸಾಕು! – Kannada News | IAF Agniveer Vayu Recruitment 2026: Apply Now! Eligibility and Selection

ಅಗ್ನಿವೀರ್ ನೇಮಕಾತಿಗೆ ತಯಾರಿ ನಡೆಸುತ್ತಿರುವವರಿಗೆ ಗುಡ್​ ನ್ಯೂಸ್​ ಇಲ್ಲಿದೆ. ಭಾರತೀಯ ವಾಯುಪಡೆಯಲ್ಲಿ (IAF) ಅಗ್ನಿವೀರ್ ಆಗಲು ಇದು ಒಂದು ಅವಕಾಶ. ಭಾರತೀಯ ವಾಯುಪಡೆಯು ಅಗ್ನಿವೀರ್ ವಾಯು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಹೇಗೆ ಮತ್ತು ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಫೆಬ್ರವರಿ 1 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ:

ಭಾರತೀಯ ವಾಯುಪಡೆಯು ಜನವರಿ 12 ರಂದು ಅಗ್ನಿವೀರ್ವಾಯು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿತು. ಅಧಿಕೃತ ವೆಬ್‌ಸೈಟ್ iafrecruitment.edcil.co.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 1. ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಯೋಮಿತಿ:

ಅಗ್ನಿವೀರ್ವಾಯು ನೇಮಕಾತಿಗೆ ಗರಿಷ್ಠ ವಯೋಮಿತಿ 21 ವರ್ಷಗಳು. ವಯೋಮಿತಿಯನ್ನು ಜನವರಿ 1, 2026 ರಿಂದ ಜುಲೈ 1, 2009 ರವರೆಗೆ ಲೆಕ್ಕಹಾಕಲಾಗುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಒಂದೇ ಆಗಿರುತ್ತದೆ.

ಶೈಕ್ಷಣಿಕ ಅರ್ಹತೆ:

ಅಗ್ನಿವೀರ್ ವಾಯು ನೇಮಕಾತಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಎಂದರೆ ಅಭ್ಯರ್ಥಿಗಳು 12 ನೇ ತರಗತಿ ಉತ್ತೀರ್ಣರಾಗಿರಬೇಕು. 12 ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ಒಳಗೊಂಡಿರಬೇಕು. ಕನಿಷ್ಠ ಶೇ.50 ಅಂಕಗಳು ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ ಶೇ.50 ಅಂಕಗಳು ಅಗತ್ಯವಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಆಯ್ಕೆ ಹೇಗೆ ನಡೆಯುತ್ತದೆ?

ಅಗ್ನಿವೀರ್ ವಾಯು ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಇದರ ನಂತರ, ಅವರನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ.

ದೈಹಿಕ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು 1.6 ಕಿ.ಮೀ ಓಟವನ್ನು 7 ನಿಮಿಷಗಳಲ್ಲಿ ಓಡಬೇಕು, ಆದರೆ ಮಹಿಳಾ ಅಭ್ಯರ್ಥಿಗಳು ಅದನ್ನು 8 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಅವರು ಪುಷ್-ಅಪ್‌ಗಳು, ಸಿಟ್-ಅಪ್‌ಗಳು ಮತ್ತು ಸ್ಕ್ವಾಟ್‌ಗಳನ್ನು ಸಹ ಮಾಡಬೇಕಾಗುತ್ತದೆ. ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಹೊಂದಾಣಿಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರ ನಂತರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಅಗ್ನಿವೀರ್ವಾಯು 2027 ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ; ರಾಜಕಾರಣಿಗಳ ಆಸೆಗೆ ಪಶ್ಚಿಮ ಘಟ್ಟ ಬಲಿ? – Kannada News | Western Ghats at Risk: Karnataka’s River Diversion Plan and Bommai’s Political Push

ಶಿರಸಿಯ ಜಾತ್ರೆ ಮತ್ತು ನಿಂತುಹೋದ ಸಂಭ್ರಮ: ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ಜಾತ್ರೆ ಇನ್ನೊಂದು ತಿಂಗಳೊಳಗೆ ಆರಂಭವಾಗಲಿದೆ. ಆದರೆ ಶಿರಸಿಯಲ್ಲಿ ಜಾತ್ರೆಯ ಸಂಭ್ರಮ ಮತ್ತು ಜೋಶ್​ ಕಾಣುತ್ತಿಲ್ಲ. ಯಾಕೋ ಅವೆಲ್ಲ ಜನಮನದಿಂದ ದೂರವಾಗಿರುವಂತೆ ಕಾಣುತ್ತಿದೆ. ಎಲೆ ಚುಕ್ಕೆ ರೋಗದಿಂದ ಅಡಕೆ ಬೆಳೆ ಕೈಗೆ ಸಿಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟಕ್ಕೆ ಪರಿಹಾರ ನೀಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಬದಲಾಗಿ ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಮುಂದಾಗಿ, ಈ ಭಾಗದ ಜನರ ಬದುಕಿಗೆ ಕೊಳ್ಳಿ ಇಡಲು ಮುಂದಾಗಿವೆ. ಜಾತ್ರೆಯ ಬಗ್ಗೆ ಜೋಶ್​ ಇಲ್ಲದಿರಲು ಇದು ಮೂಲ ಕಾರಣ.

ಅಭಿವೃದ್ಧಿಯ ಹೆಸರಿನಲ್ಲಿ ಕಡ್ಡಿಗೀರುವ ನೀರು

ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆದ ಹೋರಾಟಗಳ ಇತಿಹಾಸವನ್ನು ನೆನಪಿಸಿಕೊಂಡರೆ ಸಾಕು. ಪ್ರತಿಬಾರಿಯೂ, ‘ತಮಿಳುನಾಡಿಗೆ ಬಿಡಬೇಕಾದ ನೀರು’ ಎಂಬ ಮಾತು ಕರ್ನಾಟಕದಲ್ಲಿ ಬೆಂಕಿ ಹಚ್ಚಿದ್ದನ್ನು ನಾವೆಲ್ಲ ನೋಡಿದ್ದೇವೆ. ವಿಪರ್ಯಾಸವೆಂದರೆ, ಬೆಂಕಿ ನಂದಿಸಬೇಕಾದ ನೀರೇ ಬೆಂಕಿಯ ಕಿಡಿಯಾಗುತ್ತಿರುವುದು ಇತಿಹಾಸದ ವ್ಯಂಗ್ಯ. ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಜಾರಿಗೆ ಬಂದರೆ ಬೇರೆ ಯಾವುದೋ ರಾಜ್ಯಕ್ಕೆ ನೀರು ಹೋಗುವುದಿಲ್ಲ ಎಂಬ ವಾದ ಮುಂದಿಡಲಾಗುತ್ತಿದೆ. ವಾಸ್ತವದಲ್ಲಿ ಈ ಯೋಜನೆಗಳು ಪಕ್ಕದ ಜಿಲ್ಲೆಗೆ ನೀರು ಕೊಡುತ್ತವೆ ಎನ್ನುವ ಪ್ರಸ್ತಾಪ ಇರಬಹುದು. ಇದು ಜಾರಿಯಾದಲ್ಲಿ ಪಶ್ಚಿಮ ಘಟ್ಟದ ಕಾಡು, ಜಲವ್ಯವಸ್ಥೆ ಮತ್ತು ದೇಸಿ ಸಂಸ್ಕೃತಿಗೆ ಕೊಡಲಿಯೇಟು ಇಡುವುದರಲ್ಲಿ ಸಂಶಯವಿಲ್ಲ. 2019 ರಲ್ಲಿ ಕರ್ನಾಟಕ ವಿಧಾನ ಸಭೆಗೆ ನೀಡಿದ ಉತ್ತರದಲ್ಲಿ ಸರಕಾರವೇ ಹೇಳಿದೆ-ಸರಕಾರದ ಹಲವಾರು ಯೋಜನೆಗಳಿಗೆ, ಉತ್ತರ ಕನ್ನಡ ಜಿಲ್ಲೆಯೊಂದೇ 1.25 ಲಕ್ಷ ಹೆಕ್ಟೇರ್​ ಜಮೀನನ್ನು ಇಲ್ಲೀವರೆಗೆ ನೀಡಿದೆ. ಅದರಲ್ಲಿ ಅರಣ್ಯವೆಷ್ಟು ಎನ್ನುವ ವಿವರ ಈಗ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗಳ ವಿರುದ್ಧ ಚಳುವಳಿ ಆರಂಭವಾಗಿದ್ದು, ಕಳೆದ ಭಾನುವಾರ ಶಿರಸಿಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಜನರು ಸೇರಿ ಶಾಂತಿಯುತವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಶಾಂತಿಯುತ ಹೋರಾಟ ಮತ್ತು ಮಾಧ್ಯಮಗಳ ಮೌನ

ನದಿ ತಿರುವು ಯೋಜನೆ ವಿರೋಧಿ ಚಳುವಳಿ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದೆ. ಬಹುಶಃ ಇದೇ ಕಾರಣಕ್ಕಾಗಿ ಆಡಳಿತದಲ್ಲಿರುವವರು ಈ ಚಳುವಳಿಯನ್ನು ಗಂಭೀರವಾಗಿ ಪರಿಗಣಿಸದ ಅಪಾಯವೂ ಇದೆ. ಸೋಮವಾರದ ಕೆಲ ಇಂಗ್ಲಿಷ್ ದಿನಪತ್ರಿಕೆಗಳ ಬೆಂಗಳೂರು ಆವೃತ್ತಿಗಳನ್ನು ಗಮನಿಸಿದರೆ, ರವಿವಾರ ನಡೆದ ಈ ಬೃಹತ್ ಪ್ರತಿಭಟನಾ ರಾಲಿಯ ಕುರಿತು ಒಂದು ಸಾಲು ಸುದ್ದಿಯೂ ಕಾಣುವುದಿಲ್ಲ. ಒಂದೊಮ್ಮೆ ಈ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಘೋಷಣೆಗಳು ಕೇಳಿಬಂದಿದ್ದರೆ, ಇದೇ ಪತ್ರಿಕೆಗಳು ಮುಖಪುಟದಲ್ಲೇ ಸುದ್ದಿಯನ್ನು ಪ್ರಕಟಿಸುತ್ತಿದ್ದವೇನೋ? ಚಳುವಳಿಯ ತೀವ್ರತೆ ಸಂಪಾದಕರ ಗಮನಕ್ಕೂ ಬಾರದಿರುವಾಗ, ಆಡಳಿತ ನಡೆಸುವವರಿಗೆ ಅದು ತಲುಪುವುದು ಹೇಗೆ ಎಂಬ ಪ್ರಶ್ನೆ ಸಹಜ.

ಡಿಪಿಆರ್: ಪ್ರಶ್ನೆ ಕೇಳಬೇಕಾದ ಹಂತ

ಉತ್ತರ ಕನ್ನಡದಿಂದ ಆಯ್ಕೆಯಾದ ಜನಪ್ರತಿನಿಧಿಗಳ ನಡತೆಯ ಕುರಿತು ಚರ್ಚಿಸುವ ಮೊದಲು, ಕೇಂದ್ರ ಸರ್ಕಾರದ ಏಜೆನ್ಸಿಯಿಂದ ತಯಾರಾಗುತ್ತಿರುವ ಡಿಪಿಆರ್ ಅನ್ನು ಹೇಗೆ ಪ್ರಶ್ನಿಸಬೇಕು ಎಂಬುದರ ಬಗ್ಗೆ ಜಿಲ್ಲೆಯ ಜನ ಗಂಭೀರ ಚರ್ಚೆ ನಡೆಸಬೇಕಾಗಿದೆ.
ಡಿಪಿಆರ್ ಎಲ್ಲಿ ತಯಾರಾಗುತ್ತದೆ? ಯಾರು ತಯಾರಿಸುತ್ತಾರೆ? ಅದರಲ್ಲಿ ನೆಲದ ನೀರಿನ ಹರಿವಿನ ವಾಸ್ತವದ ಮಾಹಿತಿ ಎಷ್ಟಿರಬಹುದು? ಅಧಿಕಾರಿಗಳು ನಿಜಕ್ಕೂ ಹಳ್ಳಿ ಹಳ್ಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಾರೆಯೇ, ಅಥವಾ ದೆಹಲಿಯಲ್ಲಿ ಕುಳಿತು ಉಪಗ್ರಹ ಚಿತ್ರಗಳು ಮತ್ತು ಗಣಿತ ಸೂತ್ರಗಳ ಆಧಾರದಲ್ಲಿ ಮುಳುಗಡೆ ಪ್ರದೇಶಗಳ ಲೆಕ್ಕಾಚಾರ ಮಾಡುತ್ತಾರೆಯೇ? ಈ ಪ್ರಕ್ರಿಯೆಯಲ್ಲಿರುವ ಆಗಬಹುದಾದ ಎಲ್ಲ ಎಡವಟ್ಟುಗಳನ್ನು ತಾರ್ಕಿಕವಾಗಿ, ಕಾನೂನು ಮಾರ್ಗದಲ್ಲಿ ಪ್ರಶ್ನಿಸಿ, ಡಿಪಿಆರ್ ಹಂತದಲ್ಲೇ ಯೋಜನೆಯನ್ನು ತಡೆಹಿಡಿಯುವ ಪ್ರಯತ್ನಕ್ಕೆ ಮೊದಲ ಆದ್ಯತೆ ಆಗಬೇಕು. ಮತ್ತು ಡಿಪಿಆರ್​ ಮಾಡುವವರು ಜಿಲ್ಲೆಗೆ ಬಂದಿಲ್ಲ ಎಂದಾದರೇ ಆಗ ಅದನ್ನು ಪ್ರಶ್ನಿಸಲೇಬೇಕು.

ಒಮ್ಮೆ ಡಿಪಿಆರ್ ಮಾಡುವ ತಂಡ ಬರುವುದೇ ಆದಲ್ಲ, ಮೇ ತಿಂಗಳಿನಲ್ಲಿ ಬರಬೇಕು. ಬರುವ ಟೀಂನವರು ಮಿನಲರ್​ ವಾಟರ್​ ಬಾಟಲಿ ಹಿಡಿದುಕೊಂಡು ಈ ಎರಡು ನದಿ ನೀರಿನ ಪಾತ್ರವನ್ನು, ನೀರಿನ ಲಭ್ಯತೆಯನ್ನು ಪರಾಮರ್ಶೆ ಮಾಡಲಿ. ಜಿಲ್ಲೆಯ ಎಲ್ಲೆಡೆ ಆಗ ಅವರು ಓಡಾಡಿದರೆ ‘ದೂಧ್​ ಕಾ ದೂಧ್​, ಪಾನಿ ಕಾ ಪಾನಿ,’ ಆಗುವುದು ಖಂಡಿತ.

ಪತ್ರ ಚಳುವಳಿ: ಸಂಭಾಷಣೆಗೆ ದಾರಿ

ಇಂದಿನ ಕಾಲದಲ್ಲಿ ಪತ್ರ ಬರೆಯುವ ಹೋರಾಟ ಹಳೆಯದಾಗಿ ಕಾಣಬಹುದು. ಆದರೆ ಅಹಿಂಸಾತ್ಮಕ ಹೋರಾಟದಲ್ಲಿ ಸಾರ್ವಜನಿಕರನ್ನು ಜಾಗೃತಗೊಳಿಸಲು ಇದು ಇನ್ನೂ ಒಂದು ಮಾರ್ಗ. ಈ ಉಪಕ್ರಮದಿಂದ ಬದಲಾವಣೆ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಪತ್ರ ಚಳುವಳಿಯ ಮೂಲಕ ಈ ಭಾಗದ ಜನರ ಮಿಡಿತ ಹೊರಜಗತ್ತಿಗೆ ತಲುಪಬಹುದು.  ಅದೇ ರೀತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡಿ, ಶಿಷ್ಟ ಭಾಷೆಯಲ್ಲಿ ಲಕ್ಷಾಂತರ ಮನವಿಗಳು ತಲುಪಿದರೆ, ಕನಿಷ್ಠ ಚರ್ಚೆಗೆ ದಾರಿ ತೆರೆದುಕೊಳ್ಳುವ ಸಾಧ್ಯತೆ ಇದೆ. ಮಾತಾಡದ ಪಶ್ಚಿಮ ಘಟ್ಟದ ಕಾಡಿನ ಧ್ವನಿ, ಈ ಮೂಲಕ ಹೊರಜಗತ್ತಿಗೆ ತಲುಪಬಹುದು.

ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಂಬಿಕೆಯ ಬಿಕ್ಕಟ್ಟು

80ರ ದಶಕದಿಂದಲೇ ಬೇಡ್ತಿ ಹಾಗೂ ನಂತರ ಬೇಡ್ತಿ–ಅಘನಾಶಿನಿ ನದಿಗಳ ಮೇಲೆ ಅಭಿವೃದ್ಧಿಯ ಹೆಸರಿನ ತೂಗುಗತ್ತಿ ಅಡ್ಡಾಡುತ್ತಲೇ ಇದೆ. ಗುಂಡೂರಾವ್ ಹಾಗೂ ಬಂಗಾರಪ್ಪ ಅವರ ಕಾಲದಲ್ಲಿ ಜನರ ಧ್ವನಿಗೆ ಮನ್ನಣೆ ನೀಡಿ ಯೋಜನೆಗಳನ್ನು ಕೈಬಿಟ್ಟಿದ್ದು ಈಗ ಇತಿಹಾಸ. ಇಂದಿನ ಪರಿಸ್ಥಿತಿ ಬೇರೆಯೇ. ಜನರ ಒತ್ತಾಯಕ್ಕೆ ಮನ್ನಣೆ ಸಿಗುತ್ತದೆ ಎಂಬ ನಂಬಿಕೆ ಕ್ಷೀಣಿಸುತ್ತಿದೆ. ಚುನಾವಣೆಯ ವೇಳೆ ಜನರ ಸಂಕಷ್ಟಕ್ಕೆ ಸ್ಪಂದಿಸುವೆವು ಎಂದು ಹೇಳಿ, ಅಧಿಕಾರಕ್ಕೆ ಬಂದ ಬಳಿಕ ಅದೇ ಜನರ ಮಾತನ್ನು ಕಡೆಗಣಿಸುವ ರಾಜಕಾರಣಿಗಳ ನಡತೆ, ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತಿದೆ.  ನವೆಂಬರ್​ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಕುರಿತು ಗಟ್ಟಿ ಧ್ವನಿ ಎತ್ತಬಹುದಾಗಿದ್ದರೂ, ಉತ್ತರ ಕನ್ನಡದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವುದು, ಜನರಲ್ಲಿ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಖಾಸಗಿ ಸದಸ್ಯರ ವಿಧೇಯಕ: ರಾಜಕೀಯ ಸಂಕೇತ

ಭವಿಷ್ಯದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲ, ವಿದ್ಯುತ್ ಅಥವಾ ಇತರೆ ಮೆಗಾ ಯೋಜನೆಗಳನ್ನು ತರುವುದಿಲ್ಲ ಎಂಬ ಉದ್ದೇಶದೊಂದಿಗೆ, ಖಾಸಗಿ ಸದಸ್ಯರ ವಿಧೇಯಕವನ್ನು ವಿಧಾನಮಂಡಲ ಹಾಗೂ ಸಂಸತ್ತಿನಲ್ಲಿ ಮಂಡಿಸಬೇಕು. ಈ ಮೂಲಕ ಒಂದು ಸಂಕಥನವನ್ನು ರಾಷ್ಟ್ರ ಮಟ್ಟದಲ್ಲಿ ನಿರೂಪಿಸಬಹುದು. ಖಾಸಗೀ ವಿಧೇಯಕ ಪಾಸ್ ಆಗುತ್ತದೆ ಎಂಬ ನಿರೀಕ್ಷೆಯಿಂದಲ್ಲ, ಆದರೆ ಪಕ್ಷಭೇದ ಮರೆತು ಈ ವಿಷಯದ ಮೇಲೆ ಚರ್ಚೆ ನಡೆಯಲೆಂಬ ಉದ್ದೇಶದಿಂದ ಈ ಹೆಜ್ಜೆ ಮಹತ್ವ ಪಡೆದುಕೊಳ್ಳುತ್ತದೆ. ಇದರಿಂದ ಇಡೀ ರಾಜ್ಯದಲ್ಲಿ ಚರ್ಚೆ ಆರಂಭವಾಗಿ, ಜನಬೆಂಬಲ ವಿಸ್ತರಿಸುವ ಸಾಧ್ಯತೆ ಇದೆ.

“ಸ್ವಾಮೀಜಿ ಹಿಂದೆ ನಾವಿದ್ದೇವೆ ” ಎಂಬ ರಾಜಕೀಯ ನಾಯಕರ ಘೋಷವಾಕ್ಯ
‘ಚಳುವಳಿಯ ನೇತೃತ್ವ ವಹಿಸಿರುವ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಹಿಂದೆ ನಾವಿದ್ದೇವೆ,’ ಎಂದು ಎಲ್ಲ ಜನಪ್ರತಿನಿಧಿಗಳು ಹೇಳಿರುವುದು, ಅವರ ರಾಜಕೀಯದ ಆರೋಗ್ಯ ಕಾಪಾಡಲು ತೆಗೆದುಕೊಂಡ ನಿಲುವು. ಆದರೆ ಅದು ಕಾರ್ಯರೂಪಕ್ಕೆ ಬರುವ ಭರವಸೆ ಅಲ್ಲ.  ಒಂದು ಕ್ಷಣ ಹೀಗೆ ವಿಚಾರ ಮಾಡೋಣ: ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲವೆಂಬೆ ಕಾರಣವಿಟ್ಟುಕೊಂಡು, ಎಲ್ಲ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕೆಂದು ಸ್ವಾಮೀಜಿಗಳು ಸೂಚಿಸಿದರೆ ಆಗ ಜನ ಪ್ರತಿನಿಧಿಗಳು ಅದಕ್ಕೆ ಹೇಗೆ ಪ್ರತಿಕ್ರಿಯಿಸಬಲ್ಲರು? ಅವರು ಆ ಹೆಜ್ಜೆ ಇಡಲಾರರು ಎಂಬುದು ಎಲ್ಲರಿಗೂ ತಿಳಿದ ಸತ್ಯ. ಪಕ್ಷದ ಹೈಕಮಾಂಡ್ ಅದಕ್ಕೆ ಅವಕಾಶ ನೀಡುವುದಿಲ್ಲ. ಆದ್ದರಿಂದ “ಸ್ವಾಮೀಜಿ ಹೇಳಿದ್ದನ್ನು ಮಾಡುತ್ತೇವೆ” ಎನ್ನುವುದು ಹೊಣೆಗಾರಿಕೆಯನ್ನು ಮುಂದೂಡುವ ತಂತ್ರ ಮಾತ್ರ.

ಜನ ನಾಯಕತ್ವದ ಜವಾಬ್ದಾರಿ

ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಭವಿ ರಾಜಕಾರಣಿ. ಒಂದು ಪತ್ರ ನೀಡಿ ಫೋಟೋಗೆ ನಿಲ್ಲುವುದು ಕರ್ತವ್ಯಪಾಲನೆ ಅಲ್ಲ ಎಂಬುದೂ ಅವರಿಗೆ ತಿಳಿದಿದೆ. ಕೇಂದ್ರದ ಹಿರಿಯ ಮಂತ್ರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿ, ನೆಲದ ವಾಸ್ತವ ಅರಿಯುವ ತಂಡವನ್ನು (fact finding committee) ಕಳುಹಿಸುವಂತೆ ಮಾಡಬೇಕಾದ್ದು ಅವರ ಜವಾಬ್ದಾರಿ.  ಅದೇ ರೀತಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನಡತೆಯೂ ಪ್ರಶ್ನೆಗೆ ಒಳಪಟ್ಟಿದೆ. ಡಿಪಿಆರ್‌ಗೆ ಒಪ್ಪಿಗೆ ನೀಡಿದ ಪ್ರಕ್ರಿಯೆಯಲ್ಲಿ ತಮ್ಮ ಸರಕಾರದ ಪಾತ್ರ ಏನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿದೆ. ಇಲ್ಲದಿದ್ದರೆ, ಇದು ಜಿಲ್ಲೆಯ ಜನರ ಪರವಾಗಿ ಮಾಡುವ ಹೋರಾಟಕ್ಕಿಂತ, ಒಂದು ರಾಜಕೀಯ ನಿರ್ವಹಣೆಯಂತೆ ಕಾಣುತ್ತದೆ.

ಬೊಮ್ಮಾಯಿ ಮತ್ತು ನದಿ ತಿರುವಿನ ರಾಜಕೀಯ

ಹಾಗೆ ನೋಡಿದರೆ, ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ರೂವಾರಿಯಾಗಿ ಕಾಣಿಸುತ್ತಾರೆ. ಒಬ್ಬ ರಾಜಕಾರಣಿಯ ವೈಯಕ್ತಿಕ ರಾಜಕೀಯದ ಲೆಕ್ಕಾಚಾರಕ್ಕೆ ಇಡೀ ಪಶ್ಚಿಮ ಘಟ್ಟವೇ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿರುವುದು ಗಂಭೀರ ವಿಚಾರ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಗೆಲುವು ಸಾಧಿಸಿದ ಬೊಮ್ಮಾಯಿಯವರು, ಉಪಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರಲು ವಿಫಲರಾದ ಕ್ಷಣದಲ್ಲೇ, ತಮ್ಮ ರಾಜಕೀಯ ಪ್ರಭಾವ ಕ್ಷೀಣಿಸುತ್ತಿದೆ ಎಂಬುದನ್ನು ಅರಿತುಕೊಂಡರು. ಅಂದಿನಿಂದಲೇ, ತಮ್ಮ ರಾಜಕೀಯ ಕುಸಿತಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ಅವರು ಪ್ರಾರಂಭಿಸಿದ್ದಾರೆ ಮತ್ತು ನದಿ ತಿರುವು ಯೋಜನೆ ಕೂಡ ಅದರದೇ ಭಾಗ ಎಂಬುದು ಸ್ಪಷ್ಟವಾಗುತ್ತದೆ.

2020ರ ಬಜೆಟ್‌ನಲ್ಲಿ ಉಲ್ಲೇಖವಾಗಿದ್ದ ನದಿ ತಿರುವು ಯೋಜನೆಯ ಪ್ರಸ್ತಾವಕ್ಕೆ ಮರುಜೀವ ನೀಡುವ ಅವರ ಪ್ರಯತ್ನ ಕಾಣುತ್ತಿದೆ. ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುವ ನಾಯಕರು ತಮ್ಮ ಕನಸುಗಳನ್ನು ನನಸು ಮಾಡಲು ಹಲವಾರು ರಾಜಕೀಯ ಪಟ್ಟು ಹಾಕುತ್ತಾರೆ. ಇದು ಹೊಸದಲ್ಲ. ಸಮಾಜ ಕೂಡ ಕೆಲವೊಂದು ಮಟ್ಟಿಗೆ ಇಂತಹ ಪಟ್ಟಿನಿಂದ ಸಮಾಜಕ್ಕೆ ಆದ ಕಷ್ಟ ಸಹಿಸಿಕೊಂಡು ಉದಯೋನ್ಮುಖ ರಾಜಕೀಯ ನಾಯಕರುಗಳಿಗೆ ಅಭಯ ಹಸ್ತ ನೀಡಿ ಬೆಳೆಸಿದ ಇತಿಹಾಸ ನಮ್ಮಲ್ಲಿದೆ. ಆದರೆ ರಾಜಕೀಯವಾಗಿ ಸೋಲಿನ ಹಂತ ತಲುಪಿದ ನಾಯಕರು, ತಮ್ಮ ಅಸ್ತಂಗತದ ಭಯದಲ್ಲಿ ಕೈಗೊಳ್ಳುವ ಅಸಂಗತ ನಿರ್ಧಾರಗಳಿಗೆ ಇಡೀ ಸಮಾಜವೇ ಭಾರೀ ಬೆಲೆ ತೆರಬೇಕಾದ ಉದಾಹರಣೆಗಳನ್ನು ನಾವು ಈ ಹಿಂದೆ ಸಾಕಷ್ಟು ನೋಡಿದ್ದೇವೆ. ಇಲಿ ಕೂಡ ಅಂತದೇ ಮಾದರಿಯೊಂದು ಪುನರಾವರ್ತನೆಯಾಗುತ್ತಿರುವ ಲಕ್ಷಣ ಕಾಣುತ್ತಿದೆ.
2020ರ ಬಜೆಟ್‌ನಲ್ಲಿ ಉಲ್ಲೇಖಗೊಂಡಿದ್ದ ನದಿ ತಿರುವು ಯೋಜನೆಗೆ ಈಗ ಮರುಹುಟ್ಟು ನೀಡುವ ಮೂಲಕ, ತಮ್ಮ ಮುಳುಗುತ್ತಿರುವ ರಾಜಕೀಯ ದೋಣಿಯನ್ನು ದಡ ಸೇರಿಸುವುದಷ್ಟೇ ಅಲ್ಲ, ಈ ಭಾಗದಲ್ಲಿ ಮತ್ತೆ ಜನನಾಯಕನಾಗಿ ಮರುಪ್ರವೇಶಿಸುವ ರಾಜಕೀಯ ತಂತ್ರವನ್ನು ಬೊಮ್ಮಾಯಿ ಹೂಡಿದ್ದಾರೆ. ಈ ಪ್ರಯತ್ನಕ್ಕೆ ಅಪ್ರತ್ಯಕ್ಷವಾಗಿ ನೆರವಾಗುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಇವರಿಬ್ಬರ ನಡುವೆ ವೈಯಕ್ತಿಕ ನಿಕಟತೆ ಇದೆ ಎಂಬ ಮಾತು ಹೊಸದೇನಲ್ಲ.

ತಮ್ಮ ಹುಟ್ಟೂರಾದ ಧಾರವಾಡವನ್ನು ಬಿಟ್ಟು, ಕರ್ಮಭೂಮಿಯಾಗಿ ಹಾವೇರಿಯನ್ನು ಆಯ್ಕೆ ಮಾಡಿಕೊಂಡು, ಪಕ್ಕದ ಗದಗ ಹಾಗೂ ರಾಯಚೂರು ಜಿಲ್ಲೆಗಳ ಜನರಿಗೆ ನೀರು ಒದಗಿಸಿದ ಹರಿಕಾರ ಎಂಬ ಕೀರ್ತಿಯನ್ನು ಸಂಪಾದಿಸಬೇಕೆಂಬ ಕನಸು ಬೊಮ್ಮಾಯಿಯವರದ್ದಾಗಿರಬಹುದು. ಈ ಮೂಲಕ ನಾಲ್ಕೈದು ಜಿಲ್ಲೆಗಳ ರಾಜಕೀಯ ಹಿಡಿತವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡು, ಫೀನಿಕ್ಸ್‌ ಹಕ್ಕಿಯಂತೆ ಮತ್ತೆ ರಾಜಕೀಯದಲ್ಲಿ ಮೇಲೆದ್ದು ಬರುವ ಅವರ ಆಶಯವೂ ಅಸಹಜವಲ್ಲ. ಆ ಕನಸಿನಲ್ಲಿ ತಪ್ಪೇನೂ ಇಲ್ಲ. ಆದರೆ ಆ ಕನಸನ್ನು ಸಾಕಾರಗೊಳಿಸಲು ನದಿ ತಿರುವು ಯೋಜನೆಯಂತಹ ಪರಿಸರ ವಿನಾಶಕಾರಿ ಮಾರ್ಗವನ್ನು ಆಯ್ಕೆ ಮಾಡಿರುವುದು ಅತ್ಯಂತ ಆತಂಕಕಾರಿ.
ಪಶ್ಚಿಮ ಘಟ್ಟದ ನದಿಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ (quantity) ಮತ್ತು ಪರಿಮಾಣ (volume) ಕುರಿತು ತಪ್ಪು ಅಥವಾ ಅಪೂರ್ಣ ಮಾಹಿತಿಯನ್ನು ನೀಡುವ ಮೂಲಕ, ಈಗಾಗಲೇ ಬಯಲುಸೀಮೆಯ ಜಿಲ್ಲೆಗಳ ಕೆಲ ರೈತ ಮುಖಂಡರನ್ನು ಎತ್ತಿಕಟ್ಟಿರುವಂತೆ ಕಾಣುತ್ತದೆ. ಇದೇ ತಪ್ಪು ಮಾಹಿತಿಯನ್ನು ಆಧಾರ ಮಾಡಿಕೊಂಡು, ಬಿಜೆಪಿ ಹೈಕಮಾಂಡ್‌ಗೆ ಈ ಭಾಗದಲ್ಲಿ ಪಕ್ಷವನ್ನು ವಿಸ್ತರಿಸುವ ಭ್ರಮಾತ್ಮಕ ಕನಸನ್ನು ಮಾರಿದ್ದರೂ ಆಶ್ಚರ್ಯಪಡಬೇಕಾಗಿಲ್ಲ. ರಾಯಚೂರು ಲೋಕಸಭಾ ಕ್ಷೇತ್ರ ಈಗ ಕಾಂಗ್ರೆಸ್ ಪಾಲಾಗಿದೆ ಎಂಬ ವಾಸ್ತವವನ್ನು ಮನಗಂಡ ಹೈ ಕಮಾಂಡ್​, ಬೊಮ್ಮಾಯಿಯವರ ಜನಪರ ರಾಜಕೀಯ ತಂತ್ರದಲ್ಲಿ ಸತ್ಯಾಂಶವಿದೆಯೆಂದು ನಂಬಿರಬಹುದು.

ಇಂತಹ ಬಣ್ಣದ ಮಾತುಗಳು ಮತ್ತು ಅತಿರಂಜಿತ ನಿರೀಕ್ಷೆಗಳ ಆಧಾರದ ಮೇಲೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ನದಿ ತಿರುವು ಯೋಜನೆಗೆ ಕೈ ಹಾಕಿದರೆ, ಮುಂದಿನ ದಿನಗಳಲ್ಲಿ ಕೈ ಸುಟ್ಟುಕೊಳ್ಳುವುದು ಖಚಿತ. ಬೇಸಿಗೆಯಲ್ಲಿ ನೀರೇ ಸಿಗದ ಪೂರ್ವಾಭಿಮುಖ ನದಿ ನೀರನ್ನು ಪಶ್ಚಿಮಕ್ಕೆ ತಿರುಗಿಸಿ ಮೂರ್ನಾಲ್ಕು ಜಿಲ್ಲೆಗೆ ನೀರುಣಿಸುವುದು ಕನಸಿನ ಮಾತೇ ಸರಿ. ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದರೂ, ಅವರ ಆಡಳಿತ ಕಾಲದಲ್ಲಿ ರಾಜಕೀಯ ಅಥವಾ ಆಡಳಿತಾತ್ಮಕ ಚಹರೆಯಲ್ಲಿ ಗಮನಾರ್ಹ ಬದಲಾವಣೆಯನ್ನು ರಾಜ್ಯ ಕಂಡಿರಲಿಲ್ಲ. ಅಷ್ಟೇ ಅಲ್ಲ, 2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿಯವರ ನೇತೃತ್ವದಲ್ಲಿ 100ಕ್ಕಿಂತ ಹೆಚ್ಚು ಸ್ಥಾನಗಳು ಬರುತ್ತವೆ ಎಂಬ ವಾತಾವರಣವನ್ನು ಸೃಷ್ಟಿಸಿ, ನಂತರ ಭಾರೀ ಸೋಲು ಎದುರಾದಾಗ, ಅದಕ್ಕೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳೇ ಕಾರಣವೆಂದು ಹೈಕಮಾಂಡ್‌ಗೆ ವರದಿ ಸಲ್ಲಿಸಿ ಹೊಣೆ ತಪ್ಪಿಸಿಕೊಂಡಿರುವುದೂ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಇಂತಹ ಕಾರ್ಯಕ್ಷಮತೆಯ ದಾಖಲೆಯಿರುವ ನಾಯಕರ ಮಾತಿಗೆ ಬಿಜೆಪಿ ಹೈಕಮಾಂಡ್ ಹೆಚ್ಚಿನ ಮಹತ್ವ ನೀಡಿರುವುದು ನಿಜಕ್ಕೂ ವಿಪರ್ಯಾಸಕರವಾಗಿದೆ.
ಯಾಕೆಂದರೆ, ಈ ಯೋಜನೆ ಜಾರಿಯಾಗಿ ನಿರೀಕ್ಷಿಸಿದಷ್ಟು ನೀರು ಲಭ್ಯವಾಗದೆ, ಜನರ ಕನಸುಗಳು ಭಗ್ನವಾದರೆ, ಜನರ ಆಕ್ರೋಶ ಬೊಮ್ಮಾಯಿಯವರ ಮೇಲೆ ಮಾತ್ರ ಸೀಮಿತವಾಗುವುದಿಲ್ಲ. ಅದರ ಹೊರೆ ನೇರವಾಗಿ ಬಿಜೆಪಿಯ ಮೇಲೆಯೇ ಬೀಳುತ್ತದೆ. ಈ ಸತ್ಯವನ್ನು ಬಿಜೆಪಿಯ ಕೇಂದ್ರ ನಾಯಕತ್ವ ಈ ಸಮಯದಲ್ಲಿ ಅರಿತರೆ ಒಳಿತು.

Source link